ಜನಸ್ಪಂದನ ನ್ಯೂಸ್, ಡೆಸ್ಕ್ : ತಮಿಳುನಾಡಿನ ನಾಗಪಟ್ಟಣ ಜಿಲ್ಲೆಯ ವಡಕ್ಕುಪೊಯ್ಗೈ ನಲ್ಲೂರು ಗ್ರಾಮದಲ್ಲಿ ನಡೆದ ದೇವಸ್ಥಾನದ ಜಾತ್ರೆ ವೇಳೆ ಅಗ್ನಿ ಹೋಮ (ತಿಮಿತಿ) ವಿಧಿಯ ಸಂದರ್ಭದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಸ್ಥಳೀಯ ಭಕ್ತರನ್ನು ಬೆಚ್ಚಿಬೀಳುವಂತೆ ಮಾಡಿದೆ.
ವಿವರಗಳ ಪ್ರಕಾರ, ಸೆಪ್ಟೆಂಬರ್ 25, ಗುರುವಾರ ನಡೆದ ಬೆಂಕಿಯ ಕೆಂಡದ ಮೇಲೆ ನಡೆಯಲು ಇಷ್ಟವಿಲ್ಲದ ಮಹಿಳೆಯನ್ನು ಓರ್ವ ವೃದ್ದ ವ್ಯಕ್ತಿ (Elderly) ಹೊತ್ತೊಯ್ದಿದ್ದಾರೆ. ಆದರೆ ಎರಡು ಹೆಜ್ಜೆ ಇಟ್ಟ ನಂತರ ಆಕೆಯನ್ನು ಎತ್ತಿಕೊಂಡು ಸಾಗಿಸಲು ಪ್ರಯತ್ನಿಸಿದ ವ್ಯಕ್ತಿ (Elderly) ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ, ಇಬ್ಬರೂ ನೇರವಾಗಿ ಬೆಂಕಿಯ ಕೆಂಡದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!
ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಳದಿ ಬಟ್ಟೆ ಧರಿಸಿದ್ದ ಮಹಿಳೆಯನ್ನು ಎತ್ತಿಕೊಂಡು ಬಂದ ವೃದ್ಧನೊಬ್ಬ (Elderly) ಅಕಸ್ಮಾತಾಗಿ ಎಡವಿದ ಪರಿಣಾಮವಾಗಿ ಇಬ್ಬರೂ ಬೆಂಕಿಗೆ ಬಿದ್ದಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಗಾಯಗೊಂಡ ಮಹಿಳೆ ಮತ್ತು ವೃದ್ಧ (Elderly) ಸೇರಿ ಇಬ್ಬರಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದೆ.
ತಿಮಿತಿ ವಿಧಿಯ ಮಹತ್ವ :
ತಮಿಳುನಾಡಿನ ಅನೇಕ ದೇವಸ್ಥಾನಗಳಲ್ಲಿ ನಡೆಯುವ ತಿಮಿತಿ (ಅಗ್ನಿಕುಂಡದಲ್ಲಿ ನಡೆಯುವ ವಿಧಿ) ದ್ರೌಪದಿ ಅಮ್ಮನಿಗೆ ಸಮರ್ಪಿತವಾಗಿರುವ ಪ್ರಮುಖ ಧಾರ್ಮಿಕ ಆಚರಣೆ. ಸಾಮಾನ್ಯವಾಗಿ ಐಪಸಿ (Aipasi) ಮಾಸದಲ್ಲಿ (ಅಕ್ಟೋಬರ್-ನವೆಂಬರ್) ಈ ವಿಧಿ ನಡೆಯುತ್ತದೆ. ಭಕ್ತರು ತಮ್ಮ ವ್ರತಗಳನ್ನು ಪೂರೈಸಲು, ಆಶೀರ್ವಾದ ಪಡೆಯಲು ಅಥವಾ ಭಕ್ತಿಯನ್ನು ತೋರಿಸಲು ಬೆಂಕಿಯ ಮೇಲೆ ನಡೆಯುತ್ತಾರೆ.
Accident : KSRTC ಬಸ್ ಪಲ್ಟಿ ; 15 ಪ್ರಯಾಣಿಕರಿಗೆ ಗಾಯ ; ಪಂಢರಾಪುರ ಪಾದಯಾತ್ರೆ ವೇಳೆ ಕಾರು ಹರಿದು 6 ಭಕ್ತರಿಗೆ ಗಾಯ.!
ಈ ಆಚರಣೆ ಪ್ರಾರ್ಥನೆ, ಸಂಕೇತಾತ್ಮಕ ಮದುವೆ ಹಾಗೂ ಯಜ್ಞದ ಬಳಿಕ ಆರಂಭವಾಗುತ್ತದೆ. ನಂಬಿಕೆಯ ಪ್ರಕಾರ, ಶುದ್ಧ ಮನಸ್ಸಿನಿಂದ ಪಾಲ್ಗೊಂಡರೆ ಅಪಾಯ ಉಂಟಾಗುವುದಿಲ್ಲ. ಆದರೆ ಜನಸಂದಣಿ, ಸಮತಟ್ಟಾಗಿರದ ಅಗ್ನಿ ಹಾಸಿಗೆ ಅಥವಾ ಸಮತೋಲನ ಕಳೆದುಕೊಳ್ಳುವ ಸಂದರ್ಭಗಳಲ್ಲಿ ಅಪಘಾತ ಸಂಭವಿಸಬಹುದು. ನಾಗಪಟ್ಟಣದ ಈ ಘಟನೆ ಕೂಡ ಅದಕ್ಕೆ ನಿದರ್ಶನವಾಗಿದೆ.
ಭದ್ರತೆ ಕುರಿತು ಆತಂಕ :
ಈ ಘಟನೆ ಬಳಿಕ ಧಾರ್ಮಿಕ ಉತ್ಸವಗಳಲ್ಲಿ ಭದ್ರತಾ ಕ್ರಮಗಳ ಅಗತ್ಯತೆ ಮತ್ತೆ ಒತ್ತಿ ಹೇಳಲ್ಪಟ್ಟಿದೆ. ಸಾವಿರಾರು ಭಕ್ತರು ಸೇರಿಕೊಳ್ಳುವ ಜಾತ್ರೆಗಳಲ್ಲಿ ಅಪಾಯಗಳನ್ನು ತಡೆಗಟ್ಟಲು ಸೂಕ್ತ ಸೌಲಭ್ಯಗಳು ಮತ್ತು ನಿಯಂತ್ರಣ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
RRB – NTPC ಹುದ್ದೆಗಳಿಗೆ ಭಾರಿ ನೇಮಕಾತಿ : 30,307 ಹುದ್ದೆಗಳ ಖಾಲಿ ಹುದ್ದೆಗಳಿಗೆ ಭರ್ತಿ.!
ಮಹಿಳೆಯೊಂದಿಗೆ ಅಗ್ನಿಕುಂಡದಲ್ಲಿ ಬಿದ್ದ ವೃದ್ದ (Elderly) ನ ವಿಡಿಯೋ :
வேளாங்கண்ணி அருகே கோவில் விழாவில் தீக்குண்டத்தில் இறங்கத் தயங்கி நின்ற பெண்ணை தூக்கிச் சென்ற நபர்…. இரண்டு அடி எடுத்து வைத்த நிலையில் கால் இடறி தீக்குண்டத்தின் நடுவே பெண்ணுடன் கீழே விழுந்ததால் இருவரும் படுகாயம்…
இடம் – வடக்குப்பொய்கைநல்லூர், நாகப்பட்டினம்#Polimer | #Temple… pic.twitter.com/yR541ZUfXw
— Polimer News (@polimernews) September 26, 2025
“Love Breakup” : ಗೆಳತಿಗೆ ಬೈಕ್ ಡಿಕ್ಕಿ ಹೊಡೆದ ಯುವಕ ; ಸಿಸಿಟಿವಿ ದೃಶ್ಯ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ದಿನಗಳಲ್ಲಿ ಪ್ರೀತಿ, ಬ್ರೇಕ್ಅಪ್ (love breakup) ಮತ್ತು ಮದುವೆಯ ನಂತರ ಉಂಟಾಗುವ ಅನಿರೀಕ್ಷಿತ ಘಟನೆಗಳು ಹೆಚ್ಚಾಗುತ್ತಿವೆ. ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದರೆ ಕೋಪ, ಹಿಂಸೆ ಮತ್ತು ಅನೇಕ ದುರ್ಘಟನೆಗಳಿಗೆ ಕಾರಣವಾಗುತ್ತಿರುವುದು ಕಂಡುಬರುತ್ತಿದೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ.
ಕಲ್ಪನಾ ನಗರ ಪ್ರದೇಶದಲ್ಲಿ, ಯುವಕನೊಬ್ಬ ತನ್ನ ಗೆಳತಿಯೊಂದಿಗೆ ನಡೆದ ಜಗಳದ ಬಳಿಕ (love breakup) ಬೈಕ್ನಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿರುವುದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!
ಮಾಹಿತಿ ಪ್ರಕಾರ, ಆರೋಪಿಯ ಹೆಸರು ರಾಜೇಂದ್ರ. ಆತ ಹಲವು ವರ್ಷಗಳಿಂದ ಆ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಘಟನೆ ನಡೆದ ದಿನ ಇಬ್ಬರ ನಡುವೆ ಸಣ್ಣಪುಟ್ಟ ಜಗಳ ನಡೆದಿದ್ದು, ಯುವತಿ ಕೋಪದಲ್ಲಿ ಕಲ್ಲು ಎಸೆದಿದ್ದಳು.
ಇದರಿಂದ ಕೋಪಗೊಂಡ ರಾಜೇಂದ್ರ ಅತಿವೇಗದಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ಯುವತಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ನಂತರ ಯುವತಿ ರಸ್ತೆ ಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದಾಳೆ. ತಕ್ಷಣ ಸ್ಥಳೀಯರು ಓಡಿಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
“Post Officeನ ಈ ಸ್ಕೀಮ್ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!
ಪ್ರಸ್ತುತ ಆಕೆ ಚಿಕಿತ್ಸೆ ಪಡೆಯುತ್ತಿದ್ದು, ತಲೆಗೆ ಗಂಭೀರ ಗಾಯಗಳಾಗಿರುವುದು ವೈದ್ಯಕೀಯ ಮೂಲಗಳಿಂದ ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಈಗಾಗಲೇ ವೈರಲ್ ಆಗಿದ್ದು, ಯುವಕನ ಉದ್ದೇಶಪೂರ್ವಕ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
👉 ಈ ಘಟನೆ, ಪ್ರೇಮ ಸಂಬಂಧಗಳ (love breakup) ಅಸಮಜ್ಜಿ ಹಾಗೂ ಬ್ರೇಕಪ್ (breakup) ನಂತರ ಉಂಟಾಗುವ ಹಿಂಸೆ ಹೇಗೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ.
ಕತ್ತೆಕಿರುಬವ ತಪ್ಪಿಸಲು ಹೋಗಿ ಪಲ್ಟಿಯಾದ ಪೊಲೀಸ್ ಜೀಪ್ ; ASI ಸಾವು.!
ಲವ್ ಬೇಕಫ್ (love breakup) ಹಿನ್ನಲೆ ಬೈಕ್ ಗುದ್ದಿಸಿದ ಯುವಕನ ವಿಡಿಯೋ :
మధ్యప్రదేశ్ లోని ఇండోర్ లో తనకు బ్రేక్ అప్ చెప్పిందని యువతిని బైక్ తో ఢీకొట్టి పరారైన యువకుడు pic.twitter.com/MuInnBNpEt
— BIG TV Breaking News (@bigtvtelugu) September 26, 2025