ಜನಸ್ಪಂದನ ನ್ಯೂಸ್, ಡೆಸ್ಕ್ : ಯುವತಿಯ ಮನೆಯ ಮುಂದೆಯೇ ಯುವಕನೋರ್ವ ಬೆಂಕಿ (Fire) ಹಚ್ಚಿಕೊಂಡ ಘಟನೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫಾನಾ ಠಾಣೆ ವ್ಯಾಪ್ತಿಯ ಅಮ್ದರಿಯಾ ಎಂಬಲ್ಲಿ ಯುವತಿಯ ಮನೆಯ ಮುಂದೆಯೇ ಯುವಕನೋರ್ವ ಬೆಂಕಿ (Fire) ಹಚ್ಚಿಕೊಂಡ ಘಟನೆ ನಡೆದಿದೆ.
ಇದನ್ನು ಓದಿ : ಬೇರೊಬ್ಬಳೊಂದಿಗೆ ಪಾರ್ಟಿಗೆ ಹೋಗಿ ಸಿಕ್ಕಿಬಿದ್ದ ಲವರ್ ; ಪ್ರೇಯಸಿ ಮಾಡಿದ್ದೇನು ಗೊತ್ತಾ? Video ನೋಡಿ
ಹೀಗೆ ಯುವತಿಯ ಮನೆಯ ಮುಂದೆಯೇ ಯುವಕನೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಭಯಾನಕ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫಾನಾ ಠಾಣೆ ವ್ಯಾಪ್ತಿಯ ಅಮ್ದರಿಯಾ ಎಂಬಲ್ಲಿ ಯುವತಿ ಮದುವೆಗೆ ಒಪ್ಪದಿದ್ದಕ್ಕೆ ಈ ಯುವಕ ಆಕೆಯ (ಯುವತಿಯ) ಮನೆಯ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!
ಯುವತಿಯ ಮನೆಗೆ ಕೆಲಸ ಮುಗಿಸಿ ನೇರವಾಗಿ ಬಂದ ಯುವಕ, ಪೆಟ್ರೋಲ್ ಸುರಿಕೊಂಡು ಮದುವೆಯಾಗಲು ಒಪ್ಪುವಂತೆ ಒತ್ತಡ ಹೇರಿದ್ದಾನೆ. ಆಗ ಯುವತಿಯು ಯುವಕನ ಬೇಡಿಕೆಯನ್ನು ನಿರಾಕರಿಸಿದ್ದಾರೆ.
ಮದುವೆಗೆ ಯುವತಿ ನಿರಾಕರಿಸಿದ ಹಿನ್ನಲೆಯಲ್ಲಿ ಕೋಪಗೊಂಡ ಯುವಕ ಮನೆಯ ಹೊರಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Mangaluru : ಲಂಚಕ್ಕೆ ಬೇಡಿಕೆ : ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ.!
ಇನ್ನು ಸಿಟ್ಟಿನ ಭರದಲ್ಲಿ ಬೆಂಕಿ ಹಚ್ಚಿಕೊಂಡ ಯುವಕನ ರಕ್ಷಣೆಗೆ ಸ್ಥಳದಲ್ಲಿದ್ದವರು ಪ್ರಯತ್ನಿಸಿದ್ದಾರೆ. ಆದರೆ ಅದಾಗಲೇ ಬೆಂಕಿ ಮೈಯಲ್ಲಾ ಹರಡಿದ ಪರಿಣಾಮ ಸುಮ್ಮನಾದೆವೂ ಎಂದು ಹೇಳಿದ್ದಾರೆ.
ಸದ್ಯ ತೀವ್ರವಾಗಿ ಸುಟ್ಟಿದ್ದ ಯುವಕನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಗಂಭೀರ ಸ್ವರೂಪದ ಗಾಯಗಾಳಾದ ಪರಿಣಾಮ ಯುವಕನನ್ನು ವಾರಣಾಸಿಯ ಬಿಎಚ್ಯು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನು ಓದಿ : Sexual harassment : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ; ಡ್ಯಾನ್ಸ್ ಮಾಸ್ಟರ್ ಅರೆಸ್ಟ್.!
ಯುವಕ ಕೂಗಾಡುತ್ತ, ಬೆಂಕಿ ಹಚ್ಚಿಕೊಳ್ಳುವ ಸಂಪೂರ್ಣ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಬಲ್ಲಿಯಾ ಪೊಲೀಸರು, ತನಿಖೆ ನಡೆಯುತ್ತಿದೆ, ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ ಎಂದಿದ್ದಾರೆ.
ಬೆಂಕಿ (Fire) ಹಚ್ಚಿಕೊಂಡ ಯುವಕನ ವೈರಲ್ ವಿಡಿಯೋ :
यूपी के बलिया में एक युवक ने प्रेमिका के घर के सामने पहले खुद पर पेट्रोल डाला फिर आग लगा ली। उसके आग लगाते ही हड़कंप मच गया। लपटों में घिरा युवक खुद को बचाने के लिए दौड़ता रहा। किसी तरह आग बुझाई गई। युवक कई दिनों से लड़की के परिजनों पर शादी के लिए दबाव बना रहा था। pic.twitter.com/fqDygdwgWL
— yogesh hindustani (@yogeshhindustan) May 27, 2025
ಹಿಂದಿನ ಸುದ್ದಿ :Debt crisis : ಸಾಲಬಾಧೆ ಒಂದೇ ಕುಟುಂಬದ 7 ಜನರು ಆತ್ಮಹತ್ಯೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಒಂದೇ ಕುಟುಂಬದ ಏಳು ಮಂದಿ ಸಾಲಬಾಧೆ (Debt crisis) ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರ್ಯಾಣದ ಪಂಚಕುಲದಲ್ಲಿ ನಡೆದಿದೆ.
ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡವರನ್ನು 42 ವರ್ಷದ ಪ್ರವೀಣ್ ಮಿತ್ತಲ್, ಅವರ ಪೋಷಕರು, ಪತ್ನಿ ಮತ್ತು ಮೂವರು ಮಕ್ಕಳು ಇವರಲ್ಲಿ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಎಂದು ಗುರುತಿಸಲಾಗಿದೆ.
ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!
ಬಹಳ ಸಮಯದಿಂದ ಒಂದು ಕಾರು ಜನವಸತಿ ಪ್ರದೇಶದಲ್ಲಿಯ ರಸ್ತೆಯ ಪಕ್ಕದಲ್ಲಿ ನಿಂತುಕೊಂಡಿತ್ತು, ಕಾರಿನಿಂದ ಕಿರುಚಾಟ ಮತ್ತು ಕೂಗು ಕೇಳಿಸುತ್ತಿತ್ತು. ಇದರಿಂದ ಅನುಮಾನಗೊಂಡ ಸ್ಥಳೀಯ ಜನರು ಕಾರಿನ ಬಳಿ ಬಂದು ತಕ್ಷಣ ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ.
ಆದರೆ ಕಾರಿನ ಬಾಗಿಲು ಒಳಗಿನಿಂದ ಲಾಕ್ ಆದ ಪರಿಣಾಮ ಸ್ಥಳೀಯರಿಗೆ ಬಾಗಿಲನ್ನು ತೆರೆಯಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?
ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿ, ಬಾಗಿಲನ್ನು ಒಡೆದು ಒಳ ನೋಡಿದಾಗ ಕಾರಿನಲ್ಲಿ ಎಲ್ಲರೂ ಆಗಲೇ ಸಾವಿಗೀಡಾಗಿದ್ದರು ಎಂದು ತಿಳಿದು ಬಂದಿದೆ.
ಸೋಮವಾರ ಬಾಗೇಶ್ವರ ಧಾಮದಲ್ಲಿ ಆಯೋಜಿಸಲಾದ ಹನುಮಾನ್ ಕಥಾ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದೊಂದಿಗೆ ಡೆಹ್ರಾಡೂನ್ ನಿವಾಸಿ ಪ್ರವೀಣ್ ಮಿತ್ತಲ್ ಪಂಚಕುಲಕ್ಕೆ ಬಂದರು. ಪ್ರವೀಣ್ ಮಿತ್ತಲ್ ಕುಟುಂಬ ಸದಸ್ಯರು ಸೋಮವಾರ ಮಧ್ಯರಾತ್ರಿ ಕಾರ್ಯಕ್ರಮ ಮುಗಿದ ನಂತರ ತಮ್ಮ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನು ಓದಿ : DC ಕಚೇರಿಯಲ್ಲಿ ಶವವಾಗಿ ಪತ್ತೆಯಾದ ಕರ್ತವ್ಯನಿರತ ಮಹಿಳಾ ಕಾನ್ಸ್ಟೇಬಲ್.!
ಏನಿದು ಸಾಲಬಾಧೆ/Debt crisis :
ಪ್ರವೀಣ್ ಮಿತ್ತಲ್ ಕುಟುಂಬ ಪಂಚಕುಲದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಈ ಕುಟುಂಬ ವ್ಯಾಪಾರ ನಷ್ಟದಿಂದ ಸಾಲದ ಸುಳಿಯಲ್ಲಿ ಸಿಲುಕಿತ್ತು ಎಂದು ಹೇಳಲಾಗುತ್ತಿದೆ. ಹೀಗೆ ಸಾಲಬಾಧೆ ತಾಳಲಾರದೆ ಕುಟುಂಬ ಸದಸ್ಯರೆಲ್ಲರೂ ತಮ್ಮ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ಕುಟುಂಬದ ಏಳು ಸದಸ್ಯರು ಸಾಲಬಾಧೆಗೆ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಎಲ್ಲ ಸದಸ್ಯರನ್ನು ಗುರುತಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಂಚಕುಲದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಇದನ್ನು ಓದಿ : Rain : ಹೊಳೆಯಲ್ಲಿ ಹರಿವ ತೆಂಗಿನಕಾಯಿ ತರುವ ತುಂಟ ನಾಯಿಯ ವಿಡಿಯೋ.!
ಈ ಮಧ್ಯ ಒಂದೇ ಕುಟುಂಬದ ಏಳು ಸದಸ್ಯರು ಸಾಲಬಾಧೆಗೆ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ “ನಮ್ಮ ವಿಧಿವಿಜ್ಞಾನ ತಂಡವು ಸ್ಥಳಕ್ಕೆ ತಲುಪಿದೆ. ನಾವು ಕಾರನ್ನು ವಿಶ್ಲೇಷಿಸುತ್ತಿದ್ದೇವೆ… ಅದರ ಹಿಂದಿನ ಕಾರಣಗಳನ್ನು ತಿಳಿಯಲು ಕೂಲಂಕಷವಾಗಿ ಸ್ಕ್ಯಾನ್ ಮಾಡುತ್ತಿದ್ದೇವೆ. ಹೊರಹೊಮ್ಮಿರುವ ಕೆಲವು ಸಂಗತಿಗಳು ಪ್ರಾಥಮಿಕವಾಗಿ ಇದು ಆತ್ಮಹತ್ಯೆಯ ವಿಷಯ ಎಂದು ಸೂಚಿಸುತ್ತವೆ” ಎಂದು ಪಂಚಕುಲ ಡಿಎಸ್ಪಿ ಹಿಮಾದ್ರಿ ಕೌಶಿಕ್ ಹೇಳುತ್ತಾರೆ.
ವಿಡಿಯೋ :
VIDEO | Panchkula, Haryana: Seven members of a family from Dehradun found dead inside a car. Police investigating the case.
DSP Panchkula Himadri Kaushik says, "Our forensic team has reached the spot. We are analysing… scanning the car thoroughly to know the reasons behind the… pic.twitter.com/IetVgT6ojz
— Press Trust of India (@PTI_News) May 27, 2025