ಜನಸ್ಪಂದನ ನ್ಯೂಸ್, ಡೆಸ್ಕ್ : ರೀಲ್ಸ್ ಹುಚ್ಚಿಗಾಗಿ ಕುಡಿದ ಅಮಲಿನಲ್ಲಿ ಯುವತಿ (Lady) ಯೋರ್ವಳು ರೈಲು ಹಳಿಯ ಮೇಲೆ ಕಾರು ಚಲಾಯಿಸಿದ ಘಟನೆಯೊಂದು ಗುರುವಾರ (ಜೂ. 26) ಹೈದರಾಬಾದ್ ಬಳಿ ನಡೆದಿದೆ. ಯುವತಿಯ ಈ ಹುಚ್ಚಾಟದಿಂದ ರೈಲು ಸಂಚಾರದಲ್ಲಿ ಸುಮಾರು ಗಂಟೆಗಳ ಕಾಲ ವ್ಯತ್ಯಯ ಉಂಟಾಗಿದೆ.
ರಂಗಾರೆಡ್ಡಿ ಜಿಲ್ಲೆಯಲ್ಲಿ ಮಹಿಳೆ (Lady) ಸುಮಾರು ಏಳು ಕಿಲೋಮೀಟರ್ ನಷ್ಟು ದೂರನ್ನು ರೈಲು ಹಳಿಗಳ ಮೇಲೆ ಕಾರನ್ನು ಚಲಾಯಿಸಿದ್ದಾಳೆ. ಪರಿಣಾಮವಾಗಿ ಬೆಳಿಗ್ಗೆ ಸುಮಾರು ಎರಡು ಗಂಟೆಗಳ ಕಾಲ ರೈಲ್ವೆ ಸಂಚಾರಕ್ಕೆ ಅಡ್ಡಿಯಾಯಿತು.
ಕೊಂಡಕಲ್ನಲ್ಲಿರುವ ಲೆವೆಲ್ ಕ್ರಾಸಿಂಗ್ನಲ್ಲಿ, ಅವಳು ಕಾರನ್ನು ಹಳಿಗೆ ಮೇಲೆ ಹತ್ತಿಸಿದ್ದಾಳೆ. ಇದನ್ನು ಕಂಡ ದಾರಿಹೋಕರಲ್ಲಿ ಭಯ ಹುಟ್ಟಿಸಿದ್ದು, ಸ್ಥಳೀಯರು ನಾಗುಲಪಲ್ಲಿಯಲ್ಲಿ ಅವಳನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಇದನ್ನು ಓದಿ : Belagavi : ಮೂಡಲಗಿ ತಾಲೂಕಿನ 4 ಸೇತುವೆಗಳು ಜಲಾವೃತ ; ಸಂಚಾರ ಸ್ಥಗಿತ.
ಆದರೆ ಯುವತಿ (Lady) ಅವರನ್ನು ಬೆದರಿಸಿ ವೇಗವಾಗಿ ಕಾರು ಚಲಾಯಿಸಿಕೊಂಡು ಹೋದಳು ಎನ್ನಲಾಗಿದೆ. ಈ ವೇಳೆ ರೈಲು ಸಿಬ್ಬಂದಿ ಅವಳನ್ನು ಸುದೀರ್ಘವಾಗಿ ಬೆನ್ನಟ್ಟಿದ್ದಾರೆ. ಸ್ಥಳೀಯರ ಸಹಾಯದಿಂದ ರೈಲ್ವೆ ನೌಕರರು ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು.
ನಾಗುಲಪಲ್ಲಿ ಮತ್ತು ಶಂಕರಪಲ್ಲಿ ನಡುವೆ ಸುಮಾರು ಏಳು ಕಿಲೋಮೀಟರ್ ದೂರ ಅವಳು ಕಾರನ್ನು ಓಡಿಸಿದ್ದಾಳೆ. ಇದೇ ಸಮಯಕ್ಕೆ ಅದೇ ಹಳಿಯಲ್ಲಿ ಬರುತ್ತಿದ್ದ ರೈಲಿನ ಲೋಕೋ ಪೈಲಟ್ ಕಾರನ್ನು ಗುರುತಿಸಿದ ತಕ್ಷಣ ಬ್ರೇಕ್ ಹಾಕಿ ರೈಲನ್ನು ನಿಲ್ಲಸಿದ ಪರಿಣಾಮ ಸಂಭವಿಸಬಹುದಾದ ದೊಡ್ಡ ಘಟನೆಯೊಂದು ತಪ್ಪಿದಂತಾಗಿದೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಕಾರು ಚಲಾಯಿಸಿದ ಯುವತಿ (Lady) ಯನ್ನು ಉತ್ತರ ಪ್ರದೇಶದ ಲಕ್ನೋ ಮೂಲದ ರವಿಕಾ ಸೋನಿ ಎಂದು ಗುರುತಿಸಲಾಗಿದೆ.
ಇದನ್ನು ಓದಿ : Plane : ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ 159 ಜನರಿದ್ದ ವಿಮಾನದಲ್ಲಿ ಬೆಂಕಿ ; ವಿಡಿಯೋ.!
ಆಕೆ ಹೈದರಾಬಾದ್ನ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಇತ್ತೀಚೆಗೆ ಆಕೆ (Lady) ಯನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ವರದಿಯಾಗಿದೆ.
ರೀಲ್ಸ್ ಹುಚ್ಚಿಗಾಗಿ ಯುವತಿ (Lady) ರೈಲ್ವೆ ಹಳಿಯಲ್ಲಿ ವಾಹನ ಚಲಾಯಿಸಿದ್ದಾಳೋ ಇಲ್ಲವೋ ಎಂದು ಕಂಡುಹಿಡಿಯಲು ಪೊಲೀಸರು ಆಕೆಯನ್ನು ಪ್ರಶ್ನಿಸುತ್ತಿದ್ದಾರೆ. ಸದ್ಯ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಆಕೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ (Lady) ಯ ಕೃತ್ಯದಿಂದ ಹೈದರಾಬಾದ್-ಬೆಂಗಳೂರು ಮಾರ್ಗಗಳಲ್ಲಿ ರೈಲ್ವೆ ಸಂಚಾರಕ್ಕೆ ಅಡ್ಡಿಯಾಯಿತ್ತಲ್ಲದೆ, ಸುತ್ತಮುತ್ತಲಿನ ರೈಲ್ವೆ ನಿಲ್ದಾಣಗಳಲ್ಲಿ ಕೆಲವು ರೈಲುಗಳನ್ನು ನಿಲ್ಲಿಸಲಾಯಿತು.
ರೈಲು ಹಳಿ ಮೇಲೆ ಕಾರು ಚಲಾಯಿಸುತ್ತಿರುವ ಯುವತಿ (Lady) ಯ ವಿಡಿಯೋ :
VIDEO | Telangana: A woman drove her car on a railway track in Ranga Reddy district causing panic among people and disrupting train movement. The video of the incident has gone viral.
(Source: Third Party)
(Full video available on PTI Videos – https://t.co/n147TvrpG7) pic.twitter.com/jhrrK7fa9q
— Press Trust of India (@PTI_News) June 26, 2025
Astrology : ಹೇಗಿದೆ ಗೊತ್ತಾ.? ಜೂನ 26 ರ ದ್ವಾದಶ ರಾಶಿಗಳ ಫಲಾಫಲ.!
ಜನಸ್ಪಂದನ ನ್ಯೂಸ್, ಜೋತಿಷ್ಯ : 2025 ಜೂನ 26 ರ ಗುರುವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :
*ಮೇಷ ರಾಶಿ*
ಎಲ್ಲಾ ಕ್ಷೇತ್ರಗಳಿಗೂ ಋಣಾತ್ಮಕ ವಾತಾವರಣವಿರುತ್ತದೆ. ಆದಾಯ ಸಾಕಾಗುವುದಿಲ್ಲ ಮತ್ತು ಅನವಶ್ಯಕ ಖರ್ಚುಗಳು ಹೆಚ್ಚಾಗುತ್ತವೆ. ದೂರ ಪ್ರಯಾಣದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಬಂಧುಮಿತ್ರರೊಂದಿಗೆ ಆತುರದಿಂದ ಮಾತನಾಡುವುದು ಒಳ್ಳೆಯದಲ್ಲ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.
*ವೃಷಭ ರಾಶಿ*
ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಕೆಲವು ವಿಷಯಗಳಲ್ಲಿ ಹಠಾತ್ ಯಶಸ್ಸು ಸಿಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಹುದ್ದೆಗಳು ಸಿಗುತ್ತವೆ. ಬಾಲ್ಯದ ಸ್ನೇಹಿತರಿಂದ ಶುಭಕಾರ್ಯಗಳಿಗೆ ಆಹ್ವಾನಗಳು ಬರುತ್ತವೆ. ವ್ಯವಹಾರಗಳಲ್ಲಿ ಲಾಭದಾಯಕವಾಗಿರುತ್ತವೆ. ಹೊಸ ಪ್ರೋತ್ಸಾಹ ಸಿಗುತ್ತದೆ.
*ಮಿಥುನ ರಾಶಿ*
ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಸಂಗಾತಿಯೊಂದಿಗೆ ಶುಭಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಸಂಬಂಧಿಕರು ಮತ್ತು ಸ್ನೇಹಿತರಿಂದ ಆಶ್ಚರ್ಯಕರ ವಿಷಯಗಳನ್ನು ಕಲಿಯುತ್ತೀರಿ. ನಿರುದ್ಯೋಗಿಗಳು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು. ವೃತ್ತಿಪರ ಉದ್ಯೋಗಗಳಲ್ಲಿ ಕಾರ್ಯಕ್ಷಮತೆಗೆ ಪ್ರಶಂಸೆ ಸಿಗುತ್ತದೆ. ವ್ಯವಹಾರದಲ್ಲಿ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುತ್ತೀರಿ.
*ಕಟಕ ರಾಶಿ*
ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ದೂರದ ಸಂಬಂಧಿಕರಿಂದ ಅನಿರೀಕ್ಷಿತ ಸುದ್ದಿಗಳನ್ನು ಕೇಳಬೇಕಾಗುತ್ತದೆ. ಪ್ರಮುಖ ಕೆಲಸಗಳು ನಿಧಾನವಾಗಿ ಸಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಯೋಜಿಸಿದ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುವುದಿಲ್ಲ. ಮನೆಯ ಹೊರಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವ್ಯವಹಾರಗಳು ನಿಧಾನವಾಗಿ ಪ್ರಗತಿಯಾಗುತ್ತದೆ.
ಇದನ್ನು ಓದಿ : Silk : ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ 2,400+ ಹುದ್ದೆಗಳಿಗೆ ನೇಮಕಾತಿ.!
*ಸಿಂಹ ರಾಶಿ*
ದೂರ ಪ್ರಯಾಣಗಳಲ್ಲಿ ವಾಹನ ಅಪಘಾತಗಳ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ನಡವಳಿಕೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಸಾಲದ ಸಮಸ್ಯೆಗಳು ಹೆಚ್ಚಾಗುತ್ತವೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ವ್ಯಾಪಾರ-ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಿ, ಸಮಯಕ್ಕೆ ನಿದ್ದೆ ಆಹಾರ ಇರುವುದಿಲ್ಲ.
*ಕನ್ಯಾ ರಾಶಿ*
ಸಂಬಂಧಿಕರಿಂದ ಬರುವ ಅಪರೂಪದ ಆಹ್ವಾನಗಳು ಆಶ್ಚರ್ಯಗೊಳಿಸುತ್ತವೆ. ಅಗತ್ಯಗಳಿಗೆ ಹಣಕಾಸಿನ ನೆರವು ಸಿಗುತ್ತದೆ. ಪ್ರಸಿದ್ಧ ವ್ಯಕ್ತಿಗಳ ಸಂಪರ್ಕದಿಂದ ಯೋಜಿತ ಕಾರ್ಯಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಹಳೆಯ ಸಾಲಗಳು ತೀರಿಸಲ್ಪಡುತ್ತವೆ. ವ್ಯಾಪಾರ ವಿಸ್ತರಣೆಗೆ ಮಾಡಿದ ಪ್ರಯತ್ನಗಳು ಫಲ ನೀಡುತ್ತವೆ. ಆರ್ಥಿಕ ವ್ಯವಹಾರಗಳು ಆಶಾದಾಯಕವಾಗಿರುತ್ತವೆ.
*ತುಲಾ ರಾಶಿ*
ಸಹೋದರರಿಂದ ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸುತ್ತೀರಿ. ಹೊಸ ವಾಹನ ಖರೀದಿಗೆ ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸಮಾಜದ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂಪರ್ಕ ಹೆಚ್ಚಾಗುತ್ತದೆ. ವೃತ್ತಿಪರ ವ್ಯವಹಾರಗಳು ಉತ್ಸಾಹದಿಂದ ಪ್ರಗತಿಸುತ್ತವೆ. ಉದ್ಯೋಗದ ವಾತಾವರಣ ಉತ್ಸಾಹದಾಯಕವಾಗಿರುತ್ತದೆ.
*ವೃಶ್ಚಿಕ ರಾಶಿ*
ಮನೆಯ ಹೊರಗೆ ಒತ್ತಡ ಹೆಚ್ಚಾಗುತ್ತವೆ ಮತ್ತು ಮಾನಸಿಕ ಸಮಸ್ಯೆಗಳು ಉದ್ಭವಿಸುತ್ತವೆ. ಪ್ರಯಾಣಗಳು ಕೂಡಿ ಬರುವುದಿಲ್ಲ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಬಂಧುಮಿತ್ರರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ. ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಆಲೋಚನೆಗಳಲ್ಲಿ ಸ್ಥಿರತೆ ಇರುವುದಿಲ್ಲ. ವೃತ್ತಿ ಮತ್ತು ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತೀರಿ.
*ಧನುಸ್ಸು ರಾಶಿ*
ಪ್ರಮುಖ ವ್ಯವಹಾರಗಳಲ್ಲಿ ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಣಕಾಸಿನ ವಿಷಯಗಳು ನಿರೀಕ್ಷಿತ ರೀತಿಯಲ್ಲಿ ಸಾಗುವುದಿಲ್ಲ. ಕುಟುಂಬದಲ್ಲಿ ಕಿರಿಕಿರಿ ಉಂಟಾಗುತ್ತದೆ. ದೈವಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಪರ ವ್ಯವಹಾರ ನಿಧಾನವಾಗಿ ಪ್ರಗತಿಯತ್ತ ಸಾಗುತ್ತದೆ. ಮೇಲಧಿಕಾರಿಗಳೊಂದಿಗೆ ಚಿಂತನಶೀಲವಾಗಿ ಮಾತನಾಡುವುದು ಒಳ್ಳೆಯದು.
ಇದನ್ನು ಓದಿ : First Night ದಿನವೇ “ಮುಟ್ಟಿದ್ರೆ 35 ಪೀಸ್ ಮಾಡ್ತೀನಿ” ಎಂದ ವಧು ; ಬೆಚ್ಚಿಬಿದ್ದ ವರ.!
*ಮಕರ ರಾಶಿ*
ಬಂಧು ಮಿತ್ರರನ್ನು ಭೇಟಿಯಾಗಿ ಮನೆಯಲ್ಲಿಯೇ ಸಂತೋಷದಿಂದ ಸಮಯ ಕಳೆಯುತ್ತೀರಿ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತೀರಿ. ಮನೆಯ ಹೊರಗೆ ನಿಮ್ಮ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಶುಭಕಾರ್ಯಗಳಿಗೆ ಆಹ್ವಾನ ಬರುತ್ತದೆ. ಮಕ್ಕಳ ಶಿಕ್ಷಣ ಸಂಬಂಧಿತವಾಗಿ ಶುಭ ಸುದ್ದಿ ದೊರೆಯುತ್ತದೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುತ್ತೀರಿ.
*ಕುಂಭ ರಾಶಿ*
ಸಹೋದರರಿಂದ ಅನಿರೀಕ್ಷಿತ ಆರ್ಥಿಕ ತೊಂದರೆ ಉಂಟಾಗುತ್ತದೆ. ಕಠಿಣ ಆರ್ಥಿಕ ಪರಿಸ್ಥಿತಿ ಎದುರಾಗುತ್ತದೆ. ಇತರರೊಂದಿಗೆ ವಿವಾದಗಳಿಂದ ದೊರೆಯುವುದು ಉತ್ತಮ. ವ್ಯಾಪಾರ ವಿಸ್ತರಣೆ ಪ್ರಯತ್ನಗಳು ವಿಫಲವಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ವಿವಾದ ಉಂಟಾಗುತ್ತದೆ. ಆಧ್ಯಾತ್ಮಿಕ ಚಿಂತೆಗಳು ಹೆಚ್ಚಾಗುತ್ತವೆ.
*ಮೀನ ರಾಶಿ*
ವೃತ್ತಿ ಮತ್ತು ಉದ್ಯೋಗಗಳಲ್ಲಿ ನಿರೀಕ್ಷಿತ ಬದಲಾವಣೆಗಳು ಸಂಭವಿಸುತ್ತವೆ. ದೀರ್ಘಾವಧಿಯ ಸಾಲಗಳು ತೀರಿಸಲ್ಪಡುತ್ತವೆ. ಕೈಗೊಂಡ ಕೆಲಸಗಳು ಬೇಗನೆ ಪೂರ್ಣಗೊಳ್ಳುತ್ತವೆ. ಹೊಸ ವಸ್ತ್ರ ಮತ್ತು ಆಭರಣ ಖರೀದಿಸುತ್ತೀರಿ. ಸ್ಥಿರ ಆಸ್ತಿ ಸಂಬಂಧಿತ ವಿವಾದಗಳನ್ನು ಕೌಶಲ್ಯದಿಂದ ಪರಿಹರಿಸುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ.
Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು (Astrology) ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.