ಶುಕ್ರವಾರ, ಜನವರಿ 2, 2026

Janaspandhan News

HomeCrime Newsಹೆತ್ತ ಮಗನನ್ನು ಸೇರಿಸಿ 4 ಮಕ್ಕಳನ್ನು ಹತ್ಯೆ ಮಾಡಿದ Woman.!
spot_img
spot_img
spot_img

ಹೆತ್ತ ಮಗನನ್ನು ಸೇರಿಸಿ 4 ಮಕ್ಕಳನ್ನು ಹತ್ಯೆ ಮಾಡಿದ Woman.!

- Advertisement -

ಜನಸ್ಪಂದನ ನ್ಯೂಸ್‌, ಪಾಣಿಪತ್‌ : ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಸ್ಥಳೀಯರು ಸೇರಿದಂತೆ ಪೊಲೀಸರು ಸಹ ಬೆಚ್ಚಿಬೀಳುವಂತೆ ಮಾಡಿದೆ. ಒಬ್ಬಳೇ ಮಹಿಳೆ (Woman) ತನ್ನ ಕುಟುಂಬ ಮತ್ತು ಸಂಬಂಧಿಕರ ನಾಲ್ವರು ಪುಟ್ಟ ಮಕ್ಕಳನ್ನು ಕ್ರಮವಾಗಿ ಮುಳುಗಿಸಿ ಕೊಂದಿದ್ದಾಳೆ ಎಂದು ತನಿಖೆಯ ವೇಳೆ ಬಹಿರಂಗವಾಗಿದೆ. ಇಷ್ಟೇ ಅಲ್ಲಾ ಆಘಾತಕಾರಿ ಸಂಗತಿಯೇನಂದರೆ, ಮೃತಪಟ್ಟ ಮಕ್ಕಳಲ್ಲಿ ಒಬ್ಬ ಅವಳ (Woman) ಸ್ವಂತ ಮಗನು ಆಗಿದ್ದಾನೆ.

ಸುಂದರ ಮಕ್ಕಳ ಬಗ್ಗೆ ಅಸೂಯೆ — ಕಾರಣವೇ ಕೊಲೆ?

ಪಾಣಿಪತ್ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಯಾಗಿರುವ ಮಹಿಳೆ (Woman) ಗೆ “ಸುಂದರವಾಗಿ ಕಾಣುವ” ಮಕ್ಕಳ ಬಗ್ಗೆ ಅಸಹನೆ ಮತ್ತು ಅಸೂಯೆ ಇದ್ದಿತಂತೆ. ತನಿಖಾಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ, ತನ್ನ ಮಗುವಿಗಿಂತ ಚೆನ್ನಾಗಿ ಕಾಣುವ ಮಕ್ಕಳನ್ನು ಸಹಿಸಲಾಗದೆ, ಆ ಮಕ್ಕಳು ಕಂಡಾಗಲೆಲ್ಲಾ ಅವರಿಗೆ ಹಾನಿ ಮಾಡುವ ಆಸೆ ಬರುತ್ತಿತ್ತಂತೆ ಎಂದು ಒಪ್ಪಿಕೊಂಡಿದ್ದಾಳೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಮಕ್ಕಳ ಮೇಲೆ ದಾಳಿ ನಡೆಸಲು ಯಾವುದೇ ಆಯುಧ ಬಳಸದೇ, ಬಾತ್‌ರೂಮ್‌ನ ಟಬ್‌, ಸಿಂಕ್‌ ಅಥವಾ ಸಣ್ಣ ನೀರಿನ ಪಾತ್ರೆಯಲ್ಲಿ ಅವರನ್ನು ಮುಳುಗಿಸುವ ಮೂಲಕ ಕೊಲೆ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 1ರಂದು ನಡೆದ ಘಟನೆ ; ಭಾರೀ ಅನುಮಾನ :

ಡಿಸೆಂಬರ್ 1, 2025ರ ಮದುವೆ ಸಮಾರಂಭದಲ್ಲಿ ಪಾಣಿಪತ್‌ನ ನೌಲ್ತಾ ಗ್ರಾಮದಲ್ಲಿ ಆರು ವರ್ಷದ ಬಾಲಕಿ ವಿಧಿ ನೀರಿನ ಟಬ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದಳು. ಮರಣದ ಸಂದರ್ಭ ಅನುಮಾನಾಸ್ಪದವಾಗಿದ್ದರಿಂದ ಪೊಲೀಸರು ಮದುವೆಗೆ ಹಾಜರಿದ್ದವರನ್ನು ತಲಾ ವಿಚಾರಣೆಗೊಳಪಡಿಸಿದರು.

ಮಹಿಳೆ (Woman) ಯ ಸರದಿ ಬಂದಾಗ ಅವಳ ವರ್ತನೆ ಅಸಹಜವಾಗಿದ್ದು, ಆತಂಕಗೊಂಡು ಮಾತು ತಪ್ಪುತ್ತಿದ್ದಳು. ಇದರಿಂದ ಪೊಲೀಸರು ಗಾಢ ಅನುಮಾನ ಪಟ್ಟು ತೀವ್ರ ವಿಚಾರಣೆ ಮಾಡಿದಾಗ, ಮಹಿಳೆ ಕೊನೆಯಲ್ಲಿ ನಾಲ್ಕು ಕೊಲೆಗಳನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡಳು.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

2023ರಿಂದ 2025ರವರೆಗೆ ನಾಲ್ಕು ಭೀಕರ ಕೊಲೆಗಳು :

ಪೊಲೀಸರು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಹಿಳೆ (Woman) ಯ ಸರಣಿ ಕೊಲೆಗಳ ಪಟ್ಟಿ ಹೀಗಿದೆ:

  • 2023 — ಸೋನಿಪತ್, ಬೋಹರ್ ಗ್ರಾಮ : ತನ್ನ ಅತ್ತಿಗೆಯ ಮಗಳನ್ನ ನೀರಿನಲ್ಲಿ ಮುಳುಗಿಸಿ ಕೊಲೆ.
  • 2023 — ಎರಡನೇ ಕೊಲೆ : ತನ್ನ ಸ್ವಂತ ಮಗನನ್ನೇ ನೀರಿನಲ್ಲಿ ಮುಳುಗಿಸಿ ಕೊಲೆ.
  • 2025 — ಮೂರನೇ ಕೊಲೆ : ತಾಯಿಯ ಮನೆಯಲ್ಲಿ ತನ್ನ ಸೊಸೆಯನ್ನು ಮುಳುಗಿಸಿ ಕೊಂದಳು.
  • 2025 ಡಿಸೆಂಬರ್ 1 ; ನಾಲ್ಕನೇ ಕೊಲೆ : ಪಾಣಿಪತ್‌ನ ನೌಲ್ತಾ ಗ್ರಾಮದ ಮದುವೆಯಲ್ಲಿ ತನ್ನ ಅತ್ತಿಗೆಯ ಮಗಳು ವಿಧಿಯನ್ನು ಕೊಂದ ಘಟನೆ.

ಮೊಕದ್ದಮೆ ದಾಖಲಿಸಿ ಮುಂದಿನ ತನಿಖೆ ಆರಂಭ :

ಆರೋಪಿ ಮಹಿಳೆ (Woman) ಯನ್ನು ತಕ್ಷಣ ಬಂಧಿಸಿದ ಪೊಲೀಸರು, ಘಟನೆಗಳ ಪೂರಕ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಮಾನಸಿಕ ಸ್ಥಿತಿಯ ಪರಿಶೀಲನೆ ಸೇರಿದಂತೆ ಹೆಚ್ಚಿನ ತನಿಖೆ ಮುಂದುವರಿಸುತ್ತಿದ್ದಾರೆ. ಈ ದಾರುಣ ಹತ್ಯೆಗಳ ಸರಣಿ ಪಾಣಿಪತ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ವಿಡಿಯೋ :


ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

lkg kids : crying-to-call-mom

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿರುವ ಒಂದು ಪುಟ್ಟ ಮಕ್ಕಳ (Kids) ವಿಡಿಯೋ, ಆರಂಭಿಕ ಶಿಕ್ಷಣದ ಹೆಸರಿನಲ್ಲಿ ಚಿಕ್ಕಮಕ್ಕಳ ಮೇಲೆ ನಡೆಯುತ್ತಿರುವ ಒತ್ತಡದ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುಮಾರು ಎರಡು ರಿಂದ ಮೂರು ವರ್ಷದ ಇಬ್ಬರು ಮಕ್ಕಳನ್ನು ಒಳಗೊಂಡಿರುವ ಈ ದೃಶ್ಯ, ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ.

ವಿಡಿಯೋದಲ್ಲಿ, ತರಗತಿಯ ಕಿಟಕಿಯ ಹಿಂದೆ ನಿಂತಿರುವ ಇಬ್ಬರು ಪುಟ್ಟ ಮಕ್ಕಳು (Kids) ಕಬ್ಬಿಣದ ಗ್ರೀಲ್ ಹಿಡಿದು ಕಣ್ಣೀರು ಹಾಕುತ್ತಿರುವುದು ಕಂಡುಬರುತ್ತದೆ.

ಭಯ ಮತ್ತು ಅಸಹಾಯಕತೆಯಿಂದ ನಡುಗುತ್ತಿರುವಂತೆ ಕಂಡುಬರುವ ಮಕ್ಕಳಲ್ಲಿ ಒಬ್ಬನು, “ನನ್ನ ಅಮ್ಮನಿಗೆ ಫೋನ್ ಮಾಡಿ… ನನ್ನ ಅಮ್ಮನ ಹೆಸರು ಅಮ್ಮ” ಎಂದು ಶಿಕ್ಷಕರಿಗೆ ಮನವಿ ಮಾಡುತ್ತಾನೆ. ಇನ್ನೊಂದು ಮಗು ಮೌನವಾಗಿ ಅಳುತ್ತಾ ಹೊರಗೆ ನೋಡುತ್ತಿರುವುದು ಹೃದಯ ಕಲುಕುವಂತಿದೆ.

ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.

ಮಕ್ಕಳು ಶಿಕ್ಷಕರನ್ನು ಕೇಳಿಕೊಂಡು, “ನಮಗೆ ಹಾಲು ಕುಡಿಯಲು ಮನೆಗೆ ಕಳುಹಿಸಿ” ಎಂದು ವಿನೀತವಾಗಿ ಹೇಳುವ ದೃಶ್ಯ, ನೆಟ್ಟಿಗರ ಮನ ಸೆಳೆದಿದೆ. ಮಕ್ಕಳ (Kids) ಮಾತುಗಳಲ್ಲಿ ಕಾಣಿಸಿಕೊಂಡ ನಿರಪರಾಧಿತನ ಮತ್ತು ಆತಂಕವು, ಪ್ರಾರಂಭಿಕ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

2–3 ವರ್ಷದ ಮಕ್ಕಳಿಗೆ ಶಾಲೆ ಬೇಡವೇ? ನೆಟ್ಟಿಗರ ಪ್ರಶ್ನೆ :

ವಿಡಿಯೋ ವೈರಲ್ ಆದ ಬಳಿಕ, 2–3 ವರ್ಷದ ಬಾಲಕ–ಬಾಲಕಿಯರನ್ನು playschool ಅಥವಾ LKG ಗೆ ಕಳುಹಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳ ಮಳೆ ಹರಿದುಬಂದಿದೆ.
ಅನೇಕರು ಈ ವಯಸ್ಸಿನಲ್ಲೇ ಮಕ್ಕಳನ್ನು ತರಗತಿಗೆ ಬಲವಂತವಾಗಿ ಕುಳ್ಳಿರಿಸುವುದು ಅವರ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದ್ದಾರೆ.

ಒಬ್ಬ ನೆಟ್ಟಿಗ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಾ, ಈ ವಯಸ್ಸಿನಲ್ಲಿರುವ ಮಕ್ಕಳನ್ನು ಮಕ್ಕಳು (Kids) ಶಾಲೆಗೆ ಕಳುಹಿಸುವುದು ಅವರಿಗೆ ಆಘಾತಕಾರಿ ಅನುಭವ. ಅವರು ಕುಟುಂಬದ ಜೊತೆ, ವಿಶೇಷವಾಗಿ ತಾಯಿಯ ಆರೈಕೆಯಲ್ಲಿ ಇರಬೇಕಾದ ಸಮಯ ಇದು.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಇಂದಿನ ನ್ಯೂಕ್ಲಿಯರ್ ಕುಟುಂಬ (ತಾಯಿ, ತಂದೆ ಮತ್ತು ಮಕ್ಕಳಿಂದ ಮಾತ್ರ ಕೂಡಿರುವ ಸಣ್ಣ ಕುಟುಂಬ) ವ್ಯವಸ್ಥೆಯಲ್ಲಿ, ಪೋಷಕರು ಮಕ್ಕಳನ್ನು ಬೇಗನೇ ಶಾಲೆಗೆ ಕಳುಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕೆಲವರು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರ, “ಬೆಚ್ಚಿಬೀಳಿಸುವ ದೃಶ್ಯ… ಕಣ್ಣೀರು ಬರಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಪೋಷಕರಿಗೆ, ಶಿಕ್ಷಕರಿಗೆ ಹೊಸ ಚಿಂತನೆ :

ಈ ವಿಡಿಯೋ ಹೊರಬಂದ ನಂತರ, ನೂತನ ಶಿಕ್ಷಣ ವ್ಯವಸ್ಥೆಯಲ್ಲಿ ಚಿಕ್ಕಮಕ್ಕಳ ಭಾವನಾತ್ಮಕ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪರಿಸರ, ಆರೈಕೆ ಮತ್ತು ಸಮಯ ನೀಡುವ ಅಗತ್ಯವನ್ನು ಪೋಷಕರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.

ವಿಡಿಯೋ :

Courtesy : Udayavavi

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments