ಜನಸ್ಪಂದನ ನ್ಯೂಸ್, ಹಾವೇರಿ : ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೂಟೆಬೆನ್ನೂರು ಗ್ರಾಮದ ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಆರು ಜನ ರಾಣೆಬೆನ್ನೂರು ನಗರದ ಅಶೋಕ್ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ.
ಇದನ್ನು ಓದಿ : Shocking : 1 ಸಿಗರೇಟ್ ಪುರುಷರ 17 ನಿಮಿಷ, ಮಹಿಳೆಯರ 22 ನಿಮಿಷ ಆಯುಷ್ಯ ಕಮ್ಮಿ ಮಾಡುತ್ತೆ.
ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಾವೇರಿ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಶವಗಳನ್ನು ರವಾನೆ ಮಾಡಲಾಗಿದೆ.
ಇದನ್ನು ಓದಿ : Video : ಕಾಲೇಜಿನಲ್ಲಿಯೇ ಜುಟ್ಟು ಹಿಡಿದು ಪ್ರಿನ್ಸಿಪಾಲ್ ಮತ್ತು ಲೈಬ್ರೇರಿಯನ್ ನಡುವೆ ಮಾರಾಮಾರಿ.
ಘಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹಿಂದಿನ ಸುದ್ದಿ : ಒಂದು ತಿಂಗಳು ಸಕ್ಕರೆ ತಿನ್ನುವುದನ್ನು ನಿಲ್ಲಿಸಿದರೆ ಏನಾಗುವುದು.?
ಜನಸ್ಪಂದನ ನ್ಯೂಸ್, ಡೆಸ್ಕ್ : ಒಂದೊಮ್ಮೆ ನೀವು 30 ದಿನಗಳ ಕಾಲ ಸಕ್ಕರೆ ತಿನ್ನುವುದನ್ನು ನಿಲ್ಲಿಸದರೆ ಏನಾಗುತ್ತದೆ, ಆರೋಗ್ಯದಲ್ಲಿ ಏನೇನು ಬದಲಾವಣೆಗಳಾಗಬಹುದು ಎನ್ನುವ ಮಾಹಿತಿ ಇಲ್ಲಿದೆ.
ಕಾಫಿ, ಚಹಾ, ಕುಕೀಸ್ ಅಥವಾ ಮಫಿನ್ ಇವೆಲ್ಲವೂ ಸಿಹಿ ರುಚಿಯನ್ನು ಹೊಂದಿದ್ದು, ನಾವು ಬೆಳಗ್ಗೆ ಸಕ್ಕರೆಯನ್ನು ಯಾವುದಾದರೂ ರೂಪದಲ್ಲಿ ತಿನ್ನುತ್ತೇವೆ.
ಇದನ್ನು ಓದಿ : Shocking : 1 ಸಿಗರೇಟ್ ಪುರುಷರ 17 ನಿಮಿಷ, ಮಹಿಳೆಯರ 22 ನಿಮಿಷ ಆಯುಷ್ಯ ಕಮ್ಮಿ ಮಾಡುತ್ತೆ.
ಹೆಚ್ಚು ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಬಹಳಷ್ಟು ಜನರಿಗೆ ತಂಪು ಪಾನೀಯ, ಸಿಹಿತಿಂಡಿ, ಚಾಕೊಲೇಟ್, ಕ್ಯಾಂಡಿ ಮತ್ತು ಇತರ ಅನೇಕ ಸಿಹಿ ಪದಾರ್ಥಗಳನ್ನು ತಿನ್ನುವುದೆಂದರೆ ಬಹಳ ಇಷ್ಟ.
ಅಂದರೆ ಪರೋಕ್ಷವಾಗಿ ಸಕ್ಕರೆಯನ್ನು ಮಾತ್ರ ಸೇವಿಸೋದೆ ಇರೋದಲ್ಲ. ಬದಲಿಗೆ ಸಕ್ಕರೆಯಿಂದ ಮಾಡಿದಂತಹ ಎಲ್ಲಾ ಆಹಾರಗಳಿಂದ ದೂರವಿರುವುದು. ಹಾಗಾದರೆ ಒಂದು ತಿಂಗಳ ಸಕ್ಕರೆ ಸೇವಿಸುವುದನ್ನು ಬಿಟ್ಟರೆ ಆರೋಗ್ಯದಲ್ಲಾಗುವ ಬದಲಾವಣೆಗಳ ಬಗ್ಗೆ ತಿಳಿಯೋಣ ಬನ್ನಿ.
ಇದನ್ನು ಓದಿ : Video : ಕಾಲೇಜಿನಲ್ಲಿಯೇ ಜುಟ್ಟು ಹಿಡಿದು ಪ್ರಿನ್ಸಿಪಾಲ್ ಮತ್ತು ಲೈಬ್ರೇರಿಯನ್ ನಡುವೆ ಮಾರಾಮಾರಿ.
* ಸಕ್ಕರೆ ತಿನ್ನದಿರುವುದರಿಂದ ನೇರ ಲಾಭ ಹೃದಯಕ್ಕೆ ತಲುಪುತ್ತದೆ. ಸಕ್ಕರೆ ಕೊಬ್ಬಾಗಿ ಬದಲಾದಾಗ, ಕೆಟ್ಟ ಕೊಲೆಸ್ಟ್ರಾಲ್ ರಕ್ತದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದರಿಂದ ರಕ್ತದೊತ್ತಡವೂ ಅಧಿಕವಾಗುತ್ತದೆ. ಇದಕ್ಕಾಗಿ, ರಕ್ತವು ಹೃದಯವನ್ನು ತಲುಪಲು ಹೆಚ್ಚು ಶ್ರಮಿಸಬೇಕಾಗುತ್ತದೆ, ಇದರಿಂದಾಗಿ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ.
* 30 ದಿನಗಳವರೆಗೆ ಸಕ್ಕರೆಯನ್ನು ಸೇವಿಸದಿದ್ರೆ, ಅದರ ನಂತರ ನೀವು ಅನೇಕ ಪ್ರಯೋಜನಗಳನ್ನು ಕಂಡುಕೊಳ್ಳುತ್ತೀರಿ. ಇದರಿಂದ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ.
ಇದನ್ನು ಓದಿ : ಈ ಲಕ್ಷಣಗಳಿದರೆ ಅದು ಮೆದುಳಿನಲ್ಲಿ Blood ಹೆಪ್ಪುಗಟ್ಟುವಿಕೆಯ ಕಾರಣವಾಗಿರಬಹುದು.!
ಸಕ್ಕರೆಯನ್ನು ತಿನ್ನದಿರುವ ಮೂಲಕ, ಟೈಪ್-2 ಮಧುಮೇಹದ ಅಪಾಯವನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.
* ಯಕೃತ್ತು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಯಕೃತ್ತು ಆರೋಗ್ಯಕರವಾಗಿದ್ದರೆ ನಿಮ್ಮ ಇಡೀ ದೇಹವು ಆರೋಗ್ಯಕರವಾಗಿರುತ್ತದೆ. ಆದರೆ ನೀವು ಬಹಳಷ್ಟು ಸಕ್ಕರೆಯನ್ನು ಸೇವಿಸಿದರೆ ಪಿತ್ತಜನಕಾಂಗಕ್ಕೆ ಸಂಬಂಧಿಸಿದ NAFLD ಸಮಸ್ಯೆ ಉಂಟಾಗುವುದು.
ಇದನ್ನು ಓದಿ : ಆರೋಪಿ ಪರವಾಗಿ ವರದಿ ನೀಡಲು ಲಂಚಕ್ಕೆ ಬೇಡಿಕೆ ; “ಪಿಐ ಮತ್ತು PSI” ಲೋಕಾ ಬಲೆಗೆ.
* ಸಕ್ಕರೆಯ ತಿನ್ನುವುದನ್ನು ಕಡಿಮೆ ಮಾಡಿದರೆ ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಕಡಿಮೆಯಾಗುವ ಸಾಧ್ಯತೆ ಇದೆ ಹಾಗೂ clear skin ಕೂಡ ನಿಮ್ಮದಾಗುತ್ತದೆ.
* ಕಡಿಮೆ ಸಕ್ಕರೆ ಇರುವ ಆಹಾರವನ್ನು ತಿನ್ನುವುದರಿಂದ ದೇಹವು ಸ್ವಯಂಚಾಲಿತವಾಗಿ ಕ್ಯಾಲೊರಿಗಳನ್ನು ಪಡೆಯುತ್ತದೆ. ಸಿಹಿ ಚೀಸ್ನಲ್ಲಿ ಪ್ರೋಟೀನ್, ಫೈಬರ್ ಮತ್ತು ಪೋಷಕಾಂಶಗಳು ಇರುವುದಿಲ್ಲ.
ಇದನ್ನು ಓದಿ : ಪ್ರಕೃತಿ ವಿಕೋಪ, ಸುನಾಮಿ, ಭೂಕಂಪ, 2-3 ಮಹಾನ್ ನಾಯಕರ ಅಪಮೃತ್ಯು : ಕೋಡಿಮಠ ಶ್ರೀ
* ನಿಮಗೆ ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವ ಅಭ್ಯಾಸ ಇದ್ದರೆ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಗಾಗಿ ಸಕ್ಕರೆಯಿಂದ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಬೇಕು ಎಂದಾದರೆ ಒಮ್ಮೆ ಬಿಟ್ಟುಬಿಡಿ ತೂಕ ಹೇಗೆ ಕಡಿಮೆಯಾಗುತ್ತದೆ ಎಂದು ನಿಮಗೇ ತಿಳಿಯುತ್ತದೆ. ಅಲ್ಲದೆ, ನಿಮ್ಮ ತೂಕವು ತ್ವರಿತವಾಗಿ ಕಡಿಮೆಯಾಗುತ್ತದೆ
ಸಕ್ಕರೆಯನ್ನು ಬಿಡುವುದು ನಿಜಕ್ಕೂ ಆರೋಗ್ಯ ವಿಚಾರವಾಗಿ ಉತ್ತಮವಾಗಿರುತ್ತದೆ. ಆದರೆ ಇನ್ನೂ ಹೆಚ್ಚಗಿನ ಪ್ರಯೋಜನ ಪಡೆಯಬೇಕು ಎಂದರೆ ಎರಡ್ಮೂರು ತಿಂಗಳು ಸಕ್ಕರೆ ಸೇವಿಸುವುದನ್ನು ಬಿಟ್ಟರೆ ಸಾಕಾಗುವುದಿಲ್ಲ ಎನ್ನುತ್ತಾರೆ ವೈದ್ಯರು.
ಇದನ್ನು ಓದಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ SC ಸ್ಥಾನಮಾನ ಸಿಗುವುದಿಲ್ಲ : ಹೈಕೋರ್ಟ್
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರರಲ್ಲ