ಜನಸ್ಪಂದನ ನ್ಯೂಸ್, ಬೆಂಗಳೂರು : ಉದ್ಯೋಗ ಕೊಡಿಸುವ ನೆಪದಲ್ಲಿ (Pretext of providing employment) ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ (Prostitution) ದೂಡುತ್ತಿದ್ದ ಪ್ರಕರಣದ ಸಂಬಂಧ ಬಾಲಕಿಯ ಜೊತೆಗೆ ಲೈಂಗಿಕ ಸಂಪರ್ಕ ನಡೆಸಿದ್ದ ಉದ್ಯಮಿಯನ್ನು ಪೋಕ್ಸೋ ಪ್ರಕರಣದಡಿ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಳ್ಳಾರಿ ಮೂಲದ ಉದ್ಯಮಿ ಕಿರಣ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಹೆಣ್ಣು ಮಕ್ಕಳಿಗೆ ಸಿನಿಮಾ, ಸೀರಿಯಲ್, ಪಬ್, ರೆಸ್ಟೋರೆಂಟ್ಗಳಲ್ಲಿ ಕೆಲಸದ ಆಸೆ ಹುಟ್ಟಿಸಿ ವೇಶ್ಯಾವಾಟಿಕೆಗೆ ನೂಕುತ್ತಿದ್ದ ಎನ್ನಲಾಗಿದೆ.
ಇದನ್ನು ಓದಿ : Belagavi : ಈಜಲು ಹೋದ ಮೂರು ಮಕ್ಕಳು ಕೃಷಿಹೊಂಡದಲ್ಲಿ ಮುಳುಗಿ ಸಾವು.!
ಸಿಸಿಬಿ ಪೊಲೀಸರು ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂಟು ಜನ ದಲ್ಲಾಳಿಗಳನ್ನು (Eight brokers) ಅರೆಸ್ಟ್ ಮಾಡಿದ್ದರು.
ಬಂಧನದ ಬಳಿಕ ಸಿನಿಮಾ, ಸೀರಿಯಲ್, ರೆಸ್ಟೋರೆಂಟ್ಗಳಲ್ಲಿ ಕೆಲಸ ಕೊಡಿಸುವುದಾಗಿ ಹೆಣ್ಣುಮಕ್ಕಳನ್ನು ಕರೆತಂದು ಕೃತ್ಯಕ್ಕೆ ದೂಡುತ್ತಿದ್ದ ವಿಚಾರ ಬಯಲಾಗಿತ್ತು.
ಇದನ್ನು ಓದಿ : ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!
ಈ ಪ್ರಕರಣದಲ್ಲಿ ದಲ್ಲಾಳಿಗಳನ್ನು ಸಂಪರ್ಕಿಸುತ್ತಿದ್ದ ಕಿರಣ್, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ನನ್ನ ಬಳಿ ಕಳುಹಿಸಿಕೊಡುವಂತೆ ಬೇಡಿಕೆಯಿಡುತ್ತಿದ್ದ. ಆತನ ಬೇಡಿಕೆಯಂತೆ ಆರೋಪಿಗಳು ಅಪ್ರಾಪ್ತೆಯರನ್ನು ಕರೆತಂದು ಆತನ ಬಳಿ ಕಳುಹಿಸಿದ್ದರು ಎನ್ನಲಾಗಿದೆ.
ಆರೋಪಿ ಕಿರಣ್ ಐಷಾರಾಮಿ ಹೋಟೆಲ್ಗಳಲ್ಲಿ ರೂಮ್ ಬುಕ್ ಮಾಡುತ್ತಿದ್ದ. ಅಲ್ಲದೇ ಅಪ್ರಾಪ್ತರಿಗೆ ರೂಮ್ನಲ್ಲಿ ಪ್ರವೇಶ ನೀಡುವುದಿಲ್ಲ ಎಂದು ಅವರ ವಯಸ್ಸು ಹೆಚ್ಚಿಗೆ ಮಾಡಿಸಿ ನಕಲಿ ಆಧಾರ್ ಕಾರ್ಡ್ (Fake Aadhar card) ನೀಡುತ್ತಿದ್ದ. ನಂತರ ಅಪ್ರಾಪ್ತೆಯರನ್ನು ರೂಮ್ಗೆ ಕರೆದೊಯ್ಯುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!
ಇತ್ತೀಚೆಗೆ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಎಂಟು ಯುವತಿಯರನ್ನು ರಕ್ಷಿಸಿ ಎಂಟು ಮಂದಿ ದಲ್ಲಾಳಿಗಳನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಯುವತಿಯರಲ್ಲಿ ಒಬ್ಬಳು ಅಪ್ರಾಪ್ತೆಯಾಗಿರುವುದು ಕಂಡು ಬಂದಿತ್ತು.
ಈ ಬಗ್ಗೆ ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಆರೋಪಿ ಕಿರಣ್ ಅಪ್ರಾಪ್ತೆಯ ನಕಲಿ ಆಧಾರ್ ಕಾರ್ಡ್ ನೀಡಿ ಖಾಸಗಿ ಹೋಟೆಲ್ಗೆ ಕರೆದೊಯ್ದು ಲೈಂಗಿಕ ಸಂಪರ್ಕ ನಡೆಸಿರುವ ವಿಚಾರ ಬೆಳಕಿಗೆ ಬಂದಿತ್ತು.
ಹಿಂದಿನ ಸುದ್ದಿ : ರಾತ್ರಿ ಊಟ ಮಾಡಿ ಪಾತ್ರೆ ತೊಳೆಯದೇ ಹಾಗೆ ಇಡ್ತೀರಾ.? ಈ ಸುದ್ದಿ ಓದಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರು ರಾತ್ರಿ ಊಟ ಮಾಡಿದ ಬಳಿಕ ಎಷ್ಟೋ ಸಲ ಅಡುಗೆ ಮನೆಯಲ್ಲಿ ಕೊಳಕು ಪಾತ್ರೆಗಳ ರಾಶಿ ಇಟ್ಟು ಮಲಗುತ್ತಾರೆ.
ಆದರೆ ರಾತ್ರಿ ಕೊಳಕಾದ ಪಾತ್ರೆಗಳನ್ನು ತಪ್ಪಾಗಿಯೂ ತೊಳೆಯದೇ ಮಲಗಬಾರದು (Don’t sleep at night without washing dirty dishes, even if you have to). ಹೀಗೆ ಮಾಡುವುದರಿಂದ ನಮಗೆ ನೋವು, ದುಃಖ ಉಂಟಾಗುತ್ತದೆ ಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ.
ಇದನ್ನು ಓದಿ : Bike ಮೇಲೆ ನಿಂತು ಸ್ಟಂಟ್ ಮಾಡಲು ಹೋದಾತ ಏನಾದ ಗೊತ್ತಾ.? ಈ ವಿಡಿಯೋ ನೋಡಿ.!
ಹಿರಿಯರ ಈ ಮಾತುಗಳು ನಮಗೆ ವಿಚಿತ್ರವೆನಿಸುತ್ತವೆ. ಆದರೆ ಅದರ ಕಾರಣಗಳು ಮತ್ತು ಅದರಿಂದಾಗುವ ಹಾನಿಯನ್ನು ಶಾಸ್ತ್ರ ಮತ್ತು ವಿಜ್ಞಾನದಲ್ಲಿ (Science and technology) ವಿವರಿಸಲಾಗಿದೆ.
ಈ ಸಲಹೆಯನ್ನು ಅನುಸರಿಸಿದರೆ ನಮಗೆ ಸಂತೋಷ ಸಿಗುತ್ತದೆ ಮತ್ತು ಭವಿಷ್ಯದಲ್ಲಿ ಅಶುಭ ಘಟನೆಗಳಿಂದ ಪಾರಾಗಬಹುದು.
ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!
ರಾತ್ರಿಯಲ್ಲಿ ಊಟ ಮಾಡಿದ ನಂತರ ಪಾತ್ರೆಗಳನ್ನು ಏಕೆ ತೊಳೆದು ಮಲಗಬೇಕು.? ಇಲ್ಲಿದೆ ವೈಜ್ಞಾನಿಕ ಕಾರಣ.
ಊಟದ ಬಳಿಕ ಇಡುವ ಪಾತ್ರೆಗಳಲ್ಲಿ ಅಲ್ಲಲ್ಲಿ ಚೂರು ಆಹಾರ ಪದಾರ್ಥ ಉಳಿದಿರುತ್ತದೆ ಇದು ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ (Increases bacteria).
ಇದನ್ನು ಓದಿ : ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕುರಿತು ಅಶ್ಲೀಲ ಪೋಸ್ಟ್ ಮಾಡಿದ ಮಹಿಳಾ Influencer.!
ಒಂದು ವೇಳೆ ನಾವು ರಾತ್ರಿಯಿಡೀ ಕೊಳಕು ಪಾತ್ರೆಗಳನ್ನು ಹಾಗೆ ಬಿಟ್ಟರೆ ಬ್ಯಾಕ್ಟೀರಿಯಾವು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಆದ್ದರಿಂದ ರಾತ್ರಿ ಮಲಗುವ ಮುಂಚೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಒಳ್ಳೆಯದು ಮತ್ತು ಮಲಗುವ ಮೊದಲು ಅಡುಗೆಮನೆಯ ಚಪ್ಪಡಿಗಳು, ಗ್ಯಾಸ್ ಇತ್ಯಾದಿಗಳನ್ನು ಸ್ವಚ್ಛಗೊಳಿಸಬೇಕು.
ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!
ಧರ್ಮಗ್ರಂಥಗಳ ಪ್ರಕಾರ :
ಹಿಂದೂ ಧರ್ಮ ಮತ್ತು ವಾಸ್ತು, ಶುದ್ಧತೆ, ಸ್ವಚ್ಛತೆಗೆ ಸಂಬಂಧಿಸಿದ ನಿಯಮಗಳಿಗೆ ಉಲ್ಲೇಖ ಮಾಡಲಾಗಿದೆ. ಇವುಗಳಲ್ಲಿ ಒಂದು ರಾತ್ರಿ ಮಲಗುವುದಕ್ಕಿಂತ ಮುಂಚೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು.
ಏಕೆಂದರೆ ಎಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಮತ್ತು ಶುದ್ಧತೆ (Cleanliness, holiness and purity) ಇರುತ್ತದೆಯೋ ಅಲ್ಲಿ ಲಕ್ಷ್ಮೀದೇವಿಯೂ ನೆಲೆಸುತ್ತಾಳೆ.
ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಇರುವ ಕೊಳಕು ಪಾತ್ರೆಗಳು ವೇಗವಾಗಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಇನ್ನೂ ಮಂಗಳ ಗ್ರಹವು ಪಾತ್ರೆಗಳ ಅಧಿಪತಿ. ಅಲ್ಲದೆ ಶನಿ ಮತ್ತು ಚಂದ್ರ ಕೂಡ ಕೊಳಕು ಪಾತ್ರೆಗಳನ್ನು ಬಿಟ್ಟರೆ ಕೋಪಗೊಳ್ಳುತ್ತಾರೆ ಎಂದು ಉಲ್ಲೇಖವಿದೆ.
ಅಲ್ಲದೇ ಜೀವನದಲ್ಲಿ ಈ ಗ್ರಹಗಳು ಅಶುಭ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಲಾಗುತ್ತದೆ