ಜನಸ್ಪಂದನ ನ್ಯೂಸ್, ಡೆಸ್ಕ್ : ಈ ಡಿಜಿಟಲ್ ಯುಗದಲ್ಲಿ ಸೈಬರ್ ಕ್ರೈಮ್ ಸಂಖ್ಯೆ ಹೆಚ್ಚಾಗುತ್ತಿದೆ. ಕದೀಮರು ನಾನಾ ರೀತಿಯಲ್ಲಿ ಮೊಬೈಲ್ (Ex:whatsapp) ಬಳಕೆದಾರರನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ. ಸೈಬರ್ ಕದೀಮರು ಕೆಲ ನಂಬರ್ ಮೂಲಕ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ.
ಜನರನ್ನು ಮೋಸಗೊಳಿಸಲು (fraud) ಸ್ಕ್ಯಾಮರ್ ಗಳು ಹೊಸ Corporation ರೂಪಿಸುತ್ತಲೇ ಇರುತ್ತಾರೆ. ಟ್ರಾಯ್, ಸ್ಪಾಮ್ ಕರೆ ಸೇರಿದಂತೆ ಹಲವು ಕರೆಗಳನ್ನು block ಮಾಡುತ್ತದೆ.
ಇದನ್ನು ಓದಿ : ರೇಪ್ ಕೇಸ್ : ತಾಯಿಯ ದೂರಷ್ಟೇ ಆರೋಪಿಯನ್ನು ದೋಷಿಯೆಂದು ನಿರ್ಧರಿಸಲಾಗದು ; Highcourt.
ಆದರೆ ಸೈಬರ್ ವಂಚಕರು ಮೊಬೈಲ್ ಫೋನ್ಗಳಿಗೆ ಅಪರಿಚಿತ Link ಅಥವಾ SMS ಕಳುಹಿಸಿ ಯಾಮಾರಿಸುತ್ತಿದ್ದಾರೆ.
ಸೈಬರ್ ಅಪರಾಧಿಗಳು ಸದ್ಯ ಹೊಸ ಮೋಸದ ಮಾರ್ಗವೊಂದನ್ನು ಕಂಡುಹಿಡಿದಿದ್ದು, ನಿಮ್ಮ ಮೊಬೈಲ್ಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ನಲ್ಲಿ ಫೋಟೋ ಕಳುಹಿಸುತ್ತಿದ್ದಾರೆ.
ಇದನ್ನು ಓದಿ : Health : ಉಪ್ಪನ್ನು ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಅಂತ ಕಡಿಮೆ ತಿನ್ನುತ್ತಿದ್ದೀರಾ.?
ನೀವು ಈ ಚಿತ್ರ ತುಂಬಾ ಸಾಮಾನ್ಯವಾಗಿದೆ ಎಂದು ಅದರ ಮೇಲೆ ಕ್ಲಿಕ್ ಮಾಡುತ್ತೀರಿ. ಆದರೆ ನಿಮಗೆ ಗೊತ್ತೇ.? ಈ ಫೋಟೋದಲ್ಲಿ ತುಂಬಾ ಅಪಾಯಕಾರಿ ಮಾಲ್ವೇರ್ ಕೋಡ್ ಅಡಗಿದೆ.
ನೀವು ಫೋಟೋ ಮೇಲೆ ಕ್ಲಿಕ್ ಮಾಡಿದಾಗ, ನಿಮ್ಮ ಮೊಬೈಲ್ನಲ್ಲಿ ಮಾಲ್ವೇರ್ install ಆಗುತ್ತದೆ ಎಂದು ತಿಳಿಯಿರಿ. ಇದಾದ ಬಳಿಕ ವಂಚಕರು ನಿಮ್ಮ ಮೊಬೈಲ್ನ್ನು ಸಂಪೂರ್ಣ Controlಗೆ ತೆಗೆದುಕೊಳ್ಳುತ್ತಾರೆ.
ಇದನ್ನು ಓದಿ : ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಕರ್ನಲ್ ಸೋಫಿಯಾ ಖುರೇಷಿ : ಹುಕ್ಕೇರಿ ಶಿವಾಚಾರ್ಯ ಶ್ರೀ.
ನಿಮ್ಮ ಬ್ಯಾಂಕಿಂಗ್ ಅಪ್ಲಿಕೇಶನ್ಗಳು, ಕ್ಯಾಮೆರಾ ಮತ್ತು ಗ್ಯಾಲರಿ ಇತ್ಯಾದಿಗಳ ಸಂಪೂರ್ಣ ನಿಯಂತ್ರಣವು (Full control) ಸೈಬರ್ ಅಪರಾಧಿಗಳ ಕೈಯಲ್ಲಿರುತ್ತದೆ. ಇಲ್ಲಿ, ನೀವು ಎರಡು ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸಿದ್ದರೂ (active) ಸಹ, ಅದನ್ನು ಇನ್ನೂ ಬೈಪಾಸ್ ಮಾಡಬಹುದು ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಅಂತಹ ಪರಿಸ್ಥಿತಿಯಲ್ಲಿ, ವಂಚಕರು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಅಷ್ಟೂ ದುಡ್ಡನ್ನು ಕದಿಯಬಹುದು.
ಈ ವಂಚನೆಯಿಂದ ಪಾರಾಗಲು Unknown number ನಿಂದ ಬರುವ ಯಾವುದೇ ಫೋಟೋವನ್ನು ನೀವು ಎಂದಿಗೂ Click ಮಾಡಬೇಡಿ. ಅಂತಹ ಸಂಖ್ಯೆಯ ಮೂಲಕ ನಿಮಗೆ ಬಂದಿರುವ ಯಾವುದೇ ಸಂದೇಶವನ್ನು ಎಂದಿಗೂ ತೆರೆಯಬೇಡಿ.
ಇದನ್ನು ಓದಿ : ಮಹಿಳೆಯ ಕಿವಿಯೊಳಗೆ ಸೇರಿದ ಹಾವು ; ಎದೆ ಝಲ್ಲೆನ್ನಿಸುವ Video ವೈರಲ್.!
ಇನ್ನು ಯಾವುದೇ ರೀತಿಯ ವಂಚನೆಗೆ ಒಳಗಾಗಬಾರದು ಎಂದು ಬಯಸಿದರೆ, ನಿಮ್ಮ ಮೊಬೈಲ್ನಲ್ಲಿ ಯಾವುದೇ ರೀತಿಯ APK ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ. ಇವು Playstore ನಲ್ಲಿ ಲಭ್ಯವಿಲ್ಲದ ಅಪ್ಲಿಕೇಶನ್ಗಳಾಗಿವೆ. ಹೀಗೆ ಮಾಡಿದರೆ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು.
ಹಿಂದಿನ ಸುದ್ದಿ : ಉಪ್ಪು ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಅಂತ ಕಡಿಮೆ ತಿನ್ನುತ್ತೀರಾ.?
ಜನಸ್ಪಂದನ ನ್ಯೂಸ್, ಡೆಸ್ಕ್ :ಉಪ್ಪನ್ನು ಹೆಚ್ಚು ತಿನ್ನುವುದು ಒಳ್ಳೆಯದಲ್ಲ ಅಂತ ಕಡಿಮೆ ತಿನ್ನುತ್ತಿದ್ದೀರಾ.? ಈ ಅಭ್ಯಾಸ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದೇ.?
ಸಾಮಾನ್ಯವಾಗಿ ವೈದ್ಯರು ಅಧಿಕ ರಕ್ತದೊತ್ತಡ, ಹೃದ್ರೋಗ ಅಥವಾ ಇನ್ನಾವುದೇ ಗಂಭೀರ ಕಾಯಿಲೆಯಿಂದ (serious illness) ಬಳಲುತ್ತಿರುವವರಿಗೆ ಮಾತ್ರ ಕಡಿಮೆ ಉಪ್ಪನ್ನು ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ.
ಆದರೆ ಅತಿಯಾದ ಉಪ್ಪು ಯಾರಿಗಾದರೂ ಗಂಭೀರವಾದ ಹಾನಿಯನ್ನುಂಟು ಮಾಡಬಹುದು. ಹೀಗಾಗಿ ಬಹುತೇಕ ಜನರು ಕಡಿಮೆ ಉಪ್ಪನ್ನು ತಿನ್ನುವುದರಿಂದ ಗಂಭೀರ ಕಾಯಿಲೆಗಳು ಬರುವುದಿಲ್ಲ ಅಂತ ಅಂದುಕೊಂಡು ಉಪ್ಪನ್ನು ಕಡಿಮೆ ತಿನ್ನುತ್ತಾರೆ.
ಇದನ್ನು ಓದಿ : ವಿಡಿಯೋ : ಸೇವೆಗೆ ತೆರಳುತ್ತಿದ್ದ ಸೈನಿಕನ ಬಳಿ ಲಂಚ ಕೇಳಿದ TTE ; ಆಮೇಲೆನಾಯ್ತು.?
* ಕಡಿಮೆ ಉಪ್ಪನ್ನು ತಿನ್ನುವ ಜನರು ಸಾಮಾನ್ಯ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೆನಿನ್, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಹೊಂದಿರುತ್ತಾರೆ.
ಆರೋಗ್ಯವಂತ ವ್ಯಕ್ತಿಗಳಲ್ಲಿ ಕಡಿಮೆ ಸೋಡಿಯಂ ಆಹಾರವು ಎಲ್ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಅನ್ನು ಶೇ. 4.6 ಮತ್ತು ಟ್ರೈಗ್ಲಿಸರೈಡ್ಗಳನ್ನು ಶೇ. 5.9 ರಷ್ಟು ಹೆಚ್ಚಿಸಿದೆ ಎಂದು National Library of Medicine ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಿದೆ.
ಇದನ್ನು ಓದಿ : ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಕರ್ನಲ್ ಸೋಫಿಯಾ ಖುರೇಷಿ : ಹುಕ್ಕೇರಿ ಶಿವಾಚಾರ್ಯ ಶ್ರೀ.
* ಹೃದಯ ಮತ್ತು ರಕ್ತಕ್ಕೆ ಆಮ್ಲಜನಕದ ಅಗತ್ಯಗಳನ್ನು ಪೂರೈಸಲು ಬೇಕಾದಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯ ವೈಫಲ್ಯ (Heart failure) ಉಂಟಾಗುತ್ತದೆ. ಇದರ ಅರ್ಥ ಹೃದಯವು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದಲ್ಲ. ಆದರೆ ಇದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ.
ರಾಡ್ ಎಸ್. ಟೇಲರ್ ಮತ್ತು ಸಹೋದ್ಯೋಗಿಗಳ ಸಂಶೋಧನೆಯು (research), ಹೃದಯ ವೈಫಲ್ಯ ಹೊಂದಿರುವ ಜನರು ಕಡಿಮೆ ಸೋಡಿಯಂ ಸೇವನೆಯಿಂದ ಸಾಯುವ ಅಪಾಯವನ್ನು ಸೂಚಿಸುತ್ತದೆ.
ಇದನ್ನು ಓದಿ : ಬೆಳಿಗ್ಗೆ ತುಟಿ colour ಬದಲಾಗಿ ಮುಖ ಊದಿಕೊಳ್ಳುತ್ತಿದೆಯೇ.? ಇದು ಈ ಗಂಭೀರ ರೋಗದ ಲಕ್ಷಣ.!
* ಕಡಿಮೆ ಉಪ್ಪನ್ನು ತಿನ್ನುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ನಿಜ. ಅದಾಗ್ಯೂ, ಅಧಿಕ ರಕ್ತದೊತ್ತಡಕ್ಕೆ ಉಪ್ಪು ಮಾತ್ರ ಕಾರಣವಲ್ಲ (Salt is not the only cause of high blood pressure). ಅಧ್ಯಯನದ ಪ್ರಕಾರ, ದಿನಕ್ಕೆ 2,000 ಮಿ ಗ್ರಾಂ ಗಿಂತ ಕಡಿಮೆ Sodium ತೆಗೆದುಕೊಳ್ಳುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದ್ರೋಗದಿಂದ ಮರಣ ಹೊಂದುವ ಅಪಾಯ ಹೆಚ್ಚು.
* ಕಡಿಮೆ ಉಪ್ಪನ್ನು ತಿನ್ನುವುದರಿಂದ ಹೈಪೋನಾಟ್ರೀಮಿಯಾದ (Hyponatremia) ಅಪಾಯ ಹೆಚ್ಚಾಗುತ್ತದೆ. ಈ ಹೈಪೋನಾಟ್ರೀಮಿಯಾ ಎನ್ನುವುದು ರಕ್ತದಲ್ಲಿ ಕಡಿಮೆ ಮಟ್ಟದ ಸೋಡಿಯಂನಿಂದ ಉಂಟಾಗುವ ಸ್ಥಿತಿಯಾಗಿದೆ. ಇದರ ಲಕ್ಷಣಗಳು ನಿರ್ಜಲೀಕರಣದಿಂದ ಉಂಟಾಗುವ ಲಕ್ಷಣಗಳನ್ನು ಹೋಲುತ್ತವೆ. ತೀವ್ರತರವಾದ ಪ್ರಕರಣಗಳಲ್ಲಿ ಮೆದುಳಿನ ಊತ ಇರಬಹುದು.
ಇದನ್ನು ಓದಿ : ಎಚ್ಚರಿಕೆ : ನಿಮ್ಮ ಮನೆಗೆ ತಂದ LPG ಸಿಲಿಂಡರ್ ಮೇಲೆ ಬರೆದಿರುವ ಈ ಕೋಡ್ ಖಂಡಿತವಾಗಿ ನೋಡಿ.
* ಉಪ್ಪನ್ನು ಸೇವಿಸದಿದ್ದರೆ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ (Electrolyte imbalance) ಕಾರಣವಾಗುತ್ತದೆ. ಇದರ ಪರಿಣಾಮ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಯಾವುದೇ ರೀತಿಯ ನರ ಸಂವಹನವನ್ನು ಕಡಿತಗೊಳಿಸಲಾಗುತ್ತದೆ. ಇದರಿಂದ ದೇಹದಲ್ಲಿ ವಾಕರಿಕೆ, ತಲೆಸುತ್ತು, ನಿರ್ಜಲೀಕರಣದಂತಹ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ಉಪ್ಪನ್ನು ಬಿಡುವ ಬಗ್ಗೆ ಎಂದಿಗೂ ಯೋಚಿಸಬಾರದು
* ದಿನವಿಡೀ ಉಪ್ಪನ್ನು ತಿನ್ನದಿರುವುದು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಅಧ್ಯಯನದ ಪ್ರಕಾರ, ಜೀವಕೋಶಗಳು ಹಾರ್ಮೋನ್ ಇನ್ಸುಲಿನ್ ಸಿಗ್ನಲ್ಗೆ ಪ್ರತಿಕ್ರಿಯಿಸದಿದ್ದಾಗ, ಇನ್ಸುಲಿನ್ ಪ್ರತಿರೋಧ ಉಂಟಾಗುತ್ತದೆ.
ಇದನ್ನು ಓದಿ : Reels : ನಿಮಗೂ ರೀಲ್ಸ್ ಹುಚ್ಚಾ.? ಹಾಗಾದ್ರೆ ಮೈ ಜುಂ ಎನ್ನೋ ವಿಡಿಯೋ ನೋಡಿ.
* ಟೈಪ್ 1 ಹಾಗೂ ಟೈಪ್ 2 ಡಯಾಬಿಟಿಸ್ ಇರುವವರು ಕಡಿಮೆ ಸೋಡಿಯಂ ಡಯಟ್ನಿಂದ ಸಾಯುವ ಅಪಾಯವಿದೆ (There is a risk of death from a sodium diet) ಎಂದು ಸಂಶೋಧನೆಗಳು ತಿಳಿಸಿವೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಮತ್ತು ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ