ಸೋಮವಾರ, ಫೆಬ್ರವರಿ 2, 2026

Janaspandhan News

HomeGeneral Newsವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ...
spot_img
spot_img

ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!

ಜನಸ್ಪಂದನ ನ್ಯೂಸ್‌, ವಿಶೇಷ : ಮಾನವನ ಆಯಸ್ಸು ಎಷ್ಟರವರೆಗೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅಕಾಲಿಕ ಸಾವು ಅಥವಾ ಅಪಘಾತದಂತಹ ಅನಾಹುತಗಳ ಸಂದರ್ಭದಲ್ಲಿ ಕುಟುಂಬದ ಭವಿಷ್ಯವನ್ನು ಭದ್ರಗೊಳಿಸಲು ವಿಮೆ (Insurance) ಯ ಅಗತ್ಯತೆ ಹೆಚ್ಚಾಗಿದೆ. ಆದರೆ ಬಹುತೇಕ ವಿಮಾ ಪಾಲಿಸಿಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಭಾರತೀಯ ಅಂಚೆ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ ಲಭ್ಯವಿರುವ ಒಂದು ಆಕರ್ಷಕ ಯೋಜನೆ ವರ್ಷಕ್ಕೆ ಕೇವಲ ರೂ.520 ಪಾವತಿಸಿದರೆ ರೂ.10 ಲಕ್ಷದವರೆಗೆ ವಿಮಾ (Insurance) ರಕ್ಷಣೆ ಒದಗಿಸುತ್ತದೆ.

ಮದುವೆ ಭರವಸೆ ನೀಡಿ ವಕೀಲೆ ಮೇಲೆ ದುರುಳತನ : ‌Police ಕಾನ್ಸ್‌ಟೇಬಲ್ ಅರೆಸ್ಟ್.!
🔹 ರೂ.520 ಪಾವತಿಸಿದರೆ ಸಿಗುವ ಸೌಲಭ್ಯಗಳು :
  • ಅಪಘಾತದಿಂದ ಸಾವನ್ನಪ್ಪಿದಲ್ಲಿ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ರೂ.10 ಲಕ್ಷ ಪರಿಹಾರ.
  • ಇಬ್ಬರು ಮಕ್ಕಳಿಗೆ ತಲಾ ರೂ.1 ಲಕ್ಷದವರೆಗೆ ಶಿಕ್ಷಣ ಸಹಾಯಧನ.
  • ಆಸ್ಪತ್ರೆ ಪ್ರವೇಶಕ್ಕೆ ದಿನಕ್ಕೆ ರೂ.1,000 (ಗರಿಷ್ಠ 10 ದಿನಗಳವರೆಗೆ).
  • ಕುಟುಂಬ ಬೇರೆ ನಗರದಲ್ಲಿ ವಾಸಿಸುತ್ತಿದ್ದರೆ ಸಾರಿಗೆ ವೆಚ್ಚಕ್ಕೆ ರೂ.25,000.
  • ಅಂತ್ಯಕ್ರಿಯೆಗೆ ರೂ.5,000 ನೆರವು.
Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!
🔹 ರೂ.755 ಪಾವತಿಸಿದರೆ ಸಿಗುವ ಹೆಚ್ಚುವರಿ ಪ್ರಯೋಜನಗಳು :
  • ರೂ.15 ಲಕ್ಷದವರೆಗೆ ವಿಮಾ ಸುರಕ್ಷತೆ.
  • ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯಕ್ಕೆ ಪರಿಹಾರ.
  • ವೈದ್ಯಕೀಯ ವೆಚ್ಚಗಳಿಗೆ ರೂ.1 ಲಕ್ಷದವರೆಗೆ ಕವರ್.
  • ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಗೆ ರೂ.1 ಲಕ್ಷ ಸಹಾಯ.
🔹 ಯಾವ ಅಪಘಾತಗಳಿಗೆ ಕವರ್ (Insurance cover) ಸಿಗುತ್ತದೆ?

ರಸ್ತೆ ಅಪಘಾತ ಮಾತ್ರವಲ್ಲದೆ, ರೈಲು ಅಥವಾ ಬಸ್ ಪ್ರಯಾಣದ ವೇಳೆ, ಎಲೆಕ್ಟ್ರಿಕ್ ಶಾಕ್, ಹಾವು ಕಡಿತ ಸೇರಿದಂತೆ ಹಲವಾರು ಅಪಘಾತಗಳಿಗೆ ಈ ವಿಮೆ (Insurance) ಅನ್ವಯಿಸುತ್ತದೆ.

Blood cancer : ರಕ್ತ ಕ್ಯಾನ್ಸರ್‌ನ 7 ಎಚ್ಚರಿಕೆ ಲಕ್ಷಣಗಳಿವು ; ಇವುಗಳನ್ನು ನಿರ್ಲಕ್ಷಿಸಬೇಡಿ.!
🔹 ಯಾರು ಪಾಲಿಸಿಗೆ ಅರ್ಹರು?
  • ವಯಸ್ಸು 18 ರಿಂದ 65 ವರ್ಷದೊಳಗಿನವರು.
  • ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆ ಹೊಂದಿರಬೇಕು.
  • ಖಾತೆ ತೆರೆಯಲು ಕೇವಲ ರೂ.100 ಸಾಕು.

ಈ ಯೋಜನೆ ಪಡೆಯಲು ಸಮೀಪದ ಪೋಸ್ಟ್ ಆಫೀಸ್ ಪೇಮೆಂಟ್ಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಪ್ರತಿವರ್ಷ ಪಾವತಿ ನೇರವಾಗಿ ಬ್ಯಾಂಕ್ ಖಾತೆಯಿಂದ ಕಟ್ ಮಾಡಿಸಿಕೊಳ್ಳುವ ವ್ಯವಸ್ಥೆಯೂ ಇದೆ.

ಹಗಲು ರಾತ್ರಿ Phone ಬಳಕೆ ಮಾಡುತ್ತಿದ್ದೀರಾ? ಹಾಗಾದ್ರೆ ನಿಮ್ಮ ದೇಹಕ್ಕೆ ಅಪಾಯ ಕಾದಿದೆ.!

👉 ಇದು ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ವಿಮಾ (Insurance) ಕವರ್ ನೀಡುವ ಅಂಚೆ ಇಲಾಖೆಯ ವಿಶೇಷ ಯೋಜನೆ. ಕುಟುಂಬದ ಭವಿಷ್ಯವನ್ನು ಭದ್ರಗೊಳಿಸಲು ಇಂತಹ ಯೋಜನೆಗಳ ಪ್ರಯೋಜನ ಪಡೆಯುವುದು ಒಳಿತು.


Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”

uric-acid

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ಅಸಮತೋಲಿತ ಆಹಾರ ಪದ್ಧತಿ ಮತ್ತು ಆಧುನಿಕ ಜೀವನ ಶೈಲಿಯಿಂದಾಗಿ ಯೂರಿಕ್ ಆಮ್ಲ (Uric-Acid) ಹೆಚ್ಚಾಗುವ ಸಮಸ್ಯೆಯನ್ನು ಹಲವರು ಎದುರಿಸುತ್ತಿದ್ದಾರೆ. ದೇಹದಲ್ಲಿ ಯೂರಿಕ್ ಆಮ್ಲ ಪ್ರಮಾಣ ಹೆಚ್ಚಾದಾಗ ಕೀಲುಗಳಲ್ಲಿ ಊತ, ತೀವ್ರವಾದ ನೋವು ಉಂಟಾಗುತ್ತದೆ. ವೈದ್ಯಕೀಯವಾಗಿ ಇದನ್ನು ಗೌಟ್ (Gout) ಎಂದು ಕರೆಯಲಾಗುತ್ತದೆ.

ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವು ಔಷಧಿಗಳು ದೊರೆಯುತ್ತವೆ. ಆದರೆ, ಅತಿ ಕಡಿಮೆ ಬೆಲೆಗೆ ದೊರೆಯುವ ವೀಳ್ಯದೆಲೆ ಸಹ ನೈಸರ್ಗಿಕ ಪರಿಹಾರ ನೀಡಬಲ್ಲದು.

Belagavi ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ : 2 ಜನರ ದುರ್ಮರಣ.!
ವೀಳ್ಯದೆಲೆಯ ಔಷಧೀಯ ಗುಣಗಳು :

ವೀಳ್ಯದೆಲೆಗಳಲ್ಲಿ ಉರಿಯೂತ ನಿವಾರಕ (Anti-inflammatory) ಹಾಗೂ ಉತ್ಕರ್ಷಣ ನಿರೋಧಕ (Antioxidant) ಗುಣಗಳು ಸಮೃದ್ಧವಾಗಿವೆ. ಇವು ದೇಹದಲ್ಲಿ ಶೇಖರಣೆ ಆಗಿರುವ ಯೂರಿಕ್ ಆಮ್ಲ (Uric-Acid) ವನ್ನು ಕರಗಿಸಲು ಸಹಕಾರಿಯಾಗುತ್ತವೆ.

ಜೊತೆಗೆ, ಕಿಡ್ನಿ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಿ, ದೇಹದಿಂದ ತ್ಯಾಜ್ಯಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತವೆ.

ಒಂದೇ ಮನೆಯ ಇಬ್ಬರು sisters-in-law ನೆರೆಮನೆಯ ವಿವಾಹಿತನೊಂದಿಗೆ ಪರಾರಿ.!

ಆಯುರ್ವೇದದಲ್ಲೂ ಶತಮಾನಗಳಿಂದ ವೀಳ್ಯದೆಲೆಗಳನ್ನು ಹಲವು ರೋಗಗಳಿಗೆ ಬಳಸಲಾಗುತ್ತಿದೆ. ನಿಯಮಿತ ಸೇವನೆಯಿಂದ ದೇಹ ಡಿಟಾಕ್ಸ್ ಆಗಿ, ರಕ್ತದಲ್ಲಿನ ಯೂರಿಕ್ ಆಮ್ಲ (Uric-Acid) ದ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಕೀಲು ನೋವು ಕೂಡ ತಗ್ಗುತ್ತದೆ.

 Uric-Acid ನಿಯಂತ್ರಿಸಲು ವೀಳ್ಯದೆಲೆಯನ್ನು ಬಳಸುವ ವಿಧಾನ :

ಯೂರಿಕ್ ಆಮ್ಲ (Uric-Acid) ವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಪ್ರತಿದಿನ ಊಟದ ನಂತರ ಒಂದು ವೀಳ್ಯದೆಲೆಯನ್ನು ಸ್ವಚ್ಛವಾಗಿ ತೊಳೆದು ಜಗಿದು ತಿನ್ನುವುದು ಉತ್ತಮ. ಗಮನದಲ್ಲಿರಿಸಿಕೊಳ್ಳಬೇಕಾದ ಸಂಗತಿ ಏನೆಂದರೆ, ಉತ್ತಮ ಫಲಿತಾಂಶಕ್ಕಾಗಿ ವೀಳ್ಯದೆಲೆಯಲ್ಲಿ ಸುಣ್ಣ, ಬೆಲ್ಲ, ಕೊಬ್ಬರಿ ಅಥವಾ ಕಲ್ಲುಸಕ್ಕರೆ ಹಾಕದೇ ಸೇವಿಸುವುದು ಉತ್ತಮ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments