Wednesday, September 17, 2025

Janaspandhan News

HomeCrime NewsWife : ಪತಿಯ ಹತ್ಯೆಗೈದು ಮೃತದೇಹ ಮನೆ ಮುಂದೆ ಎಸೆದ ಪತ್ನಿ.!
spot_img
spot_img
spot_img

Wife : ಪತಿಯ ಹತ್ಯೆಗೈದು ಮೃತದೇಹ ಮನೆ ಮುಂದೆ ಎಸೆದ ಪತ್ನಿ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪತ್ನಿ (Wife) ಯೋರ್ವಳು, ತನ್ನ ಪತಿಯನ್ನು ಹತ್ಯೆಗೈದು ನಂತರ ಮೃತದೇಹವನ್ನು ಮನೆ ಮುಂದೆ ಎಸೆದು ಹೋದ ಮಾನವೀಯತೆಯ ಹದಗೆಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಇಂತಹ ಹದಗೆಟ್ಟ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಇಲ್ಲಿ ಪತ್ನಿ (Wife) ಯೊಬ್ಬಳು ತನ್ನ ತಮ್ಮನ ಸಹಾಯದಿಂದ ಗಂಡನನ್ನು ಭೀಕರವಾಗಿ ಹತ್ಯೆ ಮಾಡಿ, ನಂತರ ಆತನ ಮೃತದೇಹವನ್ನು ನೇರವಾಗಿ ಗಂಡನ ಮನೆಯ ಮುಂದೆ ಎಸೆದಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

ಇದನ್ನು ಓದಿ : Indian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!

ಮೃತ ದುರ್ದೈವಿ ಪತಿಯನ್ನು ನಂದ್ಯಾಲ ಜಿಲ್ಲೆಯ ನೂನೆಪಲ್ಲೆ ಗ್ರಾಮದ ನಿವಾಸಿ ರಾಮಣಯ್ಯ (50) ಎದು ಗುರುತಿಸಲಾಗಿದ್ದು, ಪತ್ನಿ (Wife) ರಮಣಮ್ಮ ಮತ್ತು ಆಕೆಯ ತಮ್ಮ ರಾಮಯ್ಯ ಈ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗುತ್ತಿದೆ.

ಘಟನೆ ಹೀಗಿದೆ :

ರಾಮಣಯ್ಯ ಕಳೆದ 20 ವರ್ಷಗಳಿಂದ ಪಿಡುಗುರಲ್ಲ ಗ್ರಾಮದ ರಮಣಮ್ಮ ಎಂಬುವವರೊಂದಿಗೆ ವಿವಾಹಿತರಾಗಿದ್ದು, ದಂಪತಿಗಳಿಗೆ ಜ್ಯೋತಿ, ಚಂದನ ಮತ್ತು ಸಾಯಿ ಎಂಬ ಮೂರು ಮಕ್ಕಳು. ಕೆಲ ವರ್ಷಗಳಿಂದ ದಂಪತಿಯ ನಡುವೆ ಗಂಭೀರ ಮನಸ್ತಾಪ ಉಂಟಾಗಿದ್ದ ಹಿನ್ನೆಲೆಯಲ್ಲಿ, ರಮಣಮ್ಮ ತನ್ನ ತವರುಮನೆ ಪಿಡುಗುರಲ್ಲ ಗ್ರಾಮದಲ್ಲಿ ವಾಸಿಸುತ್ತಿದ್ದಳು.

ಇತ್ತೀಚೆಗೆ ಪತ್ನಿ (Wife) ಯನ್ನು ಮನೆಗೆ ಕರೆತರಲು ರಾಮಣಯ್ಯ ಪಿಡುಗುರಲ್ಲ ಗ್ರಾಮಕ್ಕೆ ಹೋಗಿದ್ದ. ಅಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಪತ್ನಿ (Wife) ರಮಣಮ್ಮ ಮತ್ತು ಆಕೆಯ ಸಹೋದರ ರಾಮಯ್ಯ ಇಬ್ಬರು ರಾಮಣಯ್ಯನ ಮೇಲೆ ಕಣ್ಣಿಗೆ ಕಾರದ ಪುಡಿ ಎರಚಿ, ನಂತರ ಕತ್ತು ಹಿಸುಕಿಕೊಂಡು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : BSF : 3,588 ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಹತ್ಯೆಯ ಬಳಿಕ ಅವರು ರಾಮಣಯ್ಯನ ಮೃತದೇಹವನ್ನು ನಂದ್ಯಾಲದ ರಾಮಣಯ್ಯನ ಮನೆಯ ಎದುರು ಎಸೆದು ಪರಾರಿಯಾದ್ದಾರೆ. ಘಟನೆ ಕಂಡ ಮಕ್ಕಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು (Wife & brother in law) ಇಬ್ಬರನ್ನೂ ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”

Kidney

ಜನಸ್ಪಂದನ ನ್ಯೂಸ್‌, ಅರೋಗ್ಯ : ಬೆಳಿಗ್ಗೆಯ ಈ 4 ಲಕ್ಷಣಗಳು ಕಂಡು ಬಂದರೆ ಅವುಗಳನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಅವು ಮೂತ್ರಪಿಂಡ (Kidney) ದ ಆರಂಭಿಕ ಸಮಸ್ಯೆಯ ಸೂಚನೆಗಳಾಗಿರಬಹುದು.! ಹಾಗಾದ್ರೆ ಆ ಲಕ್ಷಣಗಳಾವವು.? ಬನ್ನಿ ಅದರ ಬಗ್ಗೆ ತಿಳಿಯೋಣ.

ದೈನಂದಿನ ಜೀವನಶೈಲಿಯಲ್ಲಿ ನಾವು ಅತ್ಯಂತ ಕಡಿಮೆ ಗಮನ ಕೊಡುವ ಅಂಗಗಳಲ್ಲಿ ಮೂತ್ರಪಿಂಡ (Kidney) ವೂ ಒಂದು. ರಕ್ತವನ್ನು ಶುದ್ಧಗೊಳಿಸುವ ಮೂಲಕ ದೇಹದಲ್ಲಿನ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಪ್ರಮುಖ ಕೆಲಸ ಮಾಡುವುದೇ ಈ ಅಂಗ. ಆದರೆ, ಮೊತ್ತಮೊದಲಿಗೆ ಗುರುತಿಸಲಾಗದ ಕೆಲವು ಸಣ್ಣ ಲಕ್ಷಣಗಳೇ ಮುಂದೆ ಜೀವಘಾತಕ ಸಮಸ್ಯೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನು ಓದಿ : Indian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!

ಫೋರ್ಟಿಸ್ ಆಸ್ಪತ್ರೆ, ನೋಯ್ಡಾದ ಮೂತ್ರಪಿಂಡ (Kidney) ವಿಭಾಗದ ಹೆಚ್ಚುವರಿ ನಿರ್ದೇಶಕಿ ಡಾ. ಅನುಜಾ ಪೋರ್ವಾಲ್ ಅವರ ಅಭಿಪ್ರಾಯದಂತೆ, ಕೆಟ್ಟ ಆಹಾರ ನಿಯಮಗಳು ಮತ್ತು ಅನಾರೋಗ್ಯಕರ ಜೀವನಶೈಲಿಯು ಮೂತ್ರಪಿಂಡದ ಮೇಲೆ ಹೆಚ್ಚಾದ ಒತ್ತಡ ಉಂಟುಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಯು ಶೀಘ್ರಗತಿಯಲ್ಲಿ ಹೆಚ್ಚುತ್ತಿದೆ.

ಮೂತ್ರಪಿಂಡ (Kidney) ದ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿರುವ ಸೂಚನೆಗಳೇನು?

ಅನುಜಾ ಪೋರ್ವಾಲ್ ಅವರ ಪ್ರಕಾರ, ಮೂತ್ರಪಿಂಡ (Kidney) ದ ದೋಷಗಳು ದೇಹದಲ್ಲಿ ಕೆಲ ಸ್ಪಷ್ಟವಾದ ಬದಲಾವಣೆಗಳ ಮೂಲಕ ಸೂಚನೆ ನೀಡುತ್ತವೆ. ಅವುಗಳಲ್ಲಿ ಪ್ರಮುಖವಾಗಿರುವವು:

1. ಬೆಳಿಗ್ಗೆಯ ದೌರ್ಬಲ್ಯ ಮತ್ತು ಆಯಾಸ :

ನೀವು ಬೆಳಿಗ್ಗೆ ಎದ್ದ ಕೂಡಲೆ ಅಸಹಜ ದಣಿವನ್ನು ಅನುಭವಿಸುತ್ತಿದ್ದರೆ, ಅದು ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯ ಲಕ್ಷಣವಾಗಿರಬಹುದು. ವಿಷಕಾರಿ ತತ್ವಗಳು ರಕ್ತದಲ್ಲಿ ಸಂಗ್ರಹವಾಗುತ್ತಿದ್ದರಿಂದ ದೇಹದಲ್ಲಿ ಆಯಾಸ ಹಾಗೂ ಶಕ್ತಿ ಕೊರತೆಯುಂಟಾಗುತ್ತದೆ.

2. ಮೂತ್ರದಲ್ಲಿ ಬಣ್ಣ ಮತ್ತು ಪ್ರಮಾಣದ ಬದಲಾವಣೆ :

ಹಲವಾರು ಸಂದರ್ಭಗಳಲ್ಲಿ ಬೆಳಿಗ್ಗೆಯ ಮೊದಲ ಮೂತ್ರವೇ ನಿಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಮುಖ ಸೂಚನೆ ನೀಡುತ್ತದೆ. ಮೂತ್ರದಲ್ಲಿ ಹಳದಿ ಬಣ್ಣ ತೀವ್ರವಾಗಿದ್ದರೆ ಅಥವಾ ಗಾಢವಾದ ನೊರೆ ಕಾಣುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನು ಓದಿ : BOB ನೇಮಕಾತಿ : 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
3. ಬಾಯಾರಿಕೆ ಮತ್ತು ಹೊಟ್ಟೆ ಸೆಳೆತ :

ಅತಿಯಾದ ಬಾಯಾರಿಕೆಯಾಗುವುದು ದೇಹದಲ್ಲಿ ನೀರಿನ ಅಸಮತೋಲನದ ಪ್ರತೀಕವಾಗಿದೆ. ಜೊತೆಗೆ ಹೊಟ್ಟೆ ಊತ ಅಥವಾ ಸೆಳೆತವೂ ಮೂತ್ರಪಿಂಡದ ಕಾರ್ಯದಲ್ಲಿ ಸಮಸ್ಯೆ ಉಂಟಾದಾಗ ಕಂಡುಬರುವ ಲಕ್ಷಣಗಳಾಗಿವೆ.

4. ಚರ್ಮದ ತುರಿಕೆ ಅಥವಾ ದದ್ದುಗಳು :

ವಿಷಕಾರಿ ತತ್ವಗಳ ಸಂಗ್ರಹಣೆಯಿಂದಾಗಿ ಚರ್ಮದ ಮೇಲೆ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳಬಹುದು. ಬೆಳಿಗ್ಗೆ ಎದ್ದು ತುರಿಕೆ ಅಥವಾ ದದ್ದು ಕಾಣಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.

ಸಮಯಕ್ಕೆ ಚಿಕಿತ್ಸೆ ಅತಿ ಮುಖ್ಯ :

ಮೂತ್ರಪಿಂಡ (Kidney) ಸಂಬಂಧಿತ ಯಾವುದೇ ಸಮಸ್ಯೆಯನ್ನು ಮುಂಚಿತವಾಗಿಯೇ ಗುರುತಿಸಿ ಚಿಕಿತ್ಸೆ ಪಡೆಯುವುದರಿಂದ ಗಂಭೀರ ಸ್ಥಿತಿಯನ್ನು ತಪ್ಪಿಸಬಹುದಾಗಿದೆ. ಆದ್ದರಿಂದ ದೈನಂದಿನ ಚಟುವಟಿಕೆಗಳಲ್ಲಿ ಈ ರೀತಿಯ ಲಕ್ಷಣಗಳನ್ನು ಗಮನಿಸಿ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments