Home Blog Page 15

ಪೊಲೀಸ್ ವಶದಲ್ಲಿದ್ದ ಆರೋಪಿ ಸಿನಿಮೀಯ ಶೈಲಿಯಲ್ಲಿ ಪರಾರಿ; ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಮ.ಪ್ರ : ಮಧ್ಯಪ್ರದೇಶದ ಹೋಶಂಗಾಬಾದ್ ಹೊರವಲಯದಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹೌದು, ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ, ಯಾವುದೇ ಸಿನಿಮಾ ದೃಶ್ಯವನ್ನೇ ಮೀರಿಸುವ ರೀತಿಯಲ್ಲಿ ಪೊಲೀಸ್ ಕಣ್ಗಾವಲಿನಿಂದ ತಪ್ಪಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಸಿನಿಮೀಯ ಶೈಲಿಯಲ್ಲಿ ಪರಾರಿಯಾದ ಆರೋಪಿ ವಿಡಿಯೋ :

ವೈರಲ್ ಆಗಿರುವ ದೃಶ್ಯಗಳ ಪ್ರಕಾರ, ತಾಂತ್ರಿಕ ದೋಷ ಅಥವಾ ದುರಸ್ತಿ ಕಾರಣದಿಂದ ಪೊಲೀಸ್ ವ್ಯಾನ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಪೊಲೀಸರು ವಾಹನದ ಹೊರಭಾಗದಲ್ಲಿ ದುರಸ್ತಿ ಕಾರ್ಯವನ್ನು ವೀಕ್ಷಿಸುತ್ತಿದ್ದರು.

ಇದೇ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡ ಆರೋಪಿ, ವ್ಯಾನ್‌ನ ಹಿಂಬದಿ ಬಾಗಿಲನ್ನು ಸದ್ದಿಲ್ಲದೆ ತೆರೆದು ಹೊರಬಂದಿದ್ದಾನೆ.

ಸುತ್ತಮುತ್ತ ವಾಹನ ಸಂಚಾರ ಕಡಿಮೆ ಇರುವುದನ್ನು ಖಚಿತಪಡಿಸಿಕೊಂಡ ಆರೋಪಿ, ಯಾವುದೇ ಪಾದರಕ್ಷೆ ಇಲ್ಲದೆ ಬರಿಗಾಲಿನಲ್ಲೇ ಮಿಂಚಿನ ವೇಗದಲ್ಲಿ ಓಡಲು ಆರಂಭಿಸಿದ್ದಾನೆ.

ಆರೋಪಿಯ ಓಟವನ್ನು ಗಮನಿಸಿದ ಪೊಲೀಸರು ತಕ್ಷಣ ಬೆನ್ನಟ್ಟಿದರೂ, ಆತನ ವೇಗಕ್ಕೆ ತಕ್ಕಂತೆ ಓಡಲು ಸಾಧ್ಯವಾಗದೆ ಕೆಲವೇ ಕ್ಷಣಗಳಲ್ಲಿ ಸುಸ್ತಾಗಿದ್ದಾರೆ.

ಈ ದೃಶ್ಯವನ್ನು ಕಂಡ ದಾರಿಹೋಗುವ ಸಾರ್ವಜನಿಕರು ಕೂಡ ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ. ಆರೋಪಿಯ ಚುರುಕಾದ ಓಟ ಮತ್ತು ಪೊಲೀಸರ ಅಸಹಾಯಕತೆ ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣಿಸುತ್ತದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಮಧ್ಯಪ್ರದೇಶದ ಪೊಲೀಸರ ಕಾರ್ಯವೈಖರಿಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವರು “ಇದು ಬಾಲಿವುಡ್ ಆಕ್ಷನ್ ಸಿನಿಮಾದ ದೃಶ್ಯವಂತೆ ಕಾಣುತ್ತಿದೆ, ಹಿನ್ನೆಲೆ ಸಂಗೀತ ಸೇರಿಸಿದರೆ ಪೂರ್ಣ ಸಾಹಸ ದೃಶ್ಯವಾಗುತ್ತಿತ್ತು” ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೂ ಕೆಲವರು “ಆರೋಪಿಯನ್ನು ಓಟದಲ್ಲೇ ಹಿಡಿಯಲಾಗದ ಸ್ಥಿತಿ ದೈಹಿಕ ತರಬೇತಿಯ ಕೊರತೆಯನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ತಪ್ಪಿಸಿಕೊಂಡ ಆರೋಪಿ ಗಂಭೀರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದನೇ ಅಥವಾ ಸಣ್ಣ ಪ್ರಕರಣದ ಆರೋಪಿಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.

ಸದ್ಯ ಈ ವಿಡಿಯೋ ಪೊಲೀಸ್ ಇಲಾಖೆಗೆ ಮುಜುಗರದ ವಿಷಯವಾಗಿ ಪರಿಣಮಿಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

ಇದನ್ನು ಓದಿ : Teacher : ಶಿಕ್ಷಕಿಯ ಮೇಲೆ ಅಮಾನವೀಯ ಕೃತ್ಯ : ಆರೋಪಿ ಪೊಲೀಸ್‌ ವಶಕ್ಕೆ.!


Disclaimer : ಈ ವರದಿಯಲ್ಲಿ ಉಲ್ಲೇಖಿಸಲಾದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ/ಪೋಸ್ಟ್‌ಗಳ ಆಧಾರದಲ್ಲಿದೆ. ಇದರ ಸತ್ಯಾಸತ್ಯತೆ ಅಥವಾ ಆರೋಪಗಳ ಖಚಿತತೆಯನ್ನು ಜನಸ್ಪಂದನ ನ್ಯೂಸ್ ದೃಢಪಡಿಸುವುದಿಲ್ಲ.

ಖಾಸಗಿ ಅಂಗದಲ್ಲಿ ಮೊಬೈಲ್ ಚಾರ್ಜರ್ ವೈರ್ ಹಾಕಿಕೊಂಡ 16 ರ ಬಾಲಕ.

0

ಜನಸ್ಪಂದನ ನ್ಯೂಸ್‌, ಹೋ ಚಿ ಮಿನ್ಹ್ (ವಿಯೆಟ್ನಾಂ) : ಡಿಸೆಂಬರ್ 7 ರಂದು, 16 ವರ್ಷದ ಬಾಲಕನೊಬ್ಬನು ವಿಚಿತ್ರ ಪ್ರಯೋಗ ಮಾಡುವ ವೇಳೆ ಖಾಸಗಿ ಅಂಗದ ಮೂಲಕ ಮೊಬೈಲ್ ಚಾರ್ಜರ್ ವೈರ್ ತನ್ನ ಮೂತ್ರಕೋಶಕ್ಕೆ ಸಿಲುಕಿಸುವ ಘಟನೆ ನಡೆದಿತ್ತು. ಪರಿಣಾಮ ತಕ್ಷಣವೇ ಆತನನ್ನು ಶಸ್ತ್ರಚಿಕಿತ್ಸೆಗೆ ಕರೆದೊಯ್ಯಲಾಗಿತ್ತು.

ಬಾಲಕನ ನೋವು ಹೆಚ್ಚುತ್ತಿದರೂ ಸಹ ಆತ ವಿಷಯವನ್ನು ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಕುಟುಂಬದವರು ಬಾಲಕನ ದುಃಖದಿಂದ ತೀವ್ರ ಗೊಂದಲಕ್ಕೊಳಗಾಗಿದ್ದರು. ಕೊನೆಗೆ ನೋವು ಹೆಚ್ಚುತ್ತಿದಂತೆಯೇ ಆತನನ್ನು ಆಸ್ಪತ್ರೆಗೆ ಕರೆದ್ದೊಯ್ಯಲಾಯಿತು.

ಸ್ಥಳೀಯ ಆನ್ ಬಿನ್ಹ್ ಆಸ್ಪತ್ರೆಯ ವೈದ್ಯರು ಮೊದಲಿಗೆ ಎಂಡೋಸ್ಕೋಪಿಕ್ ವಿಧಾನವನ್ನು ಪ್ರಯತ್ನಿಸಿದರು. ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್ ವೈರ್ ಇರುವುದು ಕಂಡು ವೈದ್ಯರು ಆಶ್ಚರ್ಯಚಕಿತರಾದರು. ಆದರೆ ಚಾರ್ಜರ್ ದೇಹದೊಳಗೆ ಸುತ್ತಿಕೊಂಡು ನಜ್ಜುಗುಜ್ಜವಾಗಿದ್ದರಿಂದ ಶಸ್ತ್ರಚಿಕಿತ್ಸೆ ಕ್ರಮ ಜಟಿಲವಾಗಿತ್ತು.

ಮೊಬೈಲ್ ಚಾರ್ಜರ್ ವೈರ್ ಹೊರ ತೆಗೆದ ವೈದ್ಯರು :

ವೈದ್ಯರು ಸುಮಾರು ಎರಡು ಗಂಟೆಗಳ ತ್ವರಿತ ಶಸ್ತ್ರಚಿಕಿತ್ಸೆ ನಡೆಸಿ ಮೊಬೈಲ್ ಚಾರ್ಜರ್ ವೈರ್ಅನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯ ವೇಳೆ ಮೂತ್ರಕೋಶದ ಕೆಲವು ಭಾಗವು ಚಾರ್ಜರ್‌ನ ಪರಿಣಾಮದಿಂದ ಕೊಳೆಯುತ್ತಿರುವುದು ಕಂಡು, ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಚಿಕಿತ್ಸೆಯ ಎರಡು ದಿನಗಳ ನಂತರ, ಬಾಲಕನು ವೈದ್ಯಕೀಯ ಸಲಹೆ ಮತ್ತು ಮನಃಶಾಂತಿ ಕುರಿತ ಕೌನ್ಸೆಲಿಂಗ್ ಪಡೆದ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ವೈದ್ಯರು ಕುಟುಂಬಕ್ಕೆ, ಈ ರೀತಿಯ ಅಪಾಯಕಾರಿ ಪ್ರಯೋಗಗಳಿಂದ ದೂರವಿರುವುದು ಅತ್ಯಂತ ಮುಖ್ಯ ಎಂದು ಶಿಫಾರಸು ಮಾಡಿದ್ದಾರೆ.

ಇದನ್ನು ಓದಿ : ರಸ್ತೆಯಲ್ಲಿ ಹೃದಯಾಘಾತ : ರಾತ್ರಿ ಸಹಾಯಕ್ಕೆ ಬಾರದ ಜನ ; 34 ವರ್ಷದ ಯುವಕ ಸಾವು.


Disclaimer : ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಆಧಾರದಲ್ಲಿದೆ. ಜನಸ್ಪಂದನ ನ್ಯೂಸ್ ಯಾವುದೇ ದಾವೆ ಅಥವಾ ದೃಢೀಕರಣ ಮಾಡುವುದಿಲ್ಲ.

ಆರೋಗ್ಯ, ಚರ್ಮ ಹಾಗೂ ಕೂದಲಿಗೆ ಟೊಮೆಟೊದ ಅಚ್ಚರಿ ಪ್ರಯೋಜನಗಳು.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಟೊಮೆಟೊ ತಿನ್ನುವುದರಿಂದ ರಕ್ತ ಪರಿಚಲನೆಯನ್ನು ಹೆಚ್ಚಿಸುವುದು ನಾವು ಬಾಲ್ಯದಿಂದಲೇ ಕೇಳುತ್ತೇವೆ. ಆದರೆ, ಟೊಮೆಟೊ ಅದಕ್ಕಿಂತಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿಟಮಿನ್ ಎ, ಬಿ, ಸಿ, ಕೆ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಪ್ರಕೃತಿಯಿಂದ ಬಣ್ಣ ತರಾತ್ಮಕ ರಂಜಕಗಳಿಂದ ತುಂಬಿದ ಟೊಮೆಟೊಗಳು ನಿಮ್ಮ ದೇಹ ಮತ್ತು ಚರ್ಮಕ್ಕೆ ಅನೇಕ ರೀತಿಯ ಪ್ರಯೋಜನ ನೀಡುತ್ತವೆ.

ಆರೋಗ್ಯಕ್ಕೆ ಟೊಮೆಟೊ ಪ್ರಯೋಜನಗಳು :

  • ಹೃದಯ ಮತ್ತು ಹೊಟ್ಟೆ ಆರೋಗ್ಯ:

ಇದು ಹೃದಯವನ್ನು ಶಕ್ತಿಶಾಲಿಯಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತವೆ ಮತ್ತು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ.

  • ಕ್ಯಾನ್ಸರ್ ವಿರುದ್ಧ ಪ್ರತ್ಯೇಕ ಪ್ರಯೋಜನ:

ಇದರಲ್ಲಿ ಇರುವ ರಂಜಕಗಳು ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುವ ಶಕ್ತಿ ಹೊಂದಿವೆ.

  • ರಕ್ತಪರಿಚಲನೆಯ ಸುಧಾರಣೆ:

  • ನಿರಂತರವಾಗಿ ಇದನ್ನು ಸೇವಿಸುವುದರಿಂದ ರಕ್ತ ಸಂಚಾರವನ್ನು ಉತ್ತೇಜಿಸುತ್ತದೆ.

ಚರ್ಮದ ಸುಂದರತೆಗಾಗಿ :

  • ತಪ್ಪಾದ ಟ್ಯಾನಿಂಗ್ ನಿವಾರಣೆ:

ಮುಖದ ಮೇಲೆ ಟೊಮೆಟೊ ತುಂಡು ಉಜ್ಜಿಸುವುದು ಕಪ್ಪು ಟ್ಯಾನಿಂಗ್ ನಿವಾರಣೆಗೆ ಸಹಾಯ ಮಾಡುತ್ತದೆ. ವಾರಕ್ಕೆ 3–4 ಬಾರಿ ಮಾಡುವುದರಿಂದ ಚರ್ಮ ಹೊಳೆಯುವಂತೆ ಕಾಣುತ್ತದೆ.

  • ಎಣ್ಣೆ ನಿಯಂತ್ರಣೆ ಮತ್ತು ಮೊಡವೆ ನಿವಾರಣೆ:

ಇದರಲ್ಲಿ ಇರುವ ವಿಟಮಿನ್‌ಗಳು ಹೆಚ್ಚುವರಿ ಎಣ್ಣೆಯನ್ನು ಕಡಿಮೆ ಮಾಡುತ್ತವೆ ಮತ್ತು ಮೊಡವೆ ಸಮಸ್ಯೆಯನ್ನು ನಿಯಂತ್ರಿಸುತ್ತವೆ. ದಿನವೂ ಮುಖಕ್ಕೆ ತುಂಡು ಅಥವಾ ರಸವನ್ನು ಹಚ್ಚಿ, ತಣ್ಣೀರಿನಿಂದ ತೊಳೆಯಿರಿ.

  • ಮುಖದ ರಂಧ್ರಗಳು ಕಡಿಮೆ:

ಇದರ ರಸವನ್ನು ನಿಯಮಿತವಾಗಿ ಬಳಸುವುದರಿಂದ ಮುಖದ ದೊಡ್ಡ ರಂಧ್ರಗಳು ಕುಗ್ಗುತ್ತವೆ ಮತ್ತು ಚರ್ಮದ ತೈಲ ಉತ್ಪಾದನೆ ಕಡಿಮೆಯಾಗುತ್ತದೆ.

ಕೂದಲು ಆರೋಗ್ಯ :

  • ನೆತ್ತಿಯಿಂದ ತಲೆಹೊಟ್ಟು ನಿವಾರಣೆ :

ಇದರ ತಿರುಳನ್ನು ಮಿಕ್ಸರ್‌ನಲ್ಲಿ ಪುಡಿ ಮಾಡಿ, ಕೂದಲಿಗೆ ಮಸಾಜ್ ಮಾಡಿದರೆ ತಲೆಹೊಟ್ಟು ಕಡಿಮೆ ಆಗುತ್ತದೆ, ಕೂದಲು ಹೊಳೆಯುತ್ತದೆ ಮತ್ತು ಬಲಿಷ್ಠವಾಗುತ್ತದೆ.

ಉಪಯೋಗಗಳು/ಪ್ರಮುಖ ಅಂಶಗಳು:

  1. ಆಹಾರದಲ್ಲಿ: ತಾಜಾ, ಸಾಸಿವೆ, ಕಾರಪೂರಿ, ಸಾರು, ತರಕಾರಿ ಹಣ್ಣು.
  2. ಆರೋಗ್ಯಕ್ಕೆ: ಹೃದಯ, ಹೊಟ್ಟೆ, ಕ್ಯಾನ್ಸರ್-ಪ್ರತಿರೋಧ, ರಕ್ತ ಪರಿಚಲನೆಯಲ್ಲಿ ಸಹಾಯ.
  3. ಚರ್ಮಕ್ಕೆ: ಮೊಡವೆ ನಿವಾರಣೆ, ಎಣ್ಣೆ ಕಡಿಮೆ, ಚರ್ಮ ಹೊಳೆಯುವಂತೆ ಮಾಡುತ್ತದೆ.
  4. ಕೂದಲು: ತಲೆಹೊಟ್ಟು ನಿವಾರಣೆ, ಕೂದಲು ಹೊಳೆಯುವಂತೆ.

ಇದನ್ನು ಓದಿ : ದಂತ ಕುಳಿ, ಒಸಡು ನೋವು, ಬಾಯಿಯ ದುರ್ವಾಸನೆಗೆ ಜಾಮುನ್ ಬೀಜವೇ ಪರಿಹಾರ.


Disclaimer : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ವೈದ್ಯಕೀಯ ಸಲಹೆ ಇಲ್ಲದೇ ಅಳವಡಿಸಿಕೊಳ್ಳಬೇಡಿ.

ಕೇರಳದಲ್ಲಿ ಗರ್ಭಿಣಿ ಮಹಿಳೆ ಮೇಲೆ ಪೊಲೀಸ್ ಹಲ್ಲೆ ; ಸಾರ್ವಜನಿಕರಲ್ಲಿ ಆಕ್ರೋಶ.

0

ಜನಸ್ಪಂದನ ನ್ಯೂಸ್‌, ಕೊಚ್ಚಿ (ಕೇರಳ) : 2024 ರಲ್ಲಿ ನಡೆದ ಒಂದು ಘಟನೆ ಇದೀಗ ಬೆಳಕಿಗೆ ಬಂದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ರಾಜ್ಯದಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಪ್ರತಾಪ್ ಚಂದ್ರನ್ ಎಂಬ HSO ಗರ್ಭಿಣಿ ಮಹಿಳೆಯೊಬ್ಬರಿಗೆ ಕಪಾಳಕ್ಕೆ ಹೊಡೆದ ದೃಶ್ಯಗಳು ಕಾಣಿಸುತ್ತಿವೆ.

ಸ್ಥಳೀಯ ವರದಿಗಳ ಪ್ರಕಾರ, ಆರೋಪಿತ ಪೊಲೀಸ್ ಅಧಿಕಾರಿ ಯಾವುದೇ ಆಧಾರವಿಲ್ಲದೇ ಸುಳ್ಳು ಪ್ರಕರಣ ದಾಖಲಿಸಿ ಮಹಿಳೆಯ ಪತಿಯನ್ನು ಠಾಣೆಗೆ ಕರೆತಂದಿದ್ದರು. ಆಗ ತನ್ನ ಮಗುವಿನೊಂದಿಗೆ ಪತ್ನಿ ಠಾಣೆಗೆ ಆಗಮಿಸಿದ್ದರು ಎನ್ನಲಾಗಿದೆ

ಪತಿ ಬಂಧನದ ಬಗ್ಗೆ ಪ್ರಶ್ನಿಸಲು ಬಂದ ಎನ್.ಜೆ. ಶೈಮೋಲ್ ಎಂಬ ಗರ್ಭಿಣಿ ಮಹಿಳೆಗೆ ಅಧಿಕಾರಿ ಕಪಾಳಿಗೆ ಹೊಡೆದಿದ್ದಾರೆ ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ. ಸದ್ಯ ಈ ಅಧಿಕಾರಿ ಅರೂರ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

ವಿಡಿಯೋ ವೈರಲ್ ಆದ ಕೆಲವೇ ಹೊತ್ತಿನಲ್ಲಿ, ಕೇರಳ ಮುಖ್ಯಮಂತ್ರಿ ಈ ಘಟನೆಗೆ ಗಂಭೀರತೆಯನ್ನು ನೀಡಿದ್ದು, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ, ಶೈಮೋಲ್ ಅವರ ಪತಿ ಬೆನ್ ಜೋ ಅವರು ಈ ಘಟನೆ ಬಗ್ಗೆ ವಿವರಿಸಿ, ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಹಲ್ಲೆ ನಡೆಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂಲ ವರದಿಗಳ ಪ್ರಕಾರ, ಬೆನ್ ಜೋ ಅವರು ಕಳ್ಳತನದ ಆರೋಪದ ಮೇಲೆ ಇಬ್ಬರು ಯುವಕರನ್ನು ಪೊಲೀಸರು ಬಲವಂತವಾಗಿ ಬಂಧಿಸುತ್ತಿದ್ದ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಕಾರಣ, “ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ್ದಾರೆ” ಎಂಬ ಆರೋಪದಡಿ ಮೂರನೇ ಆರೋಪಿಯಾಗಿ ಸೇರಿಸಲಾಗಿತ್ತು.

ಮೀಡಿಯಾ ವರದಿಗಳ ಪ್ರಕಾರ, ಈ ಘಟನೆ ಪೊಲೀಸ್ ದೌರ್ಜನ್ಯದ ಮತ್ತೊಂದು ಉದಾಹರಣೆಯಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಘಟನೆ ಕುರಿತು ಗಂಭೀರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಅಧಿಕಾರಿ ಹಲ್ಲೆ ಮಾಡಿದರೆ ಏನು ಮಾಡಬೇಕು?

ಒಬ್ಬ ಪೊಲೀಸ್ ಅಧಿಕಾರಿ ನಿಮಗೆ ಕಿರುಕುಳ ನೀಡಿದರೆ, ಶಾಂತವಾಗಿರಿ, ಎಲ್ಲವನ್ನೂ ದಾಖಲಿಸಿ (ವಿಡಿಯೋ, ಅಧಿಕಾರಿ ವಿವರಗಳು, ಸಾಕ್ಷಿಗಳು), ಮತ್ತು ಅದನ್ನು ಅವರ ಮೇಲಧಿಕಾರಿಗಳಿಗೆ, ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಥವಾ FBI/DOJ (ಯುಎಸ್‌ನಲ್ಲಿ) ಗೆ ವರದಿ ಮಾಡಿ.

ನಿಮ್ಮ ಹಕ್ಕುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಔಪಚಾರಿಕ ದೂರುಗಳನ್ನು ಸಲ್ಲಿಸಲು ವಕೀಲರಿಂದ ಕಾನೂನು ಸಹಾಯವನ್ನು ಪಡೆಯಿರಿ, ಅಗತ್ಯವಿದ್ದರೆ ರಿಟ್ ಅರ್ಜಿಯನ್ನು ಸಹ ಪರಿಗಣಿಸಿ.

ಇದನ್ನು ಓದಿ : ಕಿರುಕುಳ ನೀಡಿದ Police ನಿಗೆ ಮಧ್ಯರಸ್ತೆಯಲ್ಲೇ ಎಳೆದು ಯುವತಿಯಿಂದ ಏಟು ; ವಿಡಿಯೋ.!


Disclaimer : ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಆಧಾರದಲ್ಲಿದೆ.
ಜನಸ್ಪಂದನ ನ್ಯೂಸ್ ಯಾವುದೇ ದಾವೆ ಅಥವಾ ದೃಢೀಕರಣ ಮಾಡುವುದಿಲ್ಲ.

ರೂ.110, ರೂ.205 ಗೆ ಪೆಟ್ರೋಲ್–ಡೀಸೆಲ್ ಹಾಕೋ ಟ್ರಿಕ್ಸ್ ಬಿಡಿ ; ಈ ಸಲಹೆ ಪಾಲಿಸಿ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪೆಟ್ರೋಲ್ ಅಥವಾ ಡೀಸೆಲ್‌ ತುಂಬಿಸುವಾಗ ಸರಿಯಾದ ಪ್ರಮಾಣದ ಇಂಧನ ಸಿಗುತ್ತಿದೆಯೇ ಎಂಬ ಅನುಮಾನ ಎಲ್ಲ ವಾಹನ ಸವಾರರ ಮನಸ್ಸಿನಲ್ಲಿ ಬರುತ್ತದೆ. ಕೆಲವರು ರೂ.100, ರೂ.200, ಅಥವಾ ರೂ.500 ರ ಬದಲು ರೂ.110, ರೂ.210, ರೂ.305 ರಂತಹ ಮೊತ್ತ ತುಂಬಿಸಿದರೆ ಮೋಸವಾಗುವುದಿಲ್ಲ ಎಂದು ನಂಬುತ್ತಾರೆ. ಆದರೆ, ಈ “ಸಣ್ಣ ಮೊತ್ತದ ಟ್ರಿಕ್” ಕೆಲಸ ಮಾಡುವುದಿಲ್ಲ ಎಂದು ಪೆಟ್ರೋಲ್ ಪಂಪ್ ಉದ್ಯೋಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ :

Video Courtesy : @babamunganathfillingstation / Instagram

ಪೆಟ್ರೋಲ್ ಪಂಪ್ ಉದ್ಯೋಗಿಯ ಸಲಹೆಗಳು :

ವೈರಲ್ ವಿಡಿಯೋದಲ್ಲಿ ಅವರು Petrol ಅಥವಾ Diesel ಸರಿಯಾಗಿ ತುಂಬಿಸಿಕೊಳ್ಳಲು ಎರಡು ಮುಖ್ಯ ಮಾರ್ಗಗಳನ್ನು ಹಂಚಿಕೊಂಡಿದ್ದಾರೆ:

1️⃣ ಇಂಧನದ ಸಾಂದ್ರತೆ (Density) ಪರಿಶೀಲನೆ :

ನಿಖರವಾದ ಇಂಧನವನ್ನು ಪಡೆಯಲು ಮೊದಲ ನಿಯಮವೆಂದರೆ, ತೈಲದ ಸಾಂದ್ರತೆಯನ್ನು ಗಮನಿಸುವುದು.

  • Petrol : 720–775 Kg/m3
  • Diesel : 820–860 Kg/m3

Note : ಪೆಟ್ರೋಲ್ ಮತ್ತು ಡೀಸೆಲ್‌ಗಳಿಗೆ ನಿಗದಿತ ಸಾಂದ್ರತೆ ಮಿತಿಗಳು ಇರುತ್ತವೆ. ಸಾಮಾನ್ಯವಾಗಿ ಪೆಟ್ರೋಲ್ 720–780 kg/m³ ಮತ್ತು ಡೀಸೆಲ್ 820–860 kg/m³ ಮಿತಿಯಲ್ಲಿ ಇರುತ್ತದೆ ಎಂದು ತೈಲ ಉದ್ಯಮ ಮೂಲಗಳು ತಿಳಿಸುತ್ತವೆ. ತಾಪಮಾನ ಮತ್ತು ಸ್ಥಳದ ಮೇಲೆ ಸ್ವಲ್ಪ ವ್ಯತ್ಯಾಸ ಸಾಧ್ಯ.

ಉದ್ಯೋಗಿಯ ಪ್ರಕಾರ, ಸಾಮಾನ್ಯವಾಗಿ ಈ ವ್ಯಾಪ್ತಿಯಲ್ಲಿರುವ ಸಾಂದ್ರತೆ ಇಂಧನವು ಮಾನದಂಡಗಳಿಗೆ ಸಮೀಪದಲ್ಲಿದೆ ಎಂಬ ಸೂಚನೆ ನೀಡುತ್ತದೆ.

2️⃣ ಮೀಟರ್‌ನ ಎರಡನೇ ಅಂಕಿ ಗಮನಿಸಿ :

ಇಂದನ ಪಂಪ್ ಮೀಟರ್‌ ‘0’ ಯಿಂದ ಪ್ರಾರಂಭವಾಗುವುದು ಎಲ್ಲಾ ವಾಹನ ಸವಾರರು ಗಮನಿಸುತ್ತಾರೆ. ಆದರೆ, ಯಂತ್ರವು ‘0’ ನಂತರ ಹೋರಾಡುವ ಅಂಕಿಗಳನ್ನು ನೋಡಿ ಗಮನಹರಿಸುವುದು ಮುಖ್ಯ.

  • ಮೀಟರ್ ‘0’ ನಂತರ ಓದುವಿಕೆ ತುಂಬಾ ಹೆಚ್ಚಾಗಿರಬಾರದು.
  • ಕೆಲವು ಪೆಟ್ರೋಲ್ ಪಂಪ್ ಯಂತ್ರಗಳಲ್ಲಿ ‘0’ ನಂತರ ಓದುವಿಕೆ ಕ್ರಮೇಣ ಹೆಚ್ಚಾಗುತ್ತದೆ. ಆದರೆ ‘0’ ನೇರವಾಗಿ ದೊಡ್ಡ ಅಂಕಿಗೆ ಜಿಗಿದಂತೆ ಕಂಡರೆ ಗ್ರಾಹಕರು ಎಚ್ಚರ ವಹಿಸುವುದು ಒಳಿತು ಎಂದು ಉದ್ಯೋಗಿ ಸಲಹೆ ನೀಡಿದ್ದಾರೆ.

🔹 ಸಲಹೆಗಳು ಉಪಯುಕ್ತ :

ಈ ವಿಡಿಯೋ (@babamunganathfillingstation) ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಬಳಕೆದಾರರಿಗೆ ಬಹಳ ಉಪಯುಕ್ತವಾಗಿದೆ. ಜನರು ಈಗ ಹಣದ ಬದಲು ಲೀಟರ್ ಲೆಕ್ಕದಲ್ಲಿ ಇಂಧನವನ್ನು ತುಂಬಿಸುವ ಅಭ್ಯಾಸಕ್ಕೆ ಹೋಗುತ್ತಿದ್ದಾರೆ.

ಪೆಟ್ರೋಲ್ ಬಂಕ್ ವಂಚನೆ – ಸಂಕ್ಷಿಪ್ತ ಸಾರಾಂಶ :

ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆಗಳು ಸಾಮಾನ್ಯವಾಗಿ ಮೀಟರ್ ಟ್ಯಾಂಪರಿಂಗ್, ಕಡಿಮೆ ಪ್ರಮಾಣದ ಇಂಧನ (Short Delivery), ಸಾಂದ್ರತೆ ಕಡಿಮೆ ಮಾಡುವುದು (Density manipulation) ಮತ್ತು ನೊಜಲ್ ಮ್ಯಾನಿಪುಲೇಷನ್ ಮೂಲಕ ನಡೆಯುತ್ತವೆ. ಕೆಲವೊಮ್ಮೆ ಗಮನ ಬೇರೆಡೆ ಸೆಳೆದು ಕಡಿಮೆ ಇಂಧನ ನೀಡುವ ಪ್ರಯತ್ನವೂ ಮಾಡಲಾಗುತ್ತದೆ.

ಇವುಗಳಿಂದ ತಪ್ಪಿಸಿಕೊಳ್ಳಲು:
* ಇಂಧನ ತುಂಬಿಸುವ ಮೊದಲು ಮೀಟರ್ ‘0’ ನಲ್ಲಿ ಇದೆಯೇ ಗಮನಿಸಬೇಕು.
* ಪೆಟ್ರೋಲ್–ಡೀಸೆಲ್ ಸಾಂದ್ರತೆ (Density) ಸರಿಯಾದ ಮಿತಿಯಲ್ಲಿದೆಯೇ ಪರಿಶೀಲಿಸಬೇಕು.
* ಹಣದ ಮೊತ್ತಕ್ಕಿಂತ ಲೀಟರ್ ಲೆಕ್ಕದಲ್ಲಿ ಇಂಧನ ತುಂಬಿಸಿಕೊಳ್ಳುವುದು ಸುರಕ್ಷಿತ.
* ವಂಚನೆ ಅನುಮಾನ ಬಂದರೆ ತಕ್ಷಣ ಬಂಕ್ ಮ್ಯಾನೇಜರ್ ಅಥವಾ ತೈಲ ಕಂಪನಿಗೆ ದೂರು ನೀಡಬೇಕು.

👉 ₹110, ₹205 ತರಹದ “ಟ್ರಿಕ್ಸ್” ಗಿಂತ ಜಾಗ್ರತೆ ಮತ್ತು ಮಾಹಿತಿ ಇವೇ ನಿಜವಾದ ರಕ್ಷಣೆ.

ಇದನ್ನು ಓದಿ : LPG : ಹೋಮ್ ಡೆಲಿವರಿ ಮಾಡುವ ಸಿಲಿಂಡರ್‌ಗೆ ಹೆಚ್ಚುವರಿ ಹಣ ಕೊಡಬೇಡಿ ; ಕೇಳಿದರೆ ದೂರು ಕೊಡಿ.!


Disclaimer : ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಆಧಾರದಲ್ಲಿದೆ.
ಜನಸ್ಪಂದನ ನ್ಯೂಸ್ ಯಾವುದೇ ದಾವೆ ಅಥವಾ ದೃಢೀಕರಣ ಮಾಡುವುದಿಲ್ಲ.

ಗರ್ಲ್‌ಫ್ರೆಂಡ್ ಜೊತೆಗಿದ್ದ ಪತಿಯನ್ನು ಹಿಡಿದ ಪತ್ನಿ ; ಮಧ್ಯರಸ್ತೆಯಲ್ಲಿ ಭೀಕರ ಗಲಾಟೆ, ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಒಂದು ಕುಟುಂಬದೊಳಗಿನ ಗಂಭೀರ ಗಲಾಟೆಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ನಿಯೊಬ್ಬರು ತಮ್ಮ ಪತಿಯನ್ನು ಅವನ ಗರ್ಲ್‌ಫ್ರೆಂಡ್ ಜೊತೆ ಸಾರ್ವಜನಿಕ ರಸ್ತೆಯಲ್ಲೇ ಹಿಡಿದ ಘಟನೆ, ಕ್ಷಣಾರ್ಧದಲ್ಲಿ ದೊಡ್ಡ ಗಲಭೆಯಾಗಿ ಮಾರ್ಪಟ್ಟಿದೆ. ಸದ್ಯ ಈ ದೃಶ್ಯಗಳ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪತಿ–ಪತ್ನಿ–ಗರ್ಲ್‌ಫ್ರೆಂಡ್ ಗಲಾಟೆ :

ಈ ಘಟನೆ ಕಾನ್ಪುರದ ಮಹಾರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ನರವಲ್ ಮೋಡ್ ಬಳಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಸ್ಥಳೀಯ ಮಾಹಿತಿಯ ಪ್ರಕಾರ, ಹಬ್ಬದ ನಿಮಿತ್ತ ಮನೆಗೆ ಬಂದಿದ್ದ ಪತಿಯ ಬಗ್ಗೆ ಪತ್ನಿಗೆ ಮೊದಲಿನಿಂದಲೂ ಸಂಶಯವಿತ್ತು.

ಈ ಹಿನ್ನೆಲೆಯಲ್ಲಿ ಆಕೆ ಪತಿಯ ಚಲನವಲನವನ್ನು ಗಮನಿಸುತ್ತಿದ್ದು, ನರವಲ್ ಮೋಡ್ ಬಳಿ ಅವನು ಮತ್ತೊಬ್ಬ ಮಹಿಳೆಯೊಂದಿಗೆ ಇರುವುದನ್ನು ನೇರವಾಗಿ ಕಂಡು ಬೆಚ್ಚಿಬಿದ್ದಿದ್ದಾರೆ.

ಮಧ್ಯರಸ್ತೆಯಲ್ಲೇ ಜೋರಾದ ವಾಗ್ವಾದ :

ಪತ್ನಿಯನ್ನು ನೋಡುತ್ತಿದ್ದಂತೆ ಪತಿ ಮತ್ತು ಅವನ ಜೊತೆಗಿದ್ದ ಮಹಿಳೆ ಗಲಿಬಿಲಿಗೊಂಡಿದ್ದಾರೆ. ತಕ್ಷಣವೇ ಪತ್ನಿ ಮಧ್ಯರಸ್ತೆಯಲ್ಲೇ ಜೋರಾಗಿ ಗಲಾಟೆ ಆರಂಭಿಸಿದ್ದಾರೆ. ಮೊದಲಿಗೆ ಮಾತಿನ ಚಕಮಕಿ ನಡೆದರೂ, ಕೆಲವೇ ಕ್ಷಣಗಳಲ್ಲಿ ವಿವಾದ ಗಂಭೀರವಾಗಿ ತೀವ್ರಗೊಂಡಿದೆ.

ಆದರೆ ಸ್ವಲ್ಪ ಸಮಯದ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಮತ್ತು ವಿಡಿಯೋದಲ್ಲಿ ಕಾಣಿಸುವಂತೆ, ಗಂಡ ಪತ್ನಿಯ ಮೇಲೆ ಕೈ ಎತ್ತಿದಂತಿರುವ ದೃಶ್ಯಗಳು ಕಾಣಿಸುತ್ತವೆ.

ವೈರಲ್ ವಿಡಿಯೋ ಇಲ್ಲಿದೆ :‌

Video Courtesy : Social media / ABP Live

ರಸ್ತೆಯ ಮೇಲೆ ಗೊಂದಲದ ಪರಿಸ್ಥಿತಿ :

ಪತಿಯ ವರ್ತನೆಗೆ ಆಕ್ರೋಶಗೊಂಡ ಪತ್ನಿ ಅವನ ಗರ್ಲ್‌ಫ್ರೆಂಡ್ ಜೊತೆ ತೀವ್ರ ವಾಗ್ವಾದಕ್ಕೆ ಇಳಿದಿದ್ದು, ಅದು ಕ್ಷಣಾರ್ಧದಲ್ಲಿ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದೆ. ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿದ್ದು, ಪತ್ನಿ ಪತಿಗೂ ಕಪಾಳಕ್ಕೆ ಹೊಡೆದಿರುವುದು ಕಂಡುಬಂದಿದೆ.

“ಜಗಳವು ತೀವ್ರ ಸ್ವರೂಪ ಪಡೆದುಕೊಂಡು, ಪರಿಸ್ಥಿತಿ ಅಸ್ತವ್ಯಸ್ತವಾಯಿತು.” ಬೀದಿಯಲ್ಲಿ ದೊಡ್ಡ ಜನಸಮೂಹ ಜಮಾಯಿಸಿತು.

ವಿಡಿಯೋ ಮಾಡಿದ್ದ ಜನ, ತಡೆಯದ ಪತಿ :

ಆಶ್ಚರ್ಯದ ಸಂಗತಿಯೆಂದರೆ, ಜಗಳವನ್ನು ತಡೆಯುವ ಬದಲು ಅಲ್ಲಿ ಸೇರಿದ್ದ ಅನೇಕರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಮುಂದಾದರು. ಇನ್ನಷ್ಟು ಆಘಾತಕಾರಿಯಾದ ಸಂಗತಿ ಎಂದರೆ, ಪತಿ ಜಗಳ ಶಮನಗೊಳಿಸುವ ಪ್ರಯತ್ನ ಮಾಡದೇ, ತನ್ನ ಗರ್ಲ್‌ಫ್ರೆಂಡ್‌ಗೆ ಪತ್ನಿಯ ಮೇಲೆ ದಾಳಿ ಮಾಡಲು ಪ್ರೋತ್ಸಾಹಿಸಿದಂತೆ ವರ್ತಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ವಿಡಿಯೋ ವೈರಲ್, ಪೊಲೀಸ್ ಸ್ಪಷ್ಟನೆ :

ಘಟನೆಯ ಕೆಲ ಸಮಯದ ಬಳಿಕ ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ದೂರು ಬಂದಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : ಅನೈತಿಕ ಸಂಬಂಧ ಹೊಂದಿದ್ದ ಆರೋಪ ; ತಮ್ಮನನ್ನೇ ಮಣ್ಣಲ್ಲಿ ಹೋತು ಹಾಕಿದ ಅಣ್ಣ.


Disclaimer : “This video is taken from social media. We do not endorse violence or defamation. For responsible sharing.”

ಅನೈತಿಕ ಸಂಬಂಧ ಹೊಂದಿದ್ದ ಆರೋಪ ; ತಮ್ಮನನ್ನೇ ಮಣ್ಣಲ್ಲಿ ಹೋತು ಹಾಕಿದ ಅಣ್ಣ.

0

ಜನಸ್ಪಂದನ ನ್ಯೂಸ್‌, ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆದ ಭೀಕರ ಹತ್ಯೆಯೊಂದು ಇದೀಗ ಸಿನಿಮಾವನ್ನೇ ಮೀರಿಸುವ ರೀತಿಯಲ್ಲಿ ಬೆಳಕಿಗೆ ಬಂದಿದೆ. ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆರೋಪದ ಹಿನ್ನಲೆಯಲ್ಲಿ ತಮ್ಮನನ್ನೇ ಕೊಂದು ಮಣ್ಣಿನಲ್ಲಿ ಹೂತು, ಬಳಿಕ ನಾಟಕೀಯವಾಗಿ ಮಿಸ್ಸಿಂಗ್ ದೂರು ನೀಡಿದ್ದ ಅಣ್ಣನ ಅಸಲಿ ಮುಖವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

28 ವರ್ಷದ ರಾಮಚಂದ್ರ ಎಂಬ ಯುವಕ ಈ ಹತ್ಯೆಯ ಬಲಿಯಾಗಿದ್ದು, ಆತನ ಸಹೋದರ ಮಾಲತೇಶ್‌ನೇ ಕೊಲೆ ಆರೋಪಿಯಾಗಿದ್ದಾನೆ. ರಾಮಚಂದ್ರ ಕೂಲಿ ಕೆಲಸ ಮಾಡಿಕೊಂಡಿದ್ದು, ಇನ್ನೂ ಮದುವೆಯಾಗಿರಲಿಲ್ಲ. ತನಿಖೆ ಪ್ರಕಾರ, ರಾಮಚಂದ್ರ ಮತ್ತು ಅಣ್ಣನ ಪತ್ನಿ ಭಾಗ್ಯ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.

ಅನೈತಿಕ ಸಂಬಂಧಕ್ಕೆ ಎಚ್ಚರಿಕೆ ; ಆದರೂ ಮುಂದುವರಿದ ಸರಸ :

ತಮ್ಮನ ಮತ್ತು ಪತ್ನಿಯ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದ ಮಾಲತೇಶ್‌, ಇಬ್ಬರಿಗೂ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಆದರೆ ರಾಮಚಂದ್ರ ತನ್ನ ನಡತೆಯನ್ನು ಬದಲಾಯಿಸದೆ ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಮಾಲತೇಶ್‌, ತಮ್ಮನನ್ನು ದೂರಮಾಡುವ ನಿರ್ಧಾರ ಕೈಗೊಂಡಿದ್ದಾನೆ.

ಮದುವೆ ನೆಪದಲ್ಲಿ ಕರೆದುಕೊಂಡು ಹೋಗಿ ಹತ್ಯೆ :

ರಾಮಚಂದ್ರನಿಗೆ “ನಿನಗೆ ಬೇಗ ಮದುವೆ ಆಗಲಿ, ಸ್ವಾಮೀಜಿಯ ಬಳಿ ಪೂಜೆ ಮಾಡಿಸೋಣ” ಎಂದು ನಂಬಿಸಿ, ಮಾಲತೇಶ್ ಆತನನ್ನು ಮಂಜುನಾಥ್ ಎಂಬವರ ತೋಟಕ್ಕೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ ಮದ್ಯಪಾನ ಮಾಡಿಸಿ, ಕೈಕಾಲು ಕಟ್ಟಿ, ಕುಂಕುಮ ಹಾಗೂ ಲಿಂಬೆಹಣ್ಣು ನೀಡಿ ಪೂಜೆ ನೆಪದಲ್ಲಿ ಹಗ್ಗದಿಂದ ಕತ್ತು ಹಿಸುಕಿ ಕೊಂದಿರುವುದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಶವವನ್ನು ತೋಟದಲ್ಲೇ ಗುಂಡಿ ತೋಡಿ ಹೂತು ಹಾಕಲಾಗಿದೆ.

ಕೊಲೆ ಮಾಡಿ ಮಿಸ್ಸಿಂಗ್ ದೂರು – ಶಂಕೆ ತಪ್ಪಿಸಲು ಯತ್ನ :

ಕೊಲೆ ಬಳಿಕ ಮಾಲತೇಶ್ ತಾನೇ ಸೊರಬ ಪೊಲೀಸ್ ಠಾಣೆಗೆ ಹೋಗಿ “ತಮ್ಮ ರಾಮಚಂದ್ರ ಕಾಣೆಯಾಗಿದ್ದಾನೆ” ಎಂದು ದೂರು ನೀಡಿದ್ದ. ನಿತ್ಯ ಪೊಲೀಸ್ ಠಾಣೆಗೆ ತೆರಳಿ ವಿಚಾರಣೆ ನಡೆಸುತ್ತಿದ್ದಂತೆ ನಟಿಸಿದ್ದಾನೆ. ಇದರಿಂದ ಕುಟುಂಬದವರಿಗೂ ಆರಂಭದಲ್ಲಿ ಅನುಮಾನ ಬಂದಿರಲಿಲ್ಲ.

ಸೊಸೆಯ ಒಪ್ಪಿಗೆ – ಕೊಲೆ ರಹಸ್ಯ ಬಹಿರಂಗ :

45 ದಿನಗಳಾದರೂ ರಾಮಚಂದ್ರ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ತಾಯಿ ಗೌರಮ್ಮ ಆತಂಕಗೊಂಡು ಮತ್ತೊಮ್ಮೆ ಪೊಲೀಸರ ಮೊರೆ ಹೋಗಿದ್ದಾರೆ. ಈ ವೇಳೆ, ಸೊಸೆ ಭಾಗ್ಯ ತನ್ನ ಹಾಗೂ ರಾಮಚಂದ್ರನ ನಡುವಿನ  ಅನೈತಿಕ ಸಂಬಂಧ ಮತ್ತು ಅದರಿಂದ ಮಾಲತೇಶ್‌ನೇ ಕೊಲೆ ಮಾಡಿರುವ ಶಂಕೆಯನ್ನು ಬಾಯಿಬಿಟ್ಟಿದ್ದಾಳೆ.

ತಾಯಿ ಗೌರಮ್ಮ ನೇರವಾಗಿ ಮಾಲತೇಶ್‌ನನ್ನು ಪ್ರಶ್ನಿಸಿದಾಗ, “ಅವನ ಕಥೆ ಮುಗಿದಿದೆ, ಇನ್ನೇನು ಕೇಳಬೇಡ” ಎಂದು ಹೇಳಿದ್ದಾನೆ ಎನ್ನಲಾಗಿದೆ. ಬಳಿಕ ಒತ್ತಡದ ವಿಚಾರಣೆಗೆ ಒಳಗಾದ ಮಾಲತೇಶ್‌, ಶವ ಹೂತಿದ್ದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ.

ಪೊಲೀಸ್ ತನಿಖೆ ಮುಂದುವರಿಕೆ :

ಪೊಲೀಸರು ಸ್ಥಳದಿಂದ ಅವಶೇಷಗಳನ್ನು ಹೊರತೆಗೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನೈತಿಕ ಸಂಬಂಧ, ಕುಟುಂಬದೊಳಗಿನ ವೈಮನಸ್ಸು ಮತ್ತು ಪೂರ್ವಯೋಜಿತ ಹತ್ಯೆ ಎಂಬ ಅಂಶಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Courtesy : News 18 ಕನ್ನಡ

ಸ್ವಾಮೀಜಿಯ ಬೆತ್ತಲೆ ಮಸಾಜ್ ವಿಡಿಯೋ ವೈರಲ್ ; ಬ್ಲಾಕ್‌ಮೇಲ್ ಆರೋಪ.

0

ಜನಸ್ಪಂದನ ನ್ಯೂಸ್‌, ಧಾರವಾಡ : ಧಾರವಾಡ ಜಿಲ್ಲೆಯ ಶಿವಾನಂದ ಮಠದ ಪೀಠಾಧಿಪತಿ ಸರಸ್ವತಿ ಸ್ವಾಮೀಜಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಮಠದ ಭಕ್ತರು ಮತ್ತು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಠದ ಆವರಣದಲ್ಲಿ ಮಹಿಳೆಯೊಬ್ಬರಿಂದ ಎಣ್ಣೆ ಮಸಾಜ್ ಪಡೆಯುತ್ತಿರುವ ದೃಶ್ಯಗಳು ಎನ್ನಲಾಗಿರುವ ವಿಡಿಯೋ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಪ್ರಕರಣ ಸದ್ದು ಮಾಡುತ್ತಿದೆ.

ವಿಡಿಯೋ ವೈರಲ್ ಆದ ಬಳಿಕ ಗ್ರಾಮಸ್ಥರು ಸ್ವಾಮೀಜಿಯ ವರ್ತನೆ ಕುರಿತು ಪ್ರಶ್ನೆ ಎತ್ತಿದ್ದು, ಮಠದ ಪಾವಿತ್ರ್ಯ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೋರ್ನ್ ಸ್ಟಾರ್ ಆಗುವ ಆಸೆಗೆ ಪತ್ನಿ ಜೊತೆಗಿನ ಖಾಸಗಿ ವಿಡಿಯೋ ಹರಿಬಿಟ್ಟ ಪತಿ.

ಕೆಲವು ದಿನಗಳ ಕಾಲ ಅವರನ್ನು ಮಠದಿಂದ ಹೊರಗಿಡಲಾಗಿತ್ತು. ನಂತರ ಗ್ರಾಮದ ಕೆಲವರ ಮಧ್ಯಸ್ಥಿಕೆಯಿಂದ ಅವರನ್ನು ಮಠಕ್ಕೆ ಮರಳಿ ಕರೆತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬ್ಲಾಕ್‌ಮೇಲ್ ಆರೋಪ ಮಾಡಿದ ಸ್ವಾಮೀಜಿ :

ಈ ಬೆಳವಣಿಗೆಗಳ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದು, ತಾನು ಬ್ಲಾಕ್‌ಮೇಲ್‌ಗೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ. ಮಹಿಳೆಯೊಬ್ಬರು ಪರಿಚಯ ಮಾಡಿಕೊಂಡು ನಂತರ ತಮ್ಮ ವಿರುದ್ಧ ವಿಡಿಯೋ ಬಳಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುಮಾರು ಐದು ಮಂದಿಯ ಗುಂಪು 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದು, ಮಾತುಕತೆ ಬಳಿಕ 10 ಲಕ್ಷ ರೂಪಾಯಿಗೆ ಒಪ್ಪಂದವಾಗಿದೆ ಎಂಬುದಾಗಿ ಸ್ವಾಮೀಜಿ ತಿಳಿಸಿದ್ದಾರೆ.

ಇತರೇ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅದರಂತೆ, ಮಠಕ್ಕೆ ಬಂದ ನಾಲ್ವರಿಗೆ ಹಂತ ಹಂತವಾಗಿ ಹಣ ನೀಡಲಾಗಿದೆ. ಆದರೆ ಉಳಿದ ಹಣ ನೀಡದ ಕಾರಣ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ ಎಂದು ಅವರು ದೂರಿದ್ದಾರೆ. ಈ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ತನಿಖೆಗೆ ಒತ್ತಾಯ :

ವಿಡಿಯೋ ಯಾರು ಚಿತ್ರೀಕರಿಸಿದ್ದಾರೆ, ಹೇಗೆ ಹೊರಬಂದಿದೆ ಎಂಬುದರ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಸ್ವಾಮೀಜಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಬ್ಲಾಕ್‌ಮೇಲ್ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನೊಂದೆಡೆ, ಈ ಪ್ರಕರಣದ ಸತ್ಯಾಸತ್ಯತೆ ಕುರಿತು ಸಂಪೂರ್ಣ ತನಿಖೆ ನಡೆಯಬೇಕು ಎಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಮಠದ ಗೌರವ ಮತ್ತು ಧಾರ್ಮಿಕ ಸಂಸ್ಥೆಗಳ ಮೇಲಿನ ನಂಬಿಕೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಇದನ್ನು ಓದಿ : ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಅತಿರೇಕದ ಪ್ರೇಮ ಕಾಟ ; ಮಹಿಳೆ ವಿರುದ್ಧ ಎಫ್‌ಐಆರ್.

ಪ್ರಕರಣ ಇದೀಗ ಕಾನೂನು ಹಂತದಲ್ಲಿದ್ದು, ಮುಂದಿನ ತನಿಖೆಯ ನಂತರವೇ ನಿಖರವಾದ ಸತ್ಯಾಂಶ ಬಹಿರಂಗವಾಗಲಿದೆ.‌

ವರದಿ : ಜನಸ್ಪಂದನ ನ್ಯೂಸ್ ತಂಡ

ಹೆಚ್ಚಿನ ಸುದ್ದಿಗಳಿಗಾಗಿ janaspandhan.com ಕ್ಲಿಕ್ ಮಾಡಿ

ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಅತಿರೇಕದ ಪ್ರೇಮ ಕಾಟ ; ಮಹಿಳೆ ವಿರುದ್ಧ ಎಫ್‌ಐಆರ್.

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಬೆಂಗಳೂರು ನಗರದ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರಿಗೆ ಮಹಿಳೆಯೊಬ್ಬರಿಂದ ಎದುರಾದ ಅತಿರೇಕದ ಪ್ರೇಮ ಕಾಟ ಇದೀಗ ಗಂಭೀರ ಕಾನೂನು ಪ್ರಕರಣವಾಗಿ ಮಾರ್ಪಟ್ಟಿದೆ. ನಿರಂತರವಾಗಿ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದು, ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮಹಿಳೆ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಇನ್ಸ್‌ಪೆಕ್ಟರ್‌ರಿಗೆ ಪದೇಪದೇ ಫೋನ್ ಕರೆ ಮಾಡಿ, ಸಂದೇಶಗಳನ್ನು ಕಳುಹಿಸಿ “ನನ್ನನ್ನು ಪ್ರೀತಿಸಬೇಕು” ಎಂದು ಮಾನಸಿಕ ಒತ್ತಡ ಹಾಕುತ್ತಿದ್ದಳು ಎನ್ನಲಾಗಿದೆ. ‘‘Chinni love u, u love m’’ ಎಂದು ರಕ್ತದಲ್ಲಿ ಬರೆದ ಪತ್ರವನ್ನು ಪೋಸ್ಟ್ ಮೂಲಕ ಠಾಣೆಗೆ ಕಳುಹಿಸಿದ್ದಾಳೆ ಎಂಬುದು ಮತ್ತೊಂದು ಗಂಭೀರ ಆರೋಪವಾಗಿದೆ.

ಇದನ್ನು ಓದಿ : ರಸ್ತೆಯಲ್ಲಿ ಹೃದಯಾಘಾತ : ರಾತ್ರಿ ಸಹಾಯಕ್ಕೆ ಬಾರದ ಜನ ; 34 ವರ್ಷದ ಯುವಕ ಸಾವು.

ತನ್ನನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯೆಂದು ಹೇಳಿಕೊಂಡಿದ್ದ ಮಹಿಳೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಪರಿಚಯವಿದೆ ಎಂದಿದ್ದಾಳೆ. ಜೊತೆಗೆ ಕೆಲ ರಾಜಕೀಯ ನಾಯಕರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಕಳುಹಿಸಿ, ಪ್ರೀತಿಯನ್ನು ಒಪ್ಪಿಕೊಳ್ಳಲೇಬೇಕು ಎಂದು ಇನ್ಸ್‌ಪೆಕ್ಟರ್ ಮೇಲೆ ಒತ್ತಡ ಹೇರುತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಠಾಣೆಗೇ ಹೂಗುಚ್ಛ, ಕಜ್ಜಾಯ ಡಬ್ಬಿ ಕಳುಹಿಸಿದ ಮಹಿಳೆ :

ಮಹಿಳೆಯ ಕಾಟ ಇಷ್ಟರ ಮಟ್ಟಿಗೆ ಹೋಗಿತ್ತು ಎನ್ನಲಾಗಿದ್ದು, ಇನ್ಸ್‌ಪೆಕ್ಟರ್ ಠಾಣೆಯಲ್ಲಿ ಇಲ್ಲದ ಸಂದರ್ಭದಲ್ಲೂ ಪೊಲೀಸ್ ಠಾಣೆಗೆ ಹೂಗುಚ್ಛ ಹಾಗೂ ಕಜ್ಜಾಯದ ಡಬ್ಬಿಗಳನ್ನು ತಂದು ಇಟ್ಟು ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : ಕುಡಿದ ಅಮಲಿನಲ್ಲಿ ರಾಪಿಡೋದಿಂದ ಕೆಳಗೆ ಬಿದ್ದ Young woman ; ವಿಡಿಯೋ ವೈರಲ್.

ಒಂದೇ ಅಲ್ಲದೆ, 11 ವಿಭಿನ್ನ ಮೊಬೈಲ್ ಸಂಖ್ಯೆಗಳ ಮೂಲಕ ಇನ್ಸ್‌ಪೆಕ್ಟರ್‌ಗೆ ನಿರಂತರವಾಗಿ ಕರೆ ಮಾಡುತ್ತಿದ್ದಳು. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಎಲ್ಲಾ ಸಂಖ್ಯೆಗಳನ್ನೂ ಬ್ಲಾಕ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ರಕ್ತದಲ್ಲಿ ಬರೆದ ಪ್ರೇಮ ಪತ್ರ, ಆತ್ಮಹತ್ಯೆ ಬೆದರಿಕೆ :

ಇಷ್ಟಕ್ಕೂ ನಿಲ್ಲದ ಮಹಿಳೆ, ಪ್ರೇಮ ಪತ್ರ (Love letter) ಜೊತೆಗೆ ಮಾತ್ರೆಗಳನ್ನೂ ಕಳುಹಿಸಿದ್ದಾಳೆ ಎನ್ನಲಾಗಿದೆ. “ನನ್ನ ಪ್ರೀತಿಯನ್ನು ನೀವು ಒಪ್ಪಿಕೊಳ್ಳುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನೀವೇ ಕಾರಣ” ಎಂದು ಬರೆದು, ರಕ್ತದಲ್ಲಿ ಬರೆಯಲಾಗಿದೆ ಎನ್ನಲಾದ ಪತ್ರ (ಪ್ರೇಮ ಪತ್ರ) ವನ್ನು ಪೋಸ್ಟ್ ಮೂಲಕ ಠಾಣೆಗೆ ಕಳುಹಿಸಿದ್ದಾಳೆ ಎಂಬುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.

ಇದನ್ನು ಓದಿ : ಇತರೇ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಗೃಹ ಸಚಿವರ ಕಚೇರಿಯಿಂದ ಕರೆ?

ಈ ಮಧ್ಯೆ, ಮಹಿಳೆ ದೂರು ದಾಖಲಿಸಲು ಬಂದಿದ್ದಾಳೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗೃಹ ಸಚಿವರ ಕಚೇರಿಯಿಂದಲೂ ಠಾಣೆಗೆ ಕರೆ ಬಂದಿತ್ತು ಎನ್ನಲಾಗಿದೆ. ಆದರೆ ಮಹಿಳೆ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ ಎಂದು ಇನ್ಸ್‌ಪೆಕ್ಟರ್ ಸತೀಶ್ ಸ್ಪಷ್ಟಪಡಿಸಿದ್ದಾರೆ.

ಕಾನೂನು ಕ್ರಮಕ್ಕೆ ಮೊರೆ ಹೋದ ಇನ್ಸ್‌ಪೆಕ್ಟರ್ :

ನಿರಂತರ ಮಾನಸಿಕ ಕಿರುಕುಳ, ಕರ್ತವ್ಯಕ್ಕೆ ಅಡ್ಡಿ ಹಾಗೂ ಆತ್ಮಹತ್ಯೆ ಬೆದರಿಕೆ ಆರೋಪಗಳ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಸತೀಶ್ ಕೊನೆಗೂ ಕಾನೂನು ಕ್ರಮ ಕೈಗೊಂಡಿದ್ದಾರೆ. ಮಹಿಳೆ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣವನ್ನು ತನಿಖೆಗೆ ಒಳಪಡಿಸಲಾಗಿದೆ.

ಇದನ್ನು ಓದಿ : ಮೊಟ್ಟೆಗಳಲ್ಲಿ ʼಕ್ಯಾನ್ಸರ್ ಕಾರಕʼ ಅಂಶ ಅನುಮಾನ ; ರಾಜ್ಯಾದ್ಯಂತ ಆರೋಗ್ಯ ಅಲರ್ಟ್.

ಪ್ರಕರಣದ ಹಿನ್ನೆಲೆ, ಮಹಿಳೆಯ ವರ್ತನೆಯ ನಿಜಾಂಶ ಹಾಗೂ ಆರೋಪಗಳ ಸತ್ಯಾಸತ್ಯತೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Courtesy : TV9 Kannada

ಇಂತಹ ಹೆಚ್ಚಿನ ಸುದ್ದಿಗಳನ್ನು ನೀವು ಓದಲು ಬಯಸುವಿರಾ? janaspandhan.com ಕ್ಲಿಕ್ ಮಾಡಿ

ರಸ್ತೆಯಲ್ಲಿ ಹೃದಯಾಘಾತ : ರಾತ್ರಿ ಸಹಾಯಕ್ಕೆ ಬಾರದ ಜನ ; 34 ವರ್ಷದ ಯುವಕ ಸಾವು.

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ದಿನದಿಂದ ದಿನಕ್ಕೆ ಬೆಂಗಳೂರು ನಗರ ವಿಸ್ತಾರಗೊಳ್ಳುತ್ತಲೇ ಇದೆ. ಮೂಲಸೌಕರ್ಯ, ಜನಸಂಖ್ಯೆ ಮತ್ತು ವಾಹನ ಸಂಚಾರ ಎಲ್ಲವೂ ವೇಗವಾಗಿ ಹೆಚ್ಚುತ್ತಿದೆ. ಆದರೆ, ಇದೇ ಸಮಯದಲ್ಲಿ ನಗರದಲ್ಲಿನ ಮಾನವೀಯತೆ ಕುಗ್ಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗುವ ಘಟನೆಗಳು ಪದೇಪದೇ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ನಡೆದ ಒಂದು ದಾರುಣ ಘಟನೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಬೆಂಗಳೂರಿನ ಬನಶಂಕರಿ ಸಮೀಪದ ಕದಿರೇನಹಳ್ಳಿಯ ಮುಖ್ಯ ರಸ್ತೆಯಲ್ಲಿ 34 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ರಸ್ತೆ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಡಿಸೆಂಬರ್ 13ರಂದು ರಾತ್ರಿ ನಡೆದಿದೆ.

ಇದನ್ನು ಓದಿ : ಯುವತಿಯ ಹೊಟ್ಟೆಯಲ್ಲಿ “ಶಸ್ತ್ರಚಿಕಿತ್ಸಾ ಬ್ಲೇಡ್” ಉಳಿಸಿ ಹೊಲಿಗೆ ಹಾಕಿದ Doctor!

ಚಲಿಸುತ್ತಿದ್ದ ಬೈಕ್‌ನಲ್ಲೇ ಆತನಿಗೆ ಹೃದಯಾಘಾತವಾಗಿದ್ದು, ಬೈಕ್‌ನಿಂದ ಕೆಳಗೆ ಬಿದ್ದು ಆತ ಜೀವ ಉಳಿಸಿಕೊಳ್ಳಲು ಒದ್ದಾಡಿದ್ದಾನೆ. ಆದರೆ, ಅದೆಲ್ಲದರ ನಡುವೆಯೂ ಸಹಾಯಕ್ಕೆ ಯಾರೊಬ್ಬರೂ ಮುಂದಾಗದೇ ಇರುವುದೇ ಈ ಘಟನೆಯ ಅತ್ಯಂತ ನೋವಿನ ಅಂಶವಾಗಿದೆ.

ಮೃತ ವ್ಯಕ್ತಿಗೆ ಮನೆಯಲ್ಲಿಯೇ ಮೊದಲು ಹೃದಯಾಘಾತದ ಸಣ್ಣ ಸೂಚನೆಗಳು ಕಂಡುಬಂದಿದ್ದವು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬ ಯತ್ನಿಸಿದರೂ, ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಲಭ್ಯವಾಗದ ಕಾರಣ ಪತ್ನಿಯೊಂದಿಗೆ ಬೈಕ್‌ನಲ್ಲೇ ಆಸ್ಪತ್ರೆಗೆ ತೆರಳುತ್ತಿದ್ದರು. ಆದರೆ ಮಾರ್ಗಮಧ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತ ಸಂಭವಿಸಿದೆ.

ಇದನ್ನು ಓದಿ : ಗರ್ಭಿಣಿ ಪತ್ನಿಗೆ ಮೋಸ ; ಗಂಡನ ರಹಸ್ಯ ಬಯಲು ಮಾಡಿದ ಪ್ರವಾಹ.

ಬೈಕ್‌ನಿಂದ ಕೆಳಗೆ ಬಿದ್ದ ವ್ಯಕ್ತಿ ರಸ್ತೆ ಮೇಲೆ ತೀವ್ರ ನೋವಿನಿಂದ ಒದ್ದಾಡುತ್ತಿದ್ದಾಗ, ಆತನ ಪತ್ನಿ ಗಂಡನನ್ನು ಉಳಿಸಿಕೊಡುವಂತೆ ಕಾರು, ಬೈಕ್ ಮತ್ತು ಗೂಡ್ಸ್ ವಾಹನಗಳನ್ನು ನಿಲ್ಲಿಸಲು ಕೈ ತೋರಿಸಿ ಸಹಾಯ ಕೇಳಿದ್ದಾಳೆ. ಆದರೂ, ಒಂದು ವಾಹನ ಕೂಡ ನಿಲ್ಲಿಸದೇ ಮುಂದೆ ಸಾಗಿರುವುದು ಸ್ಥಳೀಯರಲ್ಲಿಯೇ ಆಕ್ರೋಶಕ್ಕೆ ಕಾರಣವಾಗಿದೆ.

ರಾತ್ರಿ ಸಮಯದಲ್ಲಿ ಸಹಾಯಕ್ಕೆ ಜನರು ಮುಂದಾಗದಿರುವುದಕ್ಕೆ ನಗರದಲ್ಲಿನ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಭಯವೂ ಒಂದು ಕಾರಣ ಎಂದು ಸ್ಥಳೀಯರು ಹೇಳುತ್ತಾರೆ. ಯಾವ ಕ್ಷಣದಲ್ಲಿ ಏನು ಆಗುತ್ತದೆ ಎಂಬ ಆತಂಕದಿಂದಾಗಿ ಅನೇಕರು ಇಂತಹ ಸಂದರ್ಭಗಳಲ್ಲಿ ನಿಲ್ಲಲು ಹಿಂದೇಟು ಹಾಕುತ್ತಿದ್ದಾರೆ.

ಇದನ್ನು ಓದಿ : ಪೋರ್ನ್ ಸ್ಟಾರ್ ಆಗುವ ಆಸೆಗೆ ಪತ್ನಿ ಜೊತೆಗಿನ ಖಾಸಗಿ ವಿಡಿಯೋ ಹರಿಬಿಟ್ಟ ಪತಿ.

ಆದರೆ, ಮಾನವ ಜೀವ ಉಳಿಸುವ ಕನಿಷ್ಠ ಮಾನವೀಯತೆ ಕೂಡ ಕಾಣಿಸದಿರುವುದು ಸಮಾಜದ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಕೊನೆಗೂ 34 ವರ್ಷದ ಯುವಕ ಯಾವುದೇ ವೈದ್ಯಕೀಯ ನೆರವು ಸಿಗದೆ ರಸ್ತೆ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ. ಪತ್ನಿಯ ಕಣ್ಣೆದುರೇ ನಡೆದ ಈ ದಾರುಣ ಘಟನೆ, ಬೆಂಗಳೂರಿನ ಜನರ ಮನಸ್ಸುಗಳು ನಗರ ಬೆಳವಣಿಗೆಯಂತೆ ವಿಸ್ತಾರಗೊಳ್ಳುತ್ತಿಲ್ಲ ಎಂಬ ನೋವಿನ ಸತ್ಯವನ್ನು ಮತ್ತೆ ಈ ಘಟನೆ ಬಹಿರಂಗಪಡಿಸಿದೆ.

ಇದನ್ನು ಓದಿ : Mangaluru : ಲಂಚಕ್ಕೆ ಬೇಡಿಕೆ : ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ.!

ಈ ಹೃದಯಾಘಾತದ ಘಟನೆ ನಗರದಲ್ಲಿ ತುರ್ತು ಸೇವೆಗಳ ಲಭ್ಯತೆ, ಸಾರ್ವಜನಿಕರ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಬೇಕಾಗಿದೆ.

ಇತ್ತೀಚೆಗೆ ಮಾನವೀಯತೆ ಕುಗ್ಗಲು ಪ್ರಮುಖ ಕಾರಣಗಳು :

ಅಪರಾಧ ಭಯ (Crime Fear) :

ನಗರಗಳಲ್ಲಿ ಅಪರಾಧ ಪ್ರಮಾಣ ಹೆಚ್ಚಾಗಿದೆ ಎಂಬ ಭಾವನೆ ಜನರಲ್ಲಿ ಗಾಢವಾಗಿದೆ.
“ನಿಲ್ಲಿಸಿದರೆ ಏನಾದರೂ ಸಮಸ್ಯೆ ಆಗಿಬಿಡುತ್ತದಾ?”
“ಯಾರಾದರೂ ತಪ್ಪು ಕೇಸ್ ಹಾಕಿಬಿಡ್ತಾರಾ?”
ಎಂಬ ಆತಂಕದಿಂದ ಜನರು ಸಹಾಯಕ್ಕೆ ಮುಂದಾಗುವುದಿಲ್ಲ.

ಕಾನೂನು ಗೊಂದಲ ಮತ್ತು ತಪ್ಪು ಭಾವನೆ :

ಬಹಳಷ್ಟು ಜನರಿಗೆ Good Samaritan Law ಬಗ್ಗೆ ಸರಿಯಾದ ಅರಿವು ಇಲ್ಲ.

  • ಸಹಾಯ ಮಾಡಿದರೆ ಪೊಲೀಸ್ ಕಿರುಕುಳ
  • ಕೋರ್ಟ್‌ಗೆ ಅಲೆದಾಡಿಸಬಹುದು
    ಎಂಬ ತಪ್ಪು ಕಲ್ಪನೆ ಮಾನವೀಯತೆಯನ್ನು ತಡೆಹಿಡಿಯುತ್ತಿದೆ.

👉 ವಾಸ್ತವದಲ್ಲಿ, ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡುವವರಿಗೆ ಕಾನೂನು ರಕ್ಷಣೆ ಇದೆ.

ಹೃದಯಾಘಾತ – “ನನಗೆ ಸಂಬಂಧ ಇಲ್ಲ” ಅನ್ನುವ ಮನೋಭಾವ :

ಇತ್ತೀಚಿನ ಸಮಾಜದಲ್ಲಿ
ಸ್ವಾರ್ಥ + ನಿರ್ಲಕ್ಷ್ಯ ಹೆಚ್ಚಾಗಿದೆ.

  • “ನನಗೆ ತಡವಾಗುತ್ತಿದೆ”
  • “ಯಾರಾದರೂ ನೋಡಿಕೊಳ್ಳುತ್ತಾರೆ”
  • “ನಾನು ಏಕೆ ಮಧ್ಯೆ ಬೀಳಬೇಕು?”
    ಎಂಬ ಮನೋಭಾವ ಸಾಮಾನ್ಯವಾಗಿದೆ.

ನಗರ ಜೀವನದ ಒತ್ತಡ :

  • ಸಮಯದ ಒತ್ತಡ.
  • ಉದ್ಯೋಗ ಒತ್ತಡ.
  • ಸಂಚಾರ ಗೊಂದಲ.

ಇವೆಲ್ಲ ಕಾರಣಗಳಿಂದ ಜನರು ಇತರರ ನೋವನ್ನು ನೋಡುವ ಸಹನೆ ಕಳೆದುಕೊಳ್ಳುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದ ದುಷ್ಪರಿಣಾಮ :

ಜನರು ಸಹಾಯ ಮಾಡುವ ಬದಲು:

  • ವಿಡಿಯೋ ತೆಗೆಯುತ್ತಾರೆ,
  • ರೀಲ್ಸ್ ಮಾಡುತ್ತಾರೆ,
  • ವೈರಲ್ ಮಾಡಲು ಪ್ರಯತ್ನಿಸುತ್ತಾರೆ.

ಮಾನವೀಯತೆಯಿಗಿಂತ ಕಂಟೆಂಟ್ ಮುಖ್ಯವಾಗಿರುವ ಸ್ಥಿತಿ ಉಂಟಾಗಿದೆ.

ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿತ

  • ಆಂಬ್ಯುಲೆನ್ಸ್ ಸಮಯಕ್ಕೆ ಬರೋದಿಲ್ಲ.
  • ಪೊಲೀಸ್ ಪ್ರತಿಕ್ರಿಯೆ ತಡ.
  • ಆಸ್ಪತ್ರೆಗಳಲ್ಲಿ ಗೊಂದಲ.

ಇವೆಲ್ಲದಿಂದ
👉 “ನಾವು ಸಹಾಯ ಮಾಡಿದರೂ ಪ್ರಯೋಜನವಿಲ್ಲ”
ಎಂಬ ನಿರಾಶೆ ಜನರಲ್ಲಿ ಮೂಡುತ್ತಿದೆ.

ಮೌಲ್ಯಾಧಾರಿತ ಶಿಕ್ಷಣದ ಕೊರತೆ :

ಶಿಕ್ಷಣದಲ್ಲಿ:

  • ಅಂಕಗಳು ಮುಖ್ಯ ಮತ್ತು ಸ್ಪರ್ಧೆ ಮುಖ್ಯ ಆದರೆ,
  1. ಸಹಾನುಭೂತಿ,
  2. ಮಾನವೀಯತೆ,
  3. ಸಾಮಾಜಿಕ ಜವಾಬ್ದಾರಿ ಇವುಗಳ ಬಗ್ಗೆ ಸಾಕಷ್ಟು ಒತ್ತು ಇಲ್ಲ.

ಇಂತಹ ಹೆಚ್ಚಿನ ಸುದ್ದಿಗಳನ್ನು ನೀವು ಓದಲು ಬಯಸುವಿರಾ? janaspandhan.com ಕ್ಲಿಕ್ ಮಾಡಿ