ಜನಸ್ಫಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ನಡೆದ ಮೊದಲ ಹಂತದ ಮೂರು ದಿನಗಳ ಹುಂಡಿ ಎಣಿಕೆಯಲ್ಲಿ ದಾಖಲೆಯ ಮಟ್ಟದ ಕಾಣಿಕೆ ಸಂಗ್ರಹವಾಗಿದ್ದು, ಒಟ್ಟು ರೂ.1.99 ಕೋಟಿ ಮೌಲ್ಯದ ದೇಣಿಗೆ ಲಭಿಸಿದೆ.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸಮರ್ಪಿಸಿದ ಕಾಣಿಕೆಗಳ ಎಣಿಕೆ ಕಾರ್ಯವನ್ನು ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ತಹಶೀಲ್ದಾರ್ ಕಚೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳ ಸಮ್ಮುಖದಲ್ಲಿ ಗುರುವಾರ ಪೂರ್ಣಗೊಳಿಸಲಾಯಿತು.
ದಿನವಾರು ಸಂಗ್ರಹ ವಿವರ :
🔹 ಜನವರಿ 19 ರಂದು ನಡೆದ ಎಣಿಕೆಯಲ್ಲಿ,
- ಚಿನ್ನಾಭರಣ: ರೂ.8.65 ಲಕ್ಷ,
- ಬೆಳ್ಳಿ ಆಭರಣ: ರೂ.5.05 ಲಕ್ಷ ಮತ್ತು
- ನಗದು: ರೂ.56.82 ಲಕ್ಷ ಹಣ ಸಂಗ್ರಹವಾಗಿದೆ.
🔹 ಜನವರಿ 21 ರಂದು ನಡೆದ ಎಣಿಕೆಯಲ್ಲಿ,
- ಚಿನ್ನ: ರೂ.3.15 ಲಕ್ಷ.
- ಬೆಳ್ಳಿ: ರೂ.1.67 ಲಕ್ಷ ಮತ್ತು
- ನಗದು: ರೂ.72.99 ಲಕ್ಷ ಹಣ ಸಂಗ್ರಹವಾಗಿದೆ.
🔹 ಜನವರಿ 22 ರಂದು ನಡೆದ ಎಣಿಕೆಯಲ್ಲಿ,
- ಚಿನ್ನ: ರೂ.3.33 ಲಕ್ಷ.
- ಬೆಳ್ಳಿ: ರೂ.4.77 ಲಕ್ಷ ಮತ್ತು
- ನಗದು: ರೂ.42.83 ಲಕ್ಷ ಹಣ ಸಂಗ್ರಹವಾಗಿದೆ.
➡️ ಒಟ್ಟು ಸಂಗ್ರಹ:
- ಚಿನ್ನಾಭರಣ – ರೂ.15.10 ಲಕ್ಷ.
- ಬೆಳ್ಳಿ ಆಭರಣ – ರೂ.11.51 ಲಕ್ಷ.
- ನಗದು – ರೂ.1.72 ಕೋಟಿ.
- ಒಟ್ಟು ಮೊತ್ತ – ರೂ.1.99 ಕೋಟಿ ಹಣ ಸಂಗ್ರಹವಾಗಿದೆ.
ಈ ಸುದ್ದಿ ನೋಡಿ : ಸವದತ್ತಿ ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!
ವಿದೇಶಿ ಕರೆನ್ಸಿ ಹಾಗೂ ಅಮಾನ್ಯ ನೋಟುಗಳು ಪತ್ತೆ :
ಹುಂಡಿ ಎಣಿಕೆಯ ವೇಳೆ ವಿವಿಧ ದೇಶಗಳ ಕರೆನ್ಸಿ ನೋಟುಗಳು ಹಾಗೂ ಅಮಾನ್ಯಗೊಂಡ ಭಾರತೀಯ ನೋಟುಗಳು ಪತ್ತೆಯಾಗಿವೆ.
🔸 ಅಮಾನ್ಯಗೊಂಡ ಭಾರತೀಯ ನೋಟುಗಳು:
- ರೂ.1,000 ಮುಖಬೆಲೆಯ 1 ನೋಟು.
- ರೂ.500 ಮುಖಬೆಲೆಯ 1 ನೋಟು ಮತ್ತು
- ರೂ.2,000 ಮುಖಬೆಲೆಯ 1 ನೋಟು.
🔸 ವಿದೇಶಿ ಕರೆನ್ಸಿಗಳು:
- ಅಮೆರಿಕಾ: $20 ಮುಖಬೆಲೆಯ 1 ನೋಟು.
- ಯುರೋಪ್: €10 ಮತ್ತು €5 ಮುಖಬೆಲೆಯ ತಲಾ 2 ನೋಟುಗಳು.
- ಓಮನ್: 100 ಬೈಜಾ ಹಾಗೂ 1 ರಿಯಾಲ್ ತಲಾ 2 ನೋಟುಗಳು ಮತ್ತು
- ಕೆನಡಾ: $20 ಮುಖಬೆಲೆಯ 5 ನೋಟುಗಳು.

ಈ ಕುರಿತು ಮಾಹಿತಿ ನೀಡಿದ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸಹಕಾರ್ಯದರ್ಶಿ ನಾಗರತ್ನಾ ಚೋಳಿನ ಅವರು, ಭಕ್ತರ ಭಕ್ತಿಭಾವದಿಂದಾಗಿ ಈ ಬಾರಿ ದಾಖಲೆಯ ಮಟ್ಟದ ಕಾಣಿಕೆ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಭಕ್ತರ ಅಪಾರ ನಂಬಿಕೆ :
ಶಕ್ತಿಪೀಠವಾಗಿರುವ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ತಮ್ಮ ಹರಕೆಗಳನ್ನು ಈಡೇರಿಸಲು ಭಕ್ತಿಯಿಂದ ಕಾಣಿಕೆ ಸಲ್ಲಿಸುತ್ತಿದ್ದಾರೆ. ಈ ಬಾರಿ ದಾಖಲೆ ಮೊತ್ತ ಸಂಗ್ರಹವಾಗಿರುವುದು ದೇವಾಲಯದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ :
ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವು ಕರ್ನಾಟಕದ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಸಮೀಪವಿರುವ ಯಲ್ಲಮ್ಮ ಗುಡ್ಡ ದ ಮೇಲಿರುವ ಪ್ರಸಿದ್ಧ ಶಕ್ತಿ ಪೀಠವಾಗಿದೆ. ರೇಣುಕಾ ದೇವಿಯು ಶಕ್ತಿ ಮತ್ತು ಫಲವತ್ತತೆಯ ದೇವತೆಯಾಗಿ ಪೂಜಿಸಲ್ಪಡುತ್ತಾಳೆ.
ಈ ದೇವಾಲಯವು ಐತಿಹಾಸಿಕವಾಗಿ ರೇಣುಕಾ (ಜಮದಗ್ನಿಯ ಪತ್ನಿ ಮತ್ತು ಪರಶುರಾಮನ ತಾಯಿ) ದಂತಕಥೆಗೆ ಸಂಬಂಧಿಸಿದೆ. ಇಲ್ಲಿ ಪ್ರತಿವರ್ಷ ಬನಶಂಕರಿ ಹಾಗೂ ಹುಣ್ಣಿಮೆ ದಿನಗಳಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ.
ಇದನ್ನು ಓದಿ : ಸವದತ್ತಿ ಯಲ್ಲಮ್ಮದೇವಿ ಗುಡಿಗೆ ನುಗ್ಗಿದ್ದ ಮಳೆನೀರು ; ಹುಂಡಿಯಲ್ಲಿದ್ದ ತೊಯ್ದ ನೋಟುಗಳನ್ನು ಒಣ ಹಾಕಿದ ಸಿಬ್ಬಂದಿ.!
ಪ್ರಮುಖಾಂಶಗಳು:
- ಸ್ಥಳ: ಬೆಳಗಾವಿ ಜಿಲ್ಲೆಯ ಸವದತ್ತಿಯಿಂದ ೫ ಕಿ.ಮೀ., ಸಿದ್ಧಾಚಲ/ರಾಮಗಿರಿ ಬೆಟ್ಟದ ಮೇಲೆ.
- ದೇವತೆ: ರೇಣುಕಾ ಯಲ್ಲಮ್ಮ (ಕಾಳಿ ದೇವಿಯ ಅವತಾರವೆಂದು ನಂಬಲಾಗಿದೆ).
- ಪೂಜಾ ಸಮಯ: ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಮತ್ತು ಸಂಜೆ 6 ರಿಂದ 9 ಗಂಟೆಯವರೆಗೆ.
- ವಿಶೇಷತೆ: ಬನದ ಹುಣ್ಣಿಮೆ, ಭಾರತ ಹುಣ್ಣಿಮೆ ಮತ್ತು ದವನದ ಹುಣ್ಣಿಮೆ.
- ದಂತಕಥೆ: ಪತಿ ಜಮದಗ್ನಿಯ ಆಜ್ಞೆಯಂತೆ ಪುತ್ರ ಪರಶುರಾಮನು ರೇಣುಕೆಯನ್ನು ಶಿರಚ್ಛೇದನ ಮಾಡಿದರೂ, ನಂತರ ಅವಳು ದೈವಿಕ ಶಕ್ತಿಯಾಗಿ ಯಲ್ಲಮ್ಮನಾಗಿ ಪ್ರಸಿದ್ಧಳಾದಳು.
ಈ ದೇವಾಲಯವು 8 ರಿಂದ 11 ನೇ ಶತಮಾನದಷ್ಟು ಹಳೆಯದಾದ ಚಾಲುಕ್ಯ/ರಾಷ್ಟ್ರಕೂಟರ ಕಾಲದ ಪುರಾತತ್ತ್ವ ಶಾಸ್ತ್ರದ ಪುರಾವೆಗಳನ್ನು ಒಳಗೊಂಡಿದೆ.





