ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪಾಕ್‌ ಸೇನಾ ಟ್ರಕ್‌ಗಳು ಕ್ವೆಟ್ಟಾಗೆ (Quetta)ಬರುತ್ತಿದ್ದಂತೆಯೇ ಸ್ನೈಪರ್‌ ರೈಫ‌ಲ್‌ ಮತ್ತು ಐಇಡಿ (IED) ದಾಳಿ ಮಾಡಿದ್ದು, ಕನಿಷ್ಠ 10 ಸೈನಿಕರು ಮೃತರಾಗಿದ್ದಾರೆಂದು ತಿಳಿದು ಬಂದಿದೆ.

ಕಳೆದ ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಲಾಮ್‌ನಲ್ಲಿ 26 ಸಾಮಾನ್ಯ ನಾಗರೀಕರ (Ordinary citizen) ನ್ನು ಹತ್ಯೆ ಮಾಡಿದ ಘಟನೆಯಲ್ಲಿ ಪಾಕಿಸ್ತಾನದ ಕೈವಾಡ (hand) ಇರುವುದು ಗೊತ್ತಾದ ಬೆನ್ನಲ್ಲಿಯೇ ಪಾಕಿಸ್ತಾನಕ್ಕೆ ಯುದ್ಧಾಂತಕ ಶುರುವಾಗಿದೆ.

ಇದನ್ನು ಓದಿ : ತಂದೆಯ Pistolನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಯುವಕ.!

ಈ ಮಧ್ಯೆ ಪಾಕಿಸ್ತಾನಕ್ಕೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ (Balochistan Liberation Army) ಯಿಂದಲೂ ಏಟಿನ ಮೇಲೆ ಏಟು ಬೀಳುತ್ತಿದೆ. ಬಲೂಚಿಸ್ತಾನದ ಟರ್ಬತ್ ಜಿಲ್ಲೆಯ ಸ್ಯಾಟಲೈಟ್ ಪಟ್ಟಣ (satellite town) ದ ವಿಮಾನ ನಿಲ್ದಾಣ ರಸ್ತೆಯಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ವಾಹನ (Escort vehicle) ಗಳ ವೇಳೆ ಶುಕ್ರವಾರ ದಾಳಿ ನಡೆದಿದೆ.

ಪಹಲ್ಲಾಮ್‌ನಲ್ಲಿ 26 ನಾಗರಿಕರ ಹತ್ಯೆಗೆ ಭಾರತ ಈವರೆಗೂ ಪಾಕಿಸ್ತಾನದ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿಲ್ಲವಾದರೂ ಪಾಕಿಸ್ತಾನಕ್ಕೆ ಮಾತ್ರ ಭಾರತದ ಮುಂದಿನ ಕ್ರಮದ ಕುರಿತಾಗಿ ಭಯ (fear) ಶುರುವಾಗಿದೆ.

ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!

ಬಲೂಚ್‌ ಲಿಬರೇಷನ್‌ ಆರ್ಮಿ ಪ್ರಕಟಣೆಯಲ್ಲಿ ʼನಮ್ಮ ಸ್ವಾತಂತ್ರ್ಯ ಹೋರಾಟಗಾರರು ಆಕ್ರಮಿತ ಪಾಕಿಸ್ತಾನಿ ಸೇನೆ (occupying Pakistani army) ಯ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದು, ನಮ್ಮ ಪ್ರತಿರೋಧದ ಚಳವಳಿಯ ಭಾಗವಾಗಿ ಈ ದಾಳಿ ನಡೆಸಲಾಗಿದೆ’ ಎಂದು ತಿಳಿಸಿದೆ.

ಪಾಕ್‌ ಸೇನಾ ಟ್ರಕ್‌ಗಳ ಮೇಲೆ ದಾಳಿ ಮಾಡಿದ್ದಾಗ ಅದರಲ್ಲಿದ್ದ ಎಲ್ಲ 10 ಮಂದಿ ಸೈನಿಕರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಹೇಳಲಾಗಿದೆ. ಬಲೂಚ್‌ ಲಿಬರೇಷನ್‌ ಆರ್ಮಿ ಇದರ ವಿಡಿಯೋವನ್ನು ಕೂಡ ರಿಲೀಸ್‌ (Release) ಮಾಡಿದ್ದು, ಮಿಲಿಟರಿ ಟ್ರಕ್‌ನ ಮೇಲೆ ನೇರವಾಗಿ ದಾಳಿ ನಡೆಸಲಾಗಿದೆ.

ಇದನ್ನು ಓದಿ : ಕರ್ನಾಟಕ AYUSH ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಭಾರತದಿಂದ ದಾಳಿಗೂ ಮುನ್ನವೇ ಪಾಕಿಸ್ತಾನದ ಸೈನಿಕರಿಗೆ ಬಲೂಚ್‌ ಲಿಬರೇಷನ್‌ ಆರ್ಮಿಯ ಆತಂಕ ಶುರುವಾಗಿದೆ.

ವಿಡಿಯೋ :

ಹಿಂದಿನ ಸುದ್ದಿ : ಆಕಸ್ಮಿಕವಾಗಿ ಪಾಕ್ ಗಡಿ ದಾಟಿದ್ದ BSF ಯೋಧನನ್ನು ಬಂಧಿಸಿದ ಪಾಕ್‌ ಸೇನೆ.!

ಜನಸ್ಪಂದನ ನ್ಯೂಸ್‌, ನವದೆಹಲಿ : ಆಕಸ್ಮಿಕವಾಗಿ ಪಾಕ್ ಗಡಿ ದಾಟಿದ್ದ BSF ಯೋಧನನ್ನು ಪಾಕ್‌ ಸೇನೆ ಬಂಧಿಸಇರುವ ಘಟನೆ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ (Pahalgam) ನಲ್ಲಿ ನಡೆದ ಕ್ರೂರ ಕೃತ್ಯದ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ಉಂಟಾಗಿದೆ.

ಇದನ್ನು ಓದಿ : Video : ಲಿಫ್ಟ್‌ನಲ್ಲಿ ಲಿಪ್ -‌ ಲಾಕ್ ಮಾಡಿದ ಪ್ರೇಮಿಗಳು ; ಛೀ ಅಂದ ನೆಟ್ಟಿಗರು.!

ಏತನ್ಮಧ್ಯೆ, ಪಂಜಾಬ್ ಗಡಿಯಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನ ಗಡಿಯನ್ನು ದಾಟಿದ BSF ಸೈನಿಕನನ್ನು ಪಾಕಿಸ್ತಾನದ ಗಡಿ ಭದ್ರತಾ ಪಡೆ (BSF) ರೇಂಜರ್‌ಗಳು ಬಂಧಿಸಿದ್ದಾರೆ.

ಭಾರತೀಯ ಗಡಿ ಭದ್ರತಾ ಪಡೆ (BSF) ಸೈನಿಕ ಪಿಕೆ ಸಿಂಗ್ ಅವರು ಬಿಎಸ್‌ಎಫ್ ಪೋಸ್ಟ್ ಜಲೋಕೆ ಡೋನಾ ಬಳಿಯ ಶೂನ್ಯ ರೇಖೆಯನ್ನು ಆಕಸ್ಮಿಕವಾಗಿ ದಾಟಿ ಪಾಕಿಸ್ತಾನಿ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಪಾಕಿಸ್ತಾನಿ ರೇಂಜರ್‌ಗಳು ಗಡಿಯಲ್ಲಿ ಅವರನ್ನು ಬಂಧಿಸಿದ್ದಾರೆ.

ಇದನ್ನು ಓದಿ : Belagavi : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.!

ಪಾಕಿಸ್ತಾನಿ ಮಾಧ್ಯಮಗಳು ಸೈನಿಕನನ್ನು ಬಂಧಿಸುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಿವೆ. ಏತನ್ಮಧ್ಯೆ, ಸೈನಿಕನನ್ನು ಬಿಡುಗಡೆ ಮಾಡಲು ಬಿಎಸ್‌ಎಫ್ ಮತ್ತು ಪಾಕಿಸ್ತಾನಿ ರೇಂಜರ್ಸ್ (Pakistani Rangers) ಅಧಿಕಾರಿಗಳ ನಡುವೆ ಸಭೆ ನಡೆಯುತ್ತಿದೆ.

ಬುಧವಾರ, ಏಪ್ರಿಲ್ 23 ರಂದು, ಪಂಜಾಬ್‌ನ ಫಿರೋಜ್‌ಪುರದಲ್ಲಿ ಕರ್ತವ್ಯದಲ್ಲಿರುವಾಗ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿಯನ್ನು (International border) ದಾಟಿದ ನಂತರ ಗಡಿ ಭದ್ರತಾ ಪಡೆ (BSF) ಜವಾನನನ್ನು ಪಾಕಿಸ್ತಾನಿ ರೇಂಜರ್‌ಗಳು ಬಂಧಿಸಿದ್ದಾರೆ.

ಇದನ್ನು ಓದಿ : Video : ಸರ್ಜಿಕಲ್ ಸೂಜಿ ಮತ್ತು ದಾರ ಬಳಸಿ ಚಪ್ಪಲಿ ಹೊಲಿದ ವೈದ್ಯ ವಿದ್ಯಾರ್ಥಿ.!

ಜವಾನನ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ಧ್ವಜ ಸಭೆ ಕರೆಯಲಾಗಿದೆ ಎಂದು ಹಿರಿಯ BSF ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ANI ವರದಿ ಮಾಡಿದೆ.

ಬಿಎಸ್‌ಎಫ್‌ನಲ್ಲಿ ಕಾನ್‌ಸ್ಟೆಬಲ್ (Constable) ಆಗಿರುವ ಪಿ.ಕೆ.ಸಿಂಗ್ (P.K. Singh) ಅವರನ್ನು ಬಂಧಿಸಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಮಿಲಿಟರಿ ಉಪಕರಣಗಳೊಂದಿಗೆ ವಶಪಡಿಸಿಕೊಳ್ಳಲಾಗಿದೆ. ಅವರು ಈಗ ಪಾಕಿಸ್ತಾನಿ ಸೇನೆಯ ವಶದಲ್ಲಿದ್ದಾರೆ.

ಇದನ್ನು ಓದಿ : Health : ಕಪ್ಪು ಕಲೆ ಇರುವ ಈರುಳ್ಳಿಯನ್ನು ತಿನ್ನಬಹುದೇ.?

ಈ ಘಟನೆಯನ್ನು ಖಂಡಿಸಿರುವ ಭಾರತ ತಕ್ಷಣವೇ ಯೋಧನನ್ನ ಬಿಡುಗಡೆ ಮಾಡಲು ಎಚ್ಚರಿಕೆ ನೀಡಿದೆ. ಈ ಬಗ್ಗೆ ಪಾಕಿಸ್ತಾನ ರೇಂಜರ್ಸ್​ ಮುಖ್ಯಸ್ಥರ ಜೊತೆ BSF ಮುಖ್ಯಸ್ಥರು ತುರ್ತು ಸಭೆ ನಡೆಸಿದ್ದಾರೆ. ತಕ್ಷಣವೇ ಭಾರತೀಯ ಯೋಧನನ್ನ ಬಿಡುವಂತೆ ಭಾರತ ತಾಕೀತು ಮಾಡಿದೆ.