ಜನಸ್ಪಂದನ ನ್ಯೂಸ್, ಮೂಡಲಗಿ : ಸರಳತೆಯ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಮೃತ ಹಸ್ತದಿಂದ ಫೆಬ್ರುವರಿ 16,2002ರಲ್ಲಿ ಕಲ್ಲೋಳಿಯಲ್ಲಿ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗುವ ಗುರಿಯೊಂದಿಗೆ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ ಮೂಡಲಗಿ ಸಮೀಪದ ಕಲ್ಲೋಳಿಯಲ್ಲಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ಪ್ರಾರಂಭವಾಯಿತು.
ಆರಂಭದಲ್ಲಿ ಕೇವಲ 320 ಸದಸ್ಯರು, ರೂ.3.22 ಲಕ್ಷ ಶೇರು ಬಂಡವಾಳದೊಂದಿಗೆ ಸಂಸ್ಥೆಯು ಪ್ರಾರಂಭವಾಯಿತು. 10 ಚದರ ಅಡಿಯ ಸಣ್ಣ ಕೊಠಡಿಯನ್ನು ಬಾಡಿಗೆಗೆ ಪಡೆದು ತನ್ನ ಸಹಕಾರಿಯ ವ್ಯವಹಾರಿಕ ಪಯಣವನ್ನು ಪ್ರಾರಂಭಿಸಿತು. ಸಹಕಾರಿ ಸಂಘವು ಮೊದಲ ವರ್ಷದ ಕೊನೆಯಲ್ಲಿ ರೂ.61 ಸಾವಿರ ಠೇವು, ರೂ. 4.06 ಲಕ್ಷ ದುಡಿಯುವ ಬಂಡವಾಳ ಕ್ರೋಢಿಕರಿಸಿ ಸುಮಾರು 20 ಸಾವಿರ ರೂಪಾಯಿ ಲಾಭವನ್ನು ಗಳಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಂಘ ಬೆಳೆಯುವ ಭರವಸೆ ಮೂಡಿಸಿತು.
“Heart attack ಆದ ತಕ್ಷಣ ನಾಲಿಗೆಯ ಮೇಲೆ ಈ ಎಲೆಯ ರಸ ಹಚ್ಚಿ; ಜೀವ ಉಳಿಸಿ”.!
2008ರಲ್ಲಿ ಸಹಕಾರಿ ಕಾನೂನಿನಲ್ಲಿ ಬದಲಾವಣೆಯಾದ ಸಂದರ್ಭದಲ್ಲಿ ಸೌಹಾರ್ದ ಸಹಕಾರಿಯಾಗಿ ಪರಿವರ್ತನೆಗೊಂಡಿತು. ಸದ್ಯ 23 ವಸಂತಗಳನ್ನು ಪೂರೈಸಿರುವ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯು 2024-25ನೇ ಆರ್ಥಿಕ ವರ್ಷದ ಕೊನೆಯಲ್ಲಿ 16000 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ರೂ.23.50 ಲಕ್ಷ ಶೇರು ಬಂಡವಾಳ, ರೂ.106.55 ಕೋಟಿ ದುಡಿಯುವ ಬಂಡವಾಳ, ರೂ.13.35 ಕೋಟಿ ಗುಂತಾವಣಿಗಳು, ರೂ.96.72 ಕೋಟಿ ಠೇವುಗಳನ್ನು ಹೊಂದಿದ್ದು, ರೂ.2.76 ಕೋಟಿ ನಿವ್ವಳ ಲಾಭವನ್ನು ಗಳಿಕೆ ಮಾಡಿದೆ.

ವಿವಿಧ ಕ್ಷೇತ್ರಗಳ ಜನರಿಗೆ ಒಟ್ಟು ರೂ.89.44 ಕೋಟಿ ಸಾಲವನ್ನು ನೀಡಿದೆ ಹಾಗೂ ಪ್ರಾರಂಭದ ವರ್ಷದಿಂದ ಈವರೆಗೆ ಶೇ.100ರಷ್ಟು ಸಾಲ ವಸೂಲಾತಿ ಹೊಂದಿದ್ದು, ಗ್ರಾಮೀಣ ಜನರ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಪತ್ರಿಕೆಗೆ ಪ್ರತಿಕ್ರಿಯಿಸಿದರು.
Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!
ನೂತನ ಕಟ್ಟಡ : ಗ್ರಾಹಕರ ಅನುಕೂಲಕ್ಕಾಗಿ ಕಲ್ಲೋಳಿಯ ಪಟ್ಟಣದ ಕೇಂದ್ರ ಸ್ಥಳದಲ್ಲಿ ಸುಸಜ್ಜಿತವಾದ ಮತ್ತು ಗ್ರಾಹಕರ ಸೌಲಭ್ಯಕ್ಕಾಗಿ ಕಟ್ಟಡವನ್ನು ನಿರ್ಮಿಸಿದೆ. ಶ್ರೀ ಮಹಾಲಕ್ಷ್ಮೀ ಸಹಕಾರಿ ಸಂಘವು ಪ್ರತಿ ವರ್ಷ ಗ್ರಾಹಕರಿಗೆ ಲಾಭಾಂಶ ವಿತರಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಶೇ. 20ರಷ್ಟು ಲಾಭಾಂಶ ವಿತರಿಸಿದೆ.
ಪ್ರಾರಂಭದಿಂದ ಅಡಿಟ್ದಲ್ಲಿ ‘ಅ’ ಶ್ರೇಣಿ ಪಡೆದು ಗ್ರಾಹಕರ ವಿಶ್ವಾಸ ಗಳಿಸಿದೆ. ವಾಹನ ಖರೀದಿ, ಕೃಷಿ, ಹೈನುಗಾರಿಕೆ, ಗೃಹ ನಿರ್ಮಾಣ, ವ್ಯಾಪಾರ, ಗುಡಿ ಕೈಗಾರಿಕೆಗಳಿಗೆ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡಿ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿ, ಗ್ರಾಮೀಣ ಪ್ರದೇಶದ ಜನರಿಗೆ ಅತ್ಯುತ್ತಮ ಹೂಡಿಕೆಯ ಅವಕಾಶಗಳನ್ನು ಒದಗಿಸಿ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕರಿಸಿ, ಜನರು ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣವನ್ನು ಸದ್ಬಳಿಕೆ ಮಾಡುತ್ತಿರುವ ಹೆಗ್ಗಳಿಕೆ ಹೊಂದಿದೆ.
Gun : “ಗನ್” ಪರಿಶೀಲನೆಯ ವೇಳೆ ಸಂಭವಿಸಿದ ಆಕಸ್ಮಿಕ ಘಟನೆ ; ಸಿಸಿಟಿವಿ ದೃಶ್ಯ ವೈರಲ್.!
ಸಮರ್ಥ ತಂತ್ರಜ್ಞಾನ ಮತ್ತು ಪರಿಣಿತ ಸಿಬ್ಬಂದಿಯೊಂದಿಗೆ ವಿಶಾಲ ಮತ್ತು ಸುಸ್ಥಿರ ಹಣಕಾಸು ಸಂಸ್ಥೆಯಾಗಿ ಬೆಳಯುವುದು ಸಹಕಾರಿ ಸಂಸ್ಥೆಯ ಮುಂದಿನ ಗುರಿಯಾಗಿದೆ. ಗ್ರಾಹಕರಿಗೆ ತ್ವರಿತ ಸೇವೆ ನೀಡುವ ಉದ್ದೇಶದಿಂದ ಸೊಸೈಟಿಯು ಎಲ್ಲ ವ್ಯವಹಾರವನ್ನು ಗಣಿಕೀಕೃತ ವ್ಯವಹಾರಕ್ಕಾಗಿ ಅಳವಡಿಸಿದೆ. ಆರ್ಟಿಜಿಎಸ್, ನೆಪ್ಟ್ ಮತ್ತು 100 ಯುನಿಟ್ಗಳ ಸೇಪ್ ಲಾಕರ್ ವ್ಯವಸ್ಥೆಯನ್ನು ಹೊಂದಿದೆ. ಸಣ್ಣ ಪ್ರಮಾಣದ ಉಳಿತಾಯ ಮಾಡುವ ಗ್ರಾಹಕರಿಗಾಗಿ ಆರ್.ಡಿ ಯೋಜನೆಯನ್ನು ಹೊಂದಿದೆ. ಮಹಿಳೆಯರಿಗಾಗಿ, ಸೈನಿಕರಿಗಾಗಿ, ಹಿರಿಯ ನಾಗರಿಕರಿಗಾಗಿ ಠೇವುಗಳ ಮೇಲೆ 0.50% ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ.
ಸಣ್ಣ ವ್ಯಾಪಾರಸ್ಥರಿಗಾಗಿ 12% ಬಡ್ಡಿ ದರದಲ್ಲಿ ವ್ಯಾಪಾರ ಅಭಿವೃದ್ದಿ ಸಾಲವನ್ನು ನೀಡುತ್ತಿದೆ. ಗ್ರಾಮೀಣ ಮಹಿಳಾ ಸ್ವಾವಲಂಬನೆಗೆ ಮತ್ತು ಸ್ವದೇಸಿ ಚಿಂತನೆಯ ಸಾಕಾರಕ್ಕೆ ಮಹಾಲಕ್ಷ್ಮೀ ಸಹಕಾರಿ ಸಂಘವು ಹೆಚ್ಚು ಗಮನ ನೀಡಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಸಂಘದ ಕಟ್ಟಡದಲ್ಲಿ ಎಟಿಎಂ ಸೌಲಭ್ಯ ಕಲ್ಪಿಸುವ ಬಗ್ಗೆ ಆಡಳಿತ ಮಂಡಳಿಯವರು ನಿರ್ಧರಿಸಿದ್ದಾರೆ.
ಹೈವೇಯಲ್ಲಿ ಯುವಕರ ಅಪಾಯಕಾರಿ Stunt : ಒಂದೇ ಸ್ಕೂಟರ್ನಲ್ಲಿ 5 ಜನ ಕುಳಿತ ವಿಡಿಯೋ ವೈರಲ್.!
‘ಮಹಿಳಾ ಸ್ವ-ಸಹಾಯ ಸಂಘಗಳಿಗೆ ಈ ವರೆಗೆ ರೂ.60.23 ಕೋಟಿ ಸಾಲವನ್ನು ನೀಡಿ ಗ್ರಾಮೀಣ ಮಹಿಳಾ ಸ್ವಾವಲಂಬನೆಗೆ ಮತ್ತು ಸ್ವದೇಸಿ ಚಿಂತನೆಯ ಸಾಕಾರಕ್ಕೆ ಮಹಾಲಕ್ಷ್ಮೀ ಸಹಕಾರಿ ಸಂಘವು ಹೆಚ್ಚು ಗಮನ ನೀಡಿದೆ’
ಮೂಲ ಸಂಸ್ಥಾಪಕ ಅಧ್ಯಕ್ಷ : ಈರಣ್ಣ ಕಡಾಡಿ, ಉಪಾಧ್ಯಕ್ಷ : ಶ್ರೀಶೈಲ ತುಪ್ಪದ.
ನಿರ್ದೇಶಕರು :
- ಬಾಳಪ್ಪ ಸಂಗಟಿ,
- ಪರಪ್ಪ ಮಳವಾಡ,
- ಸಹದೇವ ಹೆಬ್ಬಾಳ,
- ಸತೀಶ ಕಡಾಡಿ,
- ಶಿವಪ್ಪ ಗೋಸಬಾಳ,
- ಕಾಶವ್ವ ಹೆಬ್ಬಾಳ,
- ಅವ್ವಕ್ಕ ಹಡಗಿನಾಳ,
- ಮಲ್ಲಿಕಾರ್ಜುನ ಹುಲೆನ್ನವರ,
- ನಿಂಗಪ್ಪ ಮಿಡಕನಟ್ಟಿ ಆಡಳಿತದಲ್ಲಿ ಪ್ರಗತಿಯಲ್ಲಿದೆ.
DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!
ಸದ್ಯ ಶಾಖೆಗಳು : ಬೆಟಗೇರಿ, ಘಟಪ್ರಭಾ, ಯಾದವಾಡ ಕಾರ್ಯನಿರ್ವಹಿಸುತ್ತಿವೆ.
ಲೇಖನ : ಶಿವಾನಂದ ಮುಧೋಳ, ಮೂಡಲಗಿ.






