Saturday, June 14, 2025

Janaspandhan News

HomeGeneral NewsBengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?
spot_img
spot_img

Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?

ಜನಸ್ಪಂದನ ನ್ಯೂಸ್‌, ಬೆಂಗಳೂರು : ಮದ್ಯದ ನಶೆಯಲ್ಲಿದ ವ್ಯಕ್ತಿಯೋರ್ವ ಪೊಲೀಸರ ಮೇಲೆಯೇ ಕಾರು ಹರಿಸಲು ಯತ್ನಿಸಿದ ಘಟನೆಯೊಂದು ಬೆಂಗಳೂರಿನ (Bengaluru) ಕೋರಮಂಗಲದ (Koramangal) ಜ್ಯೋತಿ ನಿವಾಸ ಕಾಲೇಜು ಬಳಿ ನಡೆದಿದೆ.

ಮದ್ಯದ ನಶೆಯಲ್ಲಿದ ಈ ವ್ಯಕ್ತಿ ಒನ್​ ವೇ (One way) ಯಲ್ಲಿ ಕಾರು ನುಗ್ಗಿಸಿ ಹಲವು ವಾಹನಗಳಿಗೆ ಹಾನಿ ಉಂಟು ಮಾಡಿದ್ದಲ್ಲದೆ, ತಡೆಯಲು ಬಂದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ್ದಾನೆ. ಆ ಆರೋಪಿಯನ್ನು ನಂದಕೃಷ್ಣ ಎಂದು ಗುರುತಿಸಲಾಗಿದೆ.

ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!
Bengaluru :

ಮೇ 25, 2025 ರಂದು, ಬೆಳಗಿನ ಜಾವ 1:30 ರ ಸುಮಾರಿಗೆ, ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನ ಎದುರಿನ ಕೋರಮಂಗಲದಲ್ಲಿ ಅಜಾಗರೂಕತೆಯಿಂದ ಕುಡಿದು ವಾಹನ ಚಲಾಯಿಸಿದ ಆಘಾತಕಾರಿ ಘಟನೆ ನಡೆದಿದೆ.

ತಡರಾತ್ರಿಯ ಪಾರ್ಟಿಯಿಂದ ಹಿಂತಿರುಗುತ್ತಿದ್ದಾಗ ಅತಿಯಾದ ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ತನ್ನ ವಾಹನದ ನಿಯಂತ್ರಣ ಕಳೆದುಕೊಂಡು ಅತಿ ವೇಗದಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳಿಗೂ ಡಿಕ್ಕಿ ಹೊಡೆದಿದ್ದಾನೆ. ಚಾಲಕ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿ ವಹಿಸಲಿಲ್ಲ, ರಸ್ತೆಯಲ್ಲಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಹಲವಾರು ಜನರು ಗಾಯಗೊಂಡಿದ್ದಾರೆ.

ಇದನ್ನು ಓದಿ : Rave party : 7 ಯುವತಿಯರು ಸೇರಿ 30 ಜನ ಪೊಲೀಸ್‌ ವಶಕ್ಕೆ.!

ಕಾರು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ನೇರವಾಗಿ ಡಿಕ್ಕಿ ಹೊಡೆದು ಕಾರಣವಾದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು. ವಾಹನವು ಜನದಟ್ಟಣೆಯ ಪ್ರದೇಶದಲ್ಲಿ ಅಜಾಗರೂಕತೆಯಿಂದ ಚಲಿಸಿದ್ದರಿಂದ ಹಲವಾರು ಸಾರ್ವಜನಿಕರು ಗಾಯಗೊಂಡರು. ಚಾಲಕ ನಿಯಂತ್ರಣ ಮೀರಿ ಕುಡಿದಿದ್ದು, ಆತನಿಗೆ ಸುತ್ತಮುತ್ತಲಿನ ಬಗ್ಗೆ ಸಂಪೂರ್ಣವಾಗಿ ತಿಳುವಳಕೆ ಇದ್ದಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ನಂತರ ಪೊಲೀಸರು ಕಾರಿನ ಗಾಜು ಒಡೆದು ನಂದಕೃಷ್ಣನನ್ನು ಹೊರತೆಗೆಯುತ್ತಿರುವ ವಿಡಿಯೋವನ್ನು ಕಾಣಬಹುದಾಗಿದೆ.

ಇದನ್ನು ಓದಿ : Ghaziabad : ಪೊಲೀಸ್ ಠಾಣೆಯ ಮೇಲ್ಛಾವಣಿ ಕುಸಿದು ಪಿಎಸ್‌ಐ ಸಾವು.!

ಈ ವಿಡಿಯೋವನ್ನು “Karnataka Portfolio” ಎಂಬ X ಖಾತೆಯಲ್ಲಿ ಹಂಚಿಕೊಳ್ಖಲಾಗಿದ್ದು, ಈ ವಿಡಿಯೋವನ್ನು 19.4K ಗೂ ಹೆಚ್ಚು Views ಪಡೆದುಕೊಂಡಿದೆ.

ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಈ ಘಟನೆ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದ್ದು, ಕಠಿಣ ಕ್ರಮ ಕೈಗೊಳ್ಳುವ ಮೊದಲು ಇನ್ನೂ ಎಷ್ಟು ಜೀವಗಳನ್ನು ಅಪಾಯಕ್ಕೆ ಸಿಲುಕಬೇಕೋ ಏನೋ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.
ವಿಡಿಯೋ ನೋಡಿ :

ಹಿಂದಿನ ಸುದ್ದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ ನಲ್ಲಿ ಉದ್ಯೋಗವಕಾಶ.!

ಜನಸ್ಪಂದನ ನ್ಯೂಸ್‌,ನೌಕರಿ : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL) ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Video : ರೆಡ್ ಸಿಗ್ನಲ್ ಜಂಪ್ ; ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಬೈಕ್‌.
NIACL ಹುದ್ದೆಗಳ ಕುರಿತು ಮಾಹಿತಿ :

ಇಲಾಖೆ ಹೆಸರು : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL).
ಹುದ್ದೆಗಳ ಸಂಖ್ಯೆ : 500
ಹುದ್ದೆಗಳ ಹೆಸರು : ಅಪ್ರೆಂಟಿಸ್/Apprentice
ಉದ್ಯೋಗ ಸ್ಥಳ : ಮುಂಬೈ (ಮಹಾರಾಷ್ಟ್ರ).
ಅಪ್ಲಿಕೇಶನ್ ಮೋಡ್ : Online ಮೋಡ್.

ವೇತನ ಶ್ರೇಣಿ :
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.9000/- ಸ್ಟೈಫಂಡ್ ನೀಡಲಾಗುವುದು.
ಇದನ್ನು ಓದಿ : Belagavi : ಇನ್ನೇರಡೇ ವರ್ಷದಲ್ಲಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಹೊಸ ಲುಕ್.!
ವಯೋಮಿತಿ :
  • 21–30 ವರ್ಷಗಳು (ಜೂನ್ 2, 1995 ಮತ್ತು ಜೂನ್ 1, 2004 ರ ನಡುವೆ ಜನಿಸಿದವರು/
    ದಿನಾಂಕ : ಜೂನ್ 1, 2025 ರಂತೆ)
ವಯೋಮಿತಿ ಸಡಿಲಿಕೆ :

• ಎಸ್ಸಿ/ಎಸ್ಟಿ ಅಭ್ಯರ್ಥಿಗಳು : 05 ವರ್ಷಗಳು.
• ಒಬಿಸಿ ಅಭ್ಯರ್ಥಿಗಳು : 03 ವರ್ಷಗಳು.

ವಿದ್ಯಾರ್ಹತೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ (Degree) ಪಾಸ್ ಮಾಡಿರಬೇಕು.

ಇದನ್ನು ಓದಿ : Health : ಈ ಜ್ಯೂಸ್‌ನಲ್ಲಿದೆ ಬ್ಲಡ್ ಕ್ಯಾನ್ಸರ್ ಗುಣಪಡಿಸುವ ಶಕ್ತಿ.!
ಅರ್ಜಿ ಶುಲ್ಕ:

ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ : ರೂ. 944/-
SC / ST / ಮಹಿಳೆಯರು : ರೂ. 708/-
ಪಿಡಬ್ಲ್ಯೂಬಿಡಿ : ರೂ. 472/-
ಪಾವತಿ ವಿಧಾನ : ಆನ್‌ಲೈನ್ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ)

ಆಯ್ಕೆ ಪ್ರಕ್ರಿಯೆ :
  • ಲಿಖಿತ ಪರೀಕ್ಷೆ ಮತ್ತು
  • ಸಂದರ್ಶನ
ಇದನ್ನು ಓದಿ : Vedio : ಚಲಿಸುವ ಬೈಕ್‌ ಮೇಲೆಯೇ ಪತಿಯನ್ನು ಚಪ್ಪಲಿಯಿಂದ ಬಡೆದ ಪತ್ನಿ.!

ಅರ್ಜಿ ಸಲ್ಲಿಸುವುದು ಹೇಗೆ?

  • ಕೆಳಗಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು Download ಮಾಡಿ.
  • ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
  • ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ link ನ್ನು ಕ್ಲಿಕ್ ಮಾಡಿ.
  • ಕೊಟ್ಟಿರುವ Form ನ್ನು ಸರಿಯಾಗಿ ಭರ್ತಿ ಮಾಡಿ.
  • ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ).
  • ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
  • ಮತ್ತೊಮ್ಮೆ ಪರಿಶೀಲಿಸಿ ಮತ್ತು Form ನ್ನು ಸಲ್ಲಿಸಿ.
  • ಅಂತಿಮವಾಗಿ Print ತೆಗೆಯಲು ಮರೆಯಬೇಡಿ.
ಇದನ್ನು ಓದಿ : Marriage : ಕೊನೆ ಕ್ಷಣದಲ್ಲಿ ಮುರಿದು ಬಿದ್ದ ಮದುವೆ ; ಕಾರಣವೇನು ಗೊತ್ತಾ.?
ಪ್ರಮುಖ ದಿನಾಂಕಗಳು :
  • ಅಧಿಸೂಚನೆ ಬಿಡುಗಡೆ : 22 ಮೇ 2025.
  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 6 ಜೂನ್ 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಜೂನ್ 2025 (ರಾತ್ರಿ 11:59).
  • ಲಿಖಿತ ಪರೀಕ್ಷೆಯ ದಿನಾಂಕ : ಪ್ರಕಟಿಸಲಾಗುವುದು.
ಪ್ರಮುಖ ಲಿಂಕ್‌ಗಳು :

• ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್‌ಸೈಟ್: newindia.co.in
• ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ.

ಇದನ್ನು ಓದಿ : Job : ನೇರ ಸಂದರ್ಶನದ ಮೂಲಕ ರಾಜ್ಯದ ಸಿಲ್ಕ್ ಬೋರ್ಡ್‌ನಲ್ಲಿ ನೇಮಕಾತಿ.!
ಪರೀಕ್ಷಾ ಪ್ಯಾಟರ್ನ್‌ :
Subject Questions Marks Duration
General / Financial Awareness 25 25
General English 25 25
Quantitative & Reasoning Aptitude 25 25
Computer Knowledge 25 25
Total 100 100 1 Hour

Disclaimer : The above given information is available On online, candidates should check it properly before applying. This is for information only.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments