ಮುಂಬೈ : ಮುಂಬೈನಲ್ಲಿ ಬಹುಮಹಡಿಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ರೋಚಕ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಆ “ಯುವಕ ಜಿಗಿದನಾ ಅಥವಾ ಕೊನೆಯ ಕ್ಷಣದಲ್ಲಿ ಸ್ಥಳೀಯರ ಸಮಯಪ್ರಜ್ಞೆಯಿಂದ ಬದುಕುಳಿದನಾ” ಎನ್ನುವ ಕುತೂಹಲಕ್ಕೆ ಈ ವಿಡಿಯೋವೇ ಉತ್ತರ ನೀಡುತ್ತಿದೆ.
ಮಹಾನಗರಗಳಲ್ಲಿ ಒತ್ತಡದ ಬದುಕು, ವೈಯಕ್ತಿಕ ಸಮಸ್ಯೆಗಳು ಹಾಗೂ ಮಾನಸಿಕ ಒತ್ತಡದಿಂದ ಅನೇಕರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳಿಗೆ ಮುಂದಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದೇ ವೇಳೆ, ಮುಂಬೈನಲ್ಲಿ ನಡೆದ ಘಟನೆಯೊಂದು ಮಾನವೀಯತೆ, ಧೈರ್ಯ ಮತ್ತು ಸಮಯಪ್ರಜ್ಞೆ ಎಷ್ಟು ದೊಡ್ಡ ದುರಂತವನ್ನು ತಪ್ಪಿಸಬಲ್ಲದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ.
ರಕ್ಷಿಸಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ :
ಎತ್ತರದ ಕಟ್ಟಡದ ಬಾಲ್ಕನಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯ ನಿವಾಸಿಯೊಬ್ಬರು ಸಿನಿಮೀಯ ರೀತಿಯಲ್ಲಿ ರಕ್ಷಿಸಿರುವ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮುಂಬೈನ ಅಂಧೇರಿ ವೆಸ್ಟ್ ಪ್ರದೇಶದ ಮನೀಶ್ ನಗರದಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಈ ಘಟನೆ ನಡೆದಿದ್ದು, ಕಟ್ಟಡದ ಮೇಲ್ಭಾಗದ ಬಾಲ್ಕನಿಯ ಅಂಚಿನಲ್ಲಿ ಯುವಕನೊಬ್ಬ ನಿಂತು, ಯಾವುದೇ ಕ್ಷಣದಲ್ಲಿ ಆತ ಕೆಳಗೆ ಜಿಗಿಯುವ ಹಂತದಲ್ಲಿದ್ದನು.
ಈ ಸುದ್ದಿ ಓದಿ : ಗೃಹ ಜ್ಯೋತಿ ಯೋಜನೆ ಹೊಸ ಅಪ್ಡೇಟ್: ಮನೆ-ಮನೆಗೆ ಬರುವ ESCOM ಸಿಬ್ಬಂದಿಗೆ ಈ 6 ಮಾಹಿತಿ ನೀಡುವುದು ಕಡ್ಡಾಯ.!
ಆತ್ಮಹತ್ಯೆಗೆ ಯತ್ನಿಸಿದ ಯುವಕನ ವಿಡಿಯೋ :
Mumbai: Quick-thinking resident rescues young man from suicide attempt on a high-rise balcony in Andheri West’s Manish Nagar.
The man in red shirt calmly approaches and pulls him to safety amid crowd chaos. The individual is safe pic.twitter.com/eOLmn3CWJx
— Ghar Ke Kalesh (@gharkekalesh) July 1, 2026
Courtesy : Social Media / Twitter
ಈ ಪರಿಸ್ಥಿತಿಯಲ್ಲಿ ಕಟ್ಟಡದ ಕೆಳಭಾಗದಲ್ಲಿದ್ದ ಸ್ಥಳೀಯರು ಆತಂಕಗೊಂಡು ಜಮಾಯಿಸಿದ್ದಾರೆ. ಸ್ಥಳದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿ, ಜನರು ಕಿರುಚಾಡುತ್ತಾ ಯುವಕನನ್ನು ತಡೆಯಲು ಯತ್ನಿಸಿದರೂ ಆತ ಮಾತ್ರ ಅಪಾಯಕಾರಿ ಸ್ಥಿತಿಯಲ್ಲೇ ನಿಂತಿದ್ದ ಎನ್ನಲಾಗಿದೆ.
ಇದೇ ವೇಳೆ ಅವರಲ್ಲಿದ್ದ ಕೆಂಪು ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬರು ಅಸಾಮಾನ್ಯ ಧೈರ್ಯ ಮತ್ತು ಜಾಣ್ಮೆ ಪ್ರದರ್ಶಿಸಿದ್ದಾರೆ. ಸುತ್ತಮುತ್ತಲಿನ ಗದ್ದಲದ ನಡುವೆ ಯಾವುದೇ ಆತುರ ತೋರಿಸದೇ, ಯುವಕನ ಗಮನಕ್ಕೆ ಬಾರದಂತೆ ನಿಧಾನವಾಗಿ ಬಾಲ್ಕಿನಿಯಲ್ಲಿ ಆತನ ಹತ್ತಿರಕ್ಕೆ ತೆರಳಿದ್ದಾರೆ.
ಇದನ್ನು ಓದಿ : ಮರಿ ಮಂಗನ ಕಿತಾಪತಿ ನೋಡಿ ನೆಟ್ಟಿಗರು ಫಿದಾ; ವೈರಲ್ ವಿಡಿಯೋಗೆ ಭಾರೀ ಪ್ರತಿಕ್ರಿಯೆ.
ಕೆಂಪು ಶರ್ಟ್ ಧರಿಸಿದ್ದ ವ್ಯಕ್ತಿ ಆತ್ಮಹತ್ಯೆಗೆ ಯತ್ನಸಿದ ಯುವಕನಿಗೆ ಏನೋ ಹೇಳುತ್ತಾ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಮುನ್ನವೇ ಸೂಕ್ತ ಸಮಯ ನೋಡಿ ಕ್ಷಣಾರ್ಧದಲ್ಲೇ ಯುವಕನನ್ನು ಬಲವಾಗಿ ಹಿಡಿದು ಬಾಲ್ಕನಿಯೊಳಗೆ ಸುರಕ್ಷಿತವಾಗಿ ಎಳೆದುಕೊಂಡಿದ್ದಾರೆ.
ಸಮಯಪ್ರಜ್ಞೆ, ಮಾನವೀಯತೆಗೆ ಎಲ್ಲೆಡೆಯಿಂದ ಮೆಚ್ಚುಗೆ :
ಕೆಲವೇ ಕ್ಷಣಗಳಲ್ಲಿ ನಡೆದ ಈ ರೋಚಕ ರಕ್ಷಣಾ ಕಾರ್ಯಾಚರಣೆಯಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನು ಕಣ್ಣಾರೆ ಕಂಡಿದ್ದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಸಮಯಪ್ರಜ್ಞೆ ತೋರಿದ ವ್ಯಕ್ತಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ.
ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಯುವಕನ ಪ್ರಾಣ ಉಳಿಸಿದ ವ್ಯಕ್ತಿಯ ಸಮಯಪ್ರಜ್ಞೆ ಮತ್ತು ಮಾನವೀಯತೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಶಾಂತ ಮನಸ್ಸು ಹಾಗೂ ತಕ್ಷಣದ ನಿರ್ಧಾರ ಎಷ್ಟು ದೊಡ್ಡ ಜೀವ ಉಳಿಸಬಲ್ಲದು ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಈ ಸುದ್ದಿಯನ್ನು ಓದಿ : ವಾಯುಭಾರ ಕುಸಿತ: ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್, 7 ದಿನ ಭಾರಿ ಮಳೆ ಸಾಧ್ಯತೆ.







