ಜನಸ್ಪಂದನ ನ್ಯೂಸ್, ಡೆಸ್ಕ್ : ಟಾಟಾ ಪ್ರಯೋಜಿಸುತ್ತಿರುವ 2025ರ ಐಪಿಎಲ್ ಆವೃತಿಯಲ್ಲಿ ಗುಜರಾತ್ ಟೈಟನ್ಸ್ (GT) ವಿರುದ್ಧ ಸ್ಫೋಟಕ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ರಾಜಸ್ತಾನ ರಾಯಲ್ಸ್ (RR) ತಂಡದ ಬ್ಯಾಟರ್ ವೈಭವ್ ಸೂರ್ಯವಂಶಿ ಕುರಿತು ಓರ್ವ ಮಹಿಳಾ Influencer ಅಶ್ಲೀಲ ಪೋಸ್ಟ್ ಮಾಡಿದ್ದಾರೆ.
2025 ರ TATA IPL ಇದು ಇಂಡಿಯನ್ ಪ್ರೀಮಿಯರ್ ಲೀಗ್ನ 18 ನೇ ಆವೃತ್ತಿಯಾಗಿದೆ. ಈ ಪಂದ್ಯಾವಳಿಯಲ್ಲಿ ಮಾರ್ಚ್ 22 ರಿಂದ ಮೇ 25, 2025 ರವರೆಗೆ 74 ಪಂದ್ಯಗಳಲ್ಲಿ 10 ತಂಡಗಳು ಸ್ಪರ್ಧಿಸುತ್ತಿವೆ.
ಇದನ್ನು ಓದಿ : NPCIL ಯಲ್ಲಿ ಖಾಲಿ ಇರುವ 400 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜೈಪುರದ ಸವಾಯ್ ಮಾನ್ಸಿಂಗ್ (Sawai Mansingh) ಕ್ರೀಡಾಂಗಣದಲ್ಲಿ ಮೊನ್ನೆ ನಡೆದ ಪಂದ್ಯದಲ್ಲಿ Gujarat Titans ತಂಡ ನೀಡಿದ್ದ 210 ರನ್ಗಳ ಗುರಿಯನ್ನು Rajasthan Royals ತಂಡ ಕೇವಲ 15.5 ಓವರ್ನಲ್ಲೇ 212 ರನ್ ಗಳಿಸಿ 8 ವಿಕೆಟ್ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು.
ಗುಜರಾತ್ ಟೈಟನ್ಸ್ ತಂಡ ನೀಡಿದ್ದ 210 ರನ್ಗಳ ಗುರಿ ಮುಟ್ಟಲು ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಕಣಕ್ಕಿಳಿದ್ದಿದ ರಾಜಸ್ಥಾನ ರಾಯಲ್ಸ್ ತಂಡದ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಗೆಲುವಿನ ರೂವಾರಿಗಳು ಸಹ ಆದರು.
ಇದನ್ನು ಓದಿ : ನಾನು ಭಾರತವನ್ನು ದ್ವೇಷಿಸುತ್ತೇನೆ ಎಂದ ವೈದ್ಯೆ ವಿರುದ್ಧ ದಾಖಲಾಯ್ತು FIR.!
ಈ ವೇಳೆ ರಾಜಸ್ತಾನ ಪರ ಜೈಸ್ವಾಲ್ 40 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 70 ರನ್ ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ ಬರೊಬ್ಬರಿ 11 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿದರು.
ಅಶ್ಲೀಲ ಪೋಸ್ಟ್ :
– ಏನಿದು ಅಶ್ಲೀಲ್ ಪೋಸ್ಟ್.?
ಇದೀಗ ಬಿಹಾರ ಮೂಲದ ಕೇವಲ 14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕುರಿತಂತೆ ಈ ಶತಕದ ಬೆನ್ನಲ್ಲೇ ಮಹಿಳಾ Influencer ಓರ್ವರು ತಮ್ಮ twitter (ಎಕ್ಸ್ ಖಾತೆ) ಖಾತೆಯಲ್ಲಿ ನಿಕಿತಾ ಎಂಬ ಖಾತೆದಾರೆ ವೈಭವ್ ಸೂರ್ಯವಂಶಿ ಕುರಿತು ಅಶ್ಲೀಲ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ ಎಪ್ರಿಲ್ 30 ರ ದ್ವಾದಶ ರಾಶಿಗಳ ಫಲಾಫಲ.!
ನಿಕಿತಾ ಎಂಬ ಖಾತೆದಾರೆ ಹಂಚಿಕೊಂಡ ಈ ಎಕ್ಸ್ ಖಾತೆಯ ಪೋಸ್ಟ್ನಲ್ಲಿ ‘ವೈಭವ್ ಸೂರ್ಯವಂಶಿಯ …… ಮೇಲೆ ನಾನೇ ಕುಳಿತುಕೊಳ್ಳುತ್ತೇನೆ’ ಎಂದು ಬರೆದಿದ್ದು, ಈ ಪೋಸ್ಟ್ ಇದೀಗ ವೈರಲ್ ಆಗಿದ್ದು ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪೋಸ್ಟ್ ಇದೀಗ ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ ಮಹಿಳಾ Influencer ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವೇಳೆ ಈ ರೀತಿಯ ಹೇಳಿಕೆಯನ್ನು ಓರ್ವ ವ್ಯಕ್ತಿ 14ರ ಬಾಲಕಿಯ ಕುರಿತು ಮಾಡಿದ್ದರೆ ಇಷ್ಟೋತ್ತಿಗಾಗಲೇ ಆತನ ವಿರುದ್ಧ POCSO ದಾಖಲಾಗುತ್ತಿತ್ತು. ಆದರೆ ಇಲ್ಲಿ ಈ ಪೋಸ್ಟ್ ಮಾಡಿದ್ದು ಓರ್ವ ಮಹಿಳೆ ಹೀಗಾಗಿ ಅವರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಹಲವರು ಕಿಡಿಕಾರಿದ್ದಾರೆ.
Thanks, Nikita.
No big deal.
Hope it doesn’t bring you more trouble.
Choose your words carefully next time.
— Ashwini Roopesh (@AshwiniRoopesh) April 29, 2025
ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!
Thanks, Nikita.
No big deal.
Hope it doesn’t bring you more trouble.
Choose your words carefully next time.
— Ashwini Roopesh (@AshwiniRoopesh) April 29, 2025
ಇದನ್ನು ಓದಿ : Revenue Department : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಕ್ಷಮೆಯಾಚಿಸಿ ಖಾತೆ ಕೂಡ Deactivate :
ಸದ್ಯ ಪೋಸ್ಟ್ ವೈರಲ್ ಆಗುತ್ತಿದಂತೆಯೇ ತಮ್ಮ ತಪ್ಪಿನ ಅರಿವಾಗಿ ನಿಕಿತಾ ವಿವಾದಿತ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದು ಅಲ್ಲದೇ ಎಕ್ಸ್ ಖಾತೆಯನ್ನೇ ಡಿಆಯಕ್ಟಿವೇಟ್ (Deactivate) ಮಾಡಿದ್ದಾರೆ.
ಪೋಸ್ಟ್ ಡಿಲಿಟ್ಗೂ ಮುನ್ನ ನಿಕಿತಾ ತನ್ನ ಕೃತ್ಯಕ್ಕೆ ಕ್ಷಮೆ ಯಾಚಿಸಿ, ‘ನಿನ್ನೆ ರಾತ್ರಿ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ನೋಡಿ ಉತ್ಸಾಹ (Excitement) ದಲ್ಲಿ ಈ ಅಶ್ಲೀಲ ಪೋಸ್ಟ್ ಮಾಡಿದೆ. ಬಳಿಕ ಅದು ತಪ್ಪು ಎಂದು ಗೊತ್ತಾದಾಗ ನನಗೆ ತುಂಬಾ ನಾಚಿಕೆಯಾಗಿದೆ, ಅದಕ್ಕೆ ಕ್ಷಮೆಯಾಚಿಸುತ್ತಿದ್ದೇನೆ” ಎಂದು “X” ನಲ್ಲಿ ಬರೆದುಕೊಂಡಿದ್ದಾರೆ.
ಹಿಂದಿನ ಸುದ್ದಿ : Health : ಹೆಚ್ಚು ಎಣ್ಣೆಯುಕ್ತ ಆಹಾರ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಬಹಳಷ್ಟು ಜನರು ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಲು ಇಷ್ಟ ಪಡುತ್ತಾರೆ. ಬಜ್ಜಿ, ಬೋಂಡಾ, ಪೂರಿಗಳಂತಹ ವಿವಿಧ ಎಣ್ಣೆಯುಕ್ತ ಆಹಾರವನ್ನು (Oily food) ತಿನ್ನಲು ಇಷ್ಟಪಡುತ್ತಾರೆ. ಈ ಎಣ್ಣೆಯುಕ್ತ ಆಹಾರಗಳ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಅಂತ ಗೊತ್ತಿದ್ರೂ ನಾಲಿಗೆಯನ್ನು ನಿಯಂತ್ರಿಸಲು ಸಾಧ್ಯವಾಗುವುದೇ ಇಲ್ಲ (Unable to control the tongue). ನೀವು ಕೂಡ ಹೆಚ್ಚು ಎಣ್ಣೆಯುಕ್ತ ಆಹಾರ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನು ಓದಿ.
ಇದನ್ನು ಓದಿ : ಮಹಿಳಾ PSI ಯಿಂದ ಕಿರುಕುಳ ಆರೋಪ ; ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಯುವಕ.!
ಎಣ್ಣೆಯುಕ್ತ ಆಹಾರಗಳನ್ನು ತಿನ್ನುವುದರಿಂದ ಬಾಯಾರಿಕೆ ಉಂಟಾಗುತ್ತದೆ. ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಹಾಗಾಗಿ ಎಣ್ಣೆಯುಕ್ತ ಆಹಾರವನ್ನು ತಿಂದ ಬಳಿಕ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.
ಮೊದಲು ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ಬಳಿಕ ಬೆಳಿಗ್ಗೆ ಅಥವಾ ರಾತ್ರಿ ಹಣ್ಣಿನ ಸಲಾಡ್ ಅಥವಾ ಬೇಯಿಸಿದ ತರಕಾರಿ ಚೂರುಗಳನ್ನು ತಿನ್ನುವುದು ಒಳ್ಳೆಯದು. ಇವುಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸಕ್ರಿಯವಾಗಿ, ನಮ್ಮ ದೇಹಕ್ಕೆ ಫೈಬರ್ ಮತ್ತು ಪೋಷಕಾಂಶಗಳು ದೊರೆಯುತ್ತವೆ.
ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!
ಹೆಚ್ಚು ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ಬಳಿಕ ಅರ್ಧ ಗಂಟೆ ವಾಕಿಂಗ್ (Half an hour of walking) ಮಾಡುವುದು ಉತ್ತಮ. ಇಲ್ಲದಿದ್ದರೆ, ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುತ್ತದೆ.
ಎಣ್ಣೆಯುಕ್ತ ಆಹಾರವನ್ನು ತಿಂದ ನಂತರ ಮೊಸರು ಸೇವಿಸಿ. ಮೊಸರು ಎಣ್ಣೆಯುಕ್ತ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?
ಎಣ್ಣೆಯುಕ್ತ ಆಹಾರ ಬೇಗ ಜೀರ್ಣವಾಗುವುದಿಲ್ಲ, ಹೀಗಾಗಿ ನೀವು ಎಣ್ಣೆಯುಕ್ತ ಆಹಾರವನ್ನು ಸೇವಿಸಿದ ಬಳಿಕ ಬೆಚ್ಚಗಿನ ನೀರನ್ನು ಕುಡಿಯಿರಿ (drink warm water). ಬೆಚ್ಚಗಿನ ನೀರು ಕುಡಿಯುವುದರಿಂದ ನಾವು ಸೇವಿಸುವ ಆಹಾರವು ದುರ್ಬಲಗೊಂಡು, ಜೀರ್ಣಕ್ರಿಯೆ ಸುಲಭವಾಗುತ್ತದೆ.