ಸೋಮವಾರ, ಫೆಬ್ರವರಿ 2, 2026

Janaspandhan News

HomeCrime Newsಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.
spot_img
spot_img

ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

ಜನಸ್ಪಂದನ ನ್ಯೂಸ್‌, ರಾಜಸ್ಥಾನ : ರಾಜಸ್ಥಾನದ ಖೈರ್ತಾಲ್–ತಿಜಾರಾ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮನೆ ಮೇಲ್ಛಾವಣಿಯಲ್ಲಿ ಇಡಲಾಗಿದ್ದ ನೀಲಿ ಬಣ್ಣದ ಡ್ರಮ್‌ನಲ್ಲಿ ಯುವಕನ ಶವ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಈ ಘಟನೆ ಇತ್ತೀಚೆಗೆ ಮೀರತ್‌ನಲ್ಲಿ ನಡೆದ ಸಾಹಿಲ್ ಕೊಲೆ ಪ್ರಕರಣವನ್ನು ನೆನಪಿಸುವಂತಿದೆ.

ಡ್ರಮ್‌ನಲ್ಲಿ ಶವ ಪತ್ತೆ :

ಪೊಲೀಸ್ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯನ್ನು ಹಂಸರಾಜ್ ಅಲಿಯಾಸ್ ಸೂರಜ್ ಎಂದು ಗುರುತಿಸಲಾಗಿದೆ. ಅವರು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ನವದಿಯಾ ನವಾಜ್‌ಪುರ ನಿವಾಸಿಯಾಗಿದ್ದು, ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದರು.

ಹಂಸರಾಜ್ ಅವರು 2015 ರಿಂದ ಖೈರ್ತಾಲ್‌ನ ಆದರ್ಶ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಅವರು ಪತ್ನಿ ಲಕ್ಷ್ಮಿ ಅಲಿಯಾಸ್ ಸುನೀತಾ ಮತ್ತು ಮೂವರು ಮಕ್ಕಳೊಂದಿಗೆ ಅಲ್ಲೇ ವಾಸಿಸುತ್ತಿದ್ದರು.

ಈ ಕ್ರೈಂ ಸುದ್ದಿ ಓದಿ : ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder.

ಡ್ರಮ್‌ನಲ್ಲಿ ಶವ ಪತ್ತೆ: ಏನಿದು ಪ್ರಕರಣ?

ಮನೆಯ ಮಾಲೀಕ ಮಿಥಿಲೇಶ್ ಅವರು ಜನ್ಮಾಷ್ಟಮಿ ದಿನ ಮಾರುಕಟ್ಟೆಗೆ ತೆರಳಿದ್ದರು. ಮನೆಗೆ ಮರಳಿದಾಗ, ಬಾಡಿಗೆದಾರರ ಕುಟುಂಬ ಮನೆಲ್ಲಿರಲಿಲ್ಲ.

ಕೆಲವು ದಿನಗಳ ನಂತರ ಮನೆಗೆ ತೀವ್ರ ದುರ್ವಾಸನೆ ಹರಡತೊಡಗಿತು. ಇದರಿಂದ ಅನುಮಾನಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ, ಮೇಲ್ಛಾವಣಿಯ ಕೋಣೆಯಲ್ಲಿ ಇಟ್ಟಿದ್ದ ನೀಲಿ ಡ್ರಮ್ ಒಳಗೆ ಶವ ಪತ್ತೆಯಾಯಿತು.

ಕೊಲೆ ಮಾಡಿದ ವಿಧಾನ :

ಪ್ರಾಥಮಿಕ ತನಿಖೆಯ ಪ್ರಕಾರ, ಪೊಲೀಸರು ಮನೆಯ ಮೇಲ್ಛಾವಣಿಗೆ ತೆರಳಿ ಪರಿಶೀಲನೆ ನಡೆಸಿದಾಗ, ಅಲ್ಲಿದ್ದ ನೀಲಿ ಡ್ರಮ್ ಮೇಲ್ಭಾಗದಲ್ಲಿ ಕಲ್ಲು ಇಟ್ಟಿರುವುದು ಕಂಡುಬಂದಿತು. ಕಲ್ಲು ತೆಗೆದ ಬಳಿಕ ಡ್ರಮ್ ಒಳಗೆ ಶವವಿರುವುದು ಪತ್ತೆಯಾಯಿತು. ಶವವನ್ನು ಬೇಗನೆ ಕೊಳೆಯಿಸಲು ಡ್ರಮ್ ಒಳಗೆ ಉಪ್ಪು ಹಾಕಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಮೃತ ಹಂಸರಾಜ್ ಅವರನ್ನು ಹರಿತವಾದ ಆಯುಧದಿಂದ ಗಂಟಲು ಕತ್ತರಿಸಿ ಹತ್ಯೆ ಮಾಡಲಾಗಿದೆ. ಬಳಿಕ ಶವವನ್ನು ನೀಲಿ ಡ್ರಮ್‌ನಲ್ಲಿ ಶವ ಇಟ್ಟು, ದುರ್ವಾಸನೆ ಹೊರಬರದಂತೆ ಉಪ್ಪು ಹಾಕಿ ಮುಚ್ಚಲಾಗಿದೆ.

ಈ ಘಟನೆಗೆ ಸಂಬಂಧಿಸಿ ಮೃತನ ಪತ್ನಿ ಹಾಗೂ ಮನೆ ಮಾಲೀಕರ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಘಟನೆ ಬಳಿಕ ರಾಜಸ್ಥಾನದ ರಾಮಗಢ ತಾಲೂಕಿನ ಅಲಾವಡಾ ಗ್ರಾಮದ ಇಟ್ಟಿಗೆ ಭಟ್ಟೆಗೆ ಕೆಲಸಕ್ಕೆ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ವೇಳೆ, ಮೃತ ಹಂಸರಾಜ್ ಅವರ ಮೂರು ಮಕ್ಕಳನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆಹಚ್ಚಿದ್ದಾರೆ. ಸದ್ಯ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಕೊಲೆಯ ನಿಖರ ಕಾರಣ ಹಾಗೂ ಇತರರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪತ್ನಿ ಮತ್ತು ಮನೆ ಮಾಲೀಕರ ಮಗನ ಬಂಧನ :

ಪೊಲೀಸ್ ತನಿಖೆಯಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ಮೃತನ ಪತ್ನಿ ಲಕ್ಷ್ಮಿಗೆ ಮನೆ ಮಾಲೀಕರ ಮಗ ಜಿತೇಂದ್ರನ ಜೊತೆ ಅನೈತಿಕ ಸಂಬಂಧವಿತ್ತು ಎಂಬುದು ಬೆಳಕಿಗೆ ಬಂದಿದೆ.

ಘಟನೆ ಬಳಿಕ ಇಬ್ಬರೂ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಸದ್ಯ ಅವರು ಪೊಲೀಸ್ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನು ಓದಿ : ಧಾರವಾಡದಲ್ಲಿ ಯುವತಿಯ ಭೀಕರ ಹತ್ಯೆ ಮಾಡಿ ಶವವನ್ನು ಬಿಸಾಡಿದ ದುಷ್ಕರ್ಮಿಗಳು.

ಡ್ರಮ್‌ನಲ್ಲಿ ಶವ ಪತ್ತೆ ; ತನಿಖೆ ಮುಂದುವರಿಕೆ :

ಪೊಲೀಸರು ಈ ಪ್ರಕರಣವನ್ನು ಯೋಜಿತ ಕೊಲೆ ಎಂದು ಪರಿಗಣಿಸಿದ್ದು, ಕೊಲೆಯ ನಿಖರ ಕಾರಣ ಮತ್ತು ಘಟನೆಯಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ? ಕೊಲೆಗೆ ಬಳಸಿದ ಆಯುಧದ ಮೂಲ ಸೇರಿದಂತೆ ಇತರೇ ಮಾಹಿತಿ ಕುರಿತು ತನಿಖೆ ಮುಂದುವರಿದಿದೆ.


Courtesy :ಈ ಸುದ್ದಿಯಲ್ಲಿರುವ ಮಾಹಿತಿ ಪೊಲೀಸ್ ಮೂಲಗಳು ಹಾಗೂ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಆರೋಪಿಗಳೇ ಆಗಿರುತ್ತಾರೆ. ಯಾವುದೇ ವ್ಯಕ್ತಿಯ ಗೌರವಕ್ಕೆ ಧಕ್ಕೆಯಾಗುವ ಉದ್ದೇಶ ಇಲ್ಲ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments