Sunday, September 8, 2024
spot_img
spot_img
spot_img
spot_img
spot_img
spot_img
spot_img

Accusation : ರೂ.25 ಲಕ್ಷ ಕೊಟ್ಟು ಈ ಖ್ಯಾತ ನಟಿಯನ್ನು ರೆಸಾರ್ಟ್’ಗೆ ಕರೆಸಿದ್ರಾ ರಾಜಕಾರಣಿ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಖ್ಯಾತ ಬಹುಭಾಷಾ ನಟಿ ತ್ರಿಷಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ AIADMK ಮಾಜಿ ಸದಸ್ಯ ಎವಿ ರಾಜು ಅವರು ವಿವಾದ (dispute) ಸೃಷ್ಟಿಸಿದ್ದು, ಈ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಯಾಚಿಸಿದ್ದಾರೆ.

ತ್ರಿಷಾ ವಿರುದ್ಧ ಎವಿ ರಾಜು ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಇದನ್ನು ಓದಿ : ಈ ಸಿನಿಮಾವನ್ನು ಹಾಡಿ ಹೊಗಳಿದ PM ಮೋದಿ : ಯಾವುದು ಆ ಸಿನಿಮಾ? ; ಟ್ರೈಲರ್ ನೋಡಿ.

ಸೇಲಂ ಪಶ್ಚಿಮ ಶಾಸಕ ವೆಂಕಟಾಚಲಂ ಅವರಿಂದ ನಟಿ 25 ಲಕ್ಷ ರೂ.ಗಳನ್ನು ಸೆಟ್ಲ್‌ಮೆಂಟ್ ಹಣವಾಗಿ ಪಡೆದಿದ್ದಾರೆ ಎಂದು ಅವರು ಹೇಳಿದ್ದರು.

2016ರಲ್ಲಿ ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆ ಶಾಸಕರನ್ನು ಚೆನ್ನೈನ ಕೂವತ್ತೂರು ಬಳಿಯ ರೆಸಾರ್ಟ್‌ನಲ್ಲಿ (resort) ಇರಿಸಲಾಗಿತ್ತು. ಈ ವೇಳೆ ಅಲ್ಲಿ ನಟಿ ತ್ರಿಶಾರನ್ನು ಕರೆಸಲಾಗಿತ್ತು. ಆಕೆಗೆ 25 ಲಕ್ಷ ರೂಪಾಯಿ ಕೊಟ್ಟು ಕರೆಸಲಾಗಿತ್ತು ಎಂದು ಎ.ವಿ.ರಾಜು ನಾಲಿಗೆ ಹರಿಬಿಟ್ಟಿದ್ದಾರೆ.

ಇದಾದ ನಂತರ, ಅವರ ಹೇಳಿಕೆ ತಕ್ಷಣವೇ ಟೀಕೆಗೆ ಗುರಿಯಾಯಿತು. ಅಲ್ಲದೆ ನಟಿ ಎವಿ ರಾಜು ವಿರುದ್ಧ ಕಾನೂನು ಕ್ರಮವನ್ನೂ ತೆಗೆದುಕೊಳ್ಳುವುದಾಗಿ ಹೇಳಿದ್ದು ತ್ರಿಷಾ ಬೆಂಬಲಕ್ಕೆ (support) ಹಲವು ತಾರೆಯರು ಕೂಡ ಸಾಥ್ ನೀಡಿದರು.

ಇದನ್ನು ಓದಿ : ಬಡ ರೈತನಿಂದ 1 ಸಾವಿರ ರೂ. ಕೇಳಿದ ASI ; ಏಕೆ ಗೊತ್ತೇ.?

ಸದ್ಯ ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ತ್ರಿಶಾ ಅವರನ್ನು ಗುರಿಯಾಗಿಸುವ ಯಾವುದೇ ಉದ್ದೇಶವಿಲ್ಲ, ಅವರ ಭಾವನೆಗಳನ್ನು ನೋಯಿಸಿದ್ದರೆ ಕ್ಷಮಿಸಿ’ ಎಂದು ಎವಿ ರಾಜು ವಿಡಿಯೋ ಮೂಲಕ ತ್ರಿಷಾಗೆ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img