Saturday, June 14, 2025

Janaspandhan News

HomeGeneral NewsMarriage : ಕೊನೆ ಕ್ಷಣದಲ್ಲಿ ಮುರಿದು ಬಿದ್ದ ಮದುವೆ ; ಕಾರಣವೇನು ಗೊತ್ತಾ.?
spot_img
spot_img

Marriage : ಕೊನೆ ಕ್ಷಣದಲ್ಲಿ ಮುರಿದು ಬಿದ್ದ ಮದುವೆ ; ಕಾರಣವೇನು ಗೊತ್ತಾ.?

ಜನಸ್ಪಂದನ ನ್ಯೂಸ್, ಹಾಸನ : ಹಾಸನ ನಗರದಲ್ಲಿ ಕೊನೆ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿದ್ದು, ಈ ಮದುವೆ ಮುರಿದು ಬೀಳಲು ಕಾರಣವೇನು ಅಂತ ಗೊತ್ತಾ.?

ಹಾಸನದ (Hassan) ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಭ ಮುಹೂರ್ತದಲ್ಲಿ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಮುರಿದು ಬಿದ್ದ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕು ಈಶ್ವರಹಳ್ಳಿ ಕೂಡುಗೆ ಗ್ರಾಮದ ಯುವಕ, ಶಿಕ್ಷಕ ವೇಣುಗೋಪಾಲ್ ಮತ್ತು ಬೂವನಹಳ್ಳಿಯ ಸ್ನಾತಕೋತ್ತರ ಪದವೀಧರೆ ಪಲ್ಲವಿ ಮದುವೆ ಶುಕ್ರವಾರ ನಿಗದಿಯಾಗಿತ್ತು.

ಇದನ್ನು ಓದಿ : ಪಾಕ್ ಪರ ಬೇಹುಗಾರಿಕೆ : ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ಜನ ಅರೆಸ್ಟ್.!

ತಾಳಿ ಕಟ್ಟುವ ಕೆಲ ಕ್ಷಣಗಳ ಮುನ್ನ ವಧುವಿಗೆ ಪ್ರಿಯಕರನ ಕಾಲ್ ಬಂದಿದೆ. ತಕ್ಷಣವೇ ನನಗೆ ಈ ಮದುವೆ ಬೇಡ (No marriage) ಎಂದ ಯುವತಿ ಹಸೆಮಣೆ ಮೇಲಿಂದ ಎದ್ದು ಕೊಠಡಿಗೆ ತೆರಳಿದಳು.

ಆರಂಭದಲ್ಲಿ ನಿಜವಾದ ಕಾರಣ ಹೇಳದೆ ಮದುವೆ ಬೇಡ ಎಂದಿದ್ದಾಳೆ. ತಾಳಿ ಕಟ್ಟಲು ಮುಂದಾದ ವರ ನಿಜವಾಗಿಯೂ ಮದುವೆ ಇಷ್ಟವಿದೆಯಾ ಎಂದು ಹಲವರು ಬಾರಿ ಪ್ರಶ್ನಿಸಿದ್ದಾನೆ. ತನಗೆ ಮದುವೆ ಇಷ್ಟವಿಲ್ಲ I (don’t want marriage) ಎಂದಿದ್ದ ವಧುವಿನ ಬಳಿಕ ಕಾರಣವನ್ನೂ ಕೇಳಿದ್ದಾನೆ.

ಇದನ್ನು ಓದಿ : Health : ಬೆಳಿಗ್ಗೆ ಈ ನೀರು ಕುಡಿದರೆ ಸಾಕು ; ಬೆಣ್ಣೆಯಂತೆ ಕರಗಿ ಹೋಗುವುದು ಬೊಜ್ಜು.!

ಇತ್ತ ಪೋಷಕರು, ಕುಟುಂಬಸ್ಥರು ವಧುವನ್ನು ಮದುವೆ ಮಾಡಿಕೊ ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಗದರಿಸಿ, ಬೆದರಿಸಿ ಮದುವೆ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಆಕೆ ತಾನು ಬೇರೊಬ್ಬ ಹುಡುಗನನ್ನು ಲವ್ ಮಾಡುತ್ತಿರುವುದಾಗಿ ತಿಳಿಸಿದ್ದಾಳೆ.

ಕೈಯಲ್ಲಿ ತಾಳಿ ಹಿಡಿದು ನಿಂತ ವರನಿಗೆ ತಾಳಿ ಕಟ್ಟಲು ಸಾಧ್ಯವಾಗಲಿಲ್ಲ. ಪೋಷಕರು, ಆಪ್ತರು ತಾಳಿ ಕಟ್ಟಲು ಸೂಚಿಸಿದರೂ ವರ ತಾಳಿ ಕಟ್ಟಲಿಲ್ಲ. ಬೇರೊಬ್ಬನ ಪ್ರೀತಿಸುವ ಹುಡುಗಿ, ಆಕೆಯೇ ಮದುವೆ ಬೇಡ ಎನ್ನುತ್ತಿದ್ದಾಳೆ. ಹೀಗಿರುವಾಗ ತಾಳಿ ಹೇಗೆ ಕಟ್ಟಲಿ ಎಂದು ಆತ ತಾಳಿ ಕಟ್ಟಿಲ್ಲ.

ಇದನ್ನು ಓದಿ : Health : ಸುಲಭವಾಗಿ ಸಿಗುವ ಈ ಬಳ್ಳಿಯಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ.?

ಶಿಕ್ಷಕನಾಗಿರುವ ವೇಣುಗೋಪಾಲ ಜಿ. ತಾನೂ ದುಡಿದ ಹಣದಲ್ಲಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮದುವೆಗೆ ವ್ಯವಸ್ಥೆ ಮಾಡಿದ್ದ. ಬಂಧು ಬಳಗ, ಆಪ್ತರನ್ನೂ ಮದುವೆಗೆ ಕರೆದಿಧದ. ಆದರೆ ತನ್ನ ಮದುವೆ ಹೀಗಾಯಿತಲ್ಲ ಎಂದು ವರ ಕೂಡ ಕಣ್ಣೀರಿಟ್ಟಿದ್ದಾನೆ.

ಹಿಂದಿನ ಸುದ್ದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.! 

ಜನಸ್ಪಂದನ ನ್ಯೂಸ್, ಡೆಸ್ಕ್ : ಚರ್ಮದ ಆರೈಕೆ ತ ಜ್ಞರು ಫೇಸ್‌ ಮ್ಯಾಪಿಂಗ್‌ (Face Mapping) ಮಾಡಿ ನಮ್ಮ ಆರೋಗ್ಯ ಹೇಗಿದೆ ಅಂತ ಹೇಳುತ್ತಾರೆ. ಮುಖದ ಮೇಲೆ ಎಲ್ಲಿ ಮೊಡವೆ ಮೂಡಿದೆ, ಎಲ್ಲಿ ಹುಣ್ಣಾಗಿದೆ, ಎಲ್ಲಿ ಚರ್ಮ ಇಳಿಬಿದ್ದಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಹೃದಯ, ಕಿಡ್ನಿ, ಲಿವರ್‌ ಇತ್ಯಾದಿ ಹೇಗಿದೆ ಎಂದು ತಿಳಿಸುತ್ತಾರೆ.

ಮುಖದ ವೈಶಿಷ್ಟ್ಯಗಳು ಮತ್ತು ನಮ್ಮ ದೇಹದ ಅಂಗಗಳ ನಡುವೆ ಆಕರ್ಷಕ ಸಂಪರ್ಕವಿದೆ, ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಫೇಸ್ ಮ್ಯಾಪಿಂಗ್ ಎಂದೂ ಕರೆಯುತ್ತಾರೆ.

ಇದನ್ನು ಓದಿ : Health : ಮೊಣಕಾಲು ನೋವಿಗೆ ತಕ್ಷಣ ಪರಿಹಾರ ನೀಡುತ್ತೆ ಈ ಎಣ್ಣೆ.!

ಫೇಸ್ ಮ್ಯಾಪಿಂಗ್ ಎನ್ನುವುದು ಚರ್ಮದ ಒಟ್ಟಾರೆ ಆರೋಗ್ಯವನ್ನು ನಿರ್ಧರಿಸಲು (To determine skin health) ವಿವಿಧ ಮುಖದ ಪ್ರದೇಶಗಳನ್ನು ಮ್ಯಾಪಿಂಗ್ ಮಾಡುವ ಒಂದು ರೀತಿಯ ಚರ್ಮದ ಪರೀಕ್ಷೆಯಾಗಿದೆ.

ಹಾರ್ಮೋನುಗಳ ಅಸಮತೋಲನ, ನಿರ್ಜಲೀಕರಣ, ಸೂಕ್ಷ್ಮತೆಗಳು ಮತ್ತು ನಿರ್ಬಂಧಿಸಲಾದ ರಂಧ್ರಗಳಂತಹ (Dehydration, sensitivities and blocked pores) ಆರೋಗ್ಯ ಸಮಸ್ಯೆಗಳಿಂದ ಪ್ರಭಾವಿತವಾಗಿರುವ ಮುಖದ ಭಾಗಗಳನ್ನು ಗ್ರಿಡ್ ವಿಧಾನವನ್ನು ಬಳಸಿಕೊಂಡು ಗುರುತಿಸಲಾಗುತ್ತದೆ.

ಇದನ್ನು ಓದಿ : ED : ಗೃಹಸಚಿವ ಜಿ. ಪರಮೇಶ್ವರ್‌ ಒಡೆತನದ ಕಾಲೇಜಿನ ಮೇಲೆ ED ದಾಳಿ.!

ವಿಶ್ಲೇಷಣೆಯನ್ನು ಬಳಸಿಕೊಂಡು, ಚರ್ಮದ ಆರೈಕೆ ತಜ್ಞರು ಸಾಮಾನ್ಯ ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಚಿಕಿತ್ಸೆಗಳು ಮತ್ತು ಉತ್ಪನ್ನಗಳನ್ನು ಸೂಚಿಸಬಹುದು.

* ಗಲ್ಲ ಮತ್ತು ದವಡೆ :
ಹಾರ್ಮೋನ್ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳಿಗೆ ಸಂಬಂಧಿಸಿದೆ. ಇಲ್ಲಿ ಉಂಟಾಗುವ ಕಲೆಗಳು ಹಾರ್ಮೋನ್ ಅಸಮತೋಲನವನ್ನು (Hormonal imbalance) ಸೂಚಿಸಬಹುದು. ಇನ್ನೂ ಗಂಡು ಮಕ್ಕಳಲ್ಲಿ ಗಲ್ಲದ ಮೇಲೆ ಮೊಡವೆ ಇದ್ದಲ್ಲಿ ಫರ್ಟಿಲಿಟಿ ಸಮಸ್ಯೆ ಇರಬಹುದು. ಅದೇ ಹೆಣ್ಣುಮಕ್ಕಳಲ್ಲಿ ಇದ್ದಲ್ಲಿ ಅವರು ಗೈನಕಾಲಜಿಸ್ಟ್‌ ಭೇಟಿ ಮಾಡಬೇಕು.

ಇದನ್ನು ಓದಿ : ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಮಗನ ಮೇಲೆ ಫೈರಿಂಗ್.!

* ಮೂಗು :
ನಮ್ಮ ರಕ್ತಪರಿಚಲನಾ ವ್ಯವಸ್ಥೆಯ ಪ್ರತಿಬಿಂಬವೇ ಆಗಿದೆ ಈ ಪ್ರದೇಶ. ಅಲ್ಲದೇ ಹೃದಯ ಮತ್ತು ಹೃದಯ ರಕ್ತನಾಳದ ಆರೋಗ್ಯಕ್ಕೆ ಸಂಬಂಧಿಸಿದೆ. ಇಲ್ಲಿ ಯಾವುದೇ ಕೆಂಪು ಅಥವಾ ಕಲೆಗಳು ಅಧಿಕ ರಕ್ತದೊತ್ತಡ, ಕಳಪೆ ರಕ್ತಪರಿಚಲನೆ (Poor circulation) ಅಥವಾ ಹೃದಯ ರಕ್ತನಾಳದ ಒತ್ತಡದಂತಹ ಆಧಾರವಾಗಿರುವ ಸಮಸ್ಯೆಗಳ ಸಂಕೇತವಾಗಿರಬಹುದು, ನಮ್ಮ ಹೃದಯದ ಆರೋಗ್ಯವನ್ನು ಹತ್ತಿರದಿಂದ ನೋಡಲು ಪ್ರೋತ್ಸಾಹಿಸುತ್ತದೆ.

* ಹಣೆ :
ಹಣೆಯ ಮೇಲಿನ ಬಿರುಕುಗಳು ಕಳಪೆ ಜೀರ್ಣಕ್ರಿಯೆ, ಉಬ್ಬುವುದು ಅಥವಾ ಒತ್ತಡವನ್ನು ಸೂಚಿಸಬಹುದು, ಜೀರ್ಣಕ್ರಿಯೆ ಮತ್ತು ಮೂತ್ರಕೋಶಕ್ಕೆ ಸಂಬಂಧಿಸಿದೆ. ಸ್ಪಷ್ಟವಾದ ಚರ್ಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಆಂತರಿಕ ಅಸಮತೋಲನವನ್ನು ಪರಿಹರಿಸುವ ಅಗತ್ಯವನ್ನು ಸೂಚಿಸುತ್ತದೆ.

ಇದನ್ನು ಓದಿ : ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!

* ಕೆನ್ನೆಗಳು :
ಈ ಪ್ರದೇಶವು ಶ್ವಾಸಕೋಶದ ಆರೋಗ್ಯಕ್ಕೆ ಸಂಬಂಧಿಸಿದೆ, ಕಲೆಗಳು ಅಥವಾ ಅಸಮತೋಲನದ ಮೂಲಕ ಉಸಿರಾಟದ ಸಮಸ್ಯೆಗಳು ಅಥವಾ ಅಲರ್ಜಿಗಳನ್ನು ಸಂಕೇತಿಸುತ್ತದೆ, ಉಸಿರಾಟ ಮತ್ತು ಶ್ವಾಸಕೋಶದ ಕಾರ್ಯವನ್ನು ಪರಿಹರಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.

* ಜೀರ್ಣ ವ್ಯವಸ್ಥೆ ಸರಿ ಇಲ್ಲದಿದ್ದಲ್ಲಿ ನಿಮ್ಮ ಕಣ್ಣುಗಳ ಕೆಳಭಾಗದ ಕಪೋಲ ಪ್ರದೇಶದಲ್ಲಿ ಮೊಡವೆಗಳು ಆಗುತ್ತವೆ. ಕಣ್ಣಿನ ಕೆಳಗೆ ತುಂಬಾ ನೀರು ಸೇರಿದ ರೀತಿ ಇದ್ದರೆ ಅಥವಾ ತೀರಾ ಕಪ್ಪು ಇದ್ದಲ್ಲಿ ನಿಮ್ಮ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ (It means that the kidneys are not working properly). ಲೇಟ್‌ ನೈಟ್‌ ಮದ್ಯಪಾನ ಮಾಡುತ್ತಿರುವವರಲ್ಲಿ ಇದನ್ನು ಗಮನಿಸಬಹುದು.

ಇದನ್ನು ಓದಿ : ಯಾವ ಯಾವ ಕಾಯಿಲೆಗಳಿಗೆ `ಪ್ಯಾರೆಸಿಟಮಾಲ್’ ಮಾತ್ರೆ ಸೇವಿಸಬಹುದು.? ಇಲ್ಲಿದೆ ಮಾಹಿತಿ.!

* ಶ್ವಾಸಕೋಶ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದರೆ, ಬಾಯಿಯ ಎರಡೂ ಕಡೆಗಳಲ್ಲಿಯೂ ಮೊಡವೆ ಉಂಟಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments