Home Blog

ಡ್ರಾಮಾ ಮಾಡಿದ್ರೆ ಹೀಗೆ ಮಾಡಬೇಕು! ಆಹಾರಕ್ಕಾಗಿ ಎರಡು ಕಾಲು ಇಲ್ಲದಂತೆ ನಟಿಸಿದ ನಾಯಿಯ ವಿಡಿಯೋ ವೈರಲ್.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾನ್ಯವಾಗಿ ಮನುಷ್ಯರು ತಮ್ಮ ಬುದ್ಧಿವಂತಿಕೆಯಿಂದ ಇತರರನ್ನು ಮರುಳು ಮಾಡುವುದನ್ನು ನಾವು ಕೇಳಿರುತ್ತೇವೆ. ಆದರೆ ಕೆಲವೊಮ್ಮೆ ಪ್ರಾಣಿಗಳ ವರ್ತನೆಯೂ ಅಚ್ಚರಿ ಹುಟ್ಟಿಸುವಂತಿರುತ್ತದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ಹಸಿವಿನಿಂದ ಬಳಲುತ್ತಿದ್ದ ಶ್ವಾನ (ನಾಯಿ) ವೊಂದು ಆಹಾರ ಪಡೆಯಲು ಎರಡು ಕಾಲುಗಳು ಕೆಲಸ ಮಾಡದಂತೆ ನಟಿಸಿದ ಘಟನೆ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

ವಿಡಿಯೋವನ್ನು ನೋಡಿದ ಅನೇಕರು ಶ್ವಾನದನಟನೆ’ ಮತ್ತು ʼಚತುರತೆʼಯನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಹಸಿವು ಎಂಬುದು ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಎಂತಹ ಪ್ರಯತ್ನಕ್ಕೂ ಮುಂದಾಗುವಂತೆ ಮಾಡುತ್ತದೆ ಎಂಬುದನ್ನು ದೃಶ್ಯ ಮತ್ತೊಮ್ಮೆ ನೆನಪಿಸುತ್ತದೆ.

ಆಹಾರಕ್ಕಾಗಿ ಶ್ವಾನದ ವಿಭಿನ್ನ ಯುಕ್ತಿ :

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ರಸ್ತೆ ಬದಿಯ ಆಹಾರ ಸ್ಟಾಲ್ ಎದುರು ಶ್ವಾನ (Dog) ವೊಂದು ಬಂದು ಕುಳಿತುಕೊಳ್ಳುತ್ತದೆ. ವೇಳೆ ಅದು ತನ್ನ ಎರಡು ಹಿಂಬದಿ ಕಾಲುಗಳು ಕೆಲಸ ಮಾಡದಂತೆಯೇ ವರ್ತಿಸುತ್ತಿದ್ದು, ಅವನ್ನು ನೆಲದ ಮೇಲೆ ಎಳೆದುಕೊಂಡು ಹೋಗುತ್ತಿರುವಂತೆ ಕಾಣಿಸುತ್ತದೆ.

ಅದನ್ನು ಕಂಡ ಸ್ಟಾಲ್‌ನ ಮಾಲೀಕರು ಶ್ವಾನಕ್ಕೆ ದಯೆಯಿಂದ ಆಹಾರ ನೀಡುತ್ತಾರೆ. ಶ್ವಾನವು ಹಸಿವಿನಿಂದಿದ್ದಂತೆ ತಿನ್ನಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ.

ಹೊಟ್ಟೆ ತುಂಬಿದ ಬಳಿಕ ‘ಸಾಮಾನ್ಯ’ ನಡೆ :

ಆದರೆ ಆಹಾರ ಸಿಕ್ಕ ಕೆಲ ಕ್ಷಣಗಳ ಬಳಿಕ ಆಶ್ಚರ್ಯಕರ ದೃಶ್ಯ ಕಾಣಿಸುತ್ತದೆ. ಹೊಟ್ಟೆ ತುಂಬಿಸಿಕೊಂಡ ನಂತರ ಶ್ವಾನ ಯಾವುದೇ ಸಮಸ್ಯೆಯಿಲ್ಲದಂತೆ ತನ್ನ ನಾಲ್ಕು ಕಾಲುಗಳ ಮೇಲೆ ಸರಾಗವಾಗಿ ನಡೆದುಕೊಂಡು ಅಲ್ಲಿಂದ ತೆರಳುತ್ತದೆ.

ಇದನ್ನು ಕಂಡು ಅಲ್ಲಿ ಇದ್ದವರು ಕೆಲ ಕ್ಷಣ ಆಶ್ಚರ್ಯಗೊಂಡು ನಂತರ ಜೋರಾಗಿ ನಕ್ಕಿದ್ದಾರೆ. ಶ್ವಾನದ ಈ ‘ನಟನೆ’ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ.

ನೆಟ್ಟಿಗರ ಪ್ರತಿಕ್ರಿಯೆ :

ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಬಳಿಕ ಲಕ್ಷಾಂತರ ವೀಕ್ಷಣೆಗಳು ದೊರೆತಿವೆ. ಅನೇಕ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

  • ಕೆಲವರು ಶ್ವಾನ (ನಾಯಿ) ದ ಆಕ್ಟಿಂಗ್ ಮೆಚ್ಚಲೇಬೇಕು” ಎಂದು ಹೇಳಿದರೆ,
  • ಇನ್ನೂ ಕೆಲವರು ಒಂದು ಕ್ಷಣಕ್ಕೆ ನಿಜವಾಗಿಯೇ ಕಾಲುಗಳಿಗೆ ಏನೋ ಆಗಿದೆ ಎಂದು ಭಾವಿಸಿದ್ದೆ” ಎಂದು ಪ್ರತಿಕ್ರಿಯಿಸಿದ್ದಾರೆ.
  • ಮತ್ತೊಬ್ಬರು ಪ್ರಾಣಿಗಳೂ ಕೆಲವೊಮ್ಮೆ ಎಷ್ಟು ಬುದ್ಧಿವಂತರಾಗಿರಬಹುದು ಎಂಬುದಕ್ಕೆ ಇದು ಉದಾಹರಣೆ” ಎಂದು ಹೇಳಿದ್ದಾರೆ.

ಆಹಾರಕ್ಕಾಗಿ ಎರಡು ಕಾಲು ಇಲ್ಲದಂತೆ ನಟಿಸಿದ ನಾಯಿ ವಿಡಿಯೋ :

Courtesy : Sosial Media  

ಪ್ರಾಣಿಗಳ ಬುದ್ಧಿವಂತಿಕೆ ಬಗ್ಗೆ ಚರ್ಚೆ :

ಪ್ರಾಣಿಗಳು ತಮ್ಮ ಬದುಕಿಗಾಗಿ ಹಲವು ರೀತಿಯ ನೈಸರ್ಗಿಕ ಚಾತುರ್ಯಗಳನ್ನು ಬಳಸುತ್ತವೆ ಎಂಬುದನ್ನು ವಿಜ್ಞಾನಿಗಳು ಸಹ ಹೇಳುತ್ತಾರೆ. ವಿಶೇಷವಾಗಿ ಶ್ವಾನಗಳು ಮಾನವರ ವರ್ತನೆಗಳನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿವೆ.

ಇದನ್ನು ಓದಿ : ದೇಶಾದ್ಯಂತ ಹೊಸ ಬಾಡಿಗೆ ನಿಯಮ 2026 ಜಾರಿ: ಡಿಪಾಸಿಟ್ ಮಿತಿ, ಒಪ್ಪಂದ ಕಡ್ಡಾಯ – ಬಾಡಿಗೆ ಏರಿಕೆ ಬಗ್ಗೆ ಸಂಪೂರ್ಣ ಮಾಹಿತಿ.!

ವಿಡಿಯೋ ನಿಜಕ್ಕೂ ಶ್ವಾನ (ನಾಯಿ) ದ ನಟನೆ ಆಗಿರಬಹುದು ಅಥವಾ ಅದು ತಾತ್ಕಾಲಿಕವಾಗಿ ಬೇರೆ ರೀತಿಯಲ್ಲಿ ನಡೆದುಕೊಂಡಿರಬಹುದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಒಟ್ಟಿನಲ್ಲಿ, ಹಸಿವು ಎನ್ನುವುದು ಜೀವಿಗಳಿಗೆ ಎಷ್ಟು ಮಹತ್ವದ್ದೋ ಮತ್ತು ಬದುಕು ಉಳಿಸಿಕೊಳ್ಳಲು ಕೆಲವೊಮ್ಮೆ ಅಚ್ಚರಿಯ ರೀತಿಯ ವರ್ತನೆ ಕಾಣಿಸಬಹುದು ಎಂಬುದನ್ನು ವಿಡಿಯೋ ನೆನಪಿಸುತ್ತದೆ.


Disclaimer: ಸುದ್ದಿಯಲ್ಲಿ ಉಲ್ಲೇಖಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ವಿಡಿಯೋದಲ್ಲಿರುವ ಘಟನೆಗೆ ಸಂಬಂಧಿಸಿದ ಸಂಪೂರ್ಣ ಸತ್ಯಾಸತ್ಯತೆ ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಓದುಗರು ಇದನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬೇಕು.

ಸ್ಕೂಟಿಗೆ ಡಿಕ್ಕಿ ಹೊಡೆದು ಸರ ಕದ್ದ ಕಳ್ಳ; ಕೈಕೊಟ್ಟ ಬೈಕ್‌ – ಮುಂದೆನಾಯ್ತು ನೋಡಿ ವೈರಲ್ ವಿಡಿಯೋ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಸ್ತೆಗಳಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುವ ಘಟನೆಗಳು ಹಲವು ನಗರಗಳಲ್ಲಿ ಹೆಚ್ಚುತ್ತಿರುವುದು ಆತಂಕದ ವಿಚಾರವಾಗಿದೆ.

ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯನ್ನು ನೆರೆಮನೆಯ ಯುವಕನು ಧೈರ್ಯದಿಂದ ಬೆನ್ನಟ್ಟಿ ಹಿಡಿದಿರುವ ಘಟನೆ ಜನರಿಂದ ಮೆಚ್ಚುಗೆ ಪಡೆಯುತ್ತಿದೆ.

ಸ್ಕೂಟಿಗೆ ಡಿಕ್ಕಿ ಹೊಡೆದು ಕಳ್ಳತನ :

ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿಯೊಬ್ಬರು ತಮ್ಮ ಸ್ಕೂಟಿಯಲ್ಲಿ ರಸ್ತೆಯಲ್ಲಿ ಸಾಗುತ್ತಿರುವುದು ಕಾಣಿಸುತ್ತದೆ. ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಕಳ್ಳ, ಅಜಾಗರೂಕವಾಗಿ ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯನ್ನು ಕೆಳಗೆ ಬೀಳಿಸುತ್ತಾನೆ.

ಡಿಕ್ಕಿಯ ಪರಿಣಾಮವಾಗಿ ಸ್ಕೂಟಿ ಮತ್ತು ಬೈಕ್ ಎರಡೂ ರಸ್ತೆಗೆ ಉರುಳುತ್ತವೆ. ಆದರೆ ಕೆಲವೇ ಕ್ಷಣಗಳಲ್ಲಿ ಎದ್ದು ನಿಂತ ಕಳ್ಳ, ಕೆಳಗೆ ಬಿದ್ದಿದ್ದ ಯುವತಿಯ ಕುತ್ತಿಗೆಯಲ್ಲಿದ್ದ ಚೈನ್ ಅನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಾನೆ.

ಈ ಸುದ್ದಿನೂ ಓದಿ : ಪುರುಷರ ಆರೋಗ್ಯ ಎಚ್ಚರಿಕೆ: ಈ 7 ಲೈಂಗಿಕ ಸಮಸ್ಯೆಗಳು ಹೃದಯ ಕಾಯಿಲೆಯ ಮುನ್ಸೂಚನೆ?

ಯುವಕನ ಧೈರ್ಯಕ್ಕೆ ಮೆಚ್ಚುಗೆ :

ಘಟನೆಯ ಸಮಯದಲ್ಲಿ ಯುವತಿಯ ಕಿರುಚಾಟ ಕೇಳಿ ಸಮೀಪದ ಮನೆಯಿಂದ ಮಹಿಳೆ ಮತ್ತು ಯುವಕನೊಬ್ಬ ಹೊರಗೆ ಓಡಿ ಬರುತ್ತಾನೆ. ಪರಿಸ್ಥಿತಿ ಅರಿತ ತಕ್ಷಣವೇ ಯುವಕ ಕಳ್ಳನನ್ನು ಬೆನ್ನಟ್ಟಿ ಓಡುತ್ತಾನೆ.

ಕಳ್ಳನ ದುರುದೃಷ್ಟವೂ ಅಥವಾ ಯುವತಿಯ ಸುದೈವವೋ ಇದೇ ವೇಳೆ ಕಳ್ಳನ ಬೈಕ್‌ ಕೈ ಕೊಟ್ಟಿದೆ. ಹೀಗಾಗಿ ಕೆಲವೇ ಕ್ಷಣಗಳಲ್ಲಿ ಕಳ್ಳನ ಬೈಕ್ ಅನ್ನು ಅಡ್ಡಗಟ್ಟಿ ಸರ ಕದ್ದ ಕಳ್ಳನನ್ನು ನಿಲ್ಲಿಸಲು ಯುವಕ ಯಶಸ್ವಿಯಾಗುತ್ತಾನೆ.

ಬಳಿಕ ಸುತ್ತಮುತ್ತಲಿನ ನಿವಾಸಿಗಳು ಕೂಡ ಸ್ಥಳಕ್ಕೆ ಆಗಮಿಸಿ ಕಳ್ಳನನ್ನು ಹಿಡಿಯಲು ಸಹಕರಿಸುತ್ತಾರೆ. ಧೈರ್ಯ ಮತ್ತು ತಕ್ಷಣದ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವಕನಿಗೆ ಹಲವರು ಶಹಬ್ಬಾಶ್ ಹೇಳುತ್ತಿದ್ದಾರೆ.

ಸರ ಕದ್ದ ಕಳ್ಳನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ :

ಘಟನೆಗೆ ಸಂಬಂಧಿಸಿದ ವಿಡಿಯೋ ಈಗ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಹಲವರು ವಿಡಿಯೋವನ್ನು ಹಂಚಿಕೊಳ್ಳುತ್ತಾ, ಅಪರಾಧವನ್ನು ತಡೆಯಲು ನಾಗರಿಕರು ತೋರಿದ ಧೈರ್ಯವನ್ನು ಪ್ರಶಂಸಿಸುತ್ತಿದ್ದಾರೆ.

ಇದೇ ವೇಳೆ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಇಂತಹ ಘಟನೆಗಳನ್ನು ತಡೆಯಲು ಕಾನೂನು ವ್ಯವಸ್ಥೆಯ ಜೊತೆಗೆ ಸಾರ್ವಜನಿಕ ಜಾಗೃತಿಯೂ ಅಗತ್ಯವೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸ್ಕೂಟಿಗೆ ಡಿಕ್ಕಿ ಹೊಡೆದು ಸರ ಕದ್ದ ಕಳ್ಳನ ವೈರಲ್ ವಿಡಿಯೋ :

Courtesy : Sosial Media / Twitter.

ಸುರಕ್ಷತೆಗೆ ಎಚ್ಚರಿಕೆ ಅಗತ್ಯ :

ನಗರ ಪ್ರದೇಶಗಳಲ್ಲಿ ಸರಗಳ್ಳತನದಂತಹ ಅಪರಾಧಗಳು ಆಗಾಗ್ಗೆ ನಡೆಯುತ್ತಿರುವ ಹಿನ್ನೆಲೆ, ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆಯಿಂದಿರಬೇಕೆಂದು ಪೊಲೀಸರು ಕೂಡ ಸೂಚಿಸುತ್ತಿದ್ದಾರೆ.

ವಿಶೇಷವಾಗಿ ರಸ್ತೆಯಲ್ಲಿ ಸಂಚರಿಸುವಾಗ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಗಮನಿಸುವುದು ಮತ್ತು ಅಪರಿಚಿತ ವ್ಯಕ್ತಿಗಳ ಚಲನವಲನಗಳ ಬಗ್ಗೆ ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ.

ಇದನ್ನು ಓದಿ : ದೇಶಾದ್ಯಂತ ಹೊಸ ಬಾಡಿಗೆ ನಿಯಮ 2026 ಜಾರಿ: ಡಿಪಾಸಿಟ್ ಮಿತಿ, ಒಪ್ಪಂದ ಕಡ್ಡಾಯ – ಬಾಡಿಗೆ ಏರಿಕೆ ಬಗ್ಗೆ ಸಂಪೂರ್ಣ ಮಾಹಿತಿ.!

ವೈರಲ್ ವಿಡಿಯೋ ಒಂದು ಕಡೆ ಅಪರಾಧದ ಭೀತಿ ತೋರಿಸಿದರೆ, ಮತ್ತೊಂದೆಡೆ ಸಾಮಾನ್ಯ ನಾಗರಿಕರ ಧೈರ್ಯ ಮತ್ತು ತಕ್ಷಣದ ಪ್ರತಿಕ್ರಿಯೆ ಹೇಗೆ ಅಪರಾಧಿಯನ್ನು ಹಿಡಿಯಲು ಸಹಾಯ ಮಾಡಬಹುದು ಎಂಬುದಕ್ಕೂ ಉದಾಹರಣೆಯಾಗಿದೆ.


Disclaimer: ಸುದ್ದಿಯಲ್ಲಿ (ಸರ ಕದ್ದ ಕಳ್ಳ) ಉಲ್ಲೇಖಿಸಿರುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಲಭ್ಯವಿರುವ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಅಥವಾ ತನಿಖೆಯ ವಿವರಗಳು ನಂತರ ಬದಲಾಗುವ ಸಾಧ್ಯತೆ ಇದೆ.

ಪುರುಷರ ಆರೋಗ್ಯ ಎಚ್ಚರಿಕೆ: ಈ 7 ಲೈಂಗಿಕ ಸಮಸ್ಯೆಗಳು ಹೃದಯ ಕಾಯಿಲೆಯ ಮುನ್ಸೂಚನೆ?

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ವೇಗದ ಜೀವನಶೈಲಿ, ಕೆಲಸದ ಒತ್ತಡ, ಅಸ್ವಸ್ಥ ಆಹಾರ ಪದ್ಧತಿ ಹಾಗೂ ಶಾರೀರಿಕ ಚಟುವಟಿಕೆಗಳ ಕೊರತೆ – ಇವೆಲ್ಲವೂ ಪುರುಷರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಬಹುಶಃ ಅನೇಕ ಪುರುಷರು ತಮ್ಮನ್ನು ದೈಹಿಕವಾಗಿ ಸದೃಢರು ಎಂದು ಭಾವಿಸಿದರೂ, ನಿಜವಾಗಿ ಹಲವು ಆರೋಗ್ಯ ಸಮಸ್ಯೆಗಳು ನಿಧಾನವಾಗಿ ಅವರನ್ನು ಕಾಡುತ್ತಿವೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಿದ್ದಾರೆ.

ಪ್ರತಿ ವರ್ಷ ಜೂನ್ ತಿಂಗಳನ್ನು ಜಾಗತಿಕ ಮಟ್ಟದಲ್ಲಿ ಪುರುಷರ ಆರೋಗ್ಯ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ. ಸಮಯದಲ್ಲಿ ಪುರುಷರು ತಮ್ಮ ದೈಹಿಕ ಹಾಗೂ ಲೈಂಗಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಿದ್ದಾರೆ.

ಪುರುಷರು ವೈದ್ಯರನ್ನು ಸಂಪರ್ಕಿಸುವ ಪ್ರಮಾಣ ಕಡಿಮೆ :

ಆರೋಗ್ಯ ಅಧ್ಯಯನಗಳ ಪ್ರಕಾರ ಭಾರತದಲ್ಲಿ ಪುರುಷರ ಸರಾಸರಿ ಆಯುಷ್ಯ ಮಹಿಳೆಯರಿಗಿಂತ ಸುಮಾರು 3 ರಿಂದ 5 ವರ್ಷಗಳಷ್ಟು ಕಡಿಮೆ ಎನ್ನಲಾಗಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ, ಅನೇಕ ಪುರುಷರು ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗಮನಿಸದೆ ನಿರ್ಲಕ್ಷ್ಯ ಮಾಡುವುದು. ಕೆಲ ವರದಿಗಳ ಪ್ರಕಾರ ಕೇವಲ 12% ಪುರುಷರು ಮಾತ್ರ ನಿಯಮಿತವಾಗಿ ವೈದ್ಯರನ್ನು ಸಂಪರ್ಕಿಸುತ್ತಾರೆ.

ವಿಶೇಷವಾಗಿ ಆರೋಗ್ಯ ಸಮಸ್ಯೆಗಳ (ಲೈಂಗಿಕ ಸಮಸ್ಯೆಗಳು) ವಿಷಯದಲ್ಲಿ ಮಾತನಾಡಲು ಮುಜುಗರಪಡುವುದು ಸಾಮಾನ್ಯವಾಗಿದೆ. ಕಾರಣದಿಂದ ಅನೇಕರು ಸಮಸ್ಯೆಯನ್ನು ತಡವಾಗಿ ಗಮನಿಸಿ ನಂತರ ಗಂಭೀರ ಸ್ಥಿತಿಗೆ ತಲುಪುತ್ತಾರೆ.

ಲೈಂಗಿಕ ಸಮಸ್ಯೆಗಳು, ಹೃದಯ ಕಾಯಿಲೆಯ ಸೂಚನೆಯಾಗಬಹುದು :

ವೈದ್ಯಕೀಯ ತಜ್ಞರ ಪ್ರಕಾರ ಪುರುಷರಲ್ಲಿ ಕಾಣಿಸಿಕೊಳ್ಳುವ ಕೆಲವು ಲೈಂಗಿಕ ಸಮಸ್ಯೆಗಳು (sexual-problems) ಭವಿಷ್ಯದಲ್ಲಿ ಉಂಟಾಗುವ ಹೃದಯ ಸಂಬಂಧಿ ಕಾಯಿಲೆಗಳ ಮುನ್ಸೂಚನೆಯಾಗಿರಬಹುದು.

ಉದಾಹರಣೆಗೆ ಶಿಶ್ನದ ಬಿಗಿತದ ಕೊರತೆ (Erectile Dysfunction) ಎಂಬ ಸಮಸ್ಯೆ ಕಂಡುಬಂದರೆ, ಮುಂದಿನ 3 ರಿಂದ 5 ವರ್ಷಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದಾಗಿ ಹಲವು ವೈದ್ಯಕೀಯ ಅಧ್ಯಯನಗಳು ಸೂಚಿಸುತ್ತವೆ.

ಇದಕ್ಕೆ ಕಾರಣ ರಕ್ತನಾಳಗಳ ರಚನೆ. ಸಾಮಾನ್ಯವಾಗಿ ಹೃದಯದ ರಕ್ತನಾಳಗಳು ಸುಮಾರು 4 ಮಿಮೀ ಅಗಲವಾಗಿದ್ದರೆ, ಶಿಶ್ನದ ರಕ್ತನಾಳಗಳು ಸುಮಾರು 2 ಮಿಮೀ ಮಾತ್ರ ಇರುತ್ತವೆ. ಆದ್ದರಿಂದ ರಕ್ತ ಸಂಚಾರದಲ್ಲಿ ಅಡಚಣೆ ಉಂಟಾದಾಗ ಮೊದಲ ಪರಿಣಾಮವು ಅಲ್ಲಿಯೇ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಈ ಸುದ್ದಿನೂ ಓದಿ : ದೇಶಾದ್ಯಂತ ಹೊಸ ಬಾಡಿಗೆ ನಿಯಮ 2026 ಜಾರಿ: ಡಿಪಾಸಿಟ್ ಮಿತಿ, ಒಪ್ಪಂದ ಕಡ್ಡಾಯ – ಬಾಡಿಗೆ ಏರಿಕೆ ಬಗ್ಗೆ ಸಂಪೂರ್ಣ ಮಾಹಿತಿ.!

ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರಮುಖ ಆರೋಗ್ಯ ಸಮಸ್ಯೆಗಳು :

ಪುರುಷರು ಸಾಮಾನ್ಯವಾಗಿ ಎದುರಿಸುವ ಕೆಲವು ಪ್ರಮುಖ ಆರೋಗ್ಯ ಸಮಸ್ಯೆಗಳು (ಲೈಂಗಿಕ ಸಮಸ್ಯೆಗಳು) ಇವು:

1. ಪುರುಷ ಬಂಜೆತನ :

ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುವುದರಿಂದ ಅಥವಾ ಅವುಗಳ ಗುಣಮಟ್ಟ ಕಡಿಮೆಯಾಗುವುದರಿಂದ ಸಂತಾನೋತ್ಪತ್ತಿಯಲ್ಲಿ ತೊಂದರೆ ಉಂಟಾಗಬಹುದು.

2. ಶೀಘ್ರ ಸ್ಖಲನ :

ಲೈಂಗಿಕ ಕ್ರಿಯೆಯ ವೇಳೆ ನಿರೀಕ್ಷಿತ ಸಮಯಕ್ಕಿಂತ ತುಂಬಾ ಬೇಗ ಸ್ಖಲನವಾಗುವುದು.

3. ಶಿಶ್ನದ ಬಿಗಿತದ ಕೊರತೆ :

ಲೈಂಗಿಕ ಕ್ರಿಯೆಗೆ ಅಗತ್ಯವಾದ ಬಿಗಿತ ಸರಿಯಾಗಿ ಉಂಟಾಗದಿರುವುದು.

4. ಶಿಶ್ನದ ವಕ್ರತೆ :

ಕೆಲವರಲ್ಲಿ ಶಿಶ್ನವು ಅತಿಯಾಗಿ ಬಾಗಿರುವುದು ಕಂಡುಬರುತ್ತದೆ. ಇದನ್ನು ವೈದ್ಯಕೀಯವಾಗಿ ಪೆಯ್ರೋನೀಸ್ ರೋಗ ಎಂದು ಕರೆಯಲಾಗುತ್ತದೆ.

5. ಟೆಸ್ಟೋಸ್ಟೆರಾನ್ ಹಾರ್ಮೋನ್ ಕೊರತೆ :

ಪುರುಷರಲ್ಲಿ ಮುಖ್ಯವಾದ ಹಾರ್ಮೋನ್ ಆಗಿರುವ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುವುದರಿಂದ ಶಕ್ತಿ, ಲೈಂಗಿಕ ಆಸಕ್ತಿ ಮತ್ತು ದೇಹದ ಸಾಮರ್ಥ್ಯ ಕಡಿಮೆಯಾಗಬಹುದು.

6. ಪ್ರೊಸ್ಟೇಟ್ ಗ್ರಂಥಿಯ ಸಮಸ್ಯೆಗಳು :

ವಯಸ್ಸು ಹೆಚ್ಚಾದಂತೆ ಪ್ರೊಸ್ಟೇಟ್ ಗ್ರಂಥಿಯ ಗಾತ್ರ ಹೆಚ್ಚಾಗಿ ಮೂತ್ರ ವಿಸರ್ಜನೆಗೆ ತೊಂದರೆ ಉಂಟಾಗಬಹುದು.

7. ಕ್ಯಾನ್ಸರ್ ಅಪಾಯ :

ಕೆಲ ಪುರುಷರಲ್ಲಿ ವೃಷಣ ಕ್ಯಾನ್ಸರ್ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಇದರ ಜೊತೆಗೆ ವಯಸ್ಸು ಹೆಚ್ಚಾಗುತ್ತಿದ್ದಂತೆ ಪುರುಷರಲ್ಲಿ ಮೂಳೆ ಸವಕಳಿ (Osteoporosis) ಸಮಸ್ಯೆಯೂ ಕಂಡುಬರುವ ಸಾಧ್ಯತೆ ಇದೆ.

ಆರೋಗ್ಯಕ್ಕೆ ಅಪಾಯಕಾರಿಯಾದ ಅಭ್ಯಾಸಗಳು :

ಕೆಲವು ಜೀವನಶೈಲಿ ಅಭ್ಯಾಸಗಳು ಪುರುಷರ (ಲೈಂಗಿಕ ಸಮಸ್ಯೆಗಳು) ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಉದಾಹರಣೆಗೆ:

  • ಧೂಮಪಾನ ಮತ್ತು ಮದ್ಯಪಾನ.
  • ಮಾದಕ ವಸ್ತುಗಳ ವ್ಯಸನ.
  • ಅತಿಯಾದ ದೇಹದ ತೂಕ.
  • ಹೊಟ್ಟೆಯ ಸುತ್ತ ಹೆಚ್ಚಾದ ಕೊಬ್ಬು.

ತಜ್ಞರ ಪ್ರಕಾರ ಸೊಂಟದ ಸುತ್ತಳತೆ 90 ಸೆಂ.ಮೀ ಗಿಂತ ಹೆಚ್ಚು ಇದ್ದರೆ ಆರೋಗ್ಯ ಅಪಾಯಗಳು ಹೆಚ್ಚಾಗುವ ಸಾಧ್ಯತೆ ಇದೆ.

ಆರೋಗ್ಯವಾಗಿರಲು ತಜ್ಞರ ಸಲಹೆಗಳು :

ವೈದ್ಯರನ್ನು ಸಂಪರ್ಕಿಸುವುದು :

ಸ್ತ್ರೀಯರ ಆರೋಗ್ಯಕ್ಕೆ ಗೈನಕಾಲಜಿಸ್ಟ್ ಇದ್ದಂತೆ, ಪುರುಷರ ಲೈಂಗಿಕ ಆರೋಗ್ಯ ಸಮಸ್ಯೆಗಳಿಗಾಗಿ ಆಂಡ್ರಾಲಜಿಸ್ಟ್ (Andrologist) ಎಂಬ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ನಿಯಮಿತ ವ್ಯಾಯಾಮ :

ವಾರಕ್ಕೆ ಕನಿಷ್ಠ 150 ನಿಮಿಷಗಳಷ್ಟು ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಬಹಳ ಉಪಯುಕ್ತ. ಓಟ, ನಡಿಗೆ, ಸೈಕ್ಲಿಂಗ್ ಅಥವಾ ಯೋಗ ಮಾಡುವುದರಿಂದ ದೇಹದ ಸಾಮರ್ಥ್ಯ ಹೆಚ್ಚುತ್ತದೆ.

ಸಮತೋಲನ ಆಹಾರ :

ಹಣ್ಣುಗಳು, ತರಕಾರಿಗಳು, ಧಾನ್ಯಗಳು ಹಾಗೂ ನಾರುಯುಕ್ತ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಹೆಚ್ಚು ಸಕ್ಕರೆ, ಉಪ್ಪು ಮತ್ತು ಸಂಸ್ಕರಿಸಿದ ಆಹಾರವನ್ನು ಕಡಿಮೆ ಮಾಡುವುದು ಉತ್ತಮ.

ಸಮರ್ಪಕ ನಿದ್ರೆ :

ಪ್ರತಿ ದಿನ ಕನಿಷ್ಠ 7 ಗಂಟೆಗಳಷ್ಟು ನಿದ್ರೆ ಅಗತ್ಯ. ಸರಿಯಾದ ನಿದ್ರೆ ದೇಹದ ಹಾರ್ಮೋನ್ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ.

ಸೂರ್ಯನ ಬೆಳಕು :

ಮೂಳೆಗಳ ಬಲವರ್ಧನೆಗೆ ಮತ್ತು ವಿಟಮಿನ್ ಡಿ ದೊರಕಲು ನಿಯಮಿತವಾಗಿ ಸೂರ್ಯನ ಬೆಳಕಿಗೆ ಮೈಯೊಡ್ಡುವುದು ಮುಖ್ಯ.

ಮುಜುಗರ ಬಿಟ್ಟು ಆರೋಗ್ಯದ ಬಗ್ಗೆ ಗಮನ ಕೊಡಿ :

ಆರೋಗ್ಯ ತಜ್ಞರ ಪ್ರಕಾರ, ಯಾವುದೇ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಅದು ಬರುವ ಮುನ್ನವೇ ತಡೆಗಟ್ಟುವುದು ಉತ್ತಮ.

ಇದನ್ನು ಓದಿ : ನೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತದೆ? ತಜ್ಞರ ಎಚ್ಚರಿಕೆ ಏನು?

ಲೈಂಗಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಜುಗರಪಟ್ಟು ವೈದ್ಯರನ್ನು ಸಂಪರ್ಕಿಸದೆ ಇರುವುದರಿಂದ ಸಮಸ್ಯೆಗಳು ಗಂಭೀರವಾಗುವ ಸಾಧ್ಯತೆ ಇದೆ. ಆದ್ದರಿಂದ ಪುರುಷರು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆದು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ.


Disclaimer: ಈ ಲೈಂಗಿಕ ಸಮಸ್ಯೆಗಳು ಎಂಬ ಲೇಖನ ಮಾಹಿತಿ ಮತ್ತು ಆರೋಗ್ಯ ಜಾಗೃತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ವೈದ್ಯರು ಅಥವಾ ತಜ್ಞರ ಸಲಹೆ ಪಡೆಯುವುದು ಅಗತ್ಯ.

“ಭಯ್ಯಾ ಪ್ಲೀಸ್ ಬಿಟ್ಟುಬಿಡಿ” ಎಂದು ಯುವತಿ ಬೇಡಿದರೂ ಕಿರುಕುಳ ನೀಡಿದ ಪುಂಡರು; ವಿಡಿಯೋ ವೈರಲ್.!

0

ಜನಸ್ಪಂದನ ನ್ಯೂಸ್‌, ಉ.ಪ್ರ : ಉತ್ತರ ಪ್ರದೇಶದ ದೇವೋರಿಯಾ ಜಿಲ್ಲೆಯಲ್ಲಿ ಯುವತಿಯೊಬ್ಬಳಿಗೆ ಕಿಡಿಗೇಡಿಗಳ ಗುಂಪು ಕಿರುಕುಳ ನೀಡುತ್ತಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಮದನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಯುವತಿಯ ದಾರಿಗೆ ಅಡ್ಡಿಯಾದ ಯುವಕರ ಗುಂಪು :

ಮಾಹಿತಿಯ ಪ್ರಕಾರ, ಸುಮಾರು ಆರುಕ್ಕೂ ಹೆಚ್ಚು ಯುವಕರ ಗುಂಪು ಯುವತಿಯ ದಾರಿಗೆ ಅಡ್ಡಿಯಾಗಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದೆ ಎನ್ನಲಾಗಿದೆ. ಆರೋಪಿಗಳಲ್ಲಿ ಕೆಲವರು ಯುವತಿಯ ಕೈ ಹಿಡಿದು ಎಳೆದಾಡಿದ್ದು, ಸಮೀಪದ ಹೊಲದ ಕಡೆಗೆ ಎಳೆದುಕೊಂಡು ಹೋಗಲು ಯತ್ನಿಸಿದರೆಂಬ ಆರೋಪ ಕೇಳಿಬಂದಿದೆ.

ಇದನ್ನು ಓದಿ : ದೇಶಾದ್ಯಂತ ಹೊಸ ಬಾಡಿಗೆ ನಿಯಮ 2026 ಜಾರಿ: ಡಿಪಾಸಿಟ್ ಮಿತಿ, ಒಪ್ಪಂದ ಕಡ್ಡಾಯ – ಬಾಡಿಗೆ ಏರಿಕೆ ಬಗ್ಗೆ ಸಂಪೂರ್ಣ ಮಾಹಿತಿ.!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಯುವತಿ ತನ್ನನ್ನು ಬಿಟ್ಟುಬಿಡುವಂತೆ ಬೇಡಿಕೊಳ್ಳುತ್ತಿರುವುದು ಕಾಣುತ್ತದೆ. ಆಕೆ ಪದೇ ಪದೇ “ಭಯ್ಯಾ ಪ್ಲೀಸ್ ಬಿಟ್ಟುಬಿಡಿ” ಎಂದು ಬೇಡುತ್ತ ದಾರಿ ಬಿಡುವಂತೆ ಮನವಿ ಮಾಡುತ್ತಿರುವುದು ದೃಶ್ಯಗಳಲ್ಲಿ ಗೋಚರಿಸುತ್ತದೆ.

ಮಾನಸಿಕ ಒತ್ತಡದಲ್ಲಿ ಕೂಗಾಡಿದ ಯುವತಿ :

ವಿಡಿಯೋದಲ್ಲಿ ಯುವಕರು ಯುವತಿಯನ್ನು ಸುತ್ತುವರಿದು, ಆಕೆ ಯಾರು ಮತ್ತು ಎಲ್ಲಿಗೆ ಹೋಗುತ್ತಿದ್ದಾಳೆ ಎಂಬ ಬಗ್ಗೆ ಪ್ರಶ್ನಿಸುತ್ತಾ ಕಿರುಕುಳ ನೀಡುತ್ತಿರುವುದು ಕಾಣುತ್ತದೆ. ಇದರಿಂದ ಯುವತಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಆಕ್ರೋಶದಿಂದ ಕೂಗಾಡುತ್ತಿರುವುದು ಕೂಡ ದೃಶ್ಯಗಳಲ್ಲಿ ಕಂಡುಬರುತ್ತದೆ.

ಪ್ರಕರಣ ದಾಖಲಿಸಿದ ಪೊಲೀಸರು :

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ದೇವೋರಿಯಾ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಮದನ್‌ಪುರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : ಪ್ರಿಯಕರ ಬಿಡುಗಡೆಗೆ ಮೊಬೈಲ್ ಟವರ್ ಏರಿದ ಯುವತಿ ; ಮುಂದೆನಾಯ್ತು ವಿಡಿಯೋ ನೋಡಿ.!

ಆದರೆ, ಈವರೆಗೆ ಆರೋಪಿಗಳ ಬಂಧನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದಾರೆ.

“ಭಯ್ಯಾ ಪ್ಲೀಸ್ ಬಿಟ್ಟುಬಿಡಿ” ಎಂದ ಯುವತಿ; ಕಿರುಕುಳ ನೀಡಿದ ಪುಂಡರು; ವಿಡಿಯೋ ವೈರಲ್.!

Courtesy : Sosial Media / Twitter (X)


Disclaimer: ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಲಭ್ಯವಿರುವ ವರದಿಗಳ ಆಧಾರದ ಮೇಲೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ತನಿಖೆ ಪೂರ್ಣಗೊಂಡ ನಂತರ ಹೆಚ್ಚಿನ ವಿವರಗಳು ಬದಲಾಗುವ ಸಾಧ್ಯತೆ ಇದೆ. ಓದುಗರು ಈ ಮಾಹಿತಿಯನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬೇಕು.

ಪವರ್ ಲೈನ್‌ಗೆ ಕಬ್ಬಿಣದ ಸ್ಟ್ಯಾಂಡ್ ತಗುಲಿ ಇಬ್ಬರು ಕಾರ್ಮಿಕರು ಸಾವು ; ವಿಡಿಯೋ ವೈರಲ್‌.!

0

ಜನಸ್ಪಂದನ ನ್ಯೂಸ್‌, ತೆಲಂಗಾಣ : ತೆಲಂಗಾಣದಲ್ಲಿ ನಡೆದ ದುರ್ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಎತ್ತರದ ಕಬ್ಬಿಣದ ಸ್ಟ್ಯಾಂಡ್ ಅನ್ನು ಸ್ಥಳಾಂತರಿಸುತ್ತಿದ್ದ ವೇಳೆ ಮೇಲಿನಿಂದ ಹಾದು ಹೋಗುತ್ತಿದ್ದ ವಿದ್ಯುತ್ ಪವರ್ ಲೈನ್‌ಗೆ ತಗುಲಿ, ವಿದ್ಯುತ್ ಶಾಕ್‌ನಿಂದ ಇಬ್ಬರು ಕಾರ್ಮಿಕರು ಸಾವು ಸಂಭವಿಸಿರುವ ಘಟನೆ ನಡೆದಿದೆ.

ಈ ಘಟನೆಗೆ ಸಂಬಂಧಿಸಿದ ಭಯಾನಕ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮದರಿಪೇಟೆಯಲ್ಲಿ ನಡೆದ ಘಟನೆ :

ಮಾಹಿತಿ ಪ್ರಕಾರ, ಈ ದುರ್ಘಟನೆ ತೆಲಂಗಾಣದ ಮದರಿಪೇಟೆ ಪ್ರದೇಶದಲ್ಲಿ ನಡೆದಿದೆ. ಅಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಸಮೀಪ ಮೂವರು ಕಾರ್ಮಿಕರು ಸೇರಿ ಎತ್ತರದ ಕಬ್ಬಿಣದ ಸ್ಟ್ಯಾಂಡ್ ಅನ್ನು ಸ್ಥಳಾಂತರಿಸುತ್ತಿದ್ದರು.

ಈ ವೇಳೆ ಅಜಾಗರೂಕತೆಯಿಂದ ಆ ಕಬ್ಬಿಣದ ಸ್ಟ್ಯಾಂಡ್ ಮೇಲಿನಿಂದ ಹಾದು ಹೋಗುತ್ತಿದ್ದ ಹೈ-ವೋಲ್ಟೇಜ್ ವಿದ್ಯುತ್ ಪವರ್ ಲೈನ್‌ಗೆ ತಗುಲಿದೆ. ಇದರಿಂದ ಕ್ಷಣಾರ್ಧದಲ್ಲಿ ವಿದ್ಯುತ್ ಶಾಕ್ ಉಂಟಾಗಿ ಮೂವರಿಗೂ ಭಾರೀ ಆಘಾತ ತಗುಲಿದೆ.

ಒಬ್ಬ ಕಾರ್ಮಿಕ ಬದುಕುಳಿದರೆ, ಇಬ್ಬರು ಸಾವು :

ಘಟನೆ ವೇಳೆ ಮೂವರಲ್ಲಿ ಒಬ್ಬ ಕಾರ್ಮಿಕ ತಕ್ಷಣವೇ ಕೈ ಬಿಟ್ಟ ಕಾರಣ ಜೀವಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಆದರೆ ವಿದ್ಯುತ್ ಶಾಕ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸ್ಥಳದಲ್ಲೇ ಉಳಿದ ಇಬ್ಬರು ಕಾರ್ಮಿಕರು ಸಾವು ಕಂಡಿದ್ದಾರೆ.

ವಿದ್ಯುತ್ ಶಾಕ್‌ನ ತೀವ್ರತೆಯಿಂದ ಇಬ್ಬರೂ ಕಾರ್ಮಿಕರು ಸುಟ್ಟು ಕರಕಲಾಗಿರುವುದು ವರದಿಯಾಗಿದೆ.

ರಕ್ಷಿಸಲು ಮಾಡಿದ ಪ್ರಯತ್ನ ವಿಫಲ :

ಘಟನೆ ಕಂಡ ಸ್ಥಳೀಯರು ಹಾಗೂ ಇತರ ಕಾರ್ಮಿಕರು ತಕ್ಷಣವೇ ಸಹಾಯ ಮಾಡಲು ಪ್ರಯತ್ನಿಸಿದರು. ಕೆಲವರು ಟಯರ್ ಮತ್ತು ಹಗ್ಗಗಳನ್ನು ಬಳಸಿಕೊಂಡು ಆ ಇಬ್ಬರನ್ನು ವಿದ್ಯುತ್ ಸಂಪರ್ಕದಿಂದ ದೂರಕ್ಕೆ ಎಳೆಯಲು ಯತ್ನಿಸಿದರೂ, ಆ ವೇಳೆಗೆ ಪರಿಸ್ಥಿತಿ ನಿಯಂತ್ರಣದ ಹೊರಗೆ ಹೋಗಿತ್ತು ಎಂದು ತಿಳಿದುಬಂದಿದೆ.

ಈ ಘಟನೆ ಕಾರ್ಮಿಕರ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆ ಎಬ್ಬಿಸಿದೆ. ಎತ್ತರದ ಲೋಹದ ವಸ್ತುಗಳನ್ನು ವಿದ್ಯುತ್ ಲೈನ್ ಸಮೀಪದಲ್ಲಿ ಸಾಗಿಸುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಎಷ್ಟು ಮಹತ್ವದ್ದೆಂಬುದನ್ನು ಈ ದುರ್ಘಟನೆ ಸ್ಪಷ್ಟಪಡಿಸಿದೆ.

ಪವರ್ ಲೈನ್‌ಗೆ ಕಬ್ಬಿಣದ ಸ್ಟ್ಯಾಂಡ್ ತಗುಲಿ ಇಬ್ಬರು ಕಾರ್ಮಿಕರು ಸಾವು ವಿಡಿಯೋ :

https://x.com/Deadlykalesh/status/2031585472661827935?ref_src=twsrc%5Etfw%7Ctwcamp%5Etweetembed%7Ctwterm%5E2031585472661827935%7Ctwgr%5Ee15bb343589de6eb7a2f8dad8d4cde2dca73b3d3%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಸುರಕ್ಷತಾ ಕ್ರಮಗಳ ಅಗತ್ಯ :

ವಿದ್ಯುತ್ ಲೈನ್ ಸಮೀಪದಲ್ಲಿ ಕೆಲಸ ಮಾಡುವಾಗ ಕಾರ್ಮಿಕರು ಮತ್ತು ಸಂಸ್ಥೆಗಳು ಸೂಕ್ತ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವೆಂದು ತಜ್ಞರು ಸೂಚಿಸುತ್ತಿದ್ದಾರೆ. ಅಲ್ಪ ಪ್ರಮಾಣದ ಅಜಾಗರೂಕತೆ ಕೂಡ ಜೀವಕ್ಕೆ ಅಪಾಯವಾಗಬಹುದು ಎಂಬುದಕ್ಕೆ ಈ ಘಟನೆ ದುಃಖಕರ ಉದಾಹರಣೆಯಾಗಿದೆ.

ಇದನ್ನು ಓದಿ : ಪ್ರಿಯಕರ ಬಿಡುಗಡೆಗೆ ಮೊಬೈಲ್ ಟವರ್ ಏರಿದ ಯುವತಿ ; ಮುಂದೆನಾಯ್ತು ವಿಡಿಯೋ ನೋಡಿ.!

ಈ ಭೀಕರ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಕಾರ್ಮಿಕರ ಸುರಕ್ಷತೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.


Disclaimer: ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ಘಟನೆಗೆ ಸಂಬಂಧಿಸಿದ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಆಧಾರದ ಮೇಲೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದ ಅಧಿಕೃತ ತನಿಖೆ ಮತ್ತು ಅಧಿಕಾರಿಗಳ ವರದಿ ಹೊರಬಂದ ನಂತರ ಹೆಚ್ಚಿನ ವಿವರಗಳು ಬದಲಾಗುವ ಸಾಧ್ಯತೆ ಇದೆ. ಓದುಗರು ಈ ಮಾಹಿತಿಯನ್ನು ಕೇವಲ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬೇಕು.

ದೇಶಾದ್ಯಂತ ಹೊಸ ಬಾಡಿಗೆ ನಿಯಮ 2026 ಜಾರಿ: ಡಿಪಾಸಿಟ್ ಮಿತಿ, ಒಪ್ಪಂದ ಕಡ್ಡಾಯ – ಬಾಡಿಗೆ ಏರಿಕೆ ಬಗ್ಗೆ ಸಂಪೂರ್ಣ ಮಾಹಿತಿ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಭಾರತದಲ್ಲಿ ಬಾಡಿಗೆ ಮನೆಗಳ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲು ಹಾಗೂ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮಾದರಿ ಬಾಡಿಗೆ ಕಾಯ್ದೆ (Model Tenancy Act) ಅಡಿಯಲ್ಲಿ 2026ರ ಹೊಸ ಬಾಡಿಗೆ ನಿಯಮಗಳನ್ನು ಸಿದ್ಧಪಡಿಸಲಾಗಿದ್ದು, ಈ ನಿಯಮಗಳು ದೇಶಾದ್ಯಂತ ಬಾಡಿಗೆ ವ್ಯವಸ್ಥೆಯನ್ನು ಹೆಚ್ಚು ನಿಯಂತ್ರಿತ ಮತ್ತು ನ್ಯಾಯಸಮ್ಮತಗೊಳಿಸುವ ಉದ್ದೇಶ ಹೊಂದಿವೆ.

ಈ ಹೊಸ ಬಾಡಿಗೆ ನಿಯಮದ ಮೂಲಕ ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ಸಂಬಂಧವನ್ನು ಸಮತೋಲನದಲ್ಲಿಡುವ ಜೊತೆಗೆ, ವಿಶೇಷವಾಗಿ ಸೆಕ್ಯೂರಿಟಿ ಡಿಪಾಸಿಟ್, ಬಾಡಿಗೆ ಒಪ್ಪಂದ, ಬಾಡಿಗೆ ಏರಿಕೆ, ಹಾಗೂ ವಿವಾದ ಪರಿಹಾರ ವ್ಯವಸ್ಥೆಗಳ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಈ ನಿಯಮಗಳು ಜಾರಿಯಾದರೆ ದೇಶದ ಲಕ್ಷಾಂತರ ಬಾಡಿಗೆದಾರರಿಗೆ ಆರ್ಥಿಕವಾಗಿ ಮತ್ತು ಕಾನೂನುಬದ್ಧವಾಗಿ ದೊಡ್ಡ ಮಟ್ಟದ ನೆರವು ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿನೂ ಓದಿ : ನೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತದೆ? ತಜ್ಞರ ಎಚ್ಚರಿಕೆ ಏನು?

ಸೆಕ್ಯೂರಿಟಿ ಡಿಪಾಸಿಟ್‌ಗೆ ಗರಿಷ್ಠ ಮಿತಿ :

ಬಹುತೇಕ ನಗರಗಳಲ್ಲಿ ಮನೆ ಬಾಡಿಗೆಗೆ ತೆಗೆದುಕೊಳ್ಳುವಾಗ ಮಾಲೀಕರು 6 ತಿಂಗಳು, 10 ತಿಂಗಳು ಅಥವಾ ಕೆಲವೆಡೆ ಒಂದು ವರ್ಷದ ಬಾಡಿಗೆಯಷ್ಟು ಮೊತ್ತವನ್ನು ಡಿಪಾಸಿಟ್ ಆಗಿ ಕೇಳುವುದು ಸಾಮಾನ್ಯವಾಗಿದೆ. ಇದು ಮಧ್ಯಮ ಮತ್ತು ಕಡಿಮೆ ಆದಾಯದ ಜನರಿಗೆ ದೊಡ್ಡ ಆರ್ಥಿಕ ಭಾರವಾಗಿತ್ತು.

ಹೊಸ ನಿಯಮಗಳ ಪ್ರಕಾರ, ಇಂತಹ ಹೆಚ್ಚಿನ ಮೊತ್ತದ ಡಿಪಾಸಿಟ್ ಪಡೆಯುವುದನ್ನು ನಿಯಂತ್ರಿಸಲಾಗಿದೆ.

  • ವಸತಿ ಮನೆಗಳಿಗೆ: ಗರಿಷ್ಠ 2 ತಿಂಗಳ ಬಾಡಿಗೆಯಷ್ಟೇ ಸೆಕ್ಯೂರಿಟಿ ಡಿಪಾಸಿಟ್ ಪಡೆಯಲು ಅವಕಾಶ.
  • ವಾಣಿಜ್ಯ ಬಳಕೆ (ಅಂಗಡಿ, ಕಚೇರಿ): ಗರಿಷ್ಠ 6 ತಿಂಗಳ ಬಾಡಿಗೆಯಷ್ಟೇ ಡಿಪಾಸಿಟ್ ಪಡೆಯಲು ಅವಕಾಶ.

ಈ ನಿಯಮದಿಂದ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ಯುವಕರು, ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಮಟ್ಟದ ಆರ್ಥಿಕ ಭಾರ ಕಡಿಮೆಯಾಗಲಿದೆ.

ಲಿಖಿತ ಬಾಡಿಗೆ ಒಪ್ಪಂದ ಕಡ್ಡಾಯ :

ಇದುವರೆಗೆ ಅನೇಕ ಕಡೆ ಬಾಡಿಗೆ ಮನೆಗಳನ್ನು ಬಾಯಿ ಮಾತಿನ ಒಪ್ಪಂದದ ಆಧಾರದ ಮೇಲೆ ನೀಡುವ ಪದ್ಧತಿ ಇತ್ತು. ಇದರಿಂದ ಬಳಿಕ ಮನೆ ಖಾಲಿ ಮಾಡಿಸುವುದು, ಬಾಡಿಗೆ ಹೆಚ್ಚಿಸುವುದು ಅಥವಾ ಡಿಪಾಸಿಟ್ ಹಿಂತಿರುಗಿಸುವಂತಹ ವಿಷಯಗಳಲ್ಲಿ ಸಾಕಷ್ಟು ವಿವಾದಗಳು ಎದುರಾಗುತ್ತಿದ್ದರು.

ಈ ಸಮಸ್ಯೆಗೆ ಪರಿಹಾರವಾಗಿ ಹೊಸ ನಿಯಮದಲ್ಲಿ ಲಿಖಿತ ಬಾಡಿಗೆ ಒಪ್ಪಂದವನ್ನು ಕಡ್ಡಾಯಗೊಳಿಸಲಾಗಿದೆ.

  • ಪ್ರತಿಯೊಂದು ಬಾಡಿಗೆ ವ್ಯವಹಾರಕ್ಕೂ ಲಿಖಿತ ರೆಂಟಲ್ ಅಗ್ರಿಮೆಂಟ್ ಇರಬೇಕು.
  • ಒಪ್ಪಂದ ಮಾಡಿಕೊಂಡ 60 ದಿನಗಳ ಒಳಗೆ ಸಂಬಂಧಿತ ಅಧಿಕಾರಿಗಳ ಬಳಿ ನೋಂದಣಿ ಮಾಡಿಸಬೇಕು.

ಇದರ ಮೂಲಕ ಬಾಡಿಗೆ ವ್ಯವಹಾರಗಳು ಕಾನೂನುಬದ್ಧವಾಗುವ ಜೊತೆಗೆ ಭವಿಷ್ಯದಲ್ಲಿ ವಿವಾದಗಳು ಕಡಿಮೆಯಾಗುವ ಸಾಧ್ಯತೆ ಇದೆ.

ಹೊಸ ಬಾಡಿಗೆ ನಿಯಮ ; ಬಾಡಿಗೆ ಏರಿಕೆಗೆ ನಿಯಂತ್ರಣ :

ಹಲವಾರು ನಗರಗಳಲ್ಲಿ ಮನೆ ಮಾಲೀಕರು ತಮ್ಮ ಇಚ್ಛೆಯಂತೆ ಬಾಡಿಗೆ ಹೆಚ್ಚಿಸುವ ಘಟನೆಗಳು ಸಾಮಾನ್ಯವಾಗಿದ್ದವು. ಇದರಿಂದ ಬಾಡಿಗೆದಾರರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತಿತ್ತು.

ಹೊಸ ನಿಯಮಗಳ ಪ್ರಕಾರ:

  • ವರ್ಷಕ್ಕೆ ಒಮ್ಮೆ ಮಾತ್ರ ಬಾಡಿಗೆ ಹೆಚ್ಚಿಸಲು ಅವಕಾಶ.
  • ಬಾಡಿಗೆ ಹೆಚ್ಚಿಸುವ ಮೊದಲು ಕನಿಷ್ಠ 90 ದಿನಗಳ ಮುಂಚಿತವಾಗಿ ಬಾಡಿಗೆದಾರರಿಗೆ ನೋಟಿಸ್ ನೀಡಬೇಕು.

ಈ ಹೊಸ ಬಾಡಿಗೆ ನಿಯಮ ಬಾಡಿಗೆದಾರರಿಗೆ ಮುಂಚಿತವಾಗಿ ಯೋಜನೆ ಮಾಡಿಕೊಳ್ಳಲು ಹಾಗೂ ಆರ್ಥಿಕ ನಿರ್ವಹಣೆ ಸುಲಭವಾಗಲಿದೆ.

ಬಾಡಿಗೆದಾರರ ಗೌಪ್ಯತೆ ಮತ್ತು ಹಕ್ಕುಗಳ ರಕ್ಷಣೆ :

ಹೊಸ ಕಾಯ್ದೆಯಲ್ಲಿ ಬಾಡಿಗೆದಾರರ ಹಕ್ಕುಗಳಿಗೂ ವಿಶೇಷ ಮಹತ್ವ ನೀಡಲಾಗಿದೆ.

  • ಸರಿಯಾದ ಕಾರಣವಿಲ್ಲದೆ ಬಾಡಿಗೆದಾರರನ್ನು ಮನೆಯಿಂದ ಹೊರಹಾಕಲು ಅವಕಾಶ ಇರುವುದಿಲ್ಲ.
  • ಮನೆ ಮಾಲೀಕರು ಬಾಡಿಗೆ ಮನೆಗೆ ಭೇಟಿ ನೀಡಬೇಕಾದರೆ ಕನಿಷ್ಠ 24 ಗಂಟೆಗಳ ಮೊದಲು ಮಾಹಿತಿ ನೀಡಬೇಕು.

ಇದರ ಮೂಲಕ ಬಾಡಿಗೆದಾರರ ಖಾಸಗಿತನ ಮತ್ತು ಗೌಪ್ಯತೆ ಕಾಪಾಡುವ ವ್ಯವಸ್ಥೆ ಮಾಡಲಾಗಿದೆ.

ವಿವಾದಗಳಿಗೆ ಪ್ರತ್ಯೇಕ ಬಾಡಿಗೆ ನ್ಯಾಯಾಲಯ :

ಬಾಡಿಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ಸಿವಿಲ್ ನ್ಯಾಯಾಲಯಗಳಿಗೆ ಹೋಗುತ್ತವೆ. ಆದರೆ ಅಲ್ಲಿ ಪ್ರಕರಣಗಳು ವರ್ಷಗಳ ಕಾಲ ಬಾಕಿ ಉಳಿಯುವ ಪರಿಸ್ಥಿತಿ ಇದೆ.

ಈ ಸಮಸ್ಯೆಯನ್ನು ನಿವಾರಿಸಲು ಹೊಸ ವ್ಯವಸ್ಥೆಯಲ್ಲಿ:

ಎಂಬ ಪ್ರತ್ಯೇಕ ಸಂಸ್ಥೆಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.

ಇವುಗಳ ಮೂಲಕ ಬಾಡಿಗೆಗೆ ಸಂಬಂಧಿಸಿದ ಪ್ರಕರಣಗಳನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹರಿಸುವ ವ್ಯವಸ್ಥೆ ರೂಪಿಸಲಾಗುತ್ತದೆ.

ರಾಜ್ಯಗಳಿಗೆ ಜಾರಿಗೆ ಅಧಿಕಾರ :

ಗಮನಿಸಬೇಕಾದ ಪ್ರಮುಖ ವಿಷಯವೆಂದರೆ, ಈ ಹೊಸ ಬಾಡಿಗೆ ನಿಯಮ ಕೇಂದ್ರ ಸರ್ಕಾರದ ಮಾದರಿ ಬಾಡಿಗೆ ಕಾಯ್ದೆ ಆಧಾರಿತವಾಗಿವೆ.

ಆದರೆ, ಭಾರತದ ಫೆಡರಲ್ ವ್ಯವಸ್ಥೆಯ ಪ್ರಕಾರ:

  • ಪ್ರತಿ ರಾಜ್ಯ ಸರ್ಕಾರವು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಈ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.
  • ನಂತರ ತಮ್ಮ ರಾಜ್ಯದಲ್ಲಿ ಅಧಿಕೃತವಾಗಿ ಜಾರಿಗೆ ತರಬಹುದು.

ಆದ್ದರಿಂದ, ರಾಜ್ಯದಿಂದ ರಾಜ್ಯಕ್ಕೆ ಕೆಲವು ನಿಯಮಗಳಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಬಹುದು.

ಇದನ್ನು ಓದಿ : ಪ್ರಿಯಕರ ಬಿಡುಗಡೆಗೆ ಮೊಬೈಲ್ ಟವರ್ ಏರಿದ ಯುವತಿ ; ಮುಂದೆನಾಯ್ತು ವಿಡಿಯೋ ನೋಡಿ.!

ಸಾಮಾನ್ಯ ಜನರಿಗೆ ಏನು ಲಾಭ?

ಈ ಹೊಸ ಬಾಡಿಗೆ ನಿಯಮ ಜಾರಿಯಾದರೆ ಬಾಡಿಗೆ ಮಾರುಕಟ್ಟೆಯಲ್ಲಿ ಹಲವು ಮಹತ್ವದ ಬದಲಾವಣೆಗಳು ಕಾಣಿಸಬಹುದು.

  • ಅತಿಯಾದ ಸೆಕ್ಯೂರಿಟಿ ಡಿಪಾಸಿಟ್ ಬೇಡಿಕೆ ಕಡಿಮೆಯಾಗುವುದು.
  • ಬಾಡಿಗೆ ವ್ಯವಹಾರಗಳಲ್ಲಿ ಪಾರದರ್ಶಕತೆ ಹೆಚ್ಚಾಗುವುದು.
  • ಬಾಡಿಗೆದಾರರ ಹಕ್ಕುಗಳಿಗೆ ಕಾನೂನು ರಕ್ಷಣೆ ದೊರಕುವುದು.
  • ವಿವಾದಗಳಿಗೆ ವೇಗವಾದ ಪರಿಹಾರ ವ್ಯವಸ್ಥೆ ಲಭ್ಯವಾಗುವುದು.

ಒಟ್ಟಿನಲ್ಲಿ, ದೇಶದಲ್ಲಿ ಬಾಡಿಗೆ ಮನೆಗಳ ವ್ಯವಸ್ಥೆಯನ್ನು ಹೆಚ್ಚು ನ್ಯಾಯಸಮ್ಮತ, ಪಾರದರ್ಶಕ ಹಾಗೂ ಸಮತೋಲನದ ವ್ಯವಸ್ಥೆಯಾಗಿ ರೂಪಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.


Disclaimer: ಈ ಲೇಖನ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ಬಾಡಿಗೆ ಸಂಬಂಧಿತ ನಿಯಮಗಳು ರಾಜ್ಯ ಸರ್ಕಾರಗಳ ಅನುಷ್ಠಾನಕ್ಕೆ ಅನುಗುಣವಾಗಿ ಬದಲಾಗಬಹುದು. ಅಧಿಕೃತ ಮಾಹಿತಿಿಗಾಗಿ ಸಂಬಂಧಿತ ಸರ್ಕಾರಿ ಅಧಿಸೂಚನೆಗಳನ್ನು ಪರಿಶೀಲಿಸುವುದು ಉತ್ತಮ.

ನೇರಳೆ ಹಣ್ಣು ತಿಂದ ತಕ್ಷಣ ನೀರು ಕುಡಿದರೆ ಏನಾಗುತ್ತದೆ? ತಜ್ಞರ ಎಚ್ಚರಿಕೆ ಏನು?

0

ಜನಸ್ಪಂದನ ನ್ಯೂಸ್‌ ಡೆಸ್ಕ್‌: ಮಧುಮೇಹದಿಂದ ಹಿಡಿದು ಹೊಟ್ಟೆಯ ಹಲವು ಸಮಸ್ಯೆಗಳವರೆಗೆ ಸಹಾಯಕವಾಗುವ ಹಣ್ಣುಗಳಲ್ಲಿ ನೇರಳೆ (ಜಾಮೂನ್) ಪ್ರಮುಖವಾಗಿದೆ. ಈ ಹಣ್ಣನ್ನು ಆರೋಗ್ಯ ತಜ್ಞರು ಬಹುಪಾಲು ವೇಳೆ ‘ಸೂಪರ್‌ಫುಡ್’ ಎಂದು ಕೂಡ ಕರೆಯುತ್ತಾರೆ.

ಈ ಹಣ್ಣುಗಳಲ್ಲಿ ವಿಟಮಿನ್‌ಗಳು, ಖನಿಜಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇದು ದೇಹದ ಆರೋಗ್ಯವನ್ನು ಉತ್ತಮವಾಗಿಡಲು ನೆರವಾಗುತ್ತದೆ.

ನಾವು ಬಹುತೇಕರು ಈ ಹಣ್ಣನ್ನು ಆಸಕ್ತಿಯಿಂದ ತಿನ್ನುತ್ತೇವೆ. ಆದರೆ ಇದನ್ನು ತಿಂದ ತಕ್ಷಣ ನೀರು ಕುಡಿಯಬಾರದು ಎಂದು ಮನೆಯ ಹಿರಿಯರು ಹೇಳುವುದನ್ನು ನೀವು ಖಂಡಿತವಾಗಿ ಕೇಳಿರಬಹುದು.

ಕೆಲವರು ಇದನ್ನು ಕೇವಲ ಹಳೆಯ ಸಂಪ್ರದಾಯ ಅಥವಾ ಕಟ್ಟುಕಥೆ ಎಂದುಕೊಳ್ಳಬಹುದು. ಆದರೆ ಆಯುರ್ವೇದ ಹಾಗೂ ಆಧುನಿಕ ಆರೋಗ್ಯ ವಿಜ್ಞಾನ ಎರಡೂ ಈ ಸಲಹೆಗೆ ಒಂದು ಮಟ್ಟಿನ ಮಹತ್ವ ನೀಡುತ್ತವೆ.

ಹೀಗಾದರೆ ಈ ಹಣ್ಣು ತಿಂದ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿ ಏನಾಗಬಹುದು? ಅದರ ಹಿಂದಿನ ಕಾರಣವೇನು? ಎಂಬುದನ್ನು ತಿಳಿದುಕೊಳ್ಳೋಣ.

ಜೀರ್ಣಕ್ರಿಯೆಗೆ ಉಂಟಾಗುವ ಸಮಸ್ಯೆಗಳು :

ಈ ಹಣ್ಣು ಸ್ವಲ್ಪ ಆಮ್ಲೀಯ (Acidic) ಹಾಗೂ ಸಂಕೋಚಕ ಗುಣ ಹೊಂದಿದೆ. ಈ ಹಣ್ಣು ತಿಂದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆಯೊಳಗಿನ ಜೀರ್ಣಕಾರಿ ರಸಗಳ ಸಮತೋಲನದಲ್ಲಿ ಬದಲಾವಣೆ ಉಂಟಾಗಬಹುದು.

ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ

  • ಹೊಟ್ಟೆ ಭಾರವಾಗಿರುವ ಭಾವನೆ.
  • ಅಜೀರ್ಣ.
  • ಅಸಹಜವಾದ ಹೊಟ್ಟೆ ಗಡಿಬಿಡಿ. ಹೀಗೆ ಕೆಲವು ತೊಂದರೆಗಳು ಕಾಣಿಸಿಕೊಳ್ಳಬಹುದು.

ಅನಿಲ ಮತ್ತು ಆಮ್ಲೀಯತೆಯ ಸಮಸ್ಯೆ :

ಈ ಹಣ್ಣುಗಳಲ್ಲಿ ಫೈಬರ್ ಹಾಗೂ ನೈಸರ್ಗಿಕ ರಾಸಾಯನಿಕಗಳು ಹೆಚ್ಚು ಇರುತ್ತವೆ. ಹಣ್ಣು ತಿಂದ ತಕ್ಷಣ ನೀರು ಕುಡಿದರೆ ಈ ಪದಾರ್ಥಗಳು ಹೊಟ್ಟೆಯಲ್ಲಿ ಬೇಗನೆ ಪ್ರತಿಕ್ರಿಯೆ ನೀಡಬಹುದು.

ಇದರಿಂದ ಕೆಲವರಲ್ಲಿ:

  • ಹೊಟ್ಟೆ ಉಬ್ಬರ.
  • ಅನಿಲ ಸಮಸ್ಯೆ.
  • ಆಮ್ಲೀಯತೆ ಹೆಚ್ಚಳ.
  • ಹೊಟ್ಟೆ ನೋವು. ಹೀಗೆ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಗಂಟಲು ಕಿರಿಕಿರಿ ಮತ್ತು ಕೆಮ್ಮಿನ ಸಮಸ್ಯೆ :

ನೇರಳೆ ಹಣ್ಣು ತಿಂದ ನಂತರ ತಕ್ಷಣ ತಣ್ಣೀರು ಕುಡಿಯುವುದರಿಂದ ಕೆಲವರಲ್ಲಿ ಗಂಟಲು ಕಿರಿಕಿರಿ ಅಥವಾ ಒಣಗುವಿಕೆ ಕಾಣಿಸಬಹುದು. ವಿಶೇಷವಾಗಿ ಮಳೆಗಾಲ ಅಥವಾ ಹವಾಮಾನ ಬದಲಾವಣೆಯ ಸಮಯದಲ್ಲಿ ಇದು ಶೀತ, ಕೆಮ್ಮು ಅಥವಾ ಗಂಟಲು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ಮೇಲೆ ಪರಿಣಾಮ :

ನೇರಳೆ ಹಣ್ಣುಗಳನ್ನು ಮಧುಮೇಹಿಗಳಿಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಆದರೆ ಹಣ್ಣು ತಿಂದ ತಕ್ಷಣ ಹೆಚ್ಚು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳಬಹುದು. ಇದರಿಂದ ದೇಹವು ನೇರಳೆಯಲ್ಲಿರುವ ಪೋಷಕಾಂಶಗಳನ್ನು ಸರಿಯಾಗಿ ಬಳಸಿಕೊಳ್ಳಲು ಸ್ವಲ್ಪ ಅಡಚಣೆ ಉಂಟಾಗಬಹುದು.

ನೇರಳೆ ಹಣ್ಣು ತಿನ್ನುವ ಸರಿಯಾದ ವಿಧಾನ :

ಆರೋಗ್ಯ ತಜ್ಞರ ಪ್ರಕಾರ, ನೇರಳೆ ಹಣ್ಣನ್ನು ತಿನ್ನುವಾಗ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಹೆಚ್ಚು ಲಾಭ ಪಡೆಯಬಹುದು.

1. ಸ್ವಲ್ಪ ಉಪ್ಪಿನೊಂದಿಗೆ ಸೇವನೆ :

ನೇರಳೆ ಹಣ್ಣನ್ನು ಸ್ವಲ್ಪ ಕಪ್ಪು ಉಪ್ಪು ಅಥವಾ ಸಮುದ್ರ ಉಪ್ಪಿನೊಂದಿಗೆ ತಿನ್ನುವುದರಿಂದ ಅದರ ಕಹಿ ರುಚಿ ಕಡಿಮೆಯಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಯೂ ಸುಲಭವಾಗುತ್ತದೆ.

2. ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ :

ಬೆಳಿಗ್ಗೆ ಸಂಪೂರ್ಣ ಖಾಲಿ ಹೊಟ್ಟೆಯಲ್ಲಿ ನೇರಳೆ ಹಣ್ಣು ತಿನ್ನುವುದನ್ನು ತಪ್ಪಿಸುವುದು ಉತ್ತಮ. ಇದರಿಂದ ಕೆಲವರಿಗೆ ಆಮ್ಲೀಯತೆ ಉಂಟಾಗಬಹುದು.

3. ನೀರು ಕುಡಿಯುವ ಸಮಯ :

ನೇರಳೆ ಹಣ್ಣು ತಿಂದ ಕನಿಷ್ಠ 30 ರಿಂದ 45 ನಿಮಿಷಗಳ ನಂತರ ನೀರು ಕುಡಿಯುವುದು ಸುರಕ್ಷಿತವೆಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

4. ಮಿತ ಪ್ರಮಾಣದಲ್ಲಿ ಸೇವನೆ :

ಪ್ರತಿ ದಿನ ಒಂದು ಹಿಡಿ (ಸುಮಾರು 50 ರಿಂದ 100 ಗ್ರಾಂ) ನೇರಳೆ ಹಣ್ಣು ತಿನ್ನುವುದರಿಂದ ಸಾಕಷ್ಟು ಆರೋಗ್ಯ ಲಾಭ ಪಡೆಯಬಹುದು.

ಇದನ್ನು ಓದಿ : ಮಧುಮೇಹ ಮತ್ತು ಹೃದಯದ ಆರೋಗ್ಯಕ್ಕೆ ಅರಿಶಿಣವೇ ರಾಮಬಾಣ..! ತಿಳಿದುಕೊಳ್ಳಿ ಅದರ ಅದ್ಭುತ ಲಾಭಗಳು

ನೇರಳೆ ಹಣ್ಣಿನ ಪ್ರಮುಖ ಆರೋಗ್ಯ ಲಾಭಗಳು :

ನೇರಳೆ ಹಣ್ಣುಗಳಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಹಲವು ರೀತಿಯಲ್ಲಿ ಸಹಾಯಕವಾಗುತ್ತವೆ.

  • ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ನೆರವು.
  • ಜೀರ್ಣಕ್ರಿಯೆ ಸುಧಾರಣೆ.
  • ರೋಗನಿರೋಧಕ ಶಕ್ತಿ ಹೆಚ್ಚಳ.
  • ಚರ್ಮದ ಆರೋಗ್ಯಕ್ಕೆ ಸಹಾಯ.
  • ದೇಹದ ವಿಷಪದಾರ್ಥಗಳನ್ನು ಹೊರಹಾಕಲು ನೆರವು.

ಕೊನೆಯ ಮಾತು :

ನೇರಳೆ ಹಣ್ಣು ಆರೋಗ್ಯಕ್ಕೆ ಅತ್ಯಂತ ಉತ್ತಮವಾದ ಹಣ್ಣುಗಳಲ್ಲಿ ಒಂದಾಗಿದೆ. ಆದರೆ ಅದನ್ನು ತಿನ್ನುವ ವಿಧಾನವೂ ಅಷ್ಟೇ ಮುಖ್ಯ. ಹಣ್ಣು ತಿಂದ ತಕ್ಷಣ ನೀರು ಕುಡಿಯುವುದನ್ನು ತಪ್ಪಿಸಿ, ಸ್ವಲ್ಪ ಸಮಯದ ಬಳಿಕ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಅದರ ಪೋಷಕಾಂಶಗಳ ಸಂಪೂರ್ಣ ಲಾಭವನ್ನು ಪಡೆಯಬಹುದು.

10ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕನ ಮೇಲೆ ಹಲ್ಲೆ; ಘಟನೆ ವಿಡಿಯೋ ವೈರಲ್.!

0

ಜನಸ್ಪಂದನ ನ್ಯೂಸ್‌, ಕೃಷ್ಣಾ (ಆ.ಪ್ರ) : ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಶಾಲಾ ಆವರಣದಲ್ಲಿ ನಡೆದ ಘಟನೆ ಸದ್ಯ ದೊಡ್ಡ ಚರ್ಚೆಗೆ ಕಾರಣವಾಗಿದೆ. 10ನೇ ತರಗತಿಯ ವಿದ್ಯಾರ್ಥಿಯೊಬ್ಬನು ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಘಟನೆ ರಾಜ್ಯದ ಶಿಕ್ಷಣ ವಲಯದಲ್ಲೂ ಆತಂಕವನ್ನು ಹುಟ್ಟುಹಾಕಿದೆ.

ಈ ಘಟನೆ ಕೃಷ್ಣಾ ಜಿಲ್ಲೆಯ ಬಾಪುಲಪಾಡು ಮಂಡಲದ ವೀರವಳ್ಳಿ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ಶಾಲೆಯಲ್ಲಿ ನಡೆದ ಸಾಮಾನ್ಯ ವಾಗ್ವಾದವು ಕೆಲವೇ ಕ್ಷಣಗಳಲ್ಲಿ ಗಂಭೀರ ಘರ್ಷಣೆಗೆ ತಿರುಗಿದೆ. ಶಿಕ್ಷಕರು ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯನ್ನು ಗದರಿಸಿದ ವೇಳೆ ಮಾತಿನ ಚಕಮಕಿ ಆರಂಭವಾಗಿದೆ.

ಆರಂಭದಲ್ಲಿ ಸಾಮಾನ್ಯ ಎಚ್ಚರಿಕೆಯಾಗಿ ಆರಂಭವಾದ ವಾಗ್ವಾದ ನಿಧಾನವಾಗಿ ಉಗ್ರ ವಾಗ್ವಾದಕ್ಕೆ ತಿರುಗಿದಂತಾಗಿದೆ. ವಿವಾದ ತೀವ್ರಗೊಂಡ ಸಂದರ್ಭದಲ್ಲಿ ವಿದ್ಯಾರ್ಥಿಯು ಶಿಕ್ಷಕನಿಗೆ ಗುದ್ದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಘಟನೆ ನಡೆಯುತ್ತಿದ್ದ ವೇಳೆ ಶಾಲೆಯಲ್ಲಿದ್ದ ಇತರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.

10ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕನ ಮೇಲೆ ಹಲ್ಲೆಯ ವಿಡಿಯೋ :

Courtesy : Sosial Media

10ನೇ ತರಗತಿ ವಿದ್ಯಾರ್ಥಿಯಿಂದ ಶಿಕ್ಷಕನ ಮೇಲೆ ಹಲ್ಲೆ ಪ್ರಕರಣವು ಶಾಲಾ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ನಂತರ ಶಿಕ್ಷಕರು ಹಾಗೂ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ವಿದ್ಯಾರ್ಥಿ ಶಿಕ್ಷಕರೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯಗಳು ಕಾಣಿಸುತ್ತವೆ. ದೈಹಿಕ ಹಲ್ಲೆ ನಡೆಯುವ ಮೊದಲು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿರುವುದು ವಿಡಿಯೋದಲ್ಲೂ ಗೋಚರಿಸುತ್ತಿದೆ.

ಕೆಲವು ಮೂಲಗಳ ಪ್ರಕಾರ, ಜಗಳದ ವೇಳೆ ಶಿಕ್ಷಕರು ತನ್ನ ತಾಯಿಯ ಬಗ್ಗೆ ಅವಾಚ್ಯ ಪದಗಳನ್ನು ಬಳಸಿದ್ದಾರೆ ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಹೊರಬಂದಿದೆ. ಈ ಹೇಳಿಕೆ ಸ್ಥಳೀಯರಲ್ಲಿ ಹಾಗೂ ಪೋಷಕರಲ್ಲಿ ಹಲವು ಪ್ರಶ್ನೆಗಳು ಮತ್ತು ಚರ್ಚೆಗಳಿಗೆ ಕಾರಣವಾಗಿದೆ.

ಘಟನೆಯ ನಂತರ ಶಾಲಾ ಆಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯಲ್ಲಿ ಭಯ ಅಥವಾ ಉದ್ವಿಗ್ನತೆ ಹೆಚ್ಚಾಗದಂತೆ ಶಾಲಾ ಆಡಳಿತ ಕ್ರಮಗಳನ್ನು ಕೈಗೊಂಡಿದೆ.

ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿ ಅಪ್ರಾಪ್ತ ವಯಸ್ಕನಾಗಿರುವುದರಿಂದ ಪ್ರಕರಣವನ್ನು ಸೂಕ್ಷ್ಮವಾಗಿ ಜೊತೆಗೆ ಮುಂಬರುವ ಸಾರ್ವಜನಿಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಮೊದಲು ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಗೆ ಕಾರಣವಾದ ನಿಖರ ಪರಿಸ್ಥಿತಿಗಳನ್ನು ತಿಳಿದುಕೊಳ್ಳಲು ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ. ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ನಡುವಿನ ಸಂವಹನ, ಶಿಸ್ತು ಮತ್ತು ಮಾನಸಿಕ ಒತ್ತಡಗಳ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಈ ಘಟನೆಯೂ ಆ ವಿಚಾರವನ್ನು ಮತ್ತೊಮ್ಮೆ ಗಮನಕ್ಕೆ ತಂದಿದೆ.

ಇದನ್ನು ಓದಿ : ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ? ವಿಡಿಯೋ ವೈರಲ್.!

ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಬೆಳೆಸುವ ಜೊತೆಗೆ, ಶಾಲೆಗಳಲ್ಲಿ ಸಮಾಲೋಚನೆ ಹಾಗೂ ಮಾರ್ಗದರ್ಶನ ವ್ಯವಸ್ಥೆಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯಾರ್ಥಿಯಿಂದ ಶಿಕ್ಷಕನ ಮೇಲೆ ಹಲ್ಲೆ ನಡೆದ ಪ್ರಕರಣದ ಮುಂದಿನ ಬೆಳವಣಿಗೆಗಳು ಹಾಗೂ ತನಿಖೆಯ ಫಲಿತಾಂಶದ ಮೇಲೆ ಎಲ್ಲರ ಗಮನ ನೆಟ್ಟಿದೆ.


Disclaimer: ಈ ಲೇಖನದಲ್ಲಿ ಉಲ್ಲೇಖಿಸಿರುವ ವಿಡಿಯೋ ಮತ್ತು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಈ ವಿಡಿಯೋವನ್ನು Janaspandhan News ಸ್ವತಂತ್ರವಾಗಿ ದೃಢೀಕರಿಸಿಲ್ಲ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಈ ಸುದ್ದಿ ಪ್ರಕಟಿಸಲಾಗಿದೆ.

ಪ್ರಿಯಕರ ಬಿಡುಗಡೆಗೆ ಮೊಬೈಲ್ ಟವರ್ ಏರಿದ ಯುವತಿ ; ಮುಂದೆನಾಯ್ತು ವಿಡಿಯೋ ನೋಡಿ.!

0

ಜನಸ್ಪಂದನ ನ್ಯೂಸ್‌, ಬಿಹಾರ : ಬಿಹಾರ ರಾಜ್ಯದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಭಾನುವಾರ ವಿಚಿತ್ರ ಹಾಗೂ ಆತಂಕಕಾರಿ ಘಟನೆೊಂದು ನಡೆದಿದೆ. ತನ್ನ ಪ್ರಿಯಕರನನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ 20 ವರ್ಷದ ಯುವತಿ ಹೈಟೆನ್ಷನ್ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಮಾಹಿತಿ ಪ್ರಕಾರ, ಗೋಪಾಲ್‌ಗಂಜ್ ಜಿಲ್ಲೆಯ ಬಂಕಟ ಜಾಗಿರ್ದಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಯುವತಿಯ ಪ್ರಿಯಕರನನ್ನು ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು.

ಈ ವಿಚಾರ ತಿಳಿದ ಯುವತಿ ಆಕ್ರೋಶಗೊಂಡು ಸಮೀಪದಲ್ಲಿದ್ದ ಮೊಬೈಲ್ ಟವರ್ ಮೇಲೆ ಹತ್ತಿ, ತನ್ನ ಪ್ರಿಯಕರನನ್ನು ಬಿಡುಗಡೆ ಮಾಡುವವರೆಗೆ ಕೆಳಗೆ ಇಳಿಯುವುದಿಲ್ಲ ಎಂದು ಘೋಷಣೆ ಮಾಡಿದಳು.

ಮೊಬೈಲ್ ಟವರ್ ಏರಿದ ಯುವತಿನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸ್ಥಳ ಭೋರೆ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ದು, ಸುದ್ದಿ ತಿಳಿದ ಕೂಡಲೇ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.

ಇದನ್ನು ಓದಿ : ಕುಡಿದ ಮತ್ತಿನಲ್ಲಿ ನಡುಬೀದಿಯಲ್ಲಿ ಪ್ರೇಮಿಗಳ ಜಂಗೀ ಕುಸ್ತಿ; ಪ್ರಕರಣ ದಾಖಲು.!

ಮೊದಲು ಪೊಲೀಸರು ಯುವತಿಯನ್ನು ಸಮಾಧಾನಪಡಿಸಿ ಸುರಕ್ಷಿತವಾಗಿ ಕೆಳಗೆ ಇಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಯುವತಿ ತನ್ನ ಬೇಡಿಕೆಯನ್ನು ಮುಂದುವರಿಸಿಕೊಂಡು ಸಹಕರಿಸಲು ನಿರಾಕರಿಸಿದಳು. ಇದರಿಂದ ಕೆಲಕಾಲ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಗಮನಿಸಿದ ಪೊಲೀಸರು ನಂತರ ಬಂಧಿತ ವ್ಯಕ್ತಿಯನ್ನು ಸ್ಥಳಕ್ಕೆ ಕರೆತಂದರು. ಪ್ರಿಯಕರನನ್ನು ನೋಡಿದ ಬಳಿಕ ಯುವತಿ ಸ್ವಲ್ಪ ಶಾಂತಗೊಂಡು ಕೊನೆಗೆ ಸುರಕ್ಷಿತವಾಗಿ ಟವರ್‌ನಿಂದ ಕೆಳಗೆ ಇಳಿದಳು.

ಬಳಿಕ ಪೊಲೀಸರು ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದರು. ಈ ಘಟನೆ ಗ್ರಾಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯುವತಿ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಟವರ್ ಹತ್ತಿದ್ದರಿಂದ ದೊಡ್ಡ ಅನಾಹುತ ಸಂಭವಿಸಬಹುದಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೊಬೈಲ್ ಟವರ್ ಏರಿದ ಯುವತಿಯ ವಿಡಿಯೋ :

 

View this post on Instagram

 

A post shared by RVCJ Media (@rvcjinsta)

Courtesy : Sosial Media

ಪೊಲೀಸರು ಕೂಡ ಸಾರ್ವಜನಿಕರು ಇಂತಹ ಅಪಾಯಕಾರಿ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಯುವತಿಯ ಪ್ರಿಯಕರನ ಬಂಧನದ ಕುರಿತು ಕಾನೂನು ಕ್ರಮ ಮುಂದುವರಿದಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.


Disclaimer: ಈ ಸುದ್ದಿಯಲ್ಲಿ ನೀಡಿರುವ ಮಾಹಿತಿ ವಿವಿಧ ಮಾಧ್ಯಮ ವರದಿಗಳು ಮತ್ತು ಲಭ್ಯವಿರುವ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಹಾಗೂ ತನಿಖೆಯ ಅಂತಿಮ ಮಾಹಿತಿ ಸಂಬಂಧಿತ ಅಧಿಕಾರಿಗಳ ಅಧಿಕೃತ ಪ್ರಕಟಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ವಿಡಿಯೋ/ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ದೃಶ್ಯಗಳಾಗಿರಬಹುದು. ಇದರ ನಿಖರತೆಯನ್ನು ನಮ್ಮ ವೆಬ್‌ಸೈಟ್ ಸ್ವತಂತ್ರವಾಗಿ ದೃಢಪಡಿಸಿರುವುದಿಲ್ಲ.

ಗುರುಕುಲ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯಿಂದ ದಾಳಿ: ಓರ್ವ ವಿದ್ಯಾರ್ಥಿ ಸಾವು, 7 ಮಂದಿಗೆ ಗಂಭೀರ ಗಾಯ.!

0

ಜನಸ್ಪಂದನ ನ್ಯೂಸ್‌, ಬಳ್ಳಾರಿ: ಜಿಲ್ಲೆಯ ಗುರುಕುಲ ವಸತಿ ಶಾಲೆಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಘಟನೆಯೊಂದು ಓರ್ವ ವಿದ್ಯಾರ್ಥಿ ಸಾವಿಗೆ ಕಾರಣವಾಗಿದ್ದು, ಇನ್ನೂ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಒಂಬತ್ತನೇ ತರಗತಿಯ ವಿದ್ಯಾರ್ಥಿಯೋರ್ವ ಮಂಚದ ಕಬ್ಬಿಣದ ರಾಡ್ ಬಳಸಿ ಸಹಪಾಠಿಗಳ ಮೇಲೆ ಹಲ್ಲೆ ನಡೆಸಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯಿಂದ ದಾಳಿ :

ಮಾಹಿತಿಯ ಪ್ರಕಾರ, ರಾತ್ರಿ ಊಟದ ಬಳಿಕ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿರುವ ತಮ್ಮ ತಮ್ಮ ಹಾಸಿಗೆಗಳಲ್ಲಿ ಮಲಗಿಕೊಂಡಿದ್ದರು. ಈ ಸಮಯದಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಅಚಾನಕ್‌ವಾಗಿ ಮಂಚದ ಕಬ್ಬಿಣದ ರಾಡ್ ತೆಗೆದುಕೊಂಡು ಹಾಸ್ಟೆಲ್‌ನಲ್ಲಿ ಮಲಗಿದ್ದ ಸಹ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು ಆರಂಭಿಸಿದ್ದಾನೆ.

ಮಲಗಿದ್ದ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ರಾಡ್‌ನಿಂದ ಹೊಡೆದ ಪರಿಣಾಮ ಎಂಟು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ದಾಳಿಯಲ್ಲಿ ಒಬ್ಬ ವಿದ್ಯಾರ್ಥಿಗೆ ತೀವ್ರವಾಗಿ ತಲೆಗೆ ಗಾಯವಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಉಳಿದ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಬಳ್ಳಾರಿಯ ಬಿಮ್ಸ್ ಆಸ್ಪತ್ರೆ ಹಾಗೂ ಟ್ರಾಮಾಕೇರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಗಾಯಗೊಂಡವರಲ್ಲಿ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಘಟನೆ ನಡೆಯುವ ವೇಳೆ ಹಾಸ್ಟೆಲ್‌ನಲ್ಲಿ ಗಲಾಟೆ ನಡೆಯುತ್ತಿರುವುದನ್ನು ಗಮನಿಸಿದ ವಾರ್ಡನ್ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದಾಗ, ದಾಳಿ ನಡೆಸಿದ ವಿದ್ಯಾರ್ಥಿ ವಾರ್ಡನ್ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವೇಳೆ ವಾರ್ಡನ್ ಕೂಡ ಗಾಯಗೊಂಡಿದ್ದಾರೆ.

ಹಲ್ಲೆ ನಡೆಸಿದ ಬಳಿಕ ಆರೋಪಿತ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಕುರಿತು ಮಾಹಿತಿ ಪಡೆದ ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯಿಂದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಘಟನೆಗೆ ಮುನ್ನ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ದಾಳಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : ನಿಗೂಢ ಸಾವು: ದೇವಸ್ಥಾನದ ಶೌಚಾಲಯದಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ.!

ಈ ಘಟನೆ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ತಡರಾತ್ರಿ ನಡೆದ ಈ ದುರಂತದ ಸುದ್ದಿ ತಿಳಿದು ಗಾಯಗೊಂಡ ಮಕ್ಕಳ ಪೋಷಕರು ಹಾಗೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯಿಂದ ದಾಳಿ ಹಿನ್ನಲೆಯಲ್ಲಿ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದು, ವಿದ್ಯಾರ್ಥಿಗಳ ಹೇಳಿಕೆಗಳು ಹಾಗೂ ಹಾಸ್ಟೆಲ್ ಸಿಬ್ಬಂದಿಯ ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

Courtesy : Suvarna News


Disclaimer: ಈ ಸುದ್ದಿಯ ಮಾಹಿತಿಯನ್ನು ಲಭ್ಯವಿರುವ ಮೂಲಗಳು ಮತ್ತು ಪ್ರಾಥಮಿಕ ವರದಿಗಳ ಆಧಾರದ ಮೇಲೆ ಪ್ರಕಟಿಸಲಾಗಿದೆ. ತನಿಖೆ ಮುಂದುವರಿದಂತೆ ವಿವರಗಳು ಬದಲಾಗುವ ಸಾಧ್ಯತೆ ಇದೆ.