ಬುಧವಾರ, ಫೆಬ್ರವರಿ 4, 2026

Janaspandhan News

Home Blog Page 2

ಮದುವೆಗೆ ನಿರಾಕರಣೆ: ಪ್ರಿಯತಮೆ ತಲೆ ಕತ್ತರಿಸಿ ಯಮುನಾ ನದಿಗೆ ಎಸೆದ ಪ್ರಿಯಕರ.

0

ಜನಸ್ಪಂದನ ನ್ಯೂಸ್‌, ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ಜನರಿಗೆ ಶಾಕ್ ನೀಡುವಂತಹ ಹತ್ಯೆಯ ಪ್ರಕರಣ ನಡೆದಿದೆ. 30 ವರ್ಷದ ವಿನಯ್ ಸಿಂಗ್, ತಮ್ಮ ಸಹೋದ್ಯೋಗಿ 32 ವರ್ಷದ ಮಿಂಕಿ ಶರ್ಮಾ ಅವರನ್ನು ಕೊಂದು, ಅವರ ತಲೆಯನ್ನು ಕಡಿದು, ದೇಹದ ಭಾಗಗಳನ್ನು ಗೋಣಿ ಚೀಲದಲ್ಲಿ ತುಂಬಿ ಯಮುನಾ ನದಿಗೆ ಎಸೆದಿರುವುದು ಪ್ರಕರಣದಲ್ಲಿ ದೃಢಪಟ್ಟಿದೆ.

ಮಿಂಕಿ ಶರ್ಮಾ ಸ್ಥಳೀಯ ಖಾಸಗಿ ಕಂಪನಿಯಲ್ಲಿ HR ಮ್ಯಾನೇಜರ್‍ ಆಗಿ ಕೆಲಸ ಮಾಡುತ್ತಿದ್ದಳು. ಆರೋಪಿ ವಿನಯ್ ಸಿಂಗ್ ಸಹ ಆ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಪೊಲೀಸರು ವರದಿ ಪ್ರಕಾರ, ಮಿಂಕಿ ಶರ್ಮಾ ಮದುವೆ ಪ್ರಸ್ತಾವವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ವಿನಯ್ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಪ್ರಿಯತಮೆ ತಲೆ ಕತ್ತರಿಸಿ ಯಮುನಾ ನದಿಗೆ ಎಸೆದ ಪ್ರಿಯಕರ :

Courtesy : Social Media (Twitter) 

ಪೊಲೀಸರ ಮಾಹಿತಿಯ ಪ್ರಕಾರ, ಕೊಲೆ ನಂತರ ದೇಹವನ್ನು ತುಂಡುಮಾಡಿ, ಗೋಣಿ ಚೀಲದಲ್ಲಿ ತುಂಬಿ ಜವಾಹರ್ ಸೇತುವೆಯ ಬಳಿಯಲ್ಲಿ ಯಮುನಾ ನದಿಗೆ ಎಸೆದಿದ್ದಾನೆ.

ಜನವರಿ 24 ರಂದು ಬೆಳಗಿನ ವೇಳೆ ಜವಾಹರ್ ಸೇತುವೆಯ ಮೇಲೆ ಗೋಣಿ ಚೀಲದಲ್ಲಿದ್ದ ತಲೆ ಇಲ್ಲದ ಶವವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಂತರ ಮೃತವನ್ನು ಮಿಂಕಿ ಶರ್ಮಾ ಎಂದು ಗುರುತಿಸಲಾಗಿದೆ.

ಪೊಲೀಸರು ಹೇಳಿದರು, ವಿನಯ್ ಸಿಂಗ್ ಮತ್ತು ಮಿಂಕಿ ಶರ್ಮಾ ಎರಡು ವರ್ಷಗಳಿಗೂ ಹೆಚ್ಚು ಕಾಲ ಸಂಬಂಧದಲ್ಲಿದ್ದರು. ಆದರೆ ಮಿಂಕಿ ಶರ್ಮಾ ಇತ್ತೀಚೆಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಕಾರಣದಿಂದಾಗಿ ಜಗಳಗಳು ಹೆಚ್ಚಾಗಿದ್ದು, ಕೊನೆಗೆ ಹತ್ಯೆ ಮೂಲಕ ಕೊನೆಗೊಂಡಿದೆ.

ಈ ಕ್ರೈಂ ಸುದ್ದಿ ಓದಿ : ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

ಜನವರಿ 23 ರಂದು ಮಧ್ಯಾಹ್ನ 2 ಗಂಟೆಗೆ ಮಿಂಕಿ ಮನೆಯವರಿಗೆ ಕಚೇರಿಗೆ ಹೋಗುತ್ತಿದ್ದಳು ಎಂದು ತಿಳಿಸಿದ್ದು, ಆದರೆ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಮನೆತನ ಆತಂಕಗೊಂಡಿತು. ಮಿಂಕಿಯ ಕುಟುಂಬವು ಎಲ್ಲಾ ಕಡೆ ಹುಡುಕಿದರೂ ಯಾವುದೇ ಸುಳಿವು ಸಿಕ್ಕದಿರುವುದರಿಂದ, ಟ್ರಾನ್ಸ್ ಯಮುನಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು.

ಪೊಲೀಸರು ಐದು ತಂಡಗಳನ್ನು ರಚಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಪರಿಶೀಲನೆಯ ವೇಳೆ, ವ್ಯಕ್ತಿಯೊಬ್ಬ ಗೋಣಿ ಚೀಲವನ್ನು ಸ್ಕೂಟರ್‌ನಲ್ಲಿ ಜವಾಹರ್ ಸೇತುವೆಗೆ ಕರೆದೊಯ್ಯುತ್ತಿರುವ ದೃಶ್ಯವನು ಕಂಡುಹಿಡಿದಿದ್ದಾರೆ. ತನಿಖೆ ಆಧಾರದ ಮೇಲೆ ಆರೋಪಿ ವಿನಯ್ ಸಿಂಗ್ ಎಂದು ಗುರುತಿಸಲಾಯಿತು.

ಅದರ ನಂತರ ಆತನ ಬಂಧನ ಮಾಡಲಾಗಿದ್ದು, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 103(1) ಮತ್ತು 238 ರ ಅಡಿಯಲ್ಲಿ FIR ದಾಖಲಾಗಿದ್ದು, ಆರೋಪಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಇದನ್ನು ಓದಿ : ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

ಪೊಲೀಸರ ವಶದಲ್ಲಿ ಸ್ಕೂಟರ್, ಚಾಕು ಮತ್ತು ದೇಹದ ಭಾಗಗಳಿಗೆ ಸಂಬಂಧಿಸಿದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಆಗ್ರಾದ ಜನರಲ್ಲಿ ಭಯ ಮತ್ತು ಆತಂಕ ಉಂಟುಮಾಡಿದ್ದು, ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆಯನ್ನು ಮುಂದುವರೆಸುತ್ತಿದ್ದಾರೆ.


Disclaimer: ಈ ವರದಿಯಲ್ಲಿ ಉಲ್ಲೇಖಿಸಲಾದ ಮಾಹಿತಿ ಅಧಿಕೃತ ಪೊಲೀಸ್ ಮೂಲಗಳು ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದ ತನಿಖೆ ಇನ್ನೂ ಮುಂದುವರಿದಿದ್ದು, ಯಾವುದೇ ವ್ಯಕ್ತಿಯ ವಿರುದ್ಧ ಅಂತಿಮ ತೀರ್ಪು ನ್ಯಾಯಾಲಯದಿಂದಲೇ ಬರಬೇಕಾಗಿರುತ್ತದೆ. ಈ ಸುದ್ದಿ ಸಾರ್ವಜನಿಕ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ.

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ ; 6 ಜನರ ಸಾವಿನ ಶಂಕೆ.

0

ಜನಸ್ಪಂದನ ನ್ಯೂಸ್, ಬಾರಾಮತಿ: ಮಹಾರಾಷ್ಟ್ರದ ಬಾರಾಮತಿ ಸಮೀಪ ಇಂದು ಬೆಳಿಗ್ಗೆ ಸಣ್ಣ ವಿಮಾನವೊಂದು ಅಪಘಾತಕ್ಕೀಡಾದ ಘಟನೆ ರಾಜ್ಯಾದ್ಯಂತ ಆತಂಕ ಮೂಡಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ವಿಮಾನದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮುಂಬೈನಿಂದ ಬಾರಾಮತಿಗೆ ಆಗಮಿಸುತ್ತಿದ್ದ ಸಣ್ಣ ವಿಮಾನವು ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ, ವಿಮಾನ ನಿಲ್ದಾಣದ ಸಮೀಪದ ಹೊಲ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಪಘಾತದ ನಂತರ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ವಿಮಾನ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ :

ರಕ್ಷಣಾ ಕಾರ್ಯಾಚರಣೆ ತ್ವರಿತ :

ಘಟನೆಗೆ ತಕ್ಷಣ ಸ್ಪಂದಿಸಿದ ಸ್ಥಳೀಯ ಆಡಳಿತ ಹಾಗೂ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, 6 ಮಂದಿ ಮೃತಪಟ್ಟಿರುವ ಸಾಧ್ಯತೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಅಜಿತ್ ಪವಾರ್ ಕುರಿತು ಗೊಂದಲ :

ಅಪಘಾತದ ಸುದ್ದಿ ಹೊರಬರುತ್ತಿದ್ದಂತೆ ಅಜಿತ್ ಪವಾರ್ ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತವಾಯಿತು. ಆದರೆ, ಅವರ ಆಪ್ತ ಮೂಲಗಳಿಂದ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ. ಕೆಲ ಮೂಲಗಳು ಅವರು ವಿಮಾನದಲ್ಲಿದ್ದರು ಎಂದು ಹೇಳಿದ್ದರೆ, ಮತ್ತೊಂದು ಮೂಲಗಳು ಅವರು ಬೇರೆ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿಸಿವೆ. ಈ ಕುರಿತು ಸ್ಪಷ್ಟ ಮಾಹಿತಿ ನಿರೀಕ್ಷಿಸಲಾಗಿದೆ.

ಡಿಜಿಸಿಎ ತನಿಖೆ ಸಾಧ್ಯತೆ :

ವಿಮಾನ ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ. ತಾಂತ್ರಿಕ ದೋಷ, ಹವಾಮಾನ ಅಥವಾ ಲ್ಯಾಂಡಿಂಗ್ ಸಮಯದ ತಪ್ಪು ಎಂಬ ಎಲ್ಲಾ ಅಂಶಗಳ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತನಿಖೆ ನಡೆಸುವ ಸಾಧ್ಯತೆ ಇದೆ.

ಇದನ್ನು ಓದಿ : Takeoff ಹಂತದಲ್ಲಿಯೇ ವಿಮಾನ ನೆಲಕ್ಕೆ : ಇಬ್ಬರು ಸಾವು ; ವಿಡಿಯೋ ವೈರಲ್.!

ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ :

ಘಟನೆ ಹೊರಬರುತ್ತಿದ್ದಂತೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಬಾರಾಮತಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕಾರ್ಯಕರ್ತರು ಮತ್ತು ಅಧಿಕಾರಿಗಳು ವಿಮಾನ ನಿಲ್ದಾಣದತ್ತ ಧಾವಿಸಿದ್ದಾರೆ.


Disclaimer : ಈ ಸುದ್ದಿ ಪ್ರಾಥಮಿಕ ವರದಿಗಳ ಆಧಾರದಲ್ಲಿ ಪ್ರಕಟಿಸಲಾಗಿದ್ದು, ಅಧಿಕೃತ ಮಾಹಿತಿ ಲಭ್ಯವಾದ ನಂತರ ವಿವರಗಳಲ್ಲಿ ಬದಲಾವಣೆ ಸಂಭವಿಸಬಹುದು. ಯಾವುದೇ ಊಹಾಪೋಹ ಅಥವಾ ದೃಢೀಕರಣವಿಲ್ಲದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿಲ್ಲ.

ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್‌; 8 ಪ್ರಯಾಣಿಕರಿಗೆ ಗಾಯ.

0

ಜನಸ್ಪಂದನ ನ್ಯೂಸ್, ಚಿತ್ರದುರ್ಗ: ಚಿತ್ರದುರ್ಗದಲ್ಲಿ ಬಸ್ ಅಪಘಾತದ ಘಟನೆ ಮಾಸುವ ಮುನ್ನವೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಭಯಾನಕ ಅವಘಡ ನಡೆದಿದೆ. ಹೊಸನಗರ ತಾಲೂಕಿನ ಸೂಡೂರು ಸಮೀಪ ಚಲಿಸುತ್ತಿದ್ದ ಖಾಸಗಿ ಎಸಿ ಸ್ಲೀಪರ್ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಹೊಸನಗರದಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ‘ಶ್ರೀ ಅನ್ನಪೂರ್ಣೇಶ್ವರಿ’ ಸಂಸ್ಥೆಗೆ ಸೇರಿದ ಬಸ್ಸಿನಲ್ಲಿ ಸುಮಾರು 36 ರಿಂದ 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅರಸಾಳು ಮತ್ತು ಸೂಡೂರು ಗ್ರಾಮಗಳ ಮಧ್ಯೆ ಇರುವ 9ನೇ ಮೈಲಿಗಲ್ಲು ಸಮೀಪ ಬಸ್ ಚಲಿಸುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್‌ :

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ :

ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚೆತ್ತ ಚಾಲಕ ಅಪಾರ ಧೈರ್ಯ ಪ್ರದರ್ಶಿಸಿ, ವಾಹನವನ್ನು ನಿಯಂತ್ರಿಸಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಎಮರ್ಜೆನ್ಸಿ ಡೋರ್ ಮೂಲಕ ಸುರಕ್ಷಿತವಾಗಿ ಹೊರಬರುವ ಅವಕಾಶ ದೊರೆತಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ಪ್ರಮಾಣದ ಪ್ರಾಣಾಪಾಯ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.‌

ಈ ಅಪಘಾತ ಸುದ್ದಿ ಓದಿ : ದಾರುಣ ಬಸ್ Accident : 15 ಮಂದಿ ಸಾವು, ಹಲವು ಮಂದಿ ಗಂಭೀರ.

8 ಮಂದಿಗೆ ಗಾಯ, ಮೆಗ್ಗಾನ್ ಆಸ್ಪತ್ರೆಗೆ ದಾಖಲು :

ಈ ಅವಘಡದಲ್ಲಿ ಬಸ್ಸಿನಲ್ಲಿದ್ದ 40 ಪ್ರಯಾಣಿಕರ ಪೈಕಿ 8 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಪ್ರಯಾಣಿಕರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಸಂಪೂರ್ಣ ಸುಟ್ಟು ಕರಕಲಾದ ಬಸ್ :

ಬೆಂಕಿ ಕ್ಷಣಾರ್ಧದಲ್ಲಿ ಇಡೀ ಬಸ್ಸಿಗೆ ವ್ಯಾಪಿಸಿದ ಪರಿಣಾಮ ಪ್ರಯಾಣಿಕರ ಬಟ್ಟೆ, ಚೀಲಗಳು ಹಾಗೂ ಮೌಲ್ಯಯುತ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ರಸ್ತೆ ಮೂಲಕ ಸಾಗುತ್ತಿದ್ದ ಸಾರ್ವಜನಿಕರು ಧಾವಿಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ.

ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಖಾಸಗಿ ಸ್ಲೀಪರ್ ಬಸ್‌; 8 ಪ್ರಯಾಣಿಕರಿಗೆ ಗಾಯ.
ಸಂಪೂರ್ಣ ಸುಟ್ಟು ಕರಕಲಾದ ಬಸ್

ಅಗ್ನಿಶಾಮಕ ದಳದ ಕಾರ್ಯಾಚರಣೆ :

ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಸ್ ಸಂಪೂರ್ಣವಾಗಿ ಹಾನಿಗೊಂಡಿದ್ದು, ನಷ್ಟದ ಪ್ರಮಾಣ ಹೆಚ್ಚಾಗಿದೆ.

ಇದನ್ನು ಓದಿ : ಭೀಕರ ಅಪಘಾತ: ಖಾಸಗಿ ಬಸ್–ಲಾರಿ ಡಿಕ್ಕಿ, 9 ಜನ ಸಜೀವ ದಹನ.

ತನಿಖೆ ಆರಂಭ :

ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ಸಿಗೆ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Courtesy : Social Media (Kannada Prabha)


Disclaimer :ಈ ವರದಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಅಪಕೀರ್ತಿಗೊಳಿಸುವ ಉದ್ದೇಶ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಅಧಿಕಾರಿಗಳ ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗುತ್ತಿದೆ.

ನಿಷ್ಠೆಗೆ ಸಾಕ್ಷಿ: 4 ದಿನ ಮಾಲೀಕನ ಶವ ಕಾವಲು ಕಾಯ್ದ ನಾಯಿ; ವಿಡಿಯೋ ವೈರಲ್‌.

0

ಜನಸ್ಪಂದನ ನ್ಯೂಸ್, ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೌರ್ ಪ್ರದೇಶದಲ್ಲಿ ನಡೆದ ಮನಕಲಕುವ ಘಟನೆಯೊಂದು ದೇಶಾದ್ಯಂತ ಗಮನ ಸೆಳೆದಿದೆ. ದಟ್ಟ ಹಿಮಪಾತದ ಮಧ್ಯೆ ಮೃತಪಟ್ಟ ತನ್ನ ಮಾಲೀಕನ ಮೃತದೇಹವನ್ನು ಪಿಟ್‌ಬುಲ್‌ ಜಾತಿಯ ಶ್ವಾನವೊಂದು ನಿರಂತರವಾಗಿ ನಾಲ್ಕು ದಿನಗಳ ಕಾಲ ಕಾವಲು ಕಾಯ್ದ ಘಟನೆ ಪ್ರಾಣಿ ನಿಷ್ಠೆಯ ಅಪರೂಪದ ಉದಾಹರಣೆಯಾಗಿ ಹೊರಹೊಮ್ಮಿದೆ.

ಘಟನೆ ಜನವರಿ 22ರಂದು ನಡೆದಿದೆ. ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್‌ ಮಾಡುವ ಉದ್ದೇಶದಿಂದ ವಿಕ್ಷಿತ್ ರಾಣಾ (19) ಮತ್ತು ಅವರ ಸಂಬಂಧಿ ಆಯುಷ್ (13) ಭರ್ಮಣಿ ದೇವಾಲಯದ ಸಮೀಪದ ಎತ್ತರದ ಬೆಟ್ಟ ಪ್ರದೇಶಕ್ಕೆ ತೆರಳಿದ್ದರು. ವಿಕ್ಷಿತ್ ಅವರೊಂದಿಗೆ ಅವರ ಪೋಷ್ಯದ ಪಿಟ್‌ಬುಲ್ ನಾಯಿ ಸಹ ಇತ್ತು.

ಮಾಲೀಕನ ಶವ ಕಾವಲು ಕಾಯ್ದ ನಾಯಿ ವಿಡಿಯೋ :

ಈ ನಡುವೆ ಹವಾಮಾನ ಇಲಾಖೆ ಈ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸುವ ಕುರಿತು ಯೆಲ್ಲೋ ಅಲರ್ಟ್ ನೀಡಿತ್ತು. ಆದರೂ ಮುನ್ನೆಚ್ಚರಿಕೆ ವಹಿಸದೆ ಅವರು ಆ ಭಾಗಕ್ಕೆ ತೆರಳಿದ್ದರು. ಸಂಜೆ ವೇಳೆಗೆ ಹವಾಮಾನ ತೀವ್ರವಾಗಿ ಹದಗೆಟ್ಟ ಪರಿಣಾಮ, ಇಬ್ಬರೂ ಯುವಕರು ಹಾಗೂ ನಾಯಿ ಹಿಮದ ಮಧ್ಯೆ ಸಿಲುಕಿಕೊಂಡರು.

ಈ ವೈರಲ್‌ ವಿಡಿಯೋ ಸುದ್ದಿ ಓದಿ :‌ ಮಾಲೀಕನ ಸಾವು ; ಬಿಕ್ಕಿ ಬಿಕ್ಕಿ ಅತ್ತ ನಾಯಿಯ ಭಾವುಕ ದೃಶ್ಯ ವೈರಲ್.

ಅಪಾಯವನ್ನು ಅರಿತ ವಿಕ್ಷಿತ್ ತಮ್ಮ ಕುಟುಂಬಕ್ಕೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಜಿಲ್ಲಾಡಳಿತಕ್ಕೆ ವಿಷಯ ತಿಳಿಸಲಾಗಿ ರಕ್ಷಣಾ ಪಡೆಗಳು ಹುಡುಕಾಟ ಆರಂಭಿಸಿತು. ಆದರೆ ವ್ಯಾಪಕ ಹಿಮಪಾತ ಮತ್ತು ತೀವ್ರ ಚಳಿಯಿಂದಾಗಿ ಸ್ಥಳಕ್ಕೆ ತಲುಪುವುದು ಅಸಾಧ್ಯವಾಯಿತು.

ಮೂರು ದಿನಗಳ ಬಳಿಕ ಹೆಲಿಕಾಪ್ಟರ್ ಮೂಲಕ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದಟ್ಟ ಹಿಮದ ನಡುವೆ ನಿಂತಿರುವ ಪಿಟ್‌ಬುಲ್ ನಾಯಿಯು ಭದ್ರತಾ ಸಿಬ್ಬಂದಿಯ ಗಮನ ಸೆಳೆಯಿತು. ಸ್ಥಳಕ್ಕೆ ಇಳಿದು ಪರಿಶೀಲಿಸಿದಾಗ ವಿಕ್ಷಿತ್ ರಾಣಾ ಅವರ ಮೃತದೇಹದ ಬಳಿಯೇ ನಾಯಿ ನಿಂತಿದ್ದುದನ್ನು ಕಂಡು ಅಧಿಕಾರಿಗಳು ಅಚ್ಚರಿಗೊಂಡರು.

ಮೃತದೇಹವನ್ನು ಕೊಂಡೊಯ್ಯಲು ಮುಂದಾದಾಗ, ನಾಯಿ ಅಪರಿಚಿತರನ್ನು ಕಂಡು ಬೊಗಳುತ್ತಾ ಶವದ ಬಳಿಗೆ ಯಾರನ್ನೂ ಹತ್ತಿರ ಬಿಡಲಿಲ್ಲ. ತೀವ್ರ ಚಳಿ ಮತ್ತು ಹಸಿವಿನಲ್ಲಿದ್ದರೂ ತನ್ನ ಮಾಲೀಕನನ್ನು ಕಾಪಾಡುವ ನಿಷ್ಠೆ ತೋರಿಸಿತು.

ಬಳಿಕ ರಕ್ಷಣಾ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಶ್ವಾನವನ್ನು ಪ್ರೀತಿಯಿಂದ ಸಮಾಧಾನಪಡಿಸಿದ ನಂತರವೇ ಶವವನ್ನು ಸ್ಥಳಾಂತರಿಸಲು ಸಾಧ್ಯವಾಯಿತು.

ಇದನ್ನು ಓದಿ : ಆಟಿಕೆ ಗನ್‌ನಿಂದ ಶೂಟ್ ಮಾಡಿದ ಪುಟಾಣಿ; ದಪ್ಪೆಂದು ಬಿದ್ದ ಮರಿಯಾನೆ, ವಿಡಿಯೋ ವೈರಲ್

ನಂತರ ವಿಕ್ಷಿತ್ ಹಾಗೂ ಆಯುಷ್ ಅವರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಪಿಟ್‌ಬುಲ್ ನಾಯಿಯನ್ನು ಕೂಡ ವಿಕ್ಷಿತ್ ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ದಿನಗಳ ಕಾಲ ಹಿಮದ ನಡುವೆ ನಿಂತು ಮಾಲೀಕನ ಶವವನ್ನು ರಕ್ಷಿಸಿದ ಈ ಪಿಟ್‌ಬುಲ್ ನಾಯಿ ತೋರಿದ ನಿಷ್ಠೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಾಣಿಗಳಲ್ಲೂ ಅಳಿಸಲಾರದ ಪ್ರೀತಿ ಮತ್ತು ನಿಷ್ಠೆ ಅಡಗಿದೆ ಎಂಬುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ.

Video Courtesy : Social Media (Twitter) 


Disclaimer: ಈ ವರದಿಯಲ್ಲಿರುವ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವ ಸುದ್ದಿಗಳು ಹಾಗೂ ಅಧಿಕೃತ ಮೂಲಗಳ ಆಧಾರಿತವಾಗಿದೆ. ವಿಡಿಯೋ ಅಥವಾ ಚಿತ್ರಗಳು ಸಾಮಾಜಿಕ ಜಾಲತಾಣಗಳಿಂದ ಪಡೆಯಲಾಗಿದ್ದು, ಅವುಗಳ ನಿಖರತೆಗೆ ಜನಸ್ಪಂದನ ನ್ಯೂಸ್ ಹೊಣೆವಹಿಸುವುದಿಲ್ಲ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಈ ಸುದ್ದಿ ಪ್ರಕಟಿಸಲಾಗಿದೆ.

ಅಕ್ರಮ ಸಂಬಂಧ ಹೊಂದಿದ್ದ ಪತ್ನಿ; ಪ್ರಿಯಕರನ ಜೊತೆ ಮದುವೆ ಮಾಡಿಸಿದ ಪತಿ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ಅಸಾಮಾನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಅನೈತಿಕ ಸಂಬಂಧ / ಅಕ್ರಮ ಸಂಬಂಧ (illicit affair) ವೈವಾಹಿಕ ಕಲಹ ಹಾಗೂ ವಿಚ್ಛೇದನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಸಮಾಜದ ಗಮನ ಸೆಳೆಯುತ್ತಿದೆ. ಇಂಥದ್ದೇ ಒಂದು ಅಪರೂಪದ ಮತ್ತು ಚರ್ಚೆಗೆ ಗ್ರಾಸವಾದ ಘಟನೆ ಇದೀಗ ಗ್ರಾಮೀಣ ಭಾಗವೊಂದರಲ್ಲಿ ನಡೆದಿದೆ.

ಆಶಿಶ್ ಎಂಬ ವ್ಯಕ್ತಿ ತನ್ನ ಪತ್ನಿ ಪಿಂಕಿಯನ್ನು ಆಕೆಯ ಪ್ರಿಯಕರನೊಂದಿಗೆ ನೋಡಿದ ನಂತರ ನಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪ್ರಕರಣದಲ್ಲಿ ಪತಿಯೇ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ದೇವಸ್ಥಾನದಲ್ಲಿ ಮದುವೆ ಮಾಡಿಸಿರುವುದು ಜನರನ್ನು ಅಚ್ಚರಿಗೊಳಿಸಿದೆ.

ಪೊಲೀಸರಿಗೆ ಮಾಹಿತಿ ; ಗ್ರಾಮಸ್ಥರ ಮಧ್ಯೆ ಪಂಚಾಯಿತಿ :

ಘಟನೆ ಬೆಳಕಿಗೆ ಬಂದ ಬಳಿಕ ಆಶಿಶ್ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿ, ಪಿಂಕಿಯ ಪ್ರಿಯಕರ ಅಮಿತ್‌ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಗ್ರಾಮದ ಹಿರಿಯರು ಹಾಗೂ ಮುಖಂಡರ ಸಮ್ಮುಖದಲ್ಲಿ ಪಂಚಾಯಿತಿ ಸಭೆ ನಡೆಸಲಾಯಿತು.

ಈ ಸುದ್ದಿನ್ನು ಓದಿ : ಗರ್ಲ್‌ಫ್ರೆಂಡ್ ಜೊತೆಗಿದ್ದ ಪತಿಯನ್ನು ಹಿಡಿದ ಪತ್ನಿ ; ಮಧ್ಯರಸ್ತೆಯಲ್ಲಿ ಭೀಕರ ಗಲಾಟೆ, ವಿಡಿಯೋ ವೈರಲ್.

ಪಂಚಾಯಿತಿಯಲ್ಲಿ ಪಿಂಕಿ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ, ಇನ್ನು ಮುಂದೆ ಪತಿ ಆಶಿಶ್ ಜೊತೆ ಜೀವನ ಸಾಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ. ತನ್ನ ಹಳೆಯ ಪ್ರೀತಿಯನ್ನೇ ಮುಂದುವರಿಸಬೇಕು ಎಂಬ ನಿರ್ಧಾರದಲ್ಲಿದ್ದ ಆಕೆ, ಅಮಿತ್‌ರೊಂದಿಗೆ ಬದುಕಲು ಬಯಸಿರುವುದಾಗಿ ಹೇಳಿದ್ದಾಳೆ.

ಅಕ್ರಮ ಸಂಬಂಧ ಹೊಂದಿದ್ದ ಪತ್ನಿ; ಮದುವೆ ಮಾಡಿಸಿದ ಪತಿ :

ಇದಕ್ಕೆ ಪ್ರತಿಕ್ರಿಯಿಸಿದ ಆಶಿಶ್, ದಾಂಪತ್ಯ ಜೀವನದಲ್ಲಿ ನಿರಂತರ ಕಲಹದಿಂದ ಬೇಸತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಬಂಧಿಸುವುದಕ್ಕಿಂತ, ಆಕೆಯ ಸಂತೋಷವೇ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಂಚಾಯಿತಿಯ ಅನುಮತಿ ದೊರೆತಲ್ಲಿ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ವಿವಾಹ ಮಾಡಿಕೊಡಲು ಸಿದ್ಧ ಎಂದು ಹೇಳಿದ್ದಾರೆ.

ಅಂತಿಮವಾಗಿ ಗ್ರಾಮಸ್ಥರ ಸಮ್ಮುಖದಲ್ಲೇ ದೇವಸ್ಥಾನದಲ್ಲಿ ಪಿಂಕಿ ಮತ್ತು ಅಮಿತ್ ವಿವಾಹ ನೆರವೇರಿತು. ಈ ವೇಳೆ ಆಶಿಶ್ ಕೂಡ ಹಾಜರಿದ್ದು, ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂಬುದು ಗಮನಾರ್ಹ.

ಮಕ್ಕಳ ನಿರ್ಧಾರ ಭಾವುಕ ಕ್ಷಣ :

ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಪಿಂಕಿ ಮಕ್ಕಳು ತನ್ನೊಂದಿಗೆ ಬರಬೇಕು ಎಂದು ಮನವಿ ಮಾಡಿದ್ದಾಳೆ. ಆದರೆ ಮಕ್ಕಳು ತಾಯಿಯೊಂದಿಗೆ ಹೋಗಲು ನಿರಾಕರಿಸಿ, ತಂದೆಯ ಜೊತೆಯಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ದೃಶ್ಯಗಳು ಸ್ಥಳದಲ್ಲಿದ್ದವರ ಕಣ್ಣು ತೇವಗೊಳಿಸಿದವು.

ವಿಚ್ಛೇದನ ಪ್ರಕ್ರಿಯೆ ನ್ಯಾಯಾಲಯದಲ್ಲಿದೆ :

ಪಿಂಕಿ ಹಾಗೂ ಆಶಿಶ್ ನಡುವಿನ ವಿಚ್ಛೇದನ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ತಿಳಿದುಬಂದಿದೆ. ಕಾನೂನು ಪ್ರಕ್ರಿಯೆ ಮುಂದುವರಿದಿದ್ದರೂ, ಸಾಮಾಜಿಕ ಒಪ್ಪಿಗೆಯೊಂದಿಗೆ ನಡೆದ ಈ ಘಟನೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ಸಮಾಜದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳು…

ಇತ್ತೀಚಿನ ವರ್ಷಗಳಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿರುವುದು ಸಮಾಜದಲ್ಲಿ ಮದುವೆ ಎಂಬ ಬಂಧನದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎಬ್ಬಿಸುತ್ತಿವೆ. ಪರಸ್ಪರ ಒಪ್ಪಿಗೆಯಿಲ್ಲದ ವಿವಾಹ, ಭಾವನಾತ್ಮಕ ಅಸಮಾಧಾನ ಮತ್ತು ನಂಬಿಕೆ ಕೊರತೆಗಳು ವಿಚ್ಛೇದನಕ್ಕೆ ಕಾರಣವಾಗುತ್ತಿರುವುದು ಸ್ಪಷ್ಟವಾಗುತ್ತಿದೆ.

 ಇದನ್ನು ಓದಿ : ಅಕ್ರಮ ಸಂಬಂಧ ಬಯಲಾಗುವ ಭಯ: 5 ವರ್ಷದ ಮಗನನ್ನೇ ಕೊಂದ ತಾಯಿ.

👉 ನಿಮ್ಮ ಅಭಿಪ್ರಾಯವೇನು?
ಇಂತಹ ಘಟನೆಗಳು ಸಮಾಜಕ್ಕೆ ಸರಿಯಾದ ಸಂದೇಶ ನೀಡುತ್ತಿವೆಯೇ?
ಮದುವೆ ಎಂಬ ಸಂಸ್ಥೆ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆಯೇ?
ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.


Description: ಪತ್ನಿಯ ಅಕ್ರಮ ಸಂಬಂಧ ಬೆಳಕಿಗೆ ಬಂದ ಬಳಿಕ, ಗ್ರಾಮಸ್ಥರ ಸಮ್ಮುಖದಲ್ಲಿ ಪತಿಯೇ ಆಕೆಯನ್ನು ಪ್ರಿಯಕರನಿಗೆ ಮದುವೆ ಮಾಡಿಸಿದ ಅಪರೂಪದ ಘಟನೆ ವಿವರಗಳು.

ಶಾಲೆಯಿಂದ ಮನೆಗೆ ಮರಳುತ್ತಿದ್ದಾಗಲೇ ನದಿಗೆ ಜಿಗಿದ ಬಾಲಕಿ ; ಬೆಚ್ಚಿಬೀಳಿಸಿದ CCTV ದೃಶ್ಯ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸಿಸಿಟಿವಿ (CCTV) ದೃಶ್ಯಾವಳಿ ದೇಶವನ್ನೇ ಬೆಚ್ಚಿಬೀಳಿಸುವಂತಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿ ಏಕಾಏಕಿ ಸೇತುವೆ ಮೇಲಿಂದ ನದಿಗೆ ಜಿಗಿಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟುಮಾಡಿದೆ.

ಘಟನೆ ವಿವರ :

ವೈರಲ್ ವಿಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿದ್ದ ಬಾಲಕಿ ರಸ್ತೆ ಬದಿಯಿಂದ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ಕ್ಷಣಾರ್ಧದಲ್ಲಿ ಆಕೆ ಸೇತುವೆಯ ತಡೆಗೋಡೆಯ ಮೇಲೆ ಹತ್ತಿ ನದಿಗೆ ಜಿಗಿದಿದ್ದಾಳೆ.

ಈ ದೃಶ್ಯ ಅಚ್ಚರಿಯಾಯಿತೆಂದರೆ, ಆಕೆಯ ಹಿಂದೆ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರು ತಕ್ಷಣ ಆಕೆಯನ್ನು ತಡೆಯಲು ಓಡಿ ಬಂದರೂ, ಅವರು ತಲುಪುವ ಮುನ್ನವೇ ಬಾಲಕಿ ನದಿಗೆ ಹಾರಿದ್ದಾಳೆ.

ನದಿಗೆ ಜಿಗಿದ ಬಾಲಕಿ ವಿಡಿಯೋ :

ರಕ್ಷಣೆಗೆ ಧಾವಿಸಿದವರು :

ಘಟನೆಯ ವೇಳೆ ಅಲ್ಲಿದ್ದವರು ಜೋರಾಗಿ ಕೂಗಿಕೊಂಡಿದ್ದು, ಶಬ್ದ ಕೇಳಿ ಸುತ್ತಮುತ್ತಲಿನ ಜನರು ಮತ್ತು ದ್ವಿಚಕ್ರ ವಾಹನ ಸವಾರರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಘಟನೆ ಕ್ಷಿಪ್ರವಾಗಿರುವುದರಿಂದ ತಕ್ಷಣ ರಕ್ಷಣೆ ಸಾಧ್ಯವಾಗಿಲ್ಲ ಎಂಬುದು ವಿಡಿಯೋದಲ್ಲಿ ಗೋಚರಿಸುತ್ತದೆ.

ಈ ಕ್ರೈಂ ಸುದ್ದಿ ಓದಿ : ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

ಬಾಲಕಿ ಬದುಕುಳಿದಳೇ?

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಬಾಲಕಿಯ ಸ್ಥಿತಿಗತಿಯ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಅಧಿಕೃತ ಮೂಲಗಳಿಂದಲೂ ಇನ್ನೂ ಯಾವುದೇ ದೃಢೀಕರಣ ಬಂದಿಲ್ಲ.

ಆದರೆ ಇತ್ತೀಚೆಗೆ ಒಡಿಶಾದ ಸಂಬಲ್‌ಪುರ ಹಾಗೂ ಗೋವಾ ಸೇರಿದಂತೆ ಕೆಲ ಭಾಗಗಳಲ್ಲಿ ನಡೆದ ಸಮಾನ ಘಟನೆಗಳಲ್ಲಿ ಸ್ಥಳೀಯ ಮೀನುಗಾರರು ಹಾಗೂ ರಕ್ಷಣಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಮಕ್ಕಳನ್ನು ರಕ್ಷಿಸಿದ ಉದಾಹರಣೆಗಳಿವೆ. ಇದೇ ರೀತಿಯ ರಕ್ಷಣಾ ಕಾರ್ಯ ಈ ಪ್ರಕರಣದಲ್ಲೂ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋ ನೋಡಿದ ನಂತರ ನೆಟ್ಟಿಗರು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ತೀವ್ರ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ.

* “ಮಕ್ಕಳ ಮೇಲೆ ಇರುವ ಅತಿಯಾದ ಒತ್ತಡವೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ”.
* “ಪೋಷಕರು ಮಕ್ಕಳ ಮಾತು ಕೇಳಬೇಕು, ಅವರ ಭಾವನೆಗಳಿಗೆ ಸ್ಪಂದಿಸಬೇಕು”.
* “ಅಂಕಗಳು ಮಾತ್ರವಲ್ಲ, ಮಕ್ಕಳ ಜೀವನವೂ ಮುಖ್ಯ”.

ಎಂಬಂತೆ ಸಾವಿರಾರು ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುತ್ತಿವೆ.

ಇದನ್ನು ಓದಿ : ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು ನಾಯಿ.

ಮಕ್ಕಳ ಮಾನಸಿಕ ಆರೋಗ್ಯ – ಗಂಭೀರ ಚಿಂತನೆ ಅಗತ್ಯ :

ತಜ್ಞರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಶಿಕ್ಷಣ, ಸ್ಪರ್ಧೆ ಮತ್ತು ಕುಟುಂಬದ ನಿರೀಕ್ಷೆಗಳ ಒತ್ತಡ ಹೆಚ್ಚಾಗಿದೆ. ಇದರಿಂದ ಅನೇಕ ಮಕ್ಕಳು ಒಳಗೊಳಗೇ ಸಂಕಟ ಅನುಭವಿಸುತ್ತಿದ್ದಾರೆ.

ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು, ಅವರೊಂದಿಗೆ ಮಾತನಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.


Disclaimer : ಈ ಸುದ್ದಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಸಿದ್ಧಪಡಿಸಲಾಗಿದೆ. ಘಟನೆಯ ಅಂತಿಮ ದೃಢೀಕರಣಕ್ಕೆ ಅಧಿಕೃತ ಹೇಳಿಕೆ ನಿರೀಕ್ಷಿಸಲಾಗುತ್ತಿದೆ.

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ 10 ಸಲಹೆ ಪಾಲಿಸಿ ; ಕನ್ನಡಕಕ್ಕೆ ಹೇಳಿ ಗುಡ್‌ಬೈ.!

0

ಜನಸ್ಫಂದನ ನ್ಯೂಸ್‌, ಆರೋಗ್ಯ : ಇಂದಿನ ಡಿಜಿಟಲ್ ಜೀವನಶೈಲಿಯಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಟಿವಿ ಬಳಕೆ ಅನಿವಾರ್ಯವಾಗಿದೆ. ಆದರೆ ದಿನಪೂರ್ತಿ ಸ್ಕ್ರೀನ್ ನೋಡುವುದರಿಂದ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಬೀರುತ್ತಿದ್ದು, ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಆದರೆ ಕೆಲವು ಸರಳ ಅಭ್ಯಾಸಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ, ದೀರ್ಘಕಾಲ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ತಜ್ಞರು ಸೂಚಿಸುವಂತಹ ಪ್ರಮುಖ 10 ಕಣ್ಣಿನ ಆರೈಕೆ ಸಲಹೆಗಳು ಇಲ್ಲಿವೆ.

ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ಸೇವಿಸಿ :

ಕಣ್ಣುಗಳ ಆರೋಗ್ಯಕ್ಕೆ ವಿಟಮಿನ್ A, C, E ಹಾಗೂ ಒಮೆಗಾ–3 ಫ್ಯಾಟಿ ಆಸಿಡ್ ಅತ್ಯಗತ್ಯ. ಪಾಲಕ್ ಸೊಪ್ಪು, ಕ್ಯಾರೆಟ್, ಬಣ್ಣಬಣ್ಣದ ಹಣ್ಣುಗಳು, ಬಾದಾಮಿ, ಅಕ್ರೋಟ್ ಹಾಗೂ ಮೀನುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ಈ ಆರೋಗ್ಯ ಸುದ್ದಿ ಓದಿ : 7 ದಿನ ಎಳ್ಳು ತಿನ್ನಿ ; ದೇಹದಲ್ಲಿ ಆಗುವ ಅಚ್ಚರಿಯ ಬದಲಾವಣೆಗಳನ್ನು ನೋಡಿ.!

ಕಣ್ಣಿನ ಆರೋಗ್ಯ ಕಾಪಾಡಲು 20-20-20 ನಿಯಮವನ್ನು ಪಾಲಿಸಿ :

ದೀರ್ಘ ಸಮಯ ಸ್ಕ್ರೀನ್ ಮುಂದೆ ಕೆಲಸ ಮಾಡುವವರು ಪ್ರತಿ 20 ನಿಮಿಷಕ್ಕೊಮ್ಮೆ, 20 ಅಡಿ ದೂರದಲ್ಲಿರುವ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಬೇಕು. ಇದು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಸಾಕಷ್ಟು ನೀರು ಕುಡಿಯಿರಿ :

  • ದೇಹದಲ್ಲಿ ನೀರಿನ ಕೊರತೆಯಿಂದ ಕಣ್ಣುಗಳು ಒಣಗುವುದು (Dry Eyes) ಸಾಮಾನ್ಯ.
  • ಪ್ರತಿದಿನ ಕನಿಷ್ಠ 2–3 ಲೀಟರ್ ನೀರು ಕುಡಿಯುವುದರಿಂದ ಕಣ್ಣುಗಳ ತೇವಾಂಶ ಕಾಪಾಡಿಕೊಳ್ಳಬಹುದು.

ನಿಯಮಿತವಾಗಿ ಕಣ್ಣು ಮಿಟುಕಿಸಿ :

  • ಸ್ಕ್ರೀನ್ ನೋಡುತ್ತಿರುವಾಗ ನಾವು ಕಣ್ಣು ಮಿಟುಕಿಸುವುದನ್ನು ಮರೆತುಬಿಡುತ್ತೇವೆ.
  • ಇದು ಕಣ್ಣು ಒಣಗಲು ಕಾರಣವಾಗುತ್ತದೆ. ಆಗಾಗ್ಗೆ ಕಣ್ಣು ಮಿಟುಕಿಸುವ ಅಭ್ಯಾಸ ಬೆಳೆಸಿಕೊಳ್ಳಿ.

ಸೂರ್ಯನ ಕಿರಣಗಳಿಂದ ರಕ್ಷಣೆ :

ಬಿಸಿಲಿನಲ್ಲಿ ಹೊರಗೆ ಹೋಗುವಾಗ UV ರಕ್ಷಣೆ ಇರುವ ಸನ್‌ಗ್ಲಾಸ್ ಧರಿಸುವುದು ಬಹಳ ಮುಖ್ಯ.
ಇದು ಕಣ್ಣಿನ ಪೊರೆ ಮತ್ತು ರೆಟಿನಾ ಹಾನಿಯನ್ನು ತಡೆಯುತ್ತದೆ.

ಸ್ಕ್ರೀನ್ ಅಂತರವನ್ನು ಕಾಪಾಡಿ :

  • ಮೊಬೈಲ್ ಅಥವಾ ಲ್ಯಾಪ್‌ಟಾಪ್ ಕಣ್ಣಿನ ಮಟ್ಟಕ್ಕಿಂತ ಸ್ವಲ್ಪ ಕೆಳಗಿರಲಿ.
  • ಕನಿಷ್ಠ ಒಂದು ಕೈ ಅಂತರದಲ್ಲಿರಿಸಿ ಬಳಸಿ.
  • ಕತ್ತಲಿನಲ್ಲಿ ಸ್ಕ್ರೀನ್ ನೋಡುವುದನ್ನು ತಪ್ಪಿಸಿ.

ಕಣ್ಣುಗಳನ್ನು ಉಜ್ಜಬೇಡಿ :

  • ಕಣ್ಣು ಕೆರಕಿದಾಗ ಕೈಗಳಿಂದ ಜೋರಾಗಿ ಉಜ್ಜುವುದು ಅಪಾಯಕಾರಿ.
  • ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ ಹಾಗೂ ಕಣ್ಣಿನ ಕಾರ್ನಿಯಾ ಹಾನಿಯಾಗಬಹುದು.

ಪರ್ಯಾಪ್ತ ನಿದ್ರೆ ಅಗತ್ಯ :

  • ದಿನಕ್ಕೆ ಕನಿಷ್ಠ 7–8 ಗಂಟೆಗಳ ನಿದ್ರೆ ಕಣ್ಣುಗಳ ಆರೋಗ್ಯಕ್ಕೆ ಅತ್ಯಂತ ಅಗತ್ಯ.
  • ನಿದ್ರೆ ಕೊರತೆಯಿಂದ ಕಣ್ಣು ಕೆಂಪಾಗುವುದು, ದೃಷ್ಟಿ ಮಂದವಾಗುವುದು ಸಾಮಾನ್ಯ.

ದೈಹಿಕ ವ್ಯಾಯಾಮ ಮರೆತಿಬೇಡಿ :

  • ನಿಯಮಿತ ವ್ಯಾಯಾಮ ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ.
  • ಇದು ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಿ ಕಣ್ಣುಗಳ ಆರೋಗ್ಯವನ್ನು ರಕ್ಷಿಸುತ್ತದೆ.

ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ :

  • ಯಾವುದೇ ತೊಂದರೆ ಇಲ್ಲದಿದ್ದರೂ ವರ್ಷಕ್ಕೊಮ್ಮೆ ಕಣ್ಣಿನ ವೈದ್ಯರನ್ನು ಭೇಟಿ ಮಾಡುವುದು ಅಗತ್ಯ.
  • ಆರಂಭಿಕ ಹಂತದಲ್ಲೇ ಸಮಸ್ಯೆ ಪತ್ತೆಹಚ್ಚಿದರೆ ದೃಷ್ಟಿ ಕಳೆದುಕೊಳ್ಳುವುದನ್ನು ತಪ್ಪಿಸಬಹುದು.

ಇದನ್ನು ಓದಿ : ಕಣ್ಣುಗಳಲ್ಲಿಯೇ ಕಾಣಿಸಿಕೊಳ್ಳುತ್ತದೆ ಕಿಡ್ನಿ ಹಾನಿ ; ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ಮುಖ್ಯ ಸೂಚನೆ :

ಈ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಯಾವುದೇ ಗಂಭೀರ ದೃಷ್ಟಿ ಸಮಸ್ಯೆಗಳಿದ್ದರೆ ತಕ್ಷಣವೇ ಕಣ್ಣಿನ ತಜ್ಞರನ್ನು ಸಂಪರ್ಕಿಸಬೇಕು.


Disclaimer : ಈ ಲೇಖನದಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಕಣ್ಣಿನ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದರೆ ಅರ್ಹ ಕಣ್ಣಿನ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆಟಿಕೆ ಗನ್‌ನಿಂದ ಶೂಟ್ ಮಾಡಿದ ಪುಟಾಣಿ; ದಪ್ಪೆಂದು ಬಿದ್ದ ಮರಿಯಾನೆ, ವಿಡಿಯೋ ವೈರಲ್

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ರೀತಿಯ ಮನಸೂರೆಗೊಳ್ಳುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಪ್ರಾಣಿಗಳ ಮುದ್ದಾದ ಚಲನವಲನಗಳು ಜನರ ಮನಸ್ಸಿಗೆ ತುಂಬಾ ಹತ್ತಿರವಾಗುತ್ತವೆ. ಇದೀಗ ಅಂತಹದ್ದೇ ಒಂದು ಮರಿಯಾನೆಯ (Baby Elephant) ಮುದ್ದಾದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಈ ವಿಡಿಯೋದಲ್ಲಿ ಪುಟ್ಟ ಬಾಲಕನೊಂದಿಗೆ ಮರಿಯಾನೆ ಆಟವಾಡುತ್ತಿರುವ ದೃಶ್ಯಗಳು ಎಲ್ಲರ ಮನ ಗೆದ್ದಿವೆ. ಮಗು ಮತ್ತು ಮರಿಯಾನೆಯ ನಡುವಿನ ಸ್ನೇಹಭಾವ, ನಿಸ್ವಾರ್ಥ ಪ್ರೀತಿ ನೋಡಿದರೆ ಯಾರಿಗೂ ನಗು ಬರದೇ ಇರದು.

ವಿಡಿಯೋದಲ್ಲಿ ಏನಿದೆ?

ಈ ವೈರಲ್ ವಿಡಿಯೋವನ್ನು @Hinduism_sci ಎಂಬ ಎಕ್ಸ್ (Twitter) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ಇಂದಿನ ಇಂಟರ್ನೆಟ್‌ನಲ್ಲಿನ ಅತ್ಯಂತ ಸುಂದರವಾದ ವಿಡಿಯೋ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.

ವಿಡಿಯೋದಲ್ಲಿ ಪುಟ್ಟ ಬಾಲಕನ ಕೈಯಲ್ಲಿ ಆಟಿಕೆ ನೀರಿನ ಗನ್ ಇದೆ. ತಮಾಷೆಯಾಗಿ ಆ ಗನ್ ಅನ್ನು ಮರಿಯಾನೆಯ ಕಡೆಗೆ ತಿರುಗಿಸಿ ನೀರು ಚಿಮ್ಮಿಸುತ್ತಾನೆ. ಅದನ್ನು ಕಂಡ ಮರಿಯಾನೆ ಅಚ್ಚರಿಯಂತೆ ನೆಲಕ್ಕೆ ಬಿದ್ದಂತೆ ನಟಿಸುತ್ತದೆ. ಈ ದೃಶ್ಯ ನೋಡುವವರಿಗೆ ನಗೆಯೇ ನಗೆಯೇ!

ಮರಿಯಾನೆಯನ್ನು ನೋಡಿ ಗಾಬರಿಯಾದ ಬಾಲಕ :

ಮರಿಯಾನೆ ನೆಲಕ್ಕುರುಳಿದಂತೆ ನಟಿಸಿದಾಗ, ಬಾಲಕನಿಗೆ ಭಯವಾಗುತ್ತದೆ. ತಕ್ಷಣ ತನ್ನ ಕೈಯಲ್ಲಿದ್ದ ಗನ್ ಅನ್ನು ಕೆಳಗೆ ಹಾಕಿ, ಓಡಿಹೋಗಿ ಮರಿಯಾನೆಯನ್ನು ಅಪ್ಪಿಕೊಳ್ಳುತ್ತಾನೆ. ಪ್ರೀತಿಯಿಂದ ಮುದ್ದಾಡುತ್ತಾನೆ.

ಅಷ್ಟರಲ್ಲಿ ಮರಿಯಾನೆ ನಿಧಾನವಾಗಿ ಎದ್ದು ನಿಲ್ಲುತ್ತದೆ. ಈ ಕ್ಷಣ ನೋಡಿದರೆ ಬಾಲಕನ ನಿಷ್ಕಳಂಕ ಪ್ರೀತಿ ಹಾಗೂ ಮರಿಯಾನೆಯ ಮುದ್ದು ನಟನೆ ಯಾರನ್ನಾದರೂ ಮಾರುಹೋಗುವಂತೆ ಮಾಡುತ್ತದೆ.

ವೈರಲ್‌ ವಿಡಿಯೋ ಇಲ್ಲಿದೆ :

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಈ ವಿಡಿಯೋ ಈಗಾಗಲೇ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ:

  • “ಇದು ಇಂಟರ್ನೆಟ್‌ನಲ್ಲೇ ಅತ್ಯಂತ ಮುದ್ದಾದ ವಿಡಿಯೋ”
  • “ಮತ್ತೆ ಮತ್ತೆ ನೋಡಬೇಕು ಅನಿಸುವ ವಿಡಿಯೋ”
  • “ಮರಿಯಾನೆಗೆ ಆಸ್ಕರ್ ಪ್ರಶಸ್ತಿ ಕೊಡಬೇಕು!”

ಎನ್ನುವ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಇದನ್ನು ಓದಿ : ಶಾಲೆಗೆ ಹೋಗಲು ಹಠ ಹಿಡಿದ ಮಗ: ಪಟ್ಟು ಹಿಡಿದ ತಾಯಿ ; ವಿಡಿಯೋ ವೈರಲ್.

ಪ್ರಾಣಿ–ಮಾನವ ಸ್ನೇಹಕ್ಕೆ ಮತ್ತೊಂದು ಉದಾಹರಣೆ :

ಈ ವಿಡಿಯೋ ಪ್ರಾಣಿ ಮತ್ತು ಮಾನವನ ನಡುವಿನ ಆತ್ಮೀಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮಗು ಹಾಗೂ ಮರಿಯಾನೆಯ ನಡುವಿನ ಈ ನಿಸ್ವಾರ್ಥ ಸ್ನೇಹ ಸೋಷಿಯಲ್ ಮೀಡಿಯಾದಲ್ಲಿ ಜನರ ಮನಸ್ಸಿಗೆ ತಾಕಿದೆ.

ಇಂತಹ ಹೃದಯಸ್ಪರ್ಶಿ ಕ್ಷಣಗಳು ನಮ್ಮ ದಿನವನ್ನು ಖುಷಿಯಾಗಿಸುತ್ತವೆ ಎಂದರೆ ತಪ್ಪಾಗಲಾರದು.


Disclaimer : ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಆಧಾರಿತವಾಗಿದೆ. ವಿಡಿಯೋದಲ್ಲಿರುವ ದೃಶ್ಯಗಳು ಮನರಂಜನೆಗಾಗಿ ಮಾತ್ರವಾಗಿದ್ದು, ಪ್ರಾಣಿಗಳಿಗೆ ಯಾವುದೇ ಹಾನಿ ಉಂಟಾಗಿರುವುದಾಗಿ ದೃಢಪಟ್ಟಿಲ್ಲ. ವೀಕ್ಷಕರಿಗೆ ತಪ್ಪು ಸಂದೇಶ ಹೋಗದಂತೆ ಜಾಗ್ರತೆ ವಹಿಸುವುದು ಅಗತ್ಯ.

82 ವರ್ಷದ ಮಹಿಳೆಯ ಹೊಟ್ಟೆಯಲ್ಲಿ 40 ವರ್ಷ ಉಳಿದ ಭ್ರೂಣ ; ಎಕ್ಸರೇ ನೋಡಿ ಡಾಕ್ಟರ್‌ ಶಾಕ್.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ವಿಶ್ವದಾದ್ಯಂತ ವೈದ್ಯಕೀಯ ವಿಜ್ಞಾನ ಎಷ್ಟೇ ಮುನ್ನಡೆದಿದ್ದರೂ, ಕೆಲವೊಂದು ಪ್ರಕರಣಗಳು ಇಂದಿಗೂ ವೈದ್ಯರನ್ನು ಅಚ್ಚರಿಗೊಳಿಸುತ್ತಿವೆ. ಅಂಥದ್ದೇ ಒಂದು ಅಪರೂಪದ ಹಾಗೂ ಬೆಚ್ಚಿಬೀಳಿಸುವ ಘಟನೆ ಕೊಲಂಬಿಯಾದಲ್ಲಿ ಬೆಳಕಿಗೆ ಬಂದಿದೆ.

ಕೊಲಂಬಿಯಾದ ಬೊಗೋಟಾ ನಗರದಲ್ಲಿ ವಾಸವಾಗಿರುವ 82 ವರ್ಷದ ವೃದ್ಧೆಯೊಬ್ಬರು ಕೆಲ ದಿನಗಳಿಂದ ತೀವ್ರವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆರಂಭದಲ್ಲಿ ಇದು ಸಾಮಾನ್ಯ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಕುಟುಂಬದವರು ಹಾಗೂ ಸ್ಥಳೀಯರು ಊಹಿಸಿದ್ದರು. ಆದರೆ ನೋವು ದಿನೇದಿನೇ ಹೆಚ್ಚಾಗುತ್ತಿದ್ದಂತೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸತ್ಯ :

ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕವಾಗಿ ಹೊಟ್ಟೆಯಲ್ಲಿ ಗಡ್ಡೆ (tumor) ಇರಬಹುದೆಂದು ಶಂಕಿಸಿದರು. ನಂತರ ಸಿಟಿ ಸ್ಕ್ಯಾನ್ ಹಾಗೂ ಎಕ್ಸ್-ರೇ ಪರೀಕ್ಷೆ ನಡೆಸಿದಾಗ ಎಲ್ಲರೂ ಬೆಚ್ಚಿಬೀಳುವಂತಹ ಸತ್ಯ ಬೆಳಕಿಗೆ ಬಂತು.

ಮಹಿಳೆಯ ಹೊಟ್ಟೆಯೊಳಗೆ ಸಂಪೂರ್ಣವಾಗಿ ಕ್ಯಾಲ್ಸಿಫೈಡ್ ಆಗಿರುವ 40 ವರ್ಷ ಹಳೆಯ ಭ್ರೂಣವೊಂದು ಕಂಡುಬಂದಿತು. ಇದು ವೈದ್ಯಕೀಯವಾಗಿ ಅತ್ಯಂತ ಅಪರೂಪವಾದ ಸ್ಥಿತಿ ಆಗಿದ್ದು, ಇದನ್ನು “ಲಿಥೋಪೀಡಿಯನ್” (Lithopedion) ಅಥವಾ ಸಾಮಾನ್ಯವಾಗಿ “ಕಲ್ಲಿನ ಮಗು” ಎಂದು ಕರೆಯಲಾಗುತ್ತದೆ.

ಲಿಥೋಪೀಡಿಯನ್ ಎಂದರೇನು?

ವೈದ್ಯರ ವಿವರಣೆ ಪ್ರಕಾರ, ಸಾಮಾನ್ಯವಾಗಿ ಗರ್ಭಧಾರಣೆ ಗರ್ಭಾಶಯದೊಳಗೆ ನಡೆಯಬೇಕು. ಆದರೆ ಕೆಲ ಅಪರೂಪದ ಸಂದರ್ಭಗಳಲ್ಲಿ ಗರ್ಭವು ಹೊಟ್ಟೆಯ ಒಳಭಾಗದಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. ಇದನ್ನು ಅಪಸ್ಥಾನೀಯ ಗರ್ಭಧಾರಣೆ (Ectopic Pregnancy) ಎಂದು ಕರೆಯಲಾಗುತ್ತದೆ.

ಇಂತಹ ಸಂದರ್ಭದಲ್ಲಿ ಭ್ರೂಣ ಜೀವಂತವಾಗಿರಲು ಸಾಧ್ಯವಿಲ್ಲ. ದೇಹವು ಅದನ್ನು ಹೊರಹಾಕಲು ಸಾಧ್ಯವಾಗದಿದ್ದರೆ, ಸೋಂಕು ಹರಡದಂತೆ ತಡೆಯಲು ಸ್ವಯಂರಕ್ಷಣೆಗಾಗಿ ಭ್ರೂಣದ ಸುತ್ತ ಕ್ಯಾಲ್ಸಿಯಂ ಪದರವನ್ನು ನಿರ್ಮಿಸುತ್ತದೆ. ಹೀಗೆ ಭ್ರೂಣವು ನಿಧಾನವಾಗಿ ಕಲ್ಲಿನಂತೆ ಗಟ್ಟಿಯಾಗುತ್ತದೆ.

ಈ ಪ್ರಕರಣದಲ್ಲಿ ಮಹಿಳೆಗೆ ಸುಮಾರು 40 ವರ್ಷಗಳ ಹಿಂದೆ ಗರ್ಭಧಾರಣೆ ನಡೆದಿದ್ದು, ಅದೇ ಭ್ರೂಣವು ಯಾವುದೇ ದೊಡ್ಡ ಲಕ್ಷಣಗಳಿಲ್ಲದೆ ಇಷ್ಟೊಂದು ವರ್ಷ ದೇಹದೊಳಗೆ ಉಳಿದಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಭ್ರೂಣದ ತೂಕ ಸುಮಾರು 4 ಪೌಂಡುಗಳಷ್ಟಿತ್ತು ಎಂದು ವರದಿಯಾಗಿದೆ.

ವಿಶ್ವದಲ್ಲೇ ಅಪರೂಪದ ಪ್ರಕರಣ :

ವೈದ್ಯಕೀಯ ದಾಖಲೆಗಳ ಪ್ರಕಾರ, ಇದುವರೆಗೆ ವಿಶ್ವದಾದ್ಯಂತ 300 ಕ್ಕಿಂತ ಕಡಿಮೆ ಲಿಥೋಪೀಡಿಯನ್ ಪ್ರಕರಣಗಳು ಮಾತ್ರ ದಾಖಲಾಗಿವೆ. ಬಹುತೇಕ ಸಂದರ್ಭಗಳಲ್ಲಿ ಇಂತಹ ಪ್ರಕರಣಗಳು ವಯಸ್ಸಾದ ಮಹಿಳೆಯರಲ್ಲಿ, ಬೇರೆ ಕಾರಣಕ್ಕಾಗಿ ಪರೀಕ್ಷೆ ನಡೆಸುವಾಗ ಅಕಸ್ಮಾತ್ ಪತ್ತೆಯಾಗುತ್ತವೆ.

ಎಬಿಸಿ ನ್ಯೂಸ್, ಸಿಬಿಎಸ್ ನ್ಯೂಸ್ ಮತ್ತು ಮೆಡಿಕಲ್ ಡೈಲಿ ವರದಿಗಳ ಪ್ರಕಾರ, ಈ ಮಹಿಳೆಗೆ ಪ್ರಸ್ತುತ ಯಾವುದೇ ಜೀವಕ್ಕೆ ಅಪಾಯವಿಲ್ಲ. ಆದರೆ ಈ ಘಟನೆ ವೈದ್ಯಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿ : ಮೊಟ್ಟೆಗಳಲ್ಲಿ ʼಕ್ಯಾನ್ಸರ್ ಕಾರಕʼ ಅಂಶ ಅನುಮಾನ ; ರಾಜ್ಯಾದ್ಯಂತ ಆರೋಗ್ಯ ಅಲರ್ಟ್.

ವೈದ್ಯರ ಎಚ್ಚರಿಕೆ :

ವೈದ್ಯರು ಹೇಳುವಂತೆ,

  • ಹೊಟ್ಟೆ ನೋವನ್ನು ನಿರ್ಲಕ್ಷ್ಯ ಮಾಡಬಾರದು.
  • ದೀರ್ಘಕಾಲದ ನೋವು ಇದ್ದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಅಗತ್ಯ.
  • ಮಹಿಳೆಯರು ಗರ್ಭಧಾರಣೆಯ ಬಳಿಕ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.

Courtesy : Kannada News Now


Disclaimer : ಈ ಲೇಖನವು ವಿವಿಧ ಮಾಧ್ಯಮ ವರದಿಗಳು ಮತ್ತು ವೈದ್ಯಕೀಯ ಮಾಹಿತಿಯ ಆಧಾರದಲ್ಲಿ ರಚಿಸಲಾಗಿದೆ. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದಲ್ಲಿ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ. ಈ ಸುದ್ದಿ ಮಾಹಿತಿ ಉದ್ದೇಶಕ್ಕಾಗಿ ಮಾತ್ರ.

ರಕ್ತದಲ್ಲಿಯ ಸಕ್ಕರೆ ತಗ್ಗಿಸಲು ಬಾದಾಮ್ ಗೊಂಡ್ ; ತಜ್ಞರ ಮಹತ್ವದ ಮಾಹಿತಿ ಇಲ್ಲಿದೆ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಸಮಸ್ಯೆ ಜನರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಅನಿಯಮಿತ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಮಾನಸಿಕ ಒತ್ತಡ ಮತ್ತು ಅಸಮತೋಲಿತ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಹೆಚ್ಚಿನವರು ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸುತ್ತಿದ್ದರೂ, ಕೆಲವರಿಗೆ ಆಹಾರ ಸೇವಿಸಿದ ತಕ್ಷಣವೇ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಳಿತಗೊಳ್ಳುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಇಂತಹ ಸಂದರ್ಭಗಳಲ್ಲಿ, ಪಾರಂಪರಿಕ ಹಾಗೂ ನೈಸರ್ಗಿಕ ವಿಧಾನಗಳು ಸಹಾಯಕವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅದರಲ್ಲಿ ಪ್ರಮುಖವಾದದ್ದು ಬಾದಾಮ್ ಗೊಂಡ್ (Badam Gond / Almond Gum).

ಬಾದಾಮ್ ಗೊಂಡ್ ಎಂದರೇನು?

ಬಾದಾಮ್ ಗೊಂಡ್ ಎಂಬುದು ಬಾದಾಮಿ ಮರದ ತೊಗಟೆಯಿಂದ ಪಡೆಯುವ ನೈಸರ್ಗಿಕ ಗಮ್ ಆಗಿದೆ. ಇದನ್ನು ನೆನೆಸಿ ಸೇವಿಸಿದಾಗ ದೇಹಕ್ಕೆ ತಂಪು ನೀಡುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪುರಾತನ ಕಾಲದಿಂದಲೂ ಇದನ್ನು ಆರೋಗ್ಯವರ್ಧಕವಾಗಿ ಬಳಸಲಾಗುತ್ತಿದೆ.

ಈ ಆರೋಗ್ಯ ಸುದ್ದಿ ಓದಿ : ಹೇರ್ ಕಲರ್ ಬೇಡ ; ಟೊಮೆಟೊ ಬಳಸಿ ಬಿಳಿ ಕೂದಲು ನಿಯಂತ್ರಿಸಿ.!

ಬಾದಾಮ್ ಗೊಂಡ್ ಸೇವಿಸುವ ಸರಿಯಾದ ವಿಧಾನ :

  • ರಾತ್ರಿ ಮಲಗುವ ಮೊದಲು 1 ಅಥವಾ 2 ಸಣ್ಣ ತುಂಡು ಬಾದಾಮ್ ಗೊಂಡ್ ಅನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ.
  • ಬೆಳಿಗ್ಗೆ ಅದು ಜೆಲ್‌ನಂತೆ ಉಬ್ಬಿಕೊಂಡಿರುತ್ತದೆ.
  • ಅದರಲ್ಲಿ ಒಂದು ಚಮಚ ಪ್ರಮಾಣವನ್ನು ತೆಗೆದು, ಒಂದು ಲೋಟ ನೀರಿನಲ್ಲಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
  • ಉತ್ತಮ ಫಲಿತಾಂಶಕ್ಕಾಗಿ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೂ 30 ನಿಮಿಷಗಳ ಮೊದಲು ಸೇವಿಸಬಹುದು.

ಬಾದಾಮ್ ಗೊಂಡ್ ಸೇವನೆಯ ಲಾಭಗಳು :

  • ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಕಾರಿ.
  • ಇನ್ಸುಲಿನ್ ಕಾರ್ಯಕ್ಷಮತೆಯನ್ನು ಸುಧಾರಿಸಲು ನೆರವು.
  • ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.
  • ಜೀರ್ಣಕ್ರಿಯೆ ಸುಧಾರಣೆ.
  • ಮೂಳೆ ಬಲವರ್ಧನೆಗೆ ಸಹಕಾರಿ.
  • ದೇಹಕ್ಕೆ ಶಕ್ತಿ ಮತ್ತು ತಾಜಾತನ ನೀಡುತ್ತದೆ.

ಬಾದಾಮ್ ಗೊಂಡ್ ಆಹಾರದಲ್ಲಿನ ಸಕ್ಕರೆ ರಕ್ತಕ್ಕೆ ನಿಧಾನವಾಗಿ ಸೇರುವಂತೆ ಮಾಡುತ್ತದೆ. ಇದರಿಂದ ಶುಗರ್ ಲೆವೆಲ್ ಏಕಾಏಕಿ ಹೆಚ್ಚಾಗುವುದನ್ನು ತಡೆಯಬಹುದು.

ಊಟದ ನಂತರ ನಡೆಯುವ ಅಭ್ಯಾಸ ಅತ್ಯಂತ ಮುಖ್ಯ :

ಅನೇಕರು ಊಟವಾದ ತಕ್ಷಣ ಕುಳಿತುಕೊಳ್ಳುವುದು ಅಥವಾ ಮಲಗುವುದು ಸಾಮಾನ್ಯವಾಗಿದೆ. ಇದು ಮಧುಮೇಹ ಇರುವವರಿಗೆ ಹಾನಿಕಾರಕ.

ಊಟದ ನಂತರ ಕನಿಷ್ಠ 10 ನಿಮಿಷಗಳ ಕಾಲ ನಡೆಯುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು 30% ವರೆಗೆ ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಒತ್ತಡ ಕಡಿಮೆ ಮಾಡುವುದು ಸಹ ಅಗತ್ಯ :

ಮಾನಸಿಕ ಒತ್ತಡದಿಂದ ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ ಬಿಡುಗಡೆಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಪ್ರಮುಖ ಕಾರಣವಾಗಿದೆ.

👉 ಪ್ರತಿದಿನ ಬೆಳಿಗ್ಗೆ ಅಥವಾ ರಾತ್ರಿ

  • ಪ್ರಾಣಾಯಾಮ.
  • ಯೋಗ.
  • ಧ್ಯಾನ.

ಇವುಗಳನ್ನು ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ, ನಿದ್ರೆ ಉತ್ತಮವಾಗುತ್ತದೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಸಹಾಯವಾಗುತ್ತದೆ.

ಮಹತ್ವದ ಸೂಚನೆ.

ಬಾದಾಮ್ ಗೊಂಡ್ ಒಂದು ನೈಸರ್ಗಿಕ ಪೂರಕ ಮಾತ್ರ.

👉 ವೈದ್ಯರು ಸೂಚಿಸಿದ ಔಷಧಿಗಳನ್ನು ಎಂದಿಗೂ ನಿಲ್ಲಿಸಬೇಡಿ.

👉 ಯಾವುದೇ ಹೊಸ ಪದ್ಧತಿ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ.

ಇದನ್ನು ಓದಿ : 7 ದಿನ ಎಳ್ಳು ತಿನ್ನಿ ; ದೇಹದಲ್ಲಿ ಆಗುವ ಅಚ್ಚರಿಯ ಬದಲಾವಣೆಗಳನ್ನು ನೋಡಿ.!

ತೀರ್ಮಾನ :

ಬಾದಾಮ್ ಗೊಂಡ್, ನಿಯಮಿತ ನಡಿಗೆ, ಯೋಗ ಮತ್ತು ಸಮತೋಲಿತ ಆಹಾರ ಪದ್ಧತಿಯನ್ನು ಜೀವನಶೈಲಿಯ ಭಾಗವಾಗಿಸಿಕೊಂಡರೆ ಮಧುಮೇಹವನ್ನು ಉತ್ತಮವಾಗಿ ನಿಯಂತ್ರಿಸಬಹುದು. ಇವು ಔಷಧಿಗಳಿಗೆ ಪರ್ಯಾಯವಲ್ಲ, ಆದರೆ ಆರೋಗ್ಯಕರ ಜೀವನಕ್ಕೆ ಉತ್ತಮ ಬೆಂಬಲವಾಗುತ್ತವೆ.


Disclaimer: ಈ ಲೇಖನವು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗೆ ವೈದ್ಯರ ಸಲಹೆ ಅವಶ್ಯಕ. ಇಲ್ಲಿ ನೀಡಿರುವ ಮಾಹಿತಿಯನ್ನು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬೇಡಿ.