Home Blog Page 11

ಗೇಟ್ ಮುಚ್ಚುವ ಮುನ್ನ ದಾಟಲು ಯತ್ನಿಸಿದ ಟ್ರಕ್‌ಗೆ ರೈಲು ಡಿಕ್ಕಿ; ವೀಡಿಯೋ ವೈರಲ್.

0

ಜನಸ್ಪಂದನ ನ್ಯೂಸ್, ಜಾರ್ಖಂಡ್ : ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಗುರುವಾರ ಭಾರೀ ರೈಲು ಅಪಘಾತ ಸಂಭವಿಸಿದ್ದು, ರೈಲ್ವೆ ಕ್ರಾಸಿಂಗ್ ದಾಟಲು ಯತ್ನಿಸಿದ ಟ್ರಕ್‌ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಟ್ರಕ್ ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆ ರೋಹಿಣಿ–ನವಾಡಿಹ್ ರೈಲ್ವೆ ಕ್ರಾಸಿಂಗ್ ಬಳಿ ನಡೆದಿದ್ದು, ಜಸಿದಿಹ್‌ನಿಂದ ಅಸನ್ಸೋಲ್‌ಗೆ ತೆರಳುತ್ತಿದ್ದ ಗೊಂಡಾ–ಅಸನ್ಸೋಲ್ ಪ್ಯಾಸೆಂಜರ್ ರೈಲು ಈ ವೇಳೆ ಕ್ರಾಸಿಂಗ್ ಮೂಲಕ ಹಾದು ಹೋಗುತ್ತಿತ್ತು.

ಟ್ರಕ್‌ಗೆ ರೈಲು ಡಿಕ್ಕಿ ವಿಡಿಯೋ :

ಹೇಗೆ ಅಪಘಾತ ಸಂಭವಿಸಿತು?

ಮಾಹಿತಿಯಂತೆ, ರೈಲು ಬರುತ್ತಿರುವ ಸೂಚನೆ ಸಿಕ್ಕ ಬಳಿಕ ರೈಲ್ವೆ ಗೇಟ್ ಮುಚ್ಚಲಾಗುತ್ತಿತ್ತು. ಆದರೆ ಕೆಲ ವಾಹನ ಸವಾರರು ಆತುರದಿಂದ ಗೇಟ್ ದಾಟಲು ಯತ್ನಿಸಿದ್ದಾರೆ. ಇದೇ ವೇಳೆ ಟ್ರಕ್ ಕೂಡ ಕ್ರಾಸಿಂಗ್ ದಾಟಲು ಪ್ರಯತ್ನಿಸಿದೆ.

ರೈಲು ಸಮೀಪಿಸುತ್ತಿರುವುದನ್ನು ಗಮನಿಸಿದ ಟ್ರಕ್ ಚಾಲಕ ಹಳಿ ದಾಟಲು ಮುಂದಾದರೂ, ಅಷ್ಟರಲ್ಲಿ ರೈಲು ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ಟ್ರಕ್ ಮುಂದಕ್ಕೆ ತಳ್ಳಲ್ಪಟ್ಟು ಅಲ್ಲಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಚಾಲಕನ ನಿರ್ಲಕ್ಷ್ಯ – ತಪ್ಪಿದ ದೊಡ್ಡ ಅನಾಹುತ :

ಅಪಘಾತದ ವೇಳೆ ಟ್ರಕ್ ಚಾಲಕ ಸಮಯಕ್ಕೆ ಮುನ್ನ ವಾಹನದಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳದಲ್ಲಿದ್ದ ಬೈಕ್ ಸವಾರರು ಕೂಡ ತಮ್ಮ ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯವನ್ನು ಅಲ್ಲಿದ್ದ ಜನರು ಮೊಬೈಲ್‌ನಲ್ಲಿ ದಾಖಲಿಸಿದ್ದು, ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಾಥಮಿಕ ತನಿಖೆಯಲ್ಲಿ ಟ್ರಕ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಟ್ರಕ್‌ಗೆ ರೈಲು ಡಿಕ್ಕಿ
ಟ್ರಕ್‌ಗೆ ರೈಲು ಡಿಕ್ಕಿ

ರೈಲು ಸಂಚಾರ ಸ್ಥಗಿತ :

ಅಪಘಾತದ ಪರಿಣಾಮವಾಗಿ ದಿಯೋಘರ್–ಗಿರಿಧಿ ಮುಖ್ಯ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ. ಜಸಿದಿಹ್–ಅಸನ್ಸೋಲ್ ಮಾರ್ಗದಲ್ಲಿ ಸುಮಾರು 2–3 ಗಂಟೆಗಳ ಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು. ರೈಲು ಮತ್ತು ಟ್ರಕ್ ಹಳಿಗಳ ಮೇಲೆ ನಿಂತಿದ್ದ ಹಿನ್ನಲೆಯಲ್ಲಿ ಸಂಚಾರ ಪುನರ್‌ಸ್ಥಾಪನೆಗೆ ವಿಳಂಬವಾತೆಂದು ಹೇಳಲಾಗಿದೆ.

ರೈಲಿನ ಲೋಕೋಪೈಲೆಟ್ ಸಮಯಕ್ಕೆ ಸರಿಯಾಗಿ ವೇಗ ಕಡಿಮೆ ಮಾಡಿದ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ಚರಿಕೆ ಸಂದೇಶ :

ರೈಲ್ವೆ ಕ್ರಾಸಿಂಗ್ ಬಳಿ ವಾಹನ ಚಲಾಯಿಸುವಾಗ,

👉 ಗೇಟ್ ಮುಚ್ಚುವ ಸೂಚನೆ ಪಾಲಿಸಬೇಕು.

👉 ಆತುರದಲ್ಲಿ ಹಳಿ ದಾಟುವ ಪ್ರಯತ್ನ ಮಾಡಬಾರದು.

👉 ಸ್ವಲ್ಪ ಅಜಾಗ್ರತೆ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


Disclaimer: ಈ ವರದಿ ಪ್ರಾಥಮಿಕ ಪೊಲೀಸ್ ಮಾಹಿತಿ ಹಾಗೂ ಸಾರ್ವಜನಿಕ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ತನಿಖೆ ಮುಂದುವರಿದಿರುವುದರಿಂದ ಮಾಹಿತಿಯಲ್ಲಿ ಬದಲಾವಣೆ ಸಾಧ್ಯವಿದೆ.

ಶಾಲೆಗೆ ಹೋಗಲು ಹಠ ಹಿಡಿದ ಮಗ: ಪಟ್ಟು ಹಿಡಿದ ತಾಯಿ ; ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್, ಡೆಸ್ಕ್‌ : ಮಕ್ಕಳು ಶಾಲೆಗೆ ಹೋಗಲು ಹಠ ಹಿಡಿಯುವುದು ಸಾಮಾನ್ಯ ಸಂಗತಿ. ಆದರೆ ಕೆಲವೊಮ್ಮೆ ಪೋಷಕರು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದೇ ಹಿನ್ನೆಲೆಯಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಲವರಿಗೆ ತಮ್ಮ ಬಾಲ್ಯವನ್ನು ನೆನಪಿಸುವಂತೆ ಮಾಡಿದೆ.

ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದ ಪುಟ್ಟ ಬಾಲಕನನ್ನು ತಾಯಿ ಪಟ್ಟು ಹಿಡಿದು ಶಾಲೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.

ಈ ದೃಶ್ಯವನ್ನು ‘Mariyam_MBD’ ಎಂಬ ಎಕ್ಸ್ (Twitter) ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ತಾಯಿ ಅನಕ್ಷರಸ್ಥಳಾಗಿದ್ದರೂ ತನ್ನ ಮಗನಿಗೆ ಶಿಕ್ಷಣ ಕೊಡಬೇಕು ಎಂಬ ಬಯಕೆ ಇರುತ್ತದೆ” ಎಂಬ ಶೀರ್ಷಿಕೆ ನೀಡಲಾಗಿದೆ.

ಹಠ ಹಿಡಿದ ಮಗನ ವಿಡಿಯೋ :

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಪುಟ್ಟ ಬಾಲಕ ಶಾಲೆಗೆ ಹೋಗಲು ನಿರಾಕರಿಸುತ್ತಿರುವುದು ಕಾಣುತ್ತದೆ. ತಾಯಿ ಒಂದು ಕೈಯಲ್ಲಿ ಬ್ಯಾಗ್ ಹಿಡಿದು, ಮತ್ತೊಂದು ಕೈಯಲ್ಲಿ ಮಗನನ್ನು ಹಿಡಿದು ಶಾಲೆ ಕಡೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಗಮನ ಸೆಳೆಯುತ್ತದೆ.

ಮಧ್ಯದಲ್ಲಿ ಬಾಲಕ ಮತ್ತೆ ಹಠ ಹಿಡಿದಾಗ ತಾಯಿ ಕಠಿಣವಾಗಿ ಪ್ರತಿಕ್ರಿಯಿಸುವುದು ಕಂಡುಬರುತ್ತದೆ. ಅದೇ ಸಮಯದಲ್ಲಿ ಅಲ್ಲೇ ಇದ್ದ ಮತ್ತೊಂದು ಪುಟ್ಟ ಮಗು ತಾಯಿಯ ಕೈಯಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೆಗಲಿಗೇರಿಸಿಕೊಂಡಿರುವ ದೃಶ್ಯವೂ ಕಾಣಿಸುತ್ತದೆ.

ಈ ದೃಶ್ಯಗಳನ್ನು ನೋಡಿದ ಹಲವರು, “ನಮ್ಮ ಬಾಲ್ಯವೂ ಹೀಗೆಯೇ ಇತ್ತು” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋ ಈಗಾಗಲೇ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

  • 🔹 ಒಬ್ಬ ಬಳಕೆದಾರ: “ಈ ತಾಯಿಗೆ ನನ್ನ ನಮನಗಳು”.
  • 🔹 ಮತ್ತೊಬ್ಬರು: “ನಮ್ಮ ತಾಯಿಯೂ ಹೀಗೆಯೇ ನಮ್ಮನ್ನು ಶಾಲೆಗೆ ಕಳಿಸುತ್ತಿದ್ದರು”.
  • 🔹 ಇನ್ನೊಬ್ಬರು: “ಇದು ಪ್ರೀತಿಯ ಕಠಿಣ ರೂಪ” ಎಂದು ಕಾಮೆಂಟ್ ಮಾಡಿದ್ದಾರೆ.

ಕೆಲವರು ಇದನ್ನು ಮಕ್ಕಳ ಶಿಕ್ಷಣದ ಮಹತ್ವದ ಉದಾಹರಣೆ ಎಂದು ಮೆಚ್ಚಿಕೊಂಡರೆ, ಇನ್ನೂ ಕೆಲವರು ಮಕ್ಕಳೊಂದಿಗೆ ಮೃದುವಾಗಿ ವರ್ತಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ನಡು ರಸ್ತೆಯಲ್ಲಿ ಸ್ಕೂಟಿ ಚಾಲನೆ ವೇಳೆ ಪತಿಯ ಮೇಲೆ ಪತ್ನಿಯ ಹಲ್ಲೆ; ವಿಡಿಯೋ ವೈರಲ್.

ಸಾಮಾಜಿಕ ಸಂದೇಶ :

ಈ ವಿಡಿಯೋ ಮಕ್ಕಳ ಶಿಕ್ಷಣದ ಮಹತ್ವವನ್ನು ನೆನಪಿಸುವುದರ ಜೊತೆಗೆ, ಪೋಷಕರ ಹೊಣೆಗಾರಿಕೆ ಮತ್ತು ಮಕ್ಕಳ ಮನಸ್ಥಿತಿ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಶಿಕ್ಷಣಕ್ಕಾಗಿ ಪೋಷಕರು ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ಕೆಲವೊಮ್ಮೆ ಮಕ್ಕಳ ಭವಿಷ್ಯಕ್ಕೆ ದಾರಿಯಾಗುತ್ತವೆ ಎಂಬ ಸಂದೇಶವೂ ಇದರೊಳಗೆ ಅಡಗಿದೆ.


Disclaimer: ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಸಾರ್ವಜನಿಕ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಮಕ್ಕಳ ಮೇಲಿನ ಯಾವುದೇ ರೀತಿಯ ಹಿಂಸೆ ಅಥವಾ ದೌರ್ಜನ್ಯವನ್ನು ನಾವು ಸಮರ್ಥಿಸುವುದಿಲ್ಲ.

ಕಣ್ಣುಗಳಲ್ಲಿಯೇ ಕಾಣಿಸಿಕೊಳ್ಳುತ್ತದೆ ಕಿಡ್ನಿ ಹಾನಿ ; ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಬಹುತೇಕರು ಮೂತ್ರದ ಬಣ್ಣದಲ್ಲಾಗುವ ಬದಲಾವಣೆಗಳಿಂದ ಮಾತ್ರ ಮೂತ್ರಪಿಂಡ (Kidney) ದ ಸಮಸ್ಯೆಯನ್ನು ಗುರುತಿಸಬಹುದು ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ಸಂಪೂರ್ಣ ಸತ್ಯವಲ್ಲ; ಕಿಡ್ನಿ ಹಾನಿಯ ಲಕ್ಷಣಗಳು ಇತರೆ ರೀತಿಯಲ್ಲಿಯೂ ಕಾಣಿಸಿಕೊಳ್ಳಬಹುದು.

ಕಳಪೆ ಜೀವನಶೈಲಿ ಕಿಡ್ನಿಗೆ ಎಷ್ಟು ಅಪಾಯಕಾರಿ?

ಮೂತ್ರಪಿಂಡಗಳು (ಕಿಡ್ನಿ) ನಮ್ಮ ದೇಹದಿಂದ ತ್ಯಾಜ್ಯಗಳನ್ನು ಹೊರಹಾಕುವುದು, ಎಲೆಕ್ಟ್ರೋಲೈಟ್ ಸಮತೋಲನ ಕಾಯ್ದುಕೊಳ್ಳುವುದು ಮತ್ತು ರಕ್ತದೊತ್ತಡ ನಿಯಂತ್ರಿಸುವಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಆದರೆ ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಅತಿಯಾದ ಉಪ್ಪು ಸೇವನೆ ಮತ್ತು ಅಸಮರ್ಪಕ ಜೀವನಶೈಲಿ ನಿಧಾನವಾಗಿ ಕಿಡ್ನಿಗೆ ಹಾನಿ ಉಂಟುಮಾಡಬಹುದು.

ಬಹುತೇಕ ಜನರು ಮೂತ್ರದ ಬಣ್ಣ ಅಥವಾ ಸಮಸ್ಯೆ ಕಂಡಾಗ ಮಾತ್ರ ಕಿಡ್ನಿ ಸಮಸ್ಯೆಯನ್ನು ಅನುಮಾನಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಮೂತ್ರಪಿಂಡದ ಹಾನಿ (Kidney Damage) ಯ ಆರಂಭಿಕ ಲಕ್ಷಣಗಳು ಕಣ್ಣುಗಳಲ್ಲಿಯೇ ಕಾಣಿಸಿಕೊಳ್ಳಬಹುದು.

ಈ ಆರೋಗ್ಯ ಸುದ್ದಿ ಓದಿ : ಮೊಟ್ಟೆಗಳಲ್ಲಿ ʼಕ್ಯಾನ್ಸರ್ ಕಾರಕʼ ಅಂಶ ಅನುಮಾನ ; ರಾಜ್ಯಾದ್ಯಂತ ಆರೋಗ್ಯ ಅಲರ್ಟ್.

ಕಣ್ಣುಗಳಲ್ಲಿ ಕಾಣಿಸುವ ಕಿಡ್ನಿ ಹಾನಿಯ ಲಕ್ಷಣಗಳು :

1. ಕಣ್ಣುಗಳಲ್ಲಿ ಶುಷ್ಕತೆ ಮತ್ತು ತುರಿಕೆ :

ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದಾಗ ದೇಹದಲ್ಲಿನ ಖನಿಜ ಸಮತೋಲನ ವ್ಯತ್ಯಯಗೊಳ್ಳುತ್ತದೆ. ಇದರಿಂದ ಕಣ್ಣಿನ ತೇವಾಂಶ ಕಡಿಮೆಯಾಗುತ್ತದೆ. ಪರಿಣಾಮವಾಗಿ,

  • ಕಣ್ಣು ಒಣಗುವುದು.
  • ನಿರಂತರ ತುರಿಕೆ.
  • ಸುಡುವ ಅನುಭವ ಕಾಣಿಸಿಕೊಳ್ಳಬಹುದು.

2. ಕಣ್ಣು ಕೆಂಪಾಗುವುದು :

ಮೂತ್ರಪಿಂಡದ ಸಮಸ್ಯೆಯಿಂದ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಅಸಮತೋಲನ ಉಂಟಾಗುತ್ತದೆ. ಇದು ಕಣ್ಣಿನ ಬಿಳಿ ಭಾಗದಲ್ಲಿ ಜಮಾವಣೆಗೊಂಡು ಕೆಂಪು ಬಣ್ಣ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಬಹುತೇಕರು ಇದನ್ನು ಸಾಮಾನ್ಯ ಅಲರ್ಜಿ ಎಂದು ನಿರ್ಲಕ್ಷಿಸುತ್ತಾರೆ.

3. ಮಸುಕಾದ ದೃಷ್ಟಿ :

  • ಮಧುಮೇಹ ಹಾಗೂ ಅಧಿಕ ರಕ್ತದೊತ್ತಡವು ಕಿಡ್ನಿ ಹಾನಿಗೆ ಪ್ರಮುಖ ಕಾರಣಗಳು. ಇವು ಕಣ್ಣಿನ ರೆಟಿನಾಗೆ ಹಾನಿ ಉಂಟುಮಾಡುತ್ತವೆ.
  • ಮೂತ್ರಪಿಂಡ ಸರಿಯಾಗಿ ಕೆಲಸ ಮಾಡದಾಗ ದೇಹದಲ್ಲಿ ದ್ರವ ಸಂಗ್ರಹವಾಗುತ್ತದೆ. ಇದರಿಂದ ಕಣ್ಣಿನ ಲೆನ್ಸ್ ಮೇಲೆ ಪರಿಣಾಮ ಬಿದ್ದು ದೃಷ್ಟಿ ಮಸುಕಾಗಬಹುದು.

4. ಬಾಹ್ಯ ದೃಷ್ಟಿ ಕಡಿಮೆಯಾಗುವುದು :

ಕಿಡ್ನಿ ಸಮಸ್ಯೆಯಿಂದ ಉಂಟಾಗುವ ಹೆಚ್ಚಿದ ರಕ್ತದೊತ್ತಡವು ಕಣ್ಣುಗಳ ನರಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ:

  • ಪಾರ್ಶ್ವ ದೃಷ್ಟಿ ಕಡಿಮೆಯಾಗುವುದು.
  • ಗ್ಲೂಕೋಮಾ ಅಪಾಯ ಹೆಚ್ಚಾಗುವುದು ಎಂಬ ಸಮಸ್ಯೆಗಳು ಕಾಣಿಸಬಹುದು.

5. ಕಣ್ಣುಗಳಲ್ಲಿ ಒತ್ತಡ ಅಥವಾ ನೋವು :

ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ದ್ರವವನ್ನು ಹೊರಹಾಕಲು ವಿಫಲವಾದಾಗ, ದ್ರವದ ಒತ್ತಡ ಕಣ್ಣಿನೊಳಗೂ ಹೆಚ್ಚಾಗುತ್ತದೆ. ಇದರಿಂದ:

  • ಕಣ್ಣು ಭಾರವಾದಂತೆ ಅನಿಸುವುದು.
  • ಸೌಮ್ಯ ನೋವು.
  • ಒತ್ತಡದ ಭಾವನೆ ಕಾಣಿಸಿಕೊಳ್ಳಬಹುದು.

ಇದನ್ನು ಓದಿ : ಆರೋಗ್ಯ, ಚರ್ಮ ಹಾಗೂ ಕೂದಲಿಗೆ ಟೊಮೆಟೊದ ಅಚ್ಚರಿ ಪ್ರಯೋಜನಗಳು.

ಆರೋಗ್ಯ ತಜ್ಞರ ಸಲಹೆ :

  • ಕಣ್ಣುಗಳಲ್ಲಿ ಈ ರೀತಿಯ ಬದಲಾವಣೆಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ.
  • ತಕ್ಷಣ ವೈದ್ಯರನ್ನು ಸಂಪರ್ಕಿಸಿ.
  • ರಕ್ತ ಪರೀಕ್ಷೆ ಹಾಗೂ ಕಿಡ್ನಿ ಕಾರ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
  • ಹೆಚ್ಚು ನೀರು ಕುಡಿಯುವುದು, ಉಪ್ಪು ಕಡಿಮೆ ಸೇವಿಸುವುದು ಮತ್ತು ನಿಯಮಿತ ಆರೋಗ್ಯ ತಪಾಸಣೆ ಅಗತ್ಯ.

Disclaimer: ಈ ಲೇಖನವು ಸಾರ್ವಜನಿಕ ಆರೋಗ್ಯ ಮಾಹಿತಿ ಹಾಗೂ ತಜ್ಞರ ಸಲಹೆಗಳ ಆಧಾರದ ಮೇಲೆ ರಚಿಸಲಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅನಿವಾರ್ಯ.

ಧಾರವಾಡದಲ್ಲಿ ಯುವತಿಯ ಭೀಕರ ಹತ್ಯೆ ಮಾಡಿ ಶವವನ್ನು ಬಿಸಾಡಿದ ದುಷ್ಕರ್ಮಿಗಳು.

0

ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ಯುವತಿಯೊಬ್ಬರನ್ನು ಭೀಕರ ಹತ್ಯೆ ಮಾಡಿ, ಶವವನ್ನು ಬೇರೆ ಸ್ಥಳಕ್ಕೆ ತಂದು ಎಸೆದಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ 19 ವರ್ಷದ ಝಕಿಯಾ ಎಂಬ ಯುವತಿ ಮೃತಪಟ್ಟಿರುವುದು ದೃಢಪಟ್ಟಿದೆ.

ಮೃತ ಯುವತಿ ಧಾರವಾಡ ನಗರದ ಗಾಂಧಿ ಚೌಕ್ ಪ್ರದೇಶದ ನಿವಾಸಿ ಆಗಿದ್ದು, ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗ ಹುಡುಕುತ್ತಿದ್ದಳು ಎಂದು ತಿಳಿದುಬಂದಿದೆ.

ಘಟನೆ ಹೇಗೆ ನಡೆಯಿತು?

ಮಂಗಳವಾರ ಸಂಜೆ ಝಕಿಯಾ “ಲ್ಯಾಬ್‌ಗೆ ಹೋಗಿ ಬರುತ್ತೇನೆ” ಎಂದು ಮನೆಯಿಂದ ಹೊರಟಿದ್ದಳು. ಆದರೆ ರಾತ್ರಿ ಆದರೂ ಮನೆಗೆ ಹಿಂದಿರುಗದ ಕಾರಣ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ಆರಂಭಿಸಿದ್ದರು.

ಇಂದು ಮುಂಜಾನೆ ಮನಸೂರು ರಸ್ತೆಯಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸೇರಿದ ವಿನಯ್ ಡೈರಿ ಸಮೀಪ ಯುವತಿಯ ಶವ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಯುವತಿಯನ್ನು ಬೇರೆಡೆ ಬರ್ಬರವಾಗಿ ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಇಲ್ಲಿ ತಂದು ಬಿಸಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸ್ ತನಿಖೆ ಆರಂಭ :

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವಿದ್ಯಾಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಯುವತಿಯ ಮೊಬೈಲ್ ಕರೆ ವಿವರಗಳು ಹಾಗೂ ಕೊನೆಯಾಗಿ ಸಂಪರ್ಕಿಸಿದ ವ್ಯಕ್ತಿಗಳ ಮಾಹಿತಿ ಆಧರಿಸಿ ತನಿಖೆ ಚುರುಕುಗೊಂಡಿದೆ.

ಇದನ್ನು ಓದಿ : ಧಾರವಾಡ : ಕ್ಷುಲ್ಲಕ ಜಗಳಕ್ಕೆ ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ.

ಭೀಕರ ಹತ್ಯೆ ; ಕುಟುಂಬಸ್ಥರ ಆಕ್ರಂದನ :

ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮನಕಲಕುವಂತಿತ್ತು. “ಕೆಲಸ ಹುಡುಕುತ್ತಿದ್ದ ಮಗಳಿಗೆ ಇಂತಹ ದುರಂತ ಆಗಬಾರದಿತ್ತು” ಎಂದು ಕಣ್ಣೀರಿಟ್ಟ ಕುಟುಂಬಸ್ಥರು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.


Disclaimer: ಈ ವರದಿ ಪೊಲೀಸ್ ಮೂಲಗಳು ಮತ್ತು ಲಭ್ಯ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿದೆ. ತನಿಖೆ ಮುಂದುವರಿದಿರುವ ಕಾರಣ ಹೆಚ್ಚಿನ ಮಾಹಿತಿ ಬಳಿಕ ಲಭ್ಯವಾಗಲಿದೆ.

ರೈಲಿನ ಶೌಚಾಲಯದಲ್ಲಿ ಯುವಕ–ಯುವತಿ 2 ಗಂಟೆ ಲಾಕ್! ಪ್ಯಾಸೆಂಜರ್‌ಗಳು ಪರದಾಟ.

0

ಜನಸ್ಪಂದನ ನ್ಯೂಸ್, ನವದೆಹಲಿ : ರೈಲಿನ ಶೌಚಾಲಯದಲ್ಲಿ ಯುವಕ–ಯುವತಿ ಸುಮಾರು 2 ಗಂಟೆಗಳ ಕಾಳ ಲಾಕ್ ಮಾಡಿಕೊಂಡ ಹಿನ್ನಲೆಯಲ್ಲಿ ಪ್ಯಾಸೆಂಜರ್‌ಗಳು ಪರದಾಡಿದ ಘಟನೆಯೊಂದು ನಡೆದಿರುವುದು ವರದಿಯಾಗಿದೆ.

ರೈಲಿನೊಳಗಿನ ಪ್ರಯಾಣಿಕರ ಸುರಕ್ಷತೆ ಮತ್ತು ಶಿಸ್ತು ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗುವಂತಹ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಯುವಕ ಮತ್ತು ಯುವತಿ ಒಟ್ಟಿಗೆ ರೈಲಿನ ಸ್ನಾನಗೃಹದೊಳಗೆ ಲಾಕ್ ಮಾಡಿಕೊಂಡು ಸುಮಾರು ಎರಡು ಗಂಟೆಗಳ ಕಾಲ ಒಳಗೇ ಇದ್ದ ಘಟನೆ ಬೆಳಕಿಗೆ ಬಂದಿದೆ.

ಈ ಅವಧಿಯಲ್ಲಿ ಶೌಚಾಲಯ ಬಳಸಬೇಕಾದ ಅನೇಕ ಪ್ರಯಾಣಿಕರು ತೀವ್ರ ಅಸೌಕರ್ಯ ಅನುಭವಿಸಬೇಕಾಯಿತು. ಬಾಗಿಲು ತೆರೆಯದ ಕಾರಣ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದು, ನಂತರ ಈ ವಿಷಯವನ್ನು ರೈಲ್ವೆ ಸಿಬ್ಬಂದಿಯ ಗಮನಕ್ಕೆ ತರಲಾಯಿತು ಎಂದು ತಿಳಿದುಬಂದಿದೆ.

ಯುವಕ–ಯುವತಿ 2 ಗಂಟೆ ಲಾಕ್ ; ಪ್ರಯಾಣಿಕರ ಪರದಾಟ :

ಸ್ನಾನಗೃಹ ದೀರ್ಘಕಾಲ ಮುಚ್ಚಿರುವುದರಿಂದ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚು ತೊಂದರೆ ಅನುಭವಿಸಿದ್ದಾರೆ. ಹಲವು ಬಾರಿ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ದೊರೆಯದ ಕಾರಣ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

ಅಂತಿಮವಾಗಿ ಬಾಗಿಲು ತೆರೆದಾಗ ಯುವಕ ಹಾಗೂ ಯುವತಿ ಹೊರಬಂದಿದ್ದು, ಈ ವೇಳೆ ಅವರ ವರ್ತನೆ ಪ್ರಯಾಣಿಕರನ್ನು ಮತ್ತಷ್ಟು ಅಚ್ಚರಿಗೊಳಿಸಿತು ಎನ್ನಲಾಗಿದೆ.

ವೈರಲ್ ಆದ ವಿಡಿಯೋ :

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ವಿಡಿಯೋದಲ್ಲಿ ಯುವತಿ,
“ನಾನು ಏನು ಬೇಕಾದರೂ ಮಾಡಬಹುದು, ಅದು ನನ್ನ ಇಚ್ಛೆ” ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಬರುತ್ತದೆ.

ವಿಡಿಯೋ ವೈರಲ್ ಆಗುತ್ತಿದೆ ಎಂದು ತಿಳಿಸಿದಾಗ, “ಅದರಿಂದ ನನಗೆ ಏನು?” ಎಂದು ಪ್ರತಿಕ್ರಿಯಿಸಿದಂತೆಯೂ ಕಾಣುತ್ತದೆ.

ಸಾರ್ವಜನಿಕರಿಂದ ಆಕ್ರೋಶ :

ಈ ಘಟನೆ ಬೆಳಕಿಗೆ ಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಇದನ್ನು

  • ಸಾರ್ವಜನಿಕ ಶಿಸ್ತು ಉಲ್ಲಂಘನೆ.
  • ರೈಲು ಪ್ರಯಾಣಿಕರ ಹಕ್ಕುಗಳಿಗೆ ಧಕ್ಕೆಯಾದ ಘಟನೆ.
  • ಇಂತಹ ವರ್ತನೆಗೆ ಕಠಿಣ ಕ್ರಮ ಅಗತ್ಯ ಎಂದು ಖಂಡಿಸಿದ್ದಾರೆ.

ಬಳಕೆದಾರರೊಬ್ಬರು,

  • “ಇದು ರೈಲು, ಹೋಟೆಲ್ ಕೋಣೆ ಅಲ್ಲ. ಇತರ ಪ್ರಯಾಣಿಕರ ಬಗ್ಗೆ ಕನಿಷ್ಠ ಗೌರವ ಇರಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು,
  • “ಇಂತಹ ವರ್ತನೆಗಳನ್ನು ಸಹಿಸಬಾರದು. ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು”
    ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ : ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ ಲವರ್ ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

ರೈಲ್ವೆ ಇಲಾಖೆಯ ಮುಂದಿನ ಕ್ರಮ?

ಈ ಪ್ರಕರಣದ ಬಗ್ಗೆ ರೈಲ್ವೆ ಇಲಾಖೆ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣ ವ್ಯಾಪಕ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.


Disclaimer: ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ/ಪೋಸ್ಟ್ ಆಧಾರಿತವಾಗಿದೆ. ಇದರ ಸತ್ಯಾಸತ್ಯತೆಯನ್ನು Janaspandhan News ದೃಢೀಕರಿಸುವುದಿಲ್ಲ.

ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ಸ್ಥಳದಲ್ಲೇ ಮೃತ್ಯು.

0

ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ಯಾಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಧ್ರಪ್ರದೇಶ ಮೂಲದ ಟಂ ಟಂ ವಾಹನ ಹಾಗೂ ಬುಲೆರೋ ಪಿಕಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಅಪಘಾತದ ತೀವ್ರತೆಯಿಂದಾಗಿ ವಾಹನಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಕೆಲವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ, ಕೆಲವು ಗಾಯಾಳುಗಳ ಸ್ಥಿತಿ ಇನ್ನೂ ಗಂಭೀರವಾಗಿದೆ.

ಈವರೆಗೆ ಮೃತಪಟ್ಟವರ ಮತ್ತು ಗಾಯಾಳುಗಳ ಸಂಪೂರ್ಣ ವಿವರಗಳು ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಪಘಾತದ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಅಪಘಾತ ಸುದ್ದಿ ಓದಿ : ಭೀಕರ ಅಪಘಾತ: ಖಾಸಗಿ ಬಸ್–ಲಾರಿ ಡಿಕ್ಕಿ, 9 ಜನ ಸಜೀವ ದಹನ.

ಎರಡು ಗೂಡ್ಸ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ಮೃತರದವರನ್ನು
▪️ ಸಣ್ಣ ಯಲ್ಲಪ್ಪ (45)
▪️ ಹರಿ (25)
▪️ ರಂಗನಾಥ (12)
▪️ ಬಸವರಾಜ್ (40)
▪️ ಟಾಟಾ ಏಸ್ ಚಾಲಕ ಎಂದು ಗುರುತಿಸಲಾಗಿದೆ. ಎಲ್ಲರೂ ಆಂಧ್ರಪ್ರದೇಶ ಮೂಲದವರಾಗಿದ್ದಾರೆ ಎನ್ನಲಾಗಿದೆ.


ಮತ್ತೊಂದು ಭೀಕರ ಅಪಘಾತ – ವೇಗವೇ ಪ್ರಾಣಹಂತಕ!

ಇದೇ ವೇಳೆ, ರಾಜಸ್ಥಾನದ ಉದಯಪುರದಲ್ಲಿ ನಡೆದ ಮತ್ತೊಂದು ಭೀಕರ ರಸ್ತೆ ಅಪಘಾತ ಕೂಡ ದೇಶಾದ್ಯಂತ ಆತಂಕ ಮೂಡಿಸಿದೆ. ಜನವರಿ 17ರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ, ಆರು ಮಂದಿ ಯುವಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ.

ಈ ದುರ್ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ವೇಳೆ ಕಾರು 140 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದು, ಚಾಲಕನ ಕೈಯಲ್ಲಿ ಸಿಗರೇಟ್ ಮತ್ತು ಜೋರಾಗಿ ಮ್ಯೂಸಿಕ್ ಹಾಕಿಕೊಂಡಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ರಸ್ತೆ ಅಪಘಾತ ವಿಡಿಯೋ :

ವಿಡಿಯೋದಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವಕ ಚಾಲಕನಿಗೆ ನಿಧಾನವಾಗಿ ಚಾಲನೆ ಮಾಡಲು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಬರುತ್ತದೆ. ಆದರೆ ಕೆಲವೇ ಕ್ಷಣಗಳಲ್ಲಿ ಅಪಘಾತ ಸಂಭವಿಸಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನು ಓದಿ : ತುಮಕೂರು ಬಳಿ ಭೀಕರ ಅಪಘಾತ: ಲಾರಿಗೆ ಕ್ರೂಸರ್ ಡಿಕ್ಕಿ, 4 ಅಯ್ಯಪ್ಪ ಮಾಲಾಧಾರಿಗಳು ಮೃತ್ಯು


🚦 ಎಚ್ಚರಿಕೆ ಸಂದೇಶ :

  • 👉 ಅತಿವೇಗವೇ ಅಪಘಾತಗಳಿಗೆ ಪ್ರಮುಖ ಕಾರಣ.
  • 👉 ವಾಹನ ಚಾಲನೆ ವೇಳೆ ಮದ್ಯಪಾನ, ಮೊಬೈಲ್ ಬಳಕೆ ಅಪಾಯಕಾರಿ.
  • 👉 ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ – ಸುರಕ್ಷಿತ ಚಾಲನೆ ಅತಿ ಮುಖ್ಯ.

Disclaimer: ಈ ವರದಿಯಲ್ಲಿನ ಮಾಹಿತಿ ಸಾರ್ವಜನಿಕ ಮೂಲಗಳು ಮತ್ತು ಪ್ರಾಥಮಿಕ ವರದಿಗಳ ಆಧಾರದ ಮೇಲೆ ನೀಡಲಾಗಿದೆ. ಹೆಚ್ಚಿನ ವಿವರಗಳು ಲಭ್ಯವಾದ ನಂತರ ಸುದ್ದಿಯಲ್ಲಿ ಬದಲಾವಣೆ ಸಾಧ್ಯ. ಯಾವುದೇ ತಪ್ಪು ಮಾಹಿತಿಗೆ ನಮ್ಮ ನ್ಯೂಸ್‌ ವೆಬ್‌ಸೈಟ್ ಜವಾಬ್ದಾರಿಯಿಲ್ಲ.

ರಕ್ತದ ಸಕ್ಕರೆ ನಿಯಂತ್ರಣಕ್ಕೆ ಊಟದ ನಂತರ 10 ನಿಮಿಷ ನಡಿಗೆ ಎಷ್ಟು ಪರಿಣಾಮಕಾರಿ?

0

ಜನಸ್ಫಂದನ ನ್ಯೂಸ್‌, ಆರೋಗ್ಯ : ರಕ್ತದಲ್ಲಿನ ಸಕ್ಕರೆ (Blood Sugar) ಮಟ್ಟವನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಡಯಟ್, ಕ್ಯಾಲೊರಿ ಎಣಿಕೆ ಅಥವಾ ಕಠಿಣ ವ್ಯಾಯಾಮ ಅಗತ್ಯವೆಂಬ ಭ್ರಮೆಯಿದೆ. ಆದರೆ, ಪ್ರಸಿದ್ಧ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಠಿ ಅವರ ಪ್ರಕಾರ, ದೈನಂದಿನ ಜೀವನದಲ್ಲಿ ಒಂದೇ ಒಂದು ಸರಳ ಅಭ್ಯಾಸ ಸಾಕು — ಅದು ರಕ್ತದ ಸಕ್ಕರೆ ನಿಯಂತ್ರಣದಲ್ಲಿ ಮಹತ್ವದ ಬದಲಾವಣೆ ತರಬಹುದು.

AIIMS, ಹಾರ್ವರ್ಡ್ ಹಾಗೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದಿರುವ ಡಾ. ಸೌರಭ್ ಸೇಠಿ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಊಟದ ಬಳಿಕ 10 ನಿಮಿಷದ ನಡುಗೆ, ರಕ್ತದ ಸಕ್ಕರೆಗೆ ಪರಿಣಾಮಕಾರಿ :

“ರಕ್ತದ ಸಕ್ಕರೆ (Blood Sugar) ಯನ್ನು ನಿಯಂತ್ರಿಸಲು ದೊಡ್ಡ ಆಹಾರ ಬದಲಾವಣೆ ಅಗತ್ಯವಿಲ್ಲ. ಊಟದ ನಂತರ ಕೇವಲ 10 ನಿಮಿಷ ನಿಧಾನವಾಗಿ ನಡೆಯುವುದರಿಂದಲೇ ಸಾಕಷ್ಟು ಲಾಭ ಸಿಗುತ್ತದೆ” ಎಂದು ಡಾ. ಸೇಠಿ ತಿಳಿಸಿದ್ದಾರೆ.

ಅವರ ಪ್ರಕಾರ, ಊಟದ ನಂತರ ನಡೆಯುವಾಗ:

  • ಕಾಲಿನ ಸ್ನಾಯುಗಳು ಚಲಿಸಿ ರಕ್ತದಲ್ಲಿರುವ ಗ್ಲೂಕೋಸ್ ಅನ್ನು ನೇರವಾಗಿ ಶೋಷಿಸುತ್ತವೆ.
  • ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.
  • ಇನ್ಸುಲಿನ್ ಬಿಡುಗಡೆ ನಿಯಂತ್ರಣವಾಗುತ್ತದೆ.
  • ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಈ ಆರೋಗ್ಯ ಸುದ್ದಿ ಓದಿ : ಆಯುರ್ವೇದವನ್ನು ಕಡೆಗಣಿಸಿದ ಭಾರತೀಯರು; ಚೀನಿಯರ ಆರೋಗ್ಯ ಕಷಾಯ ರಹಸ್ಯ.

ಯಾರಿಗೆ ಈ ಅಭ್ಯಾಸ ಹೆಚ್ಚು ಉಪಯುಕ್ತ?

ಈ ಸರಳ ಅಭ್ಯಾಸವು ಕೆಳಗಿನ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಅತ್ಯಂತ ಲಾಭದಾಯಕವಾಗಬಹುದು:

  • ಪ್ರಿ-ಡಯಾಬಿಟಿಸ್.
  • ಟೈಪ್ 2 ಡಯಾಬಿಟಿಸ್.
  • ಫ್ಯಾಟಿ ಲಿವರ್ ಸಮಸ್ಯೆ.
  • ಇನ್ಸುಲಿನ್ ರೆಸಿಸ್ಟೆನ್ಸ್.
  • ಹೊಟ್ಟೆ ಭಾಗದ ಕೊಬ್ಬು.
  • ಸಕ್ಕರೆ ತಿನ್ನುವ ಹವ್ಯಾಸ.
  • ಊಟದ ನಂತರ ತಲೆಸುತ್ತು ಅಥವಾ ಅಲಸತನ.

ನಡಿಗೆ ಹೇಗಿರಬೇಕು?

ಡಾ. ಸೇಠಿ ಅವರ ಮಾತಿನ ಪ್ರಕಾರ:

  • ವೇಗವಾಗಿ ನಡೆಯಬೇಕೆಂಬ ಅಗತ್ಯವಿಲ್ಲ.
  • ಜಿಮ್ ಅಥವಾ ಟ್ರೆಡ್‌ಮಿಲ್ ಅವಶ್ಯಕವಿಲ್ಲ.
  • ಮನೆಯೊಳಗೆ ನಿಧಾನವಾಗಿ ನಡೆಯುವುದೂ ಸಾಕು.
  • 10 ನಿಮಿಷಗಳಷ್ಟು ನಿರಂತರವಾಗಿ ನಡೆದರೆ ಸಾಕು.

👉 ಮುಖ್ಯವಾದದ್ದು ನಿರಂತರತೆ, ತೀವ್ರತೆ ಅಲ್ಲ.

ಈ ಅಭ್ಯಾಸದಿಂದ ಸಿಗುವ ಆರೋಗ್ಯ ಲಾಭಗಳು :

  • ಊಟದ ನಂತರ ಸಕ್ಕರೆ ಏರಿಕೆಯಾಗುವುದನ್ನು ತಡೆಯುತ್ತದೆ.
  • ಇನ್ಸುಲಿನ್ ಮಟ್ಟ ಸಮತೋಲನದಲ್ಲಿರುತ್ತದೆ.
  • ಲಿವರ್ ಫ್ಯಾಟ್ ಕಡಿಮೆಯಾಗುತ್ತದೆ.
  • ಹೊಟ್ಟೆಯ ಕೊಬ್ಬು ನಿಧಾನವಾಗಿ ಇಳಿಯುತ್ತದೆ.
  • ಶಕ್ತಿಯ ಮಟ್ಟ ದಿನವಿಡೀ ಸ್ಥಿರವಾಗಿರುತ್ತದೆ.
  • ಡಯಾಬಿಟಿಸ್ ಅಪಾಯ ಕಡಿಮೆಯಾಗುತ್ತದೆ.

ಇದನ್ನು ಓದಿ : ಆರೋಗ್ಯ, ಚರ್ಮ ಹಾಗೂ ಕೂದಲಿಗೆ ಟೊಮೆಟೊದ ಅಚ್ಚರಿ ಪ್ರಯೋಜನಗಳು.

ತಜ್ಞರ ಸಲಹೆ ಏನು?

“ಅತಿಯಾಗಿ ವ್ಯಾಯಾಮ ಮಾಡುವುದಕ್ಕಿಂತ ಪ್ರತಿದಿನ ಸರಳವಾಗಿ ನಡೆಯುವುದು ಹೆಚ್ಚು ಪರಿಣಾಮಕಾರಿ. ದಿನಕ್ಕೆ ಮೂರು ಊಟಗಳ ನಂತರವೂ 10 ನಿಮಿಷ ನಡೆಯುವ ಅಭ್ಯಾಸ ಮಾಡಿದರೆ ಆರೋಗ್ಯದಲ್ಲಿ ದೊಡ್ಡ ಬದಲಾವಣೆ ಕಾಣಬಹುದು” ಎಂದು ಡಾ. ಸೌರಭ್ ಸೇಠಿ ಹೇಳಿದ್ದಾರೆ.


Disclaimer: ಈ ಲೇಖನದಲ್ಲಿರುವ ಮಾಹಿತಿಯನ್ನು ಸಾಮಾನ್ಯ ಆರೋಗ್ಯ ಅರಿವಿಗಾಗಿ ಮಾತ್ರ ನೀಡಲಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಔಷಧೋಪಚಾರ, ಆಹಾರ ಪದ್ಧತಿ ಅಥವಾ ವ್ಯಾಯಾಮ ಆರಂಭಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಈ ಮಾಹಿತಿಯ ಆಧಾರದಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಿಗೆ ವೆಬ್‌ಸೈಟ್ ಹೊಣೆಗಾರರಾಗುವುದಿಲ್ಲ.

ಅಕ್ರಮ ಸಂಬಂಧ ಬಯಲಾಗುವ ಭಯ: 5 ವರ್ಷದ ಮಗನನ್ನೇ ಕೊಂದ ತಾಯಿ.

0

ಜನಸ್ಪಂದನ ನ್ಯೂಸ್, ಭೂಪಾಲ : ಮಧ್ಯಪ್ರದೇಶದಲ್ಲಿ ತಾಯಿಯೊಬ್ಬಳು ತನ್ನ ಐದು ವರ್ಷದ ಮಗನನ್ನೇ ನಿರ್ದಾಕ್ಷಿಣ್ಯವಾಗಿ ಕೊಂದ ಹೃದಯವಿದ್ರಾವಕ ಘಟನೆ ಬಹಿರಂಗವಾಗಿದ್ದು, ರಾಜ್ಯದಾದ್ಯಂತ ಭಾರೀ ಆಘಾತ ಮೂಡಿಸಿದೆ.

ಅಕ್ರಮ ಸಂಬಂಧ ಬಹಿರಂಗವಾಗುವ ಭಯದಿಂದ ಈ ಭೀಕರ ಕೃತ್ಯ ಎಸಗಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಗ್ವಾಲಿಯರ್ ನಗರದ ಥಟೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ತಾಯಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಕ್ರಮ ಸಂಬಂಧವೇ ಕೊಲೆಗೆ ಕಾರಣ :

ಪೊಲೀಸ್ ಕಾನ್‌ಸ್ಟೆಬಲ್ ರಾಥೋಡ ಅವರ ಪತ್ನಿ ಜ್ಯೋತಿ, ತಮ್ಮ ನೆರೆಯವನಾದ ಉದಯ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. 2023ರ ಏಪ್ರಿಲ್ 28ರಂದು ಜ್ಯೋತಿ ತನ್ನ ಪ್ರೇಮಿಯೊಂದಿಗೆ ಖಾಸಗಿ ಕ್ಷಣ ಕಳೆಯುತ್ತಿದ್ದ ವೇಳೆ, ಅವರ ಐದು ವರ್ಷದ ಮಗ ಜತಿನ್ ಆ ದೃಶ್ಯವನ್ನು ನೋಡಿದ್ದಾನೆ. ಮಗ ಈ ವಿಷಯವನ್ನು ತಂದೆಗೆ ತಿಳಿಸಬಹುದು ಎಂಬ ಭಯ ಜ್ಯೋತಿಯಲ್ಲಿ ಮನೆಮಾಡಿತ್ತು.

ಮಗುವನ್ನು ಎರಡನೇ ಮಹಡಿಯಿಂದ ತಳ್ಳಿದ ತಾಯಿ :

ಮಗನಿಂದ ಸತ್ಯ ಹೊರಬೀಳುವ ಭಯದಿಂದ, ಜ್ಯೋತಿ ಆತನನ್ನು ಕಟ್ಟಡದ ಎರಡನೇ ಮಹಡಿಯಿಂದ ಕೆಳಗೆ ತಳ್ಳಿದ್ದಾಳೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ರಸ್ತೆ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡ ಮಗು ನೋವಿನಿಂದ ನರಳಾಡುತ್ತಿದ್ದರೂ, ತಾಯಿ ಕೆಳಗೆ ಬಂದು ನೋಡುವ ಪ್ರಯತ್ನವನ್ನೂ ಮಾಡಿಲ್ಲ ಎನ್ನಲಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕವೂ ಜ್ಯೋತಿ ಆಸ್ಪತ್ರೆಗೆ ಹೋಗಿಲ್ಲ ಎಂಬ ಅಂಶ ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು :

ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಜತಿನ್ ಅವರನ್ನು ಗ್ವಾಲಿಯರ್‌ನ ಜಯಾರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗಳ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಆರಂಭದಲ್ಲಿ ಕುಟುಂಬದವರು ಇದನ್ನು ಆಕಸ್ಮಿಕ ಅಪಘಾತ ಎಂದು ಭಾವಿಸಿದ್ದರು.

15 ದಿನಗಳ ಬಳಿಕ ಬಯಲಾದ ಭೀಕರ ಸತ್ಯ :

ಘಟನೆಯ ನಂತರ ರಾಥೋಡ ಅವರಿಗೆ ಪತ್ನಿಯ ನಡವಳಿಕೆಯ ಮೇಲೆ ಅನುಮಾನ ಮೂಡಿತ್ತು.

ಘಟನೆ ನಡೆದ ಸುಮಾರು 15 ದಿನಗಳ ಬಳಿಕ ಜ್ಯೋತಿ ಪಶ್ಚಾತ್ತಾಪದಿಂದ ತನ್ನ ಪತಿಯ ಮುಂದೆ “ನಾನು ದೊಡ್ಡ ತಪ್ಪು ಮಾಡಿದ್ದೇನೆ” ಎಂದು ಹೇಳಿಕೊಂಡಿದ್ದಾಳೆ. ಈ ವೇಳೆ ರಾಥೋಡ ಪತ್ನಿಯನ್ನು ಸಮಾಧಾನಪಡಿಸಿ, ಸಂಪೂರ್ಣ ಘಟನೆ ವಿವರಿಸುವಂತೆ ಕೇಳಿದ್ದಾರೆ.

ಜ್ಯೋತಿ ಎಲ್ಲವನ್ನೂ ಹೇಳುವ ಸಂದರ್ಭದಲ್ಲಿ, ಧ್ಯಾನ್ ಸಿಂಗ್ ಆ ಸಂಭಾಷಣೆಯನ್ನು ರಹಸ್ಯವಾಗಿ ಆಡಿಯೋ ಹಾಗೂ ವಿಡಿಯೋ ರೂಪದಲ್ಲಿ ದಾಖಲಿಸಿಕೊಂಡಿದ್ದಾರೆ.

ಜೊತೆಗೆ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ನಂತರ ಅವರು ಪತ್ನಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನ್ಯಾಯಾಲಯದ ತೀರ್ಪು :

ಪೊಲೀಸರು ಜ್ಯೋತಿ ರಾಥೋಡ್ ಮತ್ತು ಆಕೆಯ ಪ್ರೇಮಿ ಉದಯ್ ಇಂಡೋಲಿಯಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ವಿಜಯ್ ಶರ್ಮಾ ಪ್ರಕರಣದ ಪರವಾಗಿ ವಾದ ಮಂಡಿಸಿದರು.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಗ್ವಾಲಿಯರ್‌ನ ಹೆಚ್ಚುವರಿ ಸತ್ರ ನ್ಯಾಯಾಲಯ, ಮಗುವನ್ನು ಕೊಂದ ಆರೋಪದಲ್ಲಿ ಜ್ಯೋತಿ ರಾಥೋಡ್ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

ಆದರೆ, ಉದಯ್ ಇಂಡೋಲಿಯಾ ವಿರುದ್ಧ ಪೂರಕ ಹಾಗೂ ನೇರ ಸಾಕ್ಷ್ಯಗಳ ಕೊರತೆ ಇದ್ದ ಕಾರಣ, ನ್ಯಾಯಾಲಯ ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ :

ತಾಯಿಯೊಬ್ಬಳು ತನ್ನದೇ ಮಗನ ಜೀವ ತೆಗೆದಿರುವ ಈ ಪ್ರಕರಣ ಮಧ್ಯಪ್ರದೇಶದಲ್ಲಿ ಭಾರೀ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಗಳು ದಾರಿ ತಪ್ಪಿದಾಗ ಅದರ ಪರಿಣಾಮ ಎಷ್ಟು ಭೀಕರವಾಗಬಹುದು ಎಂಬುದಕ್ಕೆ ಈ ಘಟನೆ ಕಣ್ಣಾರೆ ಸಾಕ್ಷಿಯಾಗಿದೆ.

Disclaimer : ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ಮಾಹಿತಿಯನ್ನು ವಿಶ್ವಾಸಾರ್ಹ ಮೂಲಗಳು, ಪೊಲೀಸ್ ತನಿಖೆ ಹಾಗೂ ನ್ಯಾಯಾಲಯದ ತೀರ್ಪಿನ ಆಧಾರದಲ್ಲಿ ಪ್ರಕಟಿಸಲಾಗಿದೆ. ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವ ಉದ್ದೇಶ ನಮ್ಮದಲ್ಲ. ಇಲ್ಲಿ ಬಳಸದಿರುವ ಹೆಸರುಗಳು, ಸ್ಥಳಗಳು ಹಾಗೂ ವಿವರಗಳು ಸಾರ್ವಜನಿಕ ದಾಖಲೆಗಳು ಮತ್ತು ಕಾನೂನು ಪ್ರಕ್ರಿಯೆಗಳ ಆಧಾರದಲ್ಲಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಅಥವಾ ಮೇಲ್ಮನವಿ ಪ್ರಕ್ರಿಯೆಯಲ್ಲಿ ಮಾಹಿತಿ ಬದಲಾಗುವ ಸಾಧ್ಯತೆ ಇದೆ. ಓದುಗರು ಈ ಸುದ್ದಿಯನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬೇಕು.

ಮೂತ್ರ ವಿಸರ್ಜನೆ ವೇಳೆ ಈ ಒಂದು ಕೆಲಸ ಮಾಡಿದರೆ ಕಿಡ್ನಿ ಸಮಸ್ಯೆ ದೂರ!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಮೂತ್ರ ವಿಸರ್ಜನೆ ವೇಳೆ ಈ ಒಂದು ಕೆಲಸ ಮಾಡಿದರೆ ಕಿಡ್ನಿ ಸಮಸ್ಯೆ ದೂರವಿರಬಹುದೆಂದು “ಸ್ವರ್ ವಿಜ್ಞಾನ” ತಿಳಿಸುತ್ತದೆ. ಬನ್ನಿ ಈ ಬಗ್ಗೆ ಇಂದಿನ ಆರೋಗ್ಯ ಸುದ್ದಿಯಲ್ಲಿ ತಿಳಿಯೋಣ.!

ಇಂದಿನ ವೇಗದ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ ಹಾಗೂ ನೀರಿನ ಕೊರತೆಯಿಂದಾಗಿ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ದಿನೇದಿನೇ ಹೆಚ್ಚಾಗುತ್ತಿವೆ. ಮಾನವನ ದೇಹದಲ್ಲಿ ಮೂತ್ರಪಿಂಡಗಳು ಅತ್ಯಂತ ಪ್ರಮುಖ ಅಂಗಗಳಾಗಿದ್ದು, ರಕ್ತವನ್ನು ಶುದ್ಧೀಕರಿಸುವುದು, ವಿಷಕಾರಿ ಅಂಶಗಳನ್ನು ಹೊರಹಾಕುವುದು ಹಾಗೂ ದೇಹದಲ್ಲಿನ ನೀರಿನ ಸಮತೋಲನವನ್ನು ಕಾಪಾಡುವ ಪ್ರಮುಖ ಹೊಣೆಗಾರಿಕೆ ಹೊಂದಿವೆ.

ಆದರೆ ಅನಾರೋಗ್ಯಕರ ಜೀವನಶೈಲಿ, ಒತ್ತಡ, ಕಡಿಮೆ ನೀರು ಸೇವನೆ ಮತ್ತು ಅಜಾಗರೂಕತೆಗಳಿಂದಾಗಿ ಇಂದು ಯುವಕರಲ್ಲೂ ಕೂಡ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಆಯುರ್ವೇದ ಹಾಗೂ ಪ್ರಾಚೀನ ಸ್ವರ್ ವಿಜ್ಞಾನವು ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳುತ್ತದೆ.

ಮೂತ್ರ ವಿಸರ್ಜನೆ ವೇಳೆ ಈ ಒಂದು ಕೆಲಸ ಮಾಡಿದರೆ ಕಿಡ್ನಿ ಸಮಸ್ಯೆ ದೂರ!

ಸ್ವರ್ ವಿಜ್ಞಾನ ಎಂದರೇನು?

ಸ್ವರ್ ವಿಜ್ಞಾನವು ಉಸಿರಾಟ ಮತ್ತು ದೇಹದ ಶಕ್ತಿಚಕ್ರಗಳ ನಡುವಿನ ಸಂಬಂಧವನ್ನು ವಿವರಿಸುವ ಪುರಾತನ ವಿಜ್ಞಾನವಾಗಿದೆ. ನಮ್ಮ ಮೂಗಿನ ಉಸಿರಾಟದ ದಿಕ್ಕು ದೇಹದ ವಿವಿಧ ಅಂಗಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇದು ತಿಳಿಸುತ್ತದೆ.

ಚಂದ್ರ ನಾಡಿ ಮತ್ತು ಮೂತ್ರಪಿಂಡಗಳ ಸಂಬಂಧ :

ಸ್ವರ್ ವಿಜ್ಞಾನ ಪ್ರಕಾರ, ಮೂತ್ರಪಿಂಡಗಳು ನೀರಿನ ಅಂಶದೊಂದಿಗೆ ಸಂಬಂಧ ಹೊಂದಿವೆ. ಎಡ ಮೂಗಿನ ಹೊಳ್ಳೆಯಿಂದ ಹರಿಯುವ ಉಸಿರಾಟವನ್ನು ‘ಚಂದ್ರ ನಾಡಿ’ ಎಂದು ಕರೆಯಲಾಗುತ್ತದೆ. ಈ ಚಂದ್ರ ನಾಡಿ ಶೀತಲ ಶಕ್ತಿಯನ್ನು ಪ್ರತಿನಿಧಿಸುವುದರಿಂದ, ಮೂತ್ರಪಿಂಡಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಚಂದ್ರ ನಾಡಿ ಸಕ್ರಿಯವಾಗಿರುವಾಗ:

  • ಮೂತ್ರ ವಿಸರ್ಜನೆ ಸುಗಮವಾಗುತ್ತದೆ.
  • ಸುಡುವ ಸಂವೇದನೆ ಕಡಿಮೆಯಾಗುತ್ತದೆ.
  • ಮೂತ್ರಪಿಂಡಗಳ ಮೇಲೆ ಒತ್ತಡ ಇಳಿಯುತ್ತದೆ.

ಈ ಆರೋಗ್ಯ ಸುದ್ದಿ ಓದಿ : ಚಳಿಗಾಲದಲ್ಲಿ ಹೃದಯಕ್ಕೆ ಅಪಾಯಕಾರಿ ಈ ಆಹಾರಗಳು; ವೈದ್ಯರ ಎಚ್ಚರಿಕೆ.!

ಕಿಡ್ನಿ ಸಮಸ್ಯೆ ಬರದಿರಲು ಮೂತ್ರ ವಿಸರ್ಜಿಸುವಾಗ ಏನು ಮಾಡಬೇಕು?

ತಜ್ಞರ ಸಲಹೆಯ ಪ್ರಕಾರ, ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಕೆಳಗಿನ ಕ್ರಮವನ್ನು ಪಾಲಿಸುವುದು ಉತ್ತಮ:

  • ಮೂತ್ರ ವಿಸರ್ಜನೆ ವೇಳೆ ಎಡ ಮೂಗಿನ ಹೊಳ್ಳೆಯಿಂದ ಮಾತ್ರ ಉಸಿರಾಟ ಮಾಡಬೇಕು.
  • ಬಲ ಮೂಗಿನ ಹೊಳ್ಳೆಯನ್ನು ಸೌಮ್ಯವಾಗಿ ಮುಚ್ಚಬಹುದು.
  • ಇದರಿಂದ ಚಂದ್ರ ನಾಡಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ.

ಚಂದ್ರ ನಾಡಿ ಸಕ್ರಿಯವಿದೆಯೇ ಎಂಬುದನ್ನು ಹೇಗೆ ಗುರುತಿಸಬೇಕು?

  1. ಬಲ ಮೂಗಿನ ಹೊಳ್ಳೆಯನ್ನು ಬೆರಳಿನಿಂದ ನಿಧಾನವಾಗಿ ಮುಚ್ಚಿ.
  2. ಎಡ ಮೂಗಿನ ಹೊಳ್ಳೆಯಿಂದ ಉಸಿರಾಟ ಸುಲಭವಾಗಿ ಸಾಗುತ್ತಿದೆಯೇ ಎಂದು ಪರಿಶೀಲಿಸಿ.
  3. ಉಸಿರಾಟ ಸರಾಗವಾಗಿದ್ದರೆ ಚಂದ್ರ ನಾಡಿ ಸಕ್ರಿಯವಾಗಿದೆ ಎಂದರ್ಥ.
  4. ಸಕ್ರಿಯವಾಗಿಲ್ಲದಿದ್ದರೆ, ಸ್ವಲ್ಪ ಸಮಯ ಎಡಭಾಗಕ್ಕೆ ಮಲಗಿ ಪ್ರಯತ್ನಿಸಬಹುದು.

ಮೂತ್ರಪಿಂಡ ವೈಫಲ್ಯದ ಲಕ್ಷಣಗಳು :

ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಕಾಣಿಸಿಕೊಳ್ಳುವ ಲಕ್ಷಣಗಳು:

  • ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆಯಾಗುವುದು.
  • ಮೂತ್ರಕ್ಕೆ ದುರ್ವಾಸನೆ ಬರುವುದು.
  • ಮೂತ್ರ ವಿಸರ್ಜನೆ ವೇಳೆ ಸುಡುವ ಅನುಭವ.
  • ದೇಹದಲ್ಲಿ ಊತ ಕಾಣಿಸಿಕೊಳ್ಳುವುದು.
  • ತೀವ್ರ ದಣಿವು.

ಇದನ್ನು ಓದಿ : ಮೂಗಿನಲ್ಲಿ ದುರ್ಮಾಂಸ ಸಮಸ್ಯೆ: ಲಕ್ಷಣಗಳು, ಕಾರಣಗಳು ಮತ್ತು ಆಯುರ್ವೇದ ಪರಿಹಾರ.

ಮಹತ್ವದ ಸೂಚನೆ :

ಸ್ವರ್ ವಿಜ್ಞಾನ ಮತ್ತು ಆಯುರ್ವೇದ ಕ್ರಮಗಳು ಸಹಾಯಕವಾಗಿದ್ದರೂ, ಗಂಭೀರ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ. ಸ್ವಯಂ ಚಿಕಿತ್ಸೆಯನ್ನು ತಪ್ಪಿಸಬೇಕು.


Disclaimer : ಈ ಲೇಖನದಲ್ಲಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಆಯುರ್ವೇದ–ಸ್ವರ್ ವಿಜ್ಞಾನ (swar vigyan) ಆಧಾರಿತ ಅರಿವಿನ ಮೇಲೆ ಮಾತ್ರ ನೀಡಲಾಗಿದೆ. ಇದು ಯಾವುದೇ ರೀತಿಯ ವೈದ್ಯಕೀಯ ಸಲಹೆ, ಚಿಕಿತ್ಸೆ ಅಥವಾ ರೋಗನಿರ್ಣಯಕ್ಕೆ ಪರ್ಯಾಯವಲ್ಲ. ಮೂತ್ರಪಿಂಡ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ದಯವಿಟ್ಟು ಅರ್ಹ ವೈದ್ಯರು ಅಥವಾ ತಜ್ಞರ ಸಲಹೆ ಪಡೆಯುವುದು ಅನಿವಾರ್ಯ. ಈ ಲೇಖನದಲ್ಲಿರುವ ಮಾಹಿತಿಯನ್ನು ಅನುಸರಿಸಿ ಉಂಟಾಗುವ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ವೆಬ್‌ಸೈಟ್ ಅಥವಾ ಲೇಖಕರು ಹೊಣೆಗಾರರಾಗಿರುವುದಿಲ್ಲ.

ಚಳಿಗಾಲದಲ್ಲಿ ಹೃದಯಕ್ಕೆ ಅಪಾಯಕಾರಿ ಈ ಆಹಾರಗಳು; ವೈದ್ಯರ ಎಚ್ಚರಿಕೆ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಚಳಿ ಕ್ರಮೇಣ ಹೆಚ್ಚಾಗುತ್ತಿದ್ದು, ಇದರೊಂದಿಗೆ ದೇಹದ ಆರೈಕೆಯ ಅಗತ್ಯವೂ ಹೆಚ್ಚಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ನಾವು ಅನುಸರಿಸುವ ಆಹಾರ ಪದ್ಧತಿ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ, ಅದರಲ್ಲೂ ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ.

ಚಳಿಯ ವಾತಾವರಣದಲ್ಲಿ ದೇಹದ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಈ ಸಮಯದಲ್ಲಿ ಅತಿಯಾಗಿ ಎಣ್ಣೆಯುಕ್ತ, ಮಸಾಲೆಯುಕ್ತ ಹಾಗೂ ಜೀರ್ಣವಾಗಲು ಕಷ್ಟವಾಗುವ ಆಹಾರ ಸೇವಿಸಿದರೆ, ಹೃದಯದ ಮೇಲೆ ಹೆಚ್ಚುವರಿ ಒತ್ತಡ ಬೀಳುವ ಸಾಧ್ಯತೆ ಇದೆ.

ಪರಿಣಾಮವಾಗಿ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಚಳಿಗಾಲದಲ್ಲಿ ಹೃದಯಕ್ಕೆ ಹಾನಿಕಾರಕ ಆಹಾರಗಳು :

ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ವೈದ್ಯ ಡಾ. ಅಜಿತ್ ಜೈನ್ ಅವರ ಪ್ರಕಾರ, ಚಳಿಗಾಲದಲ್ಲಿ ಜನರು ಸಾಮಾನ್ಯವಾಗಿ ಕೆಲವು ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹೃದಯದ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ.

ಆರೋಗ್ಯ ಸುದ್ದಿ : Heart Attack : ಇವು ಹೃದಯಾಘಾತದ ಲಕ್ಷಣಗಳು ; ಇವನ್ನು ನಿರ್ಲಕ್ಷಸದಿರಿ.!

ಮೊದಲನೆಯದಾಗಿ, ಹುರಿದ ಹಾಗೂ ಅತಿಯಾಗಿ ಮಸಾಲೆಯುಕ್ತ ಆಹಾರಗಳು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಇವುಗಳಲ್ಲಿ ಇರುವ ಅತಿಯಾದ ಕೊಬ್ಬು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ, ರಕ್ತನಾಳಗಳಲ್ಲಿ ಅಡ್ಡಿ ಉಂಟುಮಾಡುವ ಸಾಧ್ಯತೆ ಇದೆ.

ಎರಡನೆಯದಾಗಿ, ಹೆಚ್ಚು ಉಪ್ಪು ಹಾಗೂ ಅತಿಯಾಗಿ ಸಿಹಿ ಪದಾರ್ಥಗಳನ್ನು ಸೇವಿಸುವ ಅಭ್ಯಾಸವೂ ಹೃದಯಕ್ಕೆ ಹಾನಿಕಾರಕ. ಹೆಚ್ಚಿದ ಉಪ್ಪಿನ ಸೇವನೆಯಿಂದ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ.

ಮೂರನೆಯದಾಗಿ, ಕೆಂಪು ಮಾಂಸದ ಅತಿಯಾದ ಸೇವನೆಯು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸಿ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಚಳಿಗಾಲದಲ್ಲಿ ದೇಹದ ರಕ್ತ ಪರಿಚಲನೆ ನಿಧಾನವಾಗುವುದರಿಂದ ಈ ಅಪಾಯ ಇನ್ನಷ್ಟು ಹೆಚ್ಚಾಗುತ್ತದೆ.

ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಯಾವ ಆಹಾರ ಉತ್ತಮ?

ಚಳಿಗಾಲದಲ್ಲಿ ಹೃದಯವನ್ನು ಆರೋಗ್ಯಕರವಾಗಿಡಲು ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಸೇವನೆ ಅತ್ಯಂತ ಮುಖ್ಯ. ಪ್ರತಿದಿನ ಹಣ್ಣು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ವಿಶೇಷವಾಗಿ ಕಿತ್ತಳೆ, ಸೇಬುಗಳಂತಹ ಕಾಲೋಚಿತ ಹಣ್ಣುಗಳು ಹಾಗೂ ಹಸಿರು ತರಕಾರಿಗಳು ಹೃದಯಕ್ಕೆ ಉಪಯುಕ್ತವಾಗಿವೆ.

ಓಟ್ಸ್, ಗಂಜಿ ಹಾಗೂ ಸಂಪೂರ್ಣ ಧಾನ್ಯಗಳು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿವೆ. ಮೀನು, ಬೇಳೆ ಹಾಗೂ ವಿವಿಧ ಬೀಜಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ಹೃದಯಕ್ಕೆ ಲಾಭಕಾರಿ. ಅಗಸೆ ಬೀಜಗಳು ಹಾಗೂ ಒಮೆಗಾ–3 ಕೊಬ್ಬು ಆಮ್ಲಗಳುಳ್ಳ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದು ಹೃದಯವನ್ನು ಬಲವಾಗಿಡುತ್ತದೆ.

ಇದನ್ನು ಓದಿ : ಮೂತ್ರದ ಬಣ್ಣವೇ ಹೇಳುತ್ತದೆ ನಮ್ಮ ಆರೋಗ್ಯದ ಮುಖ್ಯ ಎಚ್ಚರಿಕೆ ಸೂಚನೆಗಳನ್ನ.!

ಇದರ ಜೊತೆಗೆ ಸಾಕಷ್ಟು ನೀರು ಕುಡಿಯುವುದು, ಲಘು ವ್ಯಾಯಾಮ ಮಾಡುವುದು, ಸಮರ್ಪಕ ನಿದ್ರೆ ಪಡೆಯುವುದು ಸಹ ಅತ್ಯಗತ್ಯ. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರಿಂದ ಚಳಿಗಾಲದಲ್ಲಿಯೂ ಹೃದಯದ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.


Disclaimer : ಈ ಲೇಖನದಲ್ಲಿರುವ ಮಾಹಿತಿ ಸಾರ್ವಜನಿಕ ಅರಿವು ಮತ್ತು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಅಥವಾ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವ ಮೊದಲು ಅರ್ಹ ವೈದ್ಯರು ಅಥವಾ ತಜ್ಞರ ಸಲಹೆ ಪಡೆಯುವುದು ಸೂಕ್ತ.