ಜನಸ್ಪಂದನ ನ್ಯೂಸ್, ಕೋಲಾರ : ಜಿಲ್ಲೆಯಲ್ಲಿ ಇದೀಗ ದುಃಖಕರ ಘಟನೆ ಒಂದು ಬೆಳಕಿಗೆ ಬಂದಿದೆ. ಜಾತಿ ಗಣತಿ ಸಮೀಕ್ಷೆ ಕಾರ್ಯಕ್ಕಾಗಿ ತೆರಳಿದ ಶಿಕ್ಷಕಿ (Teacher) ಯೊಬ್ಬರು ಎರಡು ದಿನಗಳಿಂದ ನಾಪತ್ತೆಯಾಗಿದ್ದರೆ, ಇದೀಗ ಅವರ ಶವ ಕೆಜಿಎಫ್ ತಾಲೂಕಿನ ಕೆರೆಯಲ್ಲಿ ಪತ್ತೆಯಾಗಿದೆ.
ಮೃತರನ್ನು ಅಖ್ತರ್ ಬೇಗಂ (53) ಎಂದು ಗುರುತಿಸಲಾಗಿದ್ದು, ಅವರು ಕೋಲಾರ ತಾಲೂಕಿನ ಬಿ.ಹೊಸಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ (Teacher) ಯಾಗಿದ್ದರು. ಅಖ್ತರ್ ಬೇಗಂ ಅವರು ಕೋಲಾರದ ಮಹಾಲಕ್ಷ್ಮೀ ಬಡವಾಣೆಯಲ್ಲಿ ವಾಸವಾಗಿದ್ದರು.
Raju : ಉತ್ತರ ಕರ್ನಾಟಕದ ಹಿರಿಯ ರಂಗ ಕಲಾವಿದ, ಹಾಸ್ಯನಟ ರಾಜು ತಾಳಿಕೋಟೆ ನಿಧನ.!
ಮಾಹಿತಿಯ ಪ್ರಕಾರ, ಅವರು ನರಸಾಪುರ ಪ್ರದೇಶದಲ್ಲಿ ಜಾತಿ ಗಣತಿ ಸಮೀಕ್ಷೆ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಯ ಮುಗಿಸಿಕೊಂಡು ವಾಪಸ್ಸಾಗಬೇಕಿದ್ದ ಅವರು ಅಕ್ಟೋಬರ್ 13ರಂದು ಮನೆಗೆ ತಲುಪದೇ ನಾಪತ್ತೆಯಾಗಿದ್ದರು. ಕುಟುಂಬದವರು ಹಲವೆಡೆ ಹುಡುಕಾಟ ನಡೆಸಿದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಕೋಲಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಎರಡು ದಿನಗಳ ನಂತರ ಕೆಜಿಎಫ್ ತಾಲೂಕಿನ ಐಪಳ್ಳಿ ಕೆರೆಯಲ್ಲಿ ಮಹಿಳೆಯ (Teacher) ಶವ ತೇಲುತ್ತಿರುವುದು ಕಂಡುಬಂದಿದ್ದ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ತೆಗೆಯಿಸಿ ಪರಿಶೀಲನೆ ನಡೆಸಿದ್ದು, ಅದು ಶಿಕ್ಷಕಿ (Teacher) ಅಖ್ತರ್ ಬೇಗಂ ಅವರದೇ ಎಂದು ಗುರುತಿಸಿದ್ದಾರೆ.
Train ಹಳಿ ಮೇಲೆ ಬೈಕ್ ಸ್ಕಿಡ್ ಆಗಿ ಬಿದ್ದ ಯುವಕ : ಕ್ಷಣಾರ್ಧದಲ್ಲೇ ಬಂದ ರೈಲು ; ಮುಂದೆನಾಯ್ತು.? ವಿಡಿಯೋ ನೋಡಿ.!
ಘಟನೆಯ ಬಗ್ಗೆ ಕೊಲೆ ಅಥವಾ ಆತ್ಮಹತ್ಯೆ ಎಂಬ ಅನುಮಾನ ವ್ಯಕ್ತವಾಗಿದೆ. ಪೋಲಿಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಜಾತಿ ಗಣತಿ ಸಮೀಕ್ಷೆ ಕಾರ್ಯದಲ್ಲಿ ಹೆಚ್ಚಾದ ಒತ್ತಡದಿಂದಾಗಿ ಅವರು (Teacher) ಮಾನಸಿಕ ಒತ್ತಡ ಅನುಭವಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಜಿಲ್ಲೆಯ ಶಿಕ್ಷಕ (Teacher) ರಲ್ಲಿ ಆತಂಕ ಉಂಟುಮಾಡಿದೆ. ಸಮೀಕ್ಷೆ ಕಾರ್ಯದಲ್ಲಿರುವ ಶಿಕ್ಷಕರ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಕುರಿತ ಚರ್ಚೆಯೂ ಮುಂದುವರಿದಿದೆ. ಕೋಲಾರ ಪೊಲೀಸ್ ಇಲಾಖೆಯವರು ಪ್ರಕರಣದ ನಿಖರ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ.
IPPB ನಲ್ಲಿ 348 ಹುದ್ದೆಗಳ ನೇಮಕಾತಿ ; ಇಲ್ಲಿದೆ ಸಂಪೂರ್ಣ ವಿವರ.!

ಜನಸ್ಪಂದನ ನ್ಯೂಸ್, ನೌಕರಿ : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (India Post Payments Bank – IPPB) ನಿಂದ ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆಗೊಂಡಿದೆ.
ಬ್ಯಾಂಕ್ನಲ್ಲಿ ಗ್ರಾಮೀಣ ಡಾಕ್ ಸೇವಕರ (Gramin Dak Sevaks – Executive) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಈ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ippbonline.com ಮೂಲಕ ವಿವರಗಳನ್ನು ಪರಿಶೀಲಿಸಬಹುದು.
Food : ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!
ಈ ನೇಮಕಾತಿ ಕುರಿತು ಅರ್ಜಿ ಸಲ್ಲಿಸುವ ವಿಧಾನ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ ಹಾಗೂ ಇತರ ಮುಖ್ಯ ಮಾಹಿತಿಗಳನ್ನು ಕೆಳಗೆ ವಿವರಿಸಲಾಗಿದೆ.
IPPB ಹುದ್ದೆಗಳ ಮಾಹಿತಿ :
- ಇಲಾಖೆ ಹೆಸರು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB).
- ಹುದ್ದೆಗಳ ಹೆಸರು ಮತ್ತು ಸಂಖ್ಯೆ : ಗ್ರಾಮೀಣ ಡಾಕ್ ಸೇವಕರು (Executive) – 348 ಹುದ್ದೆಗಳು.
- ಉದ್ಯೋಗ ಸ್ಥಳ : ಅಖಿಲ ಭಾರತ (All India).
- ಅಪ್ಲಿಕೇಶನ್ ವಿಧಾನ : ಆಫ್ಲೈನ್ ಮೂಲಕ (Offline Mode).
ಸಂಬಳದ ವಿವರ :
- IPPB ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ. 30,000/- ನೀಡಲಾಗುತ್ತದೆ.
AI ಬಳಸಿ 36 ಮಹಿಳಾ ಸಹಪಾಠಿಗಳ ಅಶ್ಲೀಲ ಫೋಟೋ ತಯಾರಿಸಿದ ಆರೋಪ ; IT ವಿದ್ಯಾರ್ಥಿ ಅಮಾನತು.!
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರೈಸಿರಬೇಕು. ಯಾವುದೇ ಶಾಖೆಯ ಪದವೀಧರರು ಈ ಹುದ್ದೆಗೆ ಅರ್ಹರಾಗಿದ್ದಾರೆ.
ವಯೋಮಿತಿ :
- ಕನಿಷ್ಠ ವಯಸ್ಸು : 20 ವರ್ಷಗಳು.
- ಗರಿಷ್ಠ ವಯಸ್ಸು : 35 ವರ್ಷಗಳು.
(ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲು ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯವಾಗಬಹುದು.)
ಅರ್ಜಿ ಶುಲ್ಕ :
- ಎಲ್ಲಾ ಅಭ್ಯರ್ಥಿಗಳಿಗೆ : ರೂ.750/-
NWKRTC ನಲ್ಲಿ ಸಹಾಯಕ ಸಂಚಾರ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಆಯ್ಕೆ ವಿಧಾನ :
ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳಲ್ಲಿ ನಡೆಯಲಿದೆ,
- ಆನ್ಲೈನ್ ಪರೀಕ್ಷೆ (Online Exam).
- ಸಂದರ್ಶನ (Interview).
ಈ ಎರಡೂ ಹಂತಗಳಲ್ಲಿ ಅರ್ಹತೆ ಸಾಧಿಸಿದ ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಗೊಳ್ಳಲಿದ್ದಾರೆ.
ಅರ್ಜಿ ಸಲ್ಲಿಸುವ ವಿಧಾನ :
- ಮೊದಲು ಅಧಿಕೃತ ವೆಬ್ಸೈಟ್ ippbonline.com ಗೆ ಭೇಟಿ ನೀಡಿ.
- “Recruitment 2025” ವಿಭಾಗದಲ್ಲಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ.
- ಪ್ರಕಟಣೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಹಾಗೂ ನಿಯಮಗಳನ್ನು ಪರಿಶೀಲಿಸಿ.
- ನೀಡಲಾದ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ.
- ನಿರ್ದಿಷ್ಟ ಪ್ರಮಾಣದ ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರೆ).
- ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ನಂತರ ಅರ್ಜಿಯನ್ನು ಸಲ್ಲಿಸಿ.
- ಅರ್ಜಿ ಪ್ರತಿಯನ್ನು ಮುದ್ರಿಸಿ ಮುಂದಿನ ಹಂತಕ್ಕೆ ಸಂಗ್ರಹಿಸಿಕೊಳ್ಳಿ.
Police ಹಲ್ಲೆಯಿಂದ 22 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ ಆರೋಪ ; ಸಿಸಿಟಿವಿ ದೃಶ್ಯ ವೈರಲ್
ಪ್ರಮುಖ ದಿನಾಂಕಗಳು :
- ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ : 09 ಅಕ್ಟೋಬರ್ 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29 ಅಕ್ಟೋಬರ್ 2025.
IPPB ಪ್ರಮುಖ ಲಿಂಕ್ಗಳು :
- ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸುವ ಮಾರ್ಗಸೂಚಿ : ಇಲ್ಲಿ ಕ್ಲಿಕ್ ಮಾಡಿ.
- ಆನ್ಲೈನ್ ಅರ್ಜಿ ಫಾರ್ಮ್ : ಇಲ್ಲಿ ಕ್ಲಿಕ್ ಮಾಡಿ.
- ಅಧಿಕೃತ ವೆಬ್ಸೈಟ್ : ippbonline.com
ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್ ಮಸಾಲೆ Water ಕುಡಿಯಿರಿ; ಬೊಜ್ಜು, ಮಧುಮೇಹ ಸೇರಿ 5 ಕಾಯಿಲೆಗಳಿಗೆ ಪರಿಹಾರ.!
ಸೂಚನೆ :
ಈ ಲೇಖನವು ಮಾಹಿತಿ ಮತ್ತು ಶಿಕ್ಷಣ ಉದ್ದೇಶಕ್ಕಾಗಿ ಮಾತ್ರ. ಅಭ್ಯರ್ಥಿಗಳು ಯಾವಾಗಲೂ ಅಧಿಕೃತ ವೆಬ್ಸೈಟ್ನಲ್ಲಿ ನೀಡಿರುವ ಅಧಿಸೂಚನೆ ಮತ್ತು ಸೂಚನೆಗಳನ್ನೇ ಅಂತಿಮವಾಗಿ ಪರಿಗಣಿಸಬೇಕು. ಯಾವುದೇ ವಂಚನೆ ಅಥವಾ ಖಾಸಗಿ ಲಿಂಕ್ಗಳಿಂದ ದೂರವಿರಿ.






