ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಒಂದೇ ಕುಟುಂಬದ ಏಳು ಮಂದಿ ಸಾಲಬಾಧೆ (Debt crisis) ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರ್ಯಾಣದ ಪಂಚಕುಲದಲ್ಲಿ ನಡೆದಿದೆ.

ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡವರನ್ನು 42 ವರ್ಷದ ಪ್ರವೀಣ್ ಮಿತ್ತಲ್‌, ಅವರ ಪೋಷಕರು, ಪತ್ನಿ ಮತ್ತು ಮೂವರು ಮಕ್ಕಳು ಇವರಲ್ಲಿ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಎಂದು ಗುರುತಿಸಲಾಗಿದೆ.

ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!

ಬಹಳ ಸಮಯದಿಂದ ಒಂದು ಕಾರು ಜನವಸತಿ ಪ್ರದೇಶದಲ್ಲಿಯ ರಸ್ತೆಯ ಪಕ್ಕದಲ್ಲಿ ನಿಂತುಕೊಂಡಿತ್ತು, ಕಾರಿನಿಂದ ಕಿರುಚಾಟ ಮತ್ತು ಕೂಗು ಕೇಳಿಸುತ್ತಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯ ಜನರು ಕಾರಿನ ಬಳಿ ಬಂದು ತಕ್ಷಣ ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ.

ಆದರೆ ಕಾರಿನ ಬಾಗಿಲು ಒಳಗಿನಿಂದ ಲಾಕ್‌ ಆದ ಪರಿಣಾಮ ಸ್ಥಳೀಯರಿಗೆ ಬಾಗಿಲನ್ನು ತೆರೆಯಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?

ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿ, ಬಾಗಿಲನ್ನು ಒಡೆದು ಒಳ ನೋಡಿದಾಗ ಕಾರಿನಲ್ಲಿ ಎಲ್ಲರೂ ಆಗಲೇ ಸಾವಿಗೀಡಾಗಿದ್ದರು ಎಂದು ತಿಳಿದು ಬಂದಿದೆ.

ಸೋಮವಾರ ಬಾಗೇಶ್ವರ ಧಾಮದಲ್ಲಿ ಆಯೋಜಿಸಲಾದ ಹನುಮಾನ್ ಕಥಾ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದೊಂದಿಗೆ ಡೆಹ್ರಾಡೂನ್ ನಿವಾಸಿ ಪ್ರವೀಣ್ ಮಿತ್ತಲ್ ಪಂಚಕುಲಕ್ಕೆ ಬಂದರು. ಪ್ರವೀಣ್ ಮಿತ್ತಲ್ ಕುಟುಂಬ ಸದಸ್ಯರು ಸೋಮವಾರ ಮಧ್ಯರಾತ್ರಿ ಕಾರ್ಯಕ್ರಮ ಮುಗಿದ ನಂತರ ತಮ್ಮ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನು ಓದಿ : DC ಕಚೇರಿಯಲ್ಲಿ ಶವವಾಗಿ ಪತ್ತೆಯಾದ ಕರ್ತವ್ಯನಿರತ ಮಹಿಳಾ ಕಾನ್ಸ್‌ಟೇಬಲ್.!
ಏನಿದು ಸಾಲಬಾಧೆ/Debt crisis :

ಪ್ರವೀಣ್ ಮಿತ್ತಲ್ ಕುಟುಂಬ ಪಂಚಕುಲದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಈ ಕುಟುಂಬ ವ್ಯಾಪಾರ ನಷ್ಟದಿಂದ ಸಾಲದ ಸುಳಿಯಲ್ಲಿ ಸಿಲುಕಿತ್ತು ಎಂದು ಹೇಳಲಾಗುತ್ತಿದೆ. ಹೀಗೆ ಸಾಲಬಾಧೆ ತಾಳಲಾರದೆ ಕುಟುಂಬ ಸದಸ್ಯರೆಲ್ಲರೂ ತಮ್ಮ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೇ ಕುಟುಂಬದ ಏಳು ಸದಸ್ಯರು ಸಾಲಬಾಧೆಗೆ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಎಲ್ಲ ಸದಸ್ಯರನ್ನು ಗುರುತಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಂಚಕುಲದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಇದನ್ನು ಓದಿ :  Rain : ಹೊಳೆಯಲ್ಲಿ ಹರಿವ ತೆಂಗಿನಕಾಯಿ ತರುವ ತುಂಟ ನಾಯಿಯ ವಿಡಿಯೋ.!

ಈ ಮಧ್ಯ ಒಂದೇ ಕುಟುಂಬದ ಏಳು ಸದಸ್ಯರು ಸಾಲಬಾಧೆಗೆ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ “ನಮ್ಮ ವಿಧಿವಿಜ್ಞಾನ ತಂಡವು ಸ್ಥಳಕ್ಕೆ ತಲುಪಿದೆ. ನಾವು ಕಾರನ್ನು ವಿಶ್ಲೇಷಿಸುತ್ತಿದ್ದೇವೆ… ಅದರ ಹಿಂದಿನ ಕಾರಣಗಳನ್ನು ತಿಳಿಯಲು ಕೂಲಂಕಷವಾಗಿ ಸ್ಕ್ಯಾನ್ ಮಾಡುತ್ತಿದ್ದೇವೆ. ಹೊರಹೊಮ್ಮಿರುವ ಕೆಲವು ಸಂಗತಿಗಳು ಪ್ರಾಥಮಿಕವಾಗಿ ಇದು ಆತ್ಮಹತ್ಯೆಯ ವಿಷಯ ಎಂದು ಸೂಚಿಸುತ್ತವೆ” ಎಂದು ಪಂಚಕುಲ ಡಿಎಸ್ಪಿ ಹಿಮಾದ್ರಿ ಕೌಶಿಕ್ ಹೇಳುತ್ತಾರೆ.

ವಿಡಿಯೋ :

ಹಿಂದಿನ ಸುದ್ದಿ : Rain : ಹೊಳೆಯಲ್ಲಿ ಹರಿವ ತೆಂಗಿನಕಾಯಿ ತರುವ ತುಂಟ ನಾಯಿಯ ವಿಡಿಯೋ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಮಳೆಗಾಲದಲ್ಲಿ ಜೋರಾಗಿ ಸುರಿಯುವ ಮಳೆ (Rain) ಯಿಂದಾಗಿ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಕೆಲವೊಂದು ಕಡೆ ರಣಭೀಕರ ಮಳೆಗೆ ಕಾರು, ಬೈಕ್ ಹರಿದು ಹೋಗುತ್ತವೆ.

Rain :

ಅದರಂತೆ ಮಲೆನಾಡು ಪ್ರದೇಶದ ವಿಚಾರಕ್ಕೆ ಬಂದರೆ ತೋಟದಲ್ಲಿರುವ ಅಡಿಕೆ, ತೆಂಗಿನ ಕಾಯಿಗಳು ಜೋರಾಗಿ ಸುರಿದ ಮಳೆಯಲ್ಲಿ (In the pouring rain) ಹಾಗೆಯೇ ಹರಿದುಕೊಂಡು ಹೋಗಿ ಬಿಡುತ್ತವೆ.

ಇದನ್ನು ಓದಿ : DRDO ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಹೀಗೆ ನೀರಿನಲ್ಲಿ ತೇಲಿಕೊಂಡು ಹೋಗುವ ತೆಂಗಿನಕಾಯಿ, ಅಡಿಕೆಯನ್ನು (Coconut, areca nut) ಹಿಡಿಯುವುದೇ ಮಳೆಗಾಲದಲ್ಲಿ ಅನೇಕರ ಹವ್ಯಾಸವಾಗಿದೆ. ಕೇರಳ ಹಾಗೂ ಕರ್ನಾಟಕದ ಕರಾವಳಿ ಕಡೆ ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ.

ಜೋರಾಗಿ ಸುರಿಯುವ ಮಳೆ ಹಾಗೂ ಗಾಳಿಗೆ ಮರದಲ್ಲಿರುವ ತೆಂಗಿನ ಕಾಯಿ ಕೆಳಗೆ ಬಿದ್ದು ನದಿ ಸೇರುತ್ತವೆ. ಹೀಗಾಗಿ ನದಿಯ ಸಮೀಪ ತೆಂಗಿನ ಕಾಯಿ ಬರುತ್ತೆ ಅಂತ ಅನೇಕರು ಚೀಲ, ಕೋಲು ಹಿಡಿದುಕೊಂಡು ಕಾಯುತ್ತಾ ಕುಳಿತಿರುತ್ತಾರೆ. ಇದು ಮಲೆನಾಡು, ಕರಾವಳಿ ಭಾಗದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯವಾಗಿದೆ.

ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?

ಅಂತೆಯೇ ಹೊಳೆಯಲ್ಲಿ ಸಾಗಿ ಬರುವ ತೆಂಗಿನ ಕಾಯಿಯನ್ನು ನಾಯಿಯೂ ಓಡಿ ಓಡಿ ಹೋಗಿ ಹಿಡಿಯುತ್ತಿದ್ದು (dog is running after the coconut), ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಾಯಿಯೊಂದು ಈ ಹೊಳೆಯಲ್ಲಿ ಬರುವ ತೆಂಗಿನ ಕಾಯಿಯನ್ನು ಓಡಿ ಹೋಗಿ ಹಿಡಿಯುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನು ಓದಿ : Ballari : ಟಿಪ್ಪರ್‌ಗೆ ಕಾರು ಡಿಕ್ಕಿ ; ಇಬ್ಬರು ಮಕ್ಕಳು ಸೇರಿ 4 ಸಾವು.!

santhoshharikrishnan ಎಂಬುವವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಣ್ಣಪುಟ್ಟ ಆಟಗಳನ್ನೆಲ್ಲಾ ನಿಲ್ಲಿಸಿ ತೆಂಗಿನ ಕಾಯಿ ವ್ಯವಹಾರಕ್ಕೆ ಇಳಿದ ಡಾಗೇಶನ್ ಎಂದು ಮಲೆಯಾಳಂನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ನಾಯಿಯೊಂದು ನೀರಿನಲ್ಲಿ ತೇಲಿ ಬಂದ 5ಕ್ಕೂ ಹೆಚ್ಚು ತೆಂಗಿನ ಕಾಯಿಗಳನ್ನು ಹಿಡಿದು ತೆಂಗಿನ ಮರದ ಕೆಳಗೆ ತಂದು ಗುಡ್ಡೆ ಹಾಕುತ್ತಿದೆ. ಮಾಲೀಕ ಕೋಲು ಹಿಡಿದು ಹೊಳೆಯ ನಡುವೆ ತೇಲುವ ತೆಂಗಿನ ಕಾಯಿಯನ್ನು ಪಕ್ಕಕ್ಕೆ ಸರಿಸಿದರೆ ಈ ಶ್ವಾನ ಅದನ್ನು ತೆಗೆದು ತಂದು ನೆಲದ ಮೇಲೆ ಇರಿಸುತ್ತಿದೆ.

ಇದನ್ನು ಓದಿ : NIACL : ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ ನಲ್ಲಿ ಉದ್ಯೋಗವಕಾಶ.!

ವಿಡಿಯೋ ನೋಡಿದ ಅನೇಕರು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಬೆಲೆ ಏರಿಕೆಯ ಈ ಸಮಯದಲ್ಲಿ ಜೀವನ ಮಾಡುವುದು ಹೇಗೆ ಎಂದು ಈ ಶ್ವಾನ ಚೆನ್ನಾಗಿ ಕಲಿತಿದೆ (The dog has learned well). ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಇಡೀ ದಿನ ಬಹಳ ಶ್ರಮದಿಂದ ಕೆಲಸ ಮಾಡಲು ಈ ನಾಯಿ ನಿರ್ದರಿಸಿದಂತಿದೆ ಎಂದು ಕಮೆಂಟ್ ಮಾಡಿದ್ದಾರೆ.

ಒಬ್ಬತು ನನ್ನ ಕಣ್ಣು ತಪ್ಪಿ ಒಂದೇ ಒಂದು ತೆಂಗಿನಕಾಯಿ ದೂರ ಹೋಗಬಾರದು ಎಂದು ಈ ಶ್ವಾನ ನಿರ್ಧರಿಸಿದಂತಿದೆ ಎಂದು ಕಮೆಂಟ್ ಮಾಡಿದರೆ, ಈ ಶ್ವಾನದ ಅದೃಷ್ಟವಂತ ಮಾಲೀಕ ಯಾರು ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ ಮತ್ತೊಬ್ಬರು.

ತುಂಟ ನಾಯಿಯ ವಿಡಿಯೋ :