ಬುಧವಾರ, ಫೆಬ್ರವರಿ 4, 2026

Janaspandhan News

Home Blog Page 35

LIC : 5 ವರ್ಷ ಹೂಡಿದ್ರೆ ಸಾಕು, ಜೀವನಪರ್ಯಂತ ತಿಂಗಳಿಗೆ 15 ಸಾವಿರ ರೂ. ಲಭ್ಯ.

0

ಜನಸ್ಪಂದನ ನ್ಯೂಸ್‌, ನವದೆಹಲಿ : ಆರ್ಥಿಕ ಭದ್ರತೆ ಪ್ರತಿಯೊಬ್ಬರಿಗೂ ಅತ್ಯಂತ ಮುಖ್ಯ. ಗಳಿಸಿದ ಹಣವನ್ನು ಉಳಿಸಿ ಅದರಿಂದ ದೀರ್ಘಕಾಲಿಕ ಲಾಭ ಪಡೆಯುವುದರೊಂದಿಗೆ, ಕುಟುಂಬಕ್ಕೆ ಸುರಕ್ಷತೆಯನ್ನು ಒದಗಿಸುವ ಯೋಜನೆಗಳನ್ನು ಆರಿಸುವುದು ಅಗತ್ಯ.

ಇಂತಹ ಸಂದರ್ಭಗಳಲ್ಲಿ, ಭಾರತೀಯ ಜೀವ ವಿಮಾ ನಿಗಮ (LIC) ತಂದಿರುವ ಜೀವನ್ ಉತ್ಸವ ಪಾಲಿಸಿ ಉತ್ತಮ ಆಯ್ಕೆಯಾಗಿದೆ.

Belagavi : ಅಕ್ರಮ ಗೋಮಾಂಸ ಸಾಗಾಟ : ಲಾರಿಗೆ ಬೆಂಕಿ : 2 ಪ್ರಕರಣ ದಾಖಲು.!

ಈ ಯೋಜನೆ ಲಿಂಕ್ಡ್ ಅಲ್ಲದ ಹಾಗೂ ಭಾಗವಹಿಸದ ಉಳಿತಾಯ + ಜೀವ ವಿಮಾ ಪಾಲಿಸಿಯಾಗಿದೆ. ಅಂದರೆ ಮಾರುಕಟ್ಟೆಯ ಅಸ್ಥಿರತೆ ಅಥವಾ ಬದಲಾವಣೆಗಳು ಇದರ ಮೇಲೆ ಪರಿಣಾಮ ಬೀರುವುದಿಲ್ಲ. ಪಾಲಿಸಿಯಲ್ಲಿ ನಿಗದಿಪಡಿಸಿದಂತೆ ಖಚಿತ ಲಾಭ ದೊರೆಯುತ್ತದೆ.

LIC ಪಾಲಿಸಿಯ ಮುಖ್ಯ ವೈಶಿಷ್ಟ್ಯಗಳು :
  • ವಯಸ್ಸಿನ ಮಿತಿ : 90 ದಿನಗಳ ಶಿಶುವಿನಿಂದ ಹಿಡಿದು 65 ವರ್ಷದವರೆಗಿನವರು ಪಾಲಿಸಿ ಪಡೆಯಬಹುದು.
  • ಕನಿಷ್ಠ ವಿಮಾ ಮೊತ್ತ : ರೂ.5 ಲಕ್ಷ.
  • ಪ್ರೀಮಿಯಂ ಪಾವತಿ ಅವಧಿ : ಕನಿಷ್ಠ 5 ವರ್ಷಗಳು, ಗರಿಷ್ಠ 15 ವರ್ಷಗಳು.
  • ಪಾವತಿ ವಿಧಾನ : ವಾರ್ಷಿಕವಾಗಿ (Annual Premium).
8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!
ಆದಾಯ ಹೇಗೆ ಸಿಗುತ್ತದೆ?

ಉದಾಹರಣೆಗೆ, ನೀವು ರೂ.5 ಲಕ್ಷ ವಿಮಾ ಮೊತ್ತದ ಪಾಲಿಸಿ ಆಯ್ಕೆ ಮಾಡಿ 5 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಿದರೆ, ವರ್ಷಕ್ಕೆ ಸುಮಾರು ರೂ.1.16 ಲಕ್ಷ ಪಾವತಿಸಬೇಕಾಗುತ್ತದೆ. ಒಟ್ಟು ಪಾವತಿ ರೂ.5.80 ಲಕ್ಷ.

  • ಪಾವತಿ ಅವಧಿ ಮುಗಿದ ನಂತರ 5 ವರ್ಷಗಳ ಕಾಯುವ ಅವಧಿ ಇರುತ್ತದೆ.
  • ಆ ಬಳಿಕ, ಜೀವನಪರ್ಯಂತ ವರ್ಷಕ್ಕೆ ರೂ.50,000 ಆದಾಯ ಸಿಗುತ್ತದೆ.
  • ಪಾಲುದಾರರ ಮರಣದ ಸಂದರ್ಭದಲ್ಲಿ, ನಾಮಿನಿಗೆ ರೂ.5 ಲಕ್ಷ ಪರಿಹಾರ ಲಭಿಸುತ್ತದೆ.
ಹೆಚ್ಚಿದ Uric ಆಮ್ಲದಿಂದ ಬಳಲುತ್ತಿದ್ದೀರಾ? ಈ ಸೂಪರ್ ಫುಡ್‌ ಸೇವಿಸಿ.!
ಹೆಚ್ಚಿನ ಆದಾಯ ಬಯಸಿದರೆ?
  • ರೂ.50 ಲಕ್ಷ ವಿಮಾ ಮೊತ್ತ ಆಯ್ಕೆ ಮಾಡಿದರೆ, ವರ್ಷಕ್ಕೆ ಸುಮಾರು ರೂ.11 ಲಕ್ಷ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
  • ಈ ಮೂಲಕ ವರ್ಷಕ್ಕೆ ರೂ.5 ಲಕ್ಷ ಆದಾಯ ಪಡೆಯಬಹುದು.
  • ತಿಂಗಳಿಗೆ ಸುಮಾರು ರೂ.15,000 ಗಳಿಸಲು ಬಯಸಿದರೆ, ರೂ.18 ಲಕ್ಷ ಪ್ರೀಮಿಯಂ ಪಾವತಿಸಿ, ಜೀವನಪರ್ಯಂತ ವರ್ಷಕ್ಕೆ ರೂ.18 ಲಕ್ಷ ಪಡೆಯಬಹುದು.
LIC ಇಂದ ಸಿಗುವ ಹೆಚ್ಚುವರಿ ಸೌಲಭ್ಯಗಳು :
  • ಸಾಲ ಸೌಲಭ್ಯ : ಪಾಲಿಸಿಯ ಪಾವತಿ ಅವಧಿಯಲ್ಲಿ ಅಥವಾ ಆದಾಯ ಪ್ರಾರಂಭವಾದ ಬಳಿಕ ಪಾಲುದಾರರು ಸಾಲ ಪಡೆಯಬಹುದು.
  • ಬಡ್ಡಿ ನಿಯಮ : ಸಾಲದ ಬಡ್ಡಿ ಮೊತ್ತವು ನಿಯಮಿತ ಆದಾಯದ 50% ಮೀರಬಾರದು.
  • ಖರೀದಿ ವಿಧಾನ :ಎಲ್ಐಸಿ (LIC) ಜೀವನ್ ಉತ್ಸವ ಯೋಜನೆಯನ್ನು LIC ಏಜೆಂಟ್ ಮೂಲಕ ಅಥವಾ ನೇರವಾಗಿ ಆನ್‌ಲೈನ್‌ನಲ್ಲಿ ಪಡೆಯಬಹುದು.
Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!

👉 ಎಲ್ಐಸಿ (LIC) ಜೀವನ್ ಉತ್ಸವ ಯೋಜನೆ, ಉಳಿತಾಯದೊಂದಿಗೆ ಜೀವನಪರ್ಯಂತ ಖಚಿತ ಆದಾಯ ಹಾಗೂ ಕುಟುಂಬಕ್ಕೆ ಭದ್ರತೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ದೀರ್ಘಕಾಲಿಕ ಹೂಡಿಕೆ ಮತ್ತು ನಿರಂತರ ಆದಾಯ ಬಯಸುವವರಿಗೆ ಇದು ಉತ್ತಮ ಆಯ್ಕೆ.


Belagavi : ಅಕ್ರಮ ಗೋಮಾಂಸ ಸಾಗಾಟ : ಲಾರಿಗೆ ಬೆಂಕಿ : 2 ಪ್ರಕರಣ ದಾಖಲು.!

Belagavi

ಜನಸ್ಪಂದನ ನ್ಯೂಸ್‌, ಬೆಳಗಾವಿ/ಐನಾಪುರ : ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ಘಟನೆಯೊಂದು ಜನರ ಗಮನ ಸೆಳೆದಿದೆ. ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ಲಾರಿಗೆ ಸಾರ್ವಜನಿಕರು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ಲಾರಿಯಲ್ಲಿ ಅಪಾರ ಪ್ರಮಾಣದ ಗೋಮಾಂಸವನ್ನು ಸಾಗಿಸುತ್ತಿದ್ದರೆಂಬ ಸುಳಿವು ಸಾರ್ವಜನಿಕರಿಗೆ ದೊರಕಿತ್ತು. ಇದನ್ನು ಆಧರಿಸಿ, ಬೆಳಗಾವಿ (Belagavi) ಜಿಲ್ಲೆಯ ಐನಾಪುರ ಗ್ರಾಮದ ಉಗಾರ ರಸ್ತೆಯ ಶ್ರೀ ಸಿದ್ದೇಶ್ವರ ಗುಡಿಯ ಹತ್ತಿರ ರಾತ್ರಿ 10 ಗಂಟೆಯ ಸುಮಾರಿಗೆ ಲಾರಿಯನ್ನು ತಡೆ ಹಿಡಿದು ಪರಿಶೀಲಿಸಲಾಯಿತು.

8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!

ಚಾಲಕರನ್ನು ವಿಚಾರಿಸಿದ ನಂತರ ವಾಹನವನ್ನು ತಪಾಸಣೆ ಮಾಡಿದಾಗ ಸುಮಾರು ಐದು ಟನ್ ಗೂ ಹೆಚ್ಚು ಗೋಮಾಂಸ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಬಳಿಕ ಆಕ್ರೋಶಗೊಂಡ ಜನರು ಲಾರಿಗೆ ಬೆಂಕಿ ಹಚ್ಚಿದರು. ಬೆಂಕಿ ಶಮನ ದಳ ಹಾಗೂ ಉಗಾರ ಸಕ್ಕರೆ ಕಾರ್ಖಾನೆ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಲಾರಿ ಸಂಪೂರ್ಣವಾಗಿ ಸುಟ್ಟುಹೋಯಿತು.

ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಗವಾಡ (Belagavi Dist) ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಐನಾಪುರ ಗ್ರಾಮ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ಇಬ್ಬರು ಡಿಎಸ್‌ಪಿ, ನಾಲ್ಕು ಸಿಪಿಐ, ಎಂಟು ಪಿಎಸ್‌ಐ ಸೇರಿ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Minor :ಮದುವೆಯ ಭರವಸೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ; ಆರೋಪಿ‌ಗೆ 30 ವರ್ಷ ಶಿಕ್ಷೆ.!
ಎರಡು ಪ್ರತ್ಯೇಕ ಪ್ರಕರಣ ದಾಖಲು :

ಪೊಲೀಸ್ ಇಲಾಖೆಯ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಿಸಲಾಗಿದೆ. ಅಕ್ರಮ ಮಾಂಸ ಸಾಗಾಣಿಕೆಗೆ ಸಂಬಂಧಿಸಿ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಪ್ರಾಣಿ ಹಿಂಸೆ ಕಾಯ್ದೆ ಅಡಿ ಇಬ್ಬರನ್ನು ಬಂಧಿಸಲಾಗಿದೆ.

ಅದೇ ರೀತಿ, ಲಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ದರೋಡೆ ಹಾಗೂ ಅಟ್ರಾಸಿಟಿ ಕಾಯ್ದೆ ಅಡಿ ಐವರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ತೀವ್ರಗೊಳಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು Belagavi SP ಭೀಮಶಂಕರ ಗುಳೇದ ತಿಳಿಸಿದ್ದಾರೆ.

3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!

ಈ ಘಟನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪೊಲೀಸರು ಜನರನ್ನು ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.

Snake : ಹಾವಿನ ಜೊತೆ ಸ್ಟಂಟ್ ಮಾಡಲು ಯತ್ನಿಸಿದ ಯುವಕ : ದಾರುಣ ಅಂತ್ಯದ ವಿಡಿಯೋ.!

0

ಜನಸ್ಪಂದನ ನ್ಯೂಸ್‌, ಮುಜಾಫರ್‌ನಗರ (ಉ.ಪ್ರ) : ಸಾಮಾಜಿಕ ಜಾಲತಾಣಗಳಲ್ಲಿ ಹಾವಿ (Snake) ನೊಂದಿಗೆ ವಿಡಿಯೋ ಮಾಡುವ ಹುಚ್ಚಿನಲ್ಲಿ 24 ವರ್ಷದ ಯುವಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮೊರ್ನಾ ತಾಲೂಕಿನ ಭೊಪಾ ಪ್ರದೇಶದಲ್ಲಿ ನಡೆದಿದೆ.

ಮೃತ ಯುವಕನನ್ನು ಮೋಹಿತ್ ಕುಮಾರ್ ಅಲಿಯಾಸ್ ಬಂಟಿ ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಮಂಗಲ್ ಪ್ರಜಾಪತಿ ಎಂಬುವರ ಮನೆಯಲ್ಲಿ ಹಾವು (Snake) ಕಂಡುಬಂದಾಗ ಜನರು ಅಂಜಿ ಬೊಬ್ಬೆ ಹೊಡೆದಿದ್ದರು. ಅದೇ ವೇಳೆ ಅಲ್ಲಿಗೆ ಬಂದ ಮೋಹಿತ್ ತನ್ನ ಕೈಗಳಿಂದಲೇ ಹಾವನ್ನು ಹಿಡಿದಿದ್ದಾನೆ.

72 ವರ್ಷದ ವರ, 27 ವರ್ಷದ ವಧು ; ಹಿಂದೂ ಸಂಪ್ರದಾಯದಂತೆ Marriage ಆದ ಉಕ್ರೇನ್ ಜೋಡಿ.!

ಹಾವ (Snake) ನ್ನು ಹಿಡಿದ ನಂತರ ಆತ ಅದನ್ನು ಚೀಲಕ್ಕೆ ತುಂಬದೆ, ಜನರ ಮುಂದೆ ಸಾಹಸ ಪ್ರದರ್ಶಿಸಲು ಮುಂದಾಗಿದ್ದ. ಹಾವನ್ನು ಕೊರಳಿಗೆ ಸುತ್ತಿಕೊಂಡು, ಆ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಸಲು ಪ್ರಾರಂಭಿಸಿದ್ದ. ಈ ವೇಳೆ ಬೆದರಿದ ಹಾವು ಆತನ ಕೈಗೆ ಎರಡು ಬಾರಿ ಕಚ್ಚಿತು.

ಕಚ್ಚಿದ ನಂತರವೂ ಹಾವ (Snake) ನ್ನು ಚೀಲಕ್ಕೆ ಹಾಕಿದ ಮೋಹಿತ್, ಕೆಲವು ನಿಮಿಷಗಳಲ್ಲಿ ಅಸ್ವಸ್ಥನಾದ. ತಕ್ಷಣವೇ ಕುಟುಂಬದವರು ಅವನನ್ನು ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೋಹಿತ್ ಮೃತಪಟ್ಟಿದ್ದಾನೆ.

ಹೆಚ್ಚಿದ Uric ಆಮ್ಲದಿಂದ ಬಳಲುತ್ತಿದ್ದೀರಾ? ಈ ಸೂಪರ್ ಫುಡ್‌ ಸೇವಿಸಿ.!

ಪೊಲೀಸರು ಈ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಿದ್ದು, “ಅವನು ಹಾವ (Snake) ನ್ನು ಹಿಡಿದು ನೇರವಾಗಿ ಕಾಡಿಗೆ ತೆರಳಿ ಬಿಟ್ಟು ಬಂದಿದ್ದರೆ ಬದುಕುಳಿಯಬಹುದಿತ್ತು. ಆದರೆ ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ” ಎಂದು ತಿಳಿಸಿದ್ದಾರೆ.

ವೈರಲ್ ವೀಡಿಯೋ ಹುಚ್ಚಿನ ದುಷ್ಪರಿಣಾಮ :

ಇತ್ತೀಚೆಗೆ ವೈರಲ್ ಆಗಲು ಯುವಕರು ಅತಿಯಾದ ಸಾಹಸಗಳಿಗೆ ಮುಂದಾಗುತ್ತಿರುವುದರಿಂದ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ರಸ್ತೆಗಳು, ರೈಲು ಹಳಿ, ಕಟ್ಟಡಗಳ ಮೇಲ್ಛಾವಣಿ ಇತ್ಯಾದಿ ಅಪಾಯಕಾರಿ ಸ್ಥಳಗಳಲ್ಲಿ ವೀಡಿಯೋ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ತಾವು ಮಾತ್ರವಲ್ಲ ಇತರರ ಜೀವಕ್ಕೂ ಅಪಾಯ ಉಂಟುಮಾಡುತ್ತಿದ್ದಾರೆ.

8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!

ಇದೇ ರೀತಿ, ಮೋಹಿತ್ ಹಾವಿನೊಂದಿಗೆ ಸ್ಟಂಟ್ ಮಾಡಲು ಹೋಗಿ ದುರ್ಭಾಗ್ಯವಶಾತ್ ಸಾವಿಗೀಡಾದ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ.

ವಿಡಿಯೋ :


8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!

Couple

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಧ್ಯಪ್ರದೇಶದ ಭೋಪಾಲದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಪ್ರೀತಿಸಿ ಬಳಿಕ ಕುಟುಂಬಸ್ಥರ ಅನುಮತಿಯೊಂದಿಗೆ ಮದುವೆಯಾಗಿದ್ದ ಯುವ ದಂಪತಿ (Couple), ಮದುವೆಯಾಗಿ ಕೇವಲ ಎಂಟು ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಗಂಡ–ಹೆಂಡತಿಯ ನಡುವಿನ ಕಲಹಕ್ಕೆ ಕಾರಣ ಅತ್ತೆ–ಮಾವ ಅಲ್ಲ, ಬದಲಿಗೆ ಇವರ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮತ್ತು ಅಕ್ವೇರಿಯಂ ಮೀನು.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ಹೇಗೆ ಶುರುವಾಯಿತು ಕಲಹ?

ಮದುವೆಯಾದ ಬಳಿಕ ಆರಂಭದಲ್ಲಿ ಎಲ್ಲವೂ ಚನ್ನಾಗಿಯೆ ಸಾಗಿತ್ತು. ಗಂಡನು ಮದುವೆಗೂ ಮುಂಚೆ ನಾಯಿ, ಮೊಲ ಮತ್ತು ಅಕ್ವೇರಿಯಂ ಮೀನುಗಳನ್ನು ಸಾಕುತ್ತಿದ್ದ. ಇತ್ತ ಹೆಂಡತಿ ತನ್ನ ಉತ್ತರ ಪ್ರದೇಶದ ಮನೆಯಲ್ಲಿ ಬೆಕ್ಕನ್ನು ಸಾಕಿಕೊಂಡಿದ್ದಳು.

ಮದುವೆಯಾದ ಬಳಿಕ ಹೆಂಡತಿ ತನ್ನ ಬೆಕ್ಕನ್ನು ಗಂಡನ ಮನೆಗೆ ಕರೆದುಕೊಂಡು ಬಂದಳು. ಇಬ್ಬರೂ ಪ್ರಾಣಿಪ್ರೇಮಿಗಳಾಗಿದ್ದರಿಂದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಆದರೆ ದಿನಗಳು ಕಳೆಯುತ್ತಿದ್ದಂತೆ ಸಮಸ್ಯೆಗಳು ಶುರುವಾಯಿತು.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.

ಪತ್ನಿಯ ಹೇಳಿಕೆಯ ಪ್ರಕಾರ, ಗಂಡನ ನಾಯಿ ತನ್ನ ಸಾಕಿದ ಬೆಕ್ಕನ್ನು ನಿರಂತರವಾಗಿ ಹೆದರಿಸುತ್ತಿದೆ, ಬೊಗಳುತ್ತದೆ ಮತ್ತು ಕೆಲವೊಮ್ಮೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಇದರಿಂದ ಬೆಕ್ಕು ಆಹಾರ ತಿನ್ನಲು ಹೆದರಿಕೊಳ್ಳುತ್ತಿದೆ. ಇದು ನನಗೆ ಮಾನಸಿಕ ಹಿಂಸೆಯಾಗಿದೆ ಎಂದು ಪತ್ನಿ ಆರೋಪಿಸಿದ್ದಾಳೆ.

ಇತ್ತ ಗಂಡ (Husband) ನ ವಾದವೇನೆಂದರೆ, ಪತ್ನಿಯ ಬೆಕ್ಕು ಸದಾ ಅಕ್ವೇರಿಯಂ ಬಳಿ ಕಾದು ಕುಳಿತು ಮೀನು ಹಿಡಿಯಲು ಪ್ರಯತ್ನಿಸುತ್ತದೆ. ಜೊತೆಗೆ ನಾಯಿ ಮೇಲೆಯೂ ದಾಳಿ ಮಾಡಲು ಮುಂದಾಗುತ್ತದೆ. ಹೀಗಾಗಿ ಮನೆತನದಲ್ಲಿ ಪ್ರತಿದಿನ ಕಲಹ, ಅಶಾಂತಿ ನಡೆಯುತ್ತಿದೆ ಎಂದು ಆತ ತಿಳಿಸಿದ್ದಾನೆ.

Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!
ದಂಪತಿ (Couple) ಗಳು ಡಿವೋರ್ಸ್‌ಗೆ ಮೊರೆ :

ಪ್ರಾಣಿಗಳ ಕಾರಣದಿಂದ ದಿನದಿಂದ ದಿನಕ್ಕೆ ಕಲಹ ತೀವ್ರಗೊಂಡ ಹಿನ್ನೆಲೆಯಲ್ಲಿ, ಇಬ್ಬರೂ ದಂಪತಿ (Couple) ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಮದುವೆಯಾಗಿ ಕೇವಲ ಎಂಟು ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದರಿಂದ, ನ್ಯಾಯಾಧೀಶರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ದಂಪತಿ (Couple) ಗಳಿಗೆ ಕೌನ್ಸಿಲಿಂಗ್ ಸೂಚನೆ :

ನ್ಯಾಯಾಧೀಶರು ಪ್ರಕರಣವನ್ನು ಆಲಿಸಿ, “ಮದುವೆಗೆ ಕೇವಲ ಎಂಟು ತಿಂಗಳು ಕಳೆದಿದೆ, ಇಂತಹ ಸಮಸ್ಯೆಗಳಿಗೆ ವಿಚ್ಛೇದನವೇ ಪರಿಹಾರವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ದಂಪತಿ (Couple) ಗೆ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮುಂದಿನ ವಿಚಾರಣೆ ಅಕ್ಟೋಬರ್‌ನಲ್ಲಿ ನಡೆಯಲಿದೆ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದು, ಸಾಕು ಪ್ರಾಣಿಗಳ ಕಾರಣದಿಂದಲೂ ಗಂಡ–ಹೆಂಡತಿ ನಡುವಿನ ಕಲಹ ವಿಚ್ಛೇದನದ ಹಂತಕ್ಕೇರಬಹುದು ಎಂಬುದನ್ನು ಸಾಬೀತುಪಡಿಸಿದೆ.

Belagavi : ಅಕ್ರಮ ಗೋಮಾಂಸ ಸಾಗಾಟ : ಲಾರಿಗೆ ಬೆಂಕಿ : 2 ಪ್ರಕರಣ ದಾಖಲು.!

0

ಜನಸ್ಪಂದನ ನ್ಯೂಸ್‌, ಬೆಳಗಾವಿ/ಐನಾಪುರ : ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ಘಟನೆಯೊಂದು ಜನರ ಗಮನ ಸೆಳೆದಿದೆ. ಅಕ್ರಮವಾಗಿ ಮಾಂಸ ಸಾಗಿಸುತ್ತಿದ್ದ ಲಾರಿಗೆ ಸಾರ್ವಜನಿಕರು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ಲಾರಿಯಲ್ಲಿ ಅಪಾರ ಪ್ರಮಾಣದ ಗೋಮಾಂಸವನ್ನು ಸಾಗಿಸುತ್ತಿದ್ದರೆಂಬ ಸುಳಿವು ಸಾರ್ವಜನಿಕರಿಗೆ ದೊರಕಿತ್ತು. ಇದನ್ನು ಆಧರಿಸಿ, ಬೆಳಗಾವಿ (Belagavi) ಜಿಲ್ಲೆಯ ಐನಾಪುರ ಗ್ರಾಮದ ಉಗಾರ ರಸ್ತೆಯ ಶ್ರೀ ಸಿದ್ದೇಶ್ವರ ಗುಡಿಯ ಹತ್ತಿರ ರಾತ್ರಿ 10 ಗಂಟೆಯ ಸುಮಾರಿಗೆ ಲಾರಿಯನ್ನು ತಡೆ ಹಿಡಿದು ಪರಿಶೀಲಿಸಲಾಯಿತು.

8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!

ಚಾಲಕರನ್ನು ವಿಚಾರಿಸಿದ ನಂತರ ವಾಹನವನ್ನು ತಪಾಸಣೆ ಮಾಡಿದಾಗ ಸುಮಾರು ಐದು ಟನ್ ಗೂ ಹೆಚ್ಚು ಗೋಮಾಂಸ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಬಳಿಕ ಆಕ್ರೋಶಗೊಂಡ ಜನರು ಲಾರಿಗೆ ಬೆಂಕಿ ಹಚ್ಚಿದರು. ಬೆಂಕಿ ಶಮನ ದಳ ಹಾಗೂ ಉಗಾರ ಸಕ್ಕರೆ ಕಾರ್ಖಾನೆ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಲಾರಿ ಸಂಪೂರ್ಣವಾಗಿ ಸುಟ್ಟುಹೋಯಿತು.

ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಗವಾಡ (Belagavi Dist) ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಐನಾಪುರ ಗ್ರಾಮ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ಇಬ್ಬರು ಡಿಎಸ್‌ಪಿ, ನಾಲ್ಕು ಸಿಪಿಐ, ಎಂಟು ಪಿಎಸ್‌ಐ ಸೇರಿ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Minor :ಮದುವೆಯ ಭರವಸೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ; ಆರೋಪಿ‌ಗೆ 30 ವರ್ಷ ಶಿಕ್ಷೆ.!
ಎರಡು ಪ್ರತ್ಯೇಕ ಪ್ರಕರಣ ದಾಖಲು :

ಪೊಲೀಸ್ ಇಲಾಖೆಯ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಿಸಲಾಗಿದೆ. ಅಕ್ರಮ ಮಾಂಸ ಸಾಗಾಣಿಕೆಗೆ ಸಂಬಂಧಿಸಿ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಪ್ರಾಣಿ ಹಿಂಸೆ ಕಾಯ್ದೆ ಅಡಿ ಇಬ್ಬರನ್ನು ಬಂಧಿಸಲಾಗಿದೆ.

ಅದೇ ರೀತಿ, ಲಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ದರೋಡೆ ಹಾಗೂ ಅಟ್ರಾಸಿಟಿ ಕಾಯ್ದೆ ಅಡಿ ಐವರನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ತೀವ್ರಗೊಳಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು Belagavi SP ಭೀಮಶಂಕರ ಗುಳೇದ ತಿಳಿಸಿದ್ದಾರೆ.

3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!

ಈ ಘಟನೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪೊಲೀಸರು ಜನರನ್ನು ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.


Husband : ಅಕ್ರಮ ಸಂಬಂಧ ಶಂಕೆ ; ಹೆಂಡತಿಯನ್ನು 11 ಬಾರಿ ಚಾಕು ಇರಿದು ಕೊಂದ ಗಂಡ.!

Husband

ಜನಸ್ಪಂದನ ನ್ಯೂಸ್‌, ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಎಲ್ಲರನ್ನು ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಪತ್ನಿ ಮೇಲೆ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿದ ಪತಿ (Husband), ಈ ದಿನದ ಬೆಳಗ್ಗೆ ಸಾರ್ವಜನಿಕರ ಎದುರಲ್ಲೇ ಆಕೆಯನ್ನು 11 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಸಂಕದಕಟ್ಟೆ ಬಸ್ ನಿಲ್ದಾಣದ ಬಳಿ ನಡೆದಿದೆ.

ಘಟನೆ ಹೇಗೆ ನಡೆದಿದೆ?

ಸೋಮವಾರ ಬೆಳಿಗ್ಗೆ ಸುಮಾರು 11.35ರ ಹೊತ್ತಿಗೆ, ಶಿರಾ ಮೂಲದ ರೇಖಾ ಎಂಬ ಮಹಿಳೆ ತನ್ನ 12 ವರ್ಷದ ಮಗಳೊಂದಿಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಈ ವೇಳೆಯಲ್ಲಿ ಆಕೆಯ ಎರಡನೇ ಪತಿ (Husband) ಯಾಗಿರುವ ಲೋಕೇಶ್ ಅಲಿಯಾಸ್ ಲೋಹಿತಾಶ್ವ ಸ್ಥಳಕ್ಕೆ ಬಂದು ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿನ ಚಕಮಕಿಯ ಮಧ್ಯೆ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಸ್ಥಳೀಯರು ಹಾಗೂ ಪೊಲೀಸರು ತಕ್ಷಣವೇ ಗಾಯಾಳುವನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿದರೂ, ತೀವ್ರ ರಕ್ತಸ್ರಾವದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ರೇಖಾ ಸಾವನ್ನಪ್ಪಿದರು. ವೈದ್ಯರ ಪ್ರಕಾರ, ಆಕೆಯ ದೇಹದ ಮೇಲೆ ಒಟ್ಟು 11 ಚಾಕು ಇರಿತದ ಗುರುತುಗಳು ಕಂಡುಬಂದಿವೆ.

ರೇಖಾ – ಲೋಕೇಶ್ ಸಂಬಂಧ :

ಪೊಲೀಸ್ ತನಿಖೆಯ ಪ್ರಕಾರ, ರೇಖಾ ಈಗಾಗಲೇ ಒಮ್ಮೆ ಮದುವೆಯಾಗಿದ್ದು, ಇಬ್ಬರು ಮಕ್ಕಳ ತಾಯಿ. ಮೊದಲ ಪತಿಯಿಂದ ವಿಚ್ಛೇದನ ಪಡೆದ ನಂತರ, ಕೆಲವು ವರ್ಷಗಳಿಂದ ಲೋಕೇಶ್‌ ಜೊತೆ ಸಂಪರ್ಕದಲ್ಲಿದ್ದರು. ಇಬ್ಬರೂ ಕೆಲ ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಲೋಕೇಶ್ ಕೂಡ ತನ್ನ ಮೊದಲ ಹೆಂಡತಿಯನ್ನು ಬಿಟ್ಟು ರೇಖಾ ಜೊತೆ ಬದುಕುತ್ತಿದ್ದ.

ಬೆಂಗಳೂರಿಗೆ ಬಂದ ನಂತರ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಖಾ, ಲೋಕೇಶ್‌ಗೆ ಕೂಡ ಅದೇ ಕಂಪನಿಯಲ್ಲಿ ಡ್ರೈವರ್ ಕೆಲಸ ಒದಗಿಸಿದ್ದರು. ಆದರೆ, ರೇಖಾ ಮತ್ತೊಬ್ಬರೊಂದಿಗೆ ಸಂಬಂಧ ಬೆಳೆಸುತ್ತಿದ್ದಾಳೆ ಎಂಬ ಶಂಕೆಯಿಂದ ಪತಿ (Husband) ಲೋಕೇಶ್ ಕೋಪಗೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದೇ ಕಾರಣದಿಂದ ಕೊಲೆ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಆರೋಪಿ ಪತಿ (Husband) ಯ ಶೋಧ :

ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಸ್ತುತ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಾಗಿ ಬೇಟೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

👉 ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸಾರ್ವಜನಿಕ ಸ್ಥಳದಲ್ಲೇ ನಡೆದ ಹಿಂಸಾಚಾರ ಜನರಲ್ಲಿ ಭಯವನ್ನುಂಟುಮಾಡಿದೆ.

Husband : ಅಕ್ರಮ ಸಂಬಂಧ ಶಂಕೆ ; ಹೆಂಡತಿಯನ್ನು 11 ಬಾರಿ ಚಾಕು ಇರಿದು ಕೊಂದ ಗಂಡ.!

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಎಲ್ಲರನ್ನು ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಪತ್ನಿ ಮೇಲೆ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿದ ಪತಿ (Husband), ಈ ದಿನದ ಬೆಳಗ್ಗೆ ಸಾರ್ವಜನಿಕರ ಎದುರಲ್ಲೇ ಆಕೆಯನ್ನು 11 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಸಂಕದಕಟ್ಟೆ ಬಸ್ ನಿಲ್ದಾಣದ ಬಳಿ ನಡೆದಿದೆ.

ಘಟನೆ ಹೇಗೆ ನಡೆದಿದೆ?

ಸೋಮವಾರ ಬೆಳಿಗ್ಗೆ ಸುಮಾರು 11.35ರ ಹೊತ್ತಿಗೆ, ಶಿರಾ ಮೂಲದ ರೇಖಾ ಎಂಬ ಮಹಿಳೆ ತನ್ನ 12 ವರ್ಷದ ಮಗಳೊಂದಿಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಈ ವೇಳೆಯಲ್ಲಿ ಆಕೆಯ ಎರಡನೇ ಪತಿ (Husband) ಯಾಗಿರುವ ಲೋಕೇಶ್ ಅಲಿಯಾಸ್ ಲೋಹಿತಾಶ್ವ ಸ್ಥಳಕ್ಕೆ ಬಂದು ವಾಗ್ವಾದಕ್ಕೆ ಇಳಿದಿದ್ದಾನೆ. ಮಾತಿನ ಚಕಮಕಿಯ ಮಧ್ಯೆ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಸ್ಥಳೀಯರು ಹಾಗೂ ಪೊಲೀಸರು ತಕ್ಷಣವೇ ಗಾಯಾಳುವನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿದರೂ, ತೀವ್ರ ರಕ್ತಸ್ರಾವದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ರೇಖಾ ಸಾವನ್ನಪ್ಪಿದರು. ವೈದ್ಯರ ಪ್ರಕಾರ, ಆಕೆಯ ದೇಹದ ಮೇಲೆ ಒಟ್ಟು 11 ಚಾಕು ಇರಿತದ ಗುರುತುಗಳು ಕಂಡುಬಂದಿವೆ.

ರೇಖಾ – ಲೋಕೇಶ್ ಸಂಬಂಧ :

ಪೊಲೀಸ್ ತನಿಖೆಯ ಪ್ರಕಾರ, ರೇಖಾ ಈಗಾಗಲೇ ಒಮ್ಮೆ ಮದುವೆಯಾಗಿದ್ದು, ಇಬ್ಬರು ಮಕ್ಕಳ ತಾಯಿ. ಮೊದಲ ಪತಿಯಿಂದ ವಿಚ್ಛೇದನ ಪಡೆದ ನಂತರ, ಕೆಲವು ವರ್ಷಗಳಿಂದ ಲೋಕೇಶ್‌ ಜೊತೆ ಸಂಪರ್ಕದಲ್ಲಿದ್ದರು. ಇಬ್ಬರೂ ಕೆಲ ತಿಂಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಲೋಕೇಶ್ ಕೂಡ ತನ್ನ ಮೊದಲ ಹೆಂಡತಿಯನ್ನು ಬಿಟ್ಟು ರೇಖಾ ಜೊತೆ ಬದುಕುತ್ತಿದ್ದ.

ಬೆಂಗಳೂರಿಗೆ ಬಂದ ನಂತರ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಖಾ, ಲೋಕೇಶ್‌ಗೆ ಕೂಡ ಅದೇ ಕಂಪನಿಯಲ್ಲಿ ಡ್ರೈವರ್ ಕೆಲಸ ಒದಗಿಸಿದ್ದರು. ಆದರೆ, ರೇಖಾ ಮತ್ತೊಬ್ಬರೊಂದಿಗೆ ಸಂಬಂಧ ಬೆಳೆಸುತ್ತಿದ್ದಾಳೆ ಎಂಬ ಶಂಕೆಯಿಂದ ಪತಿ (Husband) ಲೋಕೇಶ್ ಕೋಪಗೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದೇ ಕಾರಣದಿಂದ ಕೊಲೆ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಆರೋಪಿ ಪತಿ (Husband) ಯ ಶೋಧ :

ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಸ್ತುತ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಾಗಿ ಬೇಟೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

👉 ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸಾರ್ವಜನಿಕ ಸ್ಥಳದಲ್ಲೇ ನಡೆದ ಹಿಂಸಾಚಾರ ಜನರಲ್ಲಿ ಭಯವನ್ನುಂಟುಮಾಡಿದೆ.


8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!

Couple

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಧ್ಯಪ್ರದೇಶದ ಭೋಪಾಲದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಪ್ರೀತಿಸಿ ಬಳಿಕ ಕುಟುಂಬಸ್ಥರ ಅನುಮತಿಯೊಂದಿಗೆ ಮದುವೆಯಾಗಿದ್ದ ಯುವ ದಂಪತಿ (Couple), ಮದುವೆಯಾಗಿ ಕೇವಲ ಎಂಟು ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಗಂಡ–ಹೆಂಡತಿಯ ನಡುವಿನ ಕಲಹಕ್ಕೆ ಕಾರಣ ಅತ್ತೆ–ಮಾವ ಅಲ್ಲ, ಬದಲಿಗೆ ಇವರ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮತ್ತು ಅಕ್ವೇರಿಯಂ ಮೀನು.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ಹೇಗೆ ಶುರುವಾಯಿತು ಕಲಹ?

ಮದುವೆಯಾದ ಬಳಿಕ ಆರಂಭದಲ್ಲಿ ಎಲ್ಲವೂ ಚನ್ನಾಗಿಯೆ ಸಾಗಿತ್ತು. ಗಂಡನು ಮದುವೆಗೂ ಮುಂಚೆ ನಾಯಿ, ಮೊಲ ಮತ್ತು ಅಕ್ವೇರಿಯಂ ಮೀನುಗಳನ್ನು ಸಾಕುತ್ತಿದ್ದ. ಇತ್ತ ಹೆಂಡತಿ ತನ್ನ ಉತ್ತರ ಪ್ರದೇಶದ ಮನೆಯಲ್ಲಿ ಬೆಕ್ಕನ್ನು ಸಾಕಿಕೊಂಡಿದ್ದಳು.

ಮದುವೆಯಾದ ಬಳಿಕ ಹೆಂಡತಿ ತನ್ನ ಬೆಕ್ಕನ್ನು ಗಂಡನ ಮನೆಗೆ ಕರೆದುಕೊಂಡು ಬಂದಳು. ಇಬ್ಬರೂ ಪ್ರಾಣಿಪ್ರೇಮಿಗಳಾಗಿದ್ದರಿಂದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಆದರೆ ದಿನಗಳು ಕಳೆಯುತ್ತಿದ್ದಂತೆ ಸಮಸ್ಯೆಗಳು ಶುರುವಾಯಿತು.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.

ಪತ್ನಿಯ ಹೇಳಿಕೆಯ ಪ್ರಕಾರ, ಗಂಡನ ನಾಯಿ ತನ್ನ ಸಾಕಿದ ಬೆಕ್ಕನ್ನು ನಿರಂತರವಾಗಿ ಹೆದರಿಸುತ್ತಿದೆ, ಬೊಗಳುತ್ತದೆ ಮತ್ತು ಕೆಲವೊಮ್ಮೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಇದರಿಂದ ಬೆಕ್ಕು ಆಹಾರ ತಿನ್ನಲು ಹೆದರಿಕೊಳ್ಳುತ್ತಿದೆ. ಇದು ನನಗೆ ಮಾನಸಿಕ ಹಿಂಸೆಯಾಗಿದೆ ಎಂದು ಪತ್ನಿ ಆರೋಪಿಸಿದ್ದಾಳೆ.

ಇತ್ತ ಗಂಡ (Husband) ನ ವಾದವೇನೆಂದರೆ, ಪತ್ನಿಯ ಬೆಕ್ಕು ಸದಾ ಅಕ್ವೇರಿಯಂ ಬಳಿ ಕಾದು ಕುಳಿತು ಮೀನು ಹಿಡಿಯಲು ಪ್ರಯತ್ನಿಸುತ್ತದೆ. ಜೊತೆಗೆ ನಾಯಿ ಮೇಲೆಯೂ ದಾಳಿ ಮಾಡಲು ಮುಂದಾಗುತ್ತದೆ. ಹೀಗಾಗಿ ಮನೆತನದಲ್ಲಿ ಪ್ರತಿದಿನ ಕಲಹ, ಅಶಾಂತಿ ನಡೆಯುತ್ತಿದೆ ಎಂದು ಆತ ತಿಳಿಸಿದ್ದಾನೆ.

Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!
ದಂಪತಿ (Couple) ಗಳು ಡಿವೋರ್ಸ್‌ಗೆ ಮೊರೆ :

ಪ್ರಾಣಿಗಳ ಕಾರಣದಿಂದ ದಿನದಿಂದ ದಿನಕ್ಕೆ ಕಲಹ ತೀವ್ರಗೊಂಡ ಹಿನ್ನೆಲೆಯಲ್ಲಿ, ಇಬ್ಬರೂ ದಂಪತಿ (Couple) ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಮದುವೆಯಾಗಿ ಕೇವಲ ಎಂಟು ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದರಿಂದ, ನ್ಯಾಯಾಧೀಶರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ದಂಪತಿ (Couple) ಗಳಿಗೆ ಕೌನ್ಸಿಲಿಂಗ್ ಸೂಚನೆ :

ನ್ಯಾಯಾಧೀಶರು ಪ್ರಕರಣವನ್ನು ಆಲಿಸಿ, “ಮದುವೆಗೆ ಕೇವಲ ಎಂಟು ತಿಂಗಳು ಕಳೆದಿದೆ, ಇಂತಹ ಸಮಸ್ಯೆಗಳಿಗೆ ವಿಚ್ಛೇದನವೇ ಪರಿಹಾರವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ದಂಪತಿ (Couple) ಗೆ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮುಂದಿನ ವಿಚಾರಣೆ ಅಕ್ಟೋಬರ್‌ನಲ್ಲಿ ನಡೆಯಲಿದೆ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದು, ಸಾಕು ಪ್ರಾಣಿಗಳ ಕಾರಣದಿಂದಲೂ ಗಂಡ–ಹೆಂಡತಿ ನಡುವಿನ ಕಲಹ ವಿಚ್ಛೇದನದ ಹಂತಕ್ಕೇರಬಹುದು ಎಂಬುದನ್ನು ಸಾಬೀತುಪಡಿಸಿದೆ.

8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಧ್ಯಪ್ರದೇಶದ ಭೋಪಾಲದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ಪ್ರೀತಿಸಿ ಬಳಿಕ ಕುಟುಂಬಸ್ಥರ ಅನುಮತಿಯೊಂದಿಗೆ ಮದುವೆಯಾಗಿದ್ದ ಯುವ ದಂಪತಿ (Couple), ಮದುವೆಯಾಗಿ ಕೇವಲ ಎಂಟು ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಗಂಡ–ಹೆಂಡತಿಯ ನಡುವಿನ ಕಲಹಕ್ಕೆ ಕಾರಣ ಅತ್ತೆ–ಮಾವ ಅಲ್ಲ, ಬದಲಿಗೆ ಇವರ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮತ್ತು ಅಕ್ವೇರಿಯಂ ಮೀನು.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ಹೇಗೆ ಶುರುವಾಯಿತು ಕಲಹ?

ಮದುವೆಯಾದ ಬಳಿಕ ಆರಂಭದಲ್ಲಿ ಎಲ್ಲವೂ ಚನ್ನಾಗಿಯೆ ಸಾಗಿತ್ತು. ಗಂಡನು ಮದುವೆಗೂ ಮುಂಚೆ ನಾಯಿ, ಮೊಲ ಮತ್ತು ಅಕ್ವೇರಿಯಂ ಮೀನುಗಳನ್ನು ಸಾಕುತ್ತಿದ್ದ. ಇತ್ತ ಹೆಂಡತಿ ತನ್ನ ಉತ್ತರ ಪ್ರದೇಶದ ಮನೆಯಲ್ಲಿ ಬೆಕ್ಕನ್ನು ಸಾಕಿಕೊಂಡಿದ್ದಳು.

ಮದುವೆಯಾದ ಬಳಿಕ ಹೆಂಡತಿ ತನ್ನ ಬೆಕ್ಕನ್ನು ಗಂಡನ ಮನೆಗೆ ಕರೆದುಕೊಂಡು ಬಂದಳು. ಇಬ್ಬರೂ ಪ್ರಾಣಿಪ್ರೇಮಿಗಳಾಗಿದ್ದರಿಂದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಆದರೆ ದಿನಗಳು ಕಳೆಯುತ್ತಿದ್ದಂತೆ ಸಮಸ್ಯೆಗಳು ಶುರುವಾಯಿತು.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.

ಪತ್ನಿಯ ಹೇಳಿಕೆಯ ಪ್ರಕಾರ, ಗಂಡನ ನಾಯಿ ತನ್ನ ಸಾಕಿದ ಬೆಕ್ಕನ್ನು ನಿರಂತರವಾಗಿ ಹೆದರಿಸುತ್ತಿದೆ, ಬೊಗಳುತ್ತದೆ ಮತ್ತು ಕೆಲವೊಮ್ಮೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ಇದರಿಂದ ಬೆಕ್ಕು ಆಹಾರ ತಿನ್ನಲು ಹೆದರಿಕೊಳ್ಳುತ್ತಿದೆ. ಇದು ನನಗೆ ಮಾನಸಿಕ ಹಿಂಸೆಯಾಗಿದೆ ಎಂದು ಪತ್ನಿ ಆರೋಪಿಸಿದ್ದಾಳೆ.

ಇತ್ತ ಗಂಡನ ವಾದವೇನೆಂದರೆ, ಪತ್ನಿಯ ಬೆಕ್ಕು ಸದಾ ಅಕ್ವೇರಿಯಂ ಬಳಿ ಕಾದು ಕುಳಿತು ಮೀನು ಹಿಡಿಯಲು ಪ್ರಯತ್ನಿಸುತ್ತದೆ. ಜೊತೆಗೆ ನಾಯಿ ಮೇಲೆಯೂ ದಾಳಿ ಮಾಡಲು ಮುಂದಾಗುತ್ತದೆ. ಹೀಗಾಗಿ ಮನೆತನದಲ್ಲಿ ಪ್ರತಿದಿನ ಕಲಹ, ಅಶಾಂತಿ ನಡೆಯುತ್ತಿದೆ ಎಂದು ಆತ ತಿಳಿಸಿದ್ದಾನೆ.

Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!
ದಂಪತಿ (Couple) ಗಳು ಡಿವೋರ್ಸ್‌ಗೆ ಮೊರೆ :

ಪ್ರಾಣಿಗಳ ಕಾರಣದಿಂದ ದಿನದಿಂದ ದಿನಕ್ಕೆ ಕಲಹ ತೀವ್ರಗೊಂಡ ಹಿನ್ನೆಲೆಯಲ್ಲಿ, ಇಬ್ಬರೂ ದಂಪತಿ (Couple) ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಮದುವೆಯಾಗಿ ಕೇವಲ ಎಂಟು ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿರುವುದರಿಂದ, ನ್ಯಾಯಾಧೀಶರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ದಂಪತಿ (Couple) ಗಳಿಗೆ ಕೌನ್ಸಿಲಿಂಗ್ ಸೂಚನೆ :

ನ್ಯಾಯಾಧೀಶರು ಪ್ರಕರಣವನ್ನು ಆಲಿಸಿ, “ಮದುವೆಗೆ ಕೇವಲ ಎಂಟು ತಿಂಗಳು ಕಳೆದಿದೆ, ಇಂತಹ ಸಮಸ್ಯೆಗಳಿಗೆ ವಿಚ್ಛೇದನವೇ ಪರಿಹಾರವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ದಂಪತಿ (Couple) ಗೆ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಮುಂದಿನ ವಿಚಾರಣೆ ಅಕ್ಟೋಬರ್‌ನಲ್ಲಿ ನಡೆಯಲಿದೆ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದು, ಸಾಕು ಪ್ರಾಣಿಗಳ ಕಾರಣದಿಂದಲೂ ಗಂಡ–ಹೆಂಡತಿ ನಡುವಿನ ಕಲಹ ವಿಚ್ಛೇದನದ ಹಂತಕ್ಕೇರಬಹುದು ಎಂಬುದನ್ನು ಸಾಬೀತುಪಡಿಸಿದೆ.


Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!

Lady

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಲಾವೋಸ್‌ (Laos) ನ ಒಂದು ಹಳ್ಳಿಯಲ್ಲಿ ವಿದೇಶಿ ಪ್ರವಾಸಿ ಮಹಿಳೆ (Lady) ಯೊಬ್ಬಳಿಗೆ ಅಚ್ಚರಿಯ ಅನುಭವ ಎದುರಾಯಿತು. ಬಿಳಿ ಚರ್ಮ ಹೊಂದಿದ್ದ ಆ ಮಹಿಳೆಯನ್ನು ಕಂಡ ಸ್ಥಳೀಯ ಮಕ್ಕಳು ಭಯದಿಂದ ಜೋರಾಗಿ ಅತ್ತಿದ್ದು, ಅಲ್ಲದೆ ಕೆಲವರು ದೂರ ಓಡಿಹೋದರು.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ (Lady) ಯು ಶಾಲೆಗೆ ಭೇಟಿ ನೀಡಿದಾಗ ಮಕ್ಕಳು ತನ್ನನ್ನು ಕಂಡ ತಕ್ಷಣ ಗಾಬರಿಗೊಂಡು ಓಡಿಹೋಗುತ್ತಿರುವುದನ್ನು ನೋಡಿ ಮೊದಲಿಗೆ ಗೊಂದಲಕ್ಕೊಳಗಾದಳು.

knife : ಡಿವೋರ್ಸ್‌ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!

ಬಳಿಕ, ತನ್ನ ಬಿಳಿ ಚರ್ಮವೇ ಇದಕ್ಕೆ ಕಾರಣವೆಂದು ಅವಳು ಅರ್ಥಮಾಡಿಕೊಂಡಳು. ಹಳ್ಳಿಗಳಿಗೆ ವಿದೇಶಿ ಪ್ರವಾಸಿಗರು ಬಹಳ ವಿರಳವಾಗಿ ಬರುತ್ತಾರೆ ಎಂಬುದನ್ನು ಮಹಿಳೆ (Lady) ಯು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾಳೆ.

ಸಾಮಾಜಿಕ ಮಾಧ್ಯಮದಲ್ಲಿ ಈ ದೃಶ್ಯ ಜನರ ಗಮನ ಸೆಳೆದಿದೆ. ಕೆಲವರು ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಗಂಭೀರ ಚರ್ಚೆಗೆ ಇಳಿದರು. ಕೆಲವು ಸಂಸ್ಕೃತಿಗಳಲ್ಲಿ ಬಿಳಿ ಬಣ್ಣವನ್ನು ದೆವ್ವ ಅಥವಾ ದುಷ್ಟಶಕ್ತಿಗಳೊಂದಿಗೆ ಸಂಪರ್ಕಿಸುವ ನಂಬಿಕೆ ಇರುವುದರಿಂದ ಮಕ್ಕಳು ಹೆದರಿರಬಹುದು ಎಂದು ಬಳಕೆದಾರರೊಬ್ಬರು ಅಭಿಪ್ರಾಯಪಟ್ಟರು.

Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!

ಅದೇ ವೇಳೆ, ವಿಡಿಯೋ ಹಂಚಿಕೆ ಮಾಡುವ ವಿಧಾನವನ್ನೂ ಹಲವರು ಟೀಕಿಸಿದ್ದಾರೆ. ಮಕ್ಕಳ ಪೋಷಕರ ಅನುಮತಿಯಿಲ್ಲದೆ ಅವರನ್ನು ಚಿತ್ರೀಕರಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಹಲವು ಜನರಿಂದ ವ್ಯಕ್ತವಾಗಿದೆ. ಮಹಿಳೆ (Lady) ತನ್ನ ಅನುಭವವನ್ನು ಮಕ್ಕಳನ್ನು ಫ್ರೇಮ್‌ನಲ್ಲಿ ತೋರಿಸದೆ ಹೇಳಬಹುದಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಈ ಘಟನೆಯನ್ನು ನೋಡಿ ಕೆಲವರು “ಮಕ್ಕಳು ನಿಜವಾಗಿಯೂ ಭಯಗೊಂಡಿದ್ದರೆ, ಅವರ ಮೇಲೆ ನಗುವುದು ಅಥವಾ ಅವರನ್ನು ಹಿಂಬಾಲಿಸುವ ಬದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಇನ್ನೂ ಕೆಲವರು ಪಾಶ್ಚಾತ್ಯ ಸಂಸ್ಕೃತಿ ಮತ್ತು ಮಾಧ್ಯಮದ ಪ್ರಭಾವವನ್ನು ಉಲ್ಲೇಖಿಸಿ, ಮಕ್ಕಳು ಚಿತ್ರಗಳಲ್ಲೋ ಅಥವಾ ಮಾಧ್ಯಮದಲ್ಲೋ ಬಿಳಿ ಜನರನ್ನು ಕಂಡು ಭಿನ್ನ ಕಲ್ಪನೆ ಮಾಡಿಕೊಂಡಿರಬಹುದು ಎಂದೂ ಹೇಳಿದ್ದಾರೆ. ಈ ವಿಡಿಯೋ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮಹಿಳೆ (Lady) ಯನ್ನು ಕಂಡು ಓಡುತ್ತಿರುವ ಮಕ್ಕಳ ವಿಡಿಯೋ :

https://twitter.com/i/status/1969380890431406124

72 ವರ್ಷದ ವರ, 27 ವರ್ಷದ ವಧು ; ಹಿಂದೂ ಸಂಪ್ರದಾಯದಂತೆ Marriage ಆದ ಉಕ್ರೇನ್ ಜೋಡಿ.!

0

ಜನಸ್ಪಂದನ ನ್ಯೂ, ಜೈಪುರ/ಜೋಧ್‌ಪುರ : ರಾಜಸ್ಥಾನ ತನ್ನ ರಾಜಮನೆತನದ ಸಂಸ್ಕೃತಿ, ಅದ್ಧೂರಿ ಮದುವೆಗಳು ಹಾಗೂ ಸೆಲೆಬ್ರಿಟಿಗಳ ವಿವಾಹ (Marriage) ಸಮಾರಂಭಗಳಿಗೆ ಹೆಸರಾಗಿರುವುದು ಎಲ್ಲರಿಗೂ ಪರಿಚಿತ. ಇತ್ತೀಚೆಗೆ ಜೋಧ್‌ಪುರದಲ್ಲಿ ನಡೆದ ಒಂದು ಮದುವೆ ಎಲ್ಲರ ಗಮನ ಸೆಳೆದಿದೆ.

72 ವರ್ಷದ ಉಕ್ರೇನ್ ಮೂಲದ ಸ್ಟಾನಿಸ್ಲಾವ್ ಹಾಗೂ 27 ವರ್ಷದ ಅನ್ಹೆಲಿನಾ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಈ ಮದುವೆಯ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಅನೇಕರಿಗೆ ಇವರ ನಡುವಿನ ವಯಸ್ಸಿನ ಅಂತರ ಹುಬ್ಬೇರುವಂತೆ ಮಾಡಿದೆ.

knife : ಡಿವೋರ್ಸ್‌ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!
ನಾಲ್ಕು ವರ್ಷದ ಪ್ರೇಮ ಸಂಬಂಧಕ್ಕೆ ಮದುವೆ (Marriage) ಯ ಮುದ್ರೆ :

ಈ ಜೋಡಿ ಕಳೆದ 4 ವರ್ಷಗಳಿಂದ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಕೊನೆಗೂ ತಮ್ಮ ಸಂಬಂಧಕ್ಕೆ ಮದುವೆ (Marriage) ಯ ಮುದ್ರೆಯೊತ್ತಿ ಹೊಸ ಜೀವನವನ್ನು ಆರಂಭಿಸಿದರು. ಆರಂಭದಲ್ಲಿ ಉದಯ್‌ಪುರ ಅಥವಾ ಜೈಪುರದಲ್ಲಿ ಮದುವೆಯಾಗುವ ಯೋಜನೆ ಇದ್ದರೂ, ಅಂತಿಮವಾಗಿ ಜೋಧ್‌ಪುರದ ಐಷಾರಾಮಿ ಹೊಟೇಲ್‌ನಲ್ಲಿ ವಿವಾಹ ನೆರವೇರಿತು.

ಭಾರತೀಯ ಸಂಪ್ರದಾಯದ ಧಿರಿಸಿನಲ್ಲಿ ವಧು–ವರ :

ಮದುವೆಯ ದಿನ ವರ ಸ್ಟಾನಿಸ್ಲಾವ್ ಶೇರ್ವಾನಿ ಹಾಗೂ ಪೇಟಾ ಧರಿಸಿ ಸಂಪ್ರದಾಯಿಕ ವೇಷದಲ್ಲಿ ಮಿಂಚಿದರು. ವಧು ಅನ್ಹೆಲಿನಾ ಮಾರ್ವಾಡಿ ಸಂಪ್ರದಾಯದ ವಧುವಿನ ಧಿರಿಸು ಧರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹಳದಿ/ಅರಿಶಿಣ ಶಾಸ್ತ್ರದಿಂದ ಆರಂಭವಾದ ಸಂಭ್ರಮ, ಸಂಜೆ ನಡೆದ ಅದ್ದೂರಿ ಮದುವೆ ದಿಬ್ಬಣದೊಂದಿಗೆ ಮುಕ್ತಾಯವಾಯಿತು.

3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!
ಸಪ್ತಪದಿ–ಪಾಣಿಗ್ರಹಣದ ಸಂಪ್ರದಾಯ :

ಮದುವೆ (Marriage) ಯಲ್ಲಿ ಸಪ್ತಪದಿ, ಪಾಣಿಗ್ರಹಣ, ಹತ್ಲೆವಾ ಸೇರಿದಂತೆ ಹಿಂದೂ ಸಂಪ್ರದಾಯದ ಹಲವು ಶಾಸ್ತ್ರಗಳು ನೆರವೇರಿಸಲ್ಪಟ್ಟವು. ಸ್ಥಳೀಯರು, ಸ್ನೇಹಿತರು ಹಾಗೂ ಪರಿಚಿತರ ಸಮ್ಮುಖದಲ್ಲಿ ನಡೆದ ಈ ಮದುವೆ (Marriage) ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ನೆಟ್ಟಿಗರ ಪ್ರತಿಕ್ರಿಯೆಗಳು :

ಈ ಜೋಡಿಯ ವಯಸ್ಸಿನ ಅಂತರ (45 ವರ್ಷ) ನೆಟ್ಟಿಗರ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ.

  • ಕೆಲವರು “ಪ್ರೀತಿಗೆ ವಯಸ್ಸಿನ ಅಡ್ಡಿ ಇಲ್ಲ” ಎಂದು ಶುಭ ಹಾರೈಸಿದರು.
  • ಮತ್ತಷ್ಟು ಜನ “ಅಜ್ಜ–ಮೊಮ್ಮಗಳ ಮದುವೆ (Marriage)” ಎಂದು ವ್ಯಂಗ್ಯವಾಡಿದರು.
  • ಕೆಲವರು ವಧುವಿನ ಆಯ್ಕೆ ಬಗ್ಗೆ ಹಣದ ಲೆಕ್ಕಾಚಾರವಿದೆ ಎಂದು ಟೀಕೆ ಮಾಡಿದರು.
  • ಇನ್ನೂ ಕೆಲವರು ಇವರು ಹಿಂದೂ ಸಂಪ್ರದಾಯವನ್ನು ಅಳವಡಿಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!

👉 ಒಟ್ಟಿನಲ್ಲಿ, ಈ ಉಕ್ರೇನ್ ಜೋಡಿಯ ವಯಸ್ಸಿನ ಅಂತರವೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಇವರ ಅದ್ಧೂರಿ ಸಂಪ್ರದಾಯಿಕ ಮದುವೆ (Marriage) ಜೋಧ್‌ಪುರದ ಸಾಂಸ್ಕೃತಿಕ ವೈಭವಕ್ಕೆ ಮತ್ತೊಂದು ವಿಶೇಷ ಸೇರ್ಪಡೆಯಾಗಿದೆ.

ವಿಡಿಯೋ :

 

View this post on Instagram

 

A post shared by Mo (@mo.of.everything)


Minor :ಮದುವೆಯ ಭರವಸೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ; ಆರೋಪಿ‌ಗೆ 30 ವರ್ಷ ಶಿಕ್ಷೆ.!

Minor

ಜನಸ್ಪಂದನ ನ್ಯೂಸ್‌, ಬೆಳಗಾವಿ : ಅಪ್ರಾಪ್ತೆ (Minor) ಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬೆಳಗಾವಿಯ ಪೋಕ್ಸೊ ವಿಶೇಷ ಶೀಘ್ರಗತಿ ನ್ಯಾಯಾಲಯವು ಗಂಭೀರ ತೀರ್ಪು ನೀಡಿದೆ. ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಲಾಗಿದೆ.

ಪ್ರಕರಣದ ವಿವರ :

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು, ಯಡಹಳ್ಳಿ ಗ್ರಾಮದ ಪರಶುರಾಮ ಚಲವಾದಿ (28) ಶಿಕ್ಷೆಗೆ ಗುರಿಯಾದ ಆರೋಪಿ. 2021ರ ಸೆಪ್ಟೆಂಬರ್ 20ರಂದು ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅಪ್ರಾಪ್ತೆ (Minor) ಹುಡುಗಿ ಕಾಣೆಯಾಗಿದ್ದಳು.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.

ಬಳಿಕ, ಆರೋಪಿ ಅಪ್ರಾಪ್ತೆ (Minor) ಯನ್ನು ಪ್ರೀತಿಸುತ್ತಿದ್ದ ಹಾಗೂ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆಂದು ತನಿಖೆಯಲ್ಲಿ ಬಹಿರಂಗವಾಯಿತು.

ಇಬ್ಬರೂ ತಮ್ಮಷ್ಟಕ್ಕೆ ತಾವೇ ದೇವರ ಗುಡಿಯ ಮುಂದೆ ಮದುವೆಯಾಗಿರುವಂತೆ ನಾಟಕವಾಡಿ, ನಂತರ ಗಂಡ-ಹೆಂಡತಿ ರೀತಿಯಲ್ಲಿ ವಾಸ ಮಾಡುತ್ತಿದ್ದರು. ಈ ಅವಧಿಯಲ್ಲಿ ಆರೋಪಿ ಅಪ್ರಾಪ್ತೆ (Minor) ಯ ಮೇಲೆ ಹಲವಾರು ಬಾರಿ ದೈಹಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪ್ರಕರಣದಲ್ಲಿ ಸಾಬೀತಾಗಿದೆ.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.
ಕಾನೂನು ಕ್ರಮ :

ಘಟನೆ ನಂತರ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಎಸ್.ಪಿ. ಉನ್ನದ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ನಂತರ ರಾಯಬಾಗ ಸಿಪಿಐ ಎಂ.ಎಂ. ತಹಶೀಲ್ದಾರ ಆರೋಪದ ಕುರಿತು ಹೆಚ್ಚಿನ ತನಿಖೆ ನಡೆಸಿ, ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಸತ್ರ ಹಾಗೂ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದರು.

ನ್ಯಾಯಾಲಯದ ತೀರ್ಪು :

ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಆರೋಪಿಯ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದರು. ಜೊತೆಗೆ, ರೂ.10,000 ದಂಡ ಪಾವತಿಸಲು ಆದೇಶಿಸಿದರು. ದಂಡದ ಮೊತ್ತ ಪಾವತಿಸದಿದ್ದರೆ ಆರೋಪಿಗೆ ಇನ್ನೂ ಒಂದು ವರ್ಷ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!

ಇದರ ಜೊತೆಗೆ, ನೊಂದ ಅಪ್ರಾಪ್ತೆ (Minor) ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರೂ.4 ಲಕ್ಷ ಪರಿಹಾರ ಧನ ನೀಡಲು ನ್ಯಾಯಾಲಯ ಸೂಚನೆ ನೀಡಿದೆ.

ಸರಕಾರದ ಪರ ವಾದ :

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.

👉 ಈ ತೀರ್ಪು ಅಪ್ರಾಪ್ತೆ (Minor) ಯರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಾನೂನು ಎಷ್ಟು ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬುದಕ್ಕೆ ಪ್ರಮುಖ ಉದಾಹರಣೆಯಾಗಿದೆ.

POCSO refers to the Protection of Children from Sexual Offences Act, 2012, a special law in India that protects children from sexual assault, harassment, and pornography by providing for severe punishments for offenders and establishing child-friendly legal procedures.

The Act aims to create a comprehensive framework for dealing with all aspects of child sexual abuse, including gender-neutral protection for all minor children and compensation for victims, and was further strengthened with more stringent punishments through a 2019 amendment. 

Minor :ಮದುವೆಯ ಭರವಸೆ ಅಪ್ರಾಪ್ತೆಯ ಮೇಲೆ ದೌರ್ಜನ್ಯ ; ಆರೋಪಿ‌ಗೆ 30 ವರ್ಷ ಶಿಕ್ಷೆ.!

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಅಪ್ರಾಪ್ತೆ (Minor) ಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬೆಳಗಾವಿಯ ಪೋಕ್ಸೊ ವಿಶೇಷ ಶೀಘ್ರಗತಿ ನ್ಯಾಯಾಲಯವು ಗಂಭೀರ ತೀರ್ಪು ನೀಡಿದೆ. ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಲಾಗಿದೆ.

ಪ್ರಕರಣದ ವಿವರ :

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕು, ಯಡಹಳ್ಳಿ ಗ್ರಾಮದ ಪರಶುರಾಮ ಚಲವಾದಿ (28) ಶಿಕ್ಷೆಗೆ ಗುರಿಯಾದ ಆರೋಪಿ. 2021ರ ಸೆಪ್ಟೆಂಬರ್ 20ರಂದು ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಅಪ್ರಾಪ್ತೆ (Minor) ಹುಡುಗಿ ಕಾಣೆಯಾಗಿದ್ದಳು.

Eye : ಕಣ್ಣುಗಳಲ್ಲಿ ಈ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆ.! ಇದು ಮೂತ್ರಪಿಂಡ ಹಾನಿಯ ಸೂಚನೆ ಇರಬಹುದು.

ಬಳಿಕ, ಆರೋಪಿ ಅಪ್ರಾಪ್ತೆ (Minor) ಯನ್ನು ಪ್ರೀತಿಸುತ್ತಿದ್ದ ಹಾಗೂ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆಂದು ತನಿಖೆಯಲ್ಲಿ ಬಹಿರಂಗವಾಯಿತು.

ಇಬ್ಬರೂ ತಮ್ಮಷ್ಟಕ್ಕೆ ತಾವೇ ದೇವರ ಗುಡಿಯ ಮುಂದೆ ಮದುವೆಯಾಗಿರುವಂತೆ ನಾಟಕವಾಡಿ, ನಂತರ ಗಂಡ-ಹೆಂಡತಿ ರೀತಿಯಲ್ಲಿ ವಾಸ ಮಾಡುತ್ತಿದ್ದರು. ಈ ಅವಧಿಯಲ್ಲಿ ಆರೋಪಿ ಅಪ್ರಾಪ್ತೆ (Minor) ಯ ಮೇಲೆ ಹಲವಾರು ಬಾರಿ ದೈಹಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪ್ರಕರಣದಲ್ಲಿ ಸಾಬೀತಾಗಿದೆ.

ಕಾನೂನು ಕ್ರಮ :

ಘಟನೆ ನಂತರ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಎಸ್.ಪಿ. ಉನ್ನದ ಅವರು ಪ್ರಕರಣ ದಾಖಲಿಸಿ ತನಿಖೆ ನಡೆಸಿದರು. ನಂತರ ರಾಯಬಾಗ ಸಿಪಿಐ ಎಂ.ಎಂ. ತಹಶೀಲ್ದಾರ ಆರೋಪದ ಕುರಿತು ಹೆಚ್ಚಿನ ತನಿಖೆ ನಡೆಸಿ, ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಸತ್ರ ಹಾಗೂ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದರು.

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!
ನ್ಯಾಯಾಲಯದ ತೀರ್ಪು :

ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಆರೋಪಿಯ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದರು. ಜೊತೆಗೆ, ರೂ.10,000 ದಂಡ ಪಾವತಿಸಲು ಆದೇಶಿಸಿದರು. ದಂಡದ ಮೊತ್ತ ಪಾವತಿಸದಿದ್ದರೆ ಆರೋಪಿಗೆ ಇನ್ನೂ ಒಂದು ವರ್ಷ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.

ಇದರ ಜೊತೆಗೆ, ನೊಂದ ಅಪ್ರಾಪ್ತೆ (Minor) ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರೂ.4 ಲಕ್ಷ ಪರಿಹಾರ ಧನ ನೀಡಲು ನ್ಯಾಯಾಲಯ ಸೂಚನೆ ನೀಡಿದೆ.

ಸರಕಾರದ ಪರ ವಾದ :

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.

👉 ಈ ತೀರ್ಪು ಅಪ್ರಾಪ್ತೆ (Minor) ಯರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಾನೂನು ಎಷ್ಟು ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬುದಕ್ಕೆ ಪ್ರಮುಖ ಉದಾಹರಣೆಯಾಗಿದೆ.

POCSO refers to the Protection of Children from Sexual Offences Act, 2012, a special law in India that protects children from sexual assault, harassment, and pornography by providing for severe punishments for offenders and establishing child-friendly legal procedures.

The Act aims to create a comprehensive framework for dealing with all aspects of child sexual abuse, including gender-neutral protection for all minor children and compensation for victims, and was further strengthened with more stringent punishments through a 2019 amendment. 


ಹೆಚ್ಚಿದ Uric ಆಮ್ಲದಿಂದ ಬಳಲುತ್ತಿದ್ದೀರಾ? ಈ ಸೂಪರ್ ಫುಡ್‌ ಸೇವಿಸಿ.!

Uric Acid

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಮತ್ತು ಒತ್ತಡದ ಕಾರಣ ಅನೇಕರು ಹೆಚ್ಚಿನ ಯೂರಿಕ್ ಆಮ್ಲ (Uric Acid) ದ ಸಮಸ್ಯೆ ಎದುರಿಸುತ್ತಿದ್ದಾರೆ.

ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದಾಗ, ಅದು ಕಿಡ್ನಿ ಸಮಸ್ಯೆ, ಸಂಧಿವಾತದ ನೋವು ಹಾಗೂ ಇತರ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಯೂರಿಕ್ ಆಮ್ಲ (Uric Acid) ವನ್ನು ನಿಯಂತ್ರಿಸುವುದು ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯ.

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!
ವಿಟಮಿನ್ ‘ಸಿ’ಯಲ್ಲಿ ಸಮೃದ್ಧ ಹಣ್ಣುಗಳು :

ವಿಟಮಿನ್ ‘ಸಿ’ ದೇಹದಿಂದ ಯೂರಿಕ್ ಆಮ್ಲ (Uric Acid) ವನ್ನು ಹೊರಹಾಕುವಲ್ಲಿ ಸಹಾಯಕ. ಕಿತ್ತಳೆ, ಸಿಹಿ ನಿಂಬೆಹಣ್ಣು, ಟ್ಯಾಂಗರಿನ್, ಅನಾನಸ್ ಮತ್ತು ಕಿವಿ ಹಣ್ಣುಗಳು ಯೂರಿಕ್ ಆಮ್ಲದ ಮಟ್ಟ ಕಡಿಮೆ ಮಾಡಲು ಪರಿಣಾಮಕಾರಿ. ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ.

ಆಪಲ್ ಸೈಡರ್ ವಿನೆಗರ್ :

ಆಪಲ್ ಸೈಡರ್ ವಿನೆಗರ್ ಯೂರಿಕ್ ಆಮ್ಲ (Uric Acid) ನಿವಾರಣೆಗೆ ಜನಪ್ರಿಯ ಮನೆಮದ್ದು. ಒಂದು ಗ್ಲಾಸ್ ಉಗುರುಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯುವುದು ಉತ್ತಮ. ಆದರೆ, ಇದನ್ನು ನಿಯಮಿತವಾಗಿ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.

Panipuri ಕಡಿಮೆ ಕೊಟ್ಟ ಕೋಪದಲ್ಲಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ ; ಪೊಲೀಸರ ಸಂಧಾನ.!
ಒಮೆಗಾ-3 ಕೊಬ್ಬಿನಾಮ್ಲಗಳು :

ಒಮೆಗಾ-3 ಕೊಬ್ಬಿನಾಮ್ಲಗಳು ಯೂರಿಕ್ ಆಮ್ಲ (Uric Acid) ದ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ಅಗಸೆ ಬೀಜ, ಚಿಯಾ ಬೀಜ ಮತ್ತು ವಾಲ್ನಟ್ ಮುಂತಾದ ಆಹಾರಗಳಲ್ಲಿ ಒಮೆಗಾ-3 ಸಮೃದ್ಧವಾಗಿರುತ್ತದೆ. ಇವುಗಳನ್ನು ಆಹಾರದಲ್ಲಿ ಸೇರಿಸುವುದು ಸಂಧಿವಾತದ ಸಮಸ್ಯೆ ಕಡಿಮೆ ಮಾಡುವುದಲ್ಲದೆ ಹೃದಯ ಆರೋಗ್ಯಕ್ಕೂ ಸಹಾಯಕ.

ನೀರಿನ ಮಹತ್ವ :

ದಿನಪೂರ್ತಿ ಸಮರ್ಪಕ ಪ್ರಮಾಣದ ನೀರು ಸೇವನೆ ಕೂಡ ಅತ್ಯಂತ ಮುಖ್ಯ. ಸಾಕಷ್ಟು ನೀರು ಕುಡಿಯುವುದರಿಂದ ದೇಹದ ವಿಷಕಾರಿ ಅಂಶಗಳು ಹೊರಗೆ ಹೋಗಿ, ಯೂರಿಕ್ ಆಮ್ಲ (Uric Acid) ಕಡಿಮೆಯಾಗಲು ಸಹಕಾರಿಯಾಗುತ್ತದೆ.

3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!
ಜೀವನಶೈಲಿ ಬದಲಾವಣೆ ಅಗತ್ಯ :

ಆಹಾರ ಮಾತ್ರವಲ್ಲ, ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ ಮತ್ತು ಒತ್ತಡ ನಿಯಂತ್ರಣ ಕೂಡ ಯೂರಿಕ್ ಆಮ್ಲದ ಸಮಸ್ಯೆ ನಿವಾರಣೆಗೆ ಅವಶ್ಯಕ. ಫಾಸ್ಟ್‌ಫುಡ್, ಅತಿಯಾದ ಮದ್ಯಪಾನ ಹಾಗೂ ಹೆಚ್ಚು ಪ್ಯೂರಿನ್ ಅಂಶ ಇರುವ ಆಹಾರಗಳನ್ನು (ಹೆಚ್ಚು ಕೆಂಪು ಮಾಂಸ, ಸಮುದ್ರ ಆಹಾರ) ತೊರೆಯುವುದು ಉತ್ತಮ.

👉 ಯೂರಿಕ್ ಆಮ್ಲ ನಿಯಂತ್ರಣಕ್ಕೆ ಈ ಆಹಾರ ಹಾಗೂ ಪಾನೀಯಗಳನ್ನು ಸರಿಯಾದ ಪ್ರಮಾಣದಲ್ಲಿ ಆಹಾರ ಯೋಜನೆಯಲ್ಲಿ ಸೇರಿಸಿಕೊಳ್ಳಿ. ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳಬಹುದು.

Disclaimer : This article is based on reports and information available on the internet. Janaspandhan News is not affiliated with it and is not responsible for it.

ಹೆಚ್ಚಿದ Uric ಆಮ್ಲದಿಂದ ಬಳಲುತ್ತಿದ್ದೀರಾ? ಈ ಸೂಪರ್ ಫುಡ್‌ ಸೇವಿಸಿ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಮತ್ತು ಒತ್ತಡದ ಕಾರಣ ಅನೇಕರು ಹೆಚ್ಚಿನ ಯೂರಿಕ್ ಆಮ್ಲ (Uric Acid) ದ ಸಮಸ್ಯೆ ಎದುರಿಸುತ್ತಿದ್ದಾರೆ.

ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದಾಗ, ಅದು ಕಿಡ್ನಿ ಸಮಸ್ಯೆ, ಸಂಧಿವಾತದ ನೋವು ಹಾಗೂ ಇತರ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಯೂರಿಕ್ ಆಮ್ಲ (Uric Acid) ವನ್ನು ನಿಯಂತ್ರಿಸುವುದು ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯ.

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!
ವಿಟಮಿನ್ ‘ಸಿ’ಯಲ್ಲಿ ಸಮೃದ್ಧ ಹಣ್ಣುಗಳು :

ವಿಟಮಿನ್ ‘ಸಿ’ ದೇಹದಿಂದ ಯೂರಿಕ್ ಆಮ್ಲ (Uric Acid) ವನ್ನು ಹೊರಹಾಕುವಲ್ಲಿ ಸಹಾಯಕ. ಕಿತ್ತಳೆ, ಸಿಹಿ ನಿಂಬೆಹಣ್ಣು, ಟ್ಯಾಂಗರಿನ್, ಅನಾನಸ್ ಮತ್ತು ಕಿವಿ ಹಣ್ಣುಗಳು ಯೂರಿಕ್ ಆಮ್ಲದ ಮಟ್ಟ ಕಡಿಮೆ ಮಾಡಲು ಪರಿಣಾಮಕಾರಿ. ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ.

ಆಪಲ್ ಸೈಡರ್ ವಿನೆಗರ್ :

ಆಪಲ್ ಸೈಡರ್ ವಿನೆಗರ್ ಯೂರಿಕ್ ಆಮ್ಲ (Uric Acid) ನಿವಾರಣೆಗೆ ಜನಪ್ರಿಯ ಮನೆಮದ್ದು. ಒಂದು ಗ್ಲಾಸ್ ಉಗುರುಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯುವುದು ಉತ್ತಮ. ಆದರೆ, ಇದನ್ನು ನಿಯಮಿತವಾಗಿ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.

Panipuri ಕಡಿಮೆ ಕೊಟ್ಟ ಕೋಪದಲ್ಲಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ ; ಪೊಲೀಸರ ಸಂಧಾನ.!
ಒಮೆಗಾ-3 ಕೊಬ್ಬಿನಾಮ್ಲಗಳು :

ಒಮೆಗಾ-3 ಕೊಬ್ಬಿನಾಮ್ಲಗಳು ಯೂರಿಕ್ ಆಮ್ಲ (Uric Acid) ದ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ಅಗಸೆ ಬೀಜ, ಚಿಯಾ ಬೀಜ ಮತ್ತು ವಾಲ್ನಟ್ ಮುಂತಾದ ಆಹಾರಗಳಲ್ಲಿ ಒಮೆಗಾ-3 ಸಮೃದ್ಧವಾಗಿರುತ್ತದೆ. ಇವುಗಳನ್ನು ಆಹಾರದಲ್ಲಿ ಸೇರಿಸುವುದು ಸಂಧಿವಾತದ ಸಮಸ್ಯೆ ಕಡಿಮೆ ಮಾಡುವುದಲ್ಲದೆ ಹೃದಯ ಆರೋಗ್ಯಕ್ಕೂ ಸಹಾಯಕ.

ನೀರಿನ ಮಹತ್ವ :

ದಿನಪೂರ್ತಿ ಸಮರ್ಪಕ ಪ್ರಮಾಣದ ನೀರು ಸೇವನೆ ಕೂಡ ಅತ್ಯಂತ ಮುಖ್ಯ. ಸಾಕಷ್ಟು ನೀರು ಕುಡಿಯುವುದರಿಂದ ದೇಹದ ವಿಷಕಾರಿ ಅಂಶಗಳು ಹೊರಗೆ ಹೋಗಿ, ಯೂರಿಕ್ ಆಮ್ಲ (Uric Acid) ಕಡಿಮೆಯಾಗಲು ಸಹಕಾರಿಯಾಗುತ್ತದೆ.

3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!
ಜೀವನಶೈಲಿ ಬದಲಾವಣೆ ಅಗತ್ಯ :

ಆಹಾರ ಮಾತ್ರವಲ್ಲ, ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ ಮತ್ತು ಒತ್ತಡ ನಿಯಂತ್ರಣ ಕೂಡ ಯೂರಿಕ್ ಆಮ್ಲದ ಸಮಸ್ಯೆ ನಿವಾರಣೆಗೆ ಅವಶ್ಯಕ. ಫಾಸ್ಟ್‌ಫುಡ್, ಅತಿಯಾದ ಮದ್ಯಪಾನ ಹಾಗೂ ಹೆಚ್ಚು ಪ್ಯೂರಿನ್ ಅಂಶ ಇರುವ ಆಹಾರಗಳನ್ನು (ಹೆಚ್ಚು ಕೆಂಪು ಮಾಂಸ, ಸಮುದ್ರ ಆಹಾರ) ತೊರೆಯುವುದು ಉತ್ತಮ.

👉 ಯೂರಿಕ್ ಆಮ್ಲ ನಿಯಂತ್ರಣಕ್ಕೆ ಈ ಆಹಾರ ಹಾಗೂ ಪಾನೀಯಗಳನ್ನು ಸರಿಯಾದ ಪ್ರಮಾಣದಲ್ಲಿ ಆಹಾರ ಯೋಜನೆಯಲ್ಲಿ ಸೇರಿಸಿಕೊಳ್ಳಿ. ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳಬಹುದು.

Disclaimer : This article is based on reports and information available on the internet. Janaspandhan News is not affiliated with it and is not responsible for it.


Mosquito : “ಸಾಯಿಸಿದ ನಂತರ ಅಂಟಿಸಿ ನಂಬರ್ ಹಾಕುತ್ತಿರುವ ವ್ಯಕ್ತಿ ; ವಿಚಿತ್ರ ಹವ್ಯಾಸದ ವಿಡಿಯೋ ವೈರಲ್”.!

Mosquito

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜಗತ್ತಿನಲ್ಲಿ ಜನರ ಸ್ವಭಾವ ಮತ್ತು ಹವ್ಯಾಸಗಳು ವಿಭಿನ್ನವಾಗಿರುತ್ತವೆ. ಕೆಲವರಿಗೆ ಪುಸ್ತಕ ಓದುವುದು, ಸಿನಿಮಾ ನೋಡುವುದು, ಕ್ರಾಫ್ಟ್ ಮಾಡುವುದು ಇಷ್ಟವಾಗಿದೆಯಾದರೆ, ಕೆಲವರು ರೀಲ್ಸ್ ಮಾಡುವುದು ಅಥವಾ ಸಂಗೀತದಲ್ಲಿ ತಲ್ಲೀನರಾಗುವುದು ಇಷ್ಟಪಡುತ್ತಾರೆ.

ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿಯ ಹವ್ಯಾಸ ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಅವನ ಹವ್ಯಾಸವೇನೆಂದರೆ, ಸಾಯಿಸಿದ ಸೊಳ್ಳೆ (Mosquito) ಗಳನ್ನು ಸಂಗ್ರಹಿಸುವುದು.!

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
ಸೊಳ್ಳೆ (Mosquito) ಗಳನ್ನು ಸಾಯಿಸಿ ಸಂಗ್ರಹಿಸುವ ಹವ್ಯಾಸ :

ಫೇಸ್‌ಬುಕ್‌ನ Bright Life ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನು ತನ್ನನ್ನು ಕಚ್ಚಿದ ಸೊಳ್ಳೆ (Mosquito) ಗಳನ್ನು ಸಾಯಿಸಿ ಒಂದು ವಿಶೇಷ ರೀತಿಯಲ್ಲಿ ಸಂಗ್ರಹಿಸುತ್ತಿರುವುದು ಕಾಣಬಹುದು.

ಆತ ಸೊಳ್ಳೆ (Mosquito) ಯನ್ನು ಹಿಡಿದು ಡಬ್ಬಿಯೊಳಗೆ ಹಾಕಿ, ಶಾಕ್‌ ಟ್ರೀಟ್ಮೆಂಟ್ ನೀಡುವ ಮೂಲಕ ಸಾಯಿಸುತ್ತಾನೆ. ನಂತರ ಬಿಳಿ ಹಾಳೆಯ ಮೇಲೆ ಅಂಟಿಸಿ, ಅದರ ಸಾಯಿಸಿದ ದಿನಾಂಕ ಹಾಗೂ ಸಮಯವನ್ನು ಬರೆದು ಸಂಗ್ರಹಿಸುತ್ತಾನೆ.

“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ :

ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ವೀಕ್ಷಿಸಿ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.

  • ಒಬ್ಬ ಬಳಕೆದಾರ, “ಸೊಳ್ಳೆ (Mosquito) ಕೂಡ ದೇವರ ಸೃಷ್ಟಿಯೇ, ಅದು ತನ್ನ ಏಳು ದಿನಗಳ ಜೀವನದಲ್ಲಿ ಒಮ್ಮೆ ರಕ್ತ ಕುಡಿಯುವುದು ಸಹಜ. ಆದರೂ ನಾನು ದಿನಕ್ಕೆ ಕನಿಷ್ಠ 20 ಸೊಳ್ಳೆ ಹೊಡೆದು ಸಾಯಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
  • ಇನ್ನೊಬ್ಬರು ವ್ಯಂಗ್ಯವಾಗಿ, “ಈತನಿಗೆ ಬೇರೆ ಕೆಲಸವಿಲ್ಲವೇ? ಸೊಳ್ಳೆಗಳನ್ನು ಸಾಯಿಸಿ ಹಾಳೆಗೆ ಅಂಟಿಸಿ ಮರಣ ದಿನಾಂಕ ಬರೆಯೋದು ಒಂದು ವಿಭಿನ್ನ ಅಂತ್ಯಸಂಸ್ಕಾರದಂತೆ ಇದೆ” ಎಂದು ಬರೆದಿದ್ದಾರೆ.
  • ಮತ್ತೊಬ್ಬರು, “ಇವನೊಬ್ಬ ಮಾನಸಿಕ ಸಮಸ್ಯೆಗೊಳಗಾದವನಿರಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ :

BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ನೆಟ್ಟಿಗರ ಚರ್ಚೆಗೆ ಕಾರಣ :

ಸಾಧಾರಣವಾಗಿ ಜನರು ಹವ್ಯಾಸಗಳ ಮೂಲಕ ಮನರಂಜನೆ ಪಡೆಯುತ್ತಾರೆ. ಆದರೆ ಈ ವ್ಯಕ್ತಿಯಂತಹ ವಿಚಿತ್ರ ಹವ್ಯಾಸಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಕುತೂಹಲ ಹುಟ್ಟಿಸುತ್ತವೆ. ಕೆಲವರಿಗೆ ಇದು ನಗುವಿಗೆ ಕಾರಣವಾದರೆ, ಕೆಲವರಿಗೆ ಆಕ್ರೋಶಕ್ಕೂ ಕಾರಣವಾಗಿದೆ.

3ನೇ ಮಹಡಿಯಿಂದ ಬಿದ್ದು ಪವಾಡ ಸದೃಶವಾಗಿ ಪಾರಾದ Person.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಾಜಸ್ಥಾನದ ಜೋಧ್‌ಪುರದಲ್ಲಿ ಸಂಭವಿಸಿದ ಒಂದು ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂರನೇ ಮಹಡಿಯಿಂದ ಬಿದ್ದ ವ್ಯಕ್ತಿ (Person) ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಬಿದ್ದ ರಭಸಕ್ಕೆ ಅವನ ಪಾದದ ಮೂಳೆ ಮುರಿದಿದೆ.

ಹೇಗೆ ನಡೆದಿದೆ ಘಟನೆ?

ಸಂಜೆ 5:50ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ದಾಖಲಾಗಿದೆ. 25 ವರ್ಷದ ನಜೀರ್ ಎಂಬ ವ್ಯಕ್ತಿ (Person) ವೃತ್ತಿಯಿಂದ ಬಟ್ಟೆ ವ್ಯಾಪಾರಿ. ಘಟನೆ ನಡೆದ ಸಮಯದಲ್ಲಿ ಆತ ತನ್ನ ಅಂಗಡಿಯ ಗೋಡೌನ್‌ನಂತೆ ಬಳಸುತ್ತಿದ್ದ ಬಾಲ್ಕನಿಯಲ್ಲಿ ಬಟ್ಟೆಗಳ ಬಂಡಲ್ ಪರಿಶೀಲಿಸುತ್ತಿದ್ದ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಅಚಾನಕ್ ಸಮತೋಲನ ತಪ್ಪಿದ ನಜೀರ್ ನೇರವಾಗಿ ಮೂರನೇ ಮಹಡಿಯಿಂದ ಕೆಳಗೆ ಬಿದ್ದ. ಆದರೆ ಸುದೈವಶಾತ್ ನೆಲಕ್ಕೆ ಬದಲಾಗಿ, ಅಲ್ಲಿ ನಿಲ್ಲಿಸಲಾಗಿದ್ದ ಸ್ಕೂಟಿಯ ಮೇಲೆ ಬಿದ್ದ ಕಾರಣ ವ್ಯಕ್ತಿ (Person) ಪವಾಡ‌ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಿದ್ದು ಗಾಯಗೊಂಡ ಕೂಡಲೇ ಸ್ಥಳೀಯರು ವ್ಯಕ್ತಿ (Person) ಗೆ ಸಹಾಯಕ್ಕೆ ಧಾವಿಸಿದರು.

ಸಿಸಿಟಿವಿಯಲ್ಲಿ ಸೆರೆಹಿಡಿದ ದೃಶ್ಯ‌ :

ವೈರಲ್ ಆಗಿರುವ 10 ಸೆಕೆಂಡುಗಳ ಸಿಸಿಟಿವಿ ದೃಶ್ಯದಲ್ಲಿ, ನಜೀರ್ ಕೈಯಲ್ಲಿ ನೀರಿನ ಬಾಟಲಿಯೊಂದಿಗೆ ಹಿಂದಕ್ಕೆ ನಡೆದುಕೊಂಡು ಹೋಗುತ್ತಿರುವುದು ಕಾಣುತ್ತದೆ. ಕೆಲವೇ ಕ್ಷಣಗಳಲ್ಲಿ ಆತ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದಾನೆ. ಬಿದ್ದಾಗ ಭಾರೀ ಶಬ್ದ ಉಂಟಾಗಿ ಅಲ್ಲಿ ಇದ್ದವರು ಬೆಚ್ಚಿಬಿದ್ದರು.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”
ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರು ಹಳೆಯ ಕಟ್ಟಡಗಳ ಸುರಕ್ಷತೆ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದಾರೆ. ಸುರಕ್ಷತಾ ಗ್ರಿಲ್ ಇಲ್ಲದ ಅಪಾಯಕಾರಿ ಬಾಲ್ಕನಿಯನ್ನು ನಿರ್ಮಿಸಿರುವ ಬಿಲ್ಡರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

“ಇದು ಭ್ರಷ್ಟಾಚಾರದ ಪರಿಣಾಮ. ಕಟ್ಟಡದಲ್ಲಿ ಸುರಕ್ಷತೆ ಕಡೆಗಣಿಸಿದ ಕಾರಣ ಈ ಘಟನೆ ನಡೆದಿದೆ” ಎಂದು ಒಬ್ಬ ಬಳಕೆದಾರರು ಕೋಪ ವ್ಯಕ್ತಪಡಿಸಿದರೆ, “ಬಟ್ಟೆ ಬಂಡಲ್‌ಗಳನ್ನು ಲೋಡ್ ಮಾಡಲು ಉದ್ದೇಶಪೂರ್ವಕವಾಗಿ ಬಾಲ್ಕನಿಯನ್ನು ತೆರೆದಿಟ್ಟಿರಬಹುದು” ಎಂದು ಇನ್ನೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.

knife : ಡಿವೋರ್ಸ್‌ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!
ಸುರಕ್ಷತಾ ಕ್ರಮಗಳ ಅಗತ್ಯ :

ಈ ಘಟನೆ ಹಳೆಯ ಕಟ್ಟಡಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಜನರ ಜೀವ ಭದ್ರತೆಗೆ ಕಟ್ಟಡ ನಿರ್ಮಾಣದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಮೂರನೇ ಮಹಡಿಯಿಂದ ಬಿದ್ದ ವ್ಯಕ್ತಿ (Person) ಯ ವಿಡಿಯೋ :

https://twitter.com/i/status/1968653567624909150


Panipuri ಕಡಿಮೆ ಕೊಟ್ಟ ಕೋಪದಲ್ಲಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆ ; ಪೊಲೀಸರ ಸಂಧಾನ.!

Panipuri

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಜನರು ಬೇಡಿಕೆ ಈಡೇರಿಸಲು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಗುಜರಾತ್‌ನ ವಡೋದರ ನಗರದಲ್ಲಿ ನಡೆದ ಘಟನೆಯೊಂದು ಅಚ್ಚರಿ ಮೂಡಿಸಿದೆ.

ಬೀದಿ ಆಹಾರ ಮಾರಾಟಗಾರ ಗೋಲ್ಗಪ್ಪ/ಪಾನಿಪುರಿ (Panipuri) ಯಲ್ಲಿ ಕಡಿಮೆ ಪೂರಿ ನೀಡಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆ ತಡೆ ನಡೆಸಿದ್ದಾರೆ!

ಸುರ್‌ಸಾಗರ್ ಸರೋವರ ಪ್ರದೇಶದಲ್ಲಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಪಾನಿಪುರಿ (Panipuri) ಮಾರಾಟಗಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಾಣಿಸಿದೆ.

Snake : “40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು ; ಕೊನೆಗೂ ಬಲೆಗೆ”

ಆಕೆಯ ಆರೋಪದ ಪ್ರಕಾರ, 20 ರೂ.ಗೆ ಆರು ಪೂರಿ ಸಿಗಬೇಕಿದ್ದಲ್ಲಿ ಕೇವಲ ನಾಲ್ಕು ಪೂರಿ ಮಾತ್ರ ನೀಡಿದ್ದಾರೆ ಎಂದು ಆಕ್ರೋಶಗೊಂಡಿದ್ದಾಳೆ.

ಕೋಪಗೊಂಡ ಮಹಿಳೆ ನೇರವಾಗಿ ರಸ್ತೆಯ ಮಧ್ಯದಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು, ತನ್ನ ಬೇಡಿಕೆ ಈಡೇರಿಸುವವರೆಗೆ ಎದ್ದು ನಿಲ್ಲುವುದಿಲ್ಲ ಎಂದು ಹಠ ಹಿಡಿದಿದ್ದಾಳೆ.

ಪರಿಣಾಮವಾಗಿ, ಆ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ಸ್ಥಳೀಯರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಮಹಿಳೆ ಒಪ್ಪದೇ ಹಠ ಹಿಡಿದಿದ್ದಾಳೆ.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ರಸ್ತೆ ಬದಿಗೆ ಕರೆದುಕೊಂಡು ಹೋದರು. ಈ ವೇಳೆ ಮಹಿಳೆ ಕಣ್ಣೀರು ಸುರಿಸುತ್ತಾ “ವ್ಯಾಪಾರದಲ್ಲಿ ನ್ಯಾಯ ಇರಬೇಕು” ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾಳೆ.

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!

ಅಂತಿಮವಾಗಿ, ಪೊಲೀಸರು ಮಹಿಳೆಗೆ ಮತ್ತೊಮ್ಮೆ ಗೋಲ್ಗಪ್ಪ (Panipuri) ತಂದುಕೊಟ್ಟ ನಂತರ ಘಟನೆಗೆ ತೆರೆ ಬಿದ್ದಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಗೋಲ್ಗಪ್ಪ (Panipuri) ಗಾಗಿ ರಸ್ತೆ ಮಧ್ಯೆ ಅಳುತ್ತಾ ಕೂತ ಮಹಿಳೆಯ ವಿಡಿಯೋ :

https://twitter.com/i/status/1968959495142252973

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಲಾವೋಸ್‌ (Laos) ನ ಒಂದು ಹಳ್ಳಿಯಲ್ಲಿ ವಿದೇಶಿ ಪ್ರವಾಸಿ ಮಹಿಳೆ (Lady) ಯೊಬ್ಬಳಿಗೆ ಅಚ್ಚರಿಯ ಅನುಭವ ಎದುರಾಯಿತು. ಬಿಳಿ ಚರ್ಮ ಹೊಂದಿದ್ದ ಆ ಮಹಿಳೆಯನ್ನು ಕಂಡ ಸ್ಥಳೀಯ ಮಕ್ಕಳು ಭಯದಿಂದ ಜೋರಾಗಿ ಅತ್ತಿದ್ದು, ಅಲ್ಲದೆ ಕೆಲವರು ದೂರ ಓಡಿಹೋದರು.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ (Lady) ಯು ಶಾಲೆಗೆ ಭೇಟಿ ನೀಡಿದಾಗ ಮಕ್ಕಳು ತನ್ನನ್ನು ಕಂಡ ತಕ್ಷಣ ಗಾಬರಿಗೊಂಡು ಓಡಿಹೋಗುತ್ತಿರುವುದನ್ನು ನೋಡಿ ಮೊದಲಿಗೆ ಗೊಂದಲಕ್ಕೊಳಗಾದಳು.

knife : ಡಿವೋರ್ಸ್‌ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!

ಬಳಿಕ, ತನ್ನ ಬಿಳಿ ಚರ್ಮವೇ ಇದಕ್ಕೆ ಕಾರಣವೆಂದು ಅವಳು ಅರ್ಥಮಾಡಿಕೊಂಡಳು. ಹಳ್ಳಿಗಳಿಗೆ ವಿದೇಶಿ ಪ್ರವಾಸಿಗರು ಬಹಳ ವಿರಳವಾಗಿ ಬರುತ್ತಾರೆ ಎಂಬುದನ್ನು ಮಹಿಳೆ (Lady) ಯು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾಳೆ.

ಸಾಮಾಜಿಕ ಮಾಧ್ಯಮದಲ್ಲಿ ಈ ದೃಶ್ಯ ಜನರ ಗಮನ ಸೆಳೆದಿದೆ. ಕೆಲವರು ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಗಂಭೀರ ಚರ್ಚೆಗೆ ಇಳಿದರು. ಕೆಲವು ಸಂಸ್ಕೃತಿಗಳಲ್ಲಿ ಬಿಳಿ ಬಣ್ಣವನ್ನು ದೆವ್ವ ಅಥವಾ ದುಷ್ಟಶಕ್ತಿಗಳೊಂದಿಗೆ ಸಂಪರ್ಕಿಸುವ ನಂಬಿಕೆ ಇರುವುದರಿಂದ ಮಕ್ಕಳು ಹೆದರಿರಬಹುದು ಎಂದು ಬಳಕೆದಾರರೊಬ್ಬರು ಅಭಿಪ್ರಾಯಪಟ್ಟರು.

Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!

ಅದೇ ವೇಳೆ, ವಿಡಿಯೋ ಹಂಚಿಕೆ ಮಾಡುವ ವಿಧಾನವನ್ನೂ ಹಲವರು ಟೀಕಿಸಿದ್ದಾರೆ. ಮಕ್ಕಳ ಪೋಷಕರ ಅನುಮತಿಯಿಲ್ಲದೆ ಅವರನ್ನು ಚಿತ್ರೀಕರಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಹಲವು ಜನರಿಂದ ವ್ಯಕ್ತವಾಗಿದೆ. ಮಹಿಳೆ (Lady) ತನ್ನ ಅನುಭವವನ್ನು ಮಕ್ಕಳನ್ನು ಫ್ರೇಮ್‌ನಲ್ಲಿ ತೋರಿಸದೆ ಹೇಳಬಹುದಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಈ ಘಟನೆಯನ್ನು ನೋಡಿ ಕೆಲವರು “ಮಕ್ಕಳು ನಿಜವಾಗಿಯೂ ಭಯಗೊಂಡಿದ್ದರೆ, ಅವರ ಮೇಲೆ ನಗುವುದು ಅಥವಾ ಅವರನ್ನು ಹಿಂಬಾಲಿಸುವ ಬದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!

ಇನ್ನೂ ಕೆಲವರು ಪಾಶ್ಚಾತ್ಯ ಸಂಸ್ಕೃತಿ ಮತ್ತು ಮಾಧ್ಯಮದ ಪ್ರಭಾವವನ್ನು ಉಲ್ಲೇಖಿಸಿ, ಮಕ್ಕಳು ಚಿತ್ರಗಳಲ್ಲೋ ಅಥವಾ ಮಾಧ್ಯಮದಲ್ಲೋ ಬಿಳಿ ಜನರನ್ನು ಕಂಡು ಭಿನ್ನ ಕಲ್ಪನೆ ಮಾಡಿಕೊಂಡಿರಬಹುದು ಎಂದೂ ಹೇಳಿದ್ದಾರೆ. ಈ ವಿಡಿಯೋ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮಹಿಳೆ (Lady) ಯನ್ನು ಕಂಡು ಓಡುತ್ತಿರುವ ಮಕ್ಕಳ ವಿಡಿಯೋ :

https://twitter.com/i/status/1969380890431406124


Mosquito : “ಸಾಯಿಸಿದ ನಂತರ ಅಂಟಿಸಿ ನಂಬರ್ ಹಾಕುತ್ತಿರುವ ವ್ಯಕ್ತಿ ; ವಿಚಿತ್ರ ಹವ್ಯಾಸದ ವಿಡಿಯೋ ವೈರಲ್”.!

Mosquito

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಜಗತ್ತಿನಲ್ಲಿ ಜನರ ಸ್ವಭಾವ ಮತ್ತು ಹವ್ಯಾಸಗಳು ವಿಭಿನ್ನವಾಗಿರುತ್ತವೆ. ಕೆಲವರಿಗೆ ಪುಸ್ತಕ ಓದುವುದು, ಸಿನಿಮಾ ನೋಡುವುದು, ಕ್ರಾಫ್ಟ್ ಮಾಡುವುದು ಇಷ್ಟವಾಗಿದೆಯಾದರೆ, ಕೆಲವರು ರೀಲ್ಸ್ ಮಾಡುವುದು ಅಥವಾ ಸಂಗೀತದಲ್ಲಿ ತಲ್ಲೀನರಾಗುವುದು ಇಷ್ಟಪಡುತ್ತಾರೆ.

ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿಯ ಹವ್ಯಾಸ ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಅವನ ಹವ್ಯಾಸವೇನೆಂದರೆ, ಸಾಯಿಸಿದ ಸೊಳ್ಳೆ (Mosquito) ಗಳನ್ನು ಸಂಗ್ರಹಿಸುವುದು.!

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
ಸೊಳ್ಳೆ (Mosquito) ಗಳನ್ನು ಸಾಯಿಸಿ ಸಂಗ್ರಹಿಸುವ ಹವ್ಯಾಸ :

ಫೇಸ್‌ಬುಕ್‌ನ Bright Life ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನು ತನ್ನನ್ನು ಕಚ್ಚಿದ ಸೊಳ್ಳೆ (Mosquito) ಗಳನ್ನು ಸಾಯಿಸಿ ಒಂದು ವಿಶೇಷ ರೀತಿಯಲ್ಲಿ ಸಂಗ್ರಹಿಸುತ್ತಿರುವುದು ಕಾಣಬಹುದು.

ಆತ ಸೊಳ್ಳೆ (Mosquito) ಯನ್ನು ಹಿಡಿದು ಡಬ್ಬಿಯೊಳಗೆ ಹಾಕಿ, ಶಾಕ್‌ ಟ್ರೀಟ್ಮೆಂಟ್ ನೀಡುವ ಮೂಲಕ ಸಾಯಿಸುತ್ತಾನೆ. ನಂತರ ಬಿಳಿ ಹಾಳೆಯ ಮೇಲೆ ಅಂಟಿಸಿ, ಅದರ ಸಾಯಿಸಿದ ದಿನಾಂಕ ಹಾಗೂ ಸಮಯವನ್ನು ಬರೆದು ಸಂಗ್ರಹಿಸುತ್ತಾನೆ.

“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ :

ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ವೀಕ್ಷಿಸಿ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.

  • ಒಬ್ಬ ಬಳಕೆದಾರ, “ಸೊಳ್ಳೆ (Mosquito) ಕೂಡ ದೇವರ ಸೃಷ್ಟಿಯೇ, ಅದು ತನ್ನ ಏಳು ದಿನಗಳ ಜೀವನದಲ್ಲಿ ಒಮ್ಮೆ ರಕ್ತ ಕುಡಿಯುವುದು ಸಹಜ. ಆದರೂ ನಾನು ದಿನಕ್ಕೆ ಕನಿಷ್ಠ 20 ಸೊಳ್ಳೆ ಹೊಡೆದು ಸಾಯಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
  • ಇನ್ನೊಬ್ಬರು ವ್ಯಂಗ್ಯವಾಗಿ, “ಈತನಿಗೆ ಬೇರೆ ಕೆಲಸವಿಲ್ಲವೇ? ಸೊಳ್ಳೆಗಳನ್ನು ಸಾಯಿಸಿ ಹಾಳೆಗೆ ಅಂಟಿಸಿ ಮರಣ ದಿನಾಂಕ ಬರೆಯೋದು ಒಂದು ವಿಭಿನ್ನ ಅಂತ್ಯಸಂಸ್ಕಾರದಂತೆ ಇದೆ” ಎಂದು ಬರೆದಿದ್ದಾರೆ.
  • ಮತ್ತೊಬ್ಬರು, “ಇವನೊಬ್ಬ ಮಾನಸಿಕ ಸಮಸ್ಯೆಗೊಳಗಾದವನಿರಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ :

BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ನೆಟ್ಟಿಗರ ಚರ್ಚೆಗೆ ಕಾರಣ :

ಸಾಧಾರಣವಾಗಿ ಜನರು ಹವ್ಯಾಸಗಳ ಮೂಲಕ ಮನರಂಜನೆ ಪಡೆಯುತ್ತಾರೆ. ಆದರೆ ಈ ವ್ಯಕ್ತಿಯಂತಹ ವಿಚಿತ್ರ ಹವ್ಯಾಸಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಕುತೂಹಲ ಹುಟ್ಟಿಸುತ್ತವೆ. ಕೆಲವರಿಗೆ ಇದು ನಗುವಿಗೆ ಕಾರಣವಾದರೆ, ಕೆಲವರಿಗೆ ಆಕ್ರೋಶಕ್ಕೂ ಕಾರಣವಾಗಿದೆ.