ಜನಸ್ಪಂದನ ನ್ಯೂಸ್, ಡೆಸ್ಕ್ : ಕಡು ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಹೊರಗೆ ಅಡ್ಡಾಡಿ ಬಂದರೆ ಸಾಕು ಕೂಡಲೇ ಟ್ಯಾನಿಂಗ್ (tanning/ಕಪ್ಪು) ಆಗೋದು ಹೆಚ್ಚು.
ನೀವು ಗಮನಿಸಿರಬಹುದು ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಹೊರಗೆ ಅಡ್ಡಾಡಿ ಬಂದಾಗ ನಮ್ಮ ಕೈನ ಅರ್ಧ ಭಾಗ ಕಪ್ಪಾಗಿದ್ರೆ ಮತ್ತರ್ಧ ಭಾಗ ಬೆಳ್ಳಗಿರುತ್ತದೆ. ಹಾಗೆಯೇ ಚಪ್ಪಲಿ ಮುಚ್ಚಿದ ಭಾಗ ಬೆಳ್ಳಗಿದ್ರೆ ಉಳಿದ ಭಾಗ ಕಪ್ಪಾಗಿರುತ್ತದೆ.
ಇದನ್ನು ಓದಿ : ರೇಪ್ ಕೇಸ್ : ತಾಯಿಯ ದೂರಷ್ಟೇ ಆರೋಪಿಯನ್ನು ದೋಷಿಯೆಂದು ನಿರ್ಧರಿಸಲಾಗದು ; Highcourt.
ಅಷ್ಟೆ ಏಕೆ ಕತ್ತು, ಮುಖ ಕೂಡ ಕಪ್ಪಾಗೋದನ್ನು ಕಾಣಬಹುದು. ಹೀಗೆ ಟ್ಯಾನಿಂಗ್ ಆದ ಭಾಗವನ್ನು ಕ್ಷದಲ್ಲಿ ಸರಿ ಪಡಿಸುವ ವಿಧಾನದ ಬಗ್ಗೆ ಇರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೀಗೆ ಬಿಸಿಲಿನ ಕಾರಣದಿಂದ ಕಪ್ಪಾದ ಭಾಗವನ್ನು ಸರಿ ಪಡಿಸಲು ಒಂದಿಷ್ಟು ಬ್ಯೂಟಿ ಪ್ರಾಡಕ್ಟ್ ಮೊರೆ ಹೋಗುತ್ತೇವೆ. ಈ ವಿಷಯದಲ್ಲಿ ಹುಡುಗ್ರು ಡೋಟ್ ಕೇರ್ ಅಂದ್ರೆ ಹುಡುಗಿಯರು…..
ಇದನ್ನು ಓದಿ : IDBI : ಐಡಿಬಿಐ ಬ್ಯಾಂಕ್ನಲ್ಲಿ 676 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಈ ಬಗ್ಗೆ ಸೋಶಿಯಲ್ ಮೀಡಿಯಾ (Social media) ಮತ್ತು ಯುಟ್ಯೂಬ್ (Youtube) ನಲ್ಲಿ ಈ ಟ್ಯಾನ್ ತೆಗೆದು ಹಾಕಲು ಅನೇಕ ಟಿಪ್ಸ್ ನೀಡಲಾಗುತ್ತೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ಯಾನ್ ತೆಗೆದುಹಾಕುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದು ಕೆಲವೇ ನಿಮಿಷದಲ್ಲಿ ಟ್ಯಾನ್ ತೆಗೆದು ಹಾಕುವ ಟಿಪ್ಸ್ ನೀಡಿದೆ.
ಇದನ್ನು ಓದಿ : whatsapp : ವಾಟ್ಸಪ್ಗೆ ಬರುವ ಈ ಪೋಟೋ ಕ್ಲಿಕ್ ಮಾಡಿದ್ರೆ ಖಾತೆಯಲ್ಲಿನ ಹಣವೆಲ್ಲ ಮಾಯ.!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೇವಲ ಒಂದೇ ಒಂದು ದಿನದಲ್ಲಿ 7 ಕೋಟಿಗೂ ಹೆಚ್ಚು ವೀವ್ಸ್ ಪಡೆದಿದೆ.
look_art_saloon ಹೆಸರಿನ Instagram ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇದ್ರಲ್ಲಿ ಸಲೂನ್ ವ್ಯಕ್ತಿಯೋರ್ವ ಟ್ಯಾನ್ ತೆಗೆಯಲು ಬಳಸಲು ಮಿಶ್ರಣ ತಯಾರಿಸಿ ಅದನ್ನು ಕೈಗೆ ಹಚ್ಚಿ, ಕೆಲವೇ ಕ್ಷಣಗಳಲ್ಲಿ ಕೈ ಬೆಳ್ಳಗೆ ಮಾಡಿದ್ದಾನೆ.
ಇದನ್ನು ಓದಿ : Garlic : ರಾತ್ರಿ ಮಲಗುವ ಮುನ್ನ 1 ಎಸಳು ಬೆಳ್ಳುಳ್ಳಿಯನ್ನು ತಿಂದು ನೋಡಿ.
ಟ್ಯಾನ್ ತೆಗೆಯೋಕೆ ಬಳಸಿದ ಮಿಶ್ರಣದಲ್ಲೇನಿದೆ:
- ಅರ್ಧ ನಿಂಬೆಹಣ್ಣು,
- ಒಂದು ಟೀಚಮಚ ಶಾಂಪೂ ,
- ಒಂದು ಟೀಚಮಚ ಟೂತ್ಪೇಸ್ಟ್ (Tooth Paste) ಹಾಗೂ
- ಒಂದು ಟೀಚಮಚ ಈನೋ (Eno) ಬಳಸಲಾಗಿದೆ.
ಈಮೇಲೆ ತಿಳಿಸದ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಟ್ಯಾನ್ ಇರುವ ಜಾಗಕ್ಕೆ ಹಚ್ಚಿ, ಸ್ವಲ್ಪ ಸಮಯ ಬಿಟ್ಟು ಕ್ಲೀನ್ (Cline) ಮಾಡಲಾಗಿದೆ. ಕಪ್ಪಗಿದ್ದ ಕೈ ಬೆಳ್ಳಗಾಗಿರೋದನ್ನು ನೀವು ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿ : Health : ಕಾಲಿನಲ್ಲಿ ಈ ಲಕ್ಷಣಗಳಿವೆಯೇ? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು?
ಕಮೆಂಟ್ :
ಒಂದೇ ದಿನದಲ್ಲಿ ಈ ಟ್ಯಾನ್ ವಿಡಿಯೋ ಸಿಕ್ಕಾಪಟ್ಟೆ ಲೈಕ್ಸ್ ಪಡೆದಿದ್ದರೂ ಸಹ, ಈ ಮಿಶ್ರಣ, ಟ್ಯಾನ್ ತೆಗೆಯೋದಿಲ್ಲ ಎಂಬುದು ಬಹುತೇಕ ಅಭಿಪ್ರಾಯವಾಗಿದೆ. ಆದರೆ ಕೆಲವರು ತಾವು ಇದನ್ನು ಪ್ರಯೋಗ ಮಾಡಿದ್ದು, ಟ್ಯಾನ್ ತೆಗೆಯೋಕೆ ಇದು ಹೆಲ್ಪ್ ಮಾಡುತ್ತೆ ಎಂದಿದ್ದಾರೆ.
ಎಚ್ಚರಿಕೆ :
- ಪೇಸ್ಟ್, ಚರ್ಮದ ತೇವಾಂಶವನ್ನು ಹೀರಿಕೊಳ್ಳುತ್ತದೆ.
- ಈನೋ ಚರ್ಮದ ಮೇಲಿನ ಮೆಲನಿನ್ ಅನ್ನು ಆಕ್ಸಿಡೀಕರಿಸುತ್ತದೆ.
- ಆರಂಭದಲ್ಲಿ ಕೈ ಬೆಳ್ಳಗೆ ಕಂಡ್ರೂ ಸ್ವಲ್ಪ ಸಮಯದ ನಂತ್ರ ಚರ್ಮದ ಟೋನ್ ಹಿಂದಿನದಕ್ಕಿಂತ ಹೆಚ್ಚು ಕಪ್ಪಾಗುವ ಸಾಧ್ಯತೆ ಇದೆ.
- ಈ ಪೇಸ್ಟ್ ಬಳಕೆ ನಂತ್ರ ಚರ್ಮ ಮತ್ತಷ್ಟು ಸೂಕ್ಷ್ಮವಾಗುವ ಸಾಧ್ಯತೆ ಇದೆ.
- ಈ ಪೇಸ್ಟ್ ಎಲ್ಲರ ಚರ್ಮಕ್ಕೂ ಇದು ಹೊಂದುವುದಿಲ್ಲ.
- ಆರಂಭದಲ್ಲಿ ಸಣ್ಣ ಭಾಗಕ್ಕೆ ಪ್ರಯೋಗ ಮಾಡಿದ ನಂತರ ಸರಿ ಅನಿಸುದ್ರೆ ಮಾತ್ರ ಬಳಕೆ ಮಾಡಿ.
- ಯಾವುದೇ ಸಣ್ಣ ಸಮಸ್ಯೆ ಕಂಡು ಬಂದ್ರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ವಿಡಿಯೋ ನೋಡಿ :
View this post on Instagram
ಹಿಂದಿನ ಸುದ್ದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸೀಮೆ ಹುಣಸೆ ಹಣ್ಣು, ಇಲಾಚಿ ಹಣ್ಣು ಎಂದು ಕರೆಯುವ ಈ ಹಣ್ಣು ಜಂಗಲ್ ಜಿಲೇಬಿ (Jungle Jilebi) ಎಂದೇ ಖ್ಯಾತಿ ಪಡೆದಿದೆ. ಪ್ರತಿದಿನ ಇಪ್ಪತ್ತರಿಂದ ಮೂವತ್ತು ಗ್ರಾಂ ಇಲಾಚಿ ಹಣ್ಣು ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗುತ್ತವೆ.
ಪಿಥೆಸೆಲ್ಲೋಬಿಯಂ ಡುಲ್ಸ್ (Pithecellobium dulce) ಎಂದು ಕರೆಯಲ್ಪಡುವ ಸೀಮೆ ಹುಣಸೆ ಹಣ್ಣು, ವಿಶಿಷ್ಟವಾದ ರುಚಿ ಹೊಂದಿದೆ. ಇದರ ಔಷಧೀಯ ಗುಣಗಳು ಆರೋಗ್ಯಕ್ಕೂ ವರದಾನವಿದ್ದಂತೆ.
ಇದನ್ನು ಓದಿ : Revenue Department : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜಂಗಲ್ ಜಲೇಬಿಯನ್ನು ಊಟ ಮಾಡುವುದಕ್ಕಿಂತ ಒಂದು ಗಂಟೆ ಮುಂಚೆ ಅಥವಾ ಒಂದು ಗಂಟೆ ನಂತರ ತಿನ್ನಬೇಕು (Eat one hour before or one hour after) ಎನ್ನುತ್ತಾರೆ ಹಿರಿಯರು.
ಈ ಹಣ್ಣು ವಿಟಮಿನ್ ಸಿ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಥಯಾಮಿನ್, ರಿಬೋಫ್ಲಾವಿನ್ ಮುಂತಾದ ಅನೇಕ ಅಂಶಗಳನ್ನು ಹೊಂದಿದೆ.
ಕಣ್ಣಿನ ಸಮಸ್ಯೆ ಮತ್ತು ಚರ್ಮದ ಕಾಯಿಲೆಗೆ (Eye problems and skin disease) ಈ ಹಣ್ಣು ತುಂಬಾ ಉಪಯೋಗಕರ ಎಂದು ಪರಿಗಣಿಸಲಾಗಿದೆ.
ಇದನ್ನು ಓದಿ : ಅತ್ಯಂತ ದುರ್ಬಲ ಪಾಸ್ವರ್ಡ್ ಗಳಿವು; 1 ನಿಮಿಷ ಸಾಕು ಖಾತೆ ಹ್ಯಾಕ್ ಮಾಡಲು.!
ಇದು ದೇಹವನ್ನು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಗುಣವು ವಯಸ್ಸಾಗುವುದನ್ನು ತಡೆಯುತ್ತದೆ (Prevents aging) ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
ಈ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದು (To strengthen the digestive system).
ಜಂಗಲ್ ಜಲೇಬಿಯನ್ನು ಒಂದು ತಿಂಗಳು ನಿಯಮಿತವಾಗಿ ಸೇವಿಸಿದರೆ, ಸಕ್ಕರೆಯನ್ನು ನಿಯಂತ್ರಿಸಬಹುದಂತೆ.
ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?
ಇದರಲ್ಲಿರುವ ಆಂಟಿಆಕ್ಸಿಡೆಂಟ್, ಆಂಟಿಇನ್ಫ್ಲಾಮೇಟರಿ, ಆಂಟಿಡಿಯಾಬೆಟಿಕ್ ಅಂಶಗಳು ಕ್ಯಾನ್ಸರ್ ರೋಗಿಗಳಿಗೆ ಉಪಯುಕ್ತವಾಗಿವೆ (Useful for cancer patients).
ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು (To maintain body temperature) ಮತ್ತು ಶಾಖ ಸಂಬಂಧಿತ ಅಸ್ವಸ್ಥತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ನೈಸರ್ಗಿಕ ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ
ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಇದನ್ನು ಓದಿ : Health : ಏಕಾಏಕಿ ಕೈಗಳು ನಡುಗುವುದು ಈ ಗಂಭೀರ ಕಾಯಿಲೆಯಾಗಿರಬಹುದು.!
ಫೈಲೇರಿಯಾಸಿಸ್ ಎಂಬ ಸಾರವನ್ನು ಈ ಹಣ್ಣಿನ ಎಲೆ ಮತ್ತು ಬೀಜಗಳು ಹೊಂದಿದ್ದು, ಇದು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಉಪಯುಕ್ತವಾಗಿದೆ. ಅಲ್ಲದೇ ಸೊಳ್ಳೆಗಳ ವಿರುದ್ಧ ನೈಸರ್ಗಿಕ ಕೀಟನಾಶಕವಾಗಿಯೂ (Natural insecticide against mosquitoes) ಈ ಹಣ್ಣು ಕೆಲಸ ಮಾಡುತ್ತದೆ.
ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
ಇದು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!
ಕೆಮ್ಮು ಮತ್ತು ಅಸ್ತಮಾದಂತಹ ರೋಗಗಳನ್ನು ಗುಣಪಡಿಸಬಹುದು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರರಲ್ಲ.