Tuesday, May 13, 2025
HomeGeneral Newsಪ್ರಕೃತಿ ವಿಕೋಪ, ಸುನಾಮಿ, ಭೂಕಂಪ, 2-3 ಮಹಾನ್ ನಾಯಕರ ಅಪಮೃತ್ಯು : ಕೋಡಿಮಠ ಶ್ರೀ
spot_img
spot_img
spot_img

ಪ್ರಕೃತಿ ವಿಕೋಪ, ಸುನಾಮಿ, ಭೂಕಂಪ, 2-3 ಮಹಾನ್ ನಾಯಕರ ಅಪಮೃತ್ಯು : ಕೋಡಿಮಠ ಶ್ರೀ

ಜನಸ್ಪಂದನ ನ್ಯೂಸ್, ಬಾಗಲಕೋಟೆ : ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಸ್ಫೋಟಕ ಭವಿಷ್ಯ ನುಡಿದಿದ್ದು, ಜಗತ್ತಿನ ಎರಡು ‌ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ (Death to great leaders) ಎಂದು ಭವಿಷ್ಯ ನುಡಿದಿದ್ದಾರೆ.

ಬಾಗಲಕೊಟೆಯಲ್ಲಿಂದು ಮಾತನಾಡಿದ ಕೋಡಿಮಠದ ಸ್ವಾಮೀಜಿ, ಪ್ರಪಂಚದಲ್ಲಿ ಎರಡು ‌ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ.

ಇದನ್ನು ಓದಿ : ಉದ್ಯೋಗದ ನೆಪವೊಡ್ಡಿ ಅಪ್ರಾಪ್ತೆ ಜತೆ ಲೈಂಗಿಕ ಸಂಪರ್ಕ ; ಉದ್ಯಮಿ Arrest.! 

ಅವರನ್ನು ಹತ್ಯೆ ಮಾಡಬಹುದು ಅಥವಾ ಅಪಘಾತದಲ್ಲಿ ಅವರು ‌ಸಾಯಬಹುದು (Can be murdered or die in an accident). ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಹಿಮಾಲಯದಲ್ಲಿ ಸುನಾಮಿ ಆದೀತು, ಗೌರಿಶಂಕರ ಶಿಖರ ಶಿವಾ ಶಿವಾ ಎಂದೀತು, ದೆಹಲಿಗೆ ಸುನಾಮಿಯಿಂದ (Tsunami) ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಜಲಬಾಧೆಯ ಅಪಾಯ (Danger of waterlogging) ಇದೆ ಎಂದು ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.

ಇದನ್ನು ಓದಿ : Attack : ಪಹಲ್ಗಾಮ್‌ ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ಪಲಾಯನ.?

ನದಿಯನ್ನು ಈಜಿದರೆ ಬದಲಾವಣೆ ಆಗಬಹುದು. ಹಾಲುಮತದವರಿಗೆ ಅಧಿಕಾರ‌ ಬಂದರೆ ಬಿಡಿಸಿಕೊಳ್ಳುವುದು ಕಷ್ಟ. ಅವರಾಗಿಯೇ ಬಿಡಬೇಕು ಯಾಕೆಂದರೆ ವಿಜಯನಗರ ಸಾಮ್ರಾಜ್ಯ ಕಟ್ಟಿದ್ದು ಹಕ್ಕಬುಕ್ಕರು.

ಇವತ್ತು ಅದೇ ಚಿಹ್ನೆ ‌ಇರೋದು‌ ಮೈಸೂರು ದಸರಾ ಅದೇ ಚಿಹ್ನೆಯಲ್ಲಿ‌ ನಡಿತಿರೋದು. ಹಾಲು ಕೆಟ್ಟರು ಹಾಲು‌ಮತ‌ ಕೆಡೋದಿಲ್ಲ. ಅಂತವರ ಕೈಯಲ್ಲಿ ಅಧಿಕಾರ ಸಿಕ್ಕಿರೋದರಿಂದ‌ ಬಿಡಿಸೋದು ಕಷ್ಟ. ಅವರಾಗಿಯೇ ಬಿಟ್ರೆ ನಿಮಗೆ ಸಿಗುತ್ತದೆ ಎಂದು CM ಬದಲಾವಣೆ ಕುರಿತು ಭವಿಷ್ಯ ನುಡಿದಿದ್ದಾರೆ.

ಹಿಂದಿನ ಸುದ್ದಿ : ಗಂಟೆಗಟ್ಟಲೆ PUBG ಆಡುವವರೇ ಈ ಸುದ್ದಿಯನ್ನೊಮ್ಮೆ ಓದಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಪಬ್ಜಿ ಆಟದ ದಾಸನಾಗಿದ್ದ ಯುವಕನೋರ್ವ ಗಂಟೆಗಟ್ಟಲೆ ಕುಳಿತಲ್ಲೇ ಕುಳಿತು PUBG ಆಟ ಆಡಿದ ಪರಿಣಾಮ ಪಾರ್ಶ್ವವಾಯುವಿಗೆ ತುತ್ತಾಗಿ (Paralyzed) ಹಾಸಿಗೆ ಹಿಡಿದ ಆಘಾತಕಾರಿ ಘಟನೆ ನಡೆದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ದಿನಕ್ಕೆ 12 ಗಂಟೆಗಳ ಕಾಲ ನಿರಂತರವಾಗಿ PUBG ಆಡಿದ ಬಳಿಕ ಅವನಿಗೆ ನಡೆಯಲು ಸಾಧ್ಯವಾಗಲಿಲ್ಲ (Couldn’t walk) ಎಂದು ವರದಿಯಾಗಿದೆ.

ಇದನ್ನು ಓದಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ SC ಸ್ಥಾನಮಾನ ಸಿಗುವುದಿಲ್ಲ : ಹೈಕೋರ್ಟ್

ಆತನ ಪರಿಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ಆತನು ಮೂತ್ರ ವಿಸರ್ಜಿಸಲು ಸಹ ಸಾಧ್ಯವಾಗಲಿಲ್ಲ. ಆತನ ಸ್ಥಿತಿ ನೋಡಿ ಆತಂಕಗೊಂಡ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಯುವಕನನ್ನು ಚೆಕಪ್ ಮಾಡಿದ ವೈದ್ಯರು ಆತನಿಗೆ ಪಾರ್ಶ್ವವಾಯು ಬಂದಿದೆ ಎಂದು ಹೇಳಿದರು.

ಒಂದು ವರ್ಷದಿಂದ ಕೋಣೆಯಲ್ಲಿ ಒಂಟಿಯಾಗಿರುತ್ತಿದ್ದ ಯುವಕ, ಎಲ್ಲಿಯೂ ಹೋಗುತ್ತಿರಲಿಲ್ಲ. ಯಾವಾಗಲೂ PUBG ಆಟದಲ್ಲಿಯೇ ಮುಳುಗಿರುತ್ತಿದ್ದ. ದಿನಕ್ಕೆ 12 ಗಂಟೆಗಳ ಕಾಲ PUBG ಆಡುತ್ತಿದ್ದನು ಎಂಬ ವಿಚಾರ ತಿಳಿದು ಸ್ವತಃ ವೈದ್ಯರೇ ಶಾಕ್ ಆದರು.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

ಯುವಕನಿಗೆ ಭಾಗಶಃ ಪಾರ್ಶ್ವವಾಯು ಸಮಸ್ಯೆ ಉಂಟಾಗಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು (The surgery was successful), ಯುವಕನ ಆರೋಗ್ಯ ಸುಧಾರಿಸುತ್ತಿದೆ ಎಂದು ಅ ವೈದ್ಯರು ಹೇಳಿದ್ದಾರೆ ಎಂದು ವರದಿಯಾಗಿದೆ.

ಯುವಕ ಅತಿಯಾದ ಮೊಬೈಲ್ ಗೇಮಿಂಗ್‌ನಿಂದಾಗಿ ಕೈಫೋ- ಸ್ಕೋಲಿಯೋಸಿಸ್ ಬೆನ್ನುಮೂಳೆಯ ವಿರೂಪತೆಯಿಂದ ಬಳಲುತ್ತಿದ್ದರು ಎಂದು ಭಾರತೀಯ ಬೆನ್ನುಮೂಳೆಯ ಗಾಯಗಳ ಕೇಂದ್ರ (ISIC) ಮಾಹಿತಿ ನೀಡಿದೆ.

ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!

ಈ ಗಂಭೀರ ಪರಿಸ್ಥಿತಿಯಲ್ಲಿ ಬೆನ್ನುಮೂಳೆಯು ಮುಂದಕ್ಕೆ ಅಥವಾ ಬದಿಗಳಿಗೆ ಬಾಗಿರುತ್ತದೆ. ಯುವಕನ MRI Scan ನಲ್ಲಿ ಬೆನ್ನುಮೂಳೆಯಲ್ಲಿನ ಎರಡು ಮೂಳೆಗಳಿಗೆ ಟಿಬಿ ಸೋಂಕು ತಗುಲಿದ್ದು, ಕೀವು ಸಂಗ್ರಹವಾಗಿ ಬೆನ್ನುಹುರಿಯ ಮೇಲೆ ತೀವ್ರ ಒತ್ತಡ (Severe pressure on the spinal cord) ಹೇರುತ್ತಿರುವುದು ಕಂಡುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments