Home Blog

ಬೆಳಗಾವಿ: ಪ್ರಿಯಕರನ ಜೊತೆ ಓಡಿಹೋಗಲು ಪತಿಯ ಮನೆಯಲ್ಲೇ ಕಳ್ಳತನ; 48 ಗಂಟೆಯಲ್ಲಿ ಪ್ರೇಮಿಗಳ ಬಂಧನ.

ಜನಸ್ಪಂದನ ನ್ಯೂಸ್, ಬೆಳಗಾವಿ :‌ ಪ್ರಿಯಕರನ ಜೊತೆ ಓಡಿಹೋಗಲು ಪತಿಯ ಮನೆಯಲ್ಲೇ ಕಳ್ಳತನ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ಸದ್ಯ ಪೊಲೀಸರು 48 ಗಂಟೆಯಲ್ಲಿ ಪ್ರೇಮಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗ್ರಾಮವೊಂದಲ್ಲಿ ನಡೆದ ವಿಚಿತ್ರ ಕಳ್ಳತನದ ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ವಿವಾಹಿತ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಪತಿಯ ಮನೆಯಲ್ಲೇ ಚಿನ್ನಾಭರಣ ಕಳ್ಳತನ ನಡೆಸಿದ ಆರೋಪದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಪತಿಯ ಮನೆಯಲ್ಲೇ ಕಳ್ಳತನ :

ಪ್ರೀತಿ (Love) ಮತ್ತು ಮದುವೆ (Marriage) ನಡುವಿನ ಸಂಬಂಧದಲ್ಲಿ ನಂಬಿಕೆ ಅತ್ಯಂತ ಮುಖ್ಯವಾಗಿರುತ್ತದೆ. ಆದರೆ ಇಲ್ಲಿ ನಡೆದ ಘಟನೆ ಕುಟುಂಬದವರನ್ನು ಬೆಚ್ಚಿಬೀಳಿಸುವಂತಿದೆ. ಪತಿಯೇ ಮನೆಯಲ್ಲಿಲ್ಲದ ಸಮಯವನ್ನು ಬಳಸಿಕೊಂಡು, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಆರೋಪ ಕೇಳಿಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಶರೀಫ್ ಎಂಬುವವರೊಂದಿಗೆ ಸುಮಾರು ಎರಡು ತಿಂಗಳ ಹಿಂದೆ ಹಸೀನಾ ಮದುವೆಯಾಗಿದ್ದರು. ಮದುವೆಯಾದ ಬಳಿಕವೂ ಹಸೀನಾ ತನ್ನ ಹಳೆಯ ಪ್ರಿಯಕರ ಹಣಮಂತ ಜೊತೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.

ಬಳಿಕ ಇಬ್ಬರೂ ಸೇರಿ ಶರೀಫ್ ಅವರ ಮನೆಯಲ್ಲಿ ಇದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡುವ ಯೋಜನೆ ರೂಪಿಸಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಹೀಗೆ ಪತಿಯ ಮನೆಯಲ್ಲೇ ಕಳ್ಳತನ ಮಾಡಿದ ಘಟನೆಯಿಂದ ಎರಡು ಮನೆತನಕ್ಕೆ ಕೆಟ್ಟು ಹೆಸರು ತಂದಿದ್ದಾಳೆ.

154.6 ಗ್ರಾಂ ತೂಕದ ಚಿನ್ನಾಭರಣ :

ಮನೆಯಲ್ಲಿದ್ದವರ ಗಮನ ತಪ್ಪಿಸಿ, ಮನೆಯಲ್ಲಿ ಸಂಗ್ರಹಿಸಲಾಗಿದ್ದ 154.6 ಗ್ರಾಂ ತೂಕದ ಚಿನ್ನಾಭರಣಗಳನ್ನು ಆರೋಪಿಗಳು ಕದ್ದೊಯ್ದಿದ್ದಾರೆ. ಕದ್ದ ಚಿನ್ನಾಭರಣಗಳ ಮೌಲ್ಯ ಸುಮಾರು 21 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದಲ್ಲದೆ, 45 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ. ಬೆಳ್ಳಿ ವಸ್ತುಗಳ ಮೌಲ್ಯ ಸುಮಾರು 11 ಸಾವಿರ ರೂಪಾಯಿ ಎಂದು ತಿಳಿದುಬಂದಿದೆ.

ಈ ಕುರಿತು ದಿಲಶಾನ್ ಅವರು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದರು. ರಾಮದುರ್ಗ ವೃತ್ತದ ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು.

ಇದನ್ನು ಓದಿ : ನಿಮ್ಮ ಕಾಲಿನ ಬೆರಳುಗಳ ಮೇಲೆ ಕೂದಲು ಇವೆಯೇ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಮೊಬೈಲ್ ಕರೆ ವಿವರಗಳು, ಸ್ಥಳೀಯ ಮಾಹಿತಿ ಹಾಗೂ ಇತರ ತಾಂತ್ರಿಕ ಸುಳಿಗಳ ಆಧಾರದ ಮೇಲೆ ಪೊಲೀಸರು ಕೇವಲ 48 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತರಿಂದ ಕದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕುಟುಂಬದ ನಂಬಿಕೆಗೆ ದೊಡ್ಡ ಹೊಡೆತ :

ಈ ಪ್ರಕರಣ ಸ್ಥಳೀಯರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮದುವೆಯಾದ ಬಳಿಕವೂ ಹಳೆಯ ಪ್ರೇಮ ಸಂಬಂಧ ಮುಂದುವರಿದ ಪರಿಣಾಮ ಕುಟುಂಬದ ನಂಬಿಕೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಬಂಧಿತ ಇಬ್ಬರನ್ನು ನ್ಯಾಯಾಲಯ (Court) ಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಪ್ರೀತಿ ಮತ್ತು ಸಂಬಂಧಗಳ ಹೆಸರಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಇಳಿದರೆ ಅದರ ಪರಿಣಾಮ ಗಂಭೀರವಾಗಿರಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.

ಸಂಪಾದಕೀಯ :

ಇತ್ತೀಚಿನ ದಿನಗಳಲ್ಲಿ ಪ್ರೀತಿ ಮತ್ತು ವೈಯಕ್ತಿಕ ಸಂಬಂಧಗಳ ಹೆಸರಿನಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ಸಮಾಜದಲ್ಲಿ ಆತಂಕ ಹೆಚ್ಚಿಸುತ್ತಿವೆ. ಮದುವೆಯಂತಹ ಪವಿತ್ರ ಸಂಬಂಧದಲ್ಲಿ ನಂಬಿಕೆ ಅತ್ಯಂತ ಮುಖ್ಯವಾದದ್ದು, ಆದರೆ ಕೆಲವರು ಸ್ವಾರ್ಥಕ್ಕಾಗಿ ಅದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವುದು ವಿಷಾದನೀಯ.

ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಣ ಮತ್ತು ಸಂಬಂಧಗಳಿಗಾಗಿ ಕಾನೂನುಬಾಹಿರ ಮಾರ್ಗವನ್ನು ಆಯ್ಕೆ ಮಾಡುವುದು ಕೊನೆಯಲ್ಲಿ ಕುಟುಂಬಗಳ ನಾಶಕ್ಕೂ, ಜೈಲು ಜೀವನಕ್ಕೂ ಕಾರಣವಾಗುತ್ತದೆ. ಯುವಜನತೆ ಭಾವನೆಗಳಿಗಿಂತ ಜವಾಬ್ದಾರಿಯುತ ನಿರ್ಧಾರಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯ ಇಂದು ಹೆಚ್ಚಾಗಿದೆ.


Disclaimer:  ಈ ಸುದ್ದಿಯಲ್ಲಿ (ಪತಿಯ ಮನೆಯಲ್ಲೇ ಕಳ್ಳತನ) ಉಲ್ಲೇಖಿಸಲಾದ ಮಾಹಿತಿಯು ಪೊಲೀಸ್ ಮೂಲಗಳು ಹಾಗೂ ಲಭ್ಯ ಮಾಹಿತಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಅಂತಿಮ ತೀರ್ಪು ಬರುವವರೆಗೆ ಆರೋಪಿಗಳನ್ನು ಅಪರಾಧಿಗಳೆಂದು ಪರಿಗಣಿಸಬಾರದು.

ನಿಮ್ಮ ಕಾಲಿನ ಬೆರಳುಗಳ ಮೇಲೆ ಕೂದಲು ಇವೆಯೇ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಜನಸ್ಪಂದನ ನ್ಯೂಸ್‌, ಆರೋಗ್ಯ :  ನಿಮ್ಮ ಕಾಲಿನ ಬೆರಳುಗಳ ಮೇಲೆ ಕೂದಲು ಇವೆಯೇ? ಈ ಕಾಲಿನ ಬೆರಳುಗಳ ಮೇಲಿನ ಕೂದಲು ಏನನ್ನು ಸೂಚಿಸುತ್ತದೆ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.! ಬನ್ನಿ ಇಂದಿನ ಆರೋಗ್ಯ ಸುದ್ದಿಯಲ್ಲಿ ಅದರ ಬಗ್ಗೆ ತಿಳಿಯೋಣ.

ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಸಣ್ಣ ಸಣ್ಣ ಬದಲಾವಣೆಗಳೂ ಕೆಲವೊಮ್ಮೆ ದೊಡ್ಡ ಆರೋಗ್ಯ ಸಮಸ್ಯೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಬಹುದು. ಸಾಮಾನ್ಯವಾಗಿ ಹಲವರು ಕಾಲಿನ ಬೆರಳುಗಳ ಮೇಲಿರುವ ಕೂದಲನ್ನು (Toe Hair) ಅಸಹ್ಯ ಅಥವಾ ಅನಗತ್ಯವೆಂದು ಭಾವಿಸುತ್ತಾರೆ.

ಕಾಲಿನ ಬೆರಳುಗಳ ಮೇಲೆ ಕೂದಲು :

ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಕಾಲಿನ ಬೆರಳುಗಳ ಮೇಲಿನ ಕೂದಲು ಆರೋಗ್ಯಕರ ರಕ್ತಪರಿಚಲನೆಯ (Blood Circulation) ಪ್ರಮುಖ ಸಂಕೇತಗಳಲ್ಲಿ ಒಂದಾಗಿದೆ.

ದೇಹದ ಅತಿ ದೂರದ ಭಾಗವಾದ ಕಾಲಿನ ಬೆರಳುಗಳವರೆಗೆ ರಕ್ತ ಸರಾಗವಾಗಿ ಹರಿದಾಗ ಮಾತ್ರ ಅಲ್ಲಿನ ಕೂದಲಿನ ಕಿರುಚೀಲಗಳು (Hair Follicles) ಜೀವಂತವಾಗಿರುತ್ತವೆ. ಕೂದಲು ಬೆಳೆಯಲು ಸಾಕಷ್ಟು ಆಮ್ಲಜನಕ (Oxygen) ಮತ್ತು ಪೋಷಕಾಂಶಗಳು (Nutrients) ಅಗತ್ಯವಾಗಿವೆ.

ಆದ್ದರಿಂದ ಕಾಲಿನ ಬೆರಳುಗಳ ಮೇಲೆ ಕೂದಲು ಇರುವುದು, ಹೃದಯ ಮತ್ತು ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೂಚನೆಯಾಗಿರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆದರೆ, ಮೊದಲು ಇದ್ದ ಕೂದಲು ಹಠಾತ್ತನೆ ಉದುರಲು ಆರಂಭವಾದರೆ ಅಥವಾ ಕಾಲಿನ ಚರ್ಮ ಅತಿಯಾಗಿ ಹೊಳೆಯುವಂತಾಗಿದ್ದರೆ (Shiny Skin) ಅದನ್ನು ನಿರ್ಲಕ್ಷಿಸುವಂತಿಲ್ಲ. ಇದು ‘ಪೆರಿಫೆರಲ್ ಆರ್ಟಿರಿಯಲ್ ಡಿಸೀಸ್’ (Peripheral Arterial Disease – PAD) ಎಂಬ ರಕ್ತನಾಳ ಸಂಬಂಧಿತ ಸಮಸ್ಯೆಯ ಆರಂಭಿಕ ಲಕ್ಷಣವಾಗಿರಬಹುದು.

ಈ ಸ್ಥಿತಿಯಲ್ಲಿ ರಕ್ತನಾಳಗಳು ಕಿರಿದಾಗಿ, ಕಾಲುಗಳಿಗೆ ಸರಿಯಾದ ಪ್ರಮಾಣದ ರಕ್ತ ಮತ್ತು ಆಮ್ಲಜನಕ ತಲುಪುವುದಿಲ್ಲ.
ವೈದ್ಯರ ಪ್ರಕಾರ, ದೀರ್ಘಕಾಲದ ಮಧುಮೇಹ (Diabetes) ಕೂಡ ರಕ್ತನಾಳಗಳ ಒಳಪದರವನ್ನು ಹಾನಿಗೊಳಿಸುತ್ತದೆ. ಪರಿಣಾಮವಾಗಿ, ಕಾಲಿನ ಭಾಗಗಳಿಗೆ ರಕ್ತಪೂರೈಕೆ ಕಡಿಮೆಯಾಗಬಹುದು.

ಇದನ್ನು ಓದಿ : ಮಡಿಕೇರಿ: ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ; ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿಸಿದ ಡ್ರೈವರ್.

ಇದರಿಂದ ಕೂದಲಿನ ಕಿರುಚೀಲಗಳು ದುರ್ಬಲವಾಗಿ ಕೂದಲು ಉದುರುವ ಸಾಧ್ಯತೆ ಹೆಚ್ಚುತ್ತದೆ. ಹೀಗಾಗಿ ಪಾದಗಳನ್ನು ದೇಹದ ಮೆಟಾಬಾಲಿಕ್ ಆರೋಗ್ಯದ (Metabolic Health) ಕನ್ನಡಿ ಎಂದು ಕರೆಯಲಾಗುತ್ತದೆ. ಕೇವಲ ಕೂದಲು ಉದುರುವುದಷ್ಟೇ ಅಲ್ಲ, ಕೆಳಗಿನ ಲಕ್ಷಣಗಳು ಕಂಡುಬಂದರೂ ವೈದ್ಯರನ್ನು ಸಂಪರ್ಕಿಸುವುದು ಉತ್ತಮ:

  • ಕಾಲಿನ ಉಗುರುಗಳು (Toenails) ಅತಿಯಾಗಿ ದಪ್ಪವಾಗುವುದು.
  • ಉಗುರುಗಳು ಸುಲಭವಾಗಿ ಮುರಿಯುವುದು.
  • ಪಾದಗಳು ಯಾವಾಗಲೂ ತಣ್ಣಗಿರುವುದು (Cold Feet).
  • ಸಣ್ಣ ಗಾಯಗಳೂ ಬೇಗ ಗುಣಮುಖವಾಗದಿರುವುದು.
  • ನಡೆಯುವಾಗ ಕಾಲುಗಳಲ್ಲಿ ನೋವು ಅಥವಾ ಸೆಳೆತ ಕಾಣಿಸಿಕೊಳ್ಳುವುದು.

ಆರೋಗ್ಯ ತಜ್ಞರ ಅಭಿಪ್ರಾಯದಂತೆ, ಉತ್ತಮ ಜೀವನಶೈಲಿ (Healthy Lifestyle) ಅಳವಡಿಸಿಕೊಂಡರೆ ರಕ್ತಪರಿಚಲನೆಯನ್ನು ಸುಧಾರಿಸಬಹುದು. ಪ್ರತಿದಿನ ನಡಿಗೆ (Walking), ವ್ಯಾಯಾಮ (Exercise) ಹಾಗೂ ಸ್ನಾಯು ಬಲವರ್ಧಕ ತರಬೇತಿಗಳು (Strength Training) ರಕ್ತನಾಳಗಳ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.

ಜೊತೆಗೆ ಆಹಾರದಲ್ಲಿ ಓಮೆಗಾ-3 (Omega-3 Fatty Acids) ಅಂಶ ಇರುವ ಮೀನು, ಅಕ್ಕರೇಕಾಯಿ ಹಾಗೂ ಬೀಜಗಳನ್ನು ಸೇರಿಸುವುದು ಸಹ ಪ್ರಯೋಜನಕಾರಿ.

ಇಂದಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ

ಅದೇ ರೀತಿ ಸಂಸ್ಕರಿಸಿದ ಎಣ್ಣೆ (Processed Oil) ಮತ್ತು ಅತಿಯಾದ ಜಂಕ್ ಫುಡ್ (Junk Food) ಸೇವನೆ ಕಡಿಮೆ ಮಾಡಿದರೆ ರಕ್ತನಾಳಗಳ ಸ್ಥಿತಿಸ್ಥಾಪಕತ್ವ (Elasticity) ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ದೇಹ ನೀಡುವ ಸಣ್ಣ ಸೂಚನೆಗಳನ್ನು ಸಮಯಕ್ಕೆ ಸರಿಯಾಗಿ ಗಮನಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಮುಂಚಿತವಾಗಿ ಪತ್ತೆಹಚ್ಚಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.


Disclaimer: ಈ ಲೇಖನವು (ಕಾಲಿನ ಬೆರಳುಗಳ ಮೇಲೆ ಕೂದಲು) ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಇಲ್ಲಿ ಉಲ್ಲೇಖಿಸಿದ ಮಾಹಿತಿಯನ್ನು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಅರ್ಹ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಬೆಂಗಳೂರಿನಲ್ಲಿ ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ: ಸಾರ್ವಜನಿಕರಿಂದ ಧರ್ಮದೇಟು.

ಜನಸ್ಪಂದನ ನ್ಯೂಸ್‌, ಬೆಂಗಳೂರು : ಹಾಡಹಗಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತಿಯೋರ್ವ ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ ಮಾಡಿರುವ ಘಟನೆ ನಡೆದಿದ್ದು, ಈ ವೇಳೆ ಸಾರ್ವಜನಿಕರು ‌ಪತಿಗೆ ಧರ್ಮದೇಟು ನೀಡಿದ್ದಾರೆ. ಸದ್ಯ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಂಗಳೂರು (Bengaluru) ನಗರದ ದಾಸನಪುರ ಪ್ರದೇಶದಲ್ಲಿ ಹಾಡಹಗಲೇ ನಡೆದ ಭಯಾನಕ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಪತ್ನಿಯ ನಡತೆಯ ಮೇಲೆ ಅನುಮಾನಗೊಂಡ ಪತಿಯೊಬ್ಬ, ರಸ್ತೆಯಲ್ಲೇ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಪತ್ನಿ ಕೊಲೆಗೆ ಯತ್ನ ನಡೆಸುತ್ತಿರುವ ವೇಳೆ ವಾಹನ ಸವಾರರು ಮತ್ತು ಪಾದಚಾರಿಗಳು ಸಮಯಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂಲತಃ ಬಿಹಾರ್‌ (Bihar) ಮೂಲದ ದಂಪತಿಗಳಾದ ಸೋನಾಲಿ ಮತ್ತು ಸಂಜಯ್ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರಿಗೂ ಇದು ಎರಡನೇ ವಿವಾಹವಾಗಿತ್ತು ಎಂದು ತಿಳಿದುಬಂದಿದೆ.

ಸಂಜಯ್ ಮದ್ಯಪಾನ ಮಾಡಿ ಪತ್ನಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಕಾರಣ, ಸೋನಾಲಿ ಪ್ರತ್ಯೇಕವಾಗಿ ವಾಸಿಸುವ ನಿರ್ಧಾರ ಮಾಡಿದ್ದರು ಎಂದು ಹೇಳಲಾಗಿದೆ. ಪತ್ನಿಯ ಈ ನಿರ್ಧಾರದಿಂದ ಕೋಪಗೊಂಡ ಸಂಜಯ್ ಈ ರೀತಿಯ ಹೇಯ್‌ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.

ವಿಡಿಯೋದಲ್ಲೇನಿದೆ :

ವಿಡಿಯೋದಲ್ಲಿ ಓರ್ವ ವ್ಯಕ್ತಿ ಬೈಕ್‌ನಲ್ಲಿ ಬರುತ್ತಿರಬೇಕಾದರೆ ಒಬ್ಬ ಮೆಹಿಳೆ ಎದುರಾಗುತ್ತಾಳೆ. ಅವಳನ್ನು ನೋಡಿದ್ದೇ ತಡ ಸ್ಥಳದಲ್ಲಿಯೇ ಬೈಕ್‌ ನಿಲ್ಲಿಸಿ ರಸ್ತೆಯಲ್ಲೇ ಜಗಳ ಆರಂಭಿಸಿದ್ದಾನೆ. ವಾಗ್ವಾದ ತಾರಕಕ್ಕೇರಿದ ವೇಳೆ ತಕ್ಷಣವೇ ತನ್ನ ಬಳಿಯಿದ್ದ ಚಾಕು ತೆಗೆದು ಪತ್ನಿಯ ಕುತ್ತಿಗೆಯ ಬಳಿ ಹಿಡಿದು ಹಲ್ಲೆ ನಡೆಸಲು ಮುಂದಾಗಿದ್ದಾನೆ.

ಇದನ್ನು ಓದಿ : ರೈಲು ಹಳಿ ದಾಟುವ ವೇಳೆ ಭೀಕರ ದುರಂತ: ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು, ವಿಡಿಯೋ ವೈರಲ್.

ಪತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪತ್ನಿ ಪ್ರಯತ್ನಿಸುತ್ತಿದಂತೆಯೇ ಪಕ್ಕದಲ್ಲಿಯೇ ಇದ್ದ ಯುವಕನೋರ್ವ ಅವನ್ನು ಹೊಡೆದು ಬಿಡಿಸಲು ಪ್ರಯತ್ನಿಸುತ್ತಾನೆ. ಆದರೆ ಧ್ಯರ್ಯ ಸಾಲದೆ ಹಿಂದೆ ಸರಿಯುತ್ತಾನೆ. ಅದೇ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿ ಕೂಡಲೇ ಹಲ್ಲೆಕೋರನಿಂದ ಮಹಿಳೆಯನ್ನು ರಕ್ಷಿಸಲು ಮುಂದಾಗುತ್ತಾನೆ.

ಅದಾಗಲೇ ಸಾರ್ವಜನಿಕರಲ್ಲರೂ ಕೂಡಿ ಹಲ್ಲೆಕೊರ ಪತಿಯನ್ನು ಚನ್ನಾಗಿ ಥಳಿಸುತ್ತಾರೆ. ಸಾರ್ವಜನಿಕರು ಆರೋಪಿ ಕೈಯಿಂದ ಚಾಕು ಕಸಿದುಕೊಂಡು ಆತನಿಗೆ ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಲ್ಲೆಯ ದೃಶ್ಯ ಸ್ಥಳದಲ್ಲಿದ್ದ CCTV ಯಲ್ಲಿ ದಾಖಲಾಗಿದೆ.

ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ, ವಿಡಿಯೋ :

Courtesy : Social Media / Twitter

ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನದ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಠಾಣೆಯಲ್ಲಿ ಎನ್‌ಸಿಆರ್ (NCR) ದಾಖಲಾಗಿದ್ದು, ದಂಪತಿಗಳಿಗೆ ಕೌನ್ಸೆಲಿಂಗ್ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಹಿಂಸಾಚಾರ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಇಂತಹ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಎನ್‌ಸಿಆರ್ (NCR) :

ಎನ್‌ಸಿಆರ್ (NCR – Non Cognizable Report) ಎಂದರೆ ಗಂಭೀರವಲ್ಲದ ಪ್ರಕರಣಗಳಿಗೆ ಪೊಲೀಸರು ದಾಖಲಿಸುವ ವರದಿ. ಇಂತಹ ಪ್ರಕರಣಗಳಲ್ಲಿ ತಕ್ಷಣವೇ ಬಂಧನ ಮಾಡುವ ಅಧಿಕಾರ ಪೊಲೀಸರಿಗೆ ಇರುವುದಿಲ್ಲ.

ಸಾಮಾನ್ಯ ಜಗಳ, ಸಣ್ಣ ಮಟ್ಟದ ಬೆದರಿಕೆ, ನಿಂದನೆ ಅಥವಾ ಕೌಟುಂಬಿಕ ಕಲಹಗಳಂತಹ ಪ್ರಕರಣಗಳು NCR ಅಡಿಯಲ್ಲಿ ದಾಖಲಾಗುತ್ತವೆ. ಇಂತಹ ಪ್ರಕರಣಗಳಲ್ಲಿ ಮುಂದಿನ ತನಿಖೆ ಅಥವಾ ಕ್ರಮ ಕೈಗೊಳ್ಳಲು ನ್ಯಾಯಾಲಯದ ಅನುಮತಿ ಅಗತ್ಯವಾಗಬಹುದು.

ಪ್ರಮುಖ ಸುದ್ದಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

NCR ದಾಖಲಾದ ಬಳಿಕ ಪೊಲೀಸರು ಇಬ್ಬರಿಗೂ ಕೌನ್ಸೆಲಿಂಗ್ ಅಥವಾ ಎಚ್ಚರಿಕೆ ನೀಡುವ ಕ್ರಮ ಕೈಗೊಳ್ಳುತ್ತಾರೆ.


Disclaimer: ಈ ಸುದ್ದಿ (ಬೆಂಗಳೂರಿನಲ್ಲಿ ರಸ್ತೆಯಲ್ಲೇ ಚಾಕುವಿನಿಂದ ಪತ್ನಿ ಕೊಲೆಗೆ ಯತ್ನ) ಲಭ್ಯ ಮಾಹಿತಿಗಳು ಮತ್ತು ಪೊಲೀಸ್ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಅಧಿಕೃತ ಮಾಹಿತಿ ಬಳಿಕ ಬದಲಾಗುವ ಸಾಧ್ಯತೆ ಇದೆ.

ಮಡಿಕೇರಿ: ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ; ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿಸಿದ ಡ್ರೈವರ್.

ಜನಸ್ಪಂದನ ನ್ಯೂಸ್‌, ಮಡಿಕೇರಿ : ಮಡಿಕೇರಿ (Madikeri) ಸಮೀಪ ಭಾರೀ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ (Private Bus) ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ (Heart Attack) ಸಂಭವಿಸಿದ್ದು, ಆದರೂ ಆತ ಧೈರ್ಯ ಕಳೆದುಕೊಳ್ಳದೆ ಬಸ್‌ನ್ನು ರಸ್ತೆ ಬದಿಗೆ ಇಳಿಸಿ ಹಲವರ ಪ್ರಾಣ ಉಳಿಸಿದ್ದಾನೆ.

ಈ ಘಟನೆ ಇಂದು ಮುಂಜಾನೆ ತಾಳತ್ ಮನೆ ಪ್ರದೇಶದ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರಟಿದ್ದ ಬಸ್ ಮಡಿಕೇರಿ ಭಾಗ ತಲುಪುತ್ತಿದ್ದಂತೆಯೇ ಚಾಲಕ ಅಸ್ವಸ್ಥಗೊಂಡಿದ್ದಾನೆ.

ಚಾಲಕನಿಗೆ ಹೃದಯಾಘಾತ ; ಸಮಯಪ್ರಜ್ಞೆಯಿಂದ ಉಳಿದ ಪ್ರಯಾಣಿಕರ ಪ್ರಾಣ :

ಚಾಲಕನಿಗೆ ಹೃದಯಾಘಾತದ ನಡುವೆಯೂ ಬಸ್ ನಿಯಂತ್ರಣ ತಪ್ಪದಂತೆ ನೋಡಿಕೊಂಡ ಚಾಲಕ, ವಾಹನವನ್ನು ರಸ್ತೆ ಬದಿಗೆ ಚರಂಡಿಯತ್ತ ಇಳಿಸಿದ್ದಾನೆ. ಪರಿಣಾಮ ಬಸ್ ವಾಲಿಕೊಂಡು ನಿಂತಿದ್ದರೂ, ದೊಡ್ಡ ಅನಾಹುತ ತಪ್ಪಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ಕೆಲಕಾಲ ಆತಂಕಗೊಂಡಿದ್ದರು. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಚಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಬದಿಯಲ್ಲಿ ಬಸ್ ನಿಂತಿದ್ದರಿಂದ ಹೆದ್ದಾರಿ ಸಂಚಾರಕ್ಕೂ ಹೆಚ್ಚಿನ ತೊಂದರೆ ಉಂಟಾಗಿಲ್ಲ. ಬಳಿಕ ಪ್ರಯಾಣಿಕರಿಗೆ ಪರ್ಯಾಯ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನು ಓದಿ : ತುಪ್ಪ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತಾ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ?

ಈ ಘಟನೆ ಚಾಲಕರ ಆರೋಗ್ಯ ತಪಾಸಣೆಯ ಅಗತ್ಯತೆ ಹಾಗೂ ದೀರ್ಘ ಪ್ರಯಾಣದ ವೇಳೆ ಮುನ್ನೆಚ್ಚರಿಕೆಯ ಮಹತ್ವವನ್ನು ಮತ್ತೆ ನೆನಪಿಸಿದೆ.

“ಹೃದಯಾಘಾತ” (Heart Attack) :

ಹೃದಯಕ್ಕೆ (Heart) ರಕ್ತ ಪೂರೈಸುವ ನರಗಳಲ್ಲಿ ತಡೆ ಉಂಟಾದಾಗ ಸಂಭವಿಸುವ ಗಂಭೀರ ಸ್ಥಿತಿಯನ್ನು “ಹೃದಯಾಘಾತ” (Heart Attack) ಎಂದು ಕರೆಯಲಾಗುತ್ತದೆ.

ಎದೆನೋವು, ಉಸಿರಾಟದ ತೊಂದರೆ, ಬೆವರು, ತಲೆಸುತ್ತು ಮತ್ತು ಎಡಗೈ ನೋವು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಅಧಿಕ ರಕ್ತದೊತ್ತಡ, ಧೂಮಪಾನ, ಒತ್ತಡ, ಮಧುಮೇಹ ಮತ್ತು ಅಸ್ವಸ್ಥ ಜೀವನಶೈಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತರೆ ಪ್ರಾಣಾಪಾಯ ತಪ್ಪಿಸಬಹುದಾದ್ದರಿಂದ ಲಕ್ಷಣ ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ವಾಹನ ಚಲಾಯಿಸುವಾಗ ಹೃದಯಾಘಾತವಾಗರೆ ಏನು ಮಾಡಬೇಕು :

  • ವಾಹನ ಚಲಾಯಿಸುವಾಗ ಹೃದಯಾಘಾತ (Heart Attack) ಲಕ್ಷಣಗಳು ಕಾಣಿಸಿಕೊಂಡರೆ ಮೊದಲಿಗೆ ಗಾಬರಿಯಾಗದೇ ತಕ್ಷಣ ವಾಹನದ ವೇಗ ಕಡಿಮೆ ಮಾಡಿ ಸುರಕ್ಷಿತವಾಗಿ ರಸ್ತೆ ಬದಿಗೆ ನಿಲ್ಲಿಸಬೇಕು.
  • ಎದೆನೋವು, ಉಸಿರಾಟದ ತೊಂದರೆ, ಅತಿಯಾದ ಬೆವರು ಅಥವಾ ತಲೆಸುತ್ತು ಕಂಡುಬಂದರೆ ತಕ್ಷಣ ಸಹಾಯಕ್ಕಾಗಿ ಸುತ್ತಮುತ್ತಲಿನವರಿಗೆ ಮಾಹಿತಿ ನೀಡುವುದು ಮುಖ್ಯ.
  • ಸಾಧ್ಯವಾದರೆ ತುರ್ತು ವೈದ್ಯಕೀಯ ಸೇವೆ (Emergency Service) ಅಥವಾ ಆಂಬುಲೆನ್ಸ್‌ಗೆ ಕರೆ ಮಾಡಬೇಕು.

ಇಂದಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ

  • ಒಬ್ಬರೇ ಇದ್ದರೆ ವಾಹನವನ್ನು ಮುಂದುವರಿಸಿ ಚಲಾಯಿಸಲು ಪ್ರಯತ್ನಿಸಬಾರದು, ಇದರಿಂದ ದೊಡ್ಡ ಅಪಘಾತ ಸಂಭವಿಸಬಹುದು.
  • ವೈದ್ಯರು ಸೂಚಿಸಿದ್ದರೆ ಮಾತ್ರ ಆಸ್ಪಿರಿನ್‌ (Aspirin) ಸೇವಿಸಬಹುದು. ನಿಯಮಿತ ಆರೋಗ್ಯ ತಪಾಸಣೆ ಹಾಗೂ ಹೃದಯ ಸಮಸ್ಯೆಗಳ ಬಗ್ಗೆ ಮುಂಚಿತ ಎಚ್ಚರಿಕೆ ವಹಿಸುವುದು ಇಂತಹ ಅಪಾಯಗಳನ್ನು ಕಡಿಮೆ ಮಾಡುತ್ತದೆ.

Disclaimer: ಈ ಸುದ್ದಿ (ಚಾಲಕನಿಗೆ ಹೃದಯಾಘಾತ) ಲಭ್ಯ ಮಾಹಿತಿಗಳು ಮತ್ತು ಸ್ಥಳೀಯ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ತನಿಖೆ ಅಥವಾ ವೈದ್ಯಕೀಯ ವರದಿ ಬಳಿಕ ಹೆಚ್ಚಿನ ಮಾಹಿತಿ ಬದಲಾಗುವ ಸಾಧ್ಯತೆ ಇದೆ.

26 ವರ್ಷದ ಮಹಿಳೆ ಜೊತೆ ಆಪ್ತತೆ: ಪೋಷಕರ ಬುದ್ಧಿವಾದಕ್ಕೆ ಮನನೊಂದು 15 ವರ್ಷದ ಬಾಲಕ ಆತ್ಮಹತ್ಯೆ.

ಜನಸ್ಪಂದನ ನ್ಯೂಸ್‌, ಬೆಂಗಳೂರು : ತನಗಿಂತ ದೊಡ್ಡವಳಾದ ಮಹಿಳೆಯೊಂದಿಗೆ ಅಷ್ಟೊಂದು ಸಲುಗೆಯಿಂದ ಇರಬೇಡ ಅಂತ ಪೊಷಕರು ಬುದ್ದಿವಾದ ಹೇಳಿದ ಹಿನ್ನಲೆಯಲ್ಲಿ 15 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಬೆಂಗಳೂರು (Bengaluru) ಸಮೀಪದ ಬಿಡದಿ (Bidadi) ಯಲ್ಲಿ ಮನಕಲಕುವ ಘಟನೆ ನಡೆದಿದೆ. 26 ವರ್ಷದ ಮಹಿಳೆಯೊಂದಿಗೆ ಆಪ್ತ ಸ್ನೇಹ (Love) ಹೊಂದಿದ್ದ 15 ವರ್ಷದ ಬಾಲಕ, ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಮೃತ ಬಾಲಕನನ್ನು ಆರ್. ತನ್ಮಯ್ ಎಂದು ಗುರುತಿಸಲಾಗಿದ್ದು, ಆತ ಬಿಡದಿಯ ಖಾಸಗಿ ಶಾಲೆಯ ವಿದ್ಯಾರ್ಥಿಯಾಗಿದ್ದನು. ತನ್ಮಯ್‌ ಎಂಬ ಬಾಲಕನಿಗೆ ಶೋಭಾ ಎಂಬ 26 ವರ್ಷದ ಮಹಿಳೆಯೊಂದಿಗೆ ಆಪ್ತ ಸಂಪರ್ಕ ಬೆಳೆದಿತ್ತು ಎನ್ನಲಾಗಿದೆ. ಈ ವಿಷಯ ತಿಳಿದ ಬಳಿಕ ಬಾಲಕನ ಪೋಷಕರು ಆತನಿಗೆ ಬುದ್ಧಿವಾದ ಹೇಳಿ, ಆಕೆಯನ್ನು ಭೇಟಿಯಾಗಬಾರದು ಎಂದು ಎಚ್ಚರಿಸಿದ್ದರು.

ಈ ಕುರಿತು ಪೋಷಕರು ಈಗಾಗಲೇ ಮಾರ್ಚ್ ತಿಂಗಳಲ್ಲಿ ಬಿಡದಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮಹಿಳೆಯನ್ನು ಕರೆಸಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೂ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಇನ್‌ಸ್ಟಾಗ್ರಾಂ ಮೂಲಕ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ಆರೋಪಿಸಲಾಗಿದೆ.

ಇದನ್ನು ಓದಿ : ಪೋಕ್ಸೋ ಭಯ: ಠಾಣೆಯಲ್ಲೇ ಲಾಕರ್ ಕೀ ನುಂಗಿದ ಆರೋಪಿ; 10ಕೆಜಿ ಬಾಳೆಹಣ್ಣು ತಿನ್ನಿಸಿದ ಪೊಲೀಸರು.

ಪೋಷಕರು ಆಕೆಯೊಂದಿಗೆ ಎಲ್ಲಾ ಸಂಪರ್ಕ ಕಡಿತಗೊಳಿಸುವಂತೆ ಹೇಳಿದ ಬಳಿಕ, ತನ್ಮಯ್ ಮನೆ ಬಿಟ್ಟು ಸ್ನೇಹಿತನ ಮನೆಯಲ್ಲಿ ವಾಸಿಸುತ್ತಿದ್ದನು. “ಆಕೆಯನ್ನು ಮದುವೆಯಾಗಬೇಕು, ಇಲ್ಲದಿದ್ದರೆ ಬದುಕುವುದಿಲ್ಲ” ಎಂದು ಆತ ಪೊಷಕರಿಗೆ ಹೇಳಿದ್ದಾನೆ ಎನ್ನಲಾಗಿದೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು :

ಯುವತಿ ಜೊತೆ ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡ ಹಿನ್ನೆಲೆಯಲ್ಲಿ ಏಪ್ರಿಲ್ 29ರಂದು ಬಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ತಕ್ಷಣ ಸ್ನೇಹಿತರು ಆತನನ್ನು ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು (Bengaluru) ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಚಿಕಿತ್ಸೆ ವೇಳೆ ಶೋಭಾ ಜೊತೆ ಜಗಳವಾದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಬಾಲಕ ತನ್ನ ಪೋಷಕರಿಗೆ ಹೇಳಿದ್ದಾನೆ ಎಂದು ವರದಿಯಾಗಿದೆ. ಬಾಲಕ ಆತ್ಮಹತ್ಯೆ ಸಂಬಂಧ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಚನ್ನಪಟ್ಟಣ ಗ್ರಾಮೀಣ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ (Abetment to Suicide) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

ಸಂಪಾದಕೀಯ :

ಅಪ್ರಾಪ್ತ ವಯಸ್ಸು (Minor Age) ಜೀವನದ ಅತ್ಯಂತ ಸೂಕ್ಷ್ಮ ಹಂತವಾಗಿದೆ. ಈ ವಯಸ್ಸಿನಲ್ಲಿ ತೆಗೆದುಕೊಳ್ಳುವ ಭಾವನಾತ್ಮಕ ನಿರ್ಧಾರಗಳು ಕೆಲವೊಮ್ಮೆ ಭವಿಷ್ಯಕ್ಕೂ ದೊಡ್ಡ ಪರಿಣಾಮ ಬೀರುತ್ತವೆ.

ಸ್ನೇಹ, ಪ್ರೀತಿ ಅಥವಾ ಆಕರ್ಷಣೆ ಸಹಜವಾದರೂ, ಜೀವನಕ್ಕಿಂತ ಯಾವ ಸಂಬಂಧವೂ ದೊಡ್ಡದಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆಗಳು ಬಂದಾಗ ಆತ್ಮಹತ್ಯೆ ಅಥವಾ ತಪ್ಪು ನಿರ್ಧಾರಗಳ ಬಗ್ಗೆ ಯೋಚಿಸದೇ, ಪೋಷಕರು, ಶಿಕ್ಷಕರು ಅಥವಾ ಆತ್ಮೀಯರ ಜೊತೆ ಮಾತನಾಡುವುದು ಬಹಳ ಮುಖ್ಯ.

ಇಂದಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ

ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ಬಳಕೆಯಲ್ಲಿ ಎಚ್ಚರಿಕೆ ಇರಬೇಕು. ಅಪ್ರಾಪ್ತರು ತಮ್ಮ ಶಿಕ್ಷಣ, ಕನಸುಗಳು ಮತ್ತು ಭವಿಷ್ಯದ ಗುರಿಗಳತ್ತ ಹೆಚ್ಚು ಗಮನ ಹರಿಸಬೇಕು. ಯಾವುದೇ ಒತ್ತಡ ಅಥವಾ ಮಾನಸಿಕ ಸಮಸ್ಯೆ ಎದುರಾದರೆ ಸಹಾಯ ಕೇಳುವುದು ದುರ್ಬಲತೆ ಅಲ್ಲ, ಅದು ಧೈರ್ಯದ ಹೆಜ್ಜೆ. ಬದುಕು ಅಮೂಲ್ಯ, ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ.


Disclaimer:  ಈ ಸುದ್ದಿ (ಬಾಲಕ ಆತ್ಮಹತ್ಯೆ) ಲಭ್ಯ ಮಾಹಿತಿಗಳು ಮತ್ತು ಪೊಲೀಸ್ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಅಂತಿಮ ಸತ್ಯಾಂಶ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

ತುಪ್ಪ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತಾ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ?

ಜನಸ್ಪಂದನ ನ್ಯೂಸ್‌, ಆರೋಗ್ಯ : ನಾವೂ ದಿನ ನಿತ್ಯ ಆಹಾರದ ಜೊತೆ ತುಪ್ಪ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತಾ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ? ಬನ್ನಿ, ತುಪ್ಪ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತಾ ಮತ್ತು ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ ಅಂತ ಇಂದಿನ ಆರೋಗ್ಯ ಸುದ್ದಿಯಲ್ಲಿ ತಿಳಿಯೋಣ.!

ಭಾರತೀಯ ಅಡುಗೆ ಮನೆಯ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾದ Ghee ಬಗ್ಗೆ ಹಲವು ವರ್ಷಗಳಿಂದ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ.

ವಿಶೇಷವಾಗಿ ಕೊಲೆಸ್ಟ್ರಾಲ್ (Cholesterol) ಮತ್ತು ಹೃದಯ ಆರೋಗ್ಯ (Heart Health) ವಿಚಾರದಲ್ಲಿ ತುಪ್ಪ ಹಾನಿಕಾರಕ ಎಂಬ ಭಯ ಅನೇಕರಲ್ಲಿದೆ. ಆದರೆ ಇತ್ತೀಚಿನ ಅಧ್ಯಯನಗಳು ಮತ್ತು ತಜ್ಞರ ಅಭಿಪ್ರಾಯಗಳು ತುಪ್ಪದ ಬಗ್ಗೆ ಇರುವ ಕೆಲವು ಹಳೆಯ ನಂಬಿಕೆಗಳನ್ನು ಪ್ರಶ್ನಿಸುತ್ತಿವೆ.

ತುಪ್ಪ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತಾ?

ತುಪ್ಪದಲ್ಲಿ ಸ್ಯಾಚುರೇಟೆಡ್ ಫ್ಯಾಟ್ (Saturated Fat) ಇರುವುದರಿಂದ ಅದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ತುಪ್ಪದಲ್ಲಿರುವ ‘ಬ್ಯುಟಿರಿಕ್ ಆಸಿಡ್’ (Butyric Acid) ದೇಹಕ್ಕೆ ತ್ವರಿತ ಶಕ್ತಿ ನೀಡುವ ಜೊತೆಗೆ ಸುಲಭವಾಗಿ ಜೀರ್ಣವಾಗುತ್ತದೆ.

ಮಿತವಾಗಿ ಸೇವಿಸಿದರೆ ಇದು ಎಲ್‌ಡಿಎಲ್ (LDL) ಮಟ್ಟವನ್ನು ಹೆಚ್ಚಿಸುವ ಸಾಧ್ಯತೆ ಕಡಿಮೆ ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ.

ಇದನ್ನು ಓದಿ : ಬೇಸಿಗೆಯಲ್ಲಿ ಮಜ್ಜಿಗೆ ಮತ್ತು ಲಸ್ಸಿ: ದೇಹಕ್ಕೆ ಯಾವುದು ಹೆಚ್ಚು ತಂಪು ಕೊಡುತ್ತದೆ?

ರಿಫೈನ್ಡ್ ಎಣ್ಣೆಗಿಂತ ತುಪ್ಪ ಉತ್ತಮವೇ?

ಅನೇಕರು ಆರೋಗ್ಯಕರ ಎಂದು ರಿಫೈನ್ಡ್ ಎಣ್ಣೆಗಳನ್ನು ಬಳಸುತ್ತಾರೆ. ಆದರೆ ಇಂತಹ ಎಣ್ಣೆಗಳು ದೇಹದಲ್ಲಿ ಉರಿಯೂತ (Inflammation) ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. ಇದರ ವಿರುದ್ಧವಾಗಿ, ನೈಸರ್ಗಿಕ ವಿಧಾನದಲ್ಲಿ ತಯಾರಿಸಿದ ತುಪ್ಪದಲ್ಲಿ ಒಮೆಗಾ-3 (Omega-3) ಕೊಬ್ಬಿನಾಮ್ಲಗಳಿದ್ದು, ಇದು ಹೃದಯ ಆರೋಗ್ಯಕ್ಕೆ ಸಹಕಾರಿ ಎಂದು ಪರಿಗಣಿಸಲಾಗಿದೆ.

ತುಪ್ಪದಲ್ಲಿರುವ ಪೋಷಕಾಂಶಗಳು :

ತುಪ್ಪದಲ್ಲಿ ವಿಟಮಿನ್ A, D, E ಮತ್ತು K ಸಮೃದ್ಧವಾಗಿದೆ. ವಿಶೇಷವಾಗಿ ವಿಟಮಿನ್ K2 ದೇಹದಲ್ಲಿ ಕ್ಯಾಲ್ಸಿಯಂ ಸರಿಯಾದ ಜಾಗಕ್ಕೆ ತಲುಪಲು ಸಹಾಯ ಮಾಡುತ್ತದೆ. ಇದರಿಂದ ಮೂಳೆಗಳ ಆರೋಗ್ಯ ಸುಧಾರಿಸಬಹುದು ಎಂದು ಹೇಳಲಾಗುತ್ತದೆ.

ಹೃದಯ ರೋಗಿಗಳು ತುಪ್ಪ ತಿನ್ನಬಹುದೇ?

ತಜ್ಞರ ಪ್ರಕಾರ, ಸಮತೋಲಿತ ಆಹಾರದ ಭಾಗವಾಗಿ ದಿನಕ್ಕೆ 1 ರಿಂದ 2 ಚಮಚ ತುಪ್ಪ ಸೇವಿಸುವುದು ಸಾಮಾನ್ಯವಾಗಿ ಸುರಕ್ಷಿತವಾಗಿದೆ. ಆದರೆ ಗಂಭೀರ ಹೃದಯ ಸಮಸ್ಯೆ (Heart Disease) ಇರುವವರು ವೈದ್ಯರ ಸಲಹೆ ಪಡೆದು ಸೇವಿಸುವುದು ಒಳಿತು.

ಈ ಸುದಿಯನ್ನು ಓದಿ : ರೈಲು ಹಳಿ ದಾಟುವ ವೇಳೆ ಭೀಕರ ದುರಂತ: ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು, ವಿಡಿಯೋ ವೈರಲ್.

ದೇಶಿ ಆಕಳ ತುಪ್ಪ ಮತ್ತು ಎಮ್ಮೆ ತುಪ್ಪ :

ದೇಶಿ ಆಕಳ ತುಪ್ಪ (Cow Ghee) ಮತ್ತು ಎಮ್ಮೆ ತುಪ್ಪ (Buffalo Ghee) ಎರಡೂ ಆರೋಗ್ಯಕ್ಕೆ ಉಪಯುಕ್ತವಾದರೂ, ಅವುಗಳ ಗುಣಲಕ್ಷಣಗಳಲ್ಲಿ ವ್ಯತ್ಯಾಸ ಇದೆ.

  • ಆಕಳ ತುಪ್ಪ ಹಗುರವಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ ಹಾಗೂ ಇದರಲ್ಲಿ ವಿಟಮಿನ್ A ಮತ್ತು ಒಮೆಗಾ-3 (Omega-3) ಕೊಬ್ಬಿನಾಮ್ಲಗಳು ಹೆಚ್ಚು ಇರುತ್ತವೆ.
  • ಎಮ್ಮೆ ತುಪ್ಪದಲ್ಲಿ ಕೊಬ್ಬಿನಾಂಶ (Fat Content) ಹೆಚ್ಚು ಇರುವುದರಿಂದ ಇದು ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ. ಆದರೆ ಇದು ಸ್ವಲ್ಪ ಗಟ್ಟಿಯಾಗಿದ್ದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.
  • ಆಕಳ ತುಪ್ಪವನ್ನು ಸಾಮಾನ್ಯವಾಗಿ ಹೃದಯ ಆರೋಗ್ಯ (Heart Health) ಮತ್ತು ದೈನಂದಿನ ಬಳಕೆಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ.
  • ಎಮ್ಮೆ ತುಪ್ಪ ದೈಹಿಕ ಶ್ರಮ ಹೆಚ್ಚಿರುವವರು ಅಥವಾ ತೂಕ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಹೆಚ್ಚು ಉಪಯುಕ್ತವಾಗಬಹುದು.

ಗಮನಿಸಬೇಕಾದ ಅಂಶಗಳು :

* ಮಿತವಾಗಿ ಸೇವಿಸುವುದು ಮುಖ್ಯ.
* ಶುದ್ಧ ಮತ್ತು ಕಲಬೆರಕೆ ಇಲ್ಲದ ತುಪ್ಪ ಆಯ್ಕೆ ಮಾಡಿಕೊಳ್ಳಿ.
* ಆರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮವೂ ಅಗತ್ಯ.

ಇಂದಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ

ಒಟ್ಟಿನಲ್ಲಿ, ತುಪ್ಪ (Ghee) ಆರೋಗ್ಯದ ಶತ್ರುವಲ್ಲ. ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಅದು ಜೀರ್ಣಕ್ರಿಯೆ (Digestion) ಮತ್ತು ದೇಹದ ಶಕ್ತಿಗೆ ಸಹಾಯಕವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Photo Credit : AI


Disclaimer: ಈ ಲೇಖನವು (ತುಪ್ಪ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತಾ) ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಆಹಾರ ಬದಲಾವಣೆಗೆ ಮೊದಲು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಒಳಿತು.

ಪೋಕ್ಸೋ ಭಯ: ಠಾಣೆಯಲ್ಲೇ ಲಾಕರ್ ಕೀ ನುಂಗಿದ ಆರೋಪಿ; 10ಕೆಜಿ ಬಾಳೆಹಣ್ಣು ತಿನ್ನಿಸಿದ ಪೊಲೀಸರು.

ಜನಸ್ಪಂದನ ನ್ಯೂಸ್‌, ಬೆಂಗಳೂರು : ಪೋಕ್ಸೋ ಕೇಸ್‌ಗೆ ಹೆದರಿ ಆರೋಪಿಯೋರ್ವ ಠಾಣೆಯಲ್ಲೇ ಲಾಕರ್ ಕೀ ನುಂಗಿ ಹೈಡ್ರಾಮಾ ಸೃಷ್ಟಿಸಿದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ತಕ್ಷಣ ಆಸ್ಪತ್ರೆ ಸೇರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿ ನಾಪತ್ತೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬನು ಠಾಣೆಯಲ್ಲೇ ಹೀಗೆ ವಿಚಿತ್ರ ಕೃತ್ಯ ಎಸಗಿ ಸಂಚಲನ ಮೂಡಿಸಿದ್ದಾನೆ. ಪೋಕ್ಸೋ (POCSO) ಪ್ರಕರಣದ ಭಯದಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ (Madanayakanahalli Police Station) ನಲ್ಲಿ ವಿಚಾರಣೆ ವೇಳೆ ಲಾಕರ್ ಕೀ (Locker Key) ನುಂಗಿ ಆತ್ಮಹತ್ಯೆಗೆ (Suicide Attempt) ಯತ್ನಿಸಿದ ಘಟನೆ ನಡೆದಿದೆ.

ಬಳ್ಳಾರಿ ಮೂಲದ ಕಾರ್ತಿಕ್ ಅಲಿಯಾಸ್ ರಾಮು ಎಂಬಾತನೇ ಈ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದೆ. 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಆರೋಪದ ಮೇಲೆ ಪೊಲೀಸರು ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಪೋಕ್ಸೋ ಕೇಸ್ ಭಯದಿಂದ ಆತ ಅಚಾನಕ್‌ವಾಗಿ ಲಾಕರ್ ಕೀ ನುಂಗಿದ್ದಾನೆ.

ಇದನ್ನು ಓದಿ : ಬೇಸಿಗೆಯಲ್ಲಿ ಮಜ್ಜಿಗೆ ಮತ್ತು ಲಸ್ಸಿ: ದೇಹಕ್ಕೆ ಯಾವುದು ಹೆಚ್ಚು ತಂಪು ಕೊಡುತ್ತದೆ?

ಘಟನೆಯಿಂದ ಬೆಚ್ಚಿಬಿದ್ದ ಪೊಲೀಸರು ತಕ್ಷಣ ಆರೋಪಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿದ್ದಾರೆ. ಲಾಕಪ್ ಡೆತ್ (Lockup Death) ಆರೋಪದ ಭೀತಿ ಹಿನ್ನೆಲೆಯಲ್ಲಿ ಪೊಲೀಸರು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಕಾವಲು ಕಾಯಬೇಕಾದ ಪರಿಸ್ಥಿತಿ ಎದುರಾಯಿತು.

ಹೊರಗೆ ಬಂದ ಲಾಕರ್ ಕೀ :

ವಿಚಿತ್ರ ಸಂಗತಿ ಏನೆಂದರೆ, ಕೀ ಹೊರಬರುವಂತೆ ಮಾಡಲು ಪೊಲೀಸರು ಆರೋಪಿಗೆ ಸುಮಾರು 10 ಕೆಜಿ ಬಾಳೆಹಣ್ಣು ತಿನ್ನಿಸಿದರೆಂಬ ಮಾಹಿತಿ ಲಭ್ಯವಾಗಿದೆ. ಕೊನೆಗೆ ಮೂರು ದಿನಗಳ ಬಳಿಕ ಮಲದ ಮೂಲಕ ಕೀ ಹೊರಬಂದಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಘಟನೆ ತಮಾಷೆಯಂತೆ ಕಂಡರೂ, ಸ್ವಲ್ಪ ಹೆಚ್ಚು-ಕಡಿಮೆ ಆಗಿದ್ದರೆ ದೊಡ್ಡ ಸಮಸ್ಯೆಯಾಗಬಹುದಿತ್ತು ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಪೊಲೀಸ್ ಸಿಬ್ಬಂದಿಗೆ ವಾರ್ನಿಂಗ್ ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಅಪ್ರಾಪ್ತ ಬಾಲಕಿ ನಾಪತ್ತೆ ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಪೋಕ್ಸೋ (POCSO) :

  • ಪೋಕ್ಸೋ (POCSO) ಎಂದರೆ Protection of Children from Sexual Offences Act 2012 ಎಂಬ ಕಾನೂನು. ಈ ಕಾನೂನು ಮಕ್ಕಳ ಮೇಲೆ ನಡೆಯುವ ಲೈಂಗಿಕ ಅಪರಾಧಗಳನ್ನು ತಡೆಯಲು ಮತ್ತು ಶಿಕ್ಷಿಸಲು ರೂಪಿಸಲಾಗಿದೆ.
  • 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೆ ಇದು ಅನ್ವಯವಾಗುತ್ತದೆ. ಈ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ, ಕಿರುಕುಳ (Harassment) ಮತ್ತು ಶೋಷಣೆ (Exploitation) ವಿರುದ್ಧ ಕಠಿಣ ಶಿಕ್ಷೆಗಳಿವೆ.
  • ಪೋಕ್ಸೋ ಕಾನೂನು ಮಕ್ಕಳ ಸುರಕ್ಷತೆ (Child Protection) ಮತ್ತು ಗೌರವವನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಪ್ರಕರಣಗಳ ವಿಚಾರಣೆ ವೇಗವಾಗಿ ನಡೆಯಲು ವಿಶೇಷ ನ್ಯಾಯಾಲಯಗಳ ವ್ಯವಸ್ಥೆಯೂ ಇದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ

ಒಟ್ಟಿನಲ್ಲಿ, ಪೋಕ್ಸೋ ಕಾಯ್ದೆ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಅತ್ಯಂತ ಮಹತ್ವದ ಕಾನೂನು ಆಗಿದೆ.


Disclaimer: ಈ ಸುದ್ದಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ರಚಿಸಲಾಗಿದೆ. ತನಿಖೆ ಮುಂದುವರಿದಿರುವುದರಿಂದ ಮುಂದಿನ ಅಧಿಕೃತ ಮಾಹಿತಿ ಪ್ರಕಾರ ವಿವರಗಳಲ್ಲಿ ಬದಲಾವಣೆ ಸಾಧ್ಯ.

ರೈಲು ಹಳಿ ದಾಟುವ ವೇಳೆ ಭೀಕರ ದುರಂತ: ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು, ವಿಡಿಯೋ ವೈರಲ್.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಜಾಗರೂಕತೆಯಿಂದ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿರುವ ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು ಸಂಭವಿಸಿರುವ ದುರಂತ ಘಟನೆ ಘಟಿಸಿದ್ದು, ಈ ಘಟನೆಯ ವಿಡಿಯೋ ಸೊಶಿಯಲ್ ಮಿಡಿಯಾದಲ್ಲಿ ವೈರಲ್‌ ಆಗಿದೆ.

ಮಹಿಳೆಯರಿಬ್ಬರು ರೈಲು ಹಳಿ (Railway Track) ದಾಟುವ ವೇಳೆ ಸಂಭವಿಸಿದ ಭೀಕರ ದುರಂತದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಜನರಿಗೆ ಎಚ್ಚರಿಕೆಯ ಗಂಟೆ (Warning) ಆಗಿ ಪರಿಣಮಿಸಿದೆ.

ವಿಡಿಯೋದಲ್ಲೇನಿದೆ :

ವಿಡಿಯೋದಲ್ಲಿ, ರೈಲ್ವೇ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಕೈ-ಕೈ ಹಿಡಿದುಕೊಂಡೇ ಹಳಿ ದಾಟಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಆದರೆ, ಹಳಿಯ ಎತ್ತರ ಮತ್ತು ಅವಸರದಿಂದಾಗಿ ಅವರು ವೇಗವಾಗಿ ಮೇಲಕ್ಕೆ ಏರಲು ಸಾಧ್ಯವಾಗುವುದಿಲ್ಲ.

ಪ್ಲಾಟ್‌ಫಾರ್ಮ್‌ ಮೇಲೆ ಹತ್ತಲು ಆಗದಿದ್ದಾಗ ಅದೇ ಸ್ಥಳದಲ್ಲಿದ್ದ ವ್ಯಕ್ತಿಗಳು ಸಹಾಯಕ್ಕಾಗಿ ಮುಂದೆ ಬಂದಿದ್ದಾರೆ. ಮಹಿಳೆಯರನ್ನು ಕೈ ಹಿಡಿದು ಮೇಲಕ್ಕೆತ್ತಬೇಕು ಅನ್ನುವಷ್ಟರಲ್ಲಿ ಅದೇ line ಮೇಲೆ ವೇಗವಾಗಿ ಬರುತ್ತಿರುವ ರೈಲಿನ ದೃಶ್ಯ ಕಂಡ ವ್ಯಕ್ತಿಗಳು ಹಿಂದೆ ಸರಿಯುವುದನ್ನು ವಿಡಿಯೋದಲ್ಲಿ ಕಾಣಬಹುದು.

ಕ್ಷಣಾರ್ಧದಲ್ಲಿಯೇ ಅತೀವ ವೇಗದಲ್ಲಿ ಬರುತ್ತಿದ್ದ ಎಕ್ಸ್‌ಪ್ರೆಸ್ ರೈಲು (Express Train) ಅವರಿಗೆ ಡಿಕ್ಕಿ ಹೊಡೆದು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು ಸಂಭವಿಸಿರುವ ದುರಂತದ ದೃಶ್ಯ CCTV ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ : ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: CCB ದಾಳಿ; 4 ಜನರ ಬಂಧನ, ಮಹಿಳೆಯರ ರಕ್ಷಣೆ.

ರೈಲಿನ ಭಾರೀ ವೇಗ ಮತ್ತು ರಭಸದಿಂದ ಇಬ್ಬರೂ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ದೃಶ್ಯಗಳು ಅತೀವ ಹೃದಯವಿದ್ರಾವಕವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

3. Dünya Savaşı @ww3mediaa ಎನ್ನುವ ಸಾಮಾಜಿಕ ಜಾಲತಾಣದ ಖಾತೆಯಲ್ಲಿ May 5, 2026 ರಂದು ಈ ವಿಡಿಯೋ ಹಂಚಿಕೊಂಡಿದ್ದು, ಸದ್ಯ 1.5M Views ಪಡೆದುಕೊಂಡಿದೆ. ಭಾರತದಲ್ಲಿ, ಪ್ಲಾಟ್‌ಫಾರ್ಮ್ ತಲುಪಲು ಹಳಿ ದಾಟಲು ಪ್ರಯತ್ನಿಸುತ್ತಿದ್ದಾಗ ಇಬ್ಬರು ಮಹಿಳೆಯರು ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು (In India, two women were struck by a train and killed while attempting to cross the tracks to reach the platform) ಎಂಬ ಬರೆದುಕೊಂಡಿದ್ದಾರೆ.

ಈ ಬರಹದಿಂದ ತಿಳಿದು ಬರುವುದೆನೆಂದರೆ, ಘಟನೆ ಭಾರತದಲ್ಲಿ ನಡೆದಿರುವುದು ಗೊತ್ತಾಗುತ್ತದೆ, ಆದರೆ ಎಲ್ಲಿ ಮತ್ತು ಯಾವಾಗ ಅಂತ ತಿಳಿದು ಬಂದಿಲ್ಲ.

ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು, ವಿಡಿಯೋ :

Courtesy : Social Media / Twitter  

ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು ಸಂಭವಿಸಿದ ಈ ಘಟನೆ, ಮತ್ತೊಮ್ಮೆ ರೈಲು ಹಳಿ ದಾಟುವಾಗ ಜಾಗರೂಕತೆಯ ಅಗತ್ಯವನ್ನು ನೆನಪಿಸಿದೆ. ಅಧಿಕಾರಿಗಳು ಸದಾ ಫುಟ್‌ಓವರ್ ಬ್ರಿಡ್ಜ್ (Foot Over Bridge) ಅಥವಾ ಅಂಡರ್‌ಪಾಸ್ (Underpass) ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದಾರೆ.

ಸಂಪಾದಕೀಯ :

  • ಪ್ಲಾಟ್‌ಫಾರ್ಮ್‌ನಲ್ಲಿ ರೈಲು ಹಳಿ ದಾಟುವುದು ತುಂಬಾ ಅಪಾಯಕಾರಿ, ಆದ್ದರಿಂದ ಸಾಧ್ಯವಾದಷ್ಟು ತಪ್ಪಿಸಬೇಕು.
  • ಯಾವಾಗಲೂ ಫುಟ್ ಓವರ್ ಬ್ರಿಡ್ಜ್ (FOB) ಅಥವಾ ಅಂಡರ್‌ಪಾಸ್ ಬಳಸುವುದು ಅತ್ಯಂತ ಸುರಕ್ಷಿತ ವಿಧಾನ.
  • ರೈಲು ಬರುತ್ತಿದೆಯೇ ಎಂದು ಎರಡು ಕಡೆ ಗಮನಿಸಿ, ತುರ್ತು ಅವಸರದಲ್ಲಿ ಹಳಿ ದಾಟಲು ಹೋಗಬೇಡಿ.
  • ಕಿವಿಯಲ್ಲಿ ಹೆಡ್‌ಫೋನ್ ಹಾಕಿಕೊಂಡು ಅಥವಾ ಮೊಬೈಲ್‌ನಲ್ಲಿ ಮಾತನಾಡುತ್ತಾ ಹಳಿ ದಾಟುವುದು ಜೀವಕ್ಕೆ ಅಪಾಯಕಾರಿಯಾಗಿದೆ.

ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ

  • ಮಕ್ಕಳು ಮತ್ತು ವೃದ್ಧರನ್ನು ಹಳಿ ಬಳಿ ಒಬ್ಬರೇ ಬಿಡದೆ ಕಾಳಜಿ ವಹಿಸಬೇಕು.
  • ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಇಂತಹ ದುರ್ಘಟನೆಗಳನ್ನು ಸುಲಭವಾಗಿ ತಪ್ಪಿಸಬಹುದು.

Disclaimer: ಈ ಸುದ್ದಿ (ಇಬ್ಬರು ಮಹಿಳೆಯರು ರೈಲಿನಡಿಗೆ ಸಿಲುಕಿ ಸಾವು) ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಲಭ್ಯ ಮಾಹಿತಿಗಳ ಆಧಾರದ ಮೇಲೆ ರಚಿಸಲಾಗಿದೆ. ದೃಶ್ಯಗಳು ಅಸ್ವಸ್ಥಗೊಳಿಸುವಂತಿರಬಹುದು. ದಯವಿಟ್ಟು ಸುರಕ್ಷತಾ ನಿಯಮಗಳನ್ನು ಪಾಲಿಸಿ.

ಬೇಸಿಗೆಯಲ್ಲಿ ಮಜ್ಜಿಗೆ ಮತ್ತು ಲಸ್ಸಿ: ದೇಹಕ್ಕೆ ಯಾವುದು ಹೆಚ್ಚು ತಂಪು ಕೊಡುತ್ತದೆ?

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೇಸಿಗೆಯಲ್ಲಿ ಮಜ್ಜಿಗೆ vs ಲಸ್ಸಿ,  ಇದರಲ್ಲಿ ದೇಹಕ್ಕೆ ಯಾವುದು ಹೆಚ್ಚು ತಂಪು ಕೊಡುತ್ತದೆ ಗೊತ್ತಾ? ಬನ್ನಿ ಇಂದಿನ ಆರೋಗ್ಯ ಸುದ್ದಿಯಲ್ಲಿ ಮಜ್ಜಿಗೆ ಮತ್ತು ಲಸ್ಸಿ ಇವುಗಳಲ್ಲಿ ದೇಹಕ್ಕೆ ಯಾವುದು ಹೆಚ್ಚು ತಂಪು ಕೊಡುತ್ತದೆ ಅಂತ.

ಬೇಸಿಗೆಯಲ್ಲಿ (Summer) ತಾಪಮಾನ 40°C ದಾಟಿದಾಗ ದೇಹವನ್ನು ತಂಪಾಗಿಡುವುದು ಅತ್ಯಗತ್ಯ. ಈ ವೇಳೆ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಎರಡು ಪಾನೀಯಗಳು ಮಜ್ಜಿಗೆ ಮತ್ತು ಲಸ್ಸಿ (Buttermilk & Lassi). ಇವೆರಡೂ ಮೊಸರಿನಿಂದ ತಯಾರಾದರೂ, ದೇಹದ ಮೇಲೆ ಬೀರುವ ಪರಿಣಾಮದಲ್ಲಿ ವ್ಯತ್ಯಾಸ ಇದೆ.

 ಮಜ್ಜಿಗೆ ಮತ್ತು ಲಸ್ಸಿ (Buttermilk & Lassi) ಭಾರತೀಯ ಸಂಪ್ರದಾಯಿಕ ಪಾನೀಯಗಳಲ್ಲಿ ಪ್ರಮುಖವಾಗಿವೆ. ಇವೆರಡೂ ಮೊಸರಿನಿಂದ ತಯಾರಾಗಿದ್ದರೂ, ತಯಾರಿಕಾ ವಿಧಾನ ಮತ್ತು ಗುಣಗಳಲ್ಲಿ ವ್ಯತ್ಯಾಸವಿದೆ.

ಮಜ್ಜಿಗೆ ಸಾಮಾನ್ಯವಾಗಿ ಮೊಸರನ್ನು ನೀರಿನಲ್ಲಿ ತೆಳುವಾಗಿಸಿ, ಉಪ್ಪು ಮತ್ತು ಮಸಾಲೆಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಇದು ದೇಹಕ್ಕೆ ತಕ್ಷಣ ತಂಪು ನೀಡುವ ಗುಣ ಹೊಂದಿದೆ. ಲಸ್ಸಿ ದಪ್ಪವಾಗಿದ್ದು, ಸಾಮಾನ್ಯವಾಗಿ ಸಕ್ಕರೆ ಅಥವಾ ಹಣ್ಣುಗಳನ್ನು ಸೇರಿಸಿ ತಯಾರಿಸಲಾಗುತ್ತದೆ.

ಇದನ್ನು ಓದಿ : ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: CCB ದಾಳಿ; 4 ಜನರ ಬಂಧನ, ಮಹಿಳೆಯರ ರಕ್ಷಣೆ.

ಮಜ್ಜಿಗೆ ಹೆಚ್ಚು ನೀರಿನಾಂಶ ಹೊಂದಿರುವುದರಿಂದ ದೇಹಕ್ಕೆ ಹೈಡ್ರೇಶನ್ (Hydration) ನೀಡಲು ಉತ್ತಮವಾಗಿದೆ. ಲಸ್ಸಿ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಭೋಜನದ ಬಳಿಕ ಕುಡಿಯಲು ಸೂಕ್ತವಾಗಿದೆ.

ಹೈಡ್ರೇಶನ್ (Hydration) ಸಾಮರ್ಥ್ಯ :

ಮಜ್ಜಿಗೆ ಹೆಚ್ಚಿನ ನೀರಿನಾಂಶ ಹೊಂದಿರುವುದರಿಂದ ದೇಹಕ್ಕೆ ತಕ್ಷಣ ಹೈಡ್ರೇಶನ್ ನೀಡುತ್ತದೆ. ಇದು ತೆಳುವಾಗಿರುವುದರಿಂದ ದೇಹ ಬೇಗ ಹೀರಿಕೊಳ್ಳುತ್ತದೆ. ಲಸ್ಸಿ ದಪ್ಪವಾಗಿರುವುದರಿಂದ ನಿಧಾನವಾಗಿ ಜೀರ್ಣವಾಗುತ್ತದೆ.

ಜೀರ್ಣಕ್ರಿಯೆ ಮತ್ತು ಶಕ್ತಿ :

ಮಜ್ಜಿಗೆ ಕಡಿಮೆ ಕೊಬ್ಬಿನಂಶ ಹೊಂದಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಇದರಿಂದ ದೇಹಕ್ಕೆ ತಂಪು ಹೆಚ್ಚಾಗಿ ಸಿಗುತ್ತದೆ. ಲಸ್ಸಿಯಲ್ಲಿ ಸಕ್ಕರೆ ಮತ್ತು ಕೆನೆ ಇರುವುದರಿಂದ ಅದು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿದ್ದು, ಕೆಲವೊಮ್ಮೆ ಆಲಸ್ಯ (Lethargy) ಉಂಟುಮಾಡಬಹುದು.

ಉಪ್ಪು vs ಸಕ್ಕರೆ ಪ್ರಭಾವ :

  • ಮಜ್ಜಿಗೆಗೆ ಉಪ್ಪು ಮತ್ತು ಮಸಾಲೆಗಳನ್ನು ಸೇರಿಸುವುದರಿಂದ ಬೆವರಿನ ಮೂಲಕ ಕಳೆದುಹೋಗುವ ಎಲೆಕ್ಟ್ರೋಲೈಟ್‌ಗಳನ್ನು ಮರುಪೂರಣ ಮಾಡುತ್ತದೆ.
  • ಲಸ್ಸಿ ಸಾಮಾನ್ಯವಾಗಿ ಸಕ್ಕರೆ ಹೊಂದಿದ್ದು ತಕ್ಷಣ ಶಕ್ತಿ ನೀಡಿದರೂ, ಬಿಸಿಲಿನಲ್ಲಿ ಬೇಗ ಸುಸ್ತಾಗಿಸಬಹುದು.

ಈ ಸುದ್ದಿನೂ ಓದಿ : ಬೇಸಿಗೆಯಲ್ಲಿ ಕಬ್ಬಿನ ರಸ: ಆರೋಗ್ಯ ಲಾಭಗಳು, ಜೀರ್ಣಕ್ರಿಯೆ ಸುಧಾರಣೆ ಹಾಗೂ ಯಾರು ಸೇವಿಸಬಾರದು?

ಯಾವುದು ಉತ್ತಮ?

ಮಜ್ಜಿಗೆ :

  • ತಕ್ಷಣದ ತಂಪು, ಉತ್ತಮ ಹೈಡ್ರೇಶನ್, ಸುಲಭ ಜೀರ್ಣ.

ಲಸ್ಸಿ:

  • ಪೌಷ್ಟಿಕಾಂಶ, ಹೊಟ್ಟೆ ತುಂಬಿದ ಅನುಭವ, ನಿಧಾನ ತಂಪು.

ಒಟ್ಟಿನಲ್ಲಿ, ಬೇಸಿಗೆಯಲ್ಲಿ ಮಜ್ಜಿಗೆ ಮತ್ತು ಲಸ್ಸಿ ಎರಡು ಅವಶ್ಯವಾದರೂ ಸಹ, ತೀವ್ರ ಬಿಸಿಲಿನಲ್ಲಿ ದೇಹಕ್ಕೆ ತಕ್ಷಣ ತಂಪು ಮತ್ತು ಹೈಡ್ರೇಶನ್ ಬೇಕಾದರೆ ಮಜ್ಜಿಗೆ ಉತ್ತಮ ಆಯ್ಕೆ. ಲಸ್ಸಿ ಆರೋಗ್ಯಕರವಾದರೂ, ಹೀಟ್‌ವೇವ್ ಸಮಯದಲ್ಲಿ ಮಜ್ಜಿಗೆ ಹೆಚ್ಚು ಉಪಯುಕ್ತ.

ಬೇಸುಗೆ ಮತ್ತು ಡಿಹೈಡ್ರಾಷನ್  :

ಬೇಸಿಗೆ (Summer) ಸಮಯದಲ್ಲಿ ಉಷ್ಣಾಂಶ ಹೆಚ್ಚಾದಂತೆ ದೇಹದಿಂದ ಬೆವರು (Sweating) ಮೂಲಕ ಹೆಚ್ಚಿನ ನೀರು ಹೊರಹೋಗುತ್ತದೆ. ಇದರಿಂದ ದೇಹದಲ್ಲಿ ದ್ರವಾಂಶ ಕಡಿಮೆಯಾಗಿದ್ದು ಡಿಹೈಡ್ರಾಷನ್ (Dehydration) ಉಂಟಾಗುತ್ತದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ

ಡಿಹೈಡ್ರೆಷನ್‌ ಆಗಿದರೆ ತಲೆಸುತ್ತು, ದೌರ್ಬಲ್ಯ, ಬಾಯಾರಿಕೆ ಹಾಗೂ ದಣಿವು (Fatigue) ಕಾಣಿಸಿಕೊಳ್ಳಬಹುದು. ತೀವ್ರ ಸ್ಥಿತಿಯಲ್ಲಿ ದೇಹದ ತಾಪಮಾನ ನಿಯಂತ್ರಣ ಕೂಡ ಕಷ್ಟವಾಗಬಹುದು.

ಇದನ್ನು ತಡೆಯಲು ದಿನಪೂರ್ತಿ ಸಾಕಷ್ಟು ನೀರು (Water), ಮಜ್ಜಿಗೆ, ತೆಂಗಿನಕಾಯಿ ನೀರು (Coconut Water) ಇತ್ಯಾದಿ ದ್ರವಗಳನ್ನು ಸೇವಿಸುವುದು ಮುಖ್ಯ. ಜೊತೆಗೆ ನೇರ ಬಿಸಿಲಿನಲ್ಲಿ ಹೆಚ್ಚು ಕಾಲ ಇರದೆ, ಹಗುರವಾದ ಆಹಾರ ಸೇವಿಸುವುದೂ ಒಳಿತು.


Disclaimer: ಈ ಲೇಖನವು (ಮಜ್ಜಿಗೆ ಮತ್ತು ಲಸ್ಸಿ) ಸಾಮಾನ್ಯ ಆರೋಗ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ವೈಯಕ್ತಿಕ ಆರೋಗ್ಯ ಸಮಸ್ಯೆಗಳಿಗಾಗಿ ವೈದ್ಯರ ಸಲಹೆ ಪಡೆಯುವುದು ಒಳಿತು.

10ನೇ ಪಾಸ್‌ಗೆ ಭರ್ಜರಿ ಅವಕಾಶ: CRPF ನಲ್ಲಿ 9,195 ಹುದ್ದೆಗಳ ನೇಮಕಾತಿ.

0

ಜನಸ್ಪಂದನ ನ್ಯೂಸ್‌, ನೌಕರಿ : ಭಾರತ ಸರ್ಕಾರದ ಪ್ರತಿಷ್ಠಿತ ಭದ್ರತಾ ಪಡೆ ಸೆಂಟ್ರಲ್ ರಿಸೆರ್ವೆ ಪೊಲೀಸ್ ಫೋರ್ಸ್ (Central Reserve Police Force – CRPF) 2026ನೇ ಸಾಲಿನ ಭರ್ಜರಿ ನೇಮಕಾತಿ (Recruitment) ಅಧಿಸೂಚನೆ ಪ್ರಕಟಿಸಿದೆ. ಕಾನ್‌ಸ್ಟೆಬಲ್ (Technical & Tradesman) ವಿಭಾಗದಲ್ಲಿ ಒಟ್ಟು 9,195 ಹುದ್ದೆಗಳ ಭರ್ತಿ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಇದು ದೊಡ್ಡ ಅವಕಾಶವಾಗಿದೆ.

ಈ ನೇಮಕಾತಿಯಲ್ಲಿ ಡ್ರೈವರ್, ಕುಕ್, ಗಾರ್ಡನರ್, ವಾಶರ್‌ಮನ್, ಫಿಟ್ಟರ್, ಟೈಲರ್, ಪೇಂಟರ್, ಕಾರ್ಪೆಂಟರ್ ಸೇರಿದಂತೆ ಹಲವು ಟ್ರೇಡ್‌ಗಳ ಹುದ್ದೆಗಳಿವೆ. ಜೊತೆಗೆ ಪಯೋನಿಯರ್ ವಿಭಾಗದಲ್ಲಿ ಎಲೆಕ್ಟ್ರಿಷಿಯನ್, ಮೋಟಾರ್ ಮೆಕಾನಿಕ್ ಮತ್ತು ಪ್ಲಂಬರ್ ಹುದ್ದೆಗಳೂ ಸೇರಿವೆ.

ಅರ್ಹತೆ ಮತ್ತು ವಯೋಮಿತಿ :

  • ಅಭ್ಯರ್ಥಿಗಳು SSLC (10th Pass) ಜೊತೆಗೆ ಸಂಬಂಧಿತ ಟ್ರೇಡ್ ಪ್ರಮಾಣಪತ್ರ ಅಥವಾ ITI ಹೊಂದಿರಬೇಕು.
  • ಸಾಮಾನ್ಯವಾಗಿ 18 ರಿಂದ 23 ವರ್ಷ ವಯೋಮಿತಿ ಅನ್ವಯವಾಗುತ್ತದೆ.
  • ಡ್ರೈವರ್ ಹುದ್ದೆಗೆ 21 ರಿಂದ 27 ವರ್ಷ ವಯೋಮಿತಿ ನಿಗದಿಯಾಗಿದೆ.
  • SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ (Relaxation) ಇದೆ.

ಇದನ್ನು ಓದಿ : ಅವಳಿ ಸಹೋದರಿಯರು: ತಂದೆ ಬೇರೆ ಬೇರೆ; 49 ವರ್ಷಗಳ ಬಳಿಕ ಬೆರಗುಗೊಳಿಸಿದ DNA ಸತ್ಯ.

ಅರ್ಜಿ ಶುಲ್ಕ ಮತ್ತು ದಿನಾಂಕ :

  • ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕ ನಿಗದಿಯಾಗಿದೆ.
  • SC/ST ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
  • ಆನ್‌ಲೈನ್ ಅರ್ಜಿ ಪ್ರಕ್ರಿಯೆ ಏಪ್ರಿಲ್ 20ರಿಂದ ಆರಂಭವಾಗಿದ್ದು, ಮೇ 19 ಕೊನೆಯ ದಿನವಾಗಿದೆ.

ಆಯ್ಕೆ ಪ್ರಕ್ರಿಯೆ :

ಈ ನೇಮಕಾತಿಯಲ್ಲಿ ಐದು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆ ಇದೆ:

  • * PET/PST (Physical Test)
  • * CBT (Computer Based Test)
  • * ಟ್ರೇಡ್/ಸ್ಕಿಲ್ ಟೆಸ್ಟ್
  • * ದಾಖಲೆ ಪರಿಶೀಲನೆ (Document Verification)
  • * ವೈದ್ಯಕೀಯ ಪರೀಕ್ಷೆ (Medical Test)

ಈ ಸುದ್ದಿನೂ ಓದಿ : ಬೇಸಿಗೆಯಲ್ಲಿ ಕಬ್ಬಿನ ರಸ: ಆರೋಗ್ಯ ಲಾಭಗಳು, ಜೀರ್ಣಕ್ರಿಯೆ ಸುಧಾರಣೆ ಹಾಗೂ ಯಾರು ಸೇವಿಸಬಾರದು?

CBT ಪರೀಕ್ಷೆಯಲ್ಲಿ 100 ಪ್ರಶ್ನೆಗಳು ಇದ್ದು, ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ (Negative Marking) ಇರುತ್ತದೆ.

ಸಂಬಳ ಮತ್ತು ಸೌಲಭ್ಯಗಳು :

ಆಯ್ಕೆಯಾದ ಅಭ್ಯರ್ಥಿಗಳಿಗೆ ₹21,700 ರಿಂದ ₹69,100 ವರೆಗೆ ವೇತನ (Salary) ನೀಡಲಾಗುತ್ತದೆ. ಜೊತೆಗೆ ಭತ್ಯೆಗಳು (Allowances), PF, ಗ್ರಾಚ್ಯುಟಿ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ CRPF Recruitment Portal ಅನ್ನು ಪರಿಶೀಲಿಸಬಹುದು.

Central Reserve Police Force (CRPF) :

  • ಸೆಂಟ್ರಲ್ ರಿಸೆರ್ವೆ ಪೊಲೀಸ್ ಫೋರ್ಸ್  (Central Reserve Police Force – CRPF) ಭಾರತದಲ್ಲಿನ ಅತಿದೊಡ್ಡ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಂದಾಗಿದೆ.
  • ಇದು 1939ರಲ್ಲಿ ಸ್ಥಾಪನೆಯಾಗಿ, ನಂತರ ಕೇಂದ್ರ ಗೃಹ ಸಚಿವಾಲಯದ (Ministry of Home Affairs) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • CRPF ದೇಶದ ಒಳಾಂಗಣ ಭದ್ರತೆ (Internal Security) ಕಾಪಾಡುವುದು, ಅಶಾಂತಿ ನಿಯಂತ್ರಣ, ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ

  • ಚುನಾವಣೆಗಳ ವೇಳೆ ಶಾಂತಿ ಕಾಪಾಡುವುದು ಮತ್ತು ನಕ್ಸಲ್‌ ಪ್ರಭಾವಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವುದೂ ಇದರ ಜವಾಬ್ದಾರಿಯಾಗಿದೆ.
  • ಈ ಪಡೆ ದೇಶದ ವಿವಿಧ ಭಾಗಗಳಲ್ಲಿ ನಿಯೋಜನೆಗೊಂಡಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮಹತ್ವದ ಸೇವೆ ಸಲ್ಲಿಸುತ್ತಿದೆ.

Disclaimer: ಈ ಮಾಹಿತಿ ಅಧಿಕೃತ ಅಧಿಸೂಚನೆ ಆಧಾರಿತವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಒಳಿತು.