ಜನಸ್ಪಂದನ ನ್ಯೂಸ್, ಡೆಸ್ಕ್ : ಜಾತ್ರೆಗಳಲ್ಲಿ ಭಕ್ತರು ಬರಿಗಾಲಲ್ಲಿ ಕೆಂಡ ಹಾಯುವುದನ್ನು ನಾವೆಲ್ಲರು ನೋಡಿರುತ್ತೇವೆ. ಆದರೆ ಪೊಲೀಸ್ ಅಧಿಕಾರಿಗಳು (police officer) ಕೆಂಡ ಹಾಯುತ್ತಿರುವ ದೃಶ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಮನೆಗಳ್ಳರಿಗೆ ಸಾಥ್ ನೀಡ್ತಿದ್ದ ಪೊಲೀಸ್ ಸೇರಿ 8 ಜನ arrest.!
ಪೊಲೀಸ್ ಸಮವಸ್ತ್ರದಲ್ಲಿರುವ (uniform) ಅಧಿಕಾರಿಗಳು ಸುಡುವ ಕೆಂಡಗಳ ಮೇಲೆ ಬರಿಗಾಲಲ್ಲಿ ನಡೆಯುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು.
ನಾರ್ಕೆಟ್ಪಲ್ಲಿ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ‘ಶ್ರೀ ಪಾರ್ವತಿ ಜಡಲ’ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ನಡೆದ ಕೊಂಡೊತ್ಸವದಲ್ಲಿ ಪೊಲೀಸ್ ಸಿಬ್ಬಂದಿ ಕೆಂಡ ಹಾಯ್ದಿದ್ದಾರೆ.
ವಿಡಿಯೋ ವೈರಲ್ (video viral) ಆದ ಬಳಿಕ ಹಲವು ಟೀಕೆಗಳು (comments) ವ್ಯಕ್ತವಾಗಿವೆ. ಆದರೆ, ‘ಮೂಢನಂಬಿಕೆಗಳ’ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಮಾಡಲಾಗಿದೆ ಎಂದು ಕೆಲವರು ವರದಿ ಮಾಡಿದ್ದಾರೆ.
ಇದನ್ನು ಓದಿ : ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರು ಹಾಕಿದ ಮಹಿಳಾ ಅಧಿಕಾರಿ ; Video viral.!
ಇನ್ನೂ ಇದಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ, ಇದು ಅವರ ವೈಯಕ್ತಿಕ (personal) ವಿಚಾರ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Police officers walked barefoot over the fire pit as part of the annual #CheruvugattuJatara ritual in Narketpally Mandal of #Nalgonda District.
Some reported that it is done to create awareness on "superstitions."
But top police officials confirmed that it has nothing to do… pic.twitter.com/LVTdI0GfJK
— Sudhakar Udumula (@sudhakarudumula) February 21, 2024