Tuesday, May 13, 2025
HomeViral VideoVideo : ಸ್ಕೂಟಿ ರೈಡ್ ಮಾಡಿದ ಹೋರಿ.!
spot_img
spot_img
spot_img

Video : ಸ್ಕೂಟಿ ರೈಡ್ ಮಾಡಿದ ಹೋರಿ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನೀವೂ ಎಂದಾದರು ಹೋರಿ (Bull) ಯೊಂದು ಸ್ಕೂಟ್‌ ರೈಡ್‌ ಮಾಡೋದನ್ನು ನೋಡಿದ್ದೀರಾ.? ಇಲ್ವಾ ಈ ವಿಡಿಯೋ ನೋಡಿ.

ಸಾಮಾಜಿಕ  ಜಾಲತಾಣದಲ್ಲಿ ಇಂತಹ ವಿಡಿಯೋ ಒಂದು ವೈರಲ್‌ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ ಮಾಡಿದ್ದಾರೆ.

ಇದನ್ನು ಓದಿ : ಯುವತಿಯ Private ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿರಾತಕ.!

ಜನಸ್ಪಂದನ ನ್ಯೂಸ್, ಡೆಸ್ಕ್ : ರಸ್ತೆ ಬದಿ ನಿಂತಿದ್ದ ಸ್ಕೂಟಿಯ ಮೇಲೆ ಹೋರಿಯೊಂದು ಸವಾರಿ ಮಾಡಿದ ಘಟನೆ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ನಡೆದಿದ್ದು, ಈ ಕುರಿತು ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಉತ್ತರಾಖಂಡ್‌ನ ರಾಜಧಾನಿಯ ಡೆಹ್ರಾಡೂನ್‌ ಸಮೀಪದ ರಿಷಿಕೇಶದ ಜನವಸತಿ ಪ್ರದೇಶ ಗುಮನಿವಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ನಿಮ್ಮ ಸ್ಮಾರ್ಟ್‌ಫೋನ್‌ Update ಮಾಡದೇ ಇದ್ದರೆ ಏನಾಗುತ್ತೆ.?

ಬೀದಿಯಲ್ಲಿ ತಿರುಗುವ ಹೋರಿ, ಸ್ಕೂಟಿ ನೋಡಿ ಅದಕ್ಕೆ ಏನನಿಸಿತೋ ಏನೋ ಮುಂದಿನ ಕಾಲುಗಳನ್ನು ಸ್ಕೂಟಿಯ ಮೇಲಿರಿಸಿ ಅದನ್ನು ಏರಲು ನೋಡಿದೆ. ಈ ವೇಳೆ ಸ್ಕೂಟಿ ಸ್ಟಾರ್ಟ್ ಆಗಿದ್ದು, ಮುಂದೆ ಹೋಗಿದೆ. ಬೈಕ್ ಮುಂದೆ ಸಾಗಿದಂತೆ ಹೋರಿ ಜೊತೆಯಲ್ಲೇ ಸಾಗಿದೆ.

ಮುಂದಿನ ಎರಡು ಕಾಲು ಸ್ಕೂಟಿ ಮೇಲೆ ಹಿಂದಿನ ಎರಡು ಕಾಲು ನೆಲದ ಮೇಲೆ ಇರಿಸಿಕೊಂಡು ಸ್ಕೂಟಿ ಮೇಲೆ ಹೋರಿ ಮುಂದಕ್ಕೆ ಹೋಗಿದೆ.

ಇದನ್ನು ಓದಿ : ಯುವತಿಯ Private ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿರಾತಕ.!

ಈ ವೇಳೆ ಅದೇ ದಾರಿಯಲ್ಲಿ ಪುಟ್ಟ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಭಯದಿಂದ ಪಕ್ಕಕ್ಕೆ ಸರಿದು ಹೋಗುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು.

ಅಲ್ಲದೇ ಆ ಮಹಿಳೆ ತಿರುಗಿ ನೋಡುವಷ್ಟರಲ್ಲಿ ಈ ಹೋರಿ ಸ್ಕೂಟಿಯ ಜೊತೆ ಮುಂದೆ ಸಾಗಿ ಓಡಿಸಿಕೊಂಡು ಹೋಗಿ ರಸ್ತೆ ಬದಿಯ ಕರೆಂಟ್ ಕಂಬದ ಸಮೀಪ ಬ್ಯಾಲೆನ್ಸ್ ಕಳೆದುಕೊಂಡಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಮೇ 03 ರ ದ್ವಾದಶ ರಾಶಿಗಳ ಫಲಾಫಲ.!

ಸಾಮಾಜಿಕ ಜಾಲತಾಣದಲ್ಲಿ ಸದಾ ವೈರಲ್ ವಿಡಿಯೋಗಳನ್ನು ಪೋಸ್ಟ್ ಮಾಡುವ ಘರ್‌ ಕೆ ಕಲೇಶ್ ಎಂಬ ಎಕ್ಸ್‌ ಪೇಜ್‌ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ನೀವು ಅನೇಕ ಸಲ ಸ್ಕೂಟಿ ಕಳ್ಳತನ ಮಾಡುವ ಜನರನ್ನು ನೋಡಿರಬಹುದು, ಆದರೆ ರಿಷಿಕೇಶದಲ್ಲಿ ನಡೆದ ಕಳ್ಳತನ ಪ್ರಕರಣ ಢಿಪರೆಂಟ್ ಆಗಿದೆ. ಇಲ್ಲಿ ಬೀದಿಯಲ್ಲಿ ಓಡಾಡುವ ಹೋರಿ ಕೂಡ ಸ್ಕೂಟಿ ಓಡಿಸುತ್ತದೆ ಎಂದು ಬರೆದಿದ್ದಾರೆ.

ಈ ವಿಡಿಯೋಗೆ ಬಹಳಷ್ಟು ಕಮೆಂಟ್ ಬಂದಿವೆ. ಬುಲ್ ಕೂಡ ಸೊಗಸಾಗಿ ಸ್ಕೂಟಿ ರೈಡ್ ಮಾಡ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಆ ಹೋರಿ ಸ್ಕೂಟಿಯನ್ನು ಹೆಣ್ಣೆಂದು ಭಾವಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : Belagavi : ಈಜಲು ಹೋದ ಮೂರು ಮಕ್ಕಳು ಕೃಷಿಹೊಂಡದಲ್ಲಿ ಮುಳುಗಿ ಸಾವು.!

ಸ್ಕೂಟಿಯ ಮಾಲೀಕನ ಬಳಿ ಏನೂ ಅಂತ ಹೇಳೋದು ಸ್ಕೂಟಿಯನ್ನು ಕದ್ದಿದ್ದೂ ಮನುಷ್ಯರಲ್ಲ ಅಂತ ಹೇಳೋದಾ.? ಎಂದು ಕೇಳಿದ್ದಾರೆ ಒಬ್ಬರು. ತುಂಬಾ ಜಾಸ್ತಿ ತೂಕ ಇರುವ ಡ್ರೈವರ್ ಇವನು ಎಂದು ಕಮೆಂಟ್ ಮಾಡಿದ್ದಾರೆ ಮತ್ತೊಬ್ಬರು

ಕೇವಲ 32 ಸೆಕೆಂಡುಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಗೂಳಿಯ ಸ್ಕೂಟಿ ಸವಾರಿಯ ವಿಡಿಯೋ ಸೆರೆಹಿಡಿಯಲಾಗಿದೆ. ಈ ಘಟನೆ ಮೇ 2, ಶುಕ್ರವಾರ, ಅಂದರೆ ನಿನ್ನೆ ಮಧ್ಯಾಹ್ನ 10.30 ರ ಸುಮಾರಿಗೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಸ್ಕೂಟ್‌ ಹೋಡೆಯುವ ಗೂಳಿಯ ವಿಡಿಯೋ ನೋಡಿ :

ಹಿಂದಿನ ಸುದ್ದಿ : ನೀವು Night ಊಟ ಮಾಡಿ ಪಾತ್ರೆ ತೊಳೆಯದೇ ಮಲಗುತ್ತೀರಾ.? ಈ ಸುದ್ದಿ ಓದಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರು ರಾತ್ರಿ ಊಟ ಮಾಡಿದ ಬಳಿಕ ಎಷ್ಟೋ ಸಲ ಅಡುಗೆ ಮನೆಯಲ್ಲಿ ಕೊಳಕು ಪಾತ್ರೆಗಳ ರಾಶಿ ಇಟ್ಟು ಮಲಗುತ್ತಾರೆ.

ಆದರೆ ರಾತ್ರಿ ಕೊಳಕಾದ ಪಾತ್ರೆಗಳನ್ನು ತಪ್ಪಾಗಿಯೂ ತೊಳೆಯದೇ ಮಲಗಬಾರದು (Don’t sleep at night without washing dirty dishes, even if you have to). ಹೀಗೆ ಮಾಡುವುದರಿಂದ ನಮಗೆ ನೋವು, ದುಃಖ ಉಂಟಾಗುತ್ತದೆ ಎಂದು ಹಿರಿಯರು ಹೇಳುತ್ತಾ ಬಂದಿದ್ದಾರೆ.

ಇದನ್ನು ಓದಿ : Bike ಮೇಲೆ ನಿಂತು ಸ್ಟಂಟ್ ಮಾಡಲು ಹೋದಾತ ಏನಾದ ಗೊತ್ತಾ.? ಈ ವಿಡಿಯೋ ನೋಡಿ.!

ಹಿರಿಯರ ಈ ಮಾತುಗಳು ನಮಗೆ ವಿಚಿತ್ರವೆನಿಸುತ್ತವೆ. ಆದರೆ ಅದರ ಕಾರಣಗಳು ಮತ್ತು ಅದರಿಂದಾಗುವ ಹಾನಿಯನ್ನು ಶಾಸ್ತ್ರ ಮತ್ತು ವಿಜ್ಞಾನದಲ್ಲಿ (Science and technology) ವಿವರಿಸಲಾಗಿದೆ.

ಈ ಸಲಹೆಯನ್ನು ಅನುಸರಿಸಿದರೆ ನಮಗೆ ಸಂತೋಷ ಸಿಗುತ್ತದೆ ಮತ್ತು ಭವಿಷ್ಯದಲ್ಲಿ ಅಶುಭ ಘಟನೆಗಳಿಂದ ಪಾರಾಗಬಹುದು.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

ರಾತ್ರಿಯಲ್ಲಿ ಊಟ ಮಾಡಿದ ನಂತರ ಪಾತ್ರೆಗಳನ್ನು ಏಕೆ ತೊಳೆದು ಮಲಗಬೇಕು.? ಇಲ್ಲಿದೆ ವೈಜ್ಞಾನಿಕ ಕಾರಣ.

ಊಟದ ಬಳಿಕ ಇಡುವ ಪಾತ್ರೆಗಳಲ್ಲಿ ಅಲ್ಲಲ್ಲಿ ಚೂರು ಆಹಾರ ಪದಾರ್ಥ ಉಳಿದಿರುತ್ತದೆ ಇದು ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ (Increases bacteria).

ಇದನ್ನು ಓದಿ : ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕುರಿತು ಅಶ್ಲೀಲ ಪೋಸ್ಟ್ ಮಾಡಿದ ಮಹಿಳಾ Influencer.!

ಒಂದು ವೇಳೆ ನಾವು ರಾತ್ರಿಯಿಡೀ ಕೊಳಕು ಪಾತ್ರೆಗಳನ್ನು ಹಾಗೆ ಬಿಟ್ಟರೆ ಬ್ಯಾಕ್ಟೀರಿಯಾವು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಆದ್ದರಿಂದ ರಾತ್ರಿ ಮಲಗುವ ಮುಂಚೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಒಳ್ಳೆಯದು ಮತ್ತು ಮಲಗುವ ಮೊದಲು ಅಡುಗೆಮನೆಯ ಚಪ್ಪಡಿಗಳು, ಗ್ಯಾಸ್ ಇತ್ಯಾದಿಗಳನ್ನು ಸ್ವಚ್ಛಗೊಳಿಸಬೇಕು.

ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!

ಧರ್ಮಗ್ರಂಥಗಳ ಪ್ರಕಾರ :
ಹಿಂದೂ ಧರ್ಮ ಮತ್ತು ವಾಸ್ತು, ಶುದ್ಧತೆ, ಸ್ವಚ್ಛತೆಗೆ ಸಂಬಂಧಿಸಿದ ನಿಯಮಗಳಿಗೆ ಉಲ್ಲೇಖ ಮಾಡಲಾಗಿದೆ. ಇವುಗಳಲ್ಲಿ ಒಂದು ರಾತ್ರಿ ಮಲಗುವುದಕ್ಕಿಂತ ಮುಂಚೆ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು.

ಏಕೆಂದರೆ ಎಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಮತ್ತು ಶುದ್ಧತೆ (Cleanliness, holiness and purity) ಇರುತ್ತದೆಯೋ ಅಲ್ಲಿ ಲಕ್ಷ್ಮೀದೇವಿಯೂ ನೆಲೆಸುತ್ತಾಳೆ.

ಇದನ್ನು ಓದಿ : ಕೇವಲ ಬಾಲದ ಮೇಲೆ ದೇಹದ ಭಾರ ಹಾಕಿ ನಿಂತ ಹಾವು ; ನಿಬ್ಬೇರಗಾಗುವ Video.!

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಇರುವ ಕೊಳಕು ಪಾತ್ರೆಗಳು ವೇಗವಾಗಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಇನ್ನೂ ಮಂಗಳ ಗ್ರಹವು ಪಾತ್ರೆಗಳ ಅಧಿಪತಿ. ಅಲ್ಲದೆ ಶನಿ ಮತ್ತು ಚಂದ್ರ ಕೂಡ ಕೊಳಕು ಪಾತ್ರೆಗಳನ್ನು ಬಿಟ್ಟರೆ ಕೋಪಗೊಳ್ಳುತ್ತಾರೆ ಎಂದು ಉಲ್ಲೇಖವಿದೆ.

ಅಲ್ಲದೇ ಜೀವನದಲ್ಲಿ ಈ ಗ್ರಹಗಳು ಅಶುಭ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments