Home Blog Page 12

ಅಂಚೆ ಕಚೇರಿ RD ಯೋಜನೆ : ದಿನಕ್ಕೆ ರೂ.200 ಉಳಿಸಿದರೆ 10 ವರ್ಷದಲ್ಲಿ ರೂ.10 ಲಕ್ಷ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಂಚೆ ಕಚೇರಿ RD ಯೋಜನೆ ಅಡಿಯಲ್ಲಿ [ಅಂಚೆ ಕಚೇರಿ ಆವರ್ತಕ ಠೇವಣಿ (Post Office Recurring Deposit – RD) ಯೋಜನೆ] ದಿನಕ್ಕೆ ರೂ.200 ಉಳಿಸಿದರೆ 10 ವರ್ಷದಲ್ಲಿ ರೂ.10 ಲಕ್ಷ ಹಣ ಸಂಪಾದಿಸಬಹುದು.

ಇತ್ತೀಚಿನ ದಿನಗಳಲ್ಲಿ ಹೂಡಿಕೆ (Investment) ಮತ್ತು ಉಳಿತಾಯ (Savings) ಪ್ರತಿಯೊಬ್ಬರಿಗೂ ಅನಿವಾರ್ಯವಾಗುತ್ತಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಧ್ಯಮ ವರ್ಗದ ಕುಟುಂಬಗಳಿಗೆ ಹಣವನ್ನು ಜೋಪಾನವಾಗಿ ಉಳಿಸುವುದು ದೊಡ್ಡ ಸವಾಲಾಗಿದೆ. ಕೆಲವರಿಗೆ ಹೂಡಿಕೆ ಮಾಡುವ ಆಸಕ್ತಿ ಇದ್ದರೂ, ಯಾವ ಯೋಜನೆ ಉತ್ತಮ ಎಂಬ ಗೊಂದಲ ಇರುತ್ತದೆ.

ಷೇರು ಮಾರುಕಟ್ಟೆಯ ಏರಿಳಿತ, ಖಾಸಗಿ ಹೂಡಿಕೆಗಳ ಅಪಾಯಗಳನ್ನು ತಪ್ಪಿಸಿ, ಸುರಕ್ಷತೆ ಜೊತೆಗೆ ಸ್ಥಿರ ಆದಾಯ ಬಯಸುವವರಿಗೆ ಅಂಚೆ ಕಚೇರಿ (Post Office) ಒಂದು ವಿಶ್ವಾಸಾರ್ಹ ಆಯ್ಕೆಯಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಂಚೆ ಕಚೇರಿ ಹಲವು ಜನಪ್ರಿಯ ಉಳಿತಾಯ ಯೋಜನೆಗಳನ್ನು ನೀಡುತ್ತಿದ್ದು, ಅದರಲ್ಲಿ ಪ್ರಮುಖವಾದುದು ಅಂಚೆ ಕಚೇರಿ ಆವರ್ತಕ ಠೇವಣಿ (Post Office Recurring Deposit – RD) ಯೋಜನೆ.

ಅಂಚೆ ಕಚೇರಿ RD ಯೋಜನೆ ಏನು?

ಈ ಯೋಜನೆಯಡಿ ನೀವು ಪ್ರತಿದಿನ ಸ್ವಲ್ಪ ಮೊತ್ತವನ್ನು ಉಳಿಸುವ ಮೂಲಕ ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು. ಇದು ಸರ್ಕಾರದ ಯೋಜನೆಯಾಗಿರುವುದರಿಂದ ಹೂಡಿಕೆದಾರರಿಗೆ ಹೆಚ್ಚಿನ ಭದ್ರತೆ ದೊರೆಯುತ್ತದೆ. ಮಾರುಕಟ್ಟೆಯ ಏರಿಳಿತಗಳ ಪರಿಣಾಮ ಇಲ್ಲದೆ, ನಿಗದಿತ ಬಡ್ಡಿದರದ ಮೂಲಕ ಹಣ ಬೆಳೆಯುತ್ತದೆ.

ಈ ಸುದ್ದಿ ಓದಿ : Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ

ಈ ಯೋಜನೆಯಲ್ಲಿ ಖಾತೆ ತೆರೆಯಲು ಕನಿಷ್ಠ ₹100 ಸಾಕು. ಪ್ರಸ್ತುತ ಅಂಚೆ ಕಚೇರಿ RD ಯೋಜನೆಗೆ ವಾರ್ಷಿಕ 6.7% ಬಡ್ಡಿದರ ಲಭ್ಯವಿದೆ. ಈ ಬಡ್ಡಿಯನ್ನು ಚಕ್ರಬಡ್ಡಿ (Compounding Interest) ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.

ಅಂದರೆ, ಬಡ್ಡಿಯ ಮೇಲೂ ಬಡ್ಡಿ ಸೇರಿ ನಿಮ್ಮ ಹಣ ಕ್ರಮೇಣ ಹೆಚ್ಚಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಖಾತೆಗೆ ಸೇರಿಸಲಾಗುತ್ತದೆ.

ಸಾಲ ಸೌಲಭ್ಯವೂ ಲಭ್ಯ :

RD ಖಾತೆ ತೆರೆದ ಒಂದು ವರ್ಷದ ನಂತರ, ಖಾತೆಯಲ್ಲಿ ಜಮಾ ಆಗಿರುವ ಮೊತ್ತದ 50% ವರೆಗೆ ಸಾಲ ಪಡೆಯುವ ಅವಕಾಶವಿದೆ. ತುರ್ತು ಅಗತ್ಯಗಳ ಸಮಯದಲ್ಲಿ ಇದು ಹೂಡಿಕೆದಾರರಿಗೆ ಸಹಾಯಕವಾಗುತ್ತದೆ.

ಅವಧಿ ಮತ್ತು ಮುಚ್ಚುವಿಕೆ ಆಯ್ಕೆಗಳು :

ಈ ಯೋಜನೆಯ ಮೂಲ ಅವಧಿ 5 ವರ್ಷಗಳು. ಬೇಕಾದರೆ ಅವಧಿ ಪೂರ್ಣವಾದ ನಂತರ ಮತ್ತಷ್ಟು 5 ವರ್ಷ ವಿಸ್ತರಿಸುವ ಅವಕಾಶವೂ ಇದೆ. ಮಧ್ಯದಲ್ಲಿ ಹಣದ ಅಗತ್ಯವಿದ್ದರೆ, 3 ವರ್ಷಗಳ ನಂತರ ಖಾತೆ ಮುಚ್ಚುವ ಸೌಲಭ್ಯ ಕೂಡ ಲಭ್ಯವಿದೆ.

ದಿನಕ್ಕೆ ₹200 ಉಳಿಸಿದರೆ ಎಷ್ಟು ಹಣ ಸಿಗುತ್ತದೆ?

ನೀವು ದಿನಕ್ಕೆ ಕೇವಲ ₹200 ಉಳಿಸಿದರೆ, ಅದು ತಿಂಗಳಿಗೆ ಸುಮಾರು ₹6,000 ಆಗುತ್ತದೆ.

  • 5 ವರ್ಷಗಳಲ್ಲಿ ಒಟ್ಟು ಹೂಡಿಕೆ: ₹3,60,000
  • ಅಂದಾಜು ಬಡ್ಡಿ: ₹68,197
  • ಒಟ್ಟು ಮೊತ್ತ: ₹4,28,197

ಒಂದು ವೇಳೆ ಹಣವನ್ನು 5 ವರ್ಷಗಳ ನಂತರ ತೆಗೆದುಕೊಳ್ಳದೇ, ಯೋಜನೆಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಿದರೆ,

  • 10 ವರ್ಷಗಳಲ್ಲಿ ಒಟ್ಟು ಹೂಡಿಕೆ: ₹7,20,000
  • ಅಂದಾಜು ಬಡ್ಡಿ: ₹3,05,131
  • ಒಟ್ಟು ಮೊತ್ತ: ₹10,25,131

ಯಾರಿಗೆ ಈ ಯೋಜನೆ ಸೂಕ್ತ?

ಅಪಾಯದಿಂದ ದೂರವಿದ್ದು ಹಣ ಉಳಿಸಲು ಬಯಸುವ ಉದ್ಯೋಗಿಗಳು, ಮಹಿಳೆಯರು, ಯುವಕರು ಹಾಗೂ ನಿವೃತ್ತರು ಈ ಯೋಜನೆಯನ್ನು ಆಯ್ಕೆ ಮಾಡಬಹುದು. ಮಕ್ಕಳ ಶಿಕ್ಷಣ, ವಿವಾಹ, ಭವಿಷ್ಯದ ಅಗತ್ಯಗಳು ಅಥವಾ ತುರ್ತು ಪರಿಸ್ಥಿತಿಗಳಿಗಾಗಿ ಹಣ ಸಂಗ್ರಹಿಸಲು ಇದು ಉತ್ತಮ ಆಯ್ಕೆಯಾಗಿದೆ.

ಇದನ್ನು ಓದಿ : ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ: ತಿಂಗಳಿಗೆ ರೂ.5,550 ಗಳಿಸುವ ಅವಕಾಶ.

ಹಣವನ್ನು ಆತಂಕವಿಲ್ಲದೆ, ಸುರಕ್ಷಿತವಾಗಿ ಬೆಳಸಲು ಬಯಸುವವರು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ RD ಖಾತೆ ತೆರೆಯಬಹುದು.


Disclaimer : ಈ ಲೇಖನದಲ್ಲಿರುವ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವ ಅಂಚೆ ಕಚೇರಿ ಯೋಜನೆಗಳ ವಿವರಗಳ ಆಧಾರದಲ್ಲಿದೆ. ಹೂಡಿಕೆ ಮಾಡುವ ಮೊದಲು ಸಂಬಂಧಿತ ಅಂಚೆ ಕಚೇರಿ ಅಥವಾ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ ದೃಢೀಕರಿಸಿಕೊಳ್ಳುವುದು ಒಳಿತು. ಈ ಸುದ್ದಿ ಯಾವುದೇ ಹೂಡಿಕೆ ಸಲಹೆಯಲ್ಲ.

ಹನುಮಾನ್ ದೇವಾಲಯದಲ್ಲಿ 48 ಗಂಟೆ ಪ್ರದಕ್ಷಿಣೆ ಹಾಕಿದ ನಾಯಿ; ಭಕ್ತರಲ್ಲಿ ಅಚ್ಚರಿ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಹನುಮಾನ್ ದೇವಾಲಯದಲ್ಲಿ ನಿರಂತರ 48 ಗಂಟೆ ಪ್ರದಕ್ಷಿಣೆ ಕಾಹುತ್ತಿರುವ ನಾಯಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ಪ್ರಾಣಿಗಳಲ್ಲಿಯೂ ಭಕ್ತಿ ಮತ್ತು ನಿಷ್ಠೆಯ ಭಾವನೆಗಳು ಕಾಣಿಸಿಕೊಳ್ಳುತ್ತವೆ ಎಂಬುದಕ್ಕೆ ಸಾಕ್ಷಿಯಂತಿರುವ ಘಟನೆಗಳು ಸಮಯಕ್ಕಾಗಾಗ ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿವೆ.

ಇತ್ತೀಚೆಗೆ ಮಹಾರಾಷ್ಟ್ರದ ಶನಿ ಮಹಾತ್ಮ ದೇವಾಲಯದಲ್ಲಿ ಬೆಕ್ಕೊಂದು ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ವೈರಲ್ ಆಗಿದ್ದ ಬಳಿಕ, ಇದೀಗ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಅಪರೂಪದ ಘಟನೆ ಗಮನ ಸೆಳೆಯುತ್ತಿದೆ.

ಹನುಮಾನ್ ದೇವಾಲಯದಲ್ಲಿ 48 ಗಂಟೆ ಪ್ರದಕ್ಷಿಣೆ ಹಾಕಿದ ನಾಯಿ ವಿಡಿಯೋ :

ಈ ದೃಶ್ಯವನ್ನು ಸ್ಥಳೀಯರು ದಾಖಲಿಸಿದ್ದು, ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಆಧಾರಿತವಾಗಿದೆ.

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗೀನಾ ತೆಹಸಿಲ್ ವ್ಯಾಪ್ತಿಯ ನಂದಪುರ ಗ್ರಾಮದಲ್ಲಿರುವ ಪ್ರಾಚೀನ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು ಕಳೆದ 48 ಗಂಟೆಗಳಿಗೂ ಅಧಿಕ ಕಾಲದಿಂದ ನಿಂತಿಲ್ಲದೆ ಹನುಮಂತನ ವಿಗ್ರಹದ ಸುತ್ತ ನಿರಂತರವಾಗಿ ಪ್ರದಕ್ಷಿಣೆ ಹಾಕುತ್ತಿರುವುದು ಭಕ್ತರು ಹಾಗೂ ಗ್ರಾಮಸ್ಥರನ್ನು ಅಚ್ಚರಿಗೊಳಿಸಿದೆ.

Dog : ಮಾಲೀಕನ ಸಾವು ; ಬಿಕ್ಕಿ ಬಿಕ್ಕಿ ಅತ್ತ ನಾಯಿಯ ಭಾವುಕ ದೃಶ್ಯ ವೈರಲ್.

ಸೋಮವಾರ ಬೆಳಗಿನ ಜಾವ ಸುಮಾರು 4 ಗಂಟೆಯಿಂದ ಆರಂಭಗೊಂಡ ಈ ದೃಶ್ಯ, ದೇವಾಲಯಕ್ಕೆ ಭೇಟಿ ನೀಡುತ್ತಿರುವ ಜನರ ಗಮನ ಸೆಳೆಯುತ್ತಿದ್ದು, ಈಗ ಈ ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಗ್ರಾಮಸ್ಥರ ಹೇಳಿಕೆ ಪ್ರಕಾರ, ಈ ಶ್ವಾನವು ಯಾವುದೇ ಆಕ್ರಮಣಕಾರಿ ನಡವಳಿಕೆ ತೋರಿಸದೇ, ಶಾಂತವಾಗಿ ದೇವಾಲಯದ ಆವರಣದಲ್ಲಿ ವಿಗ್ರಹದ ಸುತ್ತ ಸುತ್ತುತ್ತಲೇ ಇದೆ. ದೇವಾಲಯವನ್ನು ಬಿಟ್ಟು ಹೊರ ಹೋಗುವ ಪ್ರಯತ್ನವನ್ನೂ ಅದು ಮಾಡುತ್ತಿಲ್ಲ.

ನಾಯಿಯ ಈ ಅಸಾಮಾನ್ಯ ನಡವಳಿಕೆಯನ್ನು ಕೆಲವರು ಭಕ್ತಿಯ ಸಂಕೇತವಾಗಿ ನೋಡುತ್ತಿದ್ದರೆ, ಇನ್ನೂ ಕೆಲವರು ಇದನ್ನು ಸಹಜ ಪ್ರಾಣಿಯ ವರ್ತನೆಯೆಂದು ಪರಿಗಣಿಸುತ್ತಿದ್ದಾರೆ.

ಹಿಂದೂ ಧರ್ಮದಲ್ಲಿ ಎಲ್ಲಾ ಜೀವಿಗಳಿಗೂ ದೈವಿಕ ಮಹತ್ವವಿದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಶ್ವಾನವನ್ನು ಕಾಲಭೈರವನ ರೂಪವೆಂದು ಪೂಜಿಸುವ ಸಂಪ್ರದಾಯವೂ ಇದೆ. ಈ ಹಿನ್ನೆಲೆಯಲ್ಲಿ ಹನುಮಾನ್ ದೇವಾಲಯದಲ್ಲಿ ಶ್ವಾನದ ಈ ವರ್ತನೆಯನ್ನು ಕೆಲ ಭಕ್ತರು ಆಧ್ಯಾತ್ಮಿಕ ನಂಬಿಕೆಯೊಂದಿಗೆ ಸಂಪರ್ಕಿಸುತ್ತಿದ್ದಾರೆ.

ಈ ಅಪರೂಪದ ದೃಶ್ಯವನ್ನು ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳಿಂದ ಮಾತ್ರವಲ್ಲದೆ ದೂರದೂರಿನಿಂದಲೂ ಭಕ್ತರು ಆಗಮಿಸುತ್ತಿರುವುದು ಕಂಡುಬಂದಿದೆ. ಘಟನೆಯ ಮಾಹಿತಿ ಪಡೆದ ಸ್ಥಳೀಯ ಮುಖಂಡ ಅನೂಪ್ ಬಾಲ್ಮಿಕಿ ಅವರು ದೇವಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಇದು ನಂಬಿಕೆಯ ವಿಷಯವಾಗಿದ್ದು, ಯಾವುದೇ ರೀತಿಯ ಗೊಂದಲ ಅಥವಾ ಅಶಾಂತಿಗೆ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ದೇವಾಲಯದ ಸುತ್ತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತವೂ ಎಚ್ಚರಿಕೆ ವಹಿಸಿದೆ.

ಚಳಿಗಾಲದ ಹಿನ್ನೆಲೆ, ದೇವಾಲಯ ಸಮಿತಿ ಮತ್ತು ಗ್ರಾಮಸ್ಥರು ನಾಯಿಗೆ ತೊಂದರೆಯಾಗದಂತೆ ದೇವಾಲಯದ ಆವರಣದಲ್ಲಿ ತಾತ್ಕಾಲಿಕ ಆಶ್ರಯ ವ್ಯವಸ್ಥೆ ಮಾಡಿದ್ದು, ಚಳಿಯಿಂದ ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಜೊತೆಗೆ ಭಕ್ತರಿಗೆ ಅನುಕೂಲವಾಗುವಂತೆ ದೇವಾಲಯದ ವ್ಯವಸ್ಥೆಯನ್ನೂ ಸರಿ ಮಾಡಲಾಗಿದೆ.

Dog : ಮಾಲೀಕನ ಸಾವು ಸಹಿಸಲಾರದೆ ನಾಯಿ ಕೂಡ ಬಿಟ್ಟಿತು ಪ್ರಾಣ..!

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಂದಪುರ ಗ್ರಾಮದಲ್ಲಿರುವ ಹನುಮಾನ್ ದೇವಾಲಯದಲ್ಲಿ ನಡೆಯುತ್ತಿರುವ ಈ ಘಟನೆ ಈಗ ಸ್ಥಳೀಯ ಮಟ್ಟದಲ್ಲಿ ವಿಶೇಷ ಕುತೂಹಲ ಮತ್ತು ಚರ್ಚೆಯ ವಿಷಯವಾಗಿದ್ದು, ಧಾರ್ಮಿಕ ನಂಬಿಕೆ ಹಾಗೂ ಮಾನವ-ಪ್ರಾಣಿ ಸಂಬಂಧಗಳ ಕುರಿತು ಚರ್ಚೆಗೆ ಕಾರಣವಾಗಿದೆ.


Disclaimer : ಈ ವರದಿಯಲ್ಲಿ ಉಲ್ಲೇಖಿಸಲಾದ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು, ಸ್ಥಳೀಯರ ಹೇಳಿಕೆಗಳು ಮತ್ತು ಸಾರ್ವಜನಿಕ ನಂಬಿಕೆಗಳ ಆಧಾರಿತವಾಗಿವೆ. ಇದನ್ನು ಧಾರ್ಮಿಕ ನಂಬಿಕೆ ಅಥವಾ ವೈಜ್ಞಾನಿಕ ದೃಢೀಕರಣವೆಂದು ಪರಿಗಣಿಸಬಾರದು. ಓದುಗರು ಸ್ವಂತ ವಿವೇಚನೆ ಬಳಸುವಂತೆ ವಿನಂತಿ.

ಧಾರವಾಡ : ಕ್ಷುಲ್ಲಕ ಜಗಳಕ್ಕೆ ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ.

0

ಜನಸ್ಪಂದನ ನ್ಯೂಸ್‌, ಧಾರವಾಡ : ಶಾಲಾ ಬಾಲಕರ ಮಧ್ಯೆ ನಡೆದ ಘರ್ಷಣೆ ಕೊನೆಗೆ ಭೀಕರ ದುರಂತಕ್ಕೆ ತಿರುಗಿದೆ. ಎಸ್‌ಎಸ್‌ಎಲ್‌ಸಿ (SSLC) ಓದುತ್ತಿದ್ದ ಬಾಲಕನೊಬ್ಬನನ್ನು ಅದೇ ವಯಸ್ಸಿನ ಮೂವರು ಬಾಲಕರು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ಕುಂದಗೋಳ ಪಟ್ಟಣದ ನಿವಾಸಿ ನಿಂಗರಾಜ್ (16) ಎಂದು ಗುರುತಿಸಲಾಗಿದೆ. ಆತ ಕುಂದಗೋಳದ ಅನುದಾನಿತ ಶಾಲೆಯಲ್ಲಿ SSLC ವಿದ್ಯಾಭ್ಯಾಸ ಮಾಡುತ್ತಿದ್ದನು. ಆರೋಪಿಗಳೂ ಸಹ ಅಪ್ರಾಪ್ತ ವಯಸ್ಸಿನವರಾಗಿದ್ದು, ಅವರಲ್ಲಿ ಒಬ್ಬನು ಇದೇ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎನ್ನಲಾಗಿದೆ.

SSLC ಡ್ರಾಪ್‌ಔಟ್ ಸೇರಿ ಮೂವರು ಬಾಲಕರಿಂದ ಹಲ್ಲೆ :

ಪೊಲೀಸ್ ಮೂಲಗಳ ಪ್ರಕಾರ, ಈ ದುರ್ಘಟನೆಗೆ ಶಾಲೆಯಲ್ಲಿ ನಡೆದ ಕ್ಷುಲ್ಲಕ ವಿಚಾರವೇ ಕಾರಣ ಎನ್ನಲಾಗಿದೆ. ಎರಡು ದಿನಗಳ ಹಿಂದೆ ನಿಂಗರಾಜ್ ಹಾಗೂ ಕೆಲ ಸಹಪಾಠಿಗಳ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿತ್ತು.

ಈ ಜಗಳವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಆರೋಪಿಯೊಬ್ಬ, SSLC ಡ್ರಾಪ್‌ಔಟ್ ಆಗಿದ್ದ ತನ್ನ ಇನ್ನಿಬ್ಬರು ಸ್ನೇಹಿತರನ್ನು ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Crime : ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಇಂಜಿನಿಯರ್ ಅನುಮಾನಸ್ಪದ ಸಾವು ; ಕಾರಣ ನಿಗೂಢ.!

ಬುಧವಾರ ಸಂಜೆ ವೇಳೆ ಮೂವರು ಬಾಲಕರು ನಿಂಗರಾಜ್ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ನಿಂಗರಾಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಂದಗೋಳ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕೊಲೆಗೆ ಬೇರೆ ಯಾವುದೇ ಹಿನ್ನೆಲೆಗಳಿವೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

Wife ಹತ್ಯೆ ಪ್ರಕರಣ : ಶವದೊಂದಿಗೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ.

ಶಾಲಾ ವಯಸ್ಸಿನ ಮಕ್ಕಳಿಂದಲೇ ಇಂತಹ ಭೀಕರ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ಆತಂಕಕ್ಕೆ ಕಾರಣವಾಗಿದೆ. ಒಂದೇ ಕ್ಷಣದ ಕೋಪ ಮತ್ತು ಅಸಹನೀಯ ನಿರ್ಧಾರ, ಒಬ್ಬ ಬಾಲಕನ ಭವಿಷ್ಯವನ್ನು ಕಸಿದುಕೊಂಡಷ್ಟೇ ಅಲ್ಲದೆ, ಹಲವು ಕುಟುಂಬಗಳ ಜೀವನವನ್ನೂ ದುಃಖದಲ್ಲಿ ಮುಳುಗಿಸಿದೆ.

Courtesy :  TV9 Kannada


Disclaimer : ಈ ವರದಿ ಅಧಿಕೃತ ಪೊಲೀಸ್ ಮಾಹಿತಿ ಮತ್ತು ಲಭ್ಯವಿರುವ ಮೂಲಗಳ ಆಧಾರದಲ್ಲಿ ತಯಾರಿಸಲಾಗಿದೆ. ಆರೋಪಿಗಳು ಅಪ್ರಾಪ್ತರಾಗಿದ್ದು, ತನಿಖೆ ಮುಂದುವರಿದಿದೆ. ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆರೋಪಿಗಳನ್ನು ಅಪರಾಧಿಗಳೆಂದು ನಿರ್ಧರಿಸಲಾಗುವುದಿಲ್ಲ. ಯಾವುದೇ ರೀತಿಯ ಹಿಂಸೆಯನ್ನು ಈ ವರದಿ ಸಮರ್ಥಿಸುವುದಿಲ್ಲ.

ನಡು ರಸ್ತೆಯಲ್ಲಿ ಸ್ಕೂಟಿ ಚಾಲನೆ ವೇಳೆ ಪತಿಯ ಮೇಲೆ ಪತ್ನಿಯ ಹಲ್ಲೆ; ವಿಡಿಯೋ ವೈರಲ್.

0

‌ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೋಷಿಯಲ್ ಮೀಡಿಯಾದಲ್ಲಿ ದಾಂಪತ್ಯ ಕಲಹ (ಹಲ್ಲೆ) ಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಹರಿದಾಡುತ್ತಿರುವ ಒಂದು ವಿಡಿಯೋದಲ್ಲಿ, ಜನನಿಬಿಡ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಪತ್ನಿಯೇ ತನ್ನ ಗಂಡನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಗಂಡ ಮತ್ತು ಹೆಂಡತಿ ರಾತ್ರಿ ಸಮಯದಲ್ಲಿ ಸ್ಕೂಟಿಯಲ್ಲಿ ಸಂಚರಿಸುತ್ತಿರುವುದು ಕಾಣಿಸುತ್ತದೆ.

ಸ್ಕೂಟಿಯನ್ನು ಗಂಡ ಚಾಲನೆ ಮಾಡುತ್ತಿದ್ದರೆ, ಹಿಂದೆ ಕುಳಿತಿರುವ ಪತ್ನಿ ಏಕಾಏಕಿ ಆತನ ಮೇಲೆ ಕೋಪಗೊಂಡಂತೆ ಕಾಣಿಸುತ್ತಾಳೆ. ಈ ವೇಳೆ ಆಕೆ ಗಂಡನ ತಲೆಗೆ ಮತ್ತು ಬೆನ್ನಿಗೆ ನಿರಂತರವಾಗಿ ಹೊಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್‌ ವಿಡಿಯೋ ಸುದ್ದಿ : ಬೊಲೆರೊ ಮೇಲೆ ಉರುಳಿದ ಟ್ರಕ್; ಚಾಲಕ ಸ್ಥಳದಲ್ಲೇ ಸಾವು, ವಿಡಿಯೋ ವೈರಲ್.

ಹಲ್ಲೆ ವೈರಲ್‌ ವಿಡಿಯೋ :

ಹಲ್ಲೆಯ ನಡುವೆಯೇ ಸ್ಕೂಟಿಯ ಚಾಲನೆ :

ಪತ್ನಿಯ ಹಲ್ಲೆಯಿಂದ ಗಾಬರಿಗೊಂಡ ಗಂಡ ಸಮತೋಲನ ಕಳೆದುಕೊಂಡು ಯದ್ವಾತದ್ವಾ ರೀತಿಯಲ್ಲಿ ವಾಹನ ಚಲಾಯಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಒಂದು ಹಂತದಲ್ಲಿ ಸ್ಕೂಟಿಯು ಫುಟ್‌ಪಾತ್ ಮೇಲೆಯೇ ಚಲಿಸುವ ಪರಿಸ್ಥಿತಿ ಉಂಟಾಗುತ್ತದೆ. ಆದರೂ ಪತ್ನಿಯ ಹಲ್ಲೆ ನಿಲ್ಲದೆ ಮುಂದುವರಿಯುತ್ತಿರುವುದು ಕಂಡುಬಂದಿದೆ.

ಈ ದೃಶ್ಯಗಳನ್ನು ಹಿಂಬದಿಯಿಂದ ಬೇರೊಂದು ವಾಹನದಲ್ಲಿ ಸಂಚರಿಸುತ್ತಿದ್ದವರು ಮೊಬೈಲ್‌ನಲ್ಲಿ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, ಸಾವಿರಾರು ಜನರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ವಿಡಿಯೋಗೆ ಪ್ರತಿಕ್ರಿಯಿಸಿರುವ ಹಲವರು, “ಇದೇ ಘಟನೆ ಪತಿಯೇ ಪತ್ನಿಯ ಮೇಲೆ ನಡೆಸಿದ್ದರೆ ಅದು ಗಂಭೀರ ಅಪರಾಧವೆಂದು ಪರಿಗಣಿಸಲ್ಪಡುತ್ತಿತ್ತೇ?” ಎಂಬ ಪ್ರಶ್ನೆ ಎತ್ತಿದ್ದಾರೆ. ಕೆಲವರು ದ್ವಂದ್ವ ಮಾನದಂಡಗಳ ಬಗ್ಗೆ ಚರ್ಚೆ ನಡೆಸಿದರೆ, ಇನ್ನೂ ಕೆಲವರು ಇದು ಸಾರ್ವಜನಿಕ ಸುರಕ್ಷತೆಗೆ ದೊಡ್ಡ ಅಪಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿಮಹಿಳೆಯ ಮೇಲೆ ಸಂಚಾರಿ ಪೊಲೀಸ್‌ ಹಲ್ಲೆ ; ವಿಡಿಯೋ ವೈರಲ್‌ ಬಳಿಕ ಅಮಾನತು.

ದಾಂಪತ್ಯ ಕಲಹಗಳು ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಯಲ್ಲಿ ಹಲ್ಲೆ ಮತ್ತು ಅಪಾಯಕಾರಿ ಚಾಲನೆಗೆ ಕಾರಣವಾಗಬಾರದು ಎಂಬ ಅಭಿಪ್ರಾಯವೂ ವ್ಯಾಪಕವಾಗಿ ವ್ಯಕ್ತವಾಗಿದೆ. ಈ ಘಟನೆ ರಸ್ತೆ ಸುರಕ್ಷತೆ ಹಾಗೂ ಕೌಟುಂಬಿಕ ಸಮಸ್ಯೆಗಳ ಗಂಭೀರತೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.


Disclaimer : ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ಮಾಹಿತಿ ಮತ್ತು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಹಾಗೂ ಅಧಿಕೃತ ಮೂಲಗಳ ಆಧಾರದಲ್ಲಿವೆ. ಈ ಘಟನೆಯ ನಿಖರತೆ ಮತ್ತು ಹಿನ್ನೆಲೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಇನ್ನೂ ದೃಢೀಕರಣವಾಗಬೇಕಿದೆ.

ಯಾವುದೇ ರೀತಿಯ ಹಿಂಸೆ, ಕಾನೂನುಬಾಹಿರ ವರ್ತನೆ ಅಥವಾ ಅಪಾಯಕಾರಿ ಚಾಲನೆಯನ್ನು ಈ ವರದಿ ಸಮರ್ಥಿಸುವುದಿಲ್ಲ. ಸಾರ್ವಜನಿಕರು ಇಂತಹ ಘಟನೆಗಳಿಂದ ದೂರವಿದ್ದು, ಕಾನೂನು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗುತ್ತದೆ.

ಮಲಗುವ ಮುನ್ನ ಒಂದೇ ಒಂದು ಲವಂಗ ತಿಂದು ಮಲಗಿ, ಆಮೇಲೆ ಅಚ್ಚರಿ ಫಲಿತಾಂಶ ನೋಡಿ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದಿನನಿತ್ಯದ ಆಹಾರದಲ್ಲಿ ಬಳಸುವ ಸಣ್ಣ ಸುವಾಸನೆಯ ಮಸಾಲೆಗಳಲ್ಲಿ ಲವಂಗವೂ ಒಂದು. ಆದರೆ ಇದನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ, ಅದು ದೇಹಕ್ಕೆ ಔಷಧಿಯಂತೆ ಕೆಲಸ ಮಾಡುತ್ತದೆ. ವಿಶೇಷವಾಗಿ ಮಲಗುವ ಮುನ್ನ ಲವಂಗ ಅಥವಾ ಅದರ ನೀರನ್ನು ಸೇವಿಸುವುದು ಹಲವು ಆರೋಗ್ಯ ಸಮಸ್ಯೆಗಳನ್ನು ಸಹಜವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಜೀರ್ಣಾಂಗ ವ್ಯವಸ್ಥೆ ಸುಧಾರಣೆ :

ಮಲಗುವ ಮುನ್ನ ಇದನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಕಾರ್ಯಕ್ಷಮತೆ ಉತ್ತಮವಾಗುತ್ತದೆ. ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಆಹಾರ ಸರಿಯಾಗಿ ಜೀರ್ಣವಾಗದಂತಹ ಸಮಸ್ಯೆಗಳು ನಿಧಾನವಾಗಿ ಕಡಿಮೆಯಾಗುತ್ತವೆ. ಇದಲ್ಲಿರುವ ನೈಸರ್ಗಿಕ ಎನ್ಜೈಮ್‌ಗಳು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ.

ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

ರೋಗನಿರೋಧಕ ಶಕ್ತಿ ಹೆಚ್ಚಳ :

ಇದಲ್ಲಿ ಇರುವ ಆಂಟಿಮೈಕ್ರೊಬಿಯಲ್ ಮತ್ತು ಆಂಟಿಆಕ್ಸಿಡೆಂಟ್ ಗುಣಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಲವಂಗ ನೀರನ್ನು ಸೇವಿಸುವುದರಿಂದ ಸೋಂಕುಗಳು, ವೈರಲ್ ಸಮಸ್ಯೆಗಳು ಮತ್ತು ಋತುಬದ್ಧ ಕಾಯಿಲೆಗಳಿಂದ ರಕ್ಷಣೆ ದೊರಕಬಹುದು.

ಶಾಂತಿಯುತ ಮತ್ತು ಆಳವಾದ ನಿದ್ರೆ :

ಇದರಲ್ಲಿ ಮೆದುಳನ್ನು ಶಾಂತಗೊಳಿಸುವ ನೈಸರ್ಗಿಕ ಅಂಶಗಳು ಇರುವುದರಿಂದ, ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ನಿದ್ರೆ ಸಮಸ್ಯೆ, ರಾತ್ರಿ ಮರುಮರು ಎಚ್ಚರವಾಗುವುದು ಮತ್ತು ಅಶಾಂತ ನಿದ್ರೆ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಉತ್ತಮ ನಿದ್ರೆ ದೇಹದ ಒಟ್ಟಾರೆ ಆರೋಗ್ಯಕ್ಕೆ ಅತ್ಯಗತ್ಯ.

ಇದನ್ನು ಓದಿ : ಫ್ಯಾಟಿ ಲಿವರ್ ತಪ್ಪಿಸಲು ಈ 3 ತಪ್ಪುಗಳನ್ನ ಈಗಲೇ ಬಿಡಿ : ಲಿವರ್ ತಜ್ಞರ ಎಚ್ಚರಿಕೆ.

ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ಪರಿಹಾರ :

ಇದು ಉಷ್ಣತೆಯನ್ನು ಹೆಚ್ಚಿಸುವ ಗುಣ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಶೀತ, ಕೆಮ್ಮು, ಗಂಟಲು ನೋವು ಮತ್ತು ಕಫದಂತಹ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುತ್ತವೆ. ಚಳಿಗಾಲದಲ್ಲಿ ಅಥವಾ ವಾತಾವರಣ ಬದಲಾವಣೆಯ ಸಮಯದಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಹಲ್ಲು ಮತ್ತು ಒಸಡುಗಳ ಆರೋಗ್ಯ :

ಇದನ್ನು ಅಗಿಯುವುದರಿಂದ ಅಥವಾ ಅದರ ನೀರನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಹಲ್ಲುನೋವು, ಒಸಡುಗಳ ಉರಿಯೂತ ಮತ್ತು ಸೋಂಕುಗಳನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಇದರಲ್ಲಿರುವ ಯುಜೆನಾಲ್ ಅಂಶವು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನು ಓದಿ : ಮೊಟ್ಟೆಗಳಲ್ಲಿ ʼಕ್ಯಾನ್ಸರ್ ಕಾರಕʼ ಅಂಶ ಅನುಮಾನ ; ರಾಜ್ಯಾದ್ಯಂತ ಆರೋಗ್ಯ ಅಲರ್ಟ್.

ಹೃದಯದ ಆರೋಗ್ಯಕ್ಕೂ ಲಾಭ :

ಇದರ ನೀರು ದೇಹದಲ್ಲಿ ರಕ್ತ ಪರಿಚಲನೆ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ರಕ್ತನಾಳಗಳ ಆರೋಗ್ಯ ಕಾಪಾಡಿಕೊಳ್ಳಲು ಸಹ ಇದು ಸಹಾಯಕವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಲವಂಗ ನೀರು ತಯಾರಿಸುವ ವಿಧಾನ :

  • ಒಂದು ಕಪ್ ನೀರಿಗೆ 4–5 ಲವಂಗಗಳನ್ನು ಸೇರಿಸಿ.
  • ಮಧ್ಯಮ ಉರಿಯಲ್ಲಿ ಸುಮಾರು 5 ನಿಮಿಷಗಳ ಕಾಲ ಕುದಿಸಿ.
  • ಗ್ಯಾಸ್ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಡಿ.
  • ಮಲಗುವ ಮುನ್ನ ಸುಮಾರು 30 ನಿಮಿಷಗಳ ಮೊದಲು ಸೀಮಿತ ಪ್ರಮಾಣದಲ್ಲಿ ಕುಡಿಯಿರಿ.

ವಾರಕ್ಕೆ 3–4 ಬಾರಿ ಸೇವಿಸಿದರೆ ಸಾಕು.

ಇಂತಹ ಹೆಚ್ಚಿನ ಸುದ್ದಿಗಳನ್ನು ನೀವು ಓದಲು ಬಯಸುವಿರಾ? janaspandhan.com ಕ್ಲಿಕ್ ಮಾಡಿ


ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಆರೋಗ್ಯ ಮಾಹಿತಿಯ ಆಧಾರಿತವಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಗಂಭೀರವಾಗಿದ್ದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ.

34ರ ಟೆಕ್ಕಿ ಮೇಲೆ 18ರ ಯುವಕನ ಓನ್‌ ಸೈಡ್‌ ಲವ್‌; ಲೈಂಗಿಕ ದೌರ್ಜನ್ಯ ಯತ್ನ, ಹಲ್ಲೆ.

0

ಜನಸ್ಪಂದನ ನ್ಯೂಸ್‌, ಬೆಂಗಳೂರು: ರಾಮಮೂರ್ತಿ ನಗರದಲ್ಲಿ ನಡೆದ ಮಹಿಳಾ ಟೆಕ್ಕಿ ಶರ್ಮಿಳಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ನೆರೆ ಮನೆಯ ಪಿಯುಸಿ ವಿದ್ಯಾರ್ಥಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿ, ಹಲ್ಲೆ ನಡೆಸಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಸಂಬಂಧ ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಕರ್ನಾಲ್ (18) ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜ.3ರಂದು ಈ ಘಟನೆ ನಡೆದಿದ್ದು, ಶರ್ಮಿಳಾ (34) ಮೇಲೆ ಹಲ್ಲೆ ನಡೆಸಿದ ನಂತರ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲ್ಯಾಟ್‌ನಲ್ಲಿ ಒಬ್ಬರೇ ಇದ್ದ ಶರ್ಮಿಳಾ :

ಮಂಗಳೂರು ಮೂಲದ ಶರ್ಮಿಳಾ, ಕಳೆದ ಒಂದೂವರೆ ವರ್ಷದಿಂದ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತೆಯೊಂದಿಗೆ ವಾಸವಾಗಿದ್ದರು. ಸಮೀಪದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನ ಶರ್ಮಿಳಾ ಅವರ ಸ್ನೇಹಿತೆ ರಜೆಯ ಕಾರಣ ಊರಿಗೆ ತೆರಳಿದ್ದರಿಂದ, ಅವರು ಮನೆಯಲ್ಲಿ ಒಬ್ಬರೇ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಕದ ಫ್ಲ್ಯಾಟ್‌ನಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ಆರೋಪಿಗೆ ಶರ್ಮಿಳಾ ಮತ್ತು ಅವರ ಸ್ನೇಹಿತೆಯ ಪರಿಚಯವಿತ್ತು ಎನ್ನಲಾಗಿದೆ.

ಈ ಕ್ರೈಮ್‌ ಸುದ್ದಿ ಓದಿ : Wife ಹತ್ಯೆ ಪ್ರಕರಣ : ಶವದೊಂದಿಗೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ.

ಕಿಟಕಿ ಮೂಲಕ ಮನೆ ಪ್ರವೇಶಿಸಿದ ಆರೋಪಿ :

ಜ.3ರ ಸಂಜೆ ಶರ್ಮಿಳಾ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ ಆರೋಪಿ, ಸ್ಲೈಡಿಂಗ್ ಕಿಟಕಿ ಮೂಲಕ ಮನೆಗೆ ಪ್ರವೇಶಿಸಿದ್ದಾನೆ. ಈ ವೇಳೆ ಶರ್ಮಿಳಾ ವಿರೋಧ ವ್ಯಕ್ತಪಡಿಸಿದಾಗ, ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಹಲ್ಲೆ ನಡೆದಿದ್ದು, ಆಕೆಯ ಕುತ್ತಿಗೆ ಹಾಗೂ ಕೈಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಗಾಬರಿಗೊಂಡ ಆರೋಪಿ, ಮನೆಯೊಳಗಿನ ಬಟ್ಟೆಗಳನ್ನು ಹಾಸಿಗೆಯ ಮೇಲೆ ಹಾಕಿ ಬೆಂಕಿ ಹಚ್ಚಿ, ಕಿಟಕಿ ಮೂಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಹಿರಂಗ :

ಪ್ರಾರಂಭದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಮತ್ತು ಹೊಗೆಯಿಂದ ಉಸಿರುಗಟ್ಟಿ ಸಾವಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಶರ್ಮಿಳಾ ಅವರ ಕುತ್ತಿಗೆ ಹಾಗೂ ಕೈಗಳಲ್ಲಿ ಗಂಭೀರ ಗಾಯಗಳಿರುವುದು ಪತ್ತೆಯಾಗಿದೆ.

ವೈದ್ಯಕೀಯ ವರದಿಯ ಪ್ರಕಾರ, ಬೆಂಕಿಯಿಂದ ಉಂಟಾದ ಹೊಗೆಯ ಪರಿಣಾಮಕ್ಕೆ ಮುನ್ನವೇ ಹಲ್ಲೆ ಮತ್ತು ಉಸಿರುಗಟ್ಟಿಸುವ ಕ್ರಿಯೆ ನಡೆದಿರುವ ಸಾಧ್ಯತೆ ಇದೆ. ಜೊತೆಗೆ ಲೈಂಗಿಕ ದೌರ್ಜನ್ಯ ಯತ್ನ ನಡೆದಿರುವ ಸೂಚನೆಗಳೂ ಕಂಡುಬಂದಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ : ತಾಯಿ ಸಾವಿನ ಶೋಕದಲ್ಲಿದ್ದ ಪತ್ನಿಯನ್ನೇ ಕೊಂದ ಪತಿ; ಬೆಳಗಾವಿಯಲ್ಲಿ ಹೃದಯವಿದ್ರಾವಕ ದುರಂತ.

ವಿಚಾರಣೆಯಲ್ಲಿ ಆರೋಪಿ ಒಪ್ಪಿಗೆ :

ತನಿಖೆ ವೇಳೆ ಪೊಲೀಸರು ಹಲವು ಕೋನಗಳಿಂದ ಪರಿಶೀಲನೆ ನಡೆಸಿ, ಅನುಮಾನದ ಮೇರೆಗೆ ಕರ್ನಾಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಶರ್ಮಿಳಾ ಮೇಲೆ ಏಕಪಕ್ಷೀಯ ಆಸಕ್ತಿ (ಓನ್‌ ಸೈಡ್‌ ಲವ್‌) ಹೊಂದಿದ್ದೆ, ಆಕೆ ನಿರಾಕರಿಸಿದ್ದರಿಂದ ಕೋಪಕ್ಕೆ ಒಳಗಾದೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಮೊದಲು ಅಸಹಜ ಸಾವು ಎಂದು ದಾಖಲಾಗಿದ್ದ ಪ್ರಕರಣವನ್ನು ಇದೀಗ ಕೊಲೆ ಪ್ರಕರಣವಾಗಿ ಪರಿವರ್ತಿಸಿ, ರಾಮಮೂರ್ತಿ ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Disclaimer : ಈ ವರದಿಯಲ್ಲಿ ಉಲ್ಲೇಖಿಸಲಾದ ಮಾಹಿತಿಯು ಪೊಲೀಸ್ ಮೂಲಗಳು ಹಾಗೂ ಪ್ರಾಥಮಿಕ ತನಿಖಾ ವಿವರಗಳನ್ನು ಆಧರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಂದುವರಿದಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಪೊಲೀಸರು ಹಾಗೂ ನ್ಯಾಯಾಲಯದ ಪ್ರಕ್ರಿಯೆಯೇ ಪ್ರಾಮಾಣಿಕವಾಗಿರುತ್ತದೆ.

ಮೂಗಿನಲ್ಲಿ ದುರ್ಮಾಂಸ ಸಮಸ್ಯೆ: ಲಕ್ಷಣಗಳು, ಕಾರಣಗಳು ಮತ್ತು ಆಯುರ್ವೇದ ಪರಿಹಾರ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಅನೇಕ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಮೂಗಿನಲ್ಲಿ ದುರ್ಮಾಂಸ (Nasal Polyps / Abnormal Tissue Growth) ಪ್ರಮುಖವಾಗಿದೆ. ಈ ಸ್ಥಿತಿಯಲ್ಲಿ ಮೂಗಿನ ಒಳಭಾಗದಲ್ಲಿ ಮಾಂಸ ಅಥವಾ ಮೂಳೆ ಭಾಗ ಅಸಹಜವಾಗಿ ಬೆಳೆಯುವುದರಿಂದ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ. ಜೊತೆಗೆ ಮೂಗಿನ ದಟ್ಟಣೆ, ಸೈನಸ್ ಸಮಸ್ಯೆ, ತಲೆನೋವು ಹಾಗೂ ವಾಸನೆಯ ಪ್ರಜ್ಞೆ ಕಡಿಮೆಯಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಮೂಗಿನಲ್ಲಿ ದುರ್ಮಾಂಸ ಬೆಳೆಯಲು ಕಾರಣಗಳು :

ವೈದ್ಯಕೀಯ ತಜ್ಞರ ಪ್ರಕಾರ, ಮೂಗಿನಲ್ಲಿ ಮಾಂಸ ಅಥವಾ ಮೂಳೆ ಬೆಳವಣಿಗೆಗೆ ಹಲವು ಕಾರಣಗಳಿರಬಹುದು. ವಿಶೇಷವಾಗಿ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಮುಖ್ಯ ಕಾರಣಗಳು ಹೀಗಿವೆ:

  • ಧೂಳು, ಹೊಗೆ, ಪರಾಗಕಣಗಳಿಂದ ಉಂಟಾಗುವ ಅಲರ್ಜಿ
  • ಆಗಾಗ್ಗೆ ಕಾಣಿಸುವ ಸೈನಸ್ ಸೋಂಕು.
  • ಅಲರ್ಜಿಕ್ ರಿನಿಟಿಸ್ ಮತ್ತು ಆಸ್ತಮಾ.
  • ಆನುವಂಶಿಕ ಕಾರಣಗಳು.

ಮೂಗಿನಲ್ಲಿ ದುರ್ಮಾಂಸ ಇದ್ದರೆ ಕಾಣಿಸುವ ಲಕ್ಷಣಗಳು :

  • ಮೂಗಿನ ಮೂಲಕ ಉಸಿರಾಡಲು ತೊಂದರೆ.
  • ಉಸಿರಾಟದ ವೇಳೆ “ಸಹ್-ಸಹ್” ಶಬ್ದ.
  • ಮುಖ ಹಾಗೂ ತಲೆಯ ಭಾಗದಲ್ಲಿ ಒತ್ತಡ ಅಥವಾ ನೋವು.
  • ಪದೇಪದೇ ಸೈನಸ್ ಸೋಂಕು.
  • ವಾಸನೆಯ ಪ್ರಜ್ಞೆ ಕಡಿಮೆಯಾಗುವುದು.
  • ನಿದ್ರೆಯ ವೇಳೆ ಗೊರಕೆ.

ಆರೋಗ್ಯ ಸುದ್ದಿ : Health : 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ವರ್ಷಕ್ಕೊಮ್ಮೆ ಈ ಆರೋಗ್ಯ ತಪಾಸಣೆಗಳನ್ನು ಮಾಡಿಸಲೇಬೇಕು.!

ಆಯುರ್ವೇದ ವೈದ್ಯರಾದ ಡಾ. ಇರ್ಫಾನ್ ಅವರ ಮಾಹಿತಿ ಪ್ರಕಾರ, 10ರಿಂದ 70 ವರ್ಷ ವಯಸ್ಸಿನವರವರೆಗೂ ಈ ಸಮಸ್ಯೆ ಕಂಡುಬರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಮೂಗಿನ ಒಂದೇ ಬದಿಯಲ್ಲಿ ಮಾಂಸ ಅಥವಾ ಮೂಳೆ ಬೆಳೆಯುವುದರಿಂದ ಆ ಭಾಗದಿಂದ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ.

ಆಯುರ್ವೇದದ ಸಹಾಯಕ ಮನೆಮದ್ದು :

ಆಯುರ್ವೇದ ಪದ್ಧತಿಯಲ್ಲಿ ಮೂಗಿನ ದುರ್ಮಾಂಸ ಸಮಸ್ಯೆಗೆ ಕೆಲವು ಸಹಾಯಕ ಔಷಧೀಯ ಸಸ್ಯಗಳನ್ನು ಬಳಸಲಾಗುತ್ತದೆ. ಅವು ದೇಹದ ಉರಿಯೂತ ಕಡಿಮೆ ಮಾಡಲು ಮತ್ತು ಉಸಿರಾಟದ ತೊಂದರೆ ತಗ್ಗಿಸಲು ನೆರವಾಗಬಹುದು ಎಂದು ಹೇಳಲಾಗುತ್ತದೆ.

ಬೇಕಾಗುವ ಪದಾರ್ಥಗಳು:

  • ಅರ್ಜುನ ತೊಗಟೆ – 50 ಗ್ರಾಂ.
  • ಅಶ್ವಗಂಧ – 50 ಗ್ರಾಂ.
  • ನೌಷಧರ್ (Ammonium Chloride) – 20 ಗ್ರಾಂ.

ತಯಾರಿಸುವ ವಿಧಾನ:
ಈ ಮೂರು ಪದಾರ್ಥಗಳನ್ನು ಒಟ್ಟಾಗಿ ಚೆನ್ನಾಗಿ ಒಣಗಿಸಿ ನಯವಾದ ಪುಡಿಯಾಗಿ ಮಾಡಿ. ಗಾಳಿ ಮತ್ತು ತೇವಾಂಶ ಸೇರದಂತೆ ಮುಚ್ಚಿದ ಪಾತ್ರೆಯಲ್ಲಿ ಸಂಗ್ರಹಿಸಬೇಕು.

ಸೇವಿಸುವ ವಿಧಾನ (ವೈದ್ಯರ ಸಲಹೆಯೊಂದಿಗೆ):
ಪ್ರತಿ ಬಾರಿ ಸುಮಾರು 2 ಗ್ರಾಂ ಪುಡಿಯನ್ನು ಬೆಳಿಗ್ಗೆ ಮತ್ತು ಸಂಜೆ ನೀರಿನೊಂದಿಗೆ ಸೇವಿಸಬಹುದು.

ಕೆಲವು ಆಯುರ್ವೇದ ವೈದ್ಯರ ಅಭಿಪ್ರಾಯದಂತೆ, ಈ ರೀತಿಯ ಚಿಕಿತ್ಸೆಯಿಂದ ಮೂಗಿನಲ್ಲಿ ಉಂಟಾಗುವ ಉಬ್ಬು ಅಥವಾ ಮಾಂಸದ ಬೆಳವಣಿಗೆಯ ಲಕ್ಷಣಗಳಲ್ಲಿ ಕ್ರಮೇಣ ಕಡಿತ ಕಂಡುಬರಬಹುದು.

ಇದನ್ನು ಓದಿ : ಬೆಳಿಗ್ಗೆ ಮಾಡುವ ಈ ತಪ್ಪುಗಳಿಂದ ಅಕಾಲಿಕ ವಯಸ್ಸಾಗುತ್ತಿದೆಯೇ? ತಜ್ಞರ ಎಚ್ಚರಿಕೆ.

ತಜ್ಞರ ಎಚ್ಚರಿಕೆ :

ಮೂಗಿನಲ್ಲಿ ದುರ್ಮಾಂಸ ಅಥವಾ ಮೂಳೆ ಬೆಳವಣಿಗೆಯ ಸಮಸ್ಯೆ ವ್ಯಕ್ತಿಗತವಾಗಿ ಬದಲಾಗುತ್ತದೆ. ಎಲ್ಲರಿಗೂ ಒಂದೇ ಪರಿಹಾರ ಪರಿಣಾಮಕಾರಿಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ಲಕ್ಷಣಗಳು ತೀವ್ರವಾಗಿದ್ದರೆ ಅಥವಾ ದೀರ್ಘಕಾಲ ಮುಂದುವರಿದರೆ, ಕಡ್ಡಾಯವಾಗಿ ENT ತಜ್ಞ ಅಥವಾ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.


Disclaimer : ಈ ಲೇಖನದಲ್ಲಿರುವ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಇದನ್ನು ವೈದ್ಯಕೀಯ ಸಲಹೆ ಎಂದು ಪರಿಗಣಿಸಬಾರದು. ಯಾವುದೇ ಔಷಧಿ ಅಥವಾ ಮನೆಮದ್ದು ಬಳಸುವ ಮೊದಲು ಅರ್ಹ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ: ತಿಂಗಳಿಗೆ ರೂ.5,550 ಗಳಿಸುವ ಅವಕಾಶ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಸುರಕ್ಷಿತ ಹೂಡಿಕೆ ಮತ್ತು ಸ್ಥಿರ ಆದಾಯವನ್ನು ಬಯಸುವ ಜನರು ಅಂಚೆ ಕಚೇರಿ ಯೋಜನೆಗಳತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಮಾರುಕಟ್ಟೆಯ ಏರಿಳಿತಗಳಿಂದ ದೂರವಿದ್ದು, ಸರ್ಕಾರದ ಭದ್ರತೆಯೊಂದಿಗೆ ಲಾಭ ಪಡೆಯುವ ಉದ್ದೇಶದಿಂದ ಅನೇಕರು ಈ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಇಂತಹ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲೇ ಪ್ರಮುಖವಾದುದು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (Post Office Monthly Income Scheme – MIS). ವಿಶೇಷವಾಗಿ ನಿವೃತ್ತರು, ಗೃಹಿಣಿಯರು ಹಾಗೂ ಮಧ್ಯಮ ವರ್ಗದ ಜನರಿಗೆ ಈ ಯೋಜನೆ ಉತ್ತಮ ಆರ್ಥಿಕ ಬೆಂಬಲವಾಗಿ ಪರಿಣಮಿಸಿದೆ.

ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ :

ಪ್ರಸ್ತುತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲೂ ಕೇಂದ್ರ ಸರ್ಕಾರ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರ ಪರಿಣಾಮವಾಗಿ, ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ವಾರ್ಷಿಕ 7.4 ಶೇಕಡಾ ಬಡ್ಡಿದರ ಮುಂದುವರಿದಿದೆ. ಇದು ಇತರ ಸುರಕ್ಷಿತ ಹೂಡಿಕೆಗಳ ಹೋಲಿಕೆಯಲ್ಲಿ ಆಕರ್ಷಕ ಆದಾಯ ನೀಡುವ ಯೋಜನೆಯಾಗಿದೆ.

ತಿಂಗಳಿಗೆ ಸುಮಾರು ₹5,550 ಆದಾಯ ಹೇಗೆ?

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ, ಐದು ವರ್ಷಗಳ ಅವಧಿಗೆ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಆದಾಯ ಲಭ್ಯವಾಗುತ್ತದೆ.

ಒಬ್ಬ ವ್ಯಕ್ತಿ ಒಂಟಿ ಖಾತೆಯಲ್ಲಿ ಗರಿಷ್ಠ ₹9 ಲಕ್ಷ ಹೂಡಿಕೆ ಮಾಡಬಹುದು. ಈ ಮೊತ್ತವನ್ನು ಹೂಡಿಕೆ ಮಾಡಿದರೆ, ತಿಂಗಳಿಗೆ ಸರಾಸರಿ ₹5,550ರಷ್ಟು ಬಡ್ಡಿ ಆದಾಯ ದೊರೆಯುವ ಸಾಧ್ಯತೆ ಇದೆ.

ಇದೇ ರೀತಿ, ಜಂಟಿ ಖಾತೆ ತೆರೆಯುವ ಅವಕಾಶವೂ ಇದ್ದು, ಗರಿಷ್ಠ ₹15 ಲಕ್ಷವರೆಗೆ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ ಮೂವರು ಸದಸ್ಯರು ಸೇರಬಹುದು. ಐದು ವರ್ಷಗಳ ಅವಧಿ ಪೂರ್ಣಗೊಂಡ ಬಳಿಕ, ಹೂಡಿಕೆ ಮಾಡಿದ ಮೂಲ ಮೊತ್ತವನ್ನು ಸಂಪೂರ್ಣವಾಗಿ ಹಿಂತಿರುಗಿಸಲಾಗುತ್ತದೆ.

ಖಾತೆ ತೆರೆಯುವ ಪ್ರಕ್ರಿಯೆ :

ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ ₹1,000ರಿಂದ ಖಾತೆ ಆರಂಭಿಸಬಹುದು. ಹೂಡಿಕೆದಾರರು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವುದು ಕಡ್ಡಾಯ. ಮಾಸಿಕ ಬಡ್ಡಿ ಮೊತ್ತವನ್ನು ನೇರವಾಗಿ ಆ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ.

ಐದು ವರ್ಷಗಳ ನಂತರ ಹೂಡಿಕೆದಾರರು ತಮ್ಮ ಅಸಲು ಮೊತ್ತವನ್ನು ಹಿಂಪಡೆಯಬಹುದು ಅಥವಾ ಮತ್ತೆ ಈ ಯೋಜನೆಯಲ್ಲಿ ಮರುಹೂಡಿಕೆ ಮಾಡುವ ಆಯ್ಕೆಯೂ ಲಭ್ಯವಿದೆ.

ಇದನ್ನು ಓದಿ : “Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ”.!

ಈ ಅಂಚೆ ಕಚೇರಿ ಯೋಜನೆ ಯಾರಿಗೆ ಸೂಕ್ತ?

ಷೇರು ಮಾರುಕಟ್ಟೆಯ ಅಸ್ಥಿರತೆಗಳಿಂದ ದೂರವಿದ್ದು, ಕಡಿಮೆ ಅಪಾಯದೊಂದಿಗೆ ನಿರಂತರ ಆದಾಯವನ್ನು ಬಯಸುವವರಿಗೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಉತ್ತಮ ಆಯ್ಕೆಯಾಗಿದೆ. ಸರ್ಕಾರಿ ಖಾತರಿಯೊಂದಿಗೆ ಭದ್ರ ಹೂಡಿಕೆಯನ್ನು ಹುಡುಕುತ್ತಿರುವವರಿಗೆ ಇದು ನಂಬಿಕಸ್ತ ಯೋಜನೆಯಾಗಿದೆ.


Disclaimer: ಈ ಲೇಖನದಲ್ಲಿನ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವ ನಿಯಮಗಳು ಮತ್ತು ಪ್ರಸ್ತುತ ಬಡ್ಡಿದರಗಳ ಆಧಾರವಾಗಿದೆ. ಹೂಡಿಕೆ ಮಾಡುವ ಮೊದಲು ಸಂಬಂಧಿತ ಅಂಚೆ ಕಚೇರಿ ಅಥವಾ ಹಣಕಾಸು ಸಲಹೆಗಾರರೊಂದಿಗೆ ಪರಿಶೀಲಿಸುವುದು ಒಳಿತು.

ತಾಯಿ ಸಾವಿನ ಶೋಕದಲ್ಲಿದ್ದ ಪತ್ನಿಯನ್ನೇ ಕೊಂದ ಪತಿ; ಬೆಳಗಾವಿಯಲ್ಲಿ ಹೃದಯವಿದ್ರಾವಕ ದುರಂತ.

0

ಜನಸ್ಪಂದನ ನ್ಯೂಸ್‌, ಬೆಳಗಾವಿ (ಬೈಲಹೊಂಗಲ): ತಾಯಿ ಅಗಲಿಕೆಯ ನೋವಿನಲ್ಲಿದ್ದ ಪತ್ನಿಯನ್ನೇ ಗಂಡನೊಬ್ಬ ಭೀಕರವಾಗಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ ಆರಂಭವಾದ ಈ ಘಟನೆ, ಕೊನೆಗೆ ದಂಪತಿಯಿಬ್ಬರ ದುರಂತ ಸಾವಿನಲ್ಲಿ ಅಂತ್ಯಗೊಂಡಿದೆ.

ಮೃತರನ್ನು 46 ವರ್ಷದ ಶಿವಪ್ಪ ಮತ್ತು ಅವರ ಪತ್ನಿ 40 ವರ್ಷದ ಯಲ್ಲವ್ವ ಎಂದು ಗುರುತಿಸಲಾಗಿದೆ. ಈ ಘಟನೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತವರು ಮನೆಗೆ ಹೋಗುವ ವಿಚಾರವೇ ಕೌಟುಂಬಿಕ ಕಲಹಕ್ಕೆ ಕಾರಣ :

ಯಲ್ಲವ್ವ ಅವರ ತಾಯಿ ನಿಧನರಾಗಿ ಒಂದು ವಾರ ಕಳೆದಿತ್ತು. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಯಲ್ಲವ್ವ ತವರಿಗೆ ತೆರಳಿ ಭಾಗವಹಿಸಿದ್ದರು.

ಆದರೆ ವಿಧಿವಿಧಾನ ಮುಗಿದ ಬಳಿಕ ತಡವಾಗಿದ್ದ ಕಾರಣ ಅದೇ ದಿನ ಗಂಡನ ಮನೆಗೆ ಮರಳಲು ಸಾಧ್ಯವಾಗಿರಲಿಲ್ಲ. ಇದನ್ನೇ ಕಾರಣವಾಗಿಸಿಕೊಂಡು ಪತಿ ಶಿವಪ್ಪ ಪತ್ನಿಯೊಂದಿಗೆ ಗಲಾಟೆ ನಡೆಸಿದ್ದ ಎನ್ನಲಾಗಿದೆ.

ತಾಯಿ ಸಾವಿನ ಶೋಕದಲ್ಲಿದ್ದ ಯಲ್ಲವ್ವ, ಒಂದು ವಾರದ ಬಳಿಕ ನಡೆಯುವ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಮತ್ತೆ ತವರು ಮನೆಗೆ ತೆರಳಲು ಸಜ್ಜಾಗಿದ್ದರು. ಆದರೆ ಇದಕ್ಕೆ ಪತಿ ಶಿವಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದಾನೆ.

ಮನವಿ ನಿರಾಕರಿಸಿದ ಪತಿ, ಪತ್ನಿಯ ಮೇಲೆ ದಾಳಿ :

ತಾಯಿ ಸಾವಿನ ವಿಧಿವಿಧಾನ ನೆರವೇರಿಸಲು ತವರಿಗೆ ಹೋಗಲೇಬೇಕೆಂದು ಯಲ್ಲವ್ವ ಹಲವು ಬಾರಿ ಪತಿಯನ್ನು ಮನವಿ ಮಾಡಿಕೊಂಡಿದ್ದಾಳೆ. ಮಗನಿಗೆ ಊಟ ತಯಾರಿಸಿ, ಸ್ನಾನ ಮುಗಿಸಿಕೊಂಡು ತವರಿಗೆ ಹೊರಡಲು ಸಿದ್ಧವಾಗುತ್ತಿದ್ದ ವೇಳೆ, ಗಂಡ ಶಿವಪ್ಪ ಏಕಾಏಕಿ ಕೊಡಲಿಯಿಂದ ಯಲ್ಲವ್ವನ ಬೆನ್ನು ಮತ್ತು ಕುತ್ತಿಗೆಗೆ ದಾಳಿ ನಡೆಸಿದ್ದಾನೆ.

ಒಂದೇ ದಾಳಿಯಲ್ಲಿ ಯಲ್ಲವ್ವ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ. ಕೌಟುಂಬಿಕ ಕಲಹ ಕ್ಷಣಾರ್ಧದಲ್ಲಿ ಭೀಕರ ಕೊಲೆಯಾಗಿ ಪರಿವರ್ತನೆಯಾಗಿದೆ.

ಹತ್ಯೆಯ ಬಳಿಕ ಆತ್ಮಹತ್ಯೆ :

ಪತ್ನಿಯನ್ನು ಹತ್ಯೆ ಮಾಡಿದ ಬಳಿಕ, ನಡೆದ ಘಟನೆಯ ಗಂಭೀರತೆ ಅರಿತ ಶಿವಪ್ಪ ಕೂಡ ಬದುಕು ಅಂತ್ಯಗೊಳಿಸಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆಯ ಮಾಹಿತಿ ಗ್ರಾಮಸ್ಥರಿಗೆ ತಿಳಿಯುವಷ್ಟರಲ್ಲಿ ಎರಡೂ ಜೀವಗಳು ನಶಿಸಿಹೋಗಿವೆ.

ಪೊಲೀಸರ ಪರಿಶೀಲನೆ, ತನಿಖೆ ಆರಂಭ :

ಘಟನೆಯ ಮಾಹಿತಿ ದೊರಕಿದ ತಕ್ಷಣ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಸ್ಥಳೀಯರ ಹೇಳಿಕೆ :

ಸ್ಥಳೀಯರ ಪ್ರಕಾರ, ದಂಪತಿಯ ನಡುವೆ ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಗಳಿಗೆ ಜಗಳಗಳು ನಡೆಯುತ್ತಿತ್ತು. ತಾಯಿ ಸಾವಿನ ಬಳಿಕ ತವರು ಮನೆಗೆ ಹೋಗುವ ವಿಚಾರವೇ ದೊಡ್ಡ ವಿವಾದವಾಗಿ, ಈ ದುರಂತಕ್ಕೆ ಕಾರಣವಾಗಿದೆ.

ಇದನ್ನು ಓದಿ : ಅಂತರ್ಜಾತಿ ಪ್ರೀತಿಗಾಗಿ 19 ವರ್ಷದ ತಂಗಿಯ ಕೊಲೆ ಪ್ರಕರಣ.

ಈ ಘಟನೆ ಕೌಟುಂಬಿಕ ಕಲಹಗಳು ಸಮಯಕ್ಕೆ ನಿಯಂತ್ರಣ ತಪ್ಪಿದರೆ ಹೇಗೆ ಭೀಕರ ಪರಿಣಾಮ ಉಂಟುಮಾಡಬಹುದು ಎಂಬುದಕ್ಕೆ ನೋವಿನ ಉದಾಹರಣೆಯಾಗಿದೆ.


Disclaimer: ಈ ಸುದ್ದಿಯಲ್ಲಿರುವ ಮಾಹಿತಿ ಪೊಲೀಸ್ ಮೂಲಗಳು ಮತ್ತು ಸ್ಥಳೀಯ ವರದಿಗಳ ಆಧಾರವಾಗಿದೆ. ತನಿಖೆ ಮುಂದುವರಿದಿದ್ದು, ಮುಂದಿನ ಮಾಹಿತಿ ಲಭ್ಯವಾದಲ್ಲಿ ನವೀಕರಿಸಲಾಗುವುದು.

ಬೆಳಿಗ್ಗೆ ಮಾಡುವ ಈ ತಪ್ಪುಗಳಿಂದ ಅಕಾಲಿಕ ವಯಸ್ಸಾಗುತ್ತಿದೆಯೇ? ತಜ್ಞರ ಎಚ್ಚರಿಕೆ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ವಯಸ್ಸು ಹೆಚ್ಚಾಗುತ್ತಿದ್ದಂತೆ ಎಲ್ಲರೂ ಆರೋಗ್ಯವಾಗಿಯೂ, ಸಾಧ್ಯವಾದರೆ ಯೌವ್ವನದಿಂದಲೂ ಕಾಣಲು ಬಯಸುವುದು ಸಹಜ. ಸೌಂದರ್ಯ ಮತ್ತು ಚೈತನ್ಯವನ್ನು ಕಾಪಾಡಿಕೊಳ್ಳುವುದು ತಪ್ಪಲ್ಲ. ಆದರೆ, ದಿನನಿತ್ಯದ ಜೀವನಶೈಲಿಯಲ್ಲಿ ತಿಳಿಯದೆ ಮಾಡುವ ಕೆಲವು ಸಣ್ಣ ತಪ್ಪುಗಳು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ವಿಶೇಷವಾಗಿ ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಅಭ್ಯಾಸಗಳು ದಿನವಿಡೀ ದೇಹದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ದೇಹದ ಚೈತನ್ಯ, ಚರ್ಮದ ಕಾಂತಿ ಹಾಗೂ ಮನಸ್ಸಿನ ಸ್ಥಿತಿಯನ್ನೂ ಈ ಬೆಳಗಿನ ಕ್ರಮಗಳು ನಿರ್ಧರಿಸುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ.

ಉಪಹಾರ ಬಿಟ್ಟು ಬಿಡುವುದು ಅಪಾಯಕರ :

ಬಹುತೇಕ ಜನರು ಸಮಯದ ಅಭಾವ ಅಥವಾ ತೂಕ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಉಪಾಹಾರವನ್ನು ಬಿಡುತ್ತಾರೆ. ಆದರೆ ಪದೇಪದೇ ಬೆಳಗಿನ ಉಪಾಹಾರ ಬಿಟ್ಟು ಬಿಡುವುದು ದೇಹದಲ್ಲಿ ಕಾರ್ಟಿಸೋಲ್ ಎಂಬ ಒತ್ತಡ ಹಾರ್ಮೋನ್‌ನ ಮಟ್ಟವನ್ನು ಅಸಮತೋಲನಗೊಳಿಸುತ್ತದೆ.

ಇದರಿಂದ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಪರಿಣಾಮವಾಗಿ ಚರ್ಮದ ಆರೋಗ್ಯ ಹಾನಿಗೊಳಗಾಗುತ್ತದೆ ಮತ್ತು ವಯಸ್ಸಿನ ಗುರುತುಗಳು ಬೇಗನೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಎದ್ದ ತಕ್ಷಣ ಮೊಬೈಲ್ ಬಳಕೆ :

ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ಮೊಬೈಲ್ ಫೋನ್ ಪರಿಶೀಲಿಸುವ ಅಭ್ಯಾಸವು ಇಂದು ಸಾಮಾನ್ಯವಾಗಿದೆ. ಆದರೆ ತಜ್ಞರ ಪ್ರಕಾರ, ಪರದೆಗಳಿಂದ ಹೊರಬರುವ ನೀಲಿ ಬೆಳಕು ಆತಂಕ ಹೆಚ್ಚಿಸುವ ಹಾರ್ಮೋನುಗಳ ಸ್ರಾವವನ್ನು ಉತ್ತೇಜಿಸುತ್ತದೆ. ಇದರಿಂದ ಏಕಾಗ್ರತೆ ಕುಗ್ಗುತ್ತದೆ ಮತ್ತು ನಿದ್ರೆಯ ಗುಣಮಟ್ಟಕ್ಕೂ ಧಕ್ಕೆ ಉಂಟಾಗುತ್ತದೆ. ಈ ಅಭ್ಯಾಸ ಮುಂದುವರೆದರೆ, ಅಕಾಲಿಕ ವಯಸ್ಸಿನ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳಬಹುದು.

ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವನೆ :

ರಾತ್ರಿ 6–7 ಗಂಟೆಗಳ ನಿದ್ರೆಯ ನಂತರ ದೇಹ ಸ್ವಾಭಾವಿಕವಾಗಿ ನಿರ್ಜಲೀಕರಣಗೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಎದ್ದ ತಕ್ಷಣ ಕಾಫಿ ಕುಡಿಯುವುದರಿಂದ ದೇಹದ ನೀರಿನ ಪ್ರಮಾಣ ಇನ್ನಷ್ಟು ಕಡಿಮೆಯಾಗುತ್ತದೆ. ಇದು ದೇಹದ ಸ್ಥಿತಿಸ್ಥಾಪಕತ್ವವನ್ನು ಕುಗ್ಗಿಸಬಹುದು. ಪರಿಣಾಮವಾಗಿ ಚರ್ಮದ ಕಾಂತಿ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ವ್ಯಾಯಾಮ ಮತ್ತು ಸೂರ್ಯನ ಬೆಳಕಿನ ಕೊರತೆ :

ನಾಲ್ಕು ಗೋಡೆಗಳೊಳಗೆ ಮಾತ್ರ ದಿನವಿಡೀ ಇರುವವರು, ಶಾರೀರಿಕ ಚಟುವಟಿಕೆ ಮತ್ತು ಸೂರ್ಯನ ಬೆಳಕಿನಿಂದ ದೂರವಿರುವವರು ಅಕಾಲಿಕ ವಯಸ್ಸಾಗುವ ಅಪಾಯಕ್ಕೆ ಹೆಚ್ಚು ಒಳಗಾಗುತ್ತಾರೆ.

ಇಂತಹ ಜೀವನಶೈಲಿಯಿಂದ ಹಾರ್ಮೋನುಗಳ ಸಮತೋಲನ ಹದಗೆಡುತ್ತದೆ, ಮೂಳೆಗಳು ದುರ್ಬಲಗೊಳ್ಳುತ್ತವೆ ಹಾಗೂ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಇದರ ಪರಿಣಾಮವಾಗಿ ವೃದ್ಧಾಪ್ಯದ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುತ್ತವೆ.

ಒತ್ತಡದಿಂದ ದಿನ ಆರಂಭಿಸುವುದು :

ಬೆಳಿಗ್ಗೆಯನ್ನು ಆತುರ, ಒತ್ತಡ ಮತ್ತು ಚಿಂತೆಗಳಿಂದ ಆರಂಭಿಸುವವರು ದೇಹದಲ್ಲಿ ಉರಿಯೂತ ಹೆಚ್ಚಾಗುವ ಅಪಾಯವನ್ನು ಎದುರಿಸುತ್ತಾರೆ. ಇದು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನೂ ಹೆಚ್ಚಿಸಬಹುದು. ದೀರ್ಘಾವಧಿಯಲ್ಲಿ ಇದು ದೇಹದ ಆರೋಗ್ಯ ಮತ್ತು ಯೌವ್ವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದನ್ನು ಓದಿ : ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕರಗುತ್ತಾ? ವೈದ್ಯರು ಹೇಳೋ ಸತ್ಯವೇನು?

ತಜ್ಞರ ಸಲಹೆ :

ಬೆಳಿಗ್ಗೆಯನ್ನು ಶಾಂತವಾಗಿ ಆರಂಭಿಸುವುದು, ನೀರು ಕುಡಿಯುವುದು, ಸಮತೋಲನ ಆಹಾರ ಸೇವಿಸುವುದು, ಸ್ವಲ್ಪ ವ್ಯಾಯಾಮ ಅಥವಾ ನಡಿಗೆ ಮಾಡುವಂತಹ ಸರಳ ಅಭ್ಯಾಸಗಳು ದೇಹವನ್ನು ಆರೋಗ್ಯವಾಗಿರಿಸಲು ಸಹಕಾರಿಯಾಗುತ್ತವೆ. ಇವು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯಲು ಸಹ ನೆರವಾಗುತ್ತವೆ ಎಂದು ತಜ್ಞರು ಸಲಹೆ ನೀಡುತ್ತಾರೆ.


Disclaimer : ಈ ಲೇಖನವು ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.