ಮಂಗಳವಾರ, ಫೆಬ್ರವರಿ 3, 2026

Janaspandhan News

Home Blog Page 30

eSIM : ಸಿಮ್ ಕಾರ್ಡ್ ಇಲ್ಲದೆ ಕಾಲ್, ಇಂಟರ್ನೆಟ್ ಸೌಲಭ್ಯ ; BSNL ನಿಂದ ಬಂಪರ್ ಸೌಲಭ್ಯ.!

0

ಜನಸ್ಪಂದನ ನ್ಯೂಸ್‌, ನವದೆಹಲಿ : ಇತ್ತೀಚಿನವರೆಗೆ ಭಾರತದಲ್ಲಿ eSIM ಸೌಲಭ್ಯವನ್ನು ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ವಿಐ ಮಾತ್ರ ಒದಗಿಸುತ್ತಿದ್ದವು. ಆದರೆ ಈಗ ಸರ್ಕಾರಿ ದೂರಸಂಪರ್ಕ ಸಂಸ್ಥೆಯಾದ ಭಾರತ ಸಂಚಾರ ನಿಗಮ್ ಲಿಮಿಟೆಡ್‌ (BSNL) ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿದೆ. ಬಿಎಸ್‌ಎನ್‌ಎಲ್ ಈಗ ದೇಶಾದ್ಯಂತ eSIM (ಎಲೆಕ್ಟ್ರಾನಿಕ್‌ ಸಿಮ್) ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

ಈ ಹೊಸ ಸೌಲಭ್ಯದಿಂದ, ಕೇವಲ ಒಂದು ಭೌತಿಕ ಸಿಮ್ ಸ್ಲಾಟ್ ಇರುವ ಸ್ಮಾರ್ಟ್‌ಫೋನ್ ಬಳಕೆದಾರರೂ ಕೂಡ ಬಿಎಸ್‌ಎನ್‌ಎಲ್ ಸಂಪರ್ಕವನ್ನು ಇ-ಸಿಮ್‌ (eSIM) ರೂಪದಲ್ಲಿ ಬಳಸಬಹುದು. ಇದು ಗ್ರಾಹಕರಿಗೆ ಹೆಚ್ಚು ಅನುಕೂಲಕರ ಸಂಪರ್ಕ ಮತ್ತು ತಂತ್ರಜ್ಞಾನ ಪ್ರಗತಿಯನ್ನು ಒದಗಿಸಲಿದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಟಾಟಾ ಕಮ್ಯುನಿಕೇಷನ್ಸ್ ಸಹಯೋಗದೊಂದಿಗೆ ಪ್ರಾರಂಭ :

ಈ ಯೋಜನೆಗಾಗಿ ಬಿಎಸ್‌ಎನ್‌ಎಲ್ ಟಾಟಾ ಕಮ್ಯುನಿಕೇಷನ್ಸ್ ಕಂಪನಿಯೊಂದಿಗೆ ಕೈಜೋಡಿಸಿದೆ.
ಟಾಟಾ ಕಮ್ಯುನಿಕೇಷನ್ಸ್‌ನ “MOVE” ಪ್ಲಾಟ್‌ಫಾರ್ಮ್ ಅನ್ನು ಇ-ಸಿಮ್ ಚಂದಾದಾರಿಕೆ ನಿರ್ವಹಣೆಗೆ ಬಳಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್ GSMA ಮಾನ್ಯತೆ ಪಡೆದ ಸುರಕ್ಷಿತ ತಂತ್ರಜ್ಞಾನವಾಗಿದೆ ಎಂದು ಕಂಪನಿ ಪ್ರಕಟಿಸಿದೆ.

eSIM ಸೇವೆಯ ಮುಖ್ಯ ಪ್ರಯೋಜನಗಳು :
  • ಬಿಎಸ್‌ಎನ್‌ಎಲ್ eSIM 2G, 3G ಮತ್ತು 4G ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
  • ಡ್ಯುಯಲ್‌ ಸಿಮ್‌ ಸಪೋರ್ಟ್‌ ಇರುವ ಸ್ಮಾರ್ಟ್‌ಫೋನ್‌ ಬಳಕೆದಾರರು ಎರಡನೇ ಸ್ಲಾಟ್‌ನಲ್ಲಿ ಇ-ಸಿಮ್ ಉಪಯೋಗಿಸಬಹುದು.
  • ಭೌತಿಕ ಸಿಮ್ ಬದಲಿಸುವ ಅಗತ್ಯವಿಲ್ಲದೆ ಬೇರೆ ಸೇವೆ ಅಥವಾ ಪ್ಲ್ಯಾನ್‌ಗೆ ತ್ವರಿತವಾಗಿ ಬದಲಾಯಿಸಲು ಸಾಧ್ಯ.
  • ಹೆಚ್ಚು ಸುರಕ್ಷಿತ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿದೆ.
ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
BSNL ಅಧ್ಯಕ್ಷರ ಪ್ರತಿಕ್ರಿಯೆ :

ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ. ರಾಬರ್ಟ್ ರವಿ ಅವರು ತಿಳಿಸಿದ್ದಾರೆ:

“ಪ್ಯಾನ್-ಇಂಡಿಯಾ eSIM ಸೇವೆಯ ಪ್ರಾರಂಭವು ಭಾರತದ ದೂರಸಂಪರ್ಕ ಕ್ಷೇತ್ರವನ್ನು ಹೊಸ ಹಂತಕ್ಕೆ ಕೊಂಡೊಯ್ಯಲಿದೆ. ಟಾಟಾ ಕಮ್ಯುನಿಕೇಷನ್ಸ್‌ನ ಸಹಯೋಗದೊಂದಿಗೆ ನಾವು ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ಒದಗಿಸಲು ಬದ್ಧರಾಗಿದ್ದೇವೆ. ಇದೇ ವೇಳೆ, ಇದು ಭಾರತದ ಡಿಜಿಟಲ್ ಸ್ವಾವಲಂಬನೆಗೆ ಬಲ ನೀಡುತ್ತದೆ.”

5G ಸೇವೆಯತ್ತ ಬಿಎಸ್‌ಎನ್‌ಎಲ್ ಹೆಜ್ಜೆ :

ಬಿಎಸ್‌ಎನ್‌ಎಲ್ ಪ್ರಸ್ತುತ 4G ಸೇವೆಯನ್ನು ದೇಶದಾದ್ಯಂತ ವಿಸ್ತರಿಸುತ್ತಿದೆ. ವರದಿಗಳ ಪ್ರಕಾರ, ಕಂಪನಿ ಈಗಾಗಲೇ ಸುಮಾರು 98,000 ಟವರ್‌ಗಳ ಮೂಲಕ 4G ಸೇವೆ ಪ್ರಾರಂಭಿಸಿದೆ. 2025ರ ಕೊನೆಯ ವೇಳೆಗೆ ಮುಂಬೈ ಮತ್ತು ದೆಹಲಿಯಲ್ಲಿ 5G ಸೇವೆ ಪ್ರಾರಂಭಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಸರ್ಕಾರವೂ ಈ ಯೋಜನೆಗೆ ತ್ವರಿತ ಅನುಮೋದನೆ ನೀಡಿದೆ.

BSNL eSIM ಪಡೆಯುವ ವಿಧಾನ :

ಬಿಎಸ್‌ಎನ್‌ಎಲ್ ಗ್ರಾಹಕರು ತಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರ (CSC) ಗೆ ಭೇಟಿ ನೀಡಿ ಇ-ಸಿಮ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಸಹಿತ KYC ಪ್ರಕ್ರಿಯೆ ಅಗತ್ಯವಿರುತ್ತದೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ಇತರೆ ಟೆಲಿಕಾಂ ಕಂಪನಿಗಳಲ್ಲಿ eSIM ಪಡೆಯುವ ವಿಧಾನ :
  • ಜಿಯೋ : MyJio ಅಪ್ಲಿಕೇಶನ್ ಅಥವಾ ಹತ್ತಿರದ ಜಿಯೋ ಅಂಗಡಿಯಲ್ಲಿ ಇ-ಸಿಮ್‌ಗೆ ವಿನಂತಿಸಬಹುದು.
  • ಏರ್‌ಟೆಲ್/ವಿಐ: ಅಧಿಕೃತ ಅಪ್ಲಿಕೇಶನ್ ಮೂಲಕ ಅಥವಾ 121 ಗೆ ಕರೆ ಮಾಡುವ ಮೂಲಕ ಇ-ಸಿಮ್‌ ಸಕ್ರಿಯಗೊಳಿಸಬಹುದು.
  • SMS ಮೂಲಕವೂ ವಿನಂತಿಸಬಹುದು — eSIM_registered ಇಮೇಲ್ ವಿಳಾಸ ಟೈಪ್ ಮಾಡಿ 199 ಗೆ ಕಳುಹಿಸಬೇಕು.
ತಂತ್ರಜ್ಞಾನದಲ್ಲಿ ಹೊಸ ಅಧ್ಯಾಯ :

ಬಿಎಸ್‌ಎನ್‌ಎಲ್‌ನ eSIM ಸೇವೆ ಸಾರ್ವಜನಿಕ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ಸರ್ಕಾರಿ ಸಂಸ್ಥೆಯ ತಂತ್ರಜ್ಞಾನ ಅಭಿವೃದ್ಧಿ ಮತ್ತು ಡಿಜಿಟಲ್ ಇಂಡಿಯಾ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುತ್ತದೆ. ಮುಂದಿನ ವರ್ಷಗಳಲ್ಲಿ ಬಿಎಸ್‌ಎನ್‌ಎಲ್ 5G ಮತ್ತು ಉಪಗ್ರಹ ಸಂಪರ್ಕ ಸೇವೆಗಳತ್ತವೂ ಮುಂದಾಗಲಿದೆ.

Online Game ನ ಭಯಾನಕತೆ : ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ ; ಸ್ಟಾರ್ ನಟ ಅಕ್ಷಯ್ ಕುಮಾರ್.!

Bharat Sanchar Nigam Limited (commonly known as BSNL) is an Indian central public sector undertaking, under the ownership of Department of Telecommunications, which is part of the Ministry of Communications, Government of India with its headquarters in New Delhi, India. The central public sector undertaking was established on 01-October-2000 by the Government of India.


Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

Belagavi

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ (Belagavi) ನಗರದಲ್ಲಿ ಮತ್ತೊಮ್ಮೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ರಾತ್ರಿ ಖಡೇಬಜಾರ್‌ನ ಖಡಕ್‌ ಗಲ್ಲಿ ಪ್ರದೇಶದಲ್ಲಿ ಕಲ್ಲುಗಳ ರಾಶಿ ಮನೆಗಳ ಮುಂದೆ ಬಿದ್ದಿರುವುದರಿಂದ ಸ್ಥಳೀಯರು ಆತಂಕಗೊಂಡು ಬೀದಿಗಳಲ್ಲಿ ಗುಂಪುಗೂಡಿದರು.

ತಕ್ಷಣವೇ ಬೆಳಗಾವಿ (Belagavi) ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಮಾಹಿತಿಯ ಪ್ರಕಾರ, ಪ್ರತಿವರ್ಷ ನಡೆಯುವ ಬೆಳಗಾವಿ (Belagavi)  ಯ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ಈ ಬಾರಿ ಖಡಕ್‌ ಗಲ್ಲಿಯ ಮೂಲಕ ಸಾಗಿದ್ದು, ಅಲ್ಲಿ ಕೆಲ ಯುವಕರು ಘೋಷಣೆಗಳನ್ನು ಕೂಗಿರುವುದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಇದಾದ ಬಳಿಕ ಕೆಲವು ಅಪ್ರತಿಷ್ಠಿತ ವ್ಯಕ್ತಿಗಳಿಂದ ಮನೆಗಳ ಮೇಲೆ ಕಲ್ಲುತೂರಾಟ ನಡೆದಿರುವುದು ತಿಳಿದುಬಂದಿದೆ. ಅಲ್ಲದೆ ತಲ್ವಾರ್ ಪ್ರದರ್ಶಿಸಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆಯೆಂಬ ಆರೋಪವೂ ಕೇಳಿಬಂದಿದೆ.

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!

ಸಾಮಾನ್ಯವಾಗಿ ಈ ಉರುಸ್ ಮೆರವಣಿಗೆ (Belagavi) ಜಾಲ್ಗಾರ ಗಲ್ಲಿ ಮತ್ತು ಶನಿವಾರ ಕೂಟ ಗಲ್ಲಿಯ ಮೂಲಕ ಸಾಗುತ್ತಿತ್ತು. ಆದರೆ, ಈ ಬಾರಿ ಅನುಮತಿ ಇಲ್ಲದಿದ್ದರೂ ಮೆರವಣಿಗೆ ಖಡಕ್‌ ಗಲ್ಲಿಯ ಮೂಲಕ ಹಾದುಹೋಗಿರುವುದರಿಂದ ಸ್ಥಳೀಯರ ಅಸಮಾಧಾನ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ Belagavi ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹಾಗೂ ಡಿಸಿಪಿ ನಾರಾಯಣ ಭರಮನಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಕಲ್ಲುತೂರಾಟ ಮತ್ತು ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

ಇದೀಗ Belagavi ಯ ಖಡಕ್‌ ಗಲ್ಲಿ ಪ್ರದೇಶದಲ್ಲಿ ಭಾರೀ ಪೊಲೀಸ್ ಬಲವನ್ನು ನಿಯೋಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ಪಡೆಯನ್ನೂ ನಿಯೋಜಿಸಲಾಗಿದೆ. ನಗರದಲ್ಲಿ ಶಾಂತಿ ಭದ್ರತೆ ಕಾಪಾಡುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Young man : ಬ್ಲೇಡ್‌ನಿಂದ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿಕೊಂಡ ಯುವಕ ; ಕಾರಣವೇನು.?

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯ ಗದರ್ವಾರಾ ನಗರದ ಗಂಗೈ ಗ್ರಾಮದಲ್ಲಿ ಯುವಕನೊಬ್ಬ (Young man) ದೈಹಿಕ ದೌರ್ಬಲ್ಯ ಮುಚ್ಚಿಕೊಳ್ಳಲು ತನ್ನ ಖಾಸಗಿ ಅಂಗವನ್ನು ಬ್ಲೇಡ್‌ನಿಂದ ಕತ್ತರಿಸಿಕೊಂಡ ಘಟನೆ ನಡೆದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಈ ಯುವಕ (Young man) ದೈಹಿಕ ಆರೋಗ್ಯ ಸಮಸ್ಯೆ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ತನ್ನ ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಿಂದ ಈ ರೀತಿ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Pregnant : ಅಮಾನವೀಯ ಘಟನೆ ; ಗರ್ಭಿಣಿಗೆ ಬೆಡ್ ಕೊಡದ ಆಸ್ಪತ್ರೆ, ನೆಲದ ಮೇಲೆಯೇ ಹೆರಿಗೆ.!

ಪ್ರಾಥಮುಕ ಮಾಹಿತಿ ಪ್ರಕಾರ, ಯುವಕನ ಕುಟುಂಬದವರು ಆರಂಭದಲ್ಲಿ ಕೊಲೆ ಯತ್ನದ ಶಂಕೆಯನ್ನು ಪೋಲಿಸರಿಗೆ ತಿಳಿಸಿದ್ದರು. ಆರಂಭಿಕ ತನಿಖೆಯಲ್ಲಿ, ಪ್ರಕರಣವು ಕೊಲೆ ಯತ್ನದಂತೆ ತೋರುವ ರೀತಿಯ ವರದಿ ಸಲ್ಲಿಸಲಾಯಿತು.

ಖಾಸಗಿ ಅಂಗ ಕತ್ತರಿಸಿಕೊಂಡ ಯುವಕ (Young man) :

ಆದರೆ ಹೆಚ್ಚಿನ ತನಿಖೆ ನಂತರ, ಆಪಾದಿತ ಮಾಡಿದ ಕೊಲೆ ಯತ್ನವು ಕೇವಲ ಕಟ್ಟುಕಥೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಯುವಕ (Young man) ಸ್ವಯಂ ತನ್ನ ಖಾಸಗಿ ಅಂಗವನ್ನು ಬ್ಲೇಡ್‌ನಿಂದ ಗಾಯಗೊಳಿಸಿಕೊಂಡಿದ್ದಾನೆ. ಇದಕ್ಕೆ ಮೂಲ ಕಾರಣಗಳು ಆರೋಗ್ಯ ಮತ್ತು ಮಾನಸಿಕ ಒತ್ತಡ ಸಂಬಂಧಿತವಾಗಿದ್ದವು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

ಈ ಸಂಬಂಧ ಗದರ್ವಾರಾ ಪೊಲೀಸ್ ಠಾಣೆ ಪ್ರಕರಣವನ್ನು ಸೂಕ್ತ ಮಾನವೀಯ ದೃಷ್ಠಿಯಿಂದ ಪರಿಶೀಲಿಸುತ್ತಿದ್ದಾರೆ. ಯುವಕನು (Young man) ತಕ್ಷಣ ವೈದ್ಯಕೀಯ ನೆರವು ಪಡೆದುಕೊಂಡಿದ್ದು, ಕುಟುಂಬದವರು ಸಹ ಸಹಾಯಕ್ಕೆ ಆಗಮಿಸಿದ್ದಾರೆ.

ಇಂತಹ ಘಟನೆಗಳಲ್ಲಿ ತುರ್ತು ಮನೋಸಾಂದರ್ಭಿಕ ನೆರವು ಪಡೆಯುವುದು ಅತ್ಯಂತ ಮುಖ್ಯ. ಮನೋಸಾಮಾಜಿಕ ಬೆಂಬಲ, ಕುಟುಂಬದ ಸಹಾಯ ಮತ್ತು ವೈದ್ಯಕೀಯ ಸಲಹೆ ನೀಡುವ ಮೂಲಕ ನಿರ್ಲಕ್ಷಣೆ ಅಥವಾ ತಪ್ಪು ನಿರ್ಣಯಗಳು ತಪ್ಪಿಸಬಹುದು.


ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

Lover

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬೆಂಗಳೂರು ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪ್ರಿಯಕರನ (Lover) ದ್ರೋಹದಿಂದ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ದುರ್ದೈವಿಯನ್ನು ಯಶೋಧ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಯಶೋಧ ಅವರಿಗೆ ಗಂಡ ಹಾಗೂ ಇಬ್ಬರು ಮಕ್ಕಳು ಇದ್ದರೂ ಸಹ ಕಳೆದ ಸುಮಾರು ಒಂಬತ್ತು ವರ್ಷಗಳಿಂದ ಪಕ್ಕದ ಓಣಿಯ ಮನೆಯಲ್ಲಿ ವಾಸಿಸುವ ಆಡಿಟರ್ ವಿಶ್ವನಾಥ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

ಇತ್ತೀಚಿನ ದಿನಗಳಲ್ಲಿ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು Lover ವಿಶ್ವನಾಥ್‌ಗೆ ಪರಿಚಯಿಸಿದ್ದರಂತೆ. ಅದಾದ ಬಳಿಕ ವಿಶ್ವನಾಥ್ ಆ ಸ್ನೇಹಿತೆಯೊಂದಿಗೂ ಹೆಚ್ಚು ಆಪ್ತವಾಗಿ ವರ್ತಿಸುತ್ತಿದ್ದು, ಇಬ್ಬರೂ ಓಯೋ ರೂಂನಲ್ಲಿ ಭೇಟಿಯಾಗುತ್ತಿದ್ದರೆಂಬ ಸುದ್ದಿ ಯಶೋಧ ಕಿವಿಗೂ ಬಿದ್ದಿತ್ತು.

ಪ್ರಿಯಕರ (Lover) ಸ್ನೇಹಿತೆಯೊಟ್ಟಿಗೆ ಇರುವ ವಿಷಯ ತಿಳಿದು ಅವರು ಇರುವ ಲಾಡ್ಜ್‌ಗೆ ಹೋಗಿ ಇಬ್ಬರಿಗೂ ಪ್ರಶ್ನೆ ಮಾಡಿದ್ದಾಳೆ. ಆದರೆ, ಆ ವೇಳೆ ವಿಶ್ವನಾಥ್ ಯಾವುದೇ ರೀತಿಯ ಸ್ಪಂದನೆ ನೀಡದೇ ಶಾಂತವಾಗಿ ನಿಂತಿದ್ದಾನೆಂದು ತಿಳಿದುಬಂದಿದೆ. ಪ್ರಿಯಕರನಿಂದ ಬಂದ ಈ ನಿರ್ಲಕ್ಷ್ಯ ಆಕೆಗೆ ಮನ ನೋವನ್ನು ಉಂಟುಮಾಡಿತು.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಗಲಾಟೆಯ ನಂತರ ಯಶೋಧ ಪಕ್ಕದ ರೂಂಗೆ ತೆರಳಿ, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಾಗಡಿ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಯಶೋಧ ಮತ್ತು Lover ವಿಶ್ವನಾಥ್‌ ನಡುವೆ ಕಳೆದ ಕೆಲವು ತಿಂಗಳಿಂದ ಸಂಬಂಧದಲ್ಲಿ ಅಸಮಾಧಾನ ಉಂಟಾಗಿತ್ತು. Lover ವಿಶ್ವನಾಥ್‌ ಇನ್ನೊಬ್ಬ ಮಹಿಳೆಯೊಂದಿಗೆ ಬೆಳೆಸಿದ ಹೊಸ ಸಂಬಂಧವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!

ಪೊಲೀಸರು ಈಗ ಇಬ್ಬರ ಮೊಬೈಲ್‌ ಕರೆ ಡೀಟೈಲ್ಸ್ ಹಾಗೂ ಲಾಡ್ಜ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಕುಟುಂಬ ಕಲಹದಿಂದ ಮಾನಸಿಕ ಒತ್ತಡಕ್ಕೊಳಗಾದ ವ್ಯಕ್ತಿಯೊಬ್ಬರು ತಮ್ಮ ನಾಲ್ವರು ಮಕ್ಕಳೊಂದಿಗೆ ನದಿ (River) ಗೆ ಹಾರಿರುವ ಪ್ರಕರಣ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.

ಮಾಹಿತಿಯ ಪ್ರಕಾರ, ಶಾಮ್ಲಿಯ ಕೈರಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಲ್ಲಾ ಖೇಲ್ ಕಲಾ ನಿವಾಸಿ 38 ವರ್ಷದ ಸಲ್ಮಾನ್ ಎಂಬವರು ತಮ್ಮ ಪತ್ನಿ ಖುಸ್ನುಮಾ ಅವರೊಂದಿಗೆ ಕಳೆದ 14 ವರ್ಷಗಳಿಂದ ವಿವಾಹ ಜೀವನ ನಡೆಸುತ್ತಿದ್ದರು. ದಂಪತಿಗೆ ಮೆಹಕ್ (12), ಶಿಫಾ (5), ಅಯಾನ್ (3), ಮತ್ತು ಕೇವಲ 8 ತಿಂಗಳ ಮಗು ಇನೈಶಾ ಎಂಬ ನಾಲ್ಕು ಮಕ್ಕಳು ಇದ್ದರು.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಕುಟುಂಬದ ಸದಸ್ಯರ ಪ್ರಕಾರ, ಖುಸ್ನುಮಾ ಮನೆಯಿಂದ ಹೊರಡುವುದು ಇದು ಮೊದಲ ಬಾರಿಯಲ್ಲ. ಇತ್ತೀಚೆಗೆ ಕೂಡಾ ಆಕೆ ಕೆಲವು ಕಾರಣಗಳಿಂದ ಮನೆಯಿಂದ ಹೊರಟಿದ್ದಳು ಎಂದು ಅವರು ತಿಳಿಸಿದ್ದಾರೆ. ಈ ವಿಷಯದಿಂದ ಮನೆಯೊಳಗಿನ ವಾತಾವರಣದಲ್ಲಿ ಒತ್ತಡ ಉಂಟಾಗಿದ್ದಿತು ಎಂದು ಕುಟುಂಬದವರು ಹೇಳಿದರು. ಮತ್ತೇ ಇತ್ತೀಚೆಗೆ ಸಲ್ಮಾನ್ ಪತ್ನಿ ತನ್ನ ಪ್ರಿಯಕರನೊಂದಿಗೆ ಓಡಿಹೋದ ನಂತರ, ಸಲ್ಮಾನ್ ತುಂಬಾ ಬೇಸರಗೊಂಡಿದ್ದರು ಎಂದು ತಿಳಿಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನ ಸಲ್ಮಾನ್ ತನ್ನ ನಾಲ್ಕು ಮಕ್ಕಳೊಂದಿಗೆ ಹಳೆಯ ಯಮುನಾ ನದಿ (River) ಸೇತುವೆಯ ಕಡೆ ತೆರಳಿದ್ದಾನೆ. ಅಲ್ಲಿ ಮಕ್ಕಳಿಗೆ ತಿಂಡಿ ಕೊಟ್ಟ ನಂತರ ಆತ ನದಿ (River) ಯ ಕಡೆ ಮಕ್ಕಳೊಂದಿಗೆ ತೆರಳಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!

ಸಂಜೆ ವೇಳೆಗೆ ಸಲ್ಮಾನ್ ಮತ್ತು ಮಕ್ಕಳು ಮನೆಗೆ ಹಿಂದಿರುಗದಿದ್ದಾಗ ಕುಟುಂಬ ಸದಸ್ಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ತಕ್ಷಣ ಶೋಧ ಕಾರ್ಯ ಆರಂಭಿಸಲಾಯಿತು. ಪೊಲೀಸರ ಹೇಳಿಕೆಯ ಪ್ರಕಾರ, ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕೊನೆಯ ಬಾರಿ ಸಲ್ಮಾನ್ ಯಮುನಾ ನದಿ (River)  ಸೇತುವೆಯ ಬಳಿ ಇದ್ದ ಮಾಹಿತಿ ದೊರೆತಿದೆ.

ಘಟನೆಯ ಬಗ್ಗೆ ಮಾತನಾಡಿದ ಅತಿರಿಕ್ತ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್, “ನಾವು ತಕ್ಷಣ ಡೈವರ್‌ಗಳ ತಂಡವನ್ನು ಶೋಧ ಕಾರ್ಯಕ್ಕೆ ನಿಯೋಜಿಸಿದ್ದೇವೆ. ಈಗಲೂ ನದಿ (River) ಯಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆಯ ನಿಜಸ್ವರೂಪ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

Belagavi : ಒಂದೇ ಕುಟುಂಬದ ಸಹೋದರರಿಬ್ಬರು ಹೃದಯಾಘಾತದಿಂದ ಸಾವು ; ಶೋಕದಲ್ಲಿ ಕುಟುಂಬ.!

ಘಟನೆಯ ಮೊದಲು ಸಲ್ಮಾನ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾನೆ ಎಂಬ ಮಾಹಿತಿ ದೊರೆತಿದೆ. ಆ ವಿಡಿಯೋದಲ್ಲಿ ಆತ ತನ್ನ ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದು, ಜೀವನದಲ್ಲಿ ಎದುರಿಸುತ್ತಿದ್ದ ವೈಯಕ್ತಿಕ ಕಷ್ಟಗಳನ್ನು ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನದಿಯ (River) ಕಡೆ ಹೋಗುವ ಮುನ್ನ ವಿಡಿಯೋ ಮಾಡಿದ ಪತಿ :

https://twitter.com/i/status/1974398734659416075


ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

Lover

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬೆಂಗಳೂರು ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪ್ರಿಯಕರನ (Lover) ದ್ರೋಹದಿಂದ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ದುರ್ದೈವಿಯನ್ನು ಯಶೋಧ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಯಶೋಧ ಅವರಿಗೆ ಗಂಡ ಹಾಗೂ ಇಬ್ಬರು ಮಕ್ಕಳು ಇದ್ದರೂ ಸಹ ಕಳೆದ ಸುಮಾರು ಒಂಬತ್ತು ವರ್ಷಗಳಿಂದ ಪಕ್ಕದ ಓಣಿಯ ಮನೆಯಲ್ಲಿ ವಾಸಿಸುವ ಆಡಿಟರ್ ವಿಶ್ವನಾಥ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

ಇತ್ತೀಚಿನ ದಿನಗಳಲ್ಲಿ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು Lover ವಿಶ್ವನಾಥ್‌ಗೆ ಪರಿಚಯಿಸಿದ್ದರಂತೆ. ಅದಾದ ಬಳಿಕ ವಿಶ್ವನಾಥ್ ಆ ಸ್ನೇಹಿತೆಯೊಂದಿಗೂ ಹೆಚ್ಚು ಆಪ್ತವಾಗಿ ವರ್ತಿಸುತ್ತಿದ್ದು, ಇಬ್ಬರೂ ಓಯೋ ರೂಂನಲ್ಲಿ ಭೇಟಿಯಾಗುತ್ತಿದ್ದರೆಂಬ ಸುದ್ದಿ ಯಶೋಧ ಕಿವಿಗೂ ಬಿದ್ದಿತ್ತು.

ಪ್ರಿಯಕರ (Lover) ಸ್ನೇಹಿತೆಯೊಟ್ಟಿಗೆ ಇರುವ ವಿಷಯ ತಿಳಿದು ಅವರು ಇರುವ ಲಾಡ್ಜ್‌ಗೆ ಹೋಗಿ ಇಬ್ಬರಿಗೂ ಪ್ರಶ್ನೆ ಮಾಡಿದ್ದಾಳೆ. ಆದರೆ, ಆ ವೇಳೆ ವಿಶ್ವನಾಥ್ ಯಾವುದೇ ರೀತಿಯ ಸ್ಪಂದನೆ ನೀಡದೇ ಶಾಂತವಾಗಿ ನಿಂತಿದ್ದಾನೆಂದು ತಿಳಿದುಬಂದಿದೆ. ಪ್ರಿಯಕರನಿಂದ ಬಂದ ಈ ನಿರ್ಲಕ್ಷ್ಯ ಆಕೆಗೆ ಮನ ನೋವನ್ನು ಉಂಟುಮಾಡಿತು.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಗಲಾಟೆಯ ನಂತರ ಯಶೋಧ ಪಕ್ಕದ ರೂಂಗೆ ತೆರಳಿ, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಾಗಡಿ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಯಶೋಧ ಮತ್ತು Lover ವಿಶ್ವನಾಥ್‌ ನಡುವೆ ಕಳೆದ ಕೆಲವು ತಿಂಗಳಿಂದ ಸಂಬಂಧದಲ್ಲಿ ಅಸಮಾಧಾನ ಉಂಟಾಗಿತ್ತು. Lover ವಿಶ್ವನಾಥ್‌ ಇನ್ನೊಬ್ಬ ಮಹಿಳೆಯೊಂದಿಗೆ ಬೆಳೆಸಿದ ಹೊಸ ಸಂಬಂಧವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!

ಪೊಲೀಸರು ಈಗ ಇಬ್ಬರ ಮೊಬೈಲ್‌ ಕರೆ ಡೀಟೈಲ್ಸ್ ಹಾಗೂ ಲಾಡ್ಜ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಸಹಕಾರಿ ಸಂಘಗಳು ದೇಶದ ಆರ್ಥಿಕತೆಗೆ ಶಕ್ತಿ ತುಂಬುತ್ತಿವೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ.!

0

ಜನಸ್ಪಂದನ ನ್ಯೂಸ್‌, ಮೂಡಲಗಿ : ದೇಶದ ಆರ್ಥಿಕತೆಯನ್ನು ಸದೃಡ ಮಾಡುವ ಸಂಕಲ್ಪ ಸಹಕಾರಿ ಸಂಘಗಳು ಮಾಡಿವೆ. ಸ್ವಾಸ್ಥಿಕ ಹಣಕಾಸು ವವ್ಯಹಾರ ಮಾಡುವ ಮೂರನೇಯ ಶಕ್ತಿಯಾಗಿ ಭಾರತ ಕಾರ್ಯನಿರ್ಹಹಿಸಲಿದೆ. ನಮ್ಮ ದೇಶ ಬೆಳವಣಿಗೆಯಲ್ಲಿ ಅತಿ ಕಡು ಬಡವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶನಿವಾರ ಸಮೀಪದ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ ನೂತನ ಪ್ರಧಾನ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

Online Game ನ ಭಯಾನಕತೆ : ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ ; ಸ್ಟಾರ್ ನಟ ಅಕ್ಷಯ್ ಕುಮಾರ್.!

19 ಶತಮಾನ ಇಂಗ್ಲೆಡಿನ ಶತಮಾನ 20ನೇ ಶತಮಾನ ಅಮೇರಿಕದ ಶತಮಾನವಾದರೆ 21ನೇ ಶತಮಾನ ಭಾರತದಾಗಿರುತ್ತದೆ, ಬ್ಯಾಂಕಿಂಗ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಸೊಸಾಯಿಟಿಗಳು ಪ್ರಾರಂಭವಾದವು. ರಾಷ್ಟ್ರೀಕೃತ ಬ್ಯಾಂಕಿನ ಹಿಡಿತದಲ್ಲಿ ಸೊಸಾಯಿಟಿಗಳು ಕಾರ್ಯನಿರ್ವಹಿಸಲು ಆರಂಭಿಸಿದ ನಂತರ ಮತ್ತಷ್ಟು ಸಹಕಾರಿ ಕ್ಷೇತ್ರಕ್ಕೆ ಬಲ ಬಂದತಾಯಿತು ವಿವಿಧ ರೀತಿಯ ಪ್ರಾಯೋಜಕತ್ವನ್ನು ಸೊಸಾಯಿಟಿಗಳಿಗೆ ನೀಡಲಾಯಿತು.

ಹಿಂದೆ ದೇಶದ ಆರ್ಥಿಕ ಪರಿಸ್ಥಿತಿ ಸರಿಯಾಗಿರಲಿಲ್ಲ ಆ ಸಮಯದಲ್ಲ ಮಾಜಿ ಪ್ರಧಾನಿ ರಾಜೀವ ಗಾಂಧಿಯವರು ಹೇಳಿದಂತೆ ಅವರು ಒಂದು ರೂಪಾಯಿಯನ್ನು ಫಲಾನುಭವಿಗೆ ಹಾಕಿದರೆ ಅದು ಕೇವಲ 15 ಪೈಸೆ ಮುಟ್ಟತ್ತಿತ್ತು ಸದ್ಯ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಾಕುವ ಪ್ರತಿ ರೂಪಾಯಿಯು ನೇರವಾಗಿ ಫಲಾನುಭವಿಯ ಖಾತೆಗೆ ಜಮೆಯಾಗುವದರ ಜೊತೆಗೆ ಆತನ ಮೊಬೈಲಿಗೆ ಸಂದೇಶ ಮುಟ್ಟವಂತಹ ತಂತ್ರಜ್ಞಾನ ದೇಶದಲ್ಲಿದೆ ಎಂದರೆ.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಅದು ದೇಶದ ಪ್ರಗತಿಯ ದ್ಯೋತಕ ಎಂದ ಅವರು ಸೌರ ವಿದ್ಯುತ್, ಗ್ಯಾಸ ವಿತರಣೆ. ಪಡಿತರ ವಿತರಣೆಯಂತಹ ಯೋಜನೆಗಳಿಂದ ದೇಶದ ಪ್ರಗತಿಯನ್ನು ಸಹಕಾರ ಸಂಸ್ಥೆಗಳ ಮೂಲಕ ಮಾಡಲಾಗುತ್ತಿದೆ. ಗ್ರಾಮೀಣ ಅರ್ಥ ವ್ಯವಸ್ಥೆ ಬಲ ಪಡಿಸಿದಾಗ ದೇಶದ ಪ್ರಗತಿಯಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಸಂಸದ ಈರಣ್ಣ ಕಡಾಡಿ ಮಾತನಾಡಿ. 23 ವಸಂತಗಳನ್ನು ಪೂರೈಸಿರುವ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯು 2024-25ನೇ ಆರ್ಥಿಕ ವರ್ಷದ ಕೊನೆಯಲ್ಲಿ 16000 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ರೂ.23.50 ಲಕ್ಷ ಶೇರು ಬಂಡವಾಳ, ರೂ.106.55 ಕೋಟಿ ದುಡಿಯುವ ಬಂಡವಾಳ, ರೂ.13.35 ಕೋಟಿ ಗುಂತಾವಣಿಗಳು, ರೂ.96.72 ಕೋಟಿ ಠೇವುಗಳನ್ನು ಹೊಂದಿದ್ದು, ರೂ.2.76 ಕೋಟಿ ನಿವ್ವಳ ಲಾಭವನ್ನು ಗಳಿಕೆ ಮಾಡಿದೆ. ವಾಹನ ಖರೀದಿ, ಕೃಷಿ, ಹೈನುಗಾರಿಕೆ, ಗೃಹ ನಿರ್ಮಾಣ, ವ್ಯಾಪಾರ, ಗುಡಿ ಕೈಗಾರಿಕೆಗಳಿಗೆ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡಿ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿ, ಗ್ರಾಮೀಣ ಪ್ರದೇಶದ ಜನರಿಗೆ ಅತ್ಯುತ್ತಮ ಹೂಡಿಕೆಯ ಅವಕಾಶಗಳನ್ನು ಒದಗಿಸಿ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕರಿಸಿ, ಜನರು ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣವನ್ನು ಸದ್ಬಳಿಕೆ ಮಾಡುತ್ತಿರುವ ಹೆಗ್ಗಳಿಕೆ ಹೊಂದಿದೆ ಎಂದರು.

ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ. ಬೆಂಗಳೂರಿನ.ಕ.ರಾ.ಸೌ. ಸ. ಸಹಕಾರಿ ಸಂಘದ ಅಧ್ಯಕ್ಷ ಜಿ ನಂಜನಗೌಡ ಮಾತನಾಡಿದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿಗಳು ಹಾಗೂ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಜಿಗಳು ಆಶಿರ್ವಚನ ನೀಡಿದರು.

ಸಾನಿಧ್ಯ ವಹಿಸಿದ ಕಾಡಸಿದ್ದೇಶ್ವರ ಮಠ ಕನ್ನೇರಿ ಪೂಜ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಜಿಗಳು, ಮಾತನಾಡಿ. ಹಣ ಬಹುಮುಖಿಯಾಗಿ ಕಾರ್ಯನಿರ್ವಹಿಸುತ್ತದೆ. ಮೂರ್ಖರನ್ನು ಬುದ್ದಿವಂತನಾಗಿಸುತ್ತದೆ. ಗುಣವಂತನ್ನು ಬುದ್ದಿ ಹೀನನಾಗಿಸುತ್ತದೆ. ದುಡ್ಡು ಜೀವನಕ್ಕೆ ಸಾಧನೆ ಹೊರತು ಸಾಧ್ಯವಲ್ಲ. ಹಣಕ್ಕೆ ದೇವರಾಗುವ ಶಕ್ತಿ ಇಲ್ಲ. ಹಣದ ವೈಶಿಷ್ಟ್ಯ ಏನೆಂದರೆ ಅದು ಚಲಾವಣೆಯಾಗುತ್ತಿರಬೇಕು. ಸಹಕಾರ ನಿಯಮವು ಅದೆ ಆಗಿದೆ ಉಳ್ಳವರು ಹಣವನ್ನು ಡಿಪಾಜಿಟ್ ಮಾಡುತ್ತಾರೆ. ಇಲ್ಲದವರು ಸಾಲ ಪಡೆಯುತ್ತಾರೆ. ಸಹಕಾರಿ ರಂಗ ಸರ್ಕಾರಕ್ಕೆ ಪರ್ಯಾಯವಾಗಿ ಕಾರ್ಯನಿರ್ಹಸುತ್ತಿವೆ ಎಂದರು.

ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ. ಬೆಳಗಾವಿ ಜಿಲ್ಲಾ ಮದ್ಯವರ್ತಿ ಬ್ಯಾಂಕವು ಮೊದಲು ಸತ್ತ ಹಾವಾಗಿತ್ತು ನನ್ನ ಕೈಯಲ್ಲಿ ನೀಡಿದಾಗ ರೂ 544 ಕೋಟಿ ಇದ್ದ ದುಡಿಯುವ ಬಂಡವಾಳದಿAದ 6800 ಕೋಟಿ ದುಡಿಯುವ ಬಂಡವಾಳ ಮಾಡಲಾಗಿದೆ. 50 ಲಕ್ಷ ಕುಟುಂಬಗಳು ಆ ಬ್ಯಾಂಕಿನ ಆಶ್ರಯಿಸಿವೆ. ಚುನಾವಣೆಗಾಗಿ ಸೊಸಾಯಟಿಗಳಿಗೆ ಹಣ ನೀಡಿದ್ದಾರೆ ಆದರೆ 15 ತಾಲೂಕಿನ ಸೊಸಾಯಿಟಿಗಳ ಸದಸ್ಯರು ನಿಸ್ವಾರ್ಥ ಸೇವೆಯ ಅಭ್ಯರ್ಥಿಯನ್ನು ಗೆಲಿಸಿ. ಅಲ್ಪ ಸುಖಕ್ಕಾಗಿ ಆಶೆ ಪಟ್ಟರೆ ಮುಂದಿನ ದಿನಮಾನಗಳಲ್ಲಿ ಆಸ್ತಿ ಕಳೆದುಕೊಳ್ಳುತ್ತಿರಿ. ಸ್ವಾಭಿಮಾನದಿಂದ ಬದುಕಿದರೆ ಸುವರ್ಣಕರವಾದ ದಿನಗಳು ಬರುತ್ತವೆ ಎಂದರು.

ವೇದಿಕೆಯ ಮೇಲೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ನಿಖಿಲ್ ಕತ್ತಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಪಿ. ರಾಜೀವ, ಡಾ ವಿಶ್ವನಾಥ ಪಾಟೀಲ, ಹುಬ್ಬಳಿ ಮಹಾಪೌರ ಜ್ಯೋತಿ ಪಾಟೀಲ. ಮಲ್ಲಣ್ಣ ಯಾದವಾಡ, ರವಿ ಪಾಟೀಲ್. ವಿಜಯ ಮೆಟಗುಡ್, ಎಮ್ ಎಮ್ ಜೀರಲಿ, ಮಾಜಿ ಜಿಪಂ ಬಸಗೌಡ ಪಾಟೀಲ್, ಸಹಕಾರಿ ಅಧ್ಯಕ್ಷ ಬಾಳಪ್ಪ ಬೆಳಕೂಡ, ಬಿ ಬಿ ಹಂದಿಗುಂದ, ರಮೇಶ ಉಟಗಿ, ಜಯಾನಂದ ಮುನವಳ್ಳಿ. ಸಂಘದ ನಿರ್ದೇಶಕರಾದ ಪರಪ್ಪ ಮಳವಾಡ, ಬಾಳಪ್ಪ ಸಂಗಟಿ, ಸಹದೇವ ಹೆಬ್ಬಾಳ, ಶಿವಪ್ಪ ಗೋಸಬಾಳ, ಅಕ್ಕವ್ವ ಹಡಗಿನಾಳ, ಕಾಶವ್ವಾ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ನಿಂಗಪ್ಪ ಮಿಡಕನಟ್ಟಿ, ಪ್ರಧಾನ ವ್ಯವಸ್ಥಾಪಕ (ಪ್ರಭಾರಿ) ಪರಪ್ಪ ಗಿರೆಣ್ಣವರ ಉಪಸ್ಥಿತರಿದ್ದರು.

ಸ್ವಾಗತ ನಿರ್ಧೇಶಕ ಸತೀಶ ಕಡಾಡಿ.ನಿರೂಪಣೆ ಸೋಮಶೇಖರ ಮಗದುಮ್.ಉಪಾಧ್ಯಕ್ಷ ಶ್ರೀಶೈಲ ತುಪ್ಪದ ವಂದಿಸಿದರು.

ಸಹಕಾರಿ ಸಂಘಗಳು ದೇಶದ ಆರ್ಥಿಕತೆಗೆ ಶಕ್ತಿ ತುಂಬುತ್ತಿವೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ.!

Belagavi : ಒಂದೇ ಕುಟುಂಬದ ಸಹೋದರರಿಬ್ಬರು ಹೃದಯಾಘಾತದಿಂದ ಸಾವು ; ಶೋಕದಲ್ಲಿ ಕುಟುಂಬ.!

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಅಂತಹದೆ ಒಂದು ಘಟನೆ ಬೆಳಗಾವಿ (Belagavi) ಜಿಲ್ಲೆಯ ಗೋಕಾಕ ತಾಲ್ಲೂಕಿನ ಕಪರಟ್ಟಿ ಗ್ರಾಮದಲ್ಲಿ ಶನಿವಾರ ದಿನದಂದು ನಡೆದಿರುವುದು ಬೆಳಕಿಗೆ ಬಂದಿದೆ.

ಶನಿವಾರ ಸಂಜೆ ಸುಮಾರು 4 ಗಂಟೆಗೆ S.S.L.C ಓದುತ್ತಿದ್ದ ಸತೀಶ ಬಾಗನ್ನವರ (16) ಹೃದಯಾಘಾತದಿಂದ ಅಚಾನಕ್ ಸಾವಿಗೀಡಾದರು. ಈ ಘಟನೆಗೆ ಸಂಬಂಧಿಸಿದ ಸುದ್ದಿ ಅವರ ಅಣ್ಣ ಬಸವರಾಜ ಬಾಗನ್ನವರ (24) ಗೆ ತಲುಪಿದಾಗ, ಅವರು ಕೂಡಾ ಆಘಾತದಿಂದ ಹೃದಯಾಘಾತಕ್ಕೆ ಒಳಗಾಗಿದ್ದಾರೆ.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಕೂಡಲೇ ಅಣ್ಣ ಬಸವರಾಜ ಅವರನ್ನು ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ದುರ್ದೈವಶಾತ್ ಬಸವರಾಜ ಅವರು ಹೃದಯಾಘಾತದಿಂದ ಮೃತರಾದರು.

ಮೃತ ಬಸವರಾಜ ಅವರ ಪತ್ನಿ ಪವಿತ್ರಾ (20) ಗರ್ಭಿಣಿಯಾಗಿದ್ದು, ಗಂಡ ಮತ್ತು ಮೈದುನನ ಸಾವಿನ ಸುದ್ದಿ ಕೇಳಿ ಶಾಕ್‌ಗೆ ಒಳಗಾದರು. ಅವರನ್ನು ಕೂಡ ಬೆಳಗಾವಿ (Belagavi) ಯ ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

ಸತೀಶ 10ನೇ ತರಗತಿಯಲ್ಲಿ ಓದುತ್ತಿದ್ದು, ಬಸವರಾಜ ಬಟ್ಟೆ ಅಂಗಡಿಯಲ್ಲಿ ಉದ್ಯೋಗದಲ್ಲಿದ್ದರು. ಕುಟುಂಬದ ಹಿರಿಯರು ತಮ್ಮ ಮಕ್ಕಳ ಅಕಸ್ಮಿಕ್ ಸಾವಿನ ಸುದ್ದಿ ಕೇಳಿ ಆಘಾತಕ್ಕೀಡಾಗಿದ್ದಾರೆ.

ಈ ಘಟನೆ ಬೆಳಗಾವಿ (Belagavi) ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ವೈದ್ಯಕೀಯ ತಜ್ಞರು, ಹೃದಯ ಆರೋಗ್ಯದ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆವಹಿಸುವಂತೆ ವಿನಂತಿಸಿದ್ದಾರೆ.


Online Game ನ ಭಯಾನಕತೆ : ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ ; ಸ್ಟಾರ್ ನಟ ಅಕ್ಷಯ್ ಕುಮಾರ್.!

Game

ಜನಸ್ಫಂದನ ನ್ಯೂಸ್‌, ಮುಂಬೈ : ಮಕ್ಕಳ ಮೇಲೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ತಮ್ಮ ಜೀವನದ ಘಟನೆ ಹಂಚಿಕೊಂಡಿದ್ದಾರೆ. ಅವರು ತಮ್ಮ 13 ವರ್ಷದ ಪುತ್ರಿಯೊಂದಿಗೆ ಆಗಿದ್ದ ಒಂದು ಸೈಬರ್ ಘಟನೆ ಕುರಿತು ಶುಕ್ರವಾರ ಮುಂಬೈನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸೈಬರ್ ಜಾಗೃತಿ ತಿಂಗಳು 2025 ಉದ್ಘಾಟನಾ ಸಮಾರಂಭದಲ್ಲಿ ವಿವರಿಸಿದ್ದಾರೆ.

ಏನಿದು ಘಟನೆ?

ಕೆಲ ತಿಂಗಳ ಹಿಂದೆ, “ನಾನು ಮನೆಯಲ್ಲಿದ್ದಾಗ ನನ್ನ ಮಗಳು ಆನ್‌ಲೈನ್ ವಿಡಿಯೋ ಗೇಮ್ (Online video game) ಆಡುತ್ತಿದ್ದರು. ಆಗ, ಅನಾಮಿಕ ವ್ಯಕ್ತಿಯೊಬ್ಬ ಆನ್‌ಲೈನ್ ಮೂಲಕ ಸಂಪರ್ಕಿಸಿ, ಆಕೆಯ ಚಿತ್ರವನ್ನು ಕಳುಹಿಸುವಂತೆ ಕೇಳಿದ್ದಾನೆ ಎಂದು ನಟ ಅಕ್ಷಯ್ ಹೇಳಿದ್ದಾರೆ.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಆನ್‌ಲೈನ್ ಗೇಮ್‌ಗಳಲ್ಲಿ ನೀವು ಅಪರಿಚಿತ ವ್ಯಕ್ತಿಯೊಂದಿಗೆ ಕೂಡ ಆಡಬಹುದಾಗಿದೆ. ಅಕ್ಷಯ್ ಕುಮಾರ್ ಅವರ ಪುತ್ರಿ ಆನ್‌ಲೈನ್ ಗೇಮ್‌ (Game) ಆಡುತ್ತಿದ್ದಾಗ, ಆಟದ ಮಧ್ಯ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ‘ಧನ್ಯವಾದಗಳು’, ‘ಚೆನ್ನಾಗಿ ಆಡಿದೀರಿ’ ಮತ್ತು ‘ಅದ್ಭುತ’ ಮುಂತಾದ ಸಭ್ಯ ಸಂದೇಶಗಳೊಂದಿಗೆ ಪ್ರಾರಂಭಿಸಿದರು. ಅದು ಒಳ್ಳೆಯ ವ್ಯಕ್ತಿಯಂತೆ ತೋರುತ್ತಿತ್ತು.

ಸ್ವಲ್ಪ ಸಮಯದ ನಂತರ, ಅವನು ನನ್ನ ಮಗಳನ್ನ ‘ನೀನು ಗಂಡೋ ಅಥವಾ ಹೆಣ್ಣು?’ ಎಂಬ ಸಂದೇಶ ಬಂದಿತು. ನನ್ನ ಮಗಳು ಹೆಣ್ಣು ಎಂದು ಉತ್ತರ ಕೊಟ್ಟಳು. ಬಳಿಕ ಅವನು ‘ನಿನ್ನ ಬೆತ್ತಲೆ ಚಿತ್ರ ಕಳಿಸಬಹುದೇ?’ ಎಂದು ಕೇಳಿದನು. ನನ್ನ ಮಗಳು ಭಯಗೊಂಡು ಆ ಗೇಮ್ (Game) ಸ್ವಿಚ್ ಆಫ್ ಮಾಡಿದರು.”

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!

ಈ ಘಟನೆ, ಸೈಬರ್ ಅಪರಾಧಗಳು ಕೇವಲ ಕಿರುಮಟ್ಟದ ಅಂಚಿನ ವಿಷಯವಲ್ಲ, ಬೆಳೆಯುತ್ತಿರುವ ಮಕ್ಕಳಿಗೆ ನೇರವಾಗಿ ಹಾನಿ ತರುವಂತಹದು ಎಂಬುದನ್ನು ತೋರಿಸುತ್ತದೆ.

ಶಾಲೆಯಲ್ಲಿ ಸೈಬರ್ ಶಿಕ್ಷಣ ಕಡ್ಡಾಯವಾಗಲಿ :

ಅಕ್ಷಯ್ ಕುಮಾರ್ ಶಾಲಾ ವಿದ್ಯಾರ್ಥಿಗಳಿಗೆ (7ನೇ–10ನೇ ತರಗತಿ) ಸೈಬರ್ ಜಾಗೃತಿ ಮತ್ತು ಡಿಜಿಟಲ್ ಸುರಕ್ಷತಾ ಶಿಕ್ಷಣವನ್ನು ವಾರದ ಪ್ರಮುಖ ವಿಷಯವಾಗಿ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ಮಕ್ಕಳನ್ನು ಡಿಜಿಟಲ್ ಜಾಗದಲ್ಲಿ ಸುರಕ್ಷಿತವಾಗಿ ಮತ್ತು ಮಾಹಿತಿ ಸಮೃದ್ಧಿಯಾಗಿ ಬೆಳೆಸುವುದು ಬಹಳ ಮುಖ್ಯ” ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮ ಮತ್ತು ಭಾಗವಹಿಸಿದವರು :

ಈ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು, ರಶ್ಮಿ ಶುಕ್ಲಾ, ಇಕ್ಬಾಲ್ ಸಿಂಗ್ ಚಾಹಲ್ (IPS) ಮತ್ತು ರಾಣಿ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಅಕ್ಷಯ್ ಕುಮಾರ್‌ನ ಈ ಅಭಿಪ್ರಾಯವು, ಸೈಬರ್ ಅಪರಾಧದ ತೀವ್ರತೆಯನ್ನು ಜನರ ಗಮನಕ್ಕೆ ತರುತ್ತಿದ್ದು, ಮಕ್ಕಳಿಗೆ ಆನ್‌ಲೈನ್ ಸುರಕ್ಷತೆಯನ್ನು ಕಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಿದೆ.

ಆನ್‌ಲೈನ್ ವಿಡಿಯೋ ಗೇಮ್ (Game) ಕುರಿತು ಅಕ್ಷಯ ವಿಡಿಯೋ :

https://twitter.com/i/status/1974025834919817462

An online game is a video game that is either partially or primarily played through the Internet or any other computer network available. Online game / Games are ubiquitous on modern gaming platforms, including PCs, consoles and mobile devices, and span many genres, including first-person shooters, strategy games, and massively multiplayer online role-playing game̤

ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬೆಂಗಳೂರು ನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಪ್ರಿಯಕರನ (Lover) ದ್ರೋಹದಿಂದ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ದುರ್ದೈವಿಯನ್ನು ಯಶೋಧ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಯಶೋಧ ಅವರಿಗೆ ಗಂಡ ಹಾಗೂ ಇಬ್ಬರು ಮಕ್ಕಳು ಇದ್ದರೂ ಸಹ ಕಳೆದ ಸುಮಾರು ಒಂಬತ್ತು ವರ್ಷಗಳಿಂದ ಪಕ್ಕದ ಓಣಿಯ ಮನೆಯಲ್ಲಿ ವಾಸಿಸುವ ಆಡಿಟರ್ ವಿಶ್ವನಾಥ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

ಇತ್ತೀಚಿನ ದಿನಗಳಲ್ಲಿ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು Lover ವಿಶ್ವನಾಥ್‌ಗೆ ಪರಿಚಯಿಸಿದ್ದರಂತೆ. ಅದಾದ ಬಳಿಕ ವಿಶ್ವನಾಥ್ ಆ ಸ್ನೇಹಿತೆಯೊಂದಿಗೂ ಹೆಚ್ಚು ಆಪ್ತವಾಗಿ ವರ್ತಿಸುತ್ತಿದ್ದು, ಇಬ್ಬರೂ ಓಯೋ ರೂಂನಲ್ಲಿ ಭೇಟಿಯಾಗುತ್ತಿದ್ದರೆಂಬ ಸುದ್ದಿ ಯಶೋಧ ಕಿವಿಗೂ ಬಿದ್ದಿತ್ತು.

ಪ್ರಿಯಕರ (Lover) ಸ್ನೇಹಿತೆಯೊಟ್ಟಿಗೆ ಇರುವ ವಿಷಯ ತಿಳಿದು ಅವರು ಇರುವ ಲಾಡ್ಜ್‌ಗೆ ಹೋಗಿ ಇಬ್ಬರಿಗೂ ಪ್ರಶ್ನೆ ಮಾಡಿದ್ದಾಳೆ. ಆದರೆ, ಆ ವೇಳೆ ವಿಶ್ವನಾಥ್ ಯಾವುದೇ ರೀತಿಯ ಸ್ಪಂದನೆ ನೀಡದೇ ಶಾಂತವಾಗಿ ನಿಂತಿದ್ದಾನೆಂದು ತಿಳಿದುಬಂದಿದೆ. ಪ್ರಿಯಕರನಿಂದ ಬಂದ ಈ ನಿರ್ಲಕ್ಷ್ಯ ಆಕೆಗೆ ಮನ ನೋವನ್ನು ಉಂಟುಮಾಡಿತು.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಗಲಾಟೆಯ ನಂತರ ಯಶೋಧ ಪಕ್ಕದ ರೂಂಗೆ ತೆರಳಿ, ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮಾಗಡಿ ರೋಡ್ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಯಶೋಧ ಮತ್ತು Lover ವಿಶ್ವನಾಥ್‌ ನಡುವೆ ಕಳೆದ ಕೆಲವು ತಿಂಗಳಿಂದ ಸಂಬಂಧದಲ್ಲಿ ಅಸಮಾಧಾನ ಉಂಟಾಗಿತ್ತು. Lover ವಿಶ್ವನಾಥ್‌ ಇನ್ನೊಬ್ಬ ಮಹಿಳೆಯೊಂದಿಗೆ ಬೆಳೆಸಿದ ಹೊಸ ಸಂಬಂಧವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!

ಪೊಲೀಸರು ಈಗ ಇಬ್ಬರ ಮೊಬೈಲ್‌ ಕರೆ ಡೀಟೈಲ್ಸ್ ಹಾಗೂ ಲಾಡ್ಜ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಯಿಂದ ಸ್ಥಳೀಯರು ದುಃಖ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.


Pregnant : ಅಮಾನವೀಯ ಘಟನೆ ; ಗರ್ಭಿಣಿಗೆ ಬೆಡ್ ಕೊಡದ ಆಸ್ಪತ್ರೆ, ನೆಲದ ಮೇಲೆಯೇ ಹೆರಿಗೆ.!

pregnant

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಮನುಷ್ಯತ್ವವೇ ಮರೆತಿರುವಂತ ಘಟನೆ ಒಂದು ಬೆಳಕಿಗೆ ಬಂದಿದೆ. ಪ್ರಸವ (ಹೆರಿಗೆ) ನೋವಿನಿಂದ ಬಳಲುತ್ತಿದ್ದ ಗರ್ಭಿಣಿ (Pregnant) ಮಹಿಳೆಯೊಬ್ಬರು ಆಸ್ಪತ್ರೆಗೆ ತಲುಪಿದರೂ, ಅಲ್ಲಿನ ಸಿಬ್ಬಂದಿ ಸೂಕ್ತ ಚಿಕಿತ್ಸೆಯನ್ನು ನೀಡದೇ ನಿರ್ಲಕ್ಷ್ಯ ತೋರಿದ್ದಾರೆ.

ಪರಿಣಾಮವಾಗಿ, ಆ ಗರ್ಭಿಣಿ (Pregnant) ಮಹಿಳೆ ಆಸ್ಪತ್ರೆಯ ನೆಲದ ಮೇಲೆಯೇ ಮಗುವಿಗೆ ಜನ್ಮ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!
ಆಸ್ಪತ್ರೆಯಲ್ಲಿ ಸೌಲಭ್ಯ ಸಿಗದೇ ನೆಲದ ಮೇಲೆಯೇ ಹೆರಿಗೆ :

ಗರ್ಭಿಣಿ (Pregnant) ಕುಟುಂಬಸ್ಥರೊಂದಿಗೆ ಆಸ್ಪತ್ರೆಗೆ ಬಂದಾಗ, ಕರ್ತವ್ಯದಲ್ಲಿದ್ದ ವೈದ್ಯರು “ಇಲ್ಲಿ ಹೆರಿಗೆ ಮಾಡಿಸುವ ವ್ಯವಸ್ಥೆ ಇಲ್ಲ” ಎಂದು ಹೇಳಿ ದಾಖಲಿಸಲು ನಿರಾಕರಿಸಿದ್ದಾರೆ. ಇದರಿಂದಾಗಿ ಗರ್ಭಿಣಿ (Pregnant) ನೋವಿನಿಂದ ನರಳಾಡುತ್ತಾ, ಯಾರ ಸಹಾಯವೂ ಇಲ್ಲದೆ ನೆಲದ ಮೇಲೆಯೇ ಹೆರಿಗೆ ಮಾಡಿದ್ದಾಳೆ.

ಸದ್ಯ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯ ನಿರ್ಲಕ್ಷ್ಯತೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಸರ್ಕಾರಿ ಆಸ್ಪತ್ರೆಗಳು ಸಾಮಾನ್ಯ ಜನರ ಏಕೈಕ ಆಧಾರ. ಆದರೆ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ನಡೆಯುತ್ತಿವೆ” ಎಂದು ಹಲವರು ಕಿಡಿಕಾರಿದ್ದಾರೆ.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
ನೆಲದ ಮೇಲೆ ಅಳುತ್ತಿರುವ ಗರ್ಭಿಣಿ (Pregnant) ; ಸಿಬ್ಬಂದಿ ನಿರ್ಲಕ್ಷ್ಯ :

ವೈರಲ್ ಆದ ದೃಶ್ಯದಲ್ಲಿ ಮಹಿಳೆ ನೆಲದ ಮೇಲೆ ಮಲಗಿ ನೋವಿನಿಂದ ಅಳುತ್ತಿರುವುದು, ಸಂಕಟಪಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ, ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಅಧಿಕಾರಿಗಳು ಯಾರೂ ಸಹಾಯಕ್ಕೆ ಬಾರದಿರುವುದು ಜನರ ಕಣ್ಣು ತೆರೆಸುವಂತಾಗಿದೆ.

ಕುಟುಂಬದ ಸದಸ್ಯರು ಆರೋಪಿಸುತ್ತಾ, “ಅವರು ಬೆಡ್ ಕೊಡಲಿಲ್ಲ, ಚಿಕಿತ್ಸೆ ಕೊಡಲಿಲ್ಲ. ಮಗುವಿಗೆ ಏನಾದರೂ ಆಗಿದ್ದರೆ ಯಾರು ಜವಾಬ್ದಾರಿ?” ಎಂದು ಪ್ರಶ್ನಿಸಿದ್ದಾರೆ. ಘಟನೆಯ ನಂತರ ಕುಟುಂಬದವರೊಬ್ಬರಾದ ಸೋನಿ ಮಾತನಾಡಿ, “ಮಹಿಳೆಯ ಕಷ್ಟ ನೋಡಿ ಹೃದಯವೇ ಬಡಿದುಕೊಂಡರೂ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಇದು ನಮ್ಮ ಸಮಾಜಕ್ಕೆ ನಾಚಿಕೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!
ಕ್ರಮಕೈಗೊಳ್ಳುವ ಒತ್ತಾಯ :

ಘಟನೆ ಬಹಿರಂಗವಾದ ನಂತರ ಸ್ಥಳೀಯರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಈ ನಿರ್ಲಕ್ಷ್ಯಕ್ಕೆ ಕಾರಣರಾದ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಘಟನೆ ಮತ್ತೆ ಒಂದುವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೌಲಭ್ಯ ಕೊರತೆ ಮತ್ತು ಸಿಬ್ಬಂದಿ ಜವಾಬ್ದಾರಿಯ ಕೊರತೆ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಗರ್ಭಿಣಿ (Pregnant) ಮಹಿಳೆಯ ವಿಡಿಯೋ :

https://twitter.com/i/status/1973352383402090998

Pregnant woman : Each month is about 29½ days long, which is about nine lunar months. Symptoms of pregnancy include missed periods, tender breasts, breast enlargement, darkening of the nipples, nausea and vomiting, hunger, and frequent urination.

Assault : ಅತ್ತೆಯ ಮೇಲೆ ಸೊಸೆಯಿಂದ ಹಲ್ಲೆ ; ಮೊಮ್ಮಗ ಮಾಡಿದ ವಿಡಿಯೋ ವೈರಲ್.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪಂಜಾಬ್‌ನ ಗುರುದಾಸ್ಪುರ ಜಿಲ್ಲೆಯಲ್ಲಿ ನಡೆದ ಕುಟುಂಬ ಕಲಹದ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. “ಮಮ್ಮಾ ನಾ ಕರೋ (ಅಮ್ಮ, ಹೀಗೆ ಮಾಡಬೇಡಿ)” ಎಂದು ಮಗ ಮನವಿ ಮಾಡಿದರೂ, ತಾಯಿ ತನ್ನ ಅತ್ತೆಯ ಮೇಲೆ ಹಲ್ಲೆ (Assault) ನಡೆಸುತ್ತಿರುವ ದೃಶ್ಯ ಹೃದಯ ವಿದ್ರಾವಕವಾಗಿದೆ.

ಘಟನೆಯ ಹಿನ್ನಲೆ :

ವೈರಲ್ ಆದ ವಿಡಿಯೋದಲ್ಲಿ, ಹರ್ಜೀತ್ ಕೌರ್ ಎಂಬ ಮಹಿಳೆ ತನ್ನ ಅತ್ತೆ ಗುರ್ಬಜನ್ ಕೌರ್ ಅವರ ಕೂದಲನ್ನು ಎಳೆದು, ತಳ್ಳುತ್ತಾ ನಿರ್ದಯವಾಗಿ ಹೊಡೆದಿರುವುದು (Assault) ದಾಖಲಾಗಿದೆ. ಈ ವೇಳೆ ಅತ್ತೆಯ ಮೊಮ್ಮಗ ತನ್ನ ತಾಯಿಗೆ ಬೇಡಿಕೊಳ್ಳುತ್ತಾ, “ಅಜ್ಜಿಯನ್ನು ಬಿಟ್ಟುಬಿಡಿ” ಎಂದು ಹೇಳುತ್ತಾನೆ. ಆದರೆ ಅವನ ಮಾತನ್ನು ಕಡೆಗಣಿಸಿ ಹರ್ಜೀತ್‌ ಕೌರ್‌ ಹಲ್ಲೆ (Assault) ಮುಂದುವರಿಸುತ್ತಾಳೆ.

ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!

ವಿಡಿಯೋದಲ್ಲಿ ಆಕೆ ಕೈಯಲ್ಲಿದ್ದ ಸ್ಟೀಲ್ ಗ್ಲಾಸ್‌ನಿಂದ ವೃದ್ಧೆಯ ಮೇಲೆ ಎರಡು ಬಾರಿ ಹೊಡೆದಿರುವುದು (Assault) ಹಾಗೂ ನಂತರ ಅದನ್ನು ನೆಲಕ್ಕೆ ಬಡಿದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಘಟನೆಯಿಂದ ನೊಂದ ವೃದ್ಧೆ ಜೋರಾಗಿ ಅಳುತ್ತಾ ತೀವ್ರವಾಗಿ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಆಸ್ತಿಗಾಗಿ ಒತ್ತಡ :

ಗುರ್ಬಜನ್ ಕೌರ್ ಪೊಲೀಸರಿಗೆ ನೀಡಿದ ದೂರಿನಲ್ಲಿ, “ನನ್ನ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ನನ್ನ ಸೊಸೆ ನಿರಂತರ ಒತ್ತಡ ಹೇರುತ್ತಿದ್ದಾಳೆ. ನಾನು ಒಪ್ಪದಿರುವುದರಿಂದ ದೈಹಿಕ ಹಲ್ಲೆ (Assault) ಮಾಡುತ್ತಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.

Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!
ಮಗನ ಹೇಳಿಕೆ :

ಹರ್ಜೀತ್ ಕೌರ್ ಅವರ ಮಗ ಚರತ್‌ವೀರ್ ಸಿಂಗ್ ಈ ಘಟನೆಗೆ ಸಾಕ್ಷಿಯಾಗಿದ್ದು, ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. “ನನ್ನ ತಾಯಿ ಮದ್ಯಪಾನ ಮಾಡಿದಾಗ ಅಜ್ಜಿಯನ್ನು ಮಾತ್ರವಲ್ಲ, ನನ್ನನ್ನೂ ಹಾಗೂ ತಂದೆಯನ್ನು ಸಹ ಹೊಡೆಯುತ್ತಾರೆ (Assault). ಸಾಕ್ಷಿಯಾಗಿ ತೋರಿಸಲು ಈ ಬಾರಿ ನಾನು ವಿಡಿಯೋ ಮಾಡಿದ್ದೇನೆ” ಎಂದು ವಿವರಿಸಿದ್ದಾರೆ.

ಪೊಲೀಸರು “ನೀವು ಮಧ್ಯಪ್ರವೇಶಿಸಿ ಅಜ್ಜಿಯನ್ನು ಏಕೆ ರಕ್ಷಿಸಲಿಲ್ಲ?” ಎಂದು ಪ್ರಶ್ನಿಸಿದಾಗ, ಚರತ್‌ವೀರ್ “ಅಮ್ಮ ನನ್ನ ಮೇಲೂ ಒಮ್ಮೆ ದೂರು ದಾಖಲಿಸಿದ್ದಾರೆ, ಸೇಡು ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಅದಕ್ಕಾಗಿಯೇ ನೇರವಾಗಿ ಹಸ್ತಕ್ಷೇಪಿಸದೇ ದೃಶ್ಯವನ್ನು ವಿಡಿಯೋ ಸೆರೆ ಹಿಡಿಯಬೇಕಾಯಿತು” ಎಂದು ಉತ್ತರಿಸಿದ್ದಾರೆ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಹಳೆಯ ಘಟನೆಗಳೂ ಬಹಿರಂಗ :

ಚರತ್‌ವೀರ್ ಹಂಚಿಕೊಂಡ ಇನ್ನಷ್ಟು ವಿಡಿಯೋಗಳಲ್ಲಿ, ಹರ್ಜೀತ್ ಕೌರ್ ತಮ್ಮ ಪತಿಯನ್ನು ಚಪ್ಪಲಿಯಿಂದ ಹೊಡೆಯುತ್ತಿರುವುದು, ಮತ್ತೊಂದರಲ್ಲಿ ಮಗನನ್ನು ಅಜ್ಜಿಯಿಂದ ದೂರವಿಡಲು ಬಲವಂತ ಮಾಡುತ್ತಿರುವುದು ದಾಖಲಾಗಿದೆ. ಇದರಿಂದ ಆಕೆಯ ಹಲ್ಲೆಯ ಇತಿಹಾಸ ಹೊಸದಿಲ್ಲ ಎನ್ನುವುದನ್ನು ದೃಢಪಡಿಸಿದೆ.

ಪೊಲೀಸ್ ಕ್ರಮ :

ಪೊಲೀಸರು ಹರ್ಜೀತ್ ಕೌರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದು, ಪ್ರಾಥಮಿಕ ಹಂತದಲ್ಲಿ ಎಚ್ಚರಿಕೆ ನೀಡಿದ್ದಾರೆ. ವೃದ್ಧೆಯ ಹಕ್ಕು ಮತ್ತು ಭದ್ರತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ವರ್ಷಕ್ಕೊಮ್ಮೆ ಈ Fruit ತಿನ್ನಿ ಸಾಕು ; ವಯಸ್ಸು 60 ದಾಟಿದರೂ ಕನ್ನಡಕ ಬರಲ್ಲ.!
ಜನರಲ್ಲಿ ಆಕ್ರೋಶ :

ಈ ಘಟನೆ ಬೆಳಕಿಗೆ ಬಂದ ನಂತರ ನೆಟ್ಟಿಗರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, “ಕುಟುಂಬದೊಳಗೆ ವೃದ್ಧರನ್ನು ಹೀಗೆ ಹಿಂಸಿಸುವುದು ಮಾನವೀಯತೆಯ ವಿರುದ್ಧ” ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೊಸೆಯ ಮಾಡಿದ ಹಲ್ಲೆ (Assault) ಯ ವಿಡಿಯೋ :


ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

Tea

ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮಲ್ಲಿ ಅನೇಕರು ದಿನವನ್ನು ಪ್ರಾರಂಭಿಸುವ ಮುನ್ನವೇ ಒಂದು ಕಪ್ ಬಿಸಿ ಚಹಾ ಅಥವಾ ಕಾಫಿ (Tea or Coffee) ಕುಡಿಯದೇ ಇರಲಾರರು. ಕೆಲವರಿಗೆ ಇದು ವಾಹನಕ್ಕೆ ಇಂಧನ ಹಾಕಿದಂತೆ – ಸಮಯಕ್ಕೆ ಸರಿಯಾಗಿ ಚಹಾ ಸಿಗದಿದ್ದರೆ ದಿನವೇ ಸರಿಯಾಗಿ ಹೋಗುವುದಿಲ್ಲ ಅನ್ನುವ ಮಟ್ಟಿಗೆ ಈ ಅಭ್ಯಾಸ ಬೇರೂರಿದೆ. ‌

ಆದರೆ ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ (Tea) ಸೇವಿಸುವುದರಿಂದ ದೇಹದ ಮೇಲೆ ಹಲವು ರೀತಿಯ ಹಾನಿಕರ ಪರಿಣಾಮಗಳು ಬೀಳಬಹುದು.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಖಾಲಿ ಹೊಟ್ಟೆಯಲ್ಲಿ ಟೀ (Tea) ಕುಡಿಯುವ ಅಪಾಯ :

ರಾತ್ರಿ ಪೂರ್ತಿ ನಿದ್ರೆ ಮಾಡಿದ ನಂತರ ನಮ್ಮ ದೇಹದ ಆಮ್ಲೀಯತೆ (Acidity) ಮತ್ತು ಕ್ಷಾರೀಯತೆ (Alkalinity) ಮಟ್ಟಗಳು ಸ್ವಲ್ಪ ಮಟ್ಟಿಗೆ ಅಸ್ಥಿರವಾಗಿರುತ್ತವೆ. ಈ ಸಂದರ್ಭದಲ್ಲಿ ತಕ್ಷಣ ಬಿಸಿ ಚಹಾ (Tea) ಸೇವಿಸಿದರೆ ಆ ಸಮತೋಲನ ಇನ್ನಷ್ಟು ಹಾಳಾಗುತ್ತದೆ.

ಇದರಿಂದ ಚಯಾಪಚಯ ಕ್ರಿಯೆ ನಿಧಾನಗೊಳ್ಳಬಹುದು, ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು ಹಾಗೂ ದೀರ್ಘಾವಧಿಯಲ್ಲಿ ಗ್ಯಾಸ್ಟ್ರಿಕ್, ಆಸಿಡ್ ರಿಫ್ಲಕ್ಸ್ ಮುಂತಾದ ಸಮಸ್ಯೆಗಳು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ.

Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!

ಅಷ್ಟೇ ಅಲ್ಲದೆ, ಬೆಳಿಗ್ಗಿನ ಟೀ (Tea) ಅಭ್ಯಾಸವು ಹಲ್ಲುಗಳ ಮೇಲಿನ ಇನಾಮಲ್ ಪದರವನ್ನು ಹಾನಿಗೊಳಿಸಿ ದಂತ ಸಂಬಂಧಿತ ಕಾಯಿಲೆಗಳಿಗೂ ಕಾರಣವಾಗಬಹುದು. ಕೆಲವರಲ್ಲಿ ನಿರಂತರವಾಗಿ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಬಾಯಿಯ ವಾಸನೆ ಮತ್ತು ಹಲ್ಲುಗಳ ಕಲೆ ಕೂಡ ಹೆಚ್ಚಾಗುತ್ತದೆ.

ಮಕ್ಕಳಿಗೆ ಇನ್ನಷ್ಟು ಅಪಾಯಕಾರಿ :

ಇಂತಹ ಅಭ್ಯಾಸವನ್ನು ಮಕ್ಕಳಲ್ಲಿ ಮಾಡಿಸುವುದು ಇನ್ನೂ ಅಪಾಯಕಾರಿ. ಅವರ ಜೀರ್ಣಾಂಗ ವ್ಯವಸ್ಥೆ ಪೂರ್ಣವಾಗಿ ಅಭಿವೃದ್ಧಿಯಾಗಿರುವುದಿಲ್ಲ. ಈ ಸಮಯದಲ್ಲಿ ಬಿಸಿ ಚಹಾ ಕೊಟ್ಟರೆ ಅದು ನೇರವಾಗಿ ಜೀರ್ಣಾಂಗದ ಮೇಲೆ ಒತ್ತಡ ಬೀರುತ್ತದೆ ಮತ್ತು ದೀರ್ಘಾವಧಿಯಲ್ಲಿ ಮಕ್ಕಳ ಆರೋಗ್ಯ ಹಾನಿಯಾಗಬಹುದು.

ಆದ್ದರಿಂದ ಪೋಷಕರು ಮಕ್ಕಳ ಹಠಕ್ಕೆ ಮಣಿದು ಬೆಳಿಗ್ಗೆ ಟೀ (Tea) ಕೊಡುವುದನ್ನು ತಪ್ಪಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”
ಯಾವಾಗ ಚಹಾ ಕುಡಿಯಬೇಕು? :

ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದು ತಕ್ಷಣ ಟೀ ಕುಡಿಯುವ ಬದಲು ಮೊದಲು ಬೆಚ್ಚಗಿನ ನೀರು ಅಥವಾ ಹಣ್ಣುಗಳನ್ನು ಸೇವಿಸುವುದು ಒಳಿತು. ಬಳಿಕ ಸ್ವಲ್ಪ ಹೊತ್ತಿಗೆ ತಿಂಡಿ ಮಾಡಿದ ನಂತರ ಚಹಾ ಅಥವಾ ಕಾಫಿ ಕುಡಿಯಬಹುದು.

ಅದೇ ರೀತಿ, ಊಟ ಮಾಡಿದ ತಕ್ಷಣ ಚಹಾ ಕುಡಿಯುವ ಅಭ್ಯಾಸವೂ ಒಳ್ಳೆಯದಲ್ಲ. ಏಕೆಂದರೆ ಅದು ಆಹಾರದಲ್ಲಿನ ಕಬ್ಬಿಣ (Iron) ಸೇರಿದಂತೆ ಹಲವು ಪೋಷಕಾಂಶಗಳ ಶೋಷಣೆಯನ್ನು ತಡೆಯುತ್ತದೆ. ಹೀಗಾಗಿ ಊಟದ ನಂತರ ಕನಿಷ್ಠ ಒಂದು ಗಂಟೆಯ ನಂತರ ಮಾತ್ರ ಚಹಾ ಸೇವಿಸುವುದು ಉತ್ತಮ.

Online Game ನ ಭಯಾನಕತೆ : ನನ್ನ ಮಗಳಿಗೆ ಬೆತ್ತಲೆ ಫೋಟೋ ಕಳಿಸುವಂತೆ ಹೇಳಿದ್ದ ; ಸ್ಟಾರ್ ನಟ ಅಕ್ಷಯ್ ಕುಮಾರ್.!

0

ಜನಸ್ಫಂದನ ನ್ಯೂಸ್‌, ಮುಂಬೈ : ಮಕ್ಕಳ ಮೇಲೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ತಮ್ಮ ಜೀವನದ ಘಟನೆ ಹಂಚಿಕೊಂಡಿದ್ದಾರೆ. ಅವರು ತಮ್ಮ 13 ವರ್ಷದ ಪುತ್ರಿಯೊಂದಿಗೆ ಆಗಿದ್ದ ಒಂದು ಸೈಬರ್ ಘಟನೆ ಕುರಿತು ಶುಕ್ರವಾರ ಮುಂಬೈನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸೈಬರ್ ಜಾಗೃತಿ ತಿಂಗಳು 2025 ಉದ್ಘಾಟನಾ ಸಮಾರಂಭದಲ್ಲಿ ವಿವರಿಸಿದ್ದಾರೆ.

ಏನಿದು ಘಟನೆ?

ಕೆಲ ತಿಂಗಳ ಹಿಂದೆ, “ನಾನು ಮನೆಯಲ್ಲಿದ್ದಾಗ ನನ್ನ ಮಗಳು ಆನ್‌ಲೈನ್ ವಿಡಿಯೋ ಗೇಮ್ (Online video game) ಆಡುತ್ತಿದ್ದರು. ಆಗ, ಅನಾಮಿಕ ವ್ಯಕ್ತಿಯೊಬ್ಬ ಆನ್‌ಲೈನ್ ಮೂಲಕ ಸಂಪರ್ಕಿಸಿ, ಆಕೆಯ ಚಿತ್ರವನ್ನು ಕಳುಹಿಸುವಂತೆ ಕೇಳಿದ್ದಾನೆ ಎಂದು ನಟ ಅಕ್ಷಯ್ ಹೇಳಿದ್ದಾರೆ.

ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಆನ್‌ಲೈನ್ ಗೇಮ್‌ಗಳಲ್ಲಿ ನೀವು ಅಪರಿಚಿತ ವ್ಯಕ್ತಿಯೊಂದಿಗೆ ಕೂಡ ಆಡಬಹುದಾಗಿದೆ. ಅಕ್ಷಯ್ ಕುಮಾರ್ ಅವರ ಪುತ್ರಿ ಆನ್‌ಲೈನ್ ಗೇಮ್‌ (Game) ಆಡುತ್ತಿದ್ದಾಗ, ಆಟದ ಮಧ್ಯ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ‘ಧನ್ಯವಾದಗಳು’, ‘ಚೆನ್ನಾಗಿ ಆಡಿದೀರಿ’ ಮತ್ತು ‘ಅದ್ಭುತ’ ಮುಂತಾದ ಸಭ್ಯ ಸಂದೇಶಗಳೊಂದಿಗೆ ಪ್ರಾರಂಭಿಸಿದರು. ಅದು ಒಳ್ಳೆಯ ವ್ಯಕ್ತಿಯಂತೆ ತೋರುತ್ತಿತ್ತು.

ಸ್ವಲ್ಪ ಸಮಯದ ನಂತರ, ಅವನು ನನ್ನ ಮಗಳನ್ನ ‘ನೀನು ಗಂಡೋ ಅಥವಾ ಹೆಣ್ಣು?’ ಎಂಬ ಸಂದೇಶ ಬಂದಿತು. ನನ್ನ ಮಗಳು ಹೆಣ್ಣು ಎಂದು ಉತ್ತರ ಕೊಟ್ಟಳು. ಬಳಿಕ ಅವನು ‘ನಿನ್ನ ಬೆತ್ತಲೆ ಚಿತ್ರ ಕಳಿಸಬಹುದೇ?’ ಎಂದು ಕೇಳಿದನು. ನನ್ನ ಮಗಳು ಭಯಗೊಂಡು ಆ ಗೇಮ್ (Game) ಸ್ವಿಚ್ ಆಫ್ ಮಾಡಿದರು.”

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!

ಈ ಘಟನೆ, ಸೈಬರ್ ಅಪರಾಧಗಳು ಕೇವಲ ಕಿರುಮಟ್ಟದ ಅಂಚಿನ ವಿಷಯವಲ್ಲ, ಬೆಳೆಯುತ್ತಿರುವ ಮಕ್ಕಳಿಗೆ ನೇರವಾಗಿ ಹಾನಿ ತರುವಂತಹದು ಎಂಬುದನ್ನು ತೋರಿಸುತ್ತದೆ.

ಶಾಲೆಯಲ್ಲಿ ಸೈಬರ್ ಶಿಕ್ಷಣ ಕಡ್ಡಾಯವಾಗಲಿ :

ಅಕ್ಷಯ್ ಕುಮಾರ್ ಶಾಲಾ ವಿದ್ಯಾರ್ಥಿಗಳಿಗೆ (7ನೇ–10ನೇ ತರಗತಿ) ಸೈಬರ್ ಜಾಗೃತಿ ಮತ್ತು ಡಿಜಿಟಲ್ ಸುರಕ್ಷತಾ ಶಿಕ್ಷಣವನ್ನು ವಾರದ ಪ್ರಮುಖ ವಿಷಯವಾಗಿ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ಮಕ್ಕಳನ್ನು ಡಿಜಿಟಲ್ ಜಾಗದಲ್ಲಿ ಸುರಕ್ಷಿತವಾಗಿ ಮತ್ತು ಮಾಹಿತಿ ಸಮೃದ್ಧಿಯಾಗಿ ಬೆಳೆಸುವುದು ಬಹಳ ಮುಖ್ಯ” ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮ ಮತ್ತು ಭಾಗವಹಿಸಿದವರು :

ಈ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರು, ರಶ್ಮಿ ಶುಕ್ಲಾ, ಇಕ್ಬಾಲ್ ಸಿಂಗ್ ಚಾಹಲ್ (IPS) ಮತ್ತು ರಾಣಿ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಅಕ್ಷಯ್ ಕುಮಾರ್‌ನ ಈ ಅಭಿಪ್ರಾಯವು, ಸೈಬರ್ ಅಪರಾಧದ ತೀವ್ರತೆಯನ್ನು ಜನರ ಗಮನಕ್ಕೆ ತರುತ್ತಿದ್ದು, ಮಕ್ಕಳಿಗೆ ಆನ್‌ಲೈನ್ ಸುರಕ್ಷತೆಯನ್ನು ಕಲಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಿದೆ.

ಆನ್‌ಲೈನ್ ವಿಡಿಯೋ ಗೇಮ್ (Game) ಕುರಿತು ಅಕ್ಷಯ ವಿಡಿಯೋ :

https://twitter.com/i/status/1974025834919817462

An online game is a video game that is either partially or primarily played through the Internet or any other computer network available. Online game / Games are ubiquitous on modern gaming platforms, including PCs, consoles and mobile devices, and span many genres, including first-person shooters, strategy games, and massively multiplayer online role-playing game̤


ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

Tea

ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮಲ್ಲಿ ಅನೇಕರು ದಿನವನ್ನು ಪ್ರಾರಂಭಿಸುವ ಮುನ್ನವೇ ಒಂದು ಕಪ್ ಬಿಸಿ ಚಹಾ ಅಥವಾ ಕಾಫಿ (Tea or Coffee) ಕುಡಿಯದೇ ಇರಲಾರರು. ಕೆಲವರಿಗೆ ಇದು ವಾಹನಕ್ಕೆ ಇಂಧನ ಹಾಕಿದಂತೆ – ಸಮಯಕ್ಕೆ ಸರಿಯಾಗಿ ಚಹಾ ಸಿಗದಿದ್ದರೆ ದಿನವೇ ಸರಿಯಾಗಿ ಹೋಗುವುದಿಲ್ಲ ಅನ್ನುವ ಮಟ್ಟಿಗೆ ಈ ಅಭ್ಯಾಸ ಬೇರೂರಿದೆ. ‌

ಆದರೆ ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ (Tea) ಸೇವಿಸುವುದರಿಂದ ದೇಹದ ಮೇಲೆ ಹಲವು ರೀತಿಯ ಹಾನಿಕರ ಪರಿಣಾಮಗಳು ಬೀಳಬಹುದು.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಖಾಲಿ ಹೊಟ್ಟೆಯಲ್ಲಿ ಟೀ (Tea) ಕುಡಿಯುವ ಅಪಾಯ :

ರಾತ್ರಿ ಪೂರ್ತಿ ನಿದ್ರೆ ಮಾಡಿದ ನಂತರ ನಮ್ಮ ದೇಹದ ಆಮ್ಲೀಯತೆ (Acidity) ಮತ್ತು ಕ್ಷಾರೀಯತೆ (Alkalinity) ಮಟ್ಟಗಳು ಸ್ವಲ್ಪ ಮಟ್ಟಿಗೆ ಅಸ್ಥಿರವಾಗಿರುತ್ತವೆ. ಈ ಸಂದರ್ಭದಲ್ಲಿ ತಕ್ಷಣ ಬಿಸಿ ಚಹಾ (Tea) ಸೇವಿಸಿದರೆ ಆ ಸಮತೋಲನ ಇನ್ನಷ್ಟು ಹಾಳಾಗುತ್ತದೆ.

ಇದರಿಂದ ಚಯಾಪಚಯ ಕ್ರಿಯೆ ನಿಧಾನಗೊಳ್ಳಬಹುದು, ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು ಹಾಗೂ ದೀರ್ಘಾವಧಿಯಲ್ಲಿ ಗ್ಯಾಸ್ಟ್ರಿಕ್, ಆಸಿಡ್ ರಿಫ್ಲಕ್ಸ್ ಮುಂತಾದ ಸಮಸ್ಯೆಗಳು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ.

Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!

ಅಷ್ಟೇ ಅಲ್ಲದೆ, ಬೆಳಿಗ್ಗಿನ ಟೀ (Tea) ಅಭ್ಯಾಸವು ಹಲ್ಲುಗಳ ಮೇಲಿನ ಇನಾಮಲ್ ಪದರವನ್ನು ಹಾನಿಗೊಳಿಸಿ ದಂತ ಸಂಬಂಧಿತ ಕಾಯಿಲೆಗಳಿಗೂ ಕಾರಣವಾಗಬಹುದು. ಕೆಲವರಲ್ಲಿ ನಿರಂತರವಾಗಿ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಬಾಯಿಯ ವಾಸನೆ ಮತ್ತು ಹಲ್ಲುಗಳ ಕಲೆ ಕೂಡ ಹೆಚ್ಚಾಗುತ್ತದೆ.

ಮಕ್ಕಳಿಗೆ ಇನ್ನಷ್ಟು ಅಪಾಯಕಾರಿ :

ಇಂತಹ ಅಭ್ಯಾಸವನ್ನು ಮಕ್ಕಳಲ್ಲಿ ಮಾಡಿಸುವುದು ಇನ್ನೂ ಅಪಾಯಕಾರಿ. ಅವರ ಜೀರ್ಣಾಂಗ ವ್ಯವಸ್ಥೆ ಪೂರ್ಣವಾಗಿ ಅಭಿವೃದ್ಧಿಯಾಗಿರುವುದಿಲ್ಲ. ಈ ಸಮಯದಲ್ಲಿ ಬಿಸಿ ಚಹಾ ಕೊಟ್ಟರೆ ಅದು ನೇರವಾಗಿ ಜೀರ್ಣಾಂಗದ ಮೇಲೆ ಒತ್ತಡ ಬೀರುತ್ತದೆ ಮತ್ತು ದೀರ್ಘಾವಧಿಯಲ್ಲಿ ಮಕ್ಕಳ ಆರೋಗ್ಯ ಹಾನಿಯಾಗಬಹುದು.

ಆದ್ದರಿಂದ ಪೋಷಕರು ಮಕ್ಕಳ ಹಠಕ್ಕೆ ಮಣಿದು ಬೆಳಿಗ್ಗೆ ಟೀ (Tea) ಕೊಡುವುದನ್ನು ತಪ್ಪಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”
ಯಾವಾಗ ಚಹಾ ಕುಡಿಯಬೇಕು? :

ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದು ತಕ್ಷಣ ಟೀ ಕುಡಿಯುವ ಬದಲು ಮೊದಲು ಬೆಚ್ಚಗಿನ ನೀರು ಅಥವಾ ಹಣ್ಣುಗಳನ್ನು ಸೇವಿಸುವುದು ಒಳಿತು. ಬಳಿಕ ಸ್ವಲ್ಪ ಹೊತ್ತಿಗೆ ತಿಂಡಿ ಮಾಡಿದ ನಂತರ ಚಹಾ ಅಥವಾ ಕಾಫಿ ಕುಡಿಯಬಹುದು.

ಅದೇ ರೀತಿ, ಊಟ ಮಾಡಿದ ತಕ್ಷಣ ಚಹಾ ಕುಡಿಯುವ ಅಭ್ಯಾಸವೂ ಒಳ್ಳೆಯದಲ್ಲ. ಏಕೆಂದರೆ ಅದು ಆಹಾರದಲ್ಲಿನ ಕಬ್ಬಿಣ (Iron) ಸೇರಿದಂತೆ ಹಲವು ಪೋಷಕಾಂಶಗಳ ಶೋಷಣೆಯನ್ನು ತಡೆಯುತ್ತದೆ. ಹೀಗಾಗಿ ಊಟದ ನಂತರ ಕನಿಷ್ಠ ಒಂದು ಗಂಟೆಯ ನಂತರ ಮಾತ್ರ ಚಹಾ ಸೇವಿಸುವುದು ಉತ್ತಮ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಸಂಪಾದಕೀಯ :

ಒಟ್ಟಿನಲ್ಲಿ, ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಚಹಾ (Tea) ಕುಡಿಯುವ ಅಭ್ಯಾಸವು ದೇಹಕ್ಕೆ ಅಗತ್ಯವಿಲ್ಲದ ಒತ್ತಡವನ್ನು ತಂದುಕೊಡುತ್ತದೆ. ದೀರ್ಘಾವಧಿಯಲ್ಲಿ ಇದು ಗ್ಯಾಸ್ಟ್ರಿಕ್ ಸಮಸ್ಯೆಗಳು, ದಂತ ಕಾಯಿಲೆಗಳು ಮತ್ತು ಜೀರ್ಣಕ್ರಿಯಾ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ಜೀವನಕ್ಕಾಗಿ ಈ ಅಭ್ಯಾಸವನ್ನು ಬದಲಿಸಿ, ಸರಿಯಾದ ಸಮಯದಲ್ಲಿ ಮಾತ್ರ ಚಹಾ ಅಥವಾ ಕಾಫಿ ಸೇವಿಸುವುದು ಒಳಿತು.

Belagavi ಉರುಸ್ ಮೆರವಣಿಗೆ ವೇಳೆ ಘೋಷಣೆ ವಿವಾದ : ಕಲ್ಲುತೂರಾಟದಿಂದ ಉದ್ವಿಗ್ನತೆ.!

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ (Belagavi) ನಗರದಲ್ಲಿ ಮತ್ತೊಮ್ಮೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ರಾತ್ರಿ ಖಡೇಬಜಾರ್‌ನ ಖಡಕ್‌ ಗಲ್ಲಿ ಪ್ರದೇಶದಲ್ಲಿ ಕಲ್ಲುಗಳ ರಾಶಿ ಮನೆಗಳ ಮುಂದೆ ಬಿದ್ದಿರುವುದರಿಂದ ಸ್ಥಳೀಯರು ಆತಂಕಗೊಂಡು ಬೀದಿಗಳಲ್ಲಿ ಗುಂಪುಗೂಡಿದರು.

ತಕ್ಷಣವೇ ಬೆಳಗಾವಿ (Belagavi) ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!

ಮಾಹಿತಿಯ ಪ್ರಕಾರ, ಪ್ರತಿವರ್ಷ ನಡೆಯುವ ಬೆಳಗಾವಿ (Belagavi)  ಯ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ಈ ಬಾರಿ ಖಡಕ್‌ ಗಲ್ಲಿಯ ಮೂಲಕ ಸಾಗಿದ್ದು, ಅಲ್ಲಿ ಕೆಲ ಯುವಕರು ಘೋಷಣೆಗಳನ್ನು ಕೂಗಿರುವುದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಇದಾದ ಬಳಿಕ ಕೆಲವು ಅಪ್ರತಿಷ್ಠಿತ ವ್ಯಕ್ತಿಗಳಿಂದ ಮನೆಗಳ ಮೇಲೆ ಕಲ್ಲುತೂರಾಟ ನಡೆದಿರುವುದು ತಿಳಿದುಬಂದಿದೆ. ಅಲ್ಲದೆ ತಲ್ವಾರ್ ಪ್ರದರ್ಶಿಸಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆಯೆಂಬ ಆರೋಪವೂ ಕೇಳಿಬಂದಿದೆ.

Private : ಬೆಡ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಪತ್ನಿಯ ಗೌಪ್ಯ ಕ್ಷಣ ಸೆರೆಹಿಡಿದ ಪತಿ.!

ಸಾಮಾನ್ಯವಾಗಿ ಈ ಉರುಸ್ ಮೆರವಣಿಗೆ (Belagavi) ಜಾಲ್ಗಾರ ಗಲ್ಲಿ ಮತ್ತು ಶನಿವಾರ ಕೂಟ ಗಲ್ಲಿಯ ಮೂಲಕ ಸಾಗುತ್ತಿತ್ತು. ಆದರೆ, ಈ ಬಾರಿ ಅನುಮತಿ ಇಲ್ಲದಿದ್ದರೂ ಮೆರವಣಿಗೆ ಖಡಕ್‌ ಗಲ್ಲಿಯ ಮೂಲಕ ಹಾದುಹೋಗಿರುವುದರಿಂದ ಸ್ಥಳೀಯರ ಅಸಮಾಧಾನ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ Belagavi ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹಾಗೂ ಡಿಸಿಪಿ ನಾರಾಯಣ ಭರಮನಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಕಲ್ಲುತೂರಾಟ ಮತ್ತು ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

ಇದೀಗ Belagavi ಯ ಖಡಕ್‌ ಗಲ್ಲಿ ಪ್ರದೇಶದಲ್ಲಿ ಭಾರೀ ಪೊಲೀಸ್ ಬಲವನ್ನು ನಿಯೋಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ಪಡೆಯನ್ನೂ ನಿಯೋಜಿಸಲಾಗಿದೆ. ನಗರದಲ್ಲಿ ಶಾಂತಿ ಭದ್ರತೆ ಕಾಪಾಡುವಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


ಬೆಳಿಗ್ಗೆ ಎದ್ದ ತಕ್ಷಣ ಬಿಸಿ Tea ಕುಡಿಯುವ ಅಭ್ಯಾಸ ತಪ್ಪೇ? ಇಲ್ಲಿ ತಿಳಿದುಕೊಳ್ಳಿ.!

Tea

ಜನಸ್ಪಂದನ ನ್ಯೂಸ್, ಆರೋಗ್ಯ : ನಮ್ಮಲ್ಲಿ ಅನೇಕರು ದಿನವನ್ನು ಪ್ರಾರಂಭಿಸುವ ಮುನ್ನವೇ ಒಂದು ಕಪ್ ಬಿಸಿ ಚಹಾ ಅಥವಾ ಕಾಫಿ (Tea or Coffee) ಕುಡಿಯದೇ ಇರಲಾರರು. ಕೆಲವರಿಗೆ ಇದು ವಾಹನಕ್ಕೆ ಇಂಧನ ಹಾಕಿದಂತೆ – ಸಮಯಕ್ಕೆ ಸರಿಯಾಗಿ ಚಹಾ ಸಿಗದಿದ್ದರೆ ದಿನವೇ ಸರಿಯಾಗಿ ಹೋಗುವುದಿಲ್ಲ ಅನ್ನುವ ಮಟ್ಟಿಗೆ ಈ ಅಭ್ಯಾಸ ಬೇರೂರಿದೆ. ‌

ಆದರೆ ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬಿಸಿ ಚಹಾ (Tea) ಸೇವಿಸುವುದರಿಂದ ದೇಹದ ಮೇಲೆ ಹಲವು ರೀತಿಯ ಹಾನಿಕರ ಪರಿಣಾಮಗಳು ಬೀಳಬಹುದು.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಖಾಲಿ ಹೊಟ್ಟೆಯಲ್ಲಿ ಟೀ (Tea) ಕುಡಿಯುವ ಅಪಾಯ :

ರಾತ್ರಿ ಪೂರ್ತಿ ನಿದ್ರೆ ಮಾಡಿದ ನಂತರ ನಮ್ಮ ದೇಹದ ಆಮ್ಲೀಯತೆ (Acidity) ಮತ್ತು ಕ್ಷಾರೀಯತೆ (Alkalinity) ಮಟ್ಟಗಳು ಸ್ವಲ್ಪ ಮಟ್ಟಿಗೆ ಅಸ್ಥಿರವಾಗಿರುತ್ತವೆ. ಈ ಸಂದರ್ಭದಲ್ಲಿ ತಕ್ಷಣ ಬಿಸಿ ಚಹಾ (Tea) ಸೇವಿಸಿದರೆ ಆ ಸಮತೋಲನ ಇನ್ನಷ್ಟು ಹಾಳಾಗುತ್ತದೆ.

ಇದರಿಂದ ಚಯಾಪಚಯ ಕ್ರಿಯೆ ನಿಧಾನಗೊಳ್ಳಬಹುದು, ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು ಹಾಗೂ ದೀರ್ಘಾವಧಿಯಲ್ಲಿ ಗ್ಯಾಸ್ಟ್ರಿಕ್, ಆಸಿಡ್ ರಿಫ್ಲಕ್ಸ್ ಮುಂತಾದ ಸಮಸ್ಯೆಗಳು ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ.

Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!

ಅಷ್ಟೇ ಅಲ್ಲದೆ, ಬೆಳಿಗ್ಗಿನ ಟೀ (Tea) ಅಭ್ಯಾಸವು ಹಲ್ಲುಗಳ ಮೇಲಿನ ಇನಾಮಲ್ ಪದರವನ್ನು ಹಾನಿಗೊಳಿಸಿ ದಂತ ಸಂಬಂಧಿತ ಕಾಯಿಲೆಗಳಿಗೂ ಕಾರಣವಾಗಬಹುದು. ಕೆಲವರಲ್ಲಿ ನಿರಂತರವಾಗಿ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಬಾಯಿಯ ವಾಸನೆ ಮತ್ತು ಹಲ್ಲುಗಳ ಕಲೆ ಕೂಡ ಹೆಚ್ಚಾಗುತ್ತದೆ.

ಮಕ್ಕಳಿಗೆ ಇನ್ನಷ್ಟು ಅಪಾಯಕಾರಿ :

ಇಂತಹ ಅಭ್ಯಾಸವನ್ನು ಮಕ್ಕಳಲ್ಲಿ ಮಾಡಿಸುವುದು ಇನ್ನೂ ಅಪಾಯಕಾರಿ. ಅವರ ಜೀರ್ಣಾಂಗ ವ್ಯವಸ್ಥೆ ಪೂರ್ಣವಾಗಿ ಅಭಿವೃದ್ಧಿಯಾಗಿರುವುದಿಲ್ಲ. ಈ ಸಮಯದಲ್ಲಿ ಬಿಸಿ ಚಹಾ ಕೊಟ್ಟರೆ ಅದು ನೇರವಾಗಿ ಜೀರ್ಣಾಂಗದ ಮೇಲೆ ಒತ್ತಡ ಬೀರುತ್ತದೆ ಮತ್ತು ದೀರ್ಘಾವಧಿಯಲ್ಲಿ ಮಕ್ಕಳ ಆರೋಗ್ಯ ಹಾನಿಯಾಗಬಹುದು.

ಆದ್ದರಿಂದ ಪೋಷಕರು ಮಕ್ಕಳ ಹಠಕ್ಕೆ ಮಣಿದು ಬೆಳಿಗ್ಗೆ ಟೀ (Tea) ಕೊಡುವುದನ್ನು ತಪ್ಪಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”
ಯಾವಾಗ ಚಹಾ ಕುಡಿಯಬೇಕು? :

ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದು ತಕ್ಷಣ ಟೀ ಕುಡಿಯುವ ಬದಲು ಮೊದಲು ಬೆಚ್ಚಗಿನ ನೀರು ಅಥವಾ ಹಣ್ಣುಗಳನ್ನು ಸೇವಿಸುವುದು ಒಳಿತು. ಬಳಿಕ ಸ್ವಲ್ಪ ಹೊತ್ತಿಗೆ ತಿಂಡಿ ಮಾಡಿದ ನಂತರ ಚಹಾ ಅಥವಾ ಕಾಫಿ ಕುಡಿಯಬಹುದು.

ಅದೇ ರೀತಿ, ಊಟ ಮಾಡಿದ ತಕ್ಷಣ ಚಹಾ ಕುಡಿಯುವ ಅಭ್ಯಾಸವೂ ಒಳ್ಳೆಯದಲ್ಲ. ಏಕೆಂದರೆ ಅದು ಆಹಾರದಲ್ಲಿನ ಕಬ್ಬಿಣ (Iron) ಸೇರಿದಂತೆ ಹಲವು ಪೋಷಕಾಂಶಗಳ ಶೋಷಣೆಯನ್ನು ತಡೆಯುತ್ತದೆ. ಹೀಗಾಗಿ ಊಟದ ನಂತರ ಕನಿಷ್ಠ ಒಂದು ಗಂಟೆಯ ನಂತರ ಮಾತ್ರ ಚಹಾ ಸೇವಿಸುವುದು ಉತ್ತಮ.

Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಸಂಪಾದಕೀಯ :

ಒಟ್ಟಿನಲ್ಲಿ, ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಚಹಾ (Tea) ಕುಡಿಯುವ ಅಭ್ಯಾಸವು ದೇಹಕ್ಕೆ ಅಗತ್ಯವಿಲ್ಲದ ಒತ್ತಡವನ್ನು ತಂದುಕೊಡುತ್ತದೆ. ದೀರ್ಘಾವಧಿಯಲ್ಲಿ ಇದು ಗ್ಯಾಸ್ಟ್ರಿಕ್ ಸಮಸ್ಯೆಗಳು, ದಂತ ಕಾಯಿಲೆಗಳು ಮತ್ತು ಜೀರ್ಣಕ್ರಿಯಾ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ಜೀವನಕ್ಕಾಗಿ ಈ ಅಭ್ಯಾಸವನ್ನು ಬದಲಿಸಿ, ಸರಿಯಾದ ಸಮಯದಲ್ಲಿ ಮಾತ್ರ ಚಹಾ ಅಥವಾ ಕಾಫಿ ಸೇವಿಸುವುದು ಒಳಿತು.

ಶನಿವಾರ (ಅ.04)  Shree ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ನೂತನ ಪ್ರಧಾನ ಕಛೇರಿಯ ಕಟ್ಟಡ ಉದ್ಘಾಟನಾ ಸಮಾರಂಭ.!

0

ಜನಸ್ಪಂದನ ನ್ಯೂಸ್‌, ಮೂಡಲಗಿ : ಸರಳತೆಯ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ (Venerable Shree Siddeshwara Swamiji) ಅಮೃತ ಹಸ್ತದಿಂದ ಫೆಬ್ರುವರಿ 16,2002ರಲ್ಲಿ ಕಲ್ಲೋಳಿಯಲ್ಲಿ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗುವ ಗುರಿಯೊಂದಿಗೆ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ ಮೂಡಲಗಿ ಸಮೀಪದ ಕಲ್ಲೋಳಿಯಲ್ಲಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ಪ್ರಾರಂಭವಾಯಿತು.

ಆರಂಭದಲ್ಲಿ ಕೇವಲ 320 ಸದಸ್ಯರು, ರೂ.3.22 ಲಕ್ಷ ಶೇರು ಬಂಡವಾಳದೊಂದಿಗೆ ಸಂಸ್ಥೆಯು ಪ್ರಾರಂಭವಾಯಿತು. 10 ಚದರ ಅಡಿಯ ಸಣ್ಣ ಕೊಠಡಿಯನ್ನು ಬಾಡಿಗೆಗೆ ಪಡೆದು ತನ್ನ ಸಹಕಾರಿಯ ವ್ಯವಹಾರಿಕ ಪಯಣವನ್ನು ಪ್ರಾರಂಭಿಸಿತು. ಸಹಕಾರಿ ಸಂಘವು ಮೊದಲ ವರ್ಷದ ಕೊನೆಯಲ್ಲಿ ರೂ.61 ಸಾವಿರ ಠೇವು, ರೂ. 4.06 ಲಕ್ಷ ದುಡಿಯುವ ಬಂಡವಾಳ ಕ್ರೋಢಿಕರಿಸಿ ಸುಮಾರು 20 ಸಾವಿರ ರೂಪಾಯಿ ಲಾಭವನ್ನು ಗಳಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಂಘ ಬೆಳೆಯುವ ಭರವಸೆ ಮೂಡಿಸಿತು.

“Heart attack ಆದ ತಕ್ಷಣ ನಾಲಿಗೆಯ ಮೇಲೆ ಈ ಎಲೆಯ ರಸ ಹಚ್ಚಿ; ಜೀವ ಉಳಿಸಿ”.!

2008ರಲ್ಲಿ ಸಹಕಾರಿ ಕಾನೂನಿನಲ್ಲಿ ಬದಲಾವಣೆಯಾದ ಸಂದರ್ಭದಲ್ಲಿ ಸೌಹಾರ್ದ ಸಹಕಾರಿಯಾಗಿ ಪರಿವರ್ತನೆಗೊಂಡಿತು. ಸದ್ಯ 23 ವಸಂತಗಳನ್ನು ಪೂರೈಸಿರುವ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯು 2024-25ನೇ ಆರ್ಥಿಕ ವರ್ಷದ ಕೊನೆಯಲ್ಲಿ 16000 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ರೂ.23.50 ಲಕ್ಷ ಶೇರು ಬಂಡವಾಳ, ರೂ.106.55 ಕೋಟಿ ದುಡಿಯುವ ಬಂಡವಾಳ, ರೂ.13.35 ಕೋಟಿ ಗುಂತಾವಣಿಗಳು, ರೂ.96.72 ಕೋಟಿ ಠೇವುಗಳನ್ನು ಹೊಂದಿದ್ದು, ರೂ.2.76 ಕೋಟಿ ನಿವ್ವಳ ಲಾಭವನ್ನು ಗಳಿಕೆ ಮಾಡಿದೆ.

ಶನಿವಾರ (ಅ.04)  Shree ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ನೂತನ ಪ್ರಧಾನ ಕಛೇರಿಯ ಕಟ್ಟಡ ಉದ್ಘಾಟನಾ ಸಮಾರಂಭ.!

ವಿವಿಧ ಕ್ಷೇತ್ರಗಳ ಜನರಿಗೆ ಒಟ್ಟು ರೂ.89.44 ಕೋಟಿ ಸಾಲವನ್ನು ನೀಡಿದೆ ಹಾಗೂ ಪ್ರಾರಂಭದ ವರ್ಷದಿಂದ ಈವರೆಗೆ ಶೇ.100ರಷ್ಟು ಸಾಲ ವಸೂಲಾತಿ ಹೊಂದಿದ್ದು, ಗ್ರಾಮೀಣ ಜನರ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಪತ್ರಿಕೆಗೆ ಪ್ರತಿಕ್ರಿಯಿಸಿದರು.

Metro ನಿಲ್ದಾಣದಲ್ಲಿ ಕನ್ನಡ vs ಹಿಂದಿ ವಾಕ್ಸಮರ ; ಕನ್ನಡತಿಯ ದಿಟ್ಟ ಪ್ರತಿಕ್ರಿಯೆ.!

ನೂತನ ಕಟ್ಟಡ : ಗ್ರಾಹಕರ ಅನುಕೂಲಕ್ಕಾಗಿ ಕಲ್ಲೋಳಿಯ ಪಟ್ಟಣದ ಕೇಂದ್ರ ಸ್ಥಳದಲ್ಲಿ ಸುಸಜ್ಜಿತವಾದ ಮತ್ತು ಗ್ರಾಹಕರ ಸೌಲಭ್ಯಕ್ಕಾಗಿ ಕಟ್ಟಡವನ್ನು ನಿರ್ಮಿಸಿದೆ. ಶ್ರೀ ಮಹಾಲಕ್ಷ್ಮೀ ಸಹಕಾರಿ ಸಂಘವು ಪ್ರತಿ ವರ್ಷ ಗ್ರಾಹಕರಿಗೆ ಲಾಭಾಂಶ ವಿತರಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಶೇ. 20ರಷ್ಟು ಲಾಭಾಂಶ ವಿತರಿಸಿದೆ.

ಪ್ರಾರಂಭದಿಂದ ಅಡಿಟ್‌ದಲ್ಲಿ ‘ಅ’ ಶ್ರೇಣಿ ಪಡೆದು ಗ್ರಾಹಕರ ವಿಶ್ವಾಸ ಗಳಿಸಿದೆ. ವಾಹನ ಖರೀದಿ, ಕೃಷಿ, ಹೈನುಗಾರಿಕೆ, ಗೃಹ ನಿರ್ಮಾಣ, ವ್ಯಾಪಾರ, ಗುಡಿ ಕೈಗಾರಿಕೆಗಳಿಗೆ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ನೀಡಿ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿ, ಗ್ರಾಮೀಣ ಪ್ರದೇಶದ ಜನರಿಗೆ ಅತ್ಯುತ್ತಮ ಹೂಡಿಕೆಯ ಅವಕಾಶಗಳನ್ನು ಒದಗಿಸಿ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕರಿಸಿ, ಜನರು ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣವನ್ನು ಸದ್ಬಳಿಕೆ ಮಾಡುತ್ತಿರುವ ಹೆಗ್ಗಳಿಕೆ ಹೊಂದಿದೆ.

Gun : “ಗನ್” ಪರಿಶೀಲನೆಯ ವೇಳೆ ಸಂಭವಿಸಿದ ಆಕಸ್ಮಿಕ ಘಟನೆ ; ಸಿಸಿಟಿವಿ ದೃಶ್ಯ ವೈರಲ್.!

ಸಮರ್ಥ ತಂತ್ರಜ್ಞಾನ ಮತ್ತು ಪರಿಣಿತ ಸಿಬ್ಬಂದಿಯೊಂದಿಗೆ ವಿಶಾಲ ಮತ್ತು ಸುಸ್ಥಿರ ಹಣಕಾಸು ಸಂಸ್ಥೆಯಾಗಿ ಬೆಳಯುವುದು ಸಹಕಾರಿ ಸಂಸ್ಥೆಯ ಮುಂದಿನ ಗುರಿಯಾಗಿದೆ. ಗ್ರಾಹಕರಿಗೆ ತ್ವರಿತ ಸೇವೆ ನೀಡುವ ಉದ್ದೇಶದಿಂದ ಸೊಸೈಟಿಯು ಎಲ್ಲ ವ್ಯವಹಾರವನ್ನು ಗಣಿಕೀಕೃತ ವ್ಯವಹಾರಕ್ಕಾಗಿ ಅಳವಡಿಸಿದೆ. ಆರ್‌ಟಿಜಿಎಸ್, ನೆಪ್ಟ್ ಮತ್ತು 100 ಯುನಿಟ್‌ಗಳ ಸೇಪ್ ಲಾಕರ್ ವ್ಯವಸ್ಥೆಯನ್ನು ಹೊಂದಿದೆ. ಸಣ್ಣ ಪ್ರಮಾಣದ ಉಳಿತಾಯ ಮಾಡುವ ಗ್ರಾಹಕರಿಗಾಗಿ ಆರ್.ಡಿ ಯೋಜನೆಯನ್ನು ಹೊಂದಿದೆ. ಮಹಿಳೆಯರಿಗಾಗಿ, ಸೈನಿಕರಿಗಾಗಿ, ಹಿರಿಯ ನಾಗರಿಕರಿಗಾಗಿ ಠೇವುಗಳ ಮೇಲೆ 0.50% ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ.

ಸಣ್ಣ ವ್ಯಾಪಾರಸ್ಥರಿಗಾಗಿ 12% ಬಡ್ಡಿ ದರದಲ್ಲಿ ವ್ಯಾಪಾರ ಅಭಿವೃದ್ದಿ ಸಾಲವನ್ನು ನೀಡುತ್ತಿದೆ. ಗ್ರಾಮೀಣ ಮಹಿಳಾ ಸ್ವಾವಲಂಬನೆಗೆ ಮತ್ತು ಸ್ವದೇಸಿ ಚಿಂತನೆಯ ಸಾಕಾರಕ್ಕೆ ಮಹಾಲಕ್ಷ್ಮೀ ಸಹಕಾರಿ ಸಂಘವು ಹೆಚ್ಚು ಗಮನ ನೀಡಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಸಂಘದ ಕಟ್ಟಡದಲ್ಲಿ ಎಟಿಎಂ ಸೌಲಭ್ಯ ಕಲ್ಪಿಸುವ ಬಗ್ಗೆ ಆಡಳಿತ ಮಂಡಳಿಯವರು ನಿರ್ಧರಿಸಿದ್ದಾರೆ.

ಹೈವೇಯಲ್ಲಿ ಯುವಕರ ಅಪಾಯಕಾರಿ Stunt : ಒಂದೇ ಸ್ಕೂಟರ್‌ನಲ್ಲಿ 5 ಜನ ಕುಳಿತ ವಿಡಿಯೋ ವೈರಲ್.!

‘ಮಹಿಳಾ ಸ್ವ-ಸಹಾಯ ಸಂಘಗಳಿಗೆ ಈ ವರೆಗೆ ರೂ.60.23 ಕೋಟಿ ಸಾಲವನ್ನು ನೀಡಿ ಗ್ರಾಮೀಣ ಮಹಿಳಾ ಸ್ವಾವಲಂಬನೆಗೆ ಮತ್ತು ಸ್ವದೇಸಿ ಚಿಂತನೆಯ ಸಾಕಾರಕ್ಕೆ ಮಹಾಲಕ್ಷ್ಮೀ ಸಹಕಾರಿ ಸಂಘವು ಹೆಚ್ಚು ಗಮನ ನೀಡಿದೆ’

ಮೂಲ ಸಂಸ್ಥಾಪಕ ಅಧ್ಯಕ್ಷ : ಈರಣ್ಣ ಕಡಾಡಿ, ಉಪಾಧ್ಯಕ್ಷ : ಶ್ರೀಶೈಲ ತುಪ್ಪದ.

ನಿರ್ದೇಶಕರು :
  • ಬಾಳಪ್ಪ ಸಂಗಟಿ,
  • ಪರಪ್ಪ ಮಳವಾಡ,
  • ಸಹದೇವ ಹೆಬ್ಬಾಳ,
  • ಸತೀಶ ಕಡಾಡಿ,
  • ಶಿವಪ್ಪ ಗೋಸಬಾಳ,
  • ಕಾಶವ್ವ ಹೆಬ್ಬಾಳ,
  • ಅವ್ವಕ್ಕ ಹಡಗಿನಾಳ,
  • ಮಲ್ಲಿಕಾರ್ಜುನ ಹುಲೆನ್ನವರ,
  • ನಿಂಗಪ್ಪ ಮಿಡಕನಟ್ಟಿ ಆಡಳಿತದಲ್ಲಿ ಪ್ರಗತಿಯಲ್ಲಿದೆ.
DHFWS : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.!
ಸದ್ಯ ಶಾಖೆಗಳು : ಬೆಟಗೇರಿ, ಘಟಪ್ರಭಾ, ಯಾದವಾಡ ಕಾರ್ಯನಿರ್ವಹಿಸುತ್ತಿವೆ.

ಲೇಖನ : ಶಿವಾನಂದ ಮುಧೋಳ, ಮೂಡಲಗಿ.