ಶುಕ್ರವಾರ, ನವೆಂಬರ್ 28, 2025

Janaspandhan News

HomeGeneral NewsHome ಬಾಡಿಗೆದಾರರಿಗೆ ʼಮನೆ ಸ್ವಾಧೀನʼ ಹೊಂದುವ ಹಕ್ಕಿಲ್ಲ : ಸುಪ್ರೀಂ ಕೋರ್ಟ್ ತೀರ್ಪು.!
spot_img
spot_img
spot_img

Home ಬಾಡಿಗೆದಾರರಿಗೆ ʼಮನೆ ಸ್ವಾಧೀನʼ ಹೊಂದುವ ಹಕ್ಕಿಲ್ಲ : ಸುಪ್ರೀಂ ಕೋರ್ಟ್ ತೀರ್ಪು.!

- Advertisement -

‌ ಜನಸ್ಪಂದನ ನ್ಯೂಸ್‌, ನವದೆಹಲಿ : ಆಸ್ತಿ ಹಕ್ಕುಗಳ ಕುರಿತಂತೆ ಮಹತ್ವದ ತೀರ್ಪೊಂದನ್ನು ಭಾರತದ ಸುಪ್ರೀಂ ಕೋರ್ಟ್ ಪ್ರಕಟಿಸಿದ್ದು, ಯಾವುದೇ ಬಾಡಿಗೆದಾರರು ಎಷ್ಟು ವರ್ಷಗಳ ಕಾಲ ಬಾಡಿಗೆ ಮನೆ (Home) ಯಲ್ಲಿ ವಾಸಿಸಿದ್ದರೂ, ಆ ಮನೆ (Home) ಯನ್ನು “ಪ್ರತಿಕೂಲ ಸ್ವಾಧೀನ” (Adverse Possession) ಹಕ್ಕಿನಡಿ ತಮ್ಮದೇ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ತೀರ್ಪು ಜ್ಯೋತಿ ಶರ್ಮಾ ವಿರುದ್ಧ ವಿಷ್ಣು ಗೋಯಲ್ ಪ್ರಕರಣದಲ್ಲಿ ನೀಡಲ್ಪಟ್ಟಿದ್ದು, ಭೂ (Land -Home) ಮಾಲೀಕರು ಹಾಗೂ ಬಾಡಿಗೆದಾರರ ನಡುವಿನ ದೀರ್ಘಕಾಲದ ಗೊಂದಲಕ್ಕೆ ಸ್ಪಷ್ಟತೆಯನ್ನು ತಂದಿದೆ.

ದೆಹಲಿಯಲ್ಲಿ ನಡೆದ ಈ ಪ್ರಕರಣದಲ್ಲಿ ಭೂಮಾಲೀಕೆಯಾದ ಜ್ಯೋತಿ ಶರ್ಮಾ ಅವರು, 30 ವರ್ಷಗಳಿಗೂ ಹೆಚ್ಚು ಕಾಲ ತಮ್ಮ ಆಸ್ತಿಯಲ್ಲಿ ವಾಸಿಸುತ್ತಿದ್ದ ಬಾಡಿಗೆದಾರ ವಿಷ್ಣು ಗೋಯಲ್ ವಿರುದ್ಧ ಮನೆ (Home) ತೆರವು ಕುರಿತಾಗಿ ಮೊಕದ್ದಮೆ ದಾಖಲಿಸಿದ್ದರು.

“Blood-Sugar ನಿಯಂತ್ರಣಕ್ಕೆ ಈ ಪುಡಿ ಬಿಸಿ ನೀರಿನೊಂದಿಗೆ ಕುಡಿಯಿರಿ : ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ”.

ವಿಷ್ಣು ಗೋಯಲ್ ಅವರು 1980ರ ದಶಕದಿಂದಲೂ ಯಾವುದೇ ತೊಂದರೆ ಇಲ್ಲದೆ ಬಾಡಿಗೆ ಮನೆ (Home) ಯಲ್ಲಿ ವಾಸಿಸುತ್ತಿದ್ದರು. ಅವರು ಬಾಡಿಗೆ ಪಾವತಿಸುವುದನ್ನು ನಿಲ್ಲಿಸಿ, “ನಾನು ಇಷ್ಟು ವರ್ಷ ನಿರಂತರವಾಗಿ ವಾಸಿಸಿದ್ದೇನೆ, ಆದ್ದರಿಂದ ಪ್ರತಿಕೂಲ ಸ್ವಾಧೀನ ಹಕ್ಕಿನಡಿ ಈ ಮನೆ ಈಗ ನನ್ನದೇ” ಎಂದು ವಾದಿಸಿದ್ದರು.

ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ತಿರಸ್ಕರಿಸಿದೆ. ಬಾಡಿಗೆದಾರರು ಮಾಲೀಕರ ಅನುಮತಿಯಿಂದ ಆ ಮನೆ (Home) ಯನ್ನು ವಾಸಿಸಲು ಪ್ರವೇಶಿಸುತ್ತಾರೆ, ಆದ್ದರಿಂದ ಅವರ ವಾಸವನ್ನು “ಪ್ರತಿಕೂಲ ಸ್ವಾಧೀನ” ಎಂದರೆ ತಪ್ಪು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಪ್ರಕಾರ, 1963ರ ಭೂಪರಿಮಿತಿ ಕಾಯ್ದೆಯ (Limitation Act) ಪ್ರಕಾರ 12 ವರ್ಷಗಳ ಕಾಲ ಯಾರಾದರೂ ಅನುಮತಿ ಇಲ್ಲದೆ ಆಸ್ತಿಯನ್ನು ವಶದಲ್ಲಿಟ್ಟುಕೊಂಡರೆ ಮಾತ್ರ ಪ್ರತಿಕೂಲ ಸ್ವಾಧೀನ ಅನ್ವಯವಾಗುತ್ತದೆ. ಆದರೆ ಬಾಡಿಗೆದಾರರು ಅನುಮತಿಯೊಂದಿಗೆ ವಾಸಿಸುವುದರಿಂದ ಈ ಕಾನೂನು ಅವರಿಗೆ ಅನ್ವಯವಾಗುವುದಿಲ್ಲ.

ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

ಈ ತೀರ್ಪು ದೇಶದಾದ್ಯಂತ ಸಾವಿರಾರು ಮನೆ (Home) ಬಾಡಿಗೆ ಸಂಬಂಧಿತ ಪ್ರಕರಣಗಳಿಗೆ ದಾರಿ ತೋರಬಹುದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Ants ಗಳ ಭಯದಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ : ಬಯಲಾಯ್ತು ಪತ್ರದಲ್ಲಿ ಸಾವಿನ ರಹಸ್ಯ.

Ants

ಜನಸ್ಪಂದನ ನ್ಯೂಸ್‌, ಸಂಗರೆಡ್ಡಿ (ತೆಲಂಗಾಣ) : ಇರುವೆಗಳ (Ants) ಭೀತಿಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತ 25 ವರ್ಷದ ಮಹಿಳೆ ತಮ್ಮ ಪತಿ ಮತ್ತು ಮಗಳೊಂದಿಗೆ ಸಂಗರೆಡ್ಡಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಕೆಲ ದಿನದಿಂದ ಇರುವೆಗಳ (Ants) ಬಗ್ಗೆ ತೀವ್ರ ಭಯದಿಂದ ಅವರು ನರಳುತ್ತಿದ್ದರು.

ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”

ಈ ಸಮಸ್ಯೆಗೆ ಕುಟುಂಬ ಸದಸ್ಯರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಕೌನ್ಸೆಲಿಂಗ್ ಸಹ ನೀಡಲಾಗಿತ್ತು. ಆದರೂ ಮಹಿಳೆಗೆ ಇರುವೆಗಳ ಭಯ ಕಡಿಮೆಯಾಗದೆ ದಿನೇ ದಿನೇ ತೀವ್ರಗೊಂಡಿತು.

ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮಹಿಳೆ ಮನದ ನೋವಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Cancer ಅಪಾಯದಲ್ಲಿ ಬ್ಲಡ್ ಗ್ರೂಪ್‌ಗಳ ಪಾತ್ರ : ಈ ರಕ್ತದ ಗುಂಪಿನವರಿಗೆ ಅಪಾಯ ಹೆಚ್ಚು ; ಅಧ್ಯಯನ.

ಇನ್ನು ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪತಿ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದಾಗ ಪತ್ನಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಈ ದೃಶ್ಯ ನೋಡಿದ ಪತಿ ಕಣ್ಣೀರು ಹಾಕಿದ್ದಾರೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಅಲ್ಲದೆ, ಸ್ಥಳದಲ್ಲಿದ್ದ ಆತ್ಮಹತ್ಯಾ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ ಮೃತ ಮಹಿಳೆ ಬರೆದಿದ್ದು ಹೀಗೆ,

“ಶ್ರೀ… ಕ್ಷಮಿಸಿ, ನಾನು ಈ ಇರುವೆ (Ants) ಗಳೊಂದಿಗೆ ಬದುಕಲು ಬಯಸುವುದಿಲ್ಲ. ಅನ್ವಿಯನ್ನು ನೋಡಿಕೊಳ್ಳಿ. ದಯವಿಟ್ಟು ಅನ್ನಾವರಂ, ತಿರುಪತಿ ಮತ್ತು ಯೆಲ್ಲಮ್ಮನನ್ನು ನೋಡಿಕೊಳ್ಳಿ.”

ಈ ಪತ್ರ ಓದಿದ ಕುಟುಂಬ ಸದಸ್ಯರು ಕಣ್ಣೀರು ಹಾಕಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : “ಚಲಿಸುವ ಬಸ್ಸಿನಲ್ಲಿ harassment ; ಕಪಾಳಕ್ಕೆ ಹೊಡೆದ ದಿಟ್ಟ ಯುವತಿ.!”
ಮೈರ್ಮೆಕೊಫೋಬಿಯಾ (Myrmecophobia) ಎಂದರೇನು?

ಮೈರ್ಮೆಕೊಫೋಬಿಯಾ ಎಂದರೆ ಇರುವೆ (Ants) ಗಳ ಬಗ್ಗೆ ಅತಿಯಾದ ಭಯ ಅಥವಾ ಅಸಹನೆ. ಇದು ಒಂದು ರೀತಿಯ ನಿರ್ದಿಷ್ಟ ಭಯ (Specific Phobia) ಆಗಿದ್ದು, ಈ ಸಮಸ್ಯೆ ಇದ್ದವರು ಇರುವೆಗಳನ್ನಷ್ಟೇ ಅಲ್ಲದೆ ಇತರ ಕೀಟಗಳು ಮತ್ತು ಜೇಡಗಳ ಬಗ್ಗೆ ಸಹ ತೀವ್ರ ಭಯ ಹೊಂದಿರುತ್ತಾರೆ.

ಕೆಲವರಿಗೆ ಇರುವೆಗಳು ಆಹಾರವನ್ನು ಹಾಳುಮಾಡುವ ಭಯವಿರಬಹುದು, ಇನ್ನು ಕೆಲವರಿಗೆ ಮನೆಯ ಮೇಲೆ ಇರುವೆಗಳ ದಾಳಿ ನಡೆಯುವ ಭಯವೂ ಉಂಟಾಗಬಹುದು.

ಕೈಗೆ ಚುಚ್ಚಿದ thorn ತೆಗೆಯಲು ಮಹಿಳೆಯ ಸುಪರ್ ಟೆಕ್ನಿಕ್‌; ವಿಡಿಯೋ ವೈರಲ್.!
ಲಕ್ಷಣಗಳು :
  • ಆತಂಕ, ನಿದ್ರಾಹೀನತೆ.
  • ಬೆವರುವುದು ಮತ್ತು ಹೃದಯ ಬಡಿತ ಹೆಚ್ಚಾಗುವುದು.
  • ಉಸಿರಾಟದ ತೊಂದರೆ ಅಥವಾ ಗಾಬರಿ.
  • ತಲೆತಿರುಗುವಿಕೆ, ವಾಕರಿಕೆ, ಒಣ ಬಾಯಿ.
  • ತಲೆನೋವು ಮತ್ತು ಶಾರೀರಿಕ ಮರಗಟ್ಟುವಿಕೆ.
ಚಿಕಿತ್ಸೆ ಸಾಧ್ಯವೇ?

ಹೌದು, ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆ ಮೂಲಕ ಮೈರ್ಮೆಕೊಫೋಬಿಯಾ ನಿವಾರಣೆ ಸಾಧ್ಯ.
ಸಾಮಾನ್ಯವಾಗಿ Exposure Therapy ಅಂದರೆ ಮೊದಲು ಇರುವೆ (Ants) ಗಳ ಚಿತ್ರಗಳು ಅಥವಾ ವಿಡಿಯೋಗಳನ್ನು ತೋರಿಸುವ ಮೂಲಕ ಪ್ರಾರಂಭಿಸಿ, ನಂತರ ಹಂತ ಹಂತವಾಗಿ ನಿಜ ಜೀವನದಲ್ಲಿ ಇರುವೆಗಳ ಹತ್ತಿರ ಇರಲು ಮನಸ್ಸು ತಯಾರಿಸುವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೆ, ಕೌನ್ಸೆಲಿಂಗ್ ಮತ್ತು ಮನೋವೈದ್ಯಕೀಯ ಔಷಧೋಪಚಾರ ಸಹ ಸಹಾಯಕರಾಗಬಹುದು.

ಕಳ್ಳತನಕ್ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ Chilli ಎರಚಿದ ಮಹಿಳೆ ; ಮುಂದೆನಾಯ್ತು ನೋಡಿ.!
ಸಂಪಾದಕೀಯ :

ಮೃತ ಪ್ರಕರಣ ಪ್ರಕರಣ ಮಾನಸಿಕ ಆರೋಗ್ಯದ ಮಹತ್ವವನ್ನು ನೆನಪಿಸುತ್ತದೆ. ಭಯ, ಆತಂಕ ಅಥವಾ ಒತ್ತಡದಂತಹ ಸಮಸ್ಯೆಗಳನ್ನು ಅನುಭವಿಸಿದಾಗ ತಕ್ಷಣ ಸಹಾಯವನ್ನು ಪಡೆಯುವುದು ಅತ್ಯಗತ್ಯ. ಸಮಯಕ್ಕೆ ತಕ್ಕ ಸಲಹೆ ಮತ್ತು ಚಿಕಿತ್ಸೆ ಪಡೆದರೆ ಅನೇಕ ಜೀವಗಳನ್ನು ಉಳಿಸಬಹುದು.

👉 ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments