Tuesday, May 13, 2025
HomeViral VideoMobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!
spot_img
spot_img
spot_img

Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!

ಜ‌ನಸ್ಪಂದನ ನ್ಯೂಸ್‌, ಡೆಸ್ಕ್‌ : Mobile ಕಸೆದುಕೊಂಡ ಹಿನ್ನಲೆಯಲ್ಲಿ ಅಧ್ಯಾಪಕಿಯನ್ನು ವಿದ್ಯಾರ್ಥಿನಿಯೋರ್ವಳು ಚಪ್ಪಿಲಿಯಿಂದ ಹೊಡೆದ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಗುರು ಮತ್ತು ಶಿಷ್ಯರ ನಡುವಿನ ಸಂಬಂಧವು ಅತ್ಯಂತ ಪ್ರಾಚೀನ ಮತ್ತು ಪವಿತ್ರವಾದದ್ದು. ಇದು ಕೇವಲ ಬೋಧನೆ ಮತ್ತು ಕಲಿಕೆಯ ಸಂಬಂಧವಲ್ಲ, ಬದಲಿಗೆ ಅನ್ಯೋನ್ಯತೆ, ಭಕ್ತಿ ವಿಶ್ವಾಸ ಮತ್ತು ಭಕ್ತಿಯ ಸಂಬಂಧವೂ ಆಗಿದೆ.

ಇದನ್ನು ಓದಿ : Astrology : ಎಪ್ರಿಲ್‌ 22 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ದೊಡ್ಡವರು ಒಂದು ಮಾತು ಹೇಳಿದ್ದಾರೆ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ. ಹಿಂದೆಲ್ಲಾ ಗುರು ಎಂದರೆ ಭಯ, ಭಕ್ತಿ ಇತ್ತು. ಆದರೆ, ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಅದು ಸಂಪೂರ್ಣ ಕಣ್ಮರೆಯಾಗಿದೆ ಅಂದರೆ ತಪ್ಪಲ್ಲ.

ಇತ್ತೀಚಿನ ದಿನಗಳಲ್ಲಿ ಗುರು-ಶಿಷ್ಯ ಸಂಬಂಧವು ಹಿಂದಿನಂತೆ ಭಾವನಾತ್ಮಕ ಅಥವಾ ಪವಿತ್ರವಾಗಿಲ್ಲ ಎಂಬ ಗ್ರಹಿಕೆ ಬೆಳೆಯುತ್ತಿದೆ, ಆದರೆ ಅದರ ತಾತ್ವಿಕ ಮೌಲ್ಯವು ಇಂದಿಗೂ ಅಸ್ತಿತ್ವದಲ್ಲಿದೆ – ಬದಲಾದ ರೂಪದಲ್ಲಿ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಸದ್ಯ ವಿಡಿಯೋ ಒಂದು ವೈರಲ್‌ ಆಗಿದ್ದು, ಅದು ಇಂದಿನ ಕೆಲ ವಿದ್ಯಾರ್ಥಿಗಳ ಮನೋಭಾವವನ್ನು ತಿಳಿಸುತ್ತದೆ.

ಇದನ್ನು ಓದಿ : ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಭರ್ಜರಿ ಉದ್ಯೋಗವಕಾಶ : 67000 ರೂ. ಸಂಬಳ.!

ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಮಹಿಳಾ ಉಪನ್ಯಾಸಕಿಯೊಬ್ಬರು ಅದನ್ನು ಗಮನಿಸಿದ್ದಾರೆ. ನಂತರ ವಿದ್ಯಾರ್ಥಿನಿಯನ್ನು ತಡೆದು ಆಕೆಯ ಫೋನ್ ಕಸಿದುಕೊಂಡಿದ್ದಾರೆ.

ಫೋನ್ ಕಸಿದುಕೊಂಡಿದ್ದರಿಂದ ಕೋಪಗೊಂಡ ವಿದ್ಯಾರ್ಥಿನಿ ಸ್ಥಳದಲ್ಲೇ ಉಪನ್ಯಾಸಕಿಯೊಂದಿಗೆ ವಾಗ್ವಾದಕ್ಕಿಳಿದ್ದಾಳೆ. ಈ ವೇಳೆ ವಿದ್ಯಾರ್ಥಿನಿ ಉಪನ್ಯಾಸಕಿಯನ್ನು ತನಗೆ ಫೋನ್ ನೀಡುವಂತೆ ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದ್ದಾಳೆ.

ಇದನ್ನು ಓದಿ : Health : ಕಲ್ಲಂಗಡಿ ತಿಂದ ಬಳಿಕ ಇವುಗಳನ್ನು ಸೇವಿಸಲೇಬೇಡಿ.!

ಅವಾಚ್ಯ ಶಬ್ದಗಳಿಂದ ವಿದ್ಯಾರ್ಥಿನಿ ನಿಂದಿಸಿದ ಪರಿಣಾಮ ಮತ್ತಷ್ಟು ಕೋಪಗೊಂಡ ಉಪನ್ಯಾಸಕಿ ಫೋನ್ ನೀಡಲು ನಿರಾಕರಿಸಿದ್ದಾರೆ. ಆಗ ವಿದ್ಯಾರ್ಥಿನಿ ತನ್ನ ಒಂದು ಚಪ್ಪಲಿಯನ್ನು ತೆಗೆದು ಉಪನ್ಯಾಸಕಿಯ ಮೇಲೆ ಹಲ್ಲೆ ಮಾಡಿದಳು. ಈ ಸಮಯದಲ್ಲಿ, ಉಪನ್ಯಾಸಕಿಯೂ ಆಕೆಯ ವಿರುದ್ಧ ಪ್ರತಿದಾಳಿ ನಡೆಸಿದ್ದಾರೆ.

ವಿದ್ಯಾರ್ಥಿನಿ ಮತ್ತು ಉಪನ್ಯಾಸಕಿ ನಡುವಿನ ಗಲಾಟೆ ಕಂಡು ಸಹ ವಿದ್ಯಾರ್ಥಿಗಳು ಮತ್ತು ಇನ್ನೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಿದರು. ಆ ಸಮಯದಲ್ಲಿ ಅಲ್ಲೇ ಇದ್ದ ಮತ್ತೊಬ್ಬ ವಿದ್ಯಾರ್ಥಿ ಘಟನೆಯನ್ನು ರೆಕಾರ್ಡ್ ಮಾಡಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನು ಓದಿ : ‌Real Hero : ವಿದ್ಯುತ್​ ಶಾಕ್​ನಿಂದ ಬಾಲಕನನ್ನು ರಕ್ಷಿಸಿದ ಯುವಕ, ವಿಡಿಯೋ ವೈರಲ್.!

ಕಾಲೇಜು ಆಡಳಿತ ಮಂಡಳಿ ಇನ್ನೂ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಆದಾಗ್ಯೂ, ನೆಟಿಜನ್‌ಗಳು ಮಾತ್ರ ವಿದ್ಯಾರ್ಥಿನಿಯ ಕ್ರಮವನ್ನು ಟೀಕಿಸುತ್ತಿದ್ದಾರೆ.

ಹಿಂದಿನ ಸುದ್ದಿ : Video : ಶ್ರೀಕೃಷ್ಣ ದೇವರಾಯನ ಸಮಾಧಿಯ ಮೇಲೆ ಮಾಂಸ ಕಟ್ ; ಭಾರೀ ಆಕ್ರೋಶ.!

ಜನಸ್ಪಂದನ ನ್ಯೂಸ್, ಗಂಗಾವತಿ : ಕನ್ನಡ ರಾಜ್ಯ ರಮಾರಮಣ ಎಂದೇ ಬಿರುದಾಂಕಿತ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಯಾಗಿ ಮೆರೆದಿದ್ದ ಶ್ರೀಕೃಷ್ಣ ದೇವರಾಯನ ಸಮಾಧಿಯ ಮೇಲೆ ಮಾಂಸ ಕಟ್ ಮಾಡಿ ಅಪಚಾರ ಎಸಗಿದ ಘಟನೆ ನಡೆದಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಘಟನೆಯನ್ನು ಖಂಡಿಸಿ ತಮ್ಮ “X” ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಘಟನೆಯ ಬಗ್ಗೆ ಅವರು ಭಾರೀ ಆಘಾತ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ‌Real Hero : ವಿದ್ಯುತ್​ ಶಾಕ್​ನಿಂದ ಬಾಲಕನನ್ನು ರಕ್ಷಿಸಿದ ಯುವಕ, ವಿಡಿಯೋ ವೈರಲ್.!

ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಯಾಗಿ 1509 ರಿಂದ 1529ರವರೆಗೆ ಮಹಾನ್ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿ ಮೆರೆದಿದ್ದ ಈ ಚಕ್ರವರ್ತಿಯ ಸಮಾಧಿಗೆ ಮಾಡಿರುವ ಅಪಮಾನ, ತಕ್ಷಣವೇ ಸಮಾಧಿಯನ್ನು ಕ್ಲೀನ್‌ ಮಾಡಬೇಕೆಂದಿದ್ದಾರೆ.

ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರನಾಗಿದ್ದ ಶ್ರೀ ಕೃಷ್ಣದೇವರಾಯರ ಸಮಾಧಿ ಕೊಪ್ಪಳ‌ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿಯ ತಟದಲ್ಲಿದೆ.

ಇದನ್ನು ಓದಿ : ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್

ಇಂತಹ ಮಹಾನ್ ವ್ಯಕ್ತಿಯ ಸಮಾಧಿಯ ಈ ಸ್ಥಳವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಪರಿವರ್ತನೆ ಮಾಡಿದ್ದು ಕೃಷ್ಣದೇವರಾಯರಿಗೆ ಮಾಡಿದ ಅಪಮಾನ.

ಅನೇಕ ಹಿಂದೂ ದೇವಾಲಯಗಳನ್ನು ಕೆಡವಿ ದೇಶದ ಸಂಪತ್ತು ದೋಚಿದ ಔರಂಗಜೇಬನ ಸಮಾಧಿಯನ್ನು ಭಾರತೀಯ ಪುರಾತತ್ವ ಇಲಾಖೆ ರಕ್ಷಣೆ ಮಾಡುತ್ತದೆ. ಆದರೆ, ಇಂತಹ ಮಹಾ ಪರಾಕ್ರಮಿ,ಕಲೆ ಸಾಹಿತ್ಯ ಪೋಷಕ ದೇವರಾಯರ ಸಮಾಧಿಗೆ ಯಾಕೆ ನಿರ್ಲಕ್ಷ್ಯ.?

ಇದನ್ನು ಓದಿ : Ex ಲವರ್‌ನಿಂದ ಬ್ಲ್ಯಾಕ್‌ಮೇಲ್‌ ; ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ.!

ಈ ಘಟನೆ ಕನ್ನಡಿಗರಿಗಷ್ಟೇ ಅಲ್ಲ, ರಾಷ್ಟ್ರಕ್ಕೆ ಮಾಡಿದ ಅಪಮಾನ ಮಾಂಸವನ್ನು ಮಾರುವ ಮೂಲಕ ಸ್ಥಳದ ಪಾವಿತ್ರ್ಯ ಹಾಳು ಮಾಡುತ್ತಿರೋ ಜಾಗ ಖಾಲಿ ಮಾಡಲು ಸೂಚಿಸಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಕೂಡಲೇ ಜಾಗ ಖಾಲಿ ಮಾಡಲು ಸೂಚಿಸಬೇಕು ಹಾಗೂ ಇಲ್ಲಿ ನೈರ್ಮಲ್ಯ ಮತ್ತು ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಲಿ. (ಏಜೇನ್ಸಿಸ್)

ವಿಡಿಯೋ ನೋಡಿ : 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments