ಜನಸ್ಪಂದನ ನ್ಯೂಸ್, ಡೆಸ್ಕ್ : ಸುಮಾರು 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಮಾಡಿ ಸಕ್ಸೆಸ್ ಆಗಿದ್ದ ವೈದ್ಯ (Doctor) ರೋಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಫರಿದಾಬಾದ್ನ ಆಸ್ಪತ್ರೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಹೌದು, ಫರಿದಾಬಾದ್ನ ಆಸ್ಪತ್ರೆಯಲ್ಲಿ (cardiologist at Hospital in Faridabad) ಕೇವಲ ಎಂಬಿಬಿಎಸ್ (MBBS) ಪದವಿ ಹೊಂದಿರುವ ವೈದ್ಯ (Doctor) ನೊಬ್ಬ ಹೃದ್ರೋಗ ತಜ್ಞ (Cardiologist) ರಂತೆ ನಟಿಸಿ ಕಳೆದ ಎಂಟು ತಿಂಗಳಲ್ಲಿ 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾನೆ ಎಂದು ಆರೋಪಿಸಿದ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್.!
ಆರೋಪಿತ ವೈದ್ಯ (Doctor) ನನ್ನು ಪಂಕಜ್ ಮೋಹನ್ ಶರ್ಮಾ ಎಂದು ಗುರುತಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿಯಲ್ಲಿ ಮೆಡಿಟೆರಿನಾ ಆಸ್ಪತ್ರೆಯಿಂದ ನಿರ್ವಹಿಸಲ್ಪಡುವ ಹೃದಯ ಚಿಕಿತ್ಸಾ ಕೇಂದ್ರದಲ್ಲಿ ಕೆಲಸ ಮಾಡುವಾಗ ನಕಲಿ ಗುರುತಿನ ಚೀಟಿ ಬಳಸಿ ಮತ್ತು ನಕಲಿ ಅರ್ಹತೆಗಳನ್ನು ಬಳಸಿದ್ದಾನೆ ಎಂದು TOI ವರದಿ ತಿಳಿಸಿದೆ.
ಏಪ್ರಿಲ್ 11 ರಂದು NIT ಫರಿದಾಬಾದ್ ಪೊಲೀಸ್ ಠಾಣೆಯಲ್ಲಿ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಂಜಯ್ ಗುಪ್ತಾ ದೂರು ದಾಖಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಡಾ. ಶರ್ಮಾ (Doctor) ನಕಲಿ ದಾಖಲೆಗಳನ್ನು ಬಳಸಿ ಹೆಚ್ಚುವರಿ ವೈದ್ಯಕೀಯ ಪದವಿಗಳನ್ನು ಪಡೆದಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ.
ಇದನ್ನು ಓದಿ : Pakistan : ಜೀನ್ಸ್ ಮತ್ತು ಟಾಪ್ ಧರಿಸಿ ಮಾರ್ಕೆಟ್ಗೆ ಬಂದ 2 ಯುವತಿಯರು ; ವಿಡಿಯೋ.!
ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ನೋಂದಣಿ ಸಂಖ್ಯೆ 2456 ಅನ್ನು ಬಳಸಿದ್ದಾರೆ ಎಂದು ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ. ಈ ಸಂಖ್ಯೆ ಡಾ. ಪಂಕಜ್ ಮೋಹನ್ ಎಂಬ ನೋಂದಾಯಿತ ಹೃದ್ರೋಗ ತಜ್ಞರಿಗೆ ಸೇರಿದೆ.
ಆದರೆ ಪಂಕಜ್ ಮೋಹನ್ ಶರ್ಮಾ ಅವರ ನಿಜವಾದ ನೋಂದಣಿ ಸಂಖ್ಯೆ 28482 (MBBS – Expert General Practitioner in New Delhi) ಇದ್ದು, ಇದು ಅವರನ್ನು ಸಾಮಾನ್ಯ ವೈದ್ಯ (Gen. Doctor) ರಾಗಿ ಮಾತ್ರ ಅರ್ಹತೆ ನೀಡುತ್ತದೆ.
ಇದನ್ನು ಓದಿ : Suspension : ಪೊಲೀಸ್ ಕಮಿಷನರ್ ದಯಾನಂದ ಅಮಾನತು ವಿರೋಧಿಸಿ ಕಾನ್ಸ್ಟೇಬಲ್ ಪ್ರತಿಭಟನೆ.!
ಡಾ. ಶರ್ಮಾ ಕಳೆದ ವರ್ಷ ಜುಲೈನಲ್ಲಿ ಆಸ್ಪತ್ರೆಗೆ ಸೇರಿದರು. ಡಾ. ಪಂಕಜ್ ಮೋಹನ್ ಶರ್ಮಾ ಸಾಮಾನ್ಯ ವೈದ್ಯ (Doctor) ರಾಗಿ ಮಾತ್ರ ಸೇವೆ ಸಲ್ಲಿಸಬೇಕಾಗಿತ್ತು, ಆದರೆ ಅವರು ಹೃದಯ ಆರೈಕೆಗೆ ಅನರ್ಹರಾಗಿದ್ದರೂ ಕೂಡಾ ಹೃದಯ ಕೇಂದ್ರದಲ್ಲಿ ಹಲವಾರು ಕಾರ್ಯವಿಧಾನಗಳನ್ನು ಮಾಡಿದರು.
ಡಾ. ಶರ್ಮಾ ಪ್ರಿಸ್ಕ್ರಿಪ್ಷನ್ಗಳಲ್ಲಿ MD ಮತ್ತು DNB (ಹೃದಯಶಾಸ್ತ್ರ) ದಂತಹ ರುಜುವಾತುಗಳನ್ನು ತಪ್ಪಾಗಿ ಬಳಸಿಕೊಳ್ಳಲಾಗುತ್ತಿತ್ತು. ಅವರು ತಮ್ಮನ್ನು ಹೃದ್ರೋಗ ತಜ್ಞರು ಎಂದು ಗುರುತಿಸಿಕೊಳ್ಳುವ ಮುದ್ರೆಯನ್ನು ಸಹ ಬಳಸಿದ್ದರು.
ಇದನ್ನು ಓದಿ : Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?
“ಆಸ್ಪತ್ರೆ ಆಡಳಿತವು ಹೃದ್ರೋಗಶಾಸ್ತ್ರ (Cardiology)ದ ಲ್ಲಿ ಯಾವುದೇ ಪದವಿ ಅಥವಾ ಮಾನ್ಯತೆ ಪಡೆದ ವಿಶೇಷತೆ ಇಲ್ಲದ ಅನರ್ಹ ಮತ್ತು ಮೋಸದ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ಡಾ. ಶರ್ಮಾ ಅವರು MD ಮತ್ತು DNB (ಹೃದಯಶಾಸ್ತ್ರ) ದ ಅರ್ಹತೆಗಳನ್ನು ತಪ್ಪಾಗಿ ಹೇಳಿಕೊಂಡಿದ್ದಾರೆ, ಆದರೆ ಇದು ಸಂಪೂರ್ಣವಾಗಿ ಮೋಸ (ಸುಳ್ಳು) ದ ಸಂಗತಿ” ಎಂದು ವಕೀಲ ಗುಪ್ತಾ ಹೇಳಿದರು.
ಡಾ. ಪಂಕಜ್ ಮೋಹನ್ ಅವರ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ, ಜನವರಿಯಲ್ಲಿ ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘಕ್ಕೆ ದೂರು ಸಲ್ಲಿಸಿದರು. ಅವರು ಡಾ. ಶರ್ಮಾ ಅವರಿಗೆ ಕಾನೂನು ನೋಟಿಸ್ ಸಹ ಕಳುಹಿಸಿದರು.
ಫೆಬ್ರವರಿಯಲ್ಲಿ, ಶರ್ಮಾ ಅವರ ವೈದ್ಯಕೀಯ ಪ್ರಮಾಣಪತ್ರಗಳನ್ನು ತೋರಿಸಲು ಕೇಳಿದ ನಂತರ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ಭೇಟಿ ನೀಡುವುದನ್ನು ನಿಲ್ಲಿಸಿದರು. “ಅನೇಕ ರೋಗಿಗಳು (Patient) ಅವರ ಬಗ್ಗೆ ವಿಚಾರಿಸಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ನಿಜವಾದ ಡಾ. ಪಂಕಜ್ ಮೋಹನ್ ಅವರನ್ನು ಭೇಟಿ ಮಾಡಿದರು. ಡಾ. ಮೋಹನ್ ಅವರು ಹೃದಯ ಕೇಂದ್ರದಲ್ಲಿ ಎಂದಿಗೂ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದಾಗ, ಆರೋಪಗಳು ಬಲಗೊಂಡವು.
ಇದನ್ನು ಓದಿ : Wife : ಹೆಂಡತಿ ಅಂದ್ರೆ ಹೀಗಿರಬೇಕು ; ಈ ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತೆ.
ಆಸ್ಪತ್ರೆಯ ಸಿಎಂಡಿ ಮತ್ತು ಹೃದಯ ಕೇಂದ್ರದ ಮುಖ್ಯಸ್ಥ ಡಾ. ಕುಮಾರ್ ಅವರು ಡಾ. ಶರ್ಮಾ ಅವರನ್ನು ವಜಾ (Dismiss) ಗೊಳಿಸಲಾಗಿದೆ ಎಂದು ದೃಢಪಡಿಸಿದರು.
“ಅವರು ಸಾಮಾನ್ಯ ವೈದ್ಯರಾಗಿ ಔಪಚಾರಿಕ ಮಾನವ ಸಂಪನ್ಮೂಲ ಮಾರ್ಗಗಳ ಮೂಲಕ ಅರ್ಜಿ ಸಲ್ಲಿಸಿದರು. ಅವರ ಡಿಎಂ (ಹೃದಯಶಾಸ್ತ್ರ) ಪದವಿಯ ಬಗ್ಗೆ ನಮಗೆ ಯಾವಾಗಲೂ ಅನುಮಾನವಿತ್ತು ಮತ್ತು ಅದರ ಮೇಲೆ ಕ್ರಮ ಕೈಗೊಳ್ಳಲಾಯಿತು” ಎಂದು ಡಾ. ಕುಮಾರ್ ಹೇಳಿದರು.
Helicopter : ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ; ದೃಶ್ಯ ಕ್ಯಾಮೆರಾದಲ್ಲಿ ಸೆರೆ.
ಜನಸ್ಪಂದನ ನ್ಯೂಸ್, ಡೆಸ್ಕ್ : ಖಾಸಗಿ ಹೆಲಿಕಾಪ್ಟರ್ (Helicopter) ಒಂದು ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಘಟನೆಯೊಂದು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ನಡಿದಿದೆ.
ಖಾಸಗಿ ಹೆಲಿಕಾಪ್ಟರ್ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಆದ ಪರಿಣಾಮವಾಗಿ ಪಕ್ಕಲಿದ್ದ ಕಾರೊಂದು ಹೆಲಿಕಾಪ್ಟರ್ (Helicopter) ನ ರೆಕ್ಕೆ ತಾಗಿ ಪುಡಿಪುಡಿಯಾಗಿದೆ. ತಾಂತ್ರಿಕ ದೋಷವನ್ನು ವೀಕ್ಷಿಸಿದ ಪೈಲಟ್ ಗುಪ್ತ್ ಕಾಶಿ ಪ್ರದೇಶದಲ್ಲಿ ಹೆದ್ದಾರಿ ಮಧ್ಯದಲ್ಲಿಯೇ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದಾರೆ.
ಇದನ್ನು ಓದಿ : Ganja : 1.5 KG ಗಾಂಜಾ ; ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್.!
ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಕಾಪ್ಟರ್ ಪೈಲಟ್ (Helicopter) ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಅವರಿಗೆ ಯಾವುದೇ ಗಾಯಗಳಾಗಿಲ್ಲ.
ಆದರೆ ಎಮರ್ಜೆನ್ಸಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ (Helicopter) ನ ರೆಕ್ಕೆ ಡಿಕ್ಕಿ ಹೊಡೆದ ಕಾರು ಪುಡಿಪುಡಿಯಾಗಿದೆ. ಸುದೈವಶಾತ್ ಈ ಅಪಘಾತದ ಸಮಯದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ.
ಇದನ್ನು ಓದಿ : Suspension : ಪೊಲೀಸ್ ಕಮಿಷನರ್ ದಯಾನಂದ ಅಮಾನತು ವಿರೋಧಿಸಿ ಕಾನ್ಸ್ಟೇಬಲ್ ಪ್ರತಿಭಟನೆ.!
ಕೇದಾರನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಹೆಲಿಕಾಪ್ಟರ್ (Helicopter) ಪ್ರಯಾಣಿಸುತ್ತಿತ್ತು ಎಂದು ತಿಳಿದು ಬಂದಿದೆ. ಈ ಹೆಲಿಕಾಪ್ಟರ್ ಕೇದಾರನಾಥಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.
ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣುತ್ತಿದಂತೆಯೇ ಪೈಲೆಟ್ ಹೆದ್ದಾರಿ ಮಧ್ಯದಲ್ಲೇ ತುರ್ತು ಭೂಸ್ಪರ್ಶ ಮಾಡಿದ್ದಾರೆ.
ಇದನ್ನು ಓದಿ : Jaggery Water : ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತೇ.?
ಹೆಲಿಕಾಪ್ಟರ್ (Helicopter) ಎಮರ್ಜೆನ್ಸಿ ಲ್ಯಾಂಡಿಂಗ್ ಆಗುವ ವೇಳೆ ಹೆದ್ದಾರಿ ಬದಿ ನಿಂತಿದ್ದ ಕಾರು, ಹಾಗು ಮನೆಗಳಿಗೆ ಹಾನಿಯಾಗಿದ್ದು ಜೊತೆಗೆ ಹೆಲಿಕಾಪ್ಟರ್ ನ ಕೆಲ ಭಾಗಗಳಿಗೂ ಹಾನಿಯಾಗಿವೆ ಎಂದು ಹೇಳಲಾಗಿದೆ.
Helicopter Video :
https://twitter.com/i/status/1931266573559640454
https://twitter.com/i/status/1931268727946748106





