ಜನಸ್ಪಂದನ ನ್ಯೂಸ್, ಬೆಂಗಳೂರು : 10th, 12th ಮತ್ತು ಡಿಗ್ರಿ ಪಾಸಾದವರಿಗೆ ಪಶುಸಂಗೋಪನಾ ಇಲಾಖೆಯಲ್ಲಿ ಉದ್ಯೋಗವಕಾಶವಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಿ. ಈ ಕುರಿತು ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 12,981 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : NPCIL ಯಲ್ಲಿ ಖಾಲಿ ಇರುವ 400 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹುದ್ದೆಗಳ ವಿವರ :
- ನೇಮಕಾತಿ ಪ್ರಾಧಿಕಾರ : BPNL.
- ಒಟ್ಟು ಹುದ್ದೆಗಳು : 12,981.
ಹುದ್ದೆಗಳ ಹೆಸರು :
* ಮುಖ್ಯ ಪ್ರಾಜೆಕ್ಟ್ ಅಧಿಕಾರಿ – 44.
* ಜಿಲ್ಲಾ ವಿಸ್ತರಣಾಧಿಕಾರಿ – 440.
* ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ – 2,121.
* ಪಂಚಾಯತ್ ಪಶು ಸೇವಕ್ – 10,376.
Note : ಈ ಪೈಕಿ ಕರ್ನಾಟಕದಲ್ಲಿ 690 ಹುದ್ದೆಗಳಿವೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ ಎಪ್ರಿಲ್ 30 ರ ದ್ವಾದಶ ರಾಶಿಗಳ ಫಲಾಫಲ.!
ವಿದ್ಯಾರ್ಹತೆ :
* ಮುಖ್ಯ ಪ್ರಾಜೆಕ್ಟ್ ಅಧಿಕಾರಿ – ಸಿಎ, ಸಿಎಸ್, ಸ್ನಾತಕೋತ್ತರ ಪದವಿ, ಎಂ.ವಿ.ಎಸ್ಸಿ, ಎಂಬಿಎ, ಎಂ.ಇ.
* ಜಿಲ್ಲಾ ವಿಸ್ತರಣಾಧಿಕಾರಿ – ಪದವಿ.
* ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ – 12ನೇ ತರಗತಿ.
* ಪಂಚಾಯತ್ ಪಶು ಸೇವಕ್ – 10ನೇ ತರಗತಿ.
ವಯೋಮಿತಿ :
* ಮುಖ್ಯ ಪ್ರಾಜೆಕ್ಟ್ ಅಧಿಕಾರಿ – 40 ರಿಂದ 65 ವರ್ಷ.
* ಜಿಲ್ಲಾ ವಿಸ್ತರಣಾಧಿಕಾರಿ – 25 ರಿಂದ 40 ವರ್ಷ.
* ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ – 21 ರಿಂದ 40 ವರ್ಷ.
* ಪಂಚಾಯತ್ ಪಶು ಸೇವಕ್ – 21 ರಿಂದ 40 ವರ್ಷ.
ಇದನ್ನು ಓದಿ : Health : ಹೆಚ್ಚು ಎಣ್ಣೆಯುಕ್ತ ಆಹಾರ ತಿನ್ನುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!
ಅರ್ಜಿ ಶುಲ್ಕ :
* ಮುಖ್ಯ ಪ್ರಾಜೆಕ್ಟ್ ಅಧಿಕಾರಿ – Rs.1,534/-
* ಜಿಲ್ಲಾ ವಿಸ್ತರಣಾಧಿಕಾರಿ – Rs.1,180/-
* ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ – Rs.944/-
* ಪಂಚಾಯತ್ ಪಶು ಸೇವಕ್ – Rs.708/-
ವೇತನ ಶ್ರೇಣಿ :
* ಮುಖ್ಯ ಪ್ರಾಜೆಕ್ಟ್ ಅಧಿಕಾರಿ – ರೂ. 75,000/-
* ಜಿಲ್ಲಾ ವಿಸ್ತರಣಾಧಿಕಾರಿ – ರೂ. 50,000/-
* ತೆಹ್ಸಿಲ್ ಅಭಿವೃದ್ಧಿ ಅಧಿಕಾರಿ – ರೂ.40,000/-
* ಪಂಚಾಯತ್ ಪಶು ಸೇವಕ್ – ರೂ. 28,500/-
ಇದನ್ನು ಓದಿ : ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕುರಿತು ಅಶ್ಲೀಲ ಪೋಸ್ಟ್ ಮಾಡಿದ ಮಹಿಳಾ Influencer.!
ಪ್ರಮುಖ ದಿನಾಂಕಗಳು :
- ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 26-04-2025.
- ಅರ್ಜಿ ಸ್ವೀಕಾರ ಅಂತಿಮ ದಿನಾಂಕ : 11-05-2025 ರ 11-59 ಗಂಟೆವರೆಗೆ.
ಆಯ್ಕೆ ವಿಧಾನ :
- ಅರ್ಜಿ ಸಲ್ಲಿಸಿದವರಿಗೆ ಒಟ್ಟು 50 ಅಂಕಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುವುದು,
ಅರ್ಜಿ ಸಲ್ಲಿಸುವ ವಿಧಾನ :
- ಅರ್ಜಿ ಸಲ್ಲಿಸಲು ಲಿಂಕ್ ಕ್ಲಿಕ್ ಮಾಡಿ.
- ಕಾಣುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ.
- ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ.
- ಎಲ್ಲವೂ ಸರಿ ಇದ್ದರೆ, Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್ ಫಾರಂ ಡೌನ್ ಲೋಡ್ ಮಾಡಿ ಮತ್ತು ಸಂಗ್ರಹಿಸಿ.
ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!
ಪ್ರಮುಖ ಲಿಂಕ್ :
- https://pay.bharatiyapashupalan.com/onlinerequirment ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
Disclaimer : The above given information is available On online, candidates should check it properly before applying. This is for information only.
ಹಿಂದಿನ ಸುದ್ದಿ : Video : ರಾತ್ರಿ ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಟ ಚಿರತೆ ; ಮುಂದೆನಾಯ್ತು.!
ಜನಸ್ಪಂದನ ನ್ಯೂಸ್, ಡೆಸ್ಕ್ : ರಾತ್ರಿ ವೇಳೆ ಪೊಲೀಸ್ ಠಾಣೆಗೆ ಚಿರತೆಯೊಂದು ಎಂಟ್ರಿ (Entry) ಕೊಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣ (Social Media) ದಲ್ಲಿ ವೈರಲ್ ಆಗಿದೆ.
ರಾತ್ರಿ ವೇಳೆ ಪೊಲೀಸ್ ಠಾಣೆಗೆ ಚಿರತೆಯ ಏಕಾಏಕಿ ಎಂಟ್ರಿ ನೋಡಿದ ಪೊಲೀಸ್ ಸಿಬ್ಬಂದಿ (Police Staff) ಗಾಬರಿಗೊಂಡಿದ್ದಾರೆ.
ಇದನ್ನು ಓದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!
ತಮಿಳುನಾಡಿನ ನೀಲಗಿರಿಯ ನಡುವಟ್ಟಂ ಪೊಲೀಸ್ ಠಾಣೆಯೊಳಗೆ ರಾತ್ರಿ ವೇಳೆ ಚಿರತೆಯೊಂದು ನಿಧಾನವಾಗಿ ಒಳಗೆ ಪ್ರವೇಶ ಮಾಡಿದಲ್ಲದೆ ಅತ್ತಿತ್ತ ಸುತ್ತಾಡಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾ (CCTV Camera) ಸೆರೆಯಾಗಿದ್ದು, ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ.?
ಚಿರತೆಯೊಂದು ರಾತ್ರಿ ವೇಳೆ ಪೊಲೀಸ್ ಠಾಣೆಯಲ್ಲಿ ಪ್ರವೇಶಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮುಖ್ಯ ದ್ವಾರದ (Mail Door) ಮೂಲಕ ಪ್ರವೇಶ ಪಡೆದಿ ಈ ಚಿರತೆ ಕೋಣೆಯೋದರಲ್ಲಿ ಹೋಗಿ ಸುತ್ತಾಡಿದೆ.
ಇದನ್ನು ಓದಿ : ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆ*ತ್ಮಹ*ತ್ಯೆಗೆ ಶರಣಾದ Businessman.!
ಆದರೆ ಇದೆ ವೇಳೆಯಲ್ಲಿ ಸಿಬ್ಬಂದಿಯೊಬ್ಬರು ಅದೇ ಕೋಣೆಯಲ್ಲಿದ್ದರೂ ಸಹ ಚಿರತೆಗೆ ಕಾಣಿಸಲಿಲ್ಲೋ ಅಥವಾ ನೋಡಿಯೂ ಹಾಗೇ ಸುಮ್ಮನೇ ಹೊರ ಬಂತೋ ಅನ್ನೋದು ತಿಳಿಯಲಿಲ್ಲ.
ಕೆಲ ಸಮಯದ ನಂತರ ಆ ಚಿರತೆ ತಾನ್ನಷ್ಟಕ್ಕೆ ತಾನೇ ಕೋಣೆಯಿಂದ ಹೊರ ಬಂದು ಮತ್ತೆ ಮುಖ್ಯ ದ್ವಾರದ ಮೂಲಕ ಹೊರ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನು ಓದಿ : ನಾನು ಭಾರತವನ್ನು ದ್ವೇಷಿಸುತ್ತೇನೆ ಎಂದ ವೈದ್ಯೆ ವಿರುದ್ಧ ದಾಖಲಾಯ್ತು FIR.!
ಪೊಲೀಸ್ ಠಾಣೆಯ ಮೊದಲ ಕೋಣೆಗೆ ಹೋದ ಚಿರತೆಯನ್ನು ನೋಡಿದ ಸಿಬ್ಬಂದಿ, ಚಿರತೆ ಹೊರ ಬರುತ್ತಿದಂತೆಯೇ ರೂಂ ಬಾಗಿಲು ಲಾಕ್ ಮಾಡಲು ಪ್ರಯತ್ನಿಸುತ್ತಾರೆ. ಆದರೆ, ರೂಂ (Room) ಬಾಗಿಲು ಲಾಕ್ ಮಾಡಲು ಸಾಧ್ಯವಾಗುವುದಿಲ್ಲ.
ಹೀಗಾಗಿ ಚಿರತೆ ಠಾಣೆಯಿಂದ ಹೊರ ಹೋಗಿರುವುದನ್ನು ದೃಢಪಡಿಸಿಕೊಳ್ಳಲು ಎಚ್ಚರಿಕೆಯಿಂದ ತುದಿಗಾಲಲ್ಲಿ ಸ್ವಲ್ಪ ಬಾಗಿಲನ್ನು ತೆರೆದು ಭಯಭೀತನಾಗಿ ಅಲ್ಲಿಯೇ ನಿಂತು ಇಣುಕು ನೋಡುತ್ತಾನೆ.
ಇದನ್ನು ಓದಿ : ಮಹಿಳಾ PSI ಯಿಂದ ಕಿರುಕುಳ ಆರೋಪ ; ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಯುವಕ.!
ಚಿರತೆ ಹೊರ ಹೋಗಿರುವುದು ದೃಢವಾದ ನಂತರ ತಾನಿದ್ದ ಕೋಣೆಯ ಬಾಗಿಲು ಮುಚ್ಚಿಕೊಳ್ಳುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನು ವಿಡಿಯೋ ಇಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ಹಂಚಿಕೊಂಡಿದ್ದು, “ನೀಲಗಿರಿಯ ನಡುವಟ್ಟಂ ಪೊಲೀಸ್ ಠಾಣೆಯನ್ನು ಚಿರತೆಯೊಂದು ಪರಿಶೀಲಿಸಲು ನಿರ್ಧರಿಸಿತು. ಶಾಂತವಾಗಿ ಬಾಗಿಲು ಮುಚ್ಚಿ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ಹ್ಯಾಟ್ಸ್ ಆಫ್. ಯಾರಿಗೂ ಗಾಯವಾಗಲಿಲ್ಲ. ಚಿರತೆ ಸುರಕ್ಷಿತವಾಗಿ ಕಾಡಿಗೆ ಮರಳಿತು”. (“A Leopard decided to inspect the Naduvattam Police Station in Nilgiris. Hats off to the police person on duty who calmly closed the door and called forest officials. No one was hurt. Leopard went back safely to the forest) ಎಂದು ಬರೆದು ಕೊಂಡಿದ್ದಾರೆ.
ಇದನ್ನು ಓದಿ : NPCIL ಯಲ್ಲಿ ಖಾಲಿ ಇರುವ 400 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇನ್ನು ವಿಡಿಯೋ ನೋಡಿ ಅನೇಕರು ವಿಧ ವಿಧದಲ್ಲಿ ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ :
A Leopard decided to inspect the Naduvattam Police Station in Nilgiris. Hats off to the police person on duty who calmly closed the door and called forest officials. No one was hurt. Leopard went back safely to the forest #wildlife #TNForest pic.twitter.com/WEtXgW36kI
— Supriya Sahu IAS (@supriyasahuias) April 29, 2025