Home Blog Page 14

ವಿಚ್ಛೇದನ ನೋಟಿಸ್‌ ಕಾರಣಕ್ಕೆ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಪತಿ.

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಪತ್ನಿಯ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯು ಬಳಸಿದ್ದ ಪಿಸ್ತೂಲ್ ಕುರಿತು ಮಾಗಡಿ ರಸ್ತೆ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ಬಾಲ ಮುರುಗನ್‌ನಿಂದ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದು ಪರವಾನಗಿ ಹೊಂದಿದ ಆಯುಧವೋ ಅಥವಾ ಅನಧಿಕೃತ (ಕಂಟ್ರಿಮೇಡ್) ಪಿಸ್ತೂಲ್ ಆಗಿದೆಯೋ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಪಿಸ್ತೂಲ್ ಪರವಾನಗಿ ಹೊಂದಿದ್ದಲ್ಲಿ ಅದರ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಅನಧಿಕೃತ ಆಯುಧವಾಗಿದ್ದಲ್ಲಿ ಅದು ಎಲ್ಲಿ ಖರೀದಿಸಲಾಯಿತು, ಯಾರಿಂದ ದೊರಕಿತು ಎಂಬ ಎಲ್ಲ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮಂಗಳವಾರ ರಾತ್ರಿಯಿಂದಲೇ ಆರೋಪಿಯನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗಿದ್ದು, ಕೆಲವು ಮಹತ್ವದ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚ್ಛೇದನ (Divorce) ನೋಟಿಸ್‌ :

ವಿಚಾರಣೆ ವೇಳೆ ಆರೋಪಿ, ಪತ್ನಿ ವಿಚ್ಛೇದನಕ್ಕೆ ಸಂಬಂಧಿಸಿದ ನೋಟಿಸ್ ಕಳುಹಿಸಿದ್ದುದೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪತ್ನಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನವನ್ನು ಆರೋಪಿ ಹೊಂದಿದ್ದರಿಂದ ದಂಪತಿ ನಡುವೆ ನಿರಂತರ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ಈ ಹಿನ್ನೆಲೆ ಪತ್ನಿ ಕಾನೂನು ಮಾರ್ಗದ ಮೂಲಕ ವಿಚ್ಛೇದನಕ್ಕೆ ಮುಂದಾಗಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ, ಕೃತ್ಯಕ್ಕೆ ಮುಂದಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳ ಮಹಜರು, ಮರಣೋತ್ತರ ಪರೀಕ್ಷೆ :

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳ ಮಹಜರು ನಡೆಸಿ, ಹತ್ಯೆಯಾದ ಭುವನೇಶ್ವರಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಬಾಲ ಮುರುಗನ್ ಹಾಗೂ ಭುವನೇಶ್ವರಿ ಸುಮಾರು 14 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ 12 ವರ್ಷದ ಮಗ ಮತ್ತು 4 ವರ್ಷದ ಮಗಳು ಇದ್ದಾರೆ.

ಇದನ್ನು ಓದಿ : ಪೊಲೀಸ್ ವಶದಲ್ಲಿದ್ದ ಆರೋಪಿ ಸಿನಿಮೀಯ ಶೈಲಿಯಲ್ಲಿ ಪರಾರಿ; ವಿಡಿಯೋ ವೈರಲ್.

ಕೌಟುಂಬಿಕ ಕಲಹದ ಹಿನ್ನೆಲೆ :

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಪತ್ನಿಯ ಮೇಲೆ ನಿರಂತರವಾಗಿ ಅನುಮಾನ ವ್ಯಕ್ತಪಡಿಸುತ್ತಿದ್ದ. ಈ ವಿಚಾರವೇ ದಂಪತಿ ನಡುವೆ ತೀವ್ರ ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಕಲಹದಿಂದ ಬೇಸತ್ತ ಭುವನೇಶ್ವರಿ, ವಿಚ್ಛೇದನ ಪಡೆಯಲು ತೀರ್ಮಾನಿಸಿ ಕೋರ್ಟ್ ಮೂಲಕ ನೋಟಿಸ್ ಕಳುಹಿಸಿದ್ದರು.

ಆದರೆ ಆರೋಪಿ ಇದಕ್ಕೆ ಒಪ್ಪಿರಲಿಲ್ಲ. ವಾರದ ಹಿಂದೆ ವಿಚ್ಛೇದನ ನೋಟಿಸ್‌ ಬಂದ ಬಳಿಕ, ಆರೋಪಿ ಕೃತ್ಯಕ್ಕೆ ಸಂಚು ರೂಪಿಸಿದ್ದಿರಬಹುದು ಎಂಬ ಪ್ರಾಥಮಿಕ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ :

ಪೊಲೀಸರು ನೀಡಿರುವ ಮಾಹಿತಿಯಂತೆ, ಡಿಸೆಂಬರ್ 23, 2025 ರಂದು ಸಂಜೆ ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭುವನೇಶ್ವರಿ ಅವರ ಮೇಲೆ ಆರೋಪಿ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಸಂಬಂಧಿತ ಸುದ್ದಿ : ಅನೈತಿಕ ಸಂಬಂಧ ಹೊಂದಿದ್ದ ಆರೋಪ ; ತಮ್ಮನನ್ನೇ ಮಣ್ಣಲ್ಲಿ ಹೋತು ಹಾಕಿದ ಅಣ್ಣ.

ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.


Disclaimer : ಈ ವರದಿ ಪೊಲೀಸ್ ಮೂಲಗಳು ಮತ್ತು ಪ್ರಾಥಮಿಕ ತನಿಖಾ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಅಂತಿಮವೆಂದು ಪರಿಗಣಿಸಬಾರದು.

ಅಂತರ್ಜಾತಿ ಪ್ರೀತಿಗಾಗಿ 19 ವರ್ಷದ ತಂಗಿಯ Murder ; ಸಹೋದರ, ಸ್ನೇಹಿತನ ಬಂಧನ.

0

ಜನಸ್ಫಂದನ ನ್ಯೂಸ್‌, ಹರಿಯಾಣ : ಹರಿಯಾಣದಲ್ಲಿ ಅಂತರ್ಜಾತಿ ಪ್ರೀತಿಯ ವಿಷಯವಾಗಿ 19 ವರ್ಷದ ಯುವತಿಯ ಹತ್ಯೆ (Murder) ಸಂಭವಿಸಿದ್ದು, ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತನಿಖೆಯಲ್ಲಿ, 28 ವರ್ಷದ ಯುವ ಸಹೋದರ ತನ್ನ 30 ವರ್ಷದ ಸ್ನೇಹಿತನಿಗೆ ಕೊಲೆಗೆ ಸುಪಾರಿ ನೀಡಿದ ಬಗ್ಗೆ ವಿವರಗಳು ಹೊರಬಂದಿವೆ.

ಈ ವೇಳೆ ಆರೋಪಿಯು, ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದು, ಹತ್ಯೆಗೆ ಸಂಬಂಧಿಸಿದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಅಂತರ್ಜಾತಿ ಪ್ರೀತಿಗೆ ಸಂಬಂಧಿಸಿದ ಯುವತಿಯ Murder :

ತನಿಖಾಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ಎಟಾ ಮೂಲದ ಈ ಸಹೋದರ–ಸಹೋದರಿ ಕಳೆದ ಸುಮಾರು ಆರು ವರ್ಷಗಳಿಂದ ಹರಿಯಾಣದ ಮಾನೇಸರ್‌ನಲ್ಲಿ ವಾಸಿಸುತ್ತಿದ್ದರು.

ಸಹೋದರಿ ಬೇರೆ ಸಮುದಾಯದ 24 ವರ್ಷದ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಮತ್ತು ಆತನೊಂದಿಗೆ ಮದುವೆಯಾಗಲು ನಿರ್ಧರಿಸಿದ್ದಾಳೆ ಎಂದು ಸಹೋದರಿಗೆ ತಿಳಿಯಿತು. ಈ ಕಾರಣದಿಂದ, ನವೆಂಬರ್ 15ರಂದು ಸಹೋದರ ತನ್ನ ತಂಗಿಯನ್ನು ಎಟಾದಲ್ಲಿರುವ ಅವರ ಕುಟುಂಬದ ಮನೆಗೆ ಕಳುಹಿಸಿದ್ದಾನೆ.

ಆದರೆ, ಯುವತಿ ನವೆಂಬರ್ 22ರಂದು ತನ್ನ ಗೆಳೆಯನೊಂದಿಗೆ ಸೇರಲು ಮಾನೇಸರ್‌ಗೆ ಪುನಃ ಹಿಂತಿರುಗಿದ್ದಳು ಎಂದು ಸಹಾಯಕ ಪೊಲೀಸ್ ಆಯುಕ್ತ ವೀರೇಂದ್ರ ಸೈನಿ ತಿಳಿಸಿದ್ದಾರೆ.

ಸಹೋದರ ಹತ್ಯೆಯ ಯೋಜನೆ ರೂಪಿಸಿ ಸ್ನೇಹಿತನಿಗೆ ತನ್ನ ತಂಗಿಯನ್ನು ಸಂಪರ್ಕಿಸುವಂತೆ ಸೂಚಿಸಿದ್ದಾನೆ. ಆಗ ಸ್ನೇಹಿತನು ಯುವತಿಯನ್ನು ಸಂಪರ್ಕಿಸಿ, ಗೆಳೆಯನೊಂದಿಗೆ ಮದುವೆ ಮಾಡಲು ಸಹಾಯ ಮಾಡುವಂತೆ ನಾಟಕವಾಡಿ ಭೇಟಿಗೆ ಕೇಳಿಕೊಂಡಿದ್ದಾನೆ.

ಯುವತಿ ಡಿಸೆಂಬರ್ 10ರಂದು ರಾತ್ರಿ ರಾಂಪುರ ಚೌಕ್ ಬಳಿ ಆತನನ್ನು ಭೇಟಿಯಾಗಲು ಒಪ್ಪಿಕೊಂಡಳು. ಆದರೆ ಆತ ಆಕೆಗೆ ಸಹಾಯ ಮಾಡುವ ಬದಲು, ಆಕೆಯನ್ನು ಗ್ವಾಲಿಯರ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುವ ಮೂಲಕ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಯುವತಿ ವಿರೋಧಿಸಿದಾಗ ಹಲ್ಲೆ ನಡೆಸಿ, ಕೊನೆಗೆ ಆಕೆಯ ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಶವವನ್ನು ಹೊಲವೊಂದರಲ್ಲಿ ಮರೆಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅಪರಾಧದ ನಂತರ, ಇಬ್ಬರೂ ಆರೋಪಿಗಳು ತಮ್ಮ ಊರುಗಳಿಗೆ ಪರಾರಿಯಾಗಿದ್ದರು. ಸಹೋದರನು, ತನ್ನ ತಂಗಿಯ ಗೆಳೆಯನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದರೂ, ತುರ್ತು ತನಿಖೆಯಲ್ಲಿ ಆತನೂ ಮತ್ತು ಸ್ನೇಹಿತನೂ ಅಪರಾಧ ಸ್ಥಳದಲ್ಲಿದ್ದ ದೃಢ ಸಾಕ್ಷ್ಯಗಳು ದೊರೆತಿವೆ.

ಪೊಲೀಸರು, ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ. ಸಹೋದರ ತನ್ನ ತಂಗಿಯ ಮೇಲೆ ಸೇಡು ತೀರಿಸಿಕೊಳ್ಳಲು ಗೆಳೆಯನನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದರೆ, ಸ್ನೇಹಿತನು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾರೆ.

ಸಂಬಂಧಿತ ಸುದ್ದಿ : Murder :ವಿವಾಹಿತೆ ಮತ್ತು ಆಕೆಯ ಪ್ರೇಮಿಯನ್ನು ಕೊಂದು ಬಾವಿಗೆ ಎಸೆದ ಕುಟುಂಬ.!

ಕಾನೂನು ಕ್ರಮ ಮತ್ತು ತನಿಖೆ :

ಪೊಲೀಸರು ಇಬ್ಬರೂ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳಡಿ (ಕೊಲೆ, ಕ್ರಿಮಿನಲ್ ಪಿತೂರಿ) FIR ದಾಖಲಿಸಿದ್ದಾರೆ.

  • DNA ಪರೀಕ್ಷೆ: ಪ್ರಕರಣದ ದೃಢೀಕರಣಕ್ಕೆ ಡಿಎನ್ಎ ಮತ್ತು ಮರಣೋತ್ತರ ಪರೀಕ್ಷೆ ವರದಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
  • ಆರೋಪಿಗಳ ಬಂಧನ: ಸದ್ಯ ಇಬ್ಬರೂ ಪೊಲೀಸ್ ವಶದಲ್ಲಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಅನೈತಿಕ ಸಂಬಂಧ ಅಥವಾ ಅಂತರ್ಜಾತಿ ವಿವಾಹದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ‘ಗೌರವ ಹತ್ಯೆ’ಗಳು (Honor Killing) ಸಮಾಜದಲ್ಲಿ ಆತಂಕ ಮೂಡಿಸಿವೆ.

ಇನ್ನೊಂದು ಪ್ರಕರಣ : ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder. 


Disclaimer : ಈ ಲೇಖನದಲ್ಲಿ ಉಲ್ಲೇಖಿತ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಮೂಲಗಳ ಆಧಾರದಲ್ಲಿವೆ. ಯಾವುದೇ ಆರೋಪ ಅಥವಾ ಘಟನೆಯ ದೃಢತೆಯನ್ನು ಜನಸ್ಪಂದನ ನ್ಯೂಸ್ ಪರಿಶೀಲಿಸಿಲ್ಲ.

ಭೀಕರ ಅಪಘಾತ: ಖಾಸಗಿ ಬಸ್–ಲಾರಿ ಡಿಕ್ಕಿ, 9 ಜನ ಸಜೀವ ದಹನ.

0

ಜನಸ್ಪಂದನ ನ್ಯೂಸ್‌, ಚಿತ್ರದುರ್ಗ : ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ‘ಸೀ ಬರ್ಡ್’ (Sea Bird) ಖಾಸಗಿ ಬಸ್, ವಿರುದ್ಧ ದಿಕ್ಕಿನಿಂದ ಬಂದ ಲಾರಿಯೊಂದಿಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಪರಿಣಾಮ 9 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಈ ದುರ್ಘಟನೆ ಗುರುವಾರ ಮುಂಜಾನೆ ನಡೆದಿದೆ. ಬೆಂಗಳೂರು ನಗರದಿಂದ ರಾತ್ರಿ ಸುಮಾರು 8.30ಕ್ಕೆ ಹೊರಟಿದ್ದ ಕೆಎ 01–ಎಇ 5217 ಸಂಖ್ಯೆಯ ಸೀ ಬರ್ಡ್ ಬಸ್, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಬಸ್‌ನ ಡೀಸೆಲ್ ಟ್ಯಾಂಕ್ ಭಾಗಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಯಿಂದ ಮೊದಲು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬಸ್‌ಗೂ ಬೆಂಕಿ ಆವರಿಸಿದೆ.

ಬೆಂಕಿಗೆ ಸಿಲುಕಿದ ಪ್ರಯಾಣಿಕರು :

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 29 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಡೀಸೆಲ್ ಟ್ಯಾಂಕ್ ಬಳಿ ಲಾರಿ ಡಿಕ್ಕಿ ಹೊಡೆದ ಕಾರಣ ಬೆಂಕಿ ವೇಗವಾಗಿ ಹರಡಿದ್ದು, ನಿದ್ರೆಯಲ್ಲಿದ್ದ ಕೆಲ ಪ್ರಯಾಣಿಕರಿಗೆ ತಕ್ಷಣ ಹೊರಬರಲು ಸಾಧ್ಯವಾಗಿಲ್ಲ. ಈ ಪೈಕಿ 9 ಮಂದಿ ಬಸ್ ಒಳಗಡೆಯೇ ಮೃತಪಟ್ಟಿದ್ದಾರೆ.

ಉಳಿದ 18 ಪ್ರಯಾಣಿಕರು ಕಿಟಕಿಗಳು ಮತ್ತು ಎಮರ್ಜೆನ್ಸಿ ದ್ವಾರಗಳ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಯಾಣಿಕರ ವಿವರ :

32 ಆಸನ ಸಾಮರ್ಥ್ಯದ ಬಸ್‌ನಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ 15 ಮಹಿಳೆಯರು ಮತ್ತು 14 ಪುರುಷರು ಸೇರಿದ್ದಾರೆ. ಹೆಚ್ಚಿನ ಪ್ರಯಾಣಿಕರು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೂಲದವರಾಗಿದ್ದು, ಉಳಿದವರು ಕುಮಟಾ ಮತ್ತು ಶಿವಮೊಗ್ಗ ಮೂಲದವರಾಗಿದ್ದಾರೆ.

ಬಸ್ ಚಾಲಕ ಮತ್ತು ನಿರ್ವಾಹಕ ಸೇರಿ ಕೆಲವರು ಸಮಯಪ್ರಜ್ಞೆಯಿಂದ ಬಸ್‌ನಿಂದ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಸಂಸ್ಥೆಯ ಮಾಲೀಕರ ಹೇಳಿಕೆ :

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸೀ ಬರ್ಡ್ ಸಂಸ್ಥೆಯ ಮಾಲೀಕರು, ಬಸ್‌ನಲ್ಲಿ ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳು ಮತ್ತು ಎರಡು ಎಮರ್ಜೆನ್ಸಿ ದ್ವಾರಗಳು ಇದ್ದವು ಎಂದು ತಿಳಿಸಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಸಂಸ್ಥೆಯ ಮಾಲೀಕರು ಆರೋಪಿಸಿದ್ದಾರೆ.

ಅಪಘಾತದ ಸಮಯದಲ್ಲಿ ಮೊಹಮ್ಮದ್ ರಫೀಕ್ ಬಸ್ ಚಾಲನೆ ಮಾಡುತ್ತಿದ್ದರು ಎಂದು ಸಂಸ್ಥೆಯು ಮಾಹಿತಿ ನೀಡಿದೆ.

ಪ್ರಯಾಣಿಕರ ಪಟ್ಟಿ ಬಿಡುಗಡೆ :

ಈ ಪಟ್ಟಿ ಅಪಘಾತದ ವೇಳೆ ಬಸ್‌ನಲ್ಲಿ ಇದ್ದ ಎಲ್ಲಾ ಪ್ರಯಾಣಿಕರ ವಿವರಗಳನ್ನು ಒಳಗೊಂಡಿದೆ. ಮೃತಪಟ್ಟವರು ಮತ್ತು ಗಾಯಗೊಂಡವರ ಗುರುತು ಪತ್ತೆ ಪ್ರಕ್ರಿಯೆ ಮುಂದುವರಿದಿದೆ. ಬಸ್‌ನ 28 ಸೀಟುಗಳು ಆನ್‌ಲೈನ್ ಮೂಲಕ ಬುಕ್ ಆಗಿದ್ದು, ರೆಡ್ ಬಸ್ ಮೂಲಕ 19 ಮತ್ತು ಅಭಿ ಬಸ್ ಮೂಲಕ 9 ಸೀಟುಗಳನ್ನು ಬುಕ್ ಮಾಡಲಾಗಿತ್ತು.

ಇದನ್ನು ಓದಿ : Car – KSRTC ಬಸ್ ಭೀಕರ ಅಪಘಾತ ; ಮೂವರು ಯುವಕರ ದುರ್ಮರಣ.

ಗೋಕರ್ಣಕ್ಕೆ ತೆರಳುತ್ತಿದ್ದವರು (24 ಜನ) :

  • ಮಂಜುನಾಥ್, ಸಂಧ್ಯಾ ಎಚ್, ಶಶಾಂಕ್ ಹೆಚ್ ವಿ, ದಿಲೀಪ್, ಪ್ರೀತಿಸ್ವರನ್, ಬಿಂದು ವಿ, ಕವಿತಾ ಕೆ, ಅನಿರುದ್ಧ್ ಬ್ಯಾನರ್ಜಿ, ಅಮೃತಾ, ಈಶಾ, ಶಶಿಕಾಂತ್ ಎಂ, ನವ್ಯಾ, ಅಭಿಷೇಕ್, ಕಿರಣ್ ಪಾಲ್ ಎಚ್, ಕೀರ್ತನ್ ಎಂ, ನಂದಿತಾ ಜಿ ಬಿ, ದೇವಿಕಾ ಎಚ್, ಗಗನಶ್ರೀ ಎಸ್, ರಸ್ಮಿ ಮಹಲೆ, ರಕ್ಷಿತಾ ಆರ್, ಸೂರಜ್, ಮಾನಸ, ಮಲ್ಲಣ್ಣ ಮತ್ತು ಹೇಮರಾಜ್ ಕುಮಾರ್.

ಕುಮಟಾಕ್ಕೆ ತೆರಳುತ್ತಿದ್ದವರು (2 ಜನ) :

  • ಮೇಘರಾಜ್, ವಿಜಯ್ ಭಂಡಾರಿ.

ಶಿವಮೊಗ್ಗಕ್ಕೆ ತೆರಳುತ್ತಿದ್ದವರು (2 ಜನ) :

  • ಮಸ್ರತುನ್ನಿಸಾ ಎಸ್ ಎನ್, ಸೈಯದ್ ಜಮೀರ್ ಗೌಸ್.

ಸಂಬಂಧಿತ ಸುದ್ದಿ : Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!

ತನಿಖೆ ಮುಂದುವರಿಕೆ :

ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೃತರ ಗುರುತು ಪತ್ತೆ ಕಾರ್ಯ ಪ್ರಗತಿಯಲ್ಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನ ಪಾತ್ರ ಸೇರಿದಂತೆ ಎಲ್ಲಾ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Courtesy : Suvarna News


Disclaimer : ಈ ವರದಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ ತಯಾರಿಸಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಆರೋಪಗಳನ್ನು ಅಂತಿಮವೆಂದು ಪರಿಗಣಿಸಬಾರದು.

ಆಯುರ್ವೇದವನ್ನು ಕಡೆಗಣಿಸಿದ ಭಾರತೀಯರು; ಚೀನಿಯರ ಆರೋಗ್ಯ ಕಷಾಯ ರಹಸ್ಯ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಭಾರತ, ಆಯುರ್ವೇದ (Ayurveda) ದ ತವರೂರು ಎನ್ನಿಸಿಕೊಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ಅನೇಕರು ಸಹಜ ಚಿಕಿತ್ಸಾ ಪದ್ಧತಿಗಳಿಗಿಂತ ಮಾತ್ರೆಗಳ ಮೇಲೆಯೇ ಹೆಚ್ಚಿನ ಅವಲಂಬನೆ ಇಡುತ್ತಿದ್ದಾರೆ.

ಆದರೆ ಇನ್ನೊಂದು ಕಡೆ, ಚೀನಾದಲ್ಲಿ ಕೆಲವು ಸಮುದಾಯಗಳಲ್ಲಿ ತಮ್ಮ ದೈನಂದಿನ ಜೀವನದಲ್ಲಿ ಸಹಜ ಆಹಾರ ಪದಾರ್ಥಗಳಿಂದ ತಯಾರಿಸುವ ಕಷಾಯಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳುತ್ತಿರುವುದು ಗಮನ ಸೆಳೆಯುವ ವಿಚಾರವಾಗಿದೆ.

ಚೀನಾದಲ್ಲಿ ಆರೋಗ್ಯದ ಕುರಿತು ವಿಶೇಷ ಜಾಗ್ರತೆ ಕಂಡುಬರುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಋತುಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳಿಂದ ದೂರ ಉಳಿಯುವುದು ಮತ್ತು ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅವರು ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು ಹಾಗೂ ಕಷಾಯಗಳನ್ನು ಸೇವಿಸುತ್ತಾರೆ ಎನ್ನಲಾಗಿದೆ.

ಚೀನಾದಲ್ಲಿ ಜನಪ್ರಿಯವಾಗಿರುವ ಕಷಾಯ ಯಾವುದು?

ಚೀನಾದಲ್ಲಿ ಜನಪ್ರಿಯವಾಗಿದೆ ಎನ್ನಲಾಗುತ್ತಿರುವ ಈ ಕಷಾಯಕ್ಕೆ ಬೇಕಾಗುವ ಪದಾರ್ಥಗಳು ನಮ್ಮ ಅಡುಗೆಮನೆಯಲ್ಲಿಯೇ ಸುಲಭವಾಗಿ ಸಿಗುವಂತಹವುಗಳೇ ಆಗಿವೆ. ಇದಕ್ಕೆ ಬಳಸುವ ಪ್ರಮುಖ ಪದಾರ್ಥಗಳು ಹೀಗಿವೆ:

  • ಲಿಂಬೆಹಣ್ಣು
  • ಈರುಳ್ಳಿ
  • ಶುಂಠಿ
  • ಆರೆಂಜ್
  • ಬೆಳ್ಳುಳ್ಳಿ
  • ಚಕ್ಕೆ (ದಾಲ್ಚಿನ್ನಿ)

Note : ಈ ಕಷಾಯದ ಪದಾರ್ಥಗಳು ವಿವಿಧ ಮೂಲಗಳಲ್ಲಿ ಉಲ್ಲೇಖವಾಗಿರುವುದರಿಂದ, ಎಲ್ಲರೂ ಒಂದೇ ರೀತಿಯಲ್ಲಿ ತಯಾರಿಸುತ್ತಾರೆ ಎಂಬುದು ಕಡ್ಡಾಯವಲ್ಲ.

ಕಷಾಯವನ್ನು ತಯಾರಿಸುವ ವಿಧಾನ :

ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ನಂತರ ಅವುಗಳನ್ನು ಒಂದು ಪಾತ್ರೆಯಲ್ಲಿ ನೀರಿನೊಂದಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಕಷಾಯ ಸ್ವಲ್ಪ ಗಾಢವಾಗುವವರೆಗೆ ಕುದಿಸಿದ ಬಳಿಕ, ಅದನ್ನು ಸೋಸಿ ಸೇವಿಸಬಹುದು.

ಈ ಪಾನೀಯವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸುವ ಅಭ್ಯಾಸವಿದೆ ಎಂದು ತಿಳಿದುಬಂದಿದೆ.

ಈ ಪದಾರ್ಥಗಳು ಏಕೆ ಉಪಯುಕ್ತ?

ಲಿಂಬೆಹಣ್ಣು, ಶುಂಠಿ, ಬೆಳ್ಳುಳ್ಳಿ, ಚಕ್ಕೆ ಮುಂತಾದ ಪದಾರ್ಥಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವುಗಳಲ್ಲಿ ಸಹಜವಾಗಿ ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಇರುವುದರಿಂದ, ದೇಹದ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗಬಹುದು ಎನ್ನಲಾಗುತ್ತದೆ. ಇದಕ್ಕಾಗಿಯೇ ಇಂತಹ ಪಾನೀಯಗಳು ವಿವಿಧ ದೇಶಗಳಲ್ಲಿ ಜನಪ್ರಿಯವಾಗಿವೆ.

ಇದನ್ನು ಓದಿ : Iron content ಕೊರತೆಯ ಲಕ್ಷಣಗಳು : ಮಕ್ಕಳ ಮತ್ತು ವಯಸ್ಕರ ಆರೋಗ್ಯಕ್ಕೆ ಅಪಾಯ.

ಆಯುರ್ವೇದ ಮತ್ತು ಸಹಜ ಜೀವನಶೈಲಿ ಕುರಿತು ಚರ್ಚೆ :

ಆಯುರ್ವೇದ ಮತ್ತು ಸಹಜ ಚಿಕಿತ್ಸಾ ವಿಧಾನಗಳು ಶತಮಾನಗಳಿಂದ ಬಳಕೆಯಲ್ಲಿದ್ದರೂ, ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ಅವುಗಳನ್ನು ಕಡೆಗಣಿಸುತ್ತಿದ್ದಾರೆ.

ಆದರೆ ಚೀನಿಯರಂತಹ ಕೆಲವು ರಾಷ್ಟ್ರಗಳು ಸಹಜ ಆಹಾರ ಪದಾರ್ಥಗಳು ಮತ್ತು ಪರಂಪರಾಗತ ಪದ್ಧತಿಗಳನ್ನು ತಮ್ಮ ಜೀವನದ ಭಾಗವನ್ನಾಗಿಸಿಕೊಂಡು ಆರೋಗ್ಯದತ್ತ ಗಮನ ಹರಿಸುತ್ತಿರುವುದು ಗಮನಾರ್ಹವಾಗಿದೆ.

ಸಂಬಂಧಿತ ಸುದ್ದಿ : ಸರ್ವ ಆರೋಗ್ಯಕ್ಕೂ ವರದಾನ ಈ Black Seed ; ತಿಂದ್ರೆ ಯಾವ ರೋಗಗಳೂ ನಿಮ್ಮ ಹತ್ತಿರ ಸುಳಿಯಲ್ಲ

ವೈದ್ಯರ ಸಲಹೆ ಅಗತ್ಯ :

ಈ ರೀತಿಯ ಕಷಾಯಗಳು ಸಾಮಾನ್ಯ ಆರೋಗ್ಯ ಪಾನೀಯಗಳಾಗಿ ಪರಿಗಣಿಸಲ್ಪಟ್ಟರೂ, ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಎಲ್ಲರ ದೇಹದ ಸ್ಥಿತಿಯೂ ಒಂದೇ ರೀತಿಯಲ್ಲಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು.


Disclaimer : ಈ ಲೇಖನವು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ. ಇಲ್ಲಿ ಉಲ್ಲೇಖಿಸಲಾದ ಆಹಾರ ಪದಾರ್ಥಗಳು ಯಾವುದೇ ರೋಗಕ್ಕೆ ಚಿಕಿತ್ಸೆ ನೀಡುತ್ತವೆ ಎಂಬ ಉದ್ದೇಶದಿಂದ ಈ ವರದಿಯನ್ನು ತಯಾರಿಸಲಾಗಿಲ್ಲ. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆ ಇದ್ದಲ್ಲಿ ಅರ್ಹ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಪ್ರೀತಿ ವಿಚಾರಕ್ಕೆ Instagram ಸ್ನೇಹಿತನಿಂದ 21 ವರ್ಷದ ಯುವತಿ ಮೇಲೆ ಹಲ್ಲೆ.

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಪ್ರದೇಶದಲ್ಲಿ ಇನ್‌ಸ್ಟಾಗ್ರಾಂ (Instagram) ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ 21 ವರ್ಷದ ಯುವತಿಯ ಮೇಲೆ ಸಾರ್ವಜನಿಕವಾಗಿ ದೈಹಿಕ ಹಲ್ಲೆ ನಡೆಸಿದ್ದ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ಥಳೀಯ ಪೊಲೀಸರು ವರದಿಯ ಪ್ರಕಾರ, ಡಿಸೆಂಬರ್ 22ರಂದು ಮಧ್ಯಾಹ್ನ ಸುಮಾರು 3:20ಕ್ಕೆ ನಡೆದ ಈ ಘಟನೆಯಲ್ಲಿ, ಆರೋಪಿ ನವೀನ್ ಕುಮಾರ್ ಎನ್. ತನ್ನ ಕಾರಿನಲ್ಲಿ ಯುವತಿಯನ್ನು ಹಿಂಬಾಲಿಸಿ ನಡುರಸ್ತೆಯಲ್ಲಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು ಇಲ್ಲಿವೆ :

Courtesy : NDTV / Social Media

ಆಕೆಯ ಪರ್ಸ್ ಪರಿಶೀಲನೆ ಮಾಡುವುದೂ, ತಲೆ ಮತ್ತು ಬೆನ್ನಿಗೆ ಹೊಡೆದು ಎಳೆಯುವ ಪ್ರಯತ್ನವೂ ವರದಿಗಳಲ್ಲಿ ಉಲ್ಲೇಖವಾಗಿದೆ. ಸ್ಥಳದಲ್ಲಿ 2–3 ಜನರಿದ್ದರೂ ಸಹ ಯಾರೂ ಸಹಾಯಕ್ಕೆ ಬರಲಿಲ್ಲ ಎನ್ನಲಾಗಿದೆ.

ಇದನ್ನು ಓದಿ : ಮಹಿಳೆಯ ಮೇಲೆ ಸಂಚಾರಿ ಪೊಲೀಸ್‌ ಹಲ್ಲೆ ; ವಿಡಿಯೋ ವೈರಲ್‌ ಬಳಿಕ ಅಮಾನತು.

Instagram ಪರಿಚಯವೇ ಈ ಘಟನೆಯ ಹಿನ್ನೆಲೆ :

ಪೊಲೀಸ್ ತನಿಖೆಯ ಪ್ರಕಾರ, ನವೀನ್ ಮತ್ತು ಯುವತಿ 2024ರಲ್ಲಿ Instagram ಮೂಲಕ ಪರಿಚಯ ಹೊಂದಿದ್ದರು. ಕಾಲಾವಧಿಯಲ್ಲಿ ನವೀನ್ ಆಕೆಯನ್ನು ಪ್ರೀತಿಸುವಂತೆ ಒತ್ತಾಯಿಸಲು ಆರಂಭಿಸಿದನು, ಆದರೆ ಆಕೆ ನಿರಾಕರಿಸಿದ್ದಾಳೆ. ಈ ಘಟನೆ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದಳು.

ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಯುವತಿಯ ಮೇಲಿನ ದೂರು 2023ರ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದ್ದು, ಇದರಲ್ಲಿ ಶರೀರ ಹಿಂಸೆ, ಲೈಂಗಿಕ ಹಿಂಸೆ ಮತ್ತು ಸಾರ್ವಜನಿಕ ಶಾಂತಿ ಹಿತದೋಷ ಅಂಶಗಳು ಸೇರಿವೆ.

ಪೊಲೀಸ್ ತಂಡವು ತ್ವರಿತ ಕ್ರಮ ಕೈಗೊಂಡು, ಘಟನೆ ನಡೆದ 24 ಗಂಟೆಗಳೊಳಗೆ ಆರೋಪಿ ನವೀನ್ ಕುಮಾರ್ ಅವರನ್ನು ಬಂಧಿಸಿದೆ.

ಇದನ್ನು ಓದಿ : ಕೇರಳದಲ್ಲಿ ಗರ್ಭಿಣಿ ಮಹಿಳೆ ಮೇಲೆ ಪೊಲೀಸ್ ಹಲ್ಲೆ ; ಸಾರ್ವಜನಿಕರಲ್ಲಿ ಆಕ್ರೋಶ.

ಪೊಲೀಸ್ ವರದಿಯ ಪ್ರಕಾರ, ಪ್ರಕರಣದ ತನಿಖೆ ಇನ್ನೂ ಮುಂದುವರಿದು ಬರುತ್ತಿದ್ದು, ಉಚಿತ ಸಾರ್ವಜನಿಕ ಮತ್ತು ಯುವತಿಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತಿದೆ.


Disclaimer : ಈ ವರದಿ ಪೊಲೀಸ್ ದಾಖಲೆಗಳು ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ ತಯಾರಿಸಲಾಗಿದೆ. ಆರೋಪಗಳು ನ್ಯಾಯಾಲಯದಲ್ಲಿ ದೃಢೀಕರಿಸದಿರುವವರೆಗೆ ತಪ್ಪಾಗಿ ಪರಿಗಣಿಸಬಾರದು.

ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ರೇಬೀಸ್‌ ಹೋಲುವ ಲಕ್ಷಣ; ನಾಯಿಯಂತೆ ವರ್ತಿಸಿದ ಯುವಕ.

0

ಜನಸ್ಪಂದನ ನ್ಯೂಸ್‌, ಉತ್ತರ ಪ್ರದೇಶ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ರೇಬೀಸ್ (Rabies) ಗೆ ಹೋಲುವ ಗಂಭೀರ ಲಕ್ಷಣಗಳು ಕಾಣಿಸಿಕೊಂಡ ಯುವಕನ ಪ್ರಕರಣ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. 23 ವರ್ಷದ ಯುವಕನೊಬ್ಬನ ಸ್ಥಿತಿ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ದೆಹಲಿಗೆ ರೆಫರ್ ಮಾಡಿದ್ದಾರೆ.

ಅಲಿಗಢ ಜಿಲ್ಲೆಯ ಖೈರ್ ತಹಸಿಲ್ ವ್ಯಾಪ್ತಿಯ ಉತ್ವಾರಾ ಗ್ರಾಮದ ನಿವಾಸಿ ರಾಮ್‌ಕುಮಾರ್ ಅಲಿಯಾಸ್ ರಾಮು (23)ಗೆ ಡಿಸೆಂಬರ್ 20ರ ಸಂಜೆ ಬೀದಿ ನಾಯಿ ಕಾಲಿಗೆ ಕಚ್ಚಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯ :

ಪ್ರಾಥಮಿಕವಾಗಿ ಗಾಯ ಸಣ್ಣದಾಗಿ ಕಂಡುಬಂದ ಕಾರಣ ಕುಟುಂಬಸ್ಥರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮರುದಿನ ಮಧ್ಯಾಹ್ನದ ವೇಳೆಗೆ ಯುವಕನ ವರ್ತನೆ ಅಚಾನಕ್ ಬದಲಾಗಿದ್ದು, ಆರೋಗ್ಯದಲ್ಲಿ ತೀವ್ರ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗಿದೆ.

ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ರೇಬೀಸ್‌ ಹೋಲುವ ಲಕ್ಷಣ; ನಾಯಿಯಂತೆ ವರ್ತಿಸಿದ ಯುವಕ.
(ಚಿತ್ರ : ಸಾಮಾಜಿಕ ಜಾಲತಾಣ)

ನಾಯಿಯಂತೆ ವರ್ತನೆ; ಕುಟುಂಬಸ್ಥರಲ್ಲಿ ಆತಂಕ :

ರಿಪೋರ್ಟ್‌ಗಳ ಪ್ರಕಾರ, ಯುವಕ ಅಸಹಜವಾಗಿ ವರ್ತಿಸಿ, ನಿಯಂತ್ರಣ ತಪ್ಪಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾನೆ. ಆತನ ವರ್ತನೆಯಿಂದ ಸುತ್ತಮುತ್ತಲವರಿಗೆ ಅಪಾಯವಾಗಬಹುದು ಎಂಬ ಕಾರಣದಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ಆತನನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ಈ ವೇಳೆ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ತಕ್ಷಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ದೆಹಲಿಗೆ ರೆಫರ್ ಮಾಡಿದ ವೈದ್ಯರು :

ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ವೈದ್ಯರು, ಇಂತಹ ತೀವ್ರ ಲಕ್ಷಣಗಳು ಕಾಣಿಸಿಕೊಳ್ಳುವುದು ಅತ್ಯಂತ ಅಪರೂಪದ ಹಾಗೂ ಅಪಾಯಕಾರಿ ಸ್ಥಿತಿ ಎಂದು ತಿಳಿಸಿದ್ದಾರೆ.

ವೈದ್ಯರ ಮಾಹಿತಿ ಪ್ರಕಾರ, ಸಾಮಾನ್ಯವಾಗಿ Rabies ಲಕ್ಷಣಗಳು ದಿನಗಳು, ವಾರಗಳು ಅಥವಾ ಕೆಲವೊಮ್ಮೆ ತಿಂಗಳುಗಳ ನಂತರ ಕಾಣಿಸಿಕೊಳ್ಳುತ್ತವೆ. ನಾಯಿ ಕಚ್ಚಿದ ಕೆಲವೇ ಗಂಟೆಗಳಲ್ಲಿ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುವುದು ಅತ್ಯಂತ ಅಪರೂಪವಾಗಿದ್ದು, ಇತರೆ ನ್ಯೂರೋ ಅಥವಾ ಮಾನಸಿಕ ಸಮಸ್ಯೆಗಳ ಸಾಧ್ಯತೆಯನ್ನೂ ತಳ್ಳಿ ಹಾಕಲಾಗಿಲ್ಲ.

ಯುವಕನ ಆರೋಗ್ಯ ಸ್ಥಿತಿಯನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಉನ್ನತ ವೈದ್ಯಕೀಯ ಕೇಂದ್ರಕ್ಕೆ ರೆಫರ್ ಮಾಡಲಾಗಿದೆ. ಸದ್ಯ ಆತನ ಸ್ಥಿತಿ ನಾಜೂಕಾಗಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ : “ಪಾರ್ಕಿಂಗ್‌ನಲ್ಲಿ ನಿಂತ Car ಮೇಲೆ ಶಕ್ತಿ ಪ್ರದರ್ಶಿಸಿದ ನಾಯಿ ; ವೈರಲ್ ವಿಡಿಯೋ ನೋಡಿ!”

ಗ್ರಾಮದಲ್ಲಿ ಆತಂಕ; ಮುನ್ನೆಚ್ಚರಿಕೆ ಅಗತ್ಯ :

ಈ ಘಟನೆಯ ನಂತರ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದೇ ವೇಳೆ, ಈ ಘಟನೆಗೆ ಸಂಬಂಧಿಸಿದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ವೈದ್ಯರಿಂದ ರೇಬೀಸ್ (Rabies) ಬಗ್ಗೆ ಎಚ್ಚರಿಕೆ :

ವೈದ್ಯರು ನೀಡಿರುವ ಮಾಹಿತಿಯಂತೆ, “ನಾಯಿ ಅಥವಾ ಯಾವುದೇ ಪ್ರಾಣಿಯ ಕಚ್ಚಿದ ಕೂಡಲೇ ಗಾಯವನ್ನು ಸ್ವಚ್ಛ ನೀರು ಮತ್ತು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು”.

“ಸಾಮಾನ್ಯವಾಗಿ Rabies ವೈರಸ್ ದೇಹದಲ್ಲಿ ನಿಧಾನವಾಗಿ ಬೆಳೆಯುತ್ತದೆ. ಕೆಲ ಸಂದರ್ಭಗಳಲ್ಲಿ ಭಯ, ಶಾಕ್ ಅಥವಾ ಇತರೆ ನ್ಯೂರೋ ಸಮಸ್ಯೆಗಳ ಕಾರಣಕ್ಕೂ ಅಸಹಜ ವರ್ತನೆ ಕಾಣಿಸಿಕೊಳ್ಳಬಹುದು. ಅಂತಿಮ ದೃಢೀಕರಣ ವೈದ್ಯಕೀಯ ಪರೀಕ್ಷೆಗಳ ನಂತರವೇ ಸಾಧ್ಯ.” ಎಂದಿದ್ದಾರೆ.

ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ

ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಆಂಟಿ-ರೇಬೀಸ್ (Anti Rabies) ಲಸಿಕೆ ಸೇರಿದಂತೆ ಅಗತ್ಯ ಚಿಕಿತ್ಸೆ ಪಡೆಯುವುದು ಅತ್ಯಂತ ಅವಶ್ಯ. ಚಿಕಿತ್ಸೆಯಲ್ಲಿ ವಿಳಂಬವಾದರೆ ವೈರಸ್ ಮೆದುಳಿಗೆ ತಲುಪಿ ಜೀವಾಪಾಯ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಲಾಗಿದೆ.


Disclaimer : ಈ ವರದಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ ಹಾಗೂ ಮಾಧ್ಯಮ ವರದಿಗಳ ಆಧಾರಿತವಾಗಿದೆ. ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ನಾಯಿ ಅಥವಾ ಯಾವುದೇ ಪ್ರಾಣಿಯ ಕಚ್ಚಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

RRTS ರೈಲಿನಲ್ಲಿ ಜೋಡಿಯ ಅಸಭ್ಯ ವರ್ತನೆ; ವಿಡಿಯೋ ವೈರಲ್.

0

ಜನಸ್ಫಂದನ ನ್ಯೂಸ್‌, ಮೀರತ್ :  ದೆಹಲಿ–ಮೀರತ್ ರೀಜಿಯನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಂ (RRTS) ರೈಲಿನೊಳಗೆ ಯುವ ಜೋಡಿಯೊಂದು ಸಾರ್ವಜನಿಕ ಸ್ಥಳಕ್ಕೆ ಅಸಮಂಜಸವೆನ್ನಲಾಗುವ (ಅಸಭ್ಯ ವರ್ತನೆ) ರೀತಿಯಲ್ಲಿ ವರ್ತಿಸಿದ್ದಾರೆಯೆಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಶಿಷ್ಟಾಚಾರ ಹಾಗೂ ಪ್ರಯಾಣಿಕರ ಸುರಕ್ಷತೆ ಕುರಿತು ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಪ್ರಕಾರ, ಈ ಘಟನೆ ಮೋದಿನಗರ ಮತ್ತು ಮೀರತ್ ನಿಲ್ದಾಣಗಳ ಮಧ್ಯೆ ಚಲಿಸುತ್ತಿದ್ದ ರೈಲು ಕೋಚ್‌ನಲ್ಲಿ ನಡೆದಿದೆ ಎನ್ನಲಾಗುತ್ತಿದೆ.

RRTS ರೈಲಿನಲ್ಲಿಯ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ :

Courtesy : News 24

ದೃಶ್ಯಗಳಲ್ಲಿ ರೈಲು ಸೇವೆ ಸಕ್ರಿಯವಾಗಿರುವಾಗಿನ ಪ್ರಕಟಣೆಗಳು ಕೇಳಿಬರುತ್ತಿದ್ದು, ಕೋಚ್ ಸಂಪೂರ್ಣ ಖಾಲಿಯಾಗಿರಲಿಲ್ಲ ಎಂದು ವರದಿಗಳು ತಿಳಿಸುತ್ತವೆ. ಜೋಡಿಗಳ ಹಿಂದೆ ಕೆಲ ಸೀಟುಗಳ ದೂರದಲ್ಲಿ ಮತ್ತೊಬ್ಬ ಪ್ರಯಾಣಿಕರು ಕುಳಿತಿರುವುದೂ ಕಾಣಿಸುತ್ತದೆ.

RRTS ರೈಲು ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶ ಪೊಲೀಸರು ಹಾಗೂ NCRTC ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC) ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

ಸಂಬಂಧಿಸಿದ ವ್ಯಕ್ತಿಗಳನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದ್ದು, ಘಟನೆಯ ಸಂದರ್ಭಗಳಲ್ಲಿ ಸಾರ್ವಜನಿಕ ಶಿಷ್ಟಾಚಾರ ನಿಯಮಗಳ ಉಲ್ಲಂಘನೆ ಆಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಜೊತೆಗೆ, ಈ ವಿಡಿಯೋ ರೈಲಿನ ಒಳಗಿನ ದೃಶ್ಯಾವಳಿಗಳಾಗಿದ್ದರೆ, ಅವುಗಳ ಗೌಪ್ಯತೆ ಉಲ್ಲಂಘನೆಯ ಪ್ರಶ್ನೆಯೂ ತನಿಖೆಯ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ಕೆಲವರು ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ವರ್ತನೆ ಅನುಚಿತವೆಂದು ಟೀಕಿಸಿದರೆ, ಇನ್ನು ಕೆಲವರು ವಿಡಿಯೋ ಹಂಚಿಕೆಯಿಂದ ಗೌಪ್ಯತೆ ಹಾನಿಯಾಗುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅಧಿಕೃತ ವಿವರವಾದ ಹೇಳಿಕೆ ಹೊರಬಿದ್ದಿಲ್ಲ; ತನಿಖೆ ಮುಂದುವರಿದಿದೆ.


Disclaimer : ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಮಾಧ್ಯಮ ವರದಿಗಳ ಆಧಾರದಲ್ಲಿದೆ. ವಿಡಿಯೋದಲ್ಲಿನ ಘಟನೆಗಳ ಸತ್ಯಾಸತ್ಯತೆ ಅಥವಾ ಆರೋಪಗಳ ಖಚಿತತೆಯನ್ನು ಜನಸ್ಪಂದನ ನ್ಯೂಸ್ ಸ್ವತಂತ್ರವಾಗಿ ದೃಢಪಡಿಸುವುದಿಲ್ಲ.

ಈ 1 ತಪ್ಪೇ ʼಚಹಾʼ ರುಚಿ ಸಂಪೂರ್ಣ ಹಾಳಾಗಲು ಕಾರಣ; ಹೆಚ್ಚಿನವರು ಇದ್ನೇ ಮಾಡ್ತಾರೆ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಭಾರತದಲ್ಲಿ ಚಹಾ ಎಂದರೆ ಕೇವಲ ಪಾನೀಯವಲ್ಲ, ಅದು ದಿನಚರಿಯ ಒಂದು ಭಾಗ. ಬೆಳಿಗ್ಗೆ ಎದ್ದ ತಕ್ಷಣದ ಟೀ ಯಿಂದ ಹಿಡಿದು ಸಂಜೆ ಸ್ನೇಹಿತರ ಜೊತೆಗೆ ಕುಡಿಯುವ ಟೀ ವರೆಗೆ, ಚಹಾಗೆ ಎಲ್ಲರ ಜೀವನದಲ್ಲಿ ವಿಶೇಷ ಸ್ಥಾನವಿದೆ.

“ನಿಮ್ಮ ಟೀ ಯ ರುಚಿ ಸರಿಯಾಗಿಲ್ಲ ಅನ್ನಿಸುತಿದೆಯಾ? ಕಾರಣ ಇಲ್ಲೇ ಇದೆ.”!
ಆದರೆ ಬಹುತೇಕ ಜನರು ಪ್ರತಿದಿನ ಟೀ ತಯಾರಿಸುತ್ತಿದ್ದರೂ, ಅದರ ನಿಜವಾದ ರುಚಿ ಮತ್ತು ಪರಿಮಳವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ, ಟೀ ಮಾಡುವಾಗ ಮಾಡುವ ಕೆಲವು ಸಾಮಾನ್ಯ ತಪ್ಪುಗಳು.

ಬಹುತೇಕ ಜನರು ಟೀ ಮಾಡುವಾಗ ಮಾಡುವ ದೊಡ್ಡ ತಪ್ಪು :

ಸಾಮಾನ್ಯವಾಗಿ ಹೆಚ್ಚು ಜನರು ಟೀ ಮಾಡುವಾಗ ಟೀಪುಡಿ ಮತ್ತು ಸಕ್ಕರೆ ಎರಡನ್ನೂ ಒಟ್ಟೊಟ್ಟಿಗೆ ನೀರಿನಲ್ಲಿ ಹಾಕುತ್ತಾರೆ. ಇನ್ನೂ ಕೆಲವರು ನೀರು ಕುದಿಯುವ ಮೊದಲೇ ಹಾಲು, ಟೀಪುಡಿ, ಸಕ್ಕರೆ ಎಲ್ಲವನ್ನೂ ಸೇರಿಸಿ ಕುದಿಯಲು ಬಿಡುತ್ತಾರೆ.

ಎಲ್ಲ ಪದಾರ್ಥಗಳನ್ನು ಒಟ್ಟಿಗೆ ಹಾಕಿದರೆ ಏನಾಗುತ್ತದೆ?

ಈ ವಿಧಾನದಿಂದ ಟೀಗೆ ಬೇಕಾದ ಸರಿಯಾದ ಬಣ್ಣವೂ ಬರದು, ರುಚಿಯೂ ಕುಗ್ಗುತ್ತದೆ. ಟೀ ಪರ್ಫೆಕ್ಟ್ ಆಗಿ ಬರಬೇಕೆಂದರೆ ಪ್ರತಿಯೊಂದು ಪದಾರ್ಥವನ್ನು ಸರಿಯಾದ ಸಮಯದಲ್ಲಿ ಸೇರಿಸುವುದು ಅತ್ಯಂತ ಮುಖ್ಯ.

ಪರ್ಫೆಕ್ಟ್ ಚಹಾ ತಯಾರಿಸುವ ಸರಿಯಾದ ವಿಧಾನ :

ಒಳ್ಳೆಯ ಟೀ ತಯಾರಿಸಲು ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಬೇಕು. ಉದಾಹರಣೆಗೆ, ಎರಡು ಕಪ್ ಟೀ ಮಾಡಬೇಕಾದರೆ ಸುಮಾರು ಒಂದೂವರೆ ಕಪ್ ನೀರನ್ನು ತೆಗೆದುಕೊಳ್ಳುವುದು ಸೂಕ್ತ. ನೀರು ಕುದಿಯಲು ಪ್ರಾರಂಭಿಸಿದ ನಂತರ ಮಾತ್ರ ಟೀಪುಡಿಯನ್ನು ಸೇರಿಸಬೇಕು.

ಎರಡು ಕಪ್ ಟೀಗಾಗಿ ಎರಡು ಚಿಕ್ಕ ಚಮಚ ಟೀಪುಡಿ ಸಾಕು. ಈ ಹಂತದಲ್ಲಿ ತುರಿದ ಶುಂಠಿ ಸೇರಿಸಿದರೆ ಟೀಗೆ ಉತ್ತಮ ಸುವಾಸನೆ ಬರುತ್ತದೆ.

ಟೀಪುಡಿ ಮತ್ತು ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ನೀರಿನ ಪ್ರಮಾಣ ಸುಮಾರು ಒಂದು ಕಪ್ ಮಟ್ಟಕ್ಕೆ ಇಳಿದಾಗ ಹಾಲು ಸೇರಿಸಬೇಕು. ನಂತರ ಗ್ಯಾಸಿನ ಜ್ವಾಲೆಯನ್ನು ಸ್ವಲ್ಪ ಹೆಚ್ಚಿಸಿ, ಟೀ ಎರಡು ಬಾರಿ ಚೆನ್ನಾಗಿ ಕುದಿಯಲು ಬಿಡಬೇಕು. ಕೊನೆಯ ಹಂತದಲ್ಲಿ ನಿಮ್ಮ ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಿ ಮತ್ತೆ 2–3 ಬಾರಿ ಕುದಿಸಿದರೆ ಟೀಗೆ ಅದ್ಭುತ ಬಣ್ಣ ಮತ್ತು ರುಚಿ ಬರುತ್ತದೆ.

ಇದೇ ಸಮಯದಲ್ಲಿ ಏಲಕ್ಕಿ, ಲವಂಗ, ತುಳಸಿ ಅಥವಾ ಇತರ ಸುವಾಸನೆಯ ಪದಾರ್ಥಗಳನ್ನು ಸೇರಿಸಿದರೆ ಟೀ ಇನ್ನಷ್ಟು ವಿಶೇಷವಾಗುತ್ತದೆ. ಈ ವಿಧಾನದಲ್ಲಿ ತಯಾರಿಸಿದ ಟೀ ಕುಡಿಯುವಾಗ ಟೀಪುಡಿ ಮತ್ತು ಶುಂಠಿಯ ನೈಜ ರುಚಿ ಸ್ಪಷ್ಟವಾಗಿ ಅನುಭವವಾಗುತ್ತದೆ.

ತಜ್ಞರ ಪ್ರಕಾರ, ಟೀ ಮಾಡುವಾಗ ಎಲ್ಲ ಪದಾರ್ಥಗಳನ್ನು ಒಟ್ಟಿಗೆ ಹಾಕುವುದು ಸರಿಯಾದ ವಿಧಾನವಲ್ಲ. ಪ್ರತಿಯೊಂದು ಪದಾರ್ಥಕ್ಕೂ ಕುದಿಯಲು ತನ್ನದೇ ಆದ ಸಮಯವಿದೆ.

ಟೀ ಮಾಡುವಾಗ ಗಮನಿಸಬೇಕಾದ ಪ್ರಮುಖ ವಿಚಾರಗಳು :

  • ವಿಶೇಷವಾಗಿ ಶುಂಠಿ ಸೇರಿಸಿದ ತಕ್ಷಣ ಹಾಲು ಹಾಕಿದರೆ, ಕೆಲವೊಮ್ಮೆ ಹಾಲು ಮೊಸರು ಆಗುವ ಸಾಧ್ಯತೆ ಇರುತ್ತದೆ. ಹೀಗಾದರೆ ಟೀ ಸಂಪೂರ್ಣವಾಗಿ ವ್ಯರ್ಥವಾಗುತ್ತದೆ.
  • ಮುಂದಿನ ಬಾರಿ ಟೀ ಮಾಡುವಾಗ ಟೀಪುಡಿ, ಹಾಲು ಮತ್ತು ಸಕ್ಕರೆಯನ್ನು ಸರಿಯಾದ ಕ್ರಮದಲ್ಲಿ ಸೇರಿಸಿ.
  • ಈ ಚಿಕ್ಕ ಬದಲಾವಣೆ ನಿಮ್ಮ ಟೀ ಯ ರುಚಿ, ಬಣ್ಣ ಮತ್ತು ಪರಿಮಳವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.

ಇದನ್ನು ಓದಿ : ಆರೋಗ್ಯ, ಚರ್ಮ ಹಾಗೂ ಕೂದಲಿಗೆ ಟೊಮೆಟೊದ ಅಚ್ಚರಿ ಪ್ರಯೋಜನಗಳು.

ಒಮ್ಮೆ ಈ ವಿಧಾನ ಪ್ರಯತ್ನಿಸಿ ನೋಡಿ, ನಿಮ್ಮ ಮನೆಯ ಟೀಗೂ ಪಕ್ಕದ ಮನೆಯವರು ಮೆಚ್ಚುಗೆ ವ್ಯಕ್ತಪಡಿಸುವುದು ಖಚಿತ.


Disclaimer : ಈ ಲೇಖನದಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಅನುಭವ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿದೆ. ಟೀ ತಯಾರಿಸುವ ವಿಧಾನಗಳು ವ್ಯಕ್ತಿಗತ ರುಚಿಗೆ ಅನುಗುಣವಾಗಿ ಬದಲಾಗಬಹುದು.

ಮಹಿಳೆಯ ಮೇಲೆ ಸಂಚಾರಿ ಪೊಲೀಸ್‌ ಹಲ್ಲೆ ; ವಿಡಿಯೋ ವೈರಲ್‌ ಬಳಿಕ ಅಮಾನತು.

0

ಜನಸ್ಪಂದನ ನ್ಯೂಸ್‌, ಅಹಮದಾಬಾದ್‌ : ಅಹಮದಾಬಾದ್‌ನ ಪಾಲ್ಡಿ ಪ್ರದೇಶದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಂದಿಗೆ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತೀವ್ರ ವಾಗ್ವಾದ ನಡೆಸಿ ಹಲ್ಲೆ ಮಾಡಿದ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಘಟನೆ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡಿದ್ದು, ಸಂಬಂಧಪಟ್ಟ ಹೆಡ್ ಕಾನ್‌ಸ್ಟೆಬಲ್‌ರನ್ನು ಅಮಾನತು ಮಾಡಲಾಗಿದೆ.

ಪೊಲೀಸ್‌ ಹಲ್ಲೆ ವೈರಲ್‌ ವಿಡಿಯೋ :

ಕಾಂಗ್ರೆಸ್ ನಾಯಕ ಜಿಗ್ನೇಶ್ ಮೇವಾಣಿ ಅವರು ತಮ್ಮ X (Twitter) ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, Seeing the Ahmedabad police behave like this with women makes one’s blood boil! ಎಂದು ಬರೆದುಕೊಂಡಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಮಹಿಳೆ ಸಂಚಾರ ಸಿಗ್ನಲ್ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಅಧಿಕಾರಿ ಆಕೆಯನ್ನು ತಡೆದು ವಾಹನದ ದಾಖಲೆಗಳು ಹಾಗೂ ಗುರುತಿನ ಚೀಟಿಯನ್ನು ಕೇಳಿದ್ದಾರೆ.

ಈ ವೇಳೆ ಮಹಿಳೆ ಮತ್ತು ಪೊಲೀಸ್ ಅಧಿಕಾರಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ವಾಗ್ವಾದವು ಕ್ರಮೇಣ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಪೊಲೀಸ್ ಇಲಾಖೆ ಹೇಳುವಂತೆ, ಮಹಿಳೆ ಕೋಪಗೊಂಡು ಅಧಿಕಾರಿಯನ್ನು ನಿಂದಿಸಿ, ಅವರ ಗುರುತಿನ ಚೀಟಿಯನ್ನು ರಸ್ತೆಗೆ ಬೀಳುವಂತೆ ಮಾಡಿದರೆನ್ನಲಾಗಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡು, ಸಂಚಾರ ಪೊಲೀಸ್ ಅಧಿಕಾರಿ ಮಹಿಳೆಯ ಮೇಲೆ ಹಲ್ಲೆ ನಡೆಸಿದಂತೆ ವಿಡಿಯೋದಲ್ಲಿ ಕಾಣುತ್ತದೆ.

ದಾರಿಹೋಗುತ್ತಿದ್ದ ವ್ಯಕ್ತಿಯೊಬ್ಬರು ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ಸಾರ್ವಜನಿಕವಾಗಿ ಹರಿದಾಡುತ್ತಿದ್ದಂತೆ, ಅಹಮದಾಬಾದ್ ಸಂಚಾರ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಿದ್ದು, ಹೆಡ್ ಕಾನ್‌ಸ್ಟೆಬಲ್ ಜಯಂತಿಭಾಯಿ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಜೊತೆಗೆ, ಘಟನೆಯ ಸಂಪೂರ್ಣ ಹಿನ್ನೆಲೆ ತಿಳಿಯಲು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ವಲಯದ ಸಂಚಾರ ಡಿಸಿಪಿ ಭಾವನಾ ಪಟೇಲ್ ಅವರು, ಪ್ರಾಥಮಿಕ ತನಿಖೆಯಲ್ಲಿ ಮಹಿಳೆ ಈ ಹಿಂದೆ ಕೂಡ ಸಂಚಾರ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದ ದಾಖಲೆಗಳು ಇರುವುದಾಗಿ ತಿಳಿಸಿದ್ದಾರೆ.

ಇದನ್ನು ಓದಿ : ಪೊಲೀಸ್ ವಶದಲ್ಲಿದ್ದ ಆರೋಪಿ ಸಿನಿಮೀಯ ಶೈಲಿಯಲ್ಲಿ ಪರಾರಿ; ವಿಡಿಯೋ ವೈರಲ್.

ಅದೇ ಸಮಯದಲ್ಲಿ, ಪೊಲೀಸ್ ಅಧಿಕಾರಿಯ ನಡವಳಿಕೆಯ ಕುರಿತು ಕೂಡ ಆಂತರಿಕ ತನಿಖೆ ನಡೆಯುತ್ತಿದ್ದು, ತಪ್ಪು ಸಾಬೀತಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದಕ್ಕೂ ಮಧ್ಯೆ, ಸಂಚಾರಕ್ಕೆ ಅಡ್ಡಿಪಡಿಸಿದ ಹಾಗೂ ಸರ್ಕಾರಿ ಕರ್ತವ್ಯಕ್ಕೆ ತಡೆ ಉಂಟುಮಾಡಿದ ಆರೋಪದ ಮೇಲೆ ಮಹಿಳೆಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ.

ಕಾನೂನು ಎಲ್ಲರಿಗೂ ಸಮಾನವಾಗಿದ್ದು, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ : ಕಿರುಕುಳ ನೀಡಿದ ಪೊಲೀಸರಿಗೆ ಮಧ್ಯರಸ್ತೆಯಲ್ಲೇ ಎಳೆದು ಯುವತಿಯಿಂದ ಏಟು ; ವಿಡಿಯೋ.!


Disclaimer : ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಹಾಗೂ ಲಭ್ಯವಿರುವ ಅಧಿಕೃತ ಹೇಳಿಕೆಗಳ ಆಧಾರದಲ್ಲಿದೆ. ಘಟನೆಯ ಸಂಪೂರ್ಣ ಸತ್ಯಾಸತ್ಯತೆ ತನಿಖೆಯ ಬಳಿಕ ಮಾತ್ರ ತಿಳಿಯಲಿದೆ.

ಬೆಳಗಾವಿ : ಬಾಲಕಿ ಅಪಹರಣ–ಅತ್ಯಾಚಾರ ಪ್ರಕರಣ ; ಸ್ವಾಮಿಗೆ 35 ವರ್ಷ ಜೈಲು.

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಹಠಯೋಗಿ ಎಂದು ಹೇಳಿಕೊಂಡಿದ್ದ ಲೋಕೇಶ್ವರ ಮಹಾಸ್ವಾಮಿ (30) ಮೇಲೆ ಬಾಲಕಿ ಅಪಹರಣ ಮತ್ತು ಅತ್ಯಾಚಾರ ಆರೋಪ ಸಾಬೀತಾಗಿದೆ.

ಬೆಳಗಾವಿಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಶನಿವಾರ (ದಿ.20) ತೀರ್ಪು ಪ್ರಕಟಿಸಿದೆ. ಆರೋಪಿಗೆ ಒಟ್ಟು 35 ವರ್ಷಗಳ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗಿದೆ.

ಅಪಹರಣ ಮತ್ತು ಅತ್ಯಾಚಾರ ಹಿನ್ನಲೆ :

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಮೇಖಳಿ ಗ್ರಾಮದಲ್ಲಿ, ಕಲಬುರ್ಗಿ ಜಿಲ್ಲೆ ಚಿತ್ತಾಪುರ ಮೂಲದ ಲೋಕೇಶ್ವರ ಮಹಾಸ್ವಾಮಿ 2025 ರ ಮೇ 13ರಂದು 17 ವರ್ಷದ ಅಪ್ರಾಪ್ತ ಬಾಲಕಿಯನ್ನು ತಮ್ಮ ಕಾರಿನಲ್ಲಿ “ನಿಮ್ಮ ಮನೆಗೆ ಬಿಡುತ್ತೇನೆ” ಎಂದು ತಪ್ಪು ಆಶ್ವಾಸನೆ ನೀಡಿ, ಕರೆದುಕೊಂಡು ಹೋಗಿ ಅಪಹರಣ ಮಾಡಿದ್ದ.

ನಂತರ, ಮಹಾಲಿಂಗಪುರ ಮಾರ್ಗದಿಂದ ಬಾಗಲಕೋಟೆ ಮತ್ತು ಆಂಧ್ರಪ್ರದೇಶದ ಲಾಡ್ಜ್‌ಗಳಿಗೆ ಕರೆದೊಯ್ದು, ಬಾಲಕಿಯ ಮೇಲೆ ಒತ್ತಾಯ ಪೂರ್ವಕವಾಗಿ ಲೈಂಗಿಕ ಅತ್ಯಾಚಾರ ನಡೆಸಿದ್ದನೆಂದು ತನಿಖೆಯಲ್ಲಿ ಖಚಿತವಾಗಿದೆ.

ಈ ವೇಳೆ, ಬಾಲಕಿಗೆ ಜೀವ ಬೆದರಿಕೆ ಹಾಕಿ, “ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವಂತ ಬಿಡುವುದಿಲ್ಲ” ಎಂದು ಹೇಳಿದ್ದರು. ಈ ಪ್ರಕರಣವು ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಪೊಲೀಸರು ಮತ್ತು ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯದ ತನಿಖಾಧಿಕಾರಿಗಳು ಸಮಗ್ರ ತನಿಖೆ ನಡೆಸಿದರು.

ಇದನ್ನು ಓದಿ : Home ಬಾಡಿಗೆದಾರರಿಗೆ ʼಮನೆ ಸ್ವಾಧೀನʼ ಹೊಂದುವ ಹಕ್ಕಿಲ್ಲ : ಸುಪ್ರೀಂ ಕೋರ್ಟ್ ತೀರ್ಪು.!

ಶಿಕ್ಷೆಯ ವಿವರ :

ಇದೀಗ ನ್ಯಾಯಾಲಯವು ಒಟ್ಟು 8 ಸಾಕ್ಷಿಗಳ ವಿಚಾರಣೆ, 78 ದಾಖಲೆ ಮತ್ತು 9 ಮುದ್ದೆ ಮಾಲುಗಳ ಆಧಾರದ ಮೇಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿತು. ಶಿಕ್ಷೆಯ ವಿವರಗಳು ಈ ಕೆಳಗಿನಂತಿವೆ,

  • 35 ವರ್ಷಗಳ ಕಠಿಣ ಶಿಕ್ಷೆ.
  • 1 ಲಕ್ಷ ರೂ. ದಂಡ (ತಪ್ಪಿದರೆ 2 ವರ್ಷ ಕಾರಾಗೃಹ).
  • ಬಿಎನ್‌ಎಸ್ ಕಲಂ 137 (2) ಪ್ರಕಾರ 7 ವರ್ಷ, ರೂ. 25,000 ದಂಡ.
  • ಕಲಂ 351 ಪ್ರಕಾರ 2 ವರ್ಷ, ರೂ. 3,000 ದಂಡ.
  • ಕಲಂ 64 ಪ್ರಕಾರ 10 ವರ್ಷ, ರೂ. 50,000 ದಂಡ. ನ್ಯಾಯಾಲಯವು ನೋಂದ ಬಾಲಕಿಗೆ ಜಿಲ್ಲಾಧಿಕಾರದ ಮೂಲಕ 4 ಲಕ್ಷ ರೂ. ಪರಿಹಾರ ಹಣ ನೀಡಲು ಆದೇಶಿಸಿದೆ. ಪರಿಹಾರ ಹಣವನ್ನು ಐದು ವರ್ಷಗಳ ಕಾಲ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇರಿಸಲು ಸೂಚಿಸಲಾಗಿದೆ.

ಇದನ್ನು ಓದಿ : Attendance ಕೊರತೆಯಿಂದ ಪರೀಕ್ಷೆಗೆ ತಡೆ ಬೇಡ ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು.!

ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಸರಕಾರದ ಪರವಾಗಿ ವಾದ ಮಂಡಿಸಿದ್ದರು. ಪ್ರಕರಣವು ಮಕ್ಕಳ ಸುರಕ್ಷತೆ, ಕಾನೂನು ಅನುಷ್ಠಾನ ಮತ್ತು ನ್ಯಾಯನಿಷ್ಠೆಯ ಕುರಿತು ಪ್ರಜಾ ಜಾಗೃತಿ ಮೂಡಿಸುವಂತಾಗಿದೆ.