ಜನಸ್ಪಂದನ ನ್ಯೂಸ್, ಡೆಸ್ಕ್ : ಯುವತಿಯೋರ್ವಳು ಕಂಠಪೂರ್ತಿ ಕುಡಿದು ನಗರದ ಜನನಿಬಿಡ ರಸ್ತೆಯಲ್ಲಿ ಡೊಂಬರಾಟ ಮಾಡುತ್ತಿರುವ ವಿಡಿಯೋ (Video) ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದಿನಬೆಳಗಾದರೂ ಪಾರ್ಟಿ – ಪಬ್ ಅಂತೇಲ್ಲಾ ಹೇಳಿ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿಯೋ, ಗಟಾರದಲ್ಲಿ ಅಥವಾ ತಿಪ್ಪೆಗುಂಡಿಯಲ್ಲಿ ಬಿದ್ದು ಹೊರಳಾಡುವವರ ಸಂಖ್ಯೆಗೇನು ಕಮ್ಮಿ ಇಲ್ಲ.
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
ಇತ್ತೀಚಿನ ಯುವತಿಯರಾಗಿರಲ್ಲಿ ಅಥವಾ ಮಹಿಳೆಯರಾಗಿರಲ್ಲಿ ಪಾರ್ಟಿ-ಪಬ್ ಅಂತ ಹೋಗಿ ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ತೇಲಾಡುತ್ತಾ, ಜೊತೆಗೆ ಒಂದಿಷ್ಟು ರಂಪಾಟ ಮಾಡಿದ ಹಲವಾರು ವಿಡಿಯೊ (Video) ಗಳು ಈ ಹಿಂದೆಯೂ ಸಹ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಇದೀಗ ಇದೇ ಸಾಲಿಗೆ ಸೇರಿದ ಒಂದು ವಿಡಿಯೋ (Video) ಸಾಮಾಜಿಕ ಜಾಣತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವತಿಯೋರ್ವಳು ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿಯೇ ಕುಳಿತು ಶೋ ಕೊಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದನ್ನು ಓದಿ : Suger : ಸಕ್ಕರೆ ಸೇವನೆಯಿಂದ ಬೊಜ್ಜು, ಮಧುಮೇಹ, ಕ್ಯಾನ್ಸರ್, ಹೃದ್ರೋಗ ಬರುತ್ತದೆಯೇ.?
ಡೆಹ್ರಾಡೂನ್ನ ರಾಯ್ಪುರದ ಜನನಿಬಿಡ ರಸ್ತೆಯಲ್ಲಿ ಯುವತಿಯೋರ್ವಳು ಕುಡಿದ ಮತ್ತಿನಲ್ಲಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ.
ರಾಯ್ಪುರದ ಜನನಿಬಿಡ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯೋಬ್ಬಳು ರಸ್ತೆಯಲ್ಲಾ ನಂದೆ ಎಂಬ ಬಾವದಲ್ಲಿ ಕುಳಿತ ಹಿನ್ನಲೆಯಲ್ಲಿ ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಇದನ್ನು ಓದಿ : Maharashtra : ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರ ಸಾವು.!
ವೈರಲ್ ವಿಡಿಯೊದಲ್ಲಿ, ಕುಡಿದ ಮತ್ತಿನಲ್ಲಿರುವ ಯುವತಿ ಕಪ್ಪು ಬಣ್ಣದ ಸ್ಲಿವ್ಲೆಸ್ ಟಾಪ್ ಮತ್ತು ಡೆನಿಮ್ ಧರಿಸಿ ರಸ್ತೆಯ ಮಧ್ಯದಲ್ಲಿ ಕುಳಿತು ಹೈಡ್ರಾಮಾ ಮಾಡಿದ್ದಾಳೆ. ನಡುರಸ್ತೆಯಲ್ಲಿ ಕುಳಿತ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದನ್ನು ನೀವೂ ವಿಡಿಯೋ (Video) ದಲ್ಲಿ ನೋಡಬಹುದಾಗಿದೆ.
ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನಲೆಯಲ್ಲಿ ಅಲ್ಲಿದ ಓರ್ವ ಭದ್ರತಾ ಸಿಬ್ಬಂದಿ ಯುವತಿಗೆ ಪಕ್ಕಕ್ಕೆ ಸರಿಯುವಂತೆ ಹೇಳುತ್ತಾರೆ. ಆದರೂ ಯುವತಿ ಮಾತ್ರ ಅಲ್ಲಿಂದ ಕದಲಲ್ಲೇ ಇಲ್ಲ. ಅದೇ ವೇಳೆ 3/4 ಧರಿಸಿದ್ದ ಓರ್ವ ವ್ಯಕ್ತಿ ಆಗಮಿಸಿ ಯುವತಿಗೆ ರಸ್ತೆಯೀಬ ಎದ್ದೇಳುವಂತೆ ಹೇಳುತ್ತಾರೆ.
ಇದನ್ನು ಓದಿ : Bagalkot : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ.!
ಈ ವೇಳೆ 3/4 ಧರಿಸಿದ್ದ ವ್ಯಕ್ತಿಗೆ ಕೈ ಕೊಟ್ಟು ಎಬ್ಬಿಸಲು ಕೋರುತ್ತಾಳೆ. ವ್ಯಕ್ತಿಯ ಸಹಾಯದಿಂದ ಎದ್ದ ಯುವತಿ ಎನು ಆಗಿಯೇ ಇಲ್ಲವೇನೋ ಎಂಬಂತೆ ರಸ್ತೆ ಬದಿಯಿಂದ ನಡೆಯುತ್ತ ಸಾಗುವುದನ್ನು ದೃಶ್ಯ (Video) ತೋರಿಸುತ್ತೆ.
ಸದ್ಯ Pyara Uttarakhand प्यारा उत्तराखंड (@PyaraUKofficial) ಎಂಬ ಹೆಸರಿನ X ಫ್ಲಾಟ್ಫಾರಂನಲ್ಲಿ ಈ ಘಟನೆಯ ವಿಡಿಯೊ (Video) ಹಂಚಿಕೊಳ್ಳಲಾಗಿದ್ದು, ಈ ವಿಷಯದ ಬಗ್ಗೆ ಪೊಲೀಸ್ ಕ್ರಮ ಕೈಗೊಂಡಿರುವ ಯಾವುದೇ ವರದಿಗಳಿಲ್ಲ.
ವಿಡಿಯೋ (Video) :
देहरादून, रायपुर। बीच सड़क पर नशे की हालत में धुत लड़की सड़क में बैठकर ट्रैफिक को बाधित करना न केवल खुद के लिए खतरनाक है, बल्कि दूसरों की जान को भी जोखिम में डालता है#Dehradun #Uttarakhand pic.twitter.com/gbb53xsjeG
— Pyara Uttarakhand प्यारा उत्तराखंड (@PyaraUKofficial) June 8, 2025
Telangana : ನದಿಗೆ ಈಜಲು ತೆರಳಿದ್ದ 10 ಜನರಲ್ಲಿ 6 ಜನರು ನದಿಯ ಪಾಲು.!
ಜನಸ್ಪಂದನ ನ್ಯೂಸ್, ಡೆಸ್ಕ್ : ನದಿಗೆ ಈಜಲು ತೆರಳಿದ 10 ಜನರಲ್ಲಿ 6 ಜನರು ನದಿಯ ಪಾಲಾದ ಘಟನೆಯೊಂದು ತೆಲಂಗಾಣ (Telangana) ದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಸಂಜೆ ತೆಲಂಗಾಣ (Telangana) ದ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯಲ್ಲಿ ಮಹಾದೇವಪುರ ಮಂಡಲದ ಅಂಬಾಟಿಪಲ್ಲಿ ಗ್ರಾಮದ ಬಳಿಯ ಮೇಡಿಗಡ್ಡ ಬ್ಯಾರೇಜ್ ಬಳಿಯ ಗೋದಾವರಿ ನದಿಯಲ್ಲಿ ಆರು ಯುವಕರು (ಬಾಲಕರು ಸೇರಿ) ಕಾಣೆಯಾಗುವುದರೊಂದಿಗೆ ದೊಡ್ಡ ದುರಂತ ಸಂಭವಿಸಿದೆ.
ಇದನ್ನು ಓದಿ : 50 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಸಕ್ಸೆಸ್ ; Doctor Arrest.
ದುರ್ಘಟನೆಯಲ್ಲಿ ಸಾವಿಗೀಡಾದ ದುರ್ದೈವಿಗಳನ್ನು ತೆಲಂಗಾಣ ಮತ್ತು ಆಂದ್ರ (Telangana & Andra) ಮೂಲಕ ಮಧುಸೂಧನ್ (18), ಪಟ್ಟಿ ಶಿವ ಮನೋಜ್ (15), ತೊಗರಿ ರಕ್ಷಿತ್ (13), ಸಾಗರ್ (16), ಬೊಲ್ಲೆದ್ಲಾ ರಾಮಚರಣ್ (17) ಮತ್ತು ಪಸುಲ ರಾಹುಲ್ (19) ಎಂದು ಗುರುತಿಸಲಾಗಿದೆ.
ಮಧು ಸುಧನ್ ಮತ್ತು ಅವರ ಸಹೋದರ ಶಿವ ಮನೋಜ್ ಮೊದಲು ಈಜಲು ನೀರಿಗೆ ಇಳಿದಿದ್ದಾರೆ. ಆಗ ಅವರು ಶೀಘ್ರದಲ್ಲೇ ನದಿಯಲ್ಲಿ ಮುಳುಗಲು ಪ್ರಾರಂಭಿಸಿದರು. ಮೃತರಿಗೆ ಸರಿಯಾಗಿ ಈಜಲು ಬರದಿದೇ ಇರಬಹುದು ಅಥವಾ ನೀರಿನ ಮಟ್ಟ ಸರಿಯಾಗಿ ತಿಳಿದಿರುವ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ : Mustard oil : ನಿಮಗಿದು ಗೊತ್ತೇ? ಈ ಎಣ್ಣೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಅಂತ.!
ಆಗ ಸ್ಥಳದಲ್ಲಿದ್ದ ಇತರ ನಾಲ್ವರು ಮಹಾದೇವಪುರ ಮಂಡಲದ ಅಂಬಾಟಿಪಲ್ಲಿ ಗ್ರಾಮದ ಟಿ ರಕ್ಷಿತ್ (13), ಕೆ ಸಾಗರ್ (16), ಕೊರುಟ್ಲಾದ ಬಿ ರಾಮ ಚರಣ್ ಮತ್ತು ಆಂಧ್ರಪ್ರದೇಶದ ಮೂಲದ ಪಿ. ರಾಹುಲ್ ಎನ್ನುವವರು ಮುಳಗುವವರನ್ನು ರಕ್ಷಿಸಲು ಒಬ್ಬರ ಬೆನ್ನು ಹಿಂದೆ ಮತ್ತೋಬ್ಬ ನೀರಿಗೆ ಹಾರಿದ್ದಾರೆ.
ದುರದೃಷ್ಟವಶಾತ್ ಅವರಲ್ಲಿ ಯಾರೂ ಜೀವಂತವಾಗಿ ಹೊರಬರಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಮೃತ ದುರ್ದೈವಿಗಳೆಲ್ಲರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದರು ಎಂದು ತೀಳಿದು ಬಂದಿದ್ದು, ಒಂದು ಮನೆತನಕ್ಕೆ ಸೇರಿದವರಾಗಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ : PMAY : “ಪ್ರಧಾನ ಮಂತ್ರಿ ಅವಾಸ ಯೋಜನೆ” ; ಸ್ವಂತ ಮನೆ ನಿರ್ಮಿಣಕ್ಕೆ 1 ಲಕ್ಷ ನೆರವು.!
ಮಾಹಿತಿ ಪಡೆದ ನಂತರ ಕಟಾರಂ (Telangana) ಡಿಎಸ್ಪಿ ರಾಮ್ ಮೋಹನ್ ರೆಡ್ಡಿ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿ, ಸ್ಥಳೀಯ ಈಜುಗಾರರ ಸಹಾಯದಿಂದ ಶವಗಳನ್ನು ಹೊರತೆಗೆಯಲು ಪ್ರಯತ್ನಸಿದ್ದಾರೆ. (ಏಜೆನ್ಸಿಸ್)