Tuesday, May 13, 2025
HomeJob10ನೇ ಪಾಸಾಗಿದ್ರೆ ಸಾಕು : ಬ್ಯಾಂಕ್ ಆಫ್ ಬರೋಡಾದಲ್ಲಿ 500 ಉದ್ಯೋಗಾವಕಾಶ.
spot_img
spot_img
spot_img

10ನೇ ಪಾಸಾಗಿದ್ರೆ ಸಾಕು : ಬ್ಯಾಂಕ್ ಆಫ್ ಬರೋಡಾದಲ್ಲಿ 500 ಉದ್ಯೋಗಾವಕಾಶ.

ಜನಸ್ಪಂದನ ನ್ಯೂಸ್‌, ನೌಕರಿ : ಆತ್ಮೀಯರೇ, ನೀವೂ ಉದ್ಯೋಗ ಹುಡುಕುತ್ತಿದ್ದಿರಾ? ಹಾಗಾದ್ರೆ ಇಲ್ಲದೆ ನೋಡಿ ಒಂದು ಒಳ್ಳೆಯ ಸುವರ್ಣಾವಕಾಶ. ಬ್ಯಾಂಕ್ ಆಫ್ ಬರೋಡ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ನೀವೂ ಈ ಕೂಡಲೇ ಅರ್ಜಿ ಸಲ್ಲಿಸಿ.

ಇದೀಗ ಬ್ಯಾಂಕ್ ಆಫ್ ಬರೋಡ ಹೊಸ ಅಧಿಸೂಚನೆ ಬಿಡುಗಡೆ ಮಾಡಿದ್ದು, 500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ 500 ಹುದ್ದೆಗಳಲ್ಲಿ ಕರ್ನಾಟಕದಲ್ಲಿ ಸುಮಾರು 30ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ.

ಇದನ್ನು ಓದಿ : ಇಂಡಿಯನ್ ಆಯಿಲ್‌ನಲ್ಲಿ ಅವಕಾಶಗಳ ಮಹಾಪೂರ ; 1,770 ಹುದ್ದೆಗಳಿಗೆ ಅರ್ಜಿ ಆಹ್ವಾನ.

ನೀವೂ ಕೇವಲ SSLC ಪಾಸಾದರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಹಾಗೂ ಆಸಕ್ತ 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಆನ್‌ಲೈನ್‌  (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಪ್ರಕೃತಿ ವಿಕೋಪ, ಸುನಾಮಿ, ಭೂಕಂಪ, 2-3 ಮಹಾನ್ ನಾಯಕರ ಅಪಮೃತ್ಯು : ಕೋಡಿಮಠ ಶ್ರೀ

ನೇಮಕಾತಿ ವಿವರ :

  • ನೇಮಕಾತಿ ಪ್ರಾಧಿಕಾರ : BOB.
  • ಹುದ್ದೆಯ ಹೆಸರು : ಆಫೀಸ್ ಅಸಿಸ್ಟೆಂಟ್ (ಪಿಯೋನ್)
  • ಹುದ್ದೆಯ ಹೆಸರು : 500.

ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಕನಿಷ್ಠ 10ನೇ (SSLC) ತರಗತಿ ಪಾಸಾದರೆ ಸಾಕು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : “Dolo 650 ಮಾತ್ರೆಯನ್ನು ಹೆಚ್ಚು ಸೇವಿಸುತ್ತೀರಾ? ಹಾಗಿದ್ರೆ ಈ ಮಾಹಿತಿ ನಿಮಗಾಗಿ!”

ವಯೋಮಿತಿ :

ಬ್ಯಾಂಕ್ ಆಫ್ ಬರೋಡದ ನಿಯಮಾನುಸಾರ,

  • ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ
  • ಗರಿಷ್ಠ ವಯೋಮಿತಿ 26 ವರ್ಷ ನಿಗದಿ ಮಾಡಲಾಗಿದೆ.

ವಯೋಮಿತಿ ಸಡಿಲಿಕೆ :

ಮೀಸಲಾತಿ ಆಧಾರದ ಮೇಲೆ,

  • SC/ST ಅಭ್ಯರ್ಥಿಗಳಿಗೆ ಐದು ವರ್ಷ.
  • OBC ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು
  • ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಹತ್ತು ವರ್ಷ ವಯೋಮಿತಿ ಸಡಲಿಕೆ.

ಇದನ್ನು ಓದಿ : ಲಂಚಕ್ಕೆ ಸ್ವೀಕರಿಸುತ್ತಿದ್ದ ವಕ್ಫ್ ಅಧಿಕಾರಿ Lokayukta ಬಲೆಗೆ.!

ಅರ್ಜಿ ಶುಲ್ಕ :

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹಾಗೂ OBC/EWS ಅಭ್ಯರ್ಥಿಗಳಿಗೆ ರೂ. 600/-

SC/ST/PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. 100/- 

ಆಯ್ಕೆಯ ಪ್ರಕ್ರಿಯೆ:

ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವಂತ ಪಿಯೋನ್ (Peon) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೊದಲು ಪರೀಕ್ಷೆ ಹಾಗೂ ಸಂದರ್ಶನ (Examination and interview) ದ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಇದನ್ನು ಓದಿ : ಈ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟರೆ ಆರೋಗ್ಯಕ್ಕೆ Danger! ತಪ್ಪದೆ ಓದಿ.

ಅರ್ಜಿ ಸಲ್ಲಿಸುವ ವಿಧಾನ :

  • ಹೆಸರು ನೋಂದಾಯಿಸಿ.
  • ಹೊಸ Password ಬಳಸಿ ಲಾಗಿನ್ ಆಗಿ.
  • ಈಗ ಕಂಡುಬರುವ Application Form ಭರ್ತಿ ಮಾಡಿ.
  • ಅಗತ್ಯ Document Upload ಮಾಡಿ.
  • Online ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ Download ಮಾಡಿಟ್ಟುಕೊಳ್ಳಿ.

ಪ್ರಮುಖ ದಿನಾಂಕ :

  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 23, ಮೇ 2025.

ಇದನ್ನು ಓದಿ : 2+ ಖಾತೆಗಳಿದ್ರೆ ಹುಷಾರ್ : RBIನಿಂದ ಶಾಕಿಂಗ್ ನಿರ್ಧಾರ ; ₹10,000 ದಂಡ ಫಿಕ್ಸ್.

ಪ್ರಮುಖ ಲಿಂಕ್‌ :

ಹೆಚ್ಚಿನ ವಿವರಗಳಿಗೆ ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ ವಿಳಾಸ bankofbaroda.in ಕ್ಕೆ ಭೇಟಿ ನೀಡಿ.

Disclaimer : The above given information is available On online, candidates should check it properly before applying. This is for information only.

ಹಿಂದಿನ ಸುದ್ದಿ : Attack : ಪಹಲ್ಗಾಮ್‌ ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ಪಲಾಯನ.?

ಜನಸ್ಪಂದನ ನ್ಯೂಸ್‌, ನವದೆಹಲಿ : ಕಳೆದ ಎಪ್ರೀಲ್‌ 22 ರಂದು ಪಹಲ್ಗಾಮ್‌ನಲ್ಲಿ ದಾಳಿ ಮಾಡಿ ಮುಗ್ಧ 26 ಹಿಂದೂ ಪ್ರವಾಸಿಗರನ್ನು ಬಲಿ ಪಡೆದಿದ್ದ 6 ಜನ ಉಗ್ರರು ಚೆನ್ನೈನಿಂದ ಶ್ರೀಲಂಕಾಕ್ಕೆ ಪಲಾಯನ ಮಾಡಿದ್ದಾರೆ ಎಂಬ ವಿಷಯವನ್ನು ಭಾರತೀಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ವಿಮಾನದಲ್ಲಿ ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಚೆನ್ನೈನಿಂದ ಬೆಳಿಗ್ಗೆ 11.59 ಕ್ಕೆ ಕೊಲಂಬೊಗೆ ಬಂದಿಳಿದ ವಿಮಾನವನ್ನು ಶೋಧಿಸಲಾಯಿತು.

ಇದನ್ನು ಓದಿ : Belagavi : ಈಜಲು ಹೋದ ಮೂರು ಮಕ್ಕಳು ಕೃಷಿಹೊಂಡದಲ್ಲಿ ಮುಳುಗಿ ಸಾವು.!

ತನಿಖೆಯ ನಂತರ ವಿಮಾನವನ್ನು ಪರಿಶೀಲಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿದೆ. ಆದಾಗ್ಯೂ, ಭದ್ರತಾ ಕಾರ್ಯವಿಧಾನಗಳಿಂದಾಗಿ ಸಿಂಗಾಪುರಕ್ಕೆ ಹೋಗುವ ಮುಂದಿನ ವಿಮಾನ UL 308 ವಿಳಂಬವಾಯಿತು.

ಶ್ರೀಲಂಕಾದ ಏರ್‌ಲೈನ್ಸ್  (Airlines)ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಕಾಪಾಡಿಕೊಳ್ಳಲು ಅದು ಬದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.

ಇದನ್ನು ಓದಿ : Video : ಸ್ಕೂಟಿ ರೈಡ್ ಮಾಡಿದ ಹೋರಿ.!

ಕಾಶ್ಮೀರದ ಪಹಲ್ಲಂ ಭಯೋತ್ಪಾದಕ ದಾಳಿಯ ಸಂಭಾವ್ಯ ಶಂಕಿತರನ್ನು ಭಾರತೀಯ ಗುಪ್ತಚರ ಇಲಾಖೆ ಈಗಾಗಲೇ ಗುರುತಿಸಿದೆ ಮತ್ತು ಚೆನ್ನೈನಿಂದ ಬಂದ ವಿಮಾನದಲ್ಲಿ ಆರು ಶಂಕಿತ ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿ ಬಂದ ನಂತರ ಶೋಧ ನಡೆಸಲಾಯಿತು ಎಂದು ಶ್ರೀಲಂಕಾದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments