ಮಂಗಳವಾರ, ನವೆಂಬರ್ 18, 2025

Janaspandhan News

HomeGeneral Newsನೀವೂ ಮೊಬೈಲ್‌ನಲ್ಲಿ ದೇವರ Wallpaper ಇಟ್ಟುಕೊಂಡಿದ್ದೀರಾ? ತಕ್ಷಣವೇ ತೆಗೆಯಿರಿ ; ಏಕೆ ಗೊತ್ತೆ?
spot_img
spot_img
spot_img

ನೀವೂ ಮೊಬೈಲ್‌ನಲ್ಲಿ ದೇವರ Wallpaper ಇಟ್ಟುಕೊಂಡಿದ್ದೀರಾ? ತಕ್ಷಣವೇ ತೆಗೆಯಿರಿ ; ಏಕೆ ಗೊತ್ತೆ?

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿವೆ. ಯಾವುದೇ ವಯೋಮಾನದ, ವಿದ್ಯಾರ್ಥಿಗಳು, ಉದ್ಯೋಗಿಗಳು ಅಥವಾ ಗೃಹಿಣಿಯರಾಗಿರಲಿ ಎಲ್ಲರೂ ತಮ್ಮ ಮೊಬೈಲ್‌ (Mobile) ಫೋನ್‌ನಲ್ಲಿ ತಮ್ಮ ಇಷ್ಟದ ರೀತಿಯಲ್ಲಿ ಕಸ್ಟ್‌ಮೈಸ್‌ ಮಾಡಿಕೊಳ್ಳಲು ಇಷ್ಟಪಡುತ್ತಾರೆ.

ಅದರಲ್ಲೂ ಫೋನ್‌ನ ವಾಲ್‌ಪೇಪರ್‌ (Wallpaper) ಬದಲಾವಣೆ ಮಾಡುವುದು ಸಾಮಾನ್ಯ. ಅನೇಕರು ತಮ್ಮ ಧಾರ್ಮಿಕ ನಂಬಿಕೆ ಅಥವಾ ಭಕ್ತಿಯಿಂದ ದೇವರ ಅಥವಾ ದೇವತೆಗಳ ಚಿತ್ರಗಳನ್ನು ಮೊಬೈಲ್‌ ಪರದೆ (Wallpaper) ಯ ಮೇಲೆ ಹಾಕಿಕೊಳ್ಳುತ್ತಾರೆ.

ಆದರೆ ಇಲ್ಲಿ ಪ್ರಶ್ನೆ ಏನೆಂದರೆ? ಮೊಬೈಲ್‌ನಲ್ಲಿ ದೇವರ ಫೋಟೋ ಇಡುವುದು ಶುಭವೇ? ಅಥವಾ ಅಶುಭವೇ? ಎಂಬುದು. ಇದನ್ನು ಧಾರ್ಮಿಕ ಮತ್ತು ವಾಸ್ತು ದೃಷ್ಟಿಯಿಂದ ವಿವರವಾಗಿ ಇದೀಗ ತಿಳಿದುಕೊಳ್ಳೋಣ ಬನ್ನಿ.

“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಮೊಬೈಲ್‌ ವಾಲ್‌ಪೇಪರ್‌ (Wallpaper) ನಮ್ಮ ಮನಸ್ಸಿನ ಪ್ರತಿಬಿಂಬ :

ನಾವು ಫೋನ್‌ನ ಪರದೆಯ ಮೇಲೆ ಇಡುವ ಚಿತ್ರಗಳು ನಮ್ಮ ವ್ಯಕ್ತಿತ್ವ ಮತ್ತು ಮನೋಭಾವವನ್ನು ತೋರಿಸುತ್ತವೆ ಎಂದು ಪರಿಣಿತರು ಹೇಳುತ್ತಾರೆ. ಅನೇಕರು ದೇವಾಲಯಗಳು ಮತ್ತು ಮಸೀದಿಗಳಂತಹ ಧಾರ್ಮಿಕ ಸ್ಥಳಗಳ ಚಿತ್ರಗಳನ್ನು ಸಹ ಇಡುತ್ತಾರೆ.

ಹಾಗೆಯೇ ದೇವರ ಅಥವಾ ದೇವತೆಗಳ ಚಿತ್ರಗಳನ್ನು ವಾಲ್‌ಪೇಪರ್‌ (Wallpaper) ಆಗಿ ಇಟ್ಟು ಅವರ ಭಕ್ತಿಯನ್ನು ವ್ಯಕ್ತಪಡಿಸಲು ಅದನ್ನು ಬಳಸುತ್ತಾರೆ. ಆದರೆ, ವಾಸ್ತು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಅದು ಎಲ್ಲ ಸಂದರ್ಭಗಳಲ್ಲೂ ಶುಭಕರವಲ್ಲ.

ಮದುವೆಯಾಗು ಎಂದ Girlfriend ; ಗುಂಡಿ ತೋಡಿ ಹೂತು ಹಾಕಿದ ಪ್ರಿಯಕರ.!
ದೇವರ ಚಿತ್ರವನ್ನು ಫೋನ್‌ನಲ್ಲಿ ಇಡುವುದು ಅಶುಭವೇ?

ಪಾರಂಪರಿಕ ನಂಬಿಕೆಯ ಪ್ರಕಾರ, ದೇವರ ಅಥವಾ ದೇವತೆಗಳ ಫೋಟೋವನ್ನು ಮೊಬೈಲ್‌ನಲ್ಲಿ ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದರ ಪ್ರಮುಖ ಕಾರಣ ಎಂದರೆ,

  • ನಾವು ಫೋನ್‌ ಅನ್ನು ಎಲ್ಲೆಡೆ ಬಳಸುತ್ತೇವೆ. ಕೆಲವೊಮ್ಮೆ ಬಾತ್ರೂಮ್‌, ಬೆಡ್‌ರೂಮ್ ಅಥವಾ ಅಶುದ್ಧ ಸ್ಥಳಗಳಲ್ಲಿ ಕೂಡ.
  • ದೇವರ ಚಿತ್ರವನ್ನು ಇಂತಹ ಸ್ಥಳಗಳಲ್ಲಿ ತೋರಿಸುವುದು ಅಗೌರವಕರವಾದ ಕೃತ್ಯ ಎನ್ನಲಾಗಿದೆ.
  • ಇದು ನಮ್ಮ ಭಕ್ತಿಯನ್ನು ತೋರಿಸುವ ಬದಲಿಗೆ ಅಪರೋಕ್ಷವಾಗಿ ಪಾಪದ ಕೆಲಸ ಎಂದು ಧಾರ್ಮಿಕರು ನಂಬುತ್ತಾರೆ.
ರಾಜ್ಯದಲ್ಲಿ “Aarogya Kavacha” ಸೇವೆ ಬಲಪಡಿಸಲು 3,691 ಹೊಸ ಹುದ್ದೆಗಳ ಸೃಷ್ಟಿ.!
ಪ್ರತಿಕೂಲ ಪರಿಣಾಮಗಳ ಸಾಧ್ಯತೆ :

ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವರ ಚಿತ್ರವನ್ನು ಮೊಬೈಲ್‌ನಲ್ಲಿ ಇಡುವುದರಿಂದ ಕೆಲವು ನಕಾರಾತ್ಮಕ ಶಕ್ತಿಗಳು ಆಕರ್ಷಿತರಾಗಬಹುದು ಎಂದು ಹೇಳಲಾಗುತ್ತದೆ.

ಅಶುದ್ಧ ಕೈಗಳಿಂದ ಅಥವಾ ಅಶುದ್ಧ ಸ್ಥಳಗಳಲ್ಲಿ ಫೋನ್ ಬಳಸುವುದರಿಂದ ದೇವರ ಚಿತ್ರಕ್ಕೆ ಅಪಮಾನ ಆಗುತ್ತದೆ ಎನ್ನುವುದು ನಂಬಿಕೆ. ಇದರ ಪರಿಣಾಮವಾಗಿ ಕುಟುಂಬದಲ್ಲಿ ಕಲಹ, ಮನಸ್ಸಿನಲ್ಲಿ ಅಶಾಂತಿ ಅಥವಾ ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಎಂಬ ಧಾರ್ಮಿಕ ಅಭಿಪ್ರಾಯವಿದೆ.

ಯಾವ ರೀತಿಯ ವಾಲ್‌ಪೇಪರ್‌ (Wallpaper) ಗಳನ್ನು ಇಡಬಾರದು?
  • ದೇವರ ಅಥವಾ ದೇವತೆಗಳ ಚಿತ್ರಗಳನ್ನು,
  • ಧಾರ್ಮಿಕ ಸ್ಥಳಗಳ ಫೋಟೋಗಳು (ಮಂದಿರ, ಮಸೀದಿ, ಚರ್ಚ್‌ ಇತ್ಯಾದಿ) ಮತ್ತು
  • ಅತ್ಯಂತ ಗಾಢ ಬಣ್ಣದ ಅಥವಾ ಕತ್ತಲಾದ ಹಿನ್ನೆಲೆಯ ವಾಲ್‌ಪೇಪರ್‌ (Wallpaper).
Dog : ಮಾಲೀಕನ ಸಾವು ಸಹಿಸಲಾರದೆ ನಾಯಿ ಕೂಡ ಬಿಟ್ಟಿತು ಪ್ರಾಣ..!

ಇವುಗಳ ಬದಲು ಪ್ರಕೃತಿ ದೃಶ್ಯಗಳು, ಪಾಸಿಟಿವ್‌ ಮಂತ್ರಗಳ ಉಲ್ಲೇಖಗಳು ಅಥವಾ ಹಲಸುಬಣ್ಣದ ಹಿನ್ನೆಲೆಗಳು ಮೊಬೈಲ್‌ ಪರದೆಗೆ ಉತ್ತಮ ಪರಿಣಾಮ ನೀಡುತ್ತವೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಸಂಪಾದಕೀಯ :

ದೇವರ ಮೇಲಿನ ಭಕ್ತಿ ಮನಸ್ಸಿನೊಳಗಿರಬೇಕು, ಮೊಬೈಲ್‌ ಪರದೆಯಲ್ಲಲ್ಲ (Wallpaper) ಎಂಬ ನಂಬಿಕೆ ಇದೆ. ಮೊಬೈಲ್‌ನಲ್ಲಿ ದೇವರ ಚಿತ್ರವನ್ನು ಇಡುವ ಬದಲು, ಪ್ರತಿದಿನ ಬೆಳಿಗ್ಗೆ ದೇವರ ಸ್ಮರಣೆ ಮಾಡುವುದೇ ಹೆಚ್ಚು ಶುಭಕರ. ದೇವರ ಚಿತ್ರಗಳನ್ನು ಮನೆಯ ಪೂಜಾಮಂಟಪದಲ್ಲಿ ಅಥವಾ ಧ್ಯಾನಸ್ಥಳದಲ್ಲಿ ಇಡುವುದು ಉತ್ತಮ ಫಲಿತಾಂಶ ನೀಡುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ.

“ಸ್ನೇಹಿತನ ಜೊತೆ ಇದ್ದ MBA ವಿದ್ಯಾರ್ಥಿನಿಯನ್ನು ಹೊತ್ತೊಯ್ಯ್ದು ದೌರ್ಜನ್ಯ ; ಪೊಲೀಸರಿಂದ ಶೋಧ.!”

ಅಂತಿಮವಾಗಿ ಹೇಳುವುದೇನೆಂದರೆ, ದೇವರ ಚಿತ್ರವನ್ನು ಮೊಬೈಲ್‌ ವಾಲ್‌ಪೇಪರ್‌ (Wallpaper) ಆಗಿ ಬಳಸುವುದು ಧಾರ್ಮಿಕ ದೃಷ್ಟಿಯಿಂದ ಅಶುಭವೇ ಹೊರತು ಶುಭವಲ್ಲ. ಅದಕ್ಕಾಗಿಯೇ ಭಕ್ತಿಯನ್ನೂ ಗೌರವವನ್ನೂ ಸರಿಯಾದ ಸ್ಥಳದಲ್ಲಿ ಪ್ರದರ್ಶಿಸುವುದು ಅತ್ಯಂತ ಅಗತ್ಯ.



ರಾಜ್ಯದಲ್ಲಿ “Aarogya Kavacha” ಸೇವೆ ಬಲಪಡಿಸಲು 3,691 ಹೊಸ ಹುದ್ದೆಗಳ ಸೃಷ್ಟಿ.!

Aarogya Kavacha

ಜನಸ್ಪಂದನ ನ್ಯೂಸ್‌, ಬೆಂಗಳೂರು : ರಾಜ್ಯದಲ್ಲಿ 108 ಆಂಬುಲೆನ್ಸ್ ಹಾಗೂ 104 ಆರೋಗ್ಯ ಸಹಾಯವಾಣಿ (Aarogya Kavacha) ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಸರ್ಕಾರವು 2025–26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ–144ರ ಘೋಷಣೆಯನ್ವಯ ಒಟ್ಟು 3,691 ಹೊಸ ಹುದ್ದೆಗಳನ್ನು ಸೃಜಿಸುವ ಆದೇಶ ಹೊರಡಿಸಿದೆ.

ಆಯವ್ಯಯ ಭಾಷಣದ ಅನ್ವಯ, ಆರೋಗ್ಯ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಆರೋಗ್ಯ ಕವಚ (Aarogya Kavacha) ಸೇವೆ’ಯನ್ನು ಬಲಪಡಿಸಲು ಹಾಗೂ ತುರ್ತು ವೈದ್ಯಕೀಯ ನೆರವು ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.

“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“

ಮೇಲೆ ಓದಲಾದ ಕ್ರಮಾಂಕ (1) ರ ಆಯವ್ಯಯ ಭಾಷಣದಲ್ಲಿ, ರಾಜ್ಯದ 108 ಆಂಬುಲೆನ್ಸ್ ಸೇವೆಯನ್ನು ಸುಧಾರಿಸಲು ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ನೇರವಾಗಿ ಆರೋಗ್ಯ ಇಲಾಖೆಯ ಅಧೀನಕ್ಕೆ ತರಲಾಗುವುದು ಎಂದು ಘೋಷಣೆ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ, 108 ಆಂಬುಲೆನ್ಸ್ ಮತ್ತು 104 ಆರೋಗ್ಯ ಸಹಾಯವಾಣಿ ಕಮಾಂಡ್ ಹಾಗೂ ಕಂಟ್ರೋಲ್ ಸೆಂಟರ್‌ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೊಸ ಹುದ್ದೆಗಳನ್ನು ಸೃಜಿಸಲಾಗಿದೆ.

Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”

ಮೇಲೆ ಓದಲಾದ ಕ್ರಮಾಂಕ (2) ರ ಏಕ-ಕಡತದ ಪ್ರಕಾರ, ಈ ಯೋಜನೆಯ ಅನುಷ್ಠಾನಕ್ಕಾಗಿ ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ, ಸರ್ಕಾರವು ಕ್ರಮಾಂಕ (3) ರ ಆದೇಶದ ಮೂಲಕ 108 ಮತ್ತು 104 ಸೇವೆಗಳನ್ನು ನಿರ್ವಹಿಸಲು ಒಟ್ಟು 3,691 ಹುದ್ದೆಗಳನ್ನು ಸೃಜಿಸುವಂತೆ ಅನುಮೋದನೆ ನೀಡಿದೆ.

ಇದಲ್ಲದೆ, ಈ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು 4 ಆಡಳಿತಾತ್ಮಕ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಜಿಸಲು ತೀರ್ಮಾನಿಸಲಾಗಿದೆ. ಈ ಹುದ್ದೆಗಳನ್ನು ಸಂಬಂಧಪಟ್ಟ ಇಲಾಖೆಗಳಾದ ಸಾಮಾನ್ಯ ಆಡಳಿತ, ಆರ್ಥಿಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಶಿಫಾರಸ್ಸಿನ ಮೇರೆಗೆ ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮದುವೆಯಾಗು ಎಂದ Girlfriend ; ಗುಂಡಿ ತೋಡಿ ಹೂತು ಹಾಕಿದ ಪ್ರಿಯಕರ.!

ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ ಆಇ 438 ವೆಚ್ಚ–5/2025, ದಿನಾಂಕ 11.09.2025 ರ ಅನುಮೋದನೆಯ ಮೇರೆಗೆ ಹೊರಡಿಸಲಾಗಿದೆ.

ರಾಜ್ಯ ಸರ್ಕಾರದ ಈ ನಿರ್ಧಾರದಿಂದ ತುರ್ತು ವೈದ್ಯಕೀಯ ಸೇವೆಗಳು, 108 ಆಂಬುಲೆನ್ಸ್ ಹಾಗೂ 104 ಸಹಾಯವಾಣಿ (Aarogya Kavacha) ವ್ಯವಸ್ಥೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments