ಜನಸ್ಪಂದನ ನ್ಯೂಸ್, ನೌಕರಿ : ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನಲ್ಲಿ ಖಾಲಿ ಇರುವ 1,007 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS), ಐಟಿ ಅಧಿಕಾರಿ, ಕೃಷಿ ಕ್ಷೇತ್ರ ಅಧಿಕಾರಿ, ರಾಜಭಾಷಾ ಅಧಿಕಾರಿ, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ/ಸಿಬ್ಬಂದಿ ಅಧಿಕಾರಿ ಮತ್ತು ಮಾರ್ಕೆಟಿಂಗ್ ಅಧಿಕಾರಿ ಸೇರಿದಂತೆ ವಿವಿಧ ತಜ್ಞ ಅಧಿಕಾರಿ ಹುದ್ದೆಗಳಲ್ಲಿ 1,007 ಹುದ್ದೆಗಳಿಗೆ IBPS ಸ್ಪೆಷಲಿಸ್ಟ್ ಅಧಿಕಾರಿ (SO) XV ನೇಮಕಾತಿ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 01 ರ ದ್ವಾದಶ ರಾಶಿಗಳ ಫಲಾಫಲ.!
ಹುದ್ದೆಯ ವಿವರಗಳು ಮತ್ತು ಅರ್ಹತೆ :
ಹುದ್ದೆಯ ಹೆಸರು | ಒಟ್ಟು ಹುದ್ದೆಗಳು | ಅರ್ಹತೆ |
ಮಾರ್ಕೆಟಿಂಗ್ ಅಧಿಕಾರಿ (MO) | 350 | MMS / MBA / PGDBA / PGDBM / PGPM / PGDM in Marketing |
ಕೃಷಿ ಕ್ಷೇತ್ರ ಅಧಿಕಾರಿ (AFO) | 310 | 4-Year Degree in Agriculture or equivalent (e.g., Horticulture, Animal Husbandry) |
ರಾಜಭಾಷಾ ಅಧಿಕಾರಿ | 78 | Master’s Degree in Hindi with English as a subject at Degree level OR Master’s in Sanskrit with Hindi and English as subjects at Degree level |
ಕಾನೂನು ಅಧಿಕಾರಿ | 56 | Degree in Law and enrolled with Bar Council |
ಮಾನವ ಸಂಪನ್ಮೂಲ/ಸಿಬ್ಬಂದಿ ಅಧಿಕಾರಿ | 10 | PG Degree/Diploma in Personnel Management / Industrial Relations / HR / HRD / Social Work / Labour Law |
ಐಟಿ ಅಧಿಕಾರಿ | 203 | Graduate with DOEACC ‘B’ Level OR B.Tech in CS/IT/ECE OR PG in ECE/CS/IT |
ಒಟ್ಟು ಹುದ್ದೆಗಳು : | 1,007 |
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಕುರಿತಾದ ಮಾಹಿತಿ :
- ಇಲಾಖೆ ಹೆಸರು : ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ
- ಹುದ್ದೆಗಳ ಸಂಖ್ಯೆ : 1,007.
- ಹುದ್ದೆಗಳ ಹೆಸರು : ತಜ್ಞ ಅಧಿಕಾರಿ (ಐಟಿ, ಕೃಷಿ, ರಾಜಭಾಷಾ, ಕಾನೂನು, ಮಾನವ ಸಂಪನ್ಮೂಲ, ಮಾರುಕಟ್ಟೆ).
- ಉದ್ಯೋಗ ಸ್ಥಳ : All India
- ಅಪ್ಲಿಕೇಶನ್ ಮೋಡ್ : Online ಮೋಡ್.
ಇದನ್ನು ಓದಿ : Gokak : ಪ್ರೇಮಿಗಳಿಬ್ಬರು ನೇಣಿಗೆ ಶರಣು.!
ವೇತನ ಶ್ರೇಣಿ :
- ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನೇಮಕಾತಿ ಅಧಿಸೂಚನೆಯ ಪ್ರಕಾರ,
- ಆಯ್ಕೆಯಾದ ಅಭ್ಯುರ್ಥಿಗಳಿಗೆ ರೂ.48,480/- ರಿಂದ ರೂ.85,920/- ರವರೆಗೆ ಪ್ರತಿ ತಿಂಗಳು ವೇತನ ನೀಡಲಾಗುವುದು. (ಲೆವೆಲ್-1, 7 ನೇ ವೇತನ ಆಯೋಗ)
ವಯೋಮಿತಿ :
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಯಸ್ಸು ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ (born between 2 July 1995 and 1 July 2005) ಮೀರಬಾರದು.
ವಯೋಮಿತಿ ಸಡಿಲಿಕೆ :
- OBC (NCL) ಅಭ್ಯರ್ಥಿಗಳಿಗೆ : The Age Relaxation Extra as per the Rules
- SC/ST ಅಭ್ಯರ್ಥಿಗಳಿಗೆ : The Age Relaxation Extra as per the Rules
- PwBD (UR & EWS) ಅಭ್ಯರ್ಥಿಗಳಿಗೆ : The Age Relaxation Extra as per the Rules
- PwBD (OBC-NCL) ಅಭ್ಯರ್ಥಿಗಳಿಗೆ : The Age Relaxation Extra as per the Rules
- PwBD (SC/ST) ಅಭ್ಯರ್ಥಿಗಳಿಗೆ : The Age Relaxation Extra as per the Rules
ಇದನ್ನು ಓದಿ : ಆಸ್ಪತ್ರೆಯಲ್ಲಿಯೇ 19 ವರ್ಷದ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು throat ಸೀಳಿದ ಯುವಕ.!
ಅರ್ಜಿ ಶುಲ್ಕ :
- ಎಸ್ಸಿ/ಎಸ್ಟಿ/ಪಿಹೆಚ್ ಅಭ್ಯರ್ಥಿಗಳು : ರೂ. 175/-
- ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳು : ರೂ. 850/-
ಆಯ್ಕೆ ಪ್ರಕ್ರಿಯೆ :
- ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆ ಪ್ರಕ್ರಿಯೆ ಜರುಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ನೇಮಕಾತಿ 2025 ಅಧಿಸೂಚನೆಗೆ ಭೇಟಿ ನೀಡಿ.
- ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
- ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
- ಭರ್ತಿ ಮಾಡಿದ ಅರ್ಜಿ ನಮೂನೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
- ಮುಂದಿನ ಬಳಕೆಗಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯ ಮುದ್ರಣ (Print) ವನ್ನು ತೆಗೆದುಕೊಳ್ಳಿ.
ಇದನ್ನು ಓದಿ : Illicit ಸಂಬಂಧ ಆರೋಪ : ಮಹಿಳೆಯ ಬೆತ್ತಲೆಗೊಳಿಸಿ ತಲೆ ಬೋಳಿಸಿ ಹಲ್ಲೆ.!
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01 ಜುಲೈ 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21 ಜುಲೈ 2025 ರವರೆಗೆ (ರಾತ್ರಿ 11:59)
ಪ್ರಮುಖ ಲಿಂಕ್ಗಳು :
- ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸಲು ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
Disclaimer : The above given information is available On online, candidates should check it properly before applying. This is for information only.
Gokak : ಪ್ರೇಮಿಗಳಿಬ್ಬರು ನೇಣಿಗೆ ಶರಣು.!
ಜನಸ್ಪಂದನ ನ್ಯೂಸ್, ಗೋಕಾಕ : ಬೆಳಗಾವಿ ಜಿಲ್ಲೆಯ ಯರಗಟ್ಟಿ ಸಮೀಪದಲ್ಲಿರುವ, ಗೋಕಾಕ (Gokak) ತಾಲ್ಲೂಕಿನ ಹಿರೇನಂದಿ ಗ್ರಾಮದ ಹೊರವಲಯದಲ್ಲಿ ಪ್ರೇಮಿಗಳು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಾವಿಗೀಡಾಗಿದ್ದಾರೆ.
ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಾವಿಗೀಡಾದ ಪ್ರೇಮಿಗಳನ್ನು ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮದವರಾದ ರಾಘವೇಂದ್ರ (28) ಹಾಗೂ ರಂಜಿತಾ (25) ಎಂದು ಗುರುತಿಸಲಾಗಿದೆ.
ಗೋಕಾಕ (Gokak) ತಾಲ್ಲೂಕಿನ ಹಿರೇನಂದಿ ಗ್ರಾಮದ ಹೊರವಲಯದಲ್ಲಿ ಈ ಪ್ರೇಮಿಗಳಿಬ್ಬರು ಆಟೊ ರಿಕ್ಷಾ ಒಂದರಲ್ಲಿಯೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಆಸ್ಪತ್ರೆಯಲ್ಲಿಯೇ 19 ವರ್ಷದ ವಿದ್ಯಾರ್ಥಿನಿ ಎದೆಯ ಮೇಲೆ ಕುಳಿತು throat ಸೀಳಿದ ಯುವಕ.!
ಆಟೊದ ಹಿಂದಿನ ಸೀಟಿನ ಮೇಲಿನ ಕಬ್ಬಿಣದ ಸಲಾಖೆಗೆ ಹಗ್ಗ ಕಟ್ಟಿದ್ದು, ಇಬ್ಬರ ದೇಹಗಳೂ ಕಾಲು ಮುದುಡಿಕೊಂಡು ಕೆಳಗೆ ಇಳಿಬಿಟ್ಟಂಥ ಸ್ಥಿತಿಯಲ್ಲಿ ಹಿರೇನಂದಿ ಸರಹದ್ದಿಲ್ಲಿ ಪತ್ತೆಯಾಗಿವೆ.
ಗೋಕಾಕ (Gokak) ತಾಲ್ಲೂಕಿನ ಹಿರೇನಂದಿ ಗ್ರಾಮವು ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಗ್ರಾಮಕ್ಕೆ ಹೊಂದಿಕೊಂಡಿದ್ದು, ಮಂಗಳವಾರ (ಜು.01) ಬೆಳಿಗ್ಗೆ ಸತ್ತಿಗೇರಿ ಗ್ರಾಮಸ್ಥರಿಗೆ ವಿಷಯ ಗೊತ್ತಾಗಿದೆ.
ಸೋಮವಾರ ರಾತ್ರಿ ಗೋಕಾಕ (Gokak) ತಾಲ್ಲೂಕಿನ ಹಿರೇನಂದಿ ಗ್ರಾಮದ ಹೊರವಲಯದಲ್ಲಿ ಈ ಪ್ರೇಮಿಗಳಿಬ್ಬರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ : False murder case : ಅಮಾಯಕ ಜೈಲಿಗೆ ; 3 ಪೊಲೀಸ್ ಅಧಿಕಾರಿಗಳು ಸಸ್ಪೆಂಡ್.!
ಮುನವಳ್ಳಿ ಪಟ್ಟಣದ ಅಟೋ ಓಡಿಸುತ್ತಿದ್ದ ರಾಘವೇಂದ್ರ, ರಂಜೀತಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಮದುವೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದರು. ಆದರೆ, ಮನೆಯಲ್ಲಿ ರಂಜೀತಾ 15 ದಿನಗಳ ಹಿಂದೆ ಅಷ್ಟೇ ಬೇರೊಬ್ಬ ಹುಡುಗನ ಜೊತೆ ಮದುವೆ ನಿಶ್ಚಿತಾರ್ಥ ಮಾಡಿ ಮುಗಿಸಿದ್ದಾರೆ.
ಇದರಿಂದ ಮನನೊಂದು ಇಬ್ಬರು ಒಟ್ಟಿಗೆ ಸಾಯಲು ತೀರ್ಮಾನಿಸಿ ಇಬ್ಬರು ನೇಣುಬಿಗಿದುಕೊಂಡು ಗೋಕಾಕ (Gokak) ತಾಲೂಕಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತದೆ.
ಘಟನಾ ಸ್ಥಳಕ್ಕೆ ಗೋಕಾಕ (Gokak) ಗ್ರಾಮೀಣ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.