ಜನಸ್ಪಂದನ ನ್ಯೂಸ್, ಡೆಸ್ಕ್ : ಲೋಕಸಭಾ ಚುನಾವಣೆಗೆ ಈಗಾಗಲೇ 39 ಅಭ್ಯರ್ಥಿಗಳ ಮೊದಲ ಪಟ್ಟಿ ಮತ್ತು 43 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿತ್ತು. ಒಟ್ಟು ಇದುವರೆಗೆ 82 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದ್ದು, ಅದರ ಮುಂದುವರೆದ ಭಾಗವಾಗಿ ಇಂದು 3ನೇ ಪಟ್ಟಿ ಬಿಡುಗಡೆಯಾಗಿದೆ.
ಈ ಪಟ್ಟಿಯಲ್ಲಿ ಒಟ್ಟು 134 ಅಭ್ಯರ್ಥಿಗಳ ಹೆಸರಿದ್ದು ಅದರಲ್ಲಿ ಕರ್ನಾಟಕದ 20 ಹೆಸರನ್ನು ಅಂತಿಮಗೊಳಿಸಲಾಗಿದೆ. ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಕೆಳಗಿದೆ.
ಕರ್ನಾಟಕ ಅಭ್ಯರ್ಥಿಗಳ ಪಟ್ಟಿ :
► ಉಡುಪಿ : ಜಯಪ್ರಕಾಶ್ ಹೆಗ್ಡೆ.
► ಕೊಪ್ಪಳ : ರಾಘವೇಂದ್ರ ಹಿಟ್ನಾಳ್.
► ಉತ್ತರ ಕನ್ನಡ : ಅಂಜಲಿ ನಿಂಬಾಳ್ಕರ್.
► ಬೆಂಗಳೂರು ದಕ್ಷಿಣ : ಸೌಮ್ಯ ರೆಡ್ಡಿ.
► ಚಿತ್ರದುರ್ಗ : ಚಂದ್ರಪ್ಪ.
► ಬೆಳಗಾವಿ : ಮೃಣಾಲ ಹೆಬ್ಬಾಳ್ಕರ್.
► ಬಾಗಲಕೋಟೆ : ಸಂಯುಕ್ತಾ ಪಾಟೀಲ್.
► ಚಿಕ್ಕೋಡಿ : ಪ್ರಿಯಾಂಕಾ ಜಾರಕಿಹೊಳಿ.
► ಹುಬ್ಬಳ್ಳಿ-ಧಾರವಾಡ : ವಿನೋದ್ ಅಸೂಟಿ.
► ದಾವಣಗೆರೆ : ಪ್ರಭಾ ಮಲ್ಲಿಕಾರ್ಜುನ್.
► ಕಲಬುರಗಿ : ರಾಧಾಕೃಷ್ಣ ದೊಡಮನಿ.
► ದಕ್ಷಿಣ ಕನ್ನಡ : ಪದ್ಮರಾಜ್.
► ಬೀದರ್ : ಸಾಗರ್ ಖಂಡ್ರೆ.
► ರಾಯಚೂರು : ಕುಮಾರ್ ನಾಯ್ಕ್.
► ಮೈಸೂರು : ಎಂ.ಲಕ್ಷ್ಮಣ್.
► ಬೆಂಗಳೂರು ಉತ್ತರ ಕ್ಷೇತ್ರ : ಎಂ.ವಿ.ರಾಜೀವ್ ಗೌಡ.
►ಬೆಂಗಳೂರು ಸೆಂಟ್ರಲ್ ಕ್ಷೇತ್ರ : ಮನ್ಸೂರ್ ಅಲಿಖಾನ್
ಇದಕ್ಕೂ ಮೊದಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಿಡಬ್ಲ್ಯುಸಿ ಸಭೆ ನಡೆಯಿತು. ಈ ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸಮಿತಿಯ ಇತರ ಸದಸ್ಯರು ಭಾಗವಹಿಸಿದ್ದರು.
ಈ ಸಭೆ ಉದ್ದೇಶಿಸಿ ಮಾತನಾಡಿದ ಖರ್ಗೆ, ದೇಶವು ಬದಲಾವಣೆ ಬಯಸುತ್ತಿದೆ. ಸದ್ಯ ಕೇಂದ್ರ ಸರ್ಕಾರವು ಪ್ರಸ್ತುತಪಡಿಸುತ್ತಿರುವ ಗ್ಯಾರಂಟಿಗಳು 2004ರ ‘ಪ್ರಕಾಶಿಸುತ್ತಿದೆ ಭಾರತ’ ಘೋಷಣೆಯನ್ನೇ ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.
Congress releases the third list of 57 candidates for the upcoming Lok Sabha elections.
Adhir Ranjan Choudhary to contest from Berhampore, West Bengal. pic.twitter.com/Obg0yGub5s
— ANI (@ANI) March 21, 2024