ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral NewsAnts ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.
spot_img
spot_img
spot_img

Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.

- Advertisement -

ಜನಸ್ಪಂದನ ನ್ಯೂಸ್‌, ಸಂಗರೆಡ್ಡಿ (ತೆಲಂಗಾಣ) : ಇರುವೆಗಳ (Ants) ಭೀತಿಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತ 25 ವರ್ಷದ ಮಹಿಳೆ ತಮ್ಮ ಪತಿ ಮತ್ತು ಮಗಳೊಂದಿಗೆ ಸಂಗರೆಡ್ಡಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಕೆಲ ದಿನದಿಂದ ಇರುವೆಗಳ (Ants) ಬಗ್ಗೆ ತೀವ್ರ ಭಯದಿಂದ ಅವರು ನರಳುತ್ತಿದ್ದರು.

ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ಈ ಸಮಸ್ಯೆಗೆ ಕುಟುಂಬ ಸದಸ್ಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಕೌನ್ಸೆಲಿಂಗ್ ಸಹ ನೀಡಲಾಗಿತ್ತು. ಆದರೂ ಮಹಿಳೆಗೆ ಇರುವೆಗಳ ಭಯ ಕಡಿಮೆಯಾಗದೆ ದಿನೇ ದಿನೇ ತೀವ್ರಗೊಂಡಿತು.

ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮಹಿಳೆ ಮನದ ನೋವಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಇನ್ನು ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪತಿ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದಾಗ ಪತ್ನಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಈ ದೃಶ್ಯ ನೋಡಿದ ಪತಿ ಕಣ್ಣೀರು ಹಾಕಿದ್ದಾರೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಅಲ್ಲದೆ, ಸ್ಥಳದಲ್ಲಿದ್ದ ಆತ್ಮಹತ್ಯಾ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ ಮೃತ ಮಹಿಳೆ ಬರೆದಿದ್ದು ಹೀಗೆ,

“ಶ್ರೀ… ಕ್ಷಮಿಸಿ, ನಾನು ಈ ಇರುವೆ (Ants) ಗಳೊಂದಿಗೆ ಬದುಕಲು ಬಯಸುವುದಿಲ್ಲ. ಅನ್ವಿಯನ್ನು ನೋಡಿಕೊಳ್ಳಿ. ದಯವಿಟ್ಟು ಅನ್ನಾವರಂ, ತಿರುಪತಿ ಮತ್ತು ಯೆಲ್ಲಮ್ಮನನ್ನು ನೋಡಿಕೊಳ್ಳಿ.”

ಈ ಪತ್ರ ಓದಿದ ಕುಟುಂಬ ಸದಸ್ಯರು ಕಣ್ಣೀರು ಹಾಕಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”
ಮೈರ್ಮೆಕೊಫೋಬಿಯಾ (Myrmecophobia) ಎಂದರೇನು?

ಮೈರ್ಮೆಕೊಫೋಬಿಯಾ ಎಂದರೆ ಇರುವೆ (Ants) ಗಳ ಬಗ್ಗೆ ಅತಿಯಾದ ಭಯ ಅಥವಾ ಅಸಹನೆ. ಇದು ಒಂದು ರೀತಿಯ ನಿರ್ದಿಷ್ಟ ಭಯ (Specific Phobia) ಆಗಿದ್ದು, ಈ ಸಮಸ್ಯೆ ಇದ್ದವರು ಇರುವೆಗಳನ್ನಷ್ಟೇ ಅಲ್ಲದೆ ಇತರ ಕೀಟಗಳು ಮತ್ತು ಜೇಡಗಳ ಬಗ್ಗೆ ಸಹ ತೀವ್ರ ಭಯ ಹೊಂದಿರುತ್ತಾರೆ.

ಕೆಲವರಿಗೆ ಇರುವೆಗಳು ಆಹಾರವನ್ನು ಹಾಳುಮಾಡುವ ಭಯವಿರಬಹುದು, ಇನ್ನು ಕೆಲವರಿಗೆ ಮನೆಯ ಮೇಲೆ ಇರುವೆಗಳ ದಾಳಿ ನಡೆಯುವ ಭಯವೂ ಉಂಟಾಗಬಹುದು.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!
ಲಕ್ಷಣಗಳು :
  • ಆತಂಕ, ನಿದ್ರಾಹೀನತೆ.
  • ಬೆವರುವುದು ಮತ್ತು ಹೃದಯ ಬಡಿತ ಹೆಚ್ಚಾಗುವುದು.
  • ಉಸಿರಾಟದ ತೊಂದರೆ ಅಥವಾ ಗಾಬರಿ.
  • ತಲೆತಿರುಗುವಿಕೆ, ವಾಕರಿಕೆ, ಒಣ ಬಾಯಿ.
  • ತಲೆನೋವು ಮತ್ತು ಶಾರೀರಿಕ ಮರಗಟ್ಟುವಿಕೆ.
ಚಿಕಿತ್ಸೆ ಸಾಧ್ಯವೇ?

ಹೌದು, ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆ ಮೂಲಕ ಮೈರ್ಮೆಕೊಫೋಬಿಯಾ ನಿವಾರಣೆ ಸಾಧ್ಯ.
ಸಾಮಾನ್ಯವಾಗಿ Exposure Therapy ಅಂದರೆ ಮೊದಲು ಇರುವೆ (Ants) ಗಳ ಚಿತ್ರಗಳು ಅಥವಾ ವಿಡಿಯೋಗಳನ್ನು ತೋರಿಸುವ ಮೂಲಕ ಪ್ರಾರಂಭಿಸಿ, ನಂತರ ಹಂತ ಹಂತವಾಗಿ ನಿಜ ಜೀವನದಲ್ಲಿ ಇರುವೆಗಳ ಹತ್ತಿರ ಇರಲು ಮನಸ್ಸು ತಯಾರಿಸುವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ, ಕೌನ್ಸೆಲಿಂಗ್ ಮತ್ತು ಮನೋವೈದ್ಯಕೀಯ ಔಷಧೋಪಚಾರ ಸಹ ಸಹಾಯಕರಾಗಬಹುದು.

ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
ಸಂಪಾದಕೀಯ :

ಮೃತ ಪ್ರಕರಣ ಪ್ರಕರಣ ಮಾನಸಿಕ ಆರೋಗ್ಯದ ಮಹತ್ವವನ್ನು ನೆನಪಿಸುತ್ತದೆ. ಭಯ, ಆತಂಕ ಅಥವಾ ಒತ್ತಡದಂತಹ ಸಮಸ್ಯೆಗಳನ್ನು ಅನುಭವಿಸಿದಾಗ ತಕ್ಷಣ ಸಹಾಯವನ್ನು ಪಡೆಯುವುದು ಅತ್ಯಗತ್ಯ. ಸಮಯಕ್ಕೆ ತಕ್ಕ ಸಲಹೆ ಮತ್ತು ಚಿಕಿತ್ಸೆ ಪಡೆದರೆ ಅನೇಕ ಜೀವಗಳನ್ನು ಉಳಿಸಬಹುದು.

👉 ಹೆಚ್ಚಿನ ಸುದ್ದಿ ಓದಲು ಜನಸ್ಪಂದನ ಡಾಟ್‌ಕಾಂ ಕ್ಲಿಕ್ ಮಾಡಿ.


Road ಅಪಘಾತದಲ್ಲಿ ಇಬ್ಬರು ಯುವಕರು ಮೃತ್ಯು ; ಭಯಾನಕ ವಿಡಿಯೋ ವೈರಲ್!

Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಆಂಧ್ರಪ್ರದೇಶದ ಬಾಪಟ್ಲಾ (Bapatla) ತಾಲ್ಲೂಕಿನಲ್ಲಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಈ ಘಟನೆಯಲ್ಲಿ ಇಬ್ಬರು ಯುವಕರ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ರಾತ್ರಿ ವೇಳೆ ನಡೆದಿದ್ದು, ಬೈಕ್ ಸವಾರ ವೇಗವಾಗಿ ರಸ್ತೆ (Road) ಯಲ್ಲಿ ಸಂಚರಿಸುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದಿರುವುದರಿಂದ ಈ ಅಪಘಾತ ಸಂಭವಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

MES ಮುಖಂಡನ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಸಿಪಿಐಗೆ ವರ್ಗಾವಣೆಯ ಶಿಕ್ಷೆ.

ರಸ್ತೆ (Road) ಅಪಘಾತ ನಡೆಯುತ್ತಿದಂತೆಯೇ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಯುವಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಾಗ್ಯೂ, ಗಂಭೀರವಾಗಿ ಗಾಯಗೊಂಡ ಇಬ್ಬರೂ ಯುವಕರು ಆಸ್ಪತ್ರೆಗೆ ದಾಖಲಾಗುವ ಮೊದಲೇ ಪ್ರಾಣ ಕಳೆದುಕೊಂಡರು.

ಈ ರಸ್ತೆ (Road) ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

“ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ರಸ್ತೆ (Road) ಅಪಘಾತದ ಕುರಿತಾಗಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಲಾರಿ ಚಾಲಕನನ್ನು ಹುಡುಕಾಟ ಮಾಡುತ್ತಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಪರಿಶೀಲನೆ ನಡೆಸುತ್ತಿರುವುದಾಗಿ ಅಧಿಕೃತವಾಗಿ ತಿಳಿದುಬಂದಿದೆ.

ಈ ಪ್ರಕರಣವು ರಸ್ತೆ (Road) ಸುರಕ್ಷತೆ ಕುರಿತಾಗಿ ಸಾರ್ವಜನಿಕರಲ್ಲಿ ಎಚ್ಚರಿಕೆಯನ್ನು ಮೂಡಿಸಿದ್ದು, ವಾಹನ ಚಾಲಕರಿಗೆ ನಿಯಮ ಪಾಲನೆಯ ಮಹತ್ವವನ್ನು ಒತ್ತಿ ತೋರಿಸುತ್ತದೆ.

ವಿಡಿಯೋ ನೋಡಿ :

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments