ಗುರುವಾರ, ನವೆಂಬರ್ 27, 2025

Janaspandhan News

HomeGeneral Newsಹೆದ್ದಾರಿಯಲ್ಲೇ ಮಲಗಿದ್ದ Tiger ; 30 ನಿಮಿಷ ವಾಹನ ಸಂಚಾರ ಸ್ಥಗಿತ!
spot_img
spot_img
spot_img

ಹೆದ್ದಾರಿಯಲ್ಲೇ ಮಲಗಿದ್ದ Tiger ; 30 ನಿಮಿಷ ವಾಹನ ಸಂಚಾರ ಸ್ಥಗಿತ!

- Advertisement -

ಜನಸ್ಪಂದನ ನ್ಯೂಸ್‌, ಮುಂಬೈ : ಮಹಾರಾಷ್ಟ್ರದ ಚಂದ್ರಾಪುರ–ಮುಲ್ ಹೆದ್ದಾರಿಯಲ್ಲಿ ಅಚ್ಚರಿ ಹುಟ್ಟಿಸುವ ಘಟನೆ ದಾಖಲಾಗಿದೆ. ಬೃಹತ್ ಗಾತ್ರದ ಹುಲಿ (Tiger) ಎರಡು ಎತ್ತುಗಳನ್ನು ಬೇಟೆಯಾಡಿದ ನಂತರ, ಹೆದ್ದಾರಿಯಲ್ಲೇ ಮಲಗಿ ವಿಶ್ರಾಂತಿ ಪಡೆಯುತ್ತಿದ್ದುದನ್ನು ಸ್ಥಳೀಯರು ಕಂಡು ಬೆಚ್ಚಿಬಿದ್ದರು.

ಈ ಪ್ರದೇಶವು ತಡೋಬಾ–ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದ (TATR) ಬಫರ್ ವಲಯಕ್ಕೆ ಹೊಂದಿಕೊಂಡಿದ್ದು, ಇಲ್ಲಿ ವನ್ಯಜೀವಿಗಳ ಸಂಚಾರ ಸಾಮಾನ್ಯವಾಗಿದ್ದರೂ, ರೋಡ್ ಮಧ್ಯೆ ಕುಳಿತುಕೊಳ್ಳುವ ಘಟನೆ ವಿರಳ.

ಇದನ್ನು ಓದಿ : ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder.
‘ಮಾಮಾ ಮೆಲ್’ ಹೆಸರಿನ ಹುಲಿ – ದಿಟ್ಟ ಸ್ವಭಾವಕ್ಕೆ ಪ್ರಸಿದ್ಧ :

ಮಾಮಾ ಮೆಲ್’ ಎಂಬ ಹೆಸರಿನ ಈ ಹುಲಿ (Tiger), ತನ್ನ ಬಲಿಷ್ಠ ದೇಹ ಹಾಗೂ ನಿರ್ಭಯ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ರಸ್ತೆ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೂ, ಜನರ ಶಬ್ದ ಅಥವಾ ಚಲನೆ ಈ ಹುಲಿಗೆ ಯಾವುದೇ ತೊಂದರೆ ಆಗಲಿಲ್ಲ. ಅದು ಸಮಯದಲ್ಲಿ ನಿರಾಳವಾಗಿ ರಸ್ತೆಯ ಮಧ್ಯೆ ಮಲಗಿ ವಿಶ್ರಾಂತಿ ಮುಂದುವರಿಸಿತು.

ವಾಹನ ಸಂಚಾರ ಅರ್ಧ ಗಂಟೆ ಸ್ಥಗಿತ :

ಹುಲಿ (Tiger) ರಸ್ತೆ ಮಧ್ಯೆ ಕುಳಿತಿದ್ದರಿಂದ, ಚಂದ್ರಾಪುರದಿಂದ ಮುಲ್ ಹಾಗೂ ಮುಲ್‌ನಿಂದ ಚಂದ್ರಾಪುರಕ್ಕೆ ಹೋಗುವ ವಾಹನಗಳ ಸಂಚಾರವನ್ನು ಅರಣ್ಯ ಅಧಿಕಾರಿಗಳು ತಾತ್ಕಾಲಿಕವಾಗಿ ನಿಲ್ಲಿಸಿದರು.

  • ವಾಹನಗಳ ಮತ್ತು ಹುಲಿಯ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಯಿತು
  • ಜನರು ಮೊಬೈಲ್‌ ತೆಗೆದು ಹತ್ತಿರ ಹೋಗದಂತೆ ಎಚ್ಚರಿಸಲಾಯಿತು
  • ಪ್ರಾಣಿಗೆ ಅಡ್ಡಿಯಾಗದಂತೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ
ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!
ಹುಲಿ (Tiger) ವಿಡಿಯೋ :
ತಾನಾಗಿಯೇ ಕಾಡಿಗೆ ಮರಳಿದ ಹುಲಿ :

ಸುಮಾರು 30 ನಿಮಿಷಗಳ ಕಾಲ ಹೆದ್ದಾರಿ ಸಂಪೂರ್ಣ ನಿಶ್ಶಬ್ದವಾಗಿತ್ತು. ಬಳಿಕ ಹುಲಿ ನಿಧಾನವಾಗಿ ಎದ್ದುಕೊಂಡು, ತನ್ನಷ್ಟಕ್ಕೆ ತಾನೇ ಕಾಡಿನ ದಿಕ್ಕಿಗೆ ನಡೆದು ಹೊಗಿತು. ಅರಣ್ಯ ಇಲಾಖೆ ಹುಲಿ (Tiger) ಯ ಚಲನವಲನವನ್ನು ಗಮನಿಸಿ, ಪ್ರಯಾಣಿಕರಿಗೆ ಸುರಕ್ಷತೆ ನೀಡಿದ ಬಳಿಕ ಸಂಚಾರವನ್ನು ಮರು ಪ್ರಾರಂಭಿಸಿತು.


Basketball ಕಂಬ ಬಿದ್ದು ರಾಷ್ಟ್ರೀಯ ಆಟಗಾರ ಸಾವು ; ದೃಶ್ಯ CCTV ಯಲ್ಲಿ ಸೆರೆ.

ಹೆದ್ದಾರಿಯಲ್ಲೇ ಮಲಗಿದ್ದ Tiger ; 30 ನಿಮಿಷ ವಾಹನ ಸಂಚಾರ ಸ್ಥಗಿತ!

ಜನಸ್ಪಂದನ ನ್ಯೂಸ್‌, ಚಂಡೀಗಡ : ಹರಿಯಾಣ ರಾಜ್ಯದ ರೋಹ್ಟಕ್‌ನಲ್ಲಿ ನಡೆದ ದಾರುಣ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅಭ್ಯಾಸದ ವೇಳೆ ಬ್ಯಾಸ್ಕೆಟ್‌ಬಾಲ್ (Basketball) ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರನೊಬ್ಬ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದುರಂತವು ಮಂಗಳವಾರ ಲಖನ್ ಮಜ್ರಾ ಗ್ರಾಮದ ಕ್ರೀಡಾ ಸಂಕೀರ್ಣದಲ್ಲಿ ಸಂಭವಿಸಿದ್ದು, ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ 16 ವರ್ಷದ ಹಾರ್ದಿಕ್ ಮೃತಪಟ್ಟಿದ್ದಾನೆ. ಘಟನೆ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.
ಸಿಸಿಟಿವಿ ದೃಶ್ಯ ಏನು ಹೇಳುತ್ತದೆ?

ವಿಡಿಯೋದಲ್ಲಿ ಹಾರ್ದಿಕ್ ಬ್ಯಾಸ್ಕೆಟ್ ಹೂಪ್ ಕಡೆ ಜಂಪ್ ಮಾಡಿ ನೇತಾಡಲು ಯತ್ನಿಸುತ್ತಿದ್ದಾಗ, ಹೂಪ್ ಜೊತೆಗೆ ಕಬ್ಬಿಣದ ಕಂಬವೂ ಒತ್ತಡಕ್ಕೆ ಒಳಗಾಗಿ ಕುಸಿದುಬಿದ್ದಿದೆ. ಕಂಬದ ಅರ್ಧ ಭಾಗ ಮೊದಲು ಎದೆಯ ಮೇಲೆ ಬಿದ್ದಿದ್ದು, ನಂತರ ಸಂಪೂರ್ಣ ಕಂಬ ನೆಲಕ್ಕೆ ಬಿದ್ದ ಕ್ಷಣವೂ ಸಹ ಸಿಸಿಟಿವಿಯಲ್ಲಿ ದಾಖಲಾಗಿದೆ.

ಘಟನೆ ಸಂಭವಿಸುತ್ತಿದಂತೆಯೇ ಅಲ್ಲಿದ್ದ ಇತರೆ ಬ್ಯಾಸ್ಕೆಟ್‌ಬಾಲ್ (Basketball) ಆಟಗಾರರು ಕೂಡಲೇ ಕಂಬವನ್ನು ಎತ್ತಿ ಹಾರ್ದಿಕ್ ಅವರನ್ನು ಹೊರಗೆಳೆಯುವ ಮೂಲಕ ರಕ್ಷಿಸಲು ಪ್ರಯತ್ನಿಸಿದರು. ಗಂಭೀರವಾದ ಗಾಯಗೊಂಡ ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನು ಓದಿ : ದೆಹಲಿ : 6 ವರ್ಷದ ಬಾಲಕನ ಮೇಲೆ Pitbull ನಾಯಿ ದಾಳಿ ; ಭಯಾನಕ ವಿಡಿಯೋ ಸೆರೆ

ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಸಾಧ್ಯವಾಗದೆ ಬ್ಯಾಸ್ಕೆಟ್‌ಬಾಲ್ (Basketball) ಆಟಗಾರ ದುರ್ಮರಣ ಹೊಂದಿದ್ದಾನೆ ಎಂದು ಸ್ಥಳೀಯ SHO ಸಮರ್ಜೀತ್ ಸಿಂಗ್ ತಿಳಿಸಿದ್ದಾರೆ.

ಸರ್ಕಾರ ಮತ್ತು ತನಿಖೆ  :

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಅಧಿಕೃತ ವರದಿ ಮತ್ತು ಎಲ್ಲಾ ವಿವರಗಳನ್ನು ಸಂಗ್ರಹಿಸಿದ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪೊಲೀಸರು ಕಂಬದ ಸುರಕ್ಷತೆ, ಮೆಂಟೆನನ್ಸ್ ಮತ್ತು ಅಸಾವಧಾನದ ಸಾಧ್ಯತೆಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಬ್ಯಾಸ್ಕೆಟ್‌ಬಾಲ್ (Basketball) ಆಟಗಾರನ ಮೇಲೆ ಬಿದ್ದ ಕಂಬದ ವಿಡಿಯೋ :

https://twitter.com/i/status/1993576284040102296

Disclaimer : ಈ ಸುದ್ದಿ ಪೊಲೀಸ್ ವರದಿ ಮತ್ತು ಸ್ಥಳೀಯ ತಪಾಸಣೆ ಆಧಾರಿತವಾಗಿದೆ. ಮುಂದಿನ ತನಿಖೆಯ ನಂತರ ಹೆಚ್ಚಿನ ಮಾಹಿತಿ ಬದಲಾಯಿಸಬಹುದಾಗಿದೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments