ಆರೋಗ್ಯ ಮಾಹಿತಿ : ನೇರಳೆ ಹಣ್ಣು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈ ನೇರಳೆ ಹಣ್ಣು ಮಳೆಗಾಲ ಮತ್ತು ಬೇಸಿಗೆಯ ಸಂಧಿಕಾಲದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಈ ನೇರಳೆ ಹಣ್ಣು (Jamun) ತಿಂದ ತಕ್ಷಣ ಯಾವುದೇ ಕಾರಣಕ್ಕೂ ಈ 5 ಆಹಾರ ಪದಾರ್ಥ ಸೇವಿಸಬೇಡಿ, ಇಲ್ಲಾಂದ್ರೆ ಹೊಟ್ಟೆ ಸಮಸ್ಯೆ ಗ್ಯಾರಂಟಿ!
ಈ ಹಣ್ಣು ಆರೋಗ್ಯಕ್ಕೆ ಅತ್ಯಂತ ಲಾಭದಾಯಕ ಹಣ್ಣುಗಳಲ್ಲಿ ಒಂದಾಗಿದೆ. ಆಂಟಿಆಕ್ಸಿಡೆಂಟ್ಗಳು, ವಿಟಮಿನ್ ಸಿ, ಕಬ್ಬಿಣ ಹಾಗೂ ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಿಸಲು ಸಹ ಸಹಕಾರಿಯಾಗುತ್ತದೆ.
ವಿಶೇಷವಾಗಿ ಮಧುಮೇಹ ಸಮಸ್ಯೆಯಿಂದ ಬಳಲುವವರಿಗೆ ಇದು ಅತ್ಯಂತ ಉಪಯುಕ್ತವಾದ ಹಣ್ಣೆಂದು ಪರಿಗಣಿಸಲಾಗುತ್ತದೆ. ಆದರೂ ಸಹ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಈ ಹಣ್ಣು ತಿಂದ ತಕ್ಷಣ ಕೆಲ ಆಹಾರ ಪದಾರ್ಥಗಳನ್ನು ಸೇವಿಸಿದರೆ ಹೊಟ್ಟೆ ಸಮಸ್ಯೆ ಎದುರಾಗಬಹುದು.
ಆಯುರ್ವೇದ ಹಾಗೂ ಆಹಾರ ತಜ್ಞರ ಪ್ರಕಾರ, ಈ ಹಣ್ಣು ಸೇವಿಸಿದ ಬಳಿಕ ಕೆಲವು ಆಹಾರಗಳನ್ನು ತಕ್ಷಣ ಸೇವಿಸುವುದರಿಂದ ಜೀರ್ಣಕ್ರಿಯೆ ಸಂಪೂರ್ಣ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಹೊಟ್ಟೆ ಉಬ್ಬರ, ಗ್ಯಾಸ್, ಅಸಿಡಿಟಿ, ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ನೇರಳೆ ಹಣ್ಣು ತಿಂದ ನಂತರ ಈ 5 ಆಹಾರಗಳಿಂದ ದೂರವಿರುವುದು ಉತ್ತಮ.
ನೇರಳೆ ಹಣ್ಣು ತಿಂದ ತಕ್ಷಣ ಈ ಆಹಾರ ಪದಾರ್ಥಿ ಸೇವಿಸಬೇಡಿ :
ಉದ್ಯೋಗ ಸುದ್ದಿ ಓದಿ : 10ನೇ, 12ನೇ / ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವರಿಗೆ ಬೆಂಗಳೂರು ಸಿವಿಲ್ ಕೋರ್ಟ್ನಲ್ಲಿ ನೇಮಕಾತಿ.
1. ಹಾಲು ಮತ್ತು ಹಾಲಿನ ಉತ್ಪನ್ನಗಳು :
ಈ ಹಣ್ಣಿನಲ್ಲಿ ನೈಸರ್ಗಿಕ ಆಮ್ಲೀಯ ಗುಣಗಳಿರುವುದರಿಂದ ತಕ್ಷಣ ಹಾಲು ಕುಡಿಯುವುದರಿಂದ ಹೊಟ್ಟೆಯೊಳಗೆ ರಾಸಾಯನಿಕ ಕ್ರಿಯೆ ಉಂಟಾಗಬಹುದು. ಇದರಿಂದ ಹಾಲು ಸರಿಯಾಗಿ ಜೀರ್ಣವಾಗದೇ ಗ್ಯಾಸ್, ಹೊಟ್ಟೆನೋವು, ವಾಂತಿ ಹಾಗೂ ಅಜೀರ್ಣದ ಸಮಸ್ಯೆಗಳು ಶುರುವಾಗಬಹುದು. ಕನಿಷ್ಠ 1 ರಿಂದ 2 ಗಂಟೆಗಳ ಅಂತರ ಇರಬೇಕು.
2. ತಕ್ಷಣ ನೀರು ಕುಡಿಯುವುದು :
ಈ ಹಣ್ಣು ತಿಂದ ಕೂಡಲೇ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ ಅಲ್ಲ. ನೇರಳೆ ಹಣ್ಣು ಸೇವಿಸಿದ ತಕ್ಷಣ ನೀರು ಕುಡಿದರೆ ಹೊಟ್ಟೆಯಲ್ಲಿರುವ ಜೀರ್ಣರಸಗಳು ದುರ್ಬಲಗೊಳ್ಳುತ್ತವೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ ನಡೆಯುತ್ತದೆ. ಪರಿಣಾಮ ಹೊಟ್ಟೆ ಉಬ್ಬರ ಅಥವಾ ಭೇದಿಯ ಸಮಸ್ಯೆ ಎದುರಾಗಬಹುದು. ಕನಿಷ್ಠ ಅರ್ಧ ಗಂಟೆ ಬಳಿಕ ನೀರು ಕುಡಿಯುವುದು ಉತ್ತಮ.
3. ಉಪ್ಪಿನಕಾಯಿ ಮತ್ತು ಹುಳಿ ಪದಾರ್ಥಗಳು :
ಈ ಹಣ್ಣು ಸ್ವಲ್ಪ ಹುಳಿ-ಒಗರು ಸ್ವಭಾವ ಹೊಂದಿರುವುದರಿಂದ ಅದಾದ ಬಳಿಕ ಉಪ್ಪಿನಕಾಯಿ, ನಿಂಬೆಹಣ್ಣು ಅಥವಾ ಇತರ ಹುಳಿ ಪದಾರ್ಥಗಳನ್ನು ಸೇವಿಸಿದರೆ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗಬಹುದು. ಇದರಿಂದ ಎದೆಯುರಿ ಹಾಗೂ ಅಸಿಡಿಟಿ ಸಮಸ್ಯೆ ತೀವ್ರವಾಗಬಹುದು.
ಈ ಸುದ್ದಿಯನ್ನು ಓದಿ : ದಿಢೀರ್ ಓಪನ್ ಆದ ಚಲಿಸುತ್ತಿದ್ದ ಶಾಲಾ ವ್ಯಾನಿನ ಹಿಂಬಾಗಿಲು ; ರಸ್ತೆಗೆ ಬಿದ್ದ 5 ಮಕ್ಕಳು.
4. ಅರಿಶಿನ ಹೆಚ್ಚಿರುವ ಆಹಾರ :
ಹಸಿ ಅರಿಶಿನ ಅಥವಾ ಅರಿಶಿನ ಹೆಚ್ಚಿರುವ ಆಹಾರ ಪದಾರ್ಥಗಳನ್ನು ತಕ್ಷಣ ಸೇವಿಸಿದರೆ ಹೊಟ್ಟೆಯೊಳಗಿನ ರಾಸಾಯನಿಕ ಸಮತೋಲನ ಹಾಳಾಗಬಹುದು ಎಂದು ತಜ್ಞರು ಹೇಳುತ್ತಾರೆ. ಇದರ ಪರಿಣಾಮ ಗ್ಯಾಸ್ಟ್ರಿಕ್ ಹಾಗೂ ಅಜೀರ್ಣ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
5. ಸೌತೆಕಾಯಿ :
ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಿದ್ದು ಅದು ತಂಪು ಗುಣ ಹೊಂದಿರುತ್ತದೆ. ನೇರಳೆ ಹಣ್ಣಿನ ನಂತರ ಇದನ್ನು ತಿಂದರೆ ದೇಹದಲ್ಲಿ ಕಫ ಹಾಗೂ ಅನಿಲ ಉತ್ಪತ್ತಿ ಹೆಚ್ಚಾಗಿ ಹೊಟ್ಟೆ ನೋವು ಅಥವಾ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಬಹುದು.
ಇದನ್ನು ಓದಿ : ಬೇಸಿಗೆಯಲ್ಲಿ ಮಜ್ಜಿಗೆ ಮತ್ತು ಲಸ್ಸಿ: ದೇಹಕ್ಕೆ ಯಾವುದು ಹೆಚ್ಚು ತಂಪು ಕೊಡುತ್ತದೆ?
ಆರೋಗ್ಯ ಕಾಪಾಡಲು ಈ ಸರಳ ನಿಯಮ ಪಾಲಿಸಿ :
ಈ ಹಣ್ಣು ಪ್ರಕೃತಿಯ ಅಮೂಲ್ಯ ಕೊಡುಗೆ. ಇದರ ಸಂಪೂರ್ಣ ಪೌಷ್ಟಿಕಾಂಶ ದೇಹಕ್ಕೆ ಸಿಗಬೇಕಾದರೆ ಖಾಲಿ ಹೊಟ್ಟೆಯಲ್ಲಿ ಹೆಚ್ಚು ಸೇವಿಸಬಾರದು. ತಿಂದ ನಂತರ ಕನಿಷ್ಠ ಒಂದು ಗಂಟೆಯ ಕಾಲ ಬೇರೆ ಭಾರೀ ಆಹಾರ ಸೇವಿಸದೆ ಹೊಟ್ಟೆಗೆ ವಿಶ್ರಾಂತಿ ನೀಡಬೇಕು. ಸರಿಯಾದ ರೀತಿಯಲ್ಲಿ ಸೇವಿಸಿದರೆ ಈ ಹಣ್ಣು ಆರೋಗ್ಯಕ್ಕೆ ಔಷಧಿಯಂತೆ ಕೆಲಸ ಮಾಡುತ್ತದೆ.
ಇಂದಿನ ದಿನಗಳಲ್ಲಿ ಆರೋಗ್ಯಕರ ಜೀವನಶೈಲಿಗೆ ಮಹತ್ವ ಹೆಚ್ಚುತ್ತಿರುವಾಗ, ಯಾವ ಆಹಾರವನ್ನು ಯಾವ ಸಮಯದಲ್ಲಿ ಸೇವಿಸಬೇಕು ಎನ್ನುವುದೂ ಅಷ್ಟೇ ಮುಖ್ಯ ಎನ್ನುವುದನ್ನು ಮರೆಯಬಾರದು.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ







