ಜನಸ್ಪಂದನ ನ್ಯೂಸ್, ಡೆಸ್ಕ್ : ತಿರುಪತಿ ವೆಂಕಟೇಶ್ವರ ದರ್ಶನ ಮುಗಿಸಿಕೊಂಡು ಮರಳಿ ಬರುತ್ತಿದ್ದ ವೇಳೆ ಭೀಕರ ಅಪಘಾತವಾದ ಘಟನೆ ಆಂಧ್ರದ ಚಂದ್ರಗಿರಿಯಲ್ಲಿ (Chandragiri, Andra Pradesh) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಪೊಲೀಸ್ ಇಲಾಖೆಯ (department of police) ನಿವೃತ್ತ ಎಎಸ್ಐ ಮುರಳಿ ಸೇರಿದಂತೆ ಪತ್ನಿ, ಮಗ, ಮಗಳು ದೇವರ ದರ್ಶನಕ್ಕೆ ತೆರಳಿದ್ದರು.
ಇದನ್ನು ಓದಿ : Special news : ಮೀನುಗಳು ಹೇಗೆ ನಿದ್ರಿಸುತ್ತವೆ ಗೊತ್ತಾ.? ಇಲ್ಲಿದೆ ಅಚ್ಚರಿಯ ಸಂಗತಿ.!
ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಯ ಪತ್ನಿ ಸುಶೀಲ ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
,ನಿವೃತ್ತ ಎಎಸ್ಐ ಮುರಳಿ ಮತ್ತು ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿದೆ.
ಇದನ್ನು ಓದಿ : ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಮಹಿಳಾ Constable ; ರೋಚಕ ವಿಡಿಯೋ ವೈರಲ್.
ಇನ್ನೂ ಇವರು ಬಂಗಾರಪೇಟೆ ತಾಲೂಕಿನವರು ಎನ್ನಲಾಗಿದೆ.
ದೇವರ ದರ್ಶನ ಮುಗಿಸಿಕೊಂಡು ವಾಪಸ್ ಆಗುವ (return) ಸಂದರ್ಭದಲ್ಲಿ ತಡರಾತ್ರಿ ಆಂದ್ರದ ಚಂದ್ರಗಿರಿ ಸಮೀಪ ಈ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ.