ಜನಸ್ಪಂದನ ನ್ಯೂಸ್, ಡೆಸ್ಕ್ : ಗಂಡನಿಗೆ ದೈಹಿಕ ಸಂಬಂಧ ನಿರಾಕರಿಸುವುದು ಕ್ರೌರ್ಯಕ್ಕೆ ಸಮ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಈ ಆಧಾರದ ಮೇಲೆ ಪತಿಗೆ ವಿಚ್ಛೇದನ ನೀಡುವ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. 2013ರ ಮೇ 26 ರಂದು ವಿವಾಹವಾಗಿದ್ದ ದಂಪತಿಗೆ ಹೈಕೋರ್ಟ್ ವಿಚ್ಛೇದನೆ ನೀಡಿ ಈ ತೀರ್ಪು ಪ್ರಕಟಿಸಿದೆ.
ಹಿಂದೂ ವಿವಾಹ ಕಾಯ್ದೆಯಡಿ ಪತಿಗೆ ದೈಹಿಕ ಸಂಬಂಧವನ್ನು ನಿರಾಕರಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಇದನ್ನು ಓದಿ : ರಸ್ತೆಯಲ್ಲಿಯೇ ರೀಲ್ಸ್ಗಾಗಿ ಅಪಾಯಕಾರಿ ಸ್ಟಂಟ್ ಮಾಡಿದ ಶಾಲಾ ಬಾಲಕಿಯರು ; ಅನಾಹುತದ Video ನೀವೇ ನೋಡಿ.!
ಮದುವೆಯಾದ ಕೇವಲ 3 ದಿನಗಳಲ್ಲಿ ಮಹಿಳೆಯ ಸಹೋದರ ಆಕೆಯನ್ನು ಪರೀಕ್ಷೆಗೆ ಬರೆಯಲು ತವರು ಮನೆಗೆ ಕರೆದೊಯ್ದಿದ್ದರು. ಕೆಲವು ದಿನಗಳ ನಂತರ ಆಕೆಯನ್ನು ಕರೆ ತರಲು ಗಂಡನ ಮನೆಯವರು ಹೋದಾಗ, ಆಕೆ ಅವರೊಂದಿಗೆ ಬರಲು ನಿರಾಕರಿಸಿದ್ದಳು. ನಂತರ ಮಹಿಳೆ ಸಿಧಿಯಲ್ಲಿ ತನ್ನ ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಳು ಎಂದು ವರದಿ ತಿಳಿಸಿದೆ.
ಹೀಗಾಗಿ ದಂಪತಿ ಪರಸ್ಪರ ಒಪ್ಪಂದದ ಮೂಲಕ ವಿಚ್ಛೇದನಕ್ಕೆ ಮುಂದಾದರು. ಆದಾಗ್ಯೂ, ಪತ್ನಿ ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದಳು. ಆಕೆ ಪತಿಯು ಹಿಂದೂ ವಿವಾಹ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸತ್ನಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ.
ಇದನ್ನು ಓದಿ : ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ ; 50,000ಕ್ಕೂ ಹೆಚ್ಚಿನ ಹುದ್ದೆಗೆ ಅರ್ಜಿ ಆಹ್ವಾನ.!
ಕೌಟುಂಬಿಕ ನ್ಯಾಯಾಲಯವು ಎರಡೂ ಕಡೆಯವರ ಮಾತನ್ನು ಆಲಿಸಿದ ನಂತರ, 2021ರ ಆಗಸ್ಟ್ 17 ರಂದು ವಿಚ್ಛೇದನ ನೀಡಿ ಆದೇಶ ಹೊರಡಿಸಿತ್ತು.
ಆದರೆ, ಈ ವಿಚ್ಛೇದನದ ಆದೇಶವನ್ನು ಮಹಿಳೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಳು. ವಿಚಾರಣೆಯ ವೇಳೆ ಪತಿ, ಆಕೆ ತನ್ನೊಂದಿಗೆ ಕೇವಲ ಮೂರು ದಿನಗಳ ಕಾಲ ಇದ್ದಳು. ಈ ಅವಧಿಯಲ್ಲಿ ಆಕೆ ದೈಹಿಕ ಸಂಬಂಧ ಹೊಂದಿರಲಿಲ್ಲ ಎಂದು ಹೇಳಿದ್ದ.