ಬುಧವಾರ, ಫೆಬ್ರವರಿ 4, 2026

Janaspandhan News

Home Blog Page 59

Gorilla :ಕಾಡಿನಲ್ಲಿ ಮಹಿಳೆಯ ಜುಟ್ಟನ್ನು ಹಿಡಿದೆಳೆದ ಗಂಡು ಗೊರಿಲ್ಲಾ ; ಮುಂದೆ.?

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸಫಾರಿ ಪ್ರವಾಸದ ವೇಳೆ ಮಹಿಳೆಯೊಬ್ಬಳಿಗೆ ಗೊರಿಲ್ಲಾ (Gorilla) ಮಾಡಿರುವ ಸಂಗತಿಯೊಂದು ವಿಚಿತ್ರವಾಗಿದೆ. ಇದು ಗೊರಿಲ್ಲಾ ಮಾಡಿರುವ ಪ್ರೇಮವೋ ಅಥವಾ ಪರಾಮರ್ಶೆಯೋ ಮಾತ್ರ ಗೊತ್ತಿಲ್ಲ.

ಆದರೆ ಗೊರಿಲಾ (Gorilla) ಮಾಡಿದ ಈ ಕ್ರಿಯೇ ನಂತರ ಮುಂದೆ ನಡೆದದ್ದನ್ನು ನೋಡಿದ್ರೆ ನೀವೂ ವ್ಹಾವ್‌ ಎನ್ನದೇ ಇರಲಾರಿರಿ. ಸದ್ಯ ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರನ್ನ ಸಂತೋಷದಿಂದ ನಗೆಗಡಲಲ್ಲಿ ತೇಲಿಸುತ್ತೆ.

ಇದನ್ನು ಓದಿ : ಕಾಲೇಜಿನಲ್ಲಿ ಶಿಕ್ಷಕನಿಂದ Harassment ಆರೋಪ ; ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.!

@rose\_k01 ಎಂಬ X ಬಳಕೆದಾರರು (ಹಿಂದೆ Twitter) ಹಂಚಿಕೊಂಡ ಈ ವಿಡಿಯೋ ಈಗಾಗಲೇ 14 ಮಿಲಿಯನ್ ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ.

ವಿಡಿಯೋದಲ್ಲೇನಿದೆ :

ವಿಡಿಯೋದಲ್ಲಿ ಕೆಲವು ಪ್ರವಾಸಿಗರು ಪರ್ವತ ಪ್ರದೇಶದಲ್ಲಿ ಸಾಕಷ್ಟು ಹತ್ತಿರದಿಂದ *ಕಾಡು ಗೊರಿಲ್ಲಾ (Gorilla) ಗಳನ್ನು* ವೀಕ್ಷಿಸುತ್ತಿರುವುದು ಕಾಣಿಸುತ್ತೆ. ಈ ನಡುವೆ ಒಬ್ಬ ಮಹಿಳಾ ಪ್ರವಾಸಿಗರ ಹತ್ತಿರಕ್ಕೆ ಬಂದ ಗಂಡು ಗೊರಿಲ್ಲಾ ಒಂದು ಆಕೆಯ ಕೂದಲನ್ನು ಹಿಡಿದು ಹಾಗೆಯೇ ಕುಳಿತು ಬಿಡುತ್ತೆ.

ಇದನ್ನು ಓದಿ : RRB Recruitment : 6,238 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನ.!

ಈ ವೇಳೆ ಪ್ರವಾಸಿ ಮಹಿಳೆ ಏನು ಮಾಡದೇ ಸುಮ್ಮನೆ ಇರಬೇಕಾದರೆ, ಈ ಘಟನೆಯನ್ನು ಸ್ವಲ್ಪ ದೂರದಲ್ಲಿದ್ದ ಹೆಣ್ಣು ಗೊರಿಲ್ಲಾ ನೋಡುತಲೇ ನಾಟಕೀಯವಾಗಿ ಉರುಳಿ ಬಂದು ಗಂಡು ಗೊರಿಲ್ಲಾವನ್ನು ದುರುಗುಟ್ಟಿ ನೋಡುತ್ತದೆ.

ಹೀಗೆ ಹೆಣ್ಣು (Gorilla) ಗೊರಿಲ್ಲಾ ತನ್ನ ನೋಡುತ್ತಲೇ, ಇತ್ತ ಗಂಡು (Gorilla) ಗೊರಿಲ್ಲಾ ಮಹಿಳೆಯ ಕೂದಲನ್ನು ಬಿಟ್ಟು ಏನು ನಡೆದೆ ಇಲ್ಲ ಎನ್ನುವಂತೆ ವರ್ತಿಸುತ್ತದೆ. ಆದರೆ ಆ ಹೆಣ್ಣು ಗೊರಿಲ್ಲಾ (Gorilla) ತನ್ನ ಕಣ್ಣಾರೆ ನೋಡಿದ್ದನ್ನು ಮರಿಯುತ್ತದೆಯೇ.? ಖಂಡಿತ ಇಲ್ಲ.

ಹಾಗಾದ್ರೆ ಮುಂದೆನಾಯ್ತು.? As usual ಏನ ಆಗಬೇಕಾಗಿತ್ತೋ ಅದು ಆಗಿಯೇ ಬಿಟ್ಟಿತು. ತಿಳಿಲಿಲ್ವಾ, ಹಾಗಾದ್ರೆ ಈ ವಿಡಿಯೋ ನೋಡಿ.

🎥 ಗಂಡು ಗೊರಿಲ್ಲಾ (Gorilla) ಮಾಡಿದ ಕಿತಾಪತಿಯ ವಿಡಿಯೋ ಇಲ್ಲದೆ :

https://twitter.com/i/status/1943509382815183221

ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು :
  • “ಜಾತಿ ಯಾವುದೇ ಆಗಿರಲಿ… ಮಹಿಳೆಯರ ಧೈರ್ಯ ಹೀಗೇ ಇರುತ್ತೆ!” ಎಂದು ಒಬ್ಬರೆಂದರೆ,
  • “ಅವಳು ಹೆಣ್ಣು ಗೊರಿಲ್ಲಾ ಅಲ್ಲ… ನೀವೇ!” ಎಂದು ಇನ್ನೊಬ್ಬರು ನಾಟಕೀಯ ಸಂಭಾಷಣೆಯನ್ನೂ ಬರೆದಿದ್ದಾರೆ.
Astrology : ಹೇಗಿದೆ ಗೊತ್ತಾ.? ಜುಲೈ 15 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 15 ರ ಮಂಗಳವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಅಮೂಲ್ಯ ವಿಷಯಗಳನ್ನು ಚರ್ಚಿಸುತ್ತೀರಿ. ಬಾಲ್ಯದ ಸ್ನೇಹಿತರೊಂದಿಗೆ ದೂರದ ಪ್ರಯಾಣದ ಸೂಚನೆಗಳಿವೆ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತದೆ. ನಿರುದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಸಂಗಾತಿಯೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

*ವೃಷಭ ರಾಶಿ*

ಬಂಧು ಮಿತ್ರರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ದೊರೆಯುತ್ತದೆ. ಆರ್ಥಿಕವಾಗಿ ಅನುಕೂಲಕರ ವಾತಾವರಣ ಇರುತ್ತದೆ. ಶತ್ರುಗಳಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕೈಗೊಂಡ ಕೆಲಸಗಳಲ್ಲಿ ಆಲೋಚನೆಗಳು ಕಾರ್ಯ ರೂಪಕ್ಕೆ ಬರುತ್ತವೆ. ವೃತ್ತಿ ವ್ಯವಹಾರಗಳು ತೃಪ್ತಿಕರವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗುತ್ತವೆ.

*ಮಿಥುನ ರಾಶಿ*

ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಕೌಟುಂಬಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ವೃತ್ತಿಪರ ವ್ಯವಹಾರಗಳು ಇತರರೊಂದಿಗೆ ವಿವಾದಗಳಿರುತ್ತವೆ. ದೂರದ ಪ್ರಯಾಣದಲ್ಲಿ ಶ್ರಮ ಹೆಚ್ಚಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ನಿಧಾನವಾಗುತ್ತವೆ. ಉದ್ಯೋಗ ವಾತಾವರಣವು ಸ್ವಲ್ಪ ಕಿರಿಕಿರಿಯುಂಟುಮಾಡುತ್ತದೆ.

*ಕಟಕ ರಾಶಿ*

ಮನೆಯ ಹೊರಗೆ ಹೆಚ್ಚುವರಿ ಜವಾಬ್ದಾರಿಗಳು ಕಿರಿಕಿರಿಯನ್ನು ಹೆಚ್ಚಿಸುತ್ತವೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನೋವು ಉಂಟುಮಾಡುತ್ತವೆ. ಹೊಸ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಬಂಧು ಮಿತ್ರರೊಂದಿಗೆ ಸಣ್ಣ ವಿವಾದಗಳಿರುತ್ತವೆ. ವೃತ್ತಿಪರ ವ್ಯವಹಾರಗಳು ಸ್ವಲ್ಪ ಲಾಭದಾಯಕವಾಗಿರುತ್ತವೆ. ಉದ್ಯೋಗಿಗಳಿಗೆ ಆಕಸ್ಮಿಕ ಸ್ಥಾನ ಚಲನೆ ಸೂಚನೆಗಳಿವೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
*ಸಿಂಹ ರಾಶಿ*

ಕುಟುಂಬ ಸದಸ್ಯರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಎಲ್ಲಾ ಕಡೆಯಿಂದ ಆದಾಯ ಬರುತ್ತದೆ. ವ್ಯಾಪಾರ ವಿಸ್ತರಣೆಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಯಾಣದಲ್ಲಿ ಹೊಸ ವ್ಯಕ್ತಿಗಳ ಭೇಟಿ ಲಾಭದಾಯಕವಾಗಿರುತ್ತವೆ. ವೃತ್ತಿ ಮತ್ತು ಉದ್ಯೋಗಗಳು ನಿರೀಕ್ಷಿತವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಆರ್ಥಿಕ ಅನುಕೂಲತೆ ಉಂಟಾಗುತ್ತದೆ.

*ಕನ್ಯಾ ರಾಶಿ*

ಅನಾವಶ್ಯಕ ಖರ್ಚು ಹೆಚ್ಚಾಗುತ್ತದೆ. ಪ್ರಮುಖ ವಿಷಯಗಳಲ್ಲಿ ದ್ವಿಸ್ವಭಾವ ಆಲೋಚನೆಗಳು ಒಳ್ಳೆಯದಲ್ಲ. ಪ್ರಮುಖ ವ್ಯವಹಾರಗಳು ಸ್ವಲ್ಪ ನಿಧಾನವಾಗಿ ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಪ್ರಗತಿ ಹೊಂದುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳಿರುತ್ತವೆ, ನಿರುದ್ಯೋಗಿಗಳು ಕೆಲವು ವಿಷಯಗಳಲ್ಲಿ ನಿರಾಶೆಗೊಳ್ಳುತ್ತಾರೆ.

*ತುಲಾ ರಾಶಿ*

ಸ್ನೇಹಿತರಿಂದ ಅನಿರೀಕ್ಷಿತ ಸಹಾಯವು ತೃಪ್ತಿಕರವಾಗಿರುತ್ತದೆ. ಹೊಸ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ. ಮನೆಯ ಹೊರಗೆ ಹೆಚ್ಚು ಉತ್ಸಾಹದಿಂದ ಮುನ್ನಡೆಯುತ್ತೀರಿ. ಔದ್ಯೋಗಿಕ ಕೆಲಸಗಳಲ್ಲಿ ಅಪ್ರಯತ್ನ ಕಾರ್ಯ ಸಿದ್ಧಿ ಉಂಟಾಗುತ್ತದೆ. ದೂರದ ಸಂಬಂಧಿಕರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ.

*ವೃಶ್ಚಿಕ ರಾಶಿ*

ಪರರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ನಿರುದ್ಯೋಗಿಗಳು ಸ್ವಲ್ಪ ತಾಳ್ಮೆಯಿಂದ ಪ್ರಯತ್ನಿಸಬೇಕು. ಕಣ್ಣಿನ ಸಂಬಂಧಿತ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಹಣಕಾಸಿನ ವಿಚಾರದಲ್ಲಿ ಕೊರತೆ ಉಂಟಾಗಲಿದೆ. ಕುಟುಂಬದ ಸದಸ್ಯರ ವರ್ತನೆ ಅಚ್ಚರಿ ಮೂಡಿಸುತ್ತದೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ.

ಇದನ್ನು ಓದಿ : ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?
*ಧನುಸ್ಸು ರಾಶಿ*

ಸಮುದಾಯದಲ್ಲಿ ಗೌರವ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಅಪ್ರಯತ್ನ ಕಾರ್ಯ ಸಿದ್ಧತೆ ಉಂಟಾಗುತ್ತದೆ. ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಆಲೋಚನೆಗಳು ಕಾರ್ಯ ರೂಪಕ್ಕೆ ಬರುತ್ತವೆ. ವ್ಯಾಪಾರಗಳು ಹೊಸ ಹೂಡಿಕೆಗಳನ್ನು ಪಡೆಯುತ್ತವೆ. ಹಣಕಾಸಿನ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗುತ್ತದೆ.

*ಮಕರ ರಾಶಿ*

ಆರ್ಥಿಕವಾಗಿ ಅನುಕೂಲಕರ ವಾತಾವರಣವಿರುತ್ತದೆ. ದೈವಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಆಹ್ವಾನಗಳು ಬರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಮತ್ತು ಲಾಭವನ್ನು ಪಡೆಯುತ್ತೀರಿ. ನಿರುದ್ಯೋಗಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.

*ಕುಂಭ ರಾಶಿ*

ದೂರ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಮನೆಯಲ್ಲಿ ಕೆಲವರ ವರ್ತನೆ ಭಾವನಾತ್ಮಕವಾಗಿ ನೋವುಂಟು ಮಾಡುತ್ತದೆ. ಸಂಗಾತಿಯೊಂದಿಗೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ಕೈಗೊಂಡ ವ್ಯವಹಾರಗಳಲ್ಲಿ ಋಣಾತ್ಮಕ ವಾತಾವರಣವಿರುತ್ತದೆ. ಉದ್ಯೋಗದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಂಡು ಮುಜುಗರಕ್ಕೆ ಒಳಗಾಗುತ್ತೀರಿ ವ್ಯವಹಾರದಲ್ಲಿ ಹಣಕಾಸಿನ ತೊಂದರೆಗಳು ಉಂಟಾಗುತ್ತವೆ.

*ಮೀನ ರಾಶಿ*

ಕುಟುಂಬ ವ್ಯವಹಾರಗಳಲ್ಲಿ ಹೆಚ್ಚಿನ ಶ್ರಮಯದೊಂದಿಗೆ ಕಡಿಮೆ ಫಲಿತಾಂಶಗಳನ್ನು ಪಡೆಯುತ್ತೀರಿ. ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ. ಹಣಕಾಸಿನ ತೊಂದರೆಗಳು ಬಾಧಿಸುತ್ತವೆ. ವಾಹನ ಪ್ರಯಾಣದಲ್ಲಿ ಜಾಗ್ರತೆ ವಹಿಸಬೇಕು. ವ್ಯಾಪಾರದಲ್ಲಿ ಏರುಪೇರು ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳು ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ.

Astrology

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಕಾಲೇಜಿನಲ್ಲಿ ಶಿಕ್ಷಕನಿಂದ Harassment ಆರೋಪ ; ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.!

0

ಜನಸ್ಪಂದನ ನ್ಯೂಸ್ ಡೆಸ್ಕ್ : ವಿದ್ಯಾರ್ಥಿನಿಯೋರ್ವಳು ಶಿಕ್ಷಕನ ಕಿರುಕುಳ (Harassment) ಕ್ಕೆ ಬೇಸತ್ತು ಕಾಲೇಜಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆಯೊಂದು ನಡೆದಿದೆ.

ಒಡಿಶಾ ರಾಜ್ಯದ ಬಾಲಸೋರ್‌ನಲ್ಲಿ ದೌರ್ಜನ್ಯ (Harassment) ಪ್ರಕರಣದ ಹಿನ್ನಲೆಯಲ್ಲಿ ವಿದ್ಯಾರ್ಥಿನಿ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಈ ಘಟನೆ ಇಡೀ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಹಾಗೂ ನಾಗರಿಕ ಸಮಾಜವನ್ನು ತೀವ್ರ ಆಘಾತಕ್ಕೊಳಪಡಿಸಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 13 ರ ದ್ವಾದಶ ರಾಶಿಗಳ ಫಲಾಫಲ.!

ವಿದ್ಯಾರ್ಥಿನಿಯೋರ್ವಳು ನ್ಯಾಯಕ್ಕಾಗಿ ಹೋರಾಡುತ್ತ, ನ್ಯಾಯ ಸಿಗದ್ದಿದ್ದಾಗ ಕೊನೆಗೆ ತಾನು ಓದುತ್ತಿದ್ದ ಕಾಜೇಜಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ದುರ್ದೈವದ ಸಂಗತಿಯಾಗಿದೆ.

ಕಾಲೇಜ್‌ ಒಂದರಲ್ಲಿ ಇಂಟಿಗ್ರೇಟೆಡ್ B.Ed ಕೋರ್ಸ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಲೈಂಗಿಕ ಕಿರುಕುಳ (Harassment) ನೀಡಿದ ಕಾಲೇಜ್ ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ. ಆದರೆ ಕಿರುಕುಳ (Harassment) ನೀಡಿದ ಶಿಕ್ಷಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಕಾಲೇಜು ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ.

ಇದನ್ನು ಓದಿ : Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!

ಹೀಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ತನಗೆ ನ್ಯಾಯ ಸಿಗದಿರುವ ಪರಿಣಾಮವಾಗಿ, ತನ್ನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಘಟನೆಯ ವಿವರ :

ವರದಿಯ ಪ್ರಕಾರ, ಕಾಲೇಜಿನ ಅಧ್ಯಾಪಕ ಹಾಗೂ ಮುಖ್ಯ ವಿಭಾಗದ ಮುಖ್ಯಸ್ಥರಾದ ಸಮೀರ್ ಕುಮಾರ್ ಸಾಹು ವಿದ್ಯಾರ್ಥಿನಿಗೆ ಅನುಚಿತ ನಡವಳಿಕೆ ತೋರಿಸಿದ್ದಾನೆ. ವಿಧ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ (Harassment) ನೀಡಿದ್ದಾನೆ ಎಂದು ಆರೋಪಿಸಿದ್ದಲ್ಲದೆ, ಆಕೆಯ ಭವಿಷ್ಯವನ್ನು ಹಾಳು ಮಾಡುವುದಾಗಿ ಬೆದರಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : 7 ಬಾಲಕಿಯರ ಮೇಲೆ Sexual assault ; ಹೊಡೆದು ಕೊಂದ ಸ್ಥಳೀಯರು.!

ವಿದ್ಯಾರ್ಥಿನಿ ಜುಲೈ 1 ರಂದು ಕಾಲೇಜಿನ ಪ್ರಾಂಶುಪಾಲರಿಗೆ ಕಿರುಕುಳದ (Harassment) ವಿಷಯವಾಗಿ ದೂರು ಸಲ್ಲಿಸಿದ್ದರೂ, ಯಾವುದೇ ಶಿಸ್ತು ಕ್ರಮ ಕೈಗೊಳ್ಳಲಿಲ್ಲ. ಅವಳಿಗೆ “ಏಳು ದಿನಗಳಲ್ಲಿ ಕ್ರಮ” ಎಂದು ಹೇಳುತ್ತಿದ್ದರೂ, ವಿದ್ಯಾರ್ಥಿನಿಯ ದೂರಿಗೆ ಯಾವುದೇ ಪ್ರಗತಿ ಕಾಣದೆ ಇದ್ದದ್ದು ಆಕೆಯ ನಿರಾಶೆಗೆ ಕಾರಣವಾಗಿದೆ.

ಪ್ರತಿಬಂಧನೆಯ ಪ್ರಯತ್ನವೂ ವಿಫಲ :

ಇದರಿಂದ ಮನನೊಂದ ಸಂತ್ರಸ್ಥ ವಿದ್ಯಾರ್ಥಿನಿ, ಸ್ನೇಹಿತೆಯರೊಂದಿಗೆ ಪ್ರಾಂಶುಪಾಲರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದಾಳೆ. ಇಷ್ಟಾದರೂ ಸಹ ಯಾವುದೆ ಪ್ರತಿಕ್ರಿಯೆ ಇಲ್ಲದಿದ್ದ ಪರಿಣಾಮ ವಿದ್ಯಾರ್ಥಿನಿ ಪೆಟ್ರೋಲ್ ಸುರಿದುಕೊಂಡು ಸಾರ್ವಜನಿಕವಾಗಿ ಕಾಲೇಜಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನು ಓದಿ : KRCL-2025 : ಪಾಯಿಂಟ್ಸ್ ಮ್ಯಾನ್ & ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಬೆಂಕಿ ಹಚ್ಚಿಕೊಂಡ ವೇಳೆ ಸ್ಥಳದಲ್ಲಿದ್ದ ಸಹ ವಿದ್ಯಾರ್ಥಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಸಹ ಗಂಭೀರವಾದ ಸುಟ್ಟ ಗಾಯಗಳಿಂದ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ.

ಕಿರುಕುಳ (Harassment) ನೀಡಿದ ಆರೋಪಿತ ಶಿಕ್ಷಕನ ಬಂಧನ, ತನಿಖೆ ಆರಂಭ :

ಘಟನೆಯ ನಂತರ ಓಡಿಶಾ ರಾಜ್ಯದ ಉನ್ನತ ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್, ಶಿಕ್ಷಕ ಸಮೀರ್ ಕುಮಾರ್ ಸಾಹು ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದು, ಆರೋಪಿತನನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣ ದಾಖಲಾಗಿ ನಂತರ ತನಿಖೆ ಮುಂದುವರೆದಿದೆ.

ರಾಜ್ಯದಲ್ಲಿ ಪ್ರತಿಭಟನೆ, ನ್ಯಾಯಕ್ಕಾಗಿ ಒತ್ತಾಯ :

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂಬ ಒತ್ತಾಯಗಳು ರಾಜ್ಯದ ವಿವಿಧೆಡೆ ಕೇಳಿ ಬರುತ್ತಿವೆ. ಮಹಿಳಾ ಮತ್ತು ವಿದ್ಯಾರ್ಥಿ ಸಂಘಟನೆಗಳು ಆರೋಪಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸುತ್ತಿವೆ.

ವಿಡಿಯೋ :

https://twitter.com/i/status/1943991839083647340


KRCL-2025 : ಪಾಯಿಂಟ್ಸ್ ಮ್ಯಾನ್ & ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

KRLC

ಜನಸ್ಪಂದನ ನ್ಯೂಸ್‌, ನೌಕರಿ : ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (Konkan Railway Corporation Limited/ KRCL) 2025ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಪಾಯಿಂಟ್ಸ್ ಮ್ಯಾನ್ ಮತ್ತು ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿಯು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನೂ ನೀಡುತ್ತದೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
KRCL ಹುದ್ದೆಗಳ ವಿವರ :
  • ಒಟ್ಟು ಹುದ್ದೆಗಳ ಸಂಖ್ಯೆ : 79
  • ಹುದ್ದೆಯ ಹೆಸರುಗಳು :
    • ಟ್ರ್ಯಾಕ್ ನಿರ್ವಹಣೆ (Track Maintainer) – 35 ಹುದ್ದೆಗಳು.

    • ಪಾಯಿಂಟ್ಸ್ ಮ್ಯಾನ್ (Pointsman) – 44 ಹುದ್ದೆಗಳು.

  • ಉದ್ಯೋಗ ಸ್ಥಳ : ಮಹಾರಾಷ್ಟ್ರ, ಗೋವಾ, ಕರ್ನಾಟಕ.
  • ಅಪ್ಲಿಕೇಶನ್ ಮೋಡ್ : ಆನ್‌ಲೈನ್ (Online).
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 13 ರ ದ್ವಾದಶ ರಾಶಿಗಳ ಫಲಾಫಲ.!
ವಯೋಮಿತಿ :
  • ಕನಿಷ್ಟ ವಯಸ್ಸು: 18 ವರ್ಷ (ಅಧಿಸೂಚನೆಯ ಪ್ರಕಾರ).
  • ಗರಿಷ್ಟ ವಯಸ್ಸು: 45 ವರ್ಷ (ಅಧಿಸೂಚನೆಯ ಪ್ರಕಾರ).
ವಯೋಮಿತಿ ಸಡಿಲಿಕೆ :
  • ಮಾಜಿ ಸೈನಿಕ ಅಭ್ಯರ್ಥಿಗಳು : 3 ವರ್ಷ.
  • SC/ST ಅಭ್ಯರ್ಥಿಗಳು : 5 ವರ್ಷ.
  • ಮಾಜಿ ಸೈನಿಕ (SC/ST) ಅಭ್ಯರ್ಥಿಗಳು : 8 ವರ್ಷ.
ಶೈಕ್ಷಣಿಕ ಅರ್ಹತೆ :
  • ಕನಿಷ್ಠ ವಿದ್ಯಾರ್ಹತೆ : 10ನೇ ತರಗತಿ ಪಾಸ್‌ / SSLC (ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ)
ಇದನ್ನು ಓದಿ : Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!
ಆಯ್ಕೆ ವಿಧಾನ :
  • ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ವಿವರಗಳು ಅಧಿಕೃತ KRCL ಅಧಿಸೂಚನೆಯಲ್ಲಿ ಲಭ್ಯವಿವೆ.
ಅರ್ಜಿ ಶುಲ್ಕ :
  • ರೂ.885/- (ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯಿಸುತ್ತದೆ)
ವೇತನ ಶ್ರೇಣಿ :
  • ಆಯ್ಕೆಯಾದ ಅಭ್ಯರ್ಥಿಗಳಿಗೆ KRCL ನಿಯಮಾನುಸಾರ ರೂ. 18,000/- ಪ್ರತಿ ತಿಂಗಳು ವೇತನ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ :
  • ಅಧಿಕೃತ ವೆಬ್‌ಸೈಟ್ (KRCL Website) ಅಥವಾ ಲಿಂಕ್‌ (Link) ಗೆ ಭೇಟಿ ನೀಡಿ.
  • ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಆನ್‌ಲೈನ್ ಅರ್ಜಿ Form ನ್ನು ಸರಿಯಾಗಿ ಭರ್ತಿ ಮಾಡಿ.
  • ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
  • ಫೋಟೋ ಹಾಗೂ ಸಹಿಯನ್ನು Upload ಮಾಡಿ.
  • ಅರ್ಜಿ ಸಲ್ಲಿಸಿ ಮತ್ತು ಪ್ರತಿಯನ್ನು ಮುದ್ರಿಸಿ (Print) ಇಟ್ಟುಕೊಳ್ಳಿ.
ಇದನ್ನು ಓದಿ : 7 ಬಾಲಕಿಯರ ಮೇಲೆ Sexual assault ; ಹೊಡೆದು ಕೊಂದ ಸ್ಥಳೀಯರು.!
ಪ್ರಮುಖ ದಿನಾಂಕಗಳು :
  • ಅರ್ಜಿಯ ಪ್ರಾರಂಭ ದಿನಾಂಕ : 23 ಜುಲೈ 2025.
  • ಅರ್ಜಿಯ ಕೊನೆಯ ದಿನಾಂಕ : 12 ಆಗಸ್ಟ್ 2025.
ಪ್ರಮುಖ ಲಿಂಕ್‌ಗಳು :

📌 ಸೂಚನೆ : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿಕೊಳ್ಳಬೇಕು.

7 ಬಾಲಕಿಯರ ಮೇಲೆ Sexual assault ; ಹೊಡೆದು ಕೊಂದ ಸ್ಥಳೀಯರು.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸುಮಾರು 7 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual assault) ಎಸಗಿದ ಆರೋಪಿಯನ್ನು ಪೊಲೀಸ್ ಠಾಣೆಯಿಂದ ಹೊರಗೆ ತಂದು ಸ್ಥಳೀಯರು ಹೊಡೆದು ಕೊಂದಿರುವ ಭಯಾನಕ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಅರುಣಾಚಲ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿತ ವ್ಯಕ್ತಿ ಸುಮಾರು 7 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual assault) ಎಸೆಗಿದ್ದ ಎನ್ನಲಾಗಿದೆ. ಘಟನೆಯ ಹಿನ್ನಲೆಯಲ್ಲಿ ಗುಂಪೊಂದು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ (Sexual assault) ಎಸಗಿದ ಆರೋಪಿಯನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದು ತಂದು ಹೊಡೆದು ಕೊಂದಿದ್ದಾರೆ.

ಇದನ್ನು ಓದಿ : Client : ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಂದ ತಮ್ಮದೇ ಕಕ್ಷಿದಾರ ಮೇಲೆ ಹಲ್ಲೆ.!

ಈ ಘಟನೆ ಅರುಣಾಚಲ ಪ್ರದೇಶದ ಲೋವರ್ ದಿಬಾಂಗ್ ಕಣಿವೆ ಜಿಲ್ಲೆಯ ರೋಯಿಂಗ್‌ನಲ್ಲಿ ನಡೆದಿದೆ. ಗುಂಪಿನಿಂದ ಹತನಾದ ವ್ಯಕ್ತಿಯನ್ನು ಕಟ್ಟಡ ಕಾರ್ಮಿಕ ಎಂದು ಹೇಳಲಾಗುತ್ತಿದೆ. ಕಟ್ಟಡ ಕಾರ್ಮಿಕನಾದ ಈ ಆರೋಪಿತ ವ್ತಕ್ತಿ ರೋಯಿಂಗ್‌ನ ಮೌಂಟ್ ಕಾರ್ಮೆಲ್ ಶಾಲೆಯ 5 ರಿಂದ 7 ವರ್ಷ ವಯಸ್ಸಿನ ಕನಿಷ್ಠ 7 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದನು.

ಕಟ್ಟಡ ಕಾರ್ಮಿಕನಾದ ಈ ಆರೋಪಿತ ವ್ತಕ್ತಿ ಮಧ್ಯರಾತ್ರಿಯಲ್ಲಿ ಬಾಲಕಿಯರ ಶಾಲೆಯ ಹಾಸ್ಟೆಲ್‌ಗೆ ನುಗ್ಗಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual assault) ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು. ಬಾಲಕಿಯರು ತಮಗೆ ಹೊಟ್ಟೆನೋವು ಎಂದು ಹೇಳಿದ ಪರಿಣಾಮವಾಗಿ ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಿದಾಗ, ವೈದ್ಯರು ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನು ಓದಿ : “Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!
ಪೊಲೀಸ್ ಕಣ್ಣೆದುರೇ ಲೈಂಗಿಕ ದೌರ್ಜನ್ಯ (Sexual assault) ಎಸಗಿದ ಆರೋಪಿ ಮೇಲೆ ಹಲ್ಲೆ :

ಕಟ್ಟಡ ಕಾರ್ಮಿಕನಾದ ಈ ಆರೋಪಿತ ವ್ತಕ್ತಿಯನ್ನು ಪೊಲೀಸರು ಬಂಧಿಸಿ ಕಳೆದ ಗುರುವಾರ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ವಿಷಯ ತಿಳಿದು ಠಾಣೆಗೆ ಆಗಮಿಸಿದ ಪೋಷಕರು ಮತ್ತು ಸ್ಥಳೀಯರು ಪೊಲೀಸ್ ಠಾಣೆಗೆ ನುಗ್ಗಿ ಆರೋಪಿಯನ್ನು ಹೊರಗೆ ಎಳೆದು ತೀವ್ರವಾಗಿ ಥಳಿಸಿದ್ದಾರೆ.

ಪೋಷಕರು ಮತ್ತು ಸ್ಥಳೀಯರು ಆರೋಪಿ (Sexual assault) ಮೇಲೆ ಹಲ್ಲೆ ನಡೆಸಿದಾಗ ಪೊಲೀಸರು ಆರೋಪಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಬೆಂಬಿಡದೆ ಹಿಂಬಾಲಿಸಿದ ಗುಂಪು ಆತನಿಗೆ ಮತ್ತೇ ಥಳಿಸಿತ್ತು. ಗುಂಪಿನ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಲೈಂಗಿಕ ದೌರ್ಜನ್ಯ (Sexual assault) ಎಸಗಿದ್ದ ಅಪ್ರಾಪ್ತ ಮೃತಪಟ್ಟಿದ್ದಾನೆ.

ಇದನ್ನು ಓದಿ : Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!
ಶಾಲೆ ಮುಚ್ಚಿದ ಜಿಲ್ಲಾ ಆಡಳಿತ :

ಬಾಲಕಿಯರ ಹಾಸ್ಟೆಲ್‌ನಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅಹಿತಕರ ಘಟನೆಯಿಂದಾಗಿ ಜಿಲ್ಲಾ ಅಧಿಕಾರಿಗಳು, ಜುಲೈ 12ರಿಂದ ಅನಿರ್ದಿಷ್ಟಾವಧಿಯವರೆಗೆ ಶಾಲೆಯನ್ನು ಮುಚ್ಚಲಾಗುವುದು ಎಂದು  ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಆದೇಶದಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಬಾಲಕಿಯರ ಹಾಸ್ಟೆಲ್‌ನಲ್ಲಿರುವ ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಹತ್ತಿರದ ಯಾವುದೇ ಸರ್ಕಾರಿ ಶಾಲೆಗಳು/ಮಾನ್ಯತೆ ಪಡೆದ ಖಾಸಗಿ ಶಾಲೆಗಳಿಗೆ ಸೇರಿಸಲು ನಿರ್ದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!

heart attack

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದೇಹ ಹೃದಯಾಘಾತ (Heart Attack) ಕ್ಕೆ ಒಂದು ಗಂಟೆ ಮೊದಲೇ ಕೊಡುತ್ತೆ ಈ ಎಚ್ಚರಿಕೆ ಸಂಕೇತಗಳನ್ನು. ಈ ಲಕ್ಷಣ (ಸಂಕೇತ) ಗಳನ್ನು ಎಂದೂ ಕಡೆಗಣಿಸಬೇಡಿ, ಒಂದು ವೇಳೆ ಕಡೆಗಣಿಸಿದರೆ ಸಾವೇ ಗತಿ.!

ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದು ವೈದ್ಯಕೀಯವಾಗಿ ಕರೆಯಲಾಗುವ ಹೃದಯಾಘಾತ (Heart Attack) ಕಳೆದ ಕೆಲವು ವರ್ಷಗಳಲ್ಲಿ ಅಪಾಯಕಾರಿ ಹಂತಕ್ಕೆ ತಲುಪಿದ್ದು, ರಾಜ್ಯದಲ್ಲಿ ಸಾವಿನ ಪ್ರಮುಖ ಕಾರಣಗಳಲ್ಲಿ ಒಂದಾಗಿ ಪರಿಣಮಿಸಿದೆ.

ತಜ್ಞರ ಅಭಿಪ್ರಾಯದಲ್ಲಿ, ಹೃದಯಾಘಾತ (Heart Attack) ದ ಮುನ್ನ ದೇಹ ನೀಡುವ ಸಂಕೇತ/ಲಕ್ಷಣಗಳನ್ನು ಗುರುತಿಸುವಲ್ಲಿ ವಿಳಂಬ ಅಥವಾ ಅವುಗಳನ್ನು ನಿರ್ಲಕ್ಷಿಸುವುದೇ ಹಲವಾರು ಮಂದಿ ತಮ್ಮ ಜೀವವನ್ನು ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ.

ಇದನ್ನು ಓದಿ : Client : ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಂದ ತಮ್ಮದೇ ಕಕ್ಷಿದಾರ ಮೇಲೆ ಹಲ್ಲೆ.!

ಹೃದಯರೋಗ ತಜ್ಞರು (Cardiologists) ಎಚ್ಚರಿಕೆಯಲ್ಲಿ ಹೇಳುವಂತೆ, ಹೃದಯಾಘಾತ (Heart Attack) ಕ್ಕೂ ಮುನ್ನ ಕೆಲವೊಂದು ಪ್ರಮುಖ ಸಂಕೇತ/ಲಕ್ಷಣಗಳು ಇರುತ್ತವೆ. ಅವುಗಳನ್ನು ಮೊದಲನೆಯದಾಗಿ ಗುರುತಿಸಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದರಿಂದ ಅನಾಹುತ ತಪ್ಪಿಸಬಹುದು.

ಹೃದಯಾಘಾತ (Heart Attack) ದ ಮೊದಲ ಸೂಚನೆಗಳು :
1. ಎದೆ ನೋವು ಮತ್ತು ಭಾರಪಡುವಿಕೆ :

ಹೃದಯಾಘಾತ (Heart Attack) ದ ಸಂದರ್ಭಗಳಲ್ಲಿ ಸಾಮಾನ್ಯ ಲಕ್ಷಣಗಳಲ್ಲಿ ಎದೆ ನೋವು ಪ್ರಮುಖವಾಗಿದೆ. ಕೆಲವೊಮ್ಮೆ ಎದೆ ನೋವು ಒತ್ತಡ, ಉರಿ, ಬಿಗಿತ ಅಥವಾ ಚುಚ್ಚುವಂತಹ ಭಾವನೆಯಾಗಿ ಕಾಣಿಸಬಹುದು. ಈ ನೋವು ಕೆಲ ನಿಮಿಷಗಳ ಕಾಲ ಮುಂದುವರಿಯಬಹುದು ಮತ್ತು ಕೆಲವೊಮ್ಮೆ ಇದು ಭುಜ, ತೋಳು, ದವಡೆ ಅಥವಾ ಬೆನ್ನಿನ ಕಡೆ ಹರಡಬಹುದು.

2. ಉಸಿರಾಟದ ತೊಂದರೆ :

ದೈಹಿಕ ಪ್ರಯತ್ನವಿಲ್ಲದಿದ್ದರೂ ಅಂದರೆ ಯಾವುದೇ ಕೆಲಸ ಮಾಡದಿದ್ದರೂ ಸಹ ಉಸಿರಾಟದಲ್ಲಿ ತೊಂದರೆ ಅನುಭವಿಸುತ್ತಿದ್ದರೆ, ಅದು ಹೃದಯದ ಕಾರ್ಯಕ್ಷಮತೆಯಲ್ಲಿ ತೊಂದರೆಯ ಸಂಕೇತವಾಗಿರಬಹುದು. ಹೃದಯ ಸರಿಯಾಗಿ ರಕ್ತ ಪಂಪ್ ಮಾಡದಿದ್ದಾಗ ದೇಹದ ಇತರ ಅಂಗಗಳಲ್ಲಿ ದುರ್ಬಲತೆ ಕಂಡುಬರುತ್ತದೆ.

ಇದನ್ನು ಓದಿ : Bath scene : ಮಹಿಳೆಯರ ಸ್ನಾನದ ದೃಶ್ಯ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಬಂಧನ.!
3. ಅಜೀರ್ಣವೆಂದು ಭಾಸವಾಗುವ ಹೊಟ್ಟೆ ನೋವು :

ನಿರಂತರವಾದ ಹೊಟ್ಟೆ ನೋವು, ವಾಕರಿಕೆ ಅಥವಾ ವಾಂತಿ ಭಾವನೆ ಸಹ ಹೃದಯಾಘಾತ (Heart Attack) ದ ಮುನ್ನಚೆನ್ನೆಯ ಲಕ್ಷಣವಾಗಬಹುದು. ವಿಶೇಷವಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಮಹಿಳೆಯರಲ್ಲಿ ಇದು ಹೆಚ್ಚು ಸಾಮಾನ್ಯ. ಕೆಲವೊಮ್ಮೆ ಜನರು ಇದನ್ನು ಸಾಮಾನ್ಯ ಅಜೀರ್ಣ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ.

⚠️ ಇತರೆ ಎಚ್ಚರಿಕೆ ಸೂಚನೆಗಳು :
  • ಎದೆಯಲ್ಲಿ ಉರಿ ಅಥವಾ ನೋವು ಬೆನ್ನು, ಕುತ್ತಿಗೆ, ದವಡೆ, ತೋಳುಗಳಿಗೆ ಹರಡುವುದು.
  • ಅತಿಯಾದ ಚಡಪಡಿಕೆ ಅಥವಾ ಗಾಬರಿ.
  • ತಲೆಸುತ್ತು ಅಥವಾ ಮೂರ್ಛೆ.
  • ತೀವ್ರ ಹೃದಯ ಬಡಿತ.
  • ನಿದ್ರಾಹೀನತೆ ಅಥವಾ ರಾತ್ರಿ ನಿದ್ರೆಯಿಂದ ಎಚ್ಚರವಾಗುವುದು.
ಹೃದಯಾಘಾತ (Heart Attack) ದ ಸಮಯದಲ್ಲಿ ತಕ್ಷಣ ಏನು ಮಾಡಬೇಕು.?

ಈ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರ ಸಹಾಯವನ್ನು ಪಡೆಯುವುದು ಅತ್ಯಗತ್ಯ. ಸಮಯಪಾಲನೆ ಇಲ್ಲದಿದ್ದರೆ ಹೃದಯ ಸ್ನಾಯುಗಳು ಶಾಶ್ವತವಾಗಿ ಹಾನಿಯಾಗಬಹುದು.

Note : ಸುರಕ್ಷಿತ ಜೀವನಶೈಲಿ + ಎಚ್ಚರಿಕೆ = ಆರೋಗ್ಯವಂತ ಭವಿಷ್ಯ.

ವ್ಯಾಯಾಮ, ಸಮತೋಲನ ಆಹಾರ, ಮನಸ್ಥಿತಿಯ ಸಮತೋಲನೆ ಮತ್ತು ಸಮಯಕ್ಕೆ ತಪಾಸಣೆ ಇವು ಆರೋಗ್ಯಕರ ಹೃದಯಕ್ಕೆ ಬಲಿಷ್ಠ ಆಧಾರಗಳು.

Disclaimer : The above given information is available On online, candidates should check it properly before applying. This is for information only.

Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ನಮ್ಮ ದೇಹ ಹೃದಯಾಘಾತ (Heart Attack) ಕ್ಕೆ ಒಂದು ಗಂಟೆ ಮೊದಲೇ ಕೊಡುತ್ತೆ ಈ ಎಚ್ಚರಿಕೆ ಸಂಕೇತಗಳನ್ನು. ಈ ಲಕ್ಷಣ (ಸಂಕೇತ) ಗಳನ್ನು ಎಂದೂ ಕಡೆಗಣಿಸಬೇಡಿ, ಒಂದು ವೇಳೆ ಕಡೆಗಣಿಸಿದರೆ ಸಾವೇ ಗತಿ.!

ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದು ವೈದ್ಯಕೀಯವಾಗಿ ಕರೆಯಲಾಗುವ ಹೃದಯಾಘಾತ (Heart Attack) ಕಳೆದ ಕೆಲವು ವರ್ಷಗಳಲ್ಲಿ ಅಪಾಯಕಾರಿ ಹಂತಕ್ಕೆ ತಲುಪಿದ್ದು, ರಾಜ್ಯದಲ್ಲಿ ಸಾವಿನ ಪ್ರಮುಖ ಕಾರಣಗಳಲ್ಲಿ ಒಂದಾಗಿ ಪರಿಣಮಿಸಿದೆ.

ತಜ್ಞರ ಅಭಿಪ್ರಾಯದಲ್ಲಿ, ಹೃದಯಾಘಾತ (Heart Attack) ದ ಮುನ್ನ ದೇಹ ನೀಡುವ ಸಂಕೇತ/ಲಕ್ಷಣಗಳನ್ನು ಗುರುತಿಸುವಲ್ಲಿ ವಿಳಂಬ ಅಥವಾ ಅವುಗಳನ್ನು ನಿರ್ಲಕ್ಷಿಸುವುದೇ ಹಲವಾರು ಮಂದಿ ತಮ್ಮ ಜೀವವನ್ನು ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ.

ಇದನ್ನು ಓದಿ : Client : ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಂದ ತಮ್ಮದೇ ಕಕ್ಷಿದಾರ ಮೇಲೆ ಹಲ್ಲೆ.!

ಹೃದಯರೋಗ ತಜ್ಞರು (Cardiologists) ಎಚ್ಚರಿಕೆಯಲ್ಲಿ ಹೇಳುವಂತೆ, ಹೃದಯಾಘಾತ (Heart Attack) ಕ್ಕೂ ಮುನ್ನ ಕೆಲವೊಂದು ಪ್ರಮುಖ ಸಂಕೇತ/ಲಕ್ಷಣಗಳು ಇರುತ್ತವೆ. ಅವುಗಳನ್ನು ಮೊದಲನೆಯದಾಗಿ ಗುರುತಿಸಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದರಿಂದ ಅನಾಹುತ ತಪ್ಪಿಸಬಹುದು.

ಹೃದಯಾಘಾತ (Heart Attack) ದ ಮೊದಲ ಸೂಚನೆಗಳು :
1. ಎದೆ ನೋವು ಮತ್ತು ಭಾರಪಡುವಿಕೆ :

ಹೃದಯಾಘಾತ (Heart Attack) ದ ಸಂದರ್ಭಗಳಲ್ಲಿ ಸಾಮಾನ್ಯ ಲಕ್ಷಣಗಳಲ್ಲಿ ಎದೆ ನೋವು ಪ್ರಮುಖವಾಗಿದೆ. ಕೆಲವೊಮ್ಮೆ ಎದೆ ನೋವು ಒತ್ತಡ, ಉರಿ, ಬಿಗಿತ ಅಥವಾ ಚುಚ್ಚುವಂತಹ ಭಾವನೆಯಾಗಿ ಕಾಣಿಸಬಹುದು. ಈ ನೋವು ಕೆಲ ನಿಮಿಷಗಳ ಕಾಲ ಮುಂದುವರಿಯಬಹುದು ಮತ್ತು ಕೆಲವೊಮ್ಮೆ ಇದು ಭುಜ, ತೋಳು, ದವಡೆ ಅಥವಾ ಬೆನ್ನಿನ ಕಡೆ ಹರಡಬಹುದು.

2. ಉಸಿರಾಟದ ತೊಂದರೆ :

ದೈಹಿಕ ಪ್ರಯತ್ನವಿಲ್ಲದಿದ್ದರೂ ಅಂದರೆ ಯಾವುದೇ ಕೆಲಸ ಮಾಡದಿದ್ದರೂ ಸಹ ಉಸಿರಾಟದಲ್ಲಿ ತೊಂದರೆ ಅನುಭವಿಸುತ್ತಿದ್ದರೆ, ಅದು ಹೃದಯದ ಕಾರ್ಯಕ್ಷಮತೆಯಲ್ಲಿ ತೊಂದರೆಯ ಸಂಕೇತವಾಗಿರಬಹುದು. ಹೃದಯ ಸರಿಯಾಗಿ ರಕ್ತ ಪಂಪ್ ಮಾಡದಿದ್ದಾಗ ದೇಹದ ಇತರ ಅಂಗಗಳಲ್ಲಿ ದುರ್ಬಲತೆ ಕಂಡುಬರುತ್ತದೆ.

ಇದನ್ನು ಓದಿ : Bath scene : ಮಹಿಳೆಯರ ಸ್ನಾನದ ದೃಶ್ಯ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಬಂಧನ.!
3. ಅಜೀರ್ಣವೆಂದು ಭಾಸವಾಗುವ ಹೊಟ್ಟೆ ನೋವು :

ನಿರಂತರವಾದ ಹೊಟ್ಟೆ ನೋವು, ವಾಕರಿಕೆ ಅಥವಾ ವಾಂತಿ ಭಾವನೆ ಸಹ ಹೃದಯಾಘಾತ (Heart Attack) ದ ಮುನ್ನಚೆನ್ನೆಯ ಲಕ್ಷಣವಾಗಬಹುದು. ವಿಶೇಷವಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಮಹಿಳೆಯರಲ್ಲಿ ಇದು ಹೆಚ್ಚು ಸಾಮಾನ್ಯ. ಕೆಲವೊಮ್ಮೆ ಜನರು ಇದನ್ನು ಸಾಮಾನ್ಯ ಅಜೀರ್ಣ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ.

⚠️ ಇತರೆ ಎಚ್ಚರಿಕೆ ಸೂಚನೆಗಳು :
  • ಎದೆಯಲ್ಲಿ ಉರಿ ಅಥವಾ ನೋವು ಬೆನ್ನು, ಕುತ್ತಿಗೆ, ದವಡೆ, ತೋಳುಗಳಿಗೆ ಹರಡುವುದು.
  • ಅತಿಯಾದ ಚಡಪಡಿಕೆ ಅಥವಾ ಗಾಬರಿ.
  • ತಲೆಸುತ್ತು ಅಥವಾ ಮೂರ್ಛೆ.
  • ತೀವ್ರ ಹೃದಯ ಬಡಿತ.
  • ನಿದ್ರಾಹೀನತೆ ಅಥವಾ ರಾತ್ರಿ ನಿದ್ರೆಯಿಂದ ಎಚ್ಚರವಾಗುವುದು.
ಹೃದಯಾಘಾತ (Heart Attack) ದ ಸಮಯದಲ್ಲಿ ತಕ್ಷಣ ಏನು ಮಾಡಬೇಕು.?

ಈ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರ ಸಹಾಯವನ್ನು ಪಡೆಯುವುದು ಅತ್ಯಗತ್ಯ. ಸಮಯಪಾಲನೆ ಇಲ್ಲದಿದ್ದರೆ ಹೃದಯ ಸ್ನಾಯುಗಳು ಶಾಶ್ವತವಾಗಿ ಹಾನಿಯಾಗಬಹುದು.

Note : ಸುರಕ್ಷಿತ ಜೀವನಶೈಲಿ + ಎಚ್ಚರಿಕೆ = ಆರೋಗ್ಯವಂತ ಭವಿಷ್ಯ.

ವ್ಯಾಯಾಮ, ಸಮತೋಲನ ಆಹಾರ, ಮನಸ್ಥಿತಿಯ ಸಮತೋಲನೆ ಮತ್ತು ಸಮಯಕ್ಕೆ ತಪಾಸಣೆ ಇವು ಆರೋಗ್ಯಕರ ಹೃದಯಕ್ಕೆ ಬಲಿಷ್ಠ ಆಧಾರಗಳು.


Astrology : ಹೇಗಿದೆ ಗೊತ್ತಾ.? ಜುಲೈ 12 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 12 ರ ಶನಿವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತೀರಿ. ಬಾಲ್ಯದ ಸ್ನೇಹಿತರೊಂದಿಗೆ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಉಂಟಾಗುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ.

*ವೃಷಭ ರಾಶಿ*

ಕುಟುಂಬ ಸದಸ್ಯರೊಂದಿಗೆ ಕಠಿಣವಾಗಿ ಮಾತನಾಡುವುದನ್ನು ತಪ್ಪಿಸುವುದು ಉತ್ತಮ. ಆರ್ಥಿಕ ವಿಚಾರಗಳು ನಿರಾಸೆ ಉಂಟುಮಾಡುತ್ತದೆ. ಪ್ರಾರಂಭಿಸಿದ ಕಾರ್ಯಗಳು ನಿಧಾನವಾಗಿ ಸಾಗುತ್ತವೆ. ದೂರ ಪ್ರಯಾಣವನ್ನು ಮುಂದೂಡುವ ಸಾಧ್ಯತೆ . ಸಣ್ಣ ಆರೋಗ್ಯ ತೊಂದರೆಗಳು ಉಂಟಾಗುತ್ತದೆ. ವ್ಯಾಪಾರ ನಿಧಾನಗತಿಯಲ್ಲಿ ಸಾಗುತ್ತದೆ. ಸಹೋದ್ಯೋಗಿಗಳೊಂದಿಗೆ ವಿವಾದ ಉಂಟಾಗುತ್ತದೆ.

*ಮಿಥುನ ರಾಶಿ*

ಆಧ್ಯಾತ್ಮಿಕ ಕಾರ್ಯಕ್ರಮಗಳತ್ತ ಗಮನ ಹರಿಸುತ್ತೀರಿ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕೈಗೊಂಡ ಕೆಲಸಗಳಲ್ಲಿ ವಿಘ್ನಗಳು ಎದುರಾಗುತ್ತವೆ. ಮನೆಯ ಹೊರೆಗೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ಫಲಿಸುವುದಿಲ್ಲ.

*ಕಟಕ ರಾಶಿ*

ಕೈಗೊಂಡ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುತ್ತೀರಿ. ಪ್ರಮುಖ ವಿಚಾರಗಳಲ್ಲಿ ಆತ್ಮೀಯರ ಬಂಬಲ ಸಿಗುತ್ತದೆ. ನಿಮ್ಮ ಕೆಲಸದ ನೈಪುಣ್ಯತೆಯಿಂದ ಅಧಿಕಾರಿ ವರ್ಗದಿಂದ ಪ್ರಶಂಸೆ ಪಡೆಯುತ್ತೀರಿ. ಕುಟುಂಬದೊಂದಿಗೆ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
*ಸಿಂಹ ರಾಶಿ*

ಆರ್ಥಿಕ ಅವಶ್ಯಕತೆಗಾಗಿ ಹಣದ ಕೊರತೆ ಎದುರಾಗುತ್ತದೆ. ಹೊಸ ಸಾಲದ ಪ್ರಯತ್ನ ಮಾಡಬೇಕಾಗುತ್ತದೆ. ಆತ್ಮೀಯರೊಂದಿಗೆ ಮಾತಿನ ಭಿನ್ನಾಭಿಪ್ರಾಯಗಳಿರುತ್ತವೆ. ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಹೆಚ್ಚು ಕಿರಿಕಿರಿ ಉಂಟುಮಾಡುತ್ತವೆ. ವ್ಯಾಪಾರಗಳು ನಿಧಾನವಾಗಿ ಸಾಗುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ವಿಶ್ರಾಂತಿಗೆ ಅವಕಾಶ ಇರುವುದಿಲ್ಲ.

*ಕನ್ಯಾ ರಾಶಿ*

ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಪ್ರಮುಖರೊಂದಿಗೆ ಪರಿಚಯ ಹೆಚ್ಚಾಗುತ್ತದೆ. ಭೂ ಸಂಬಂಧಿತ ವ್ಯವಹಾರಗಳಲ್ಲಿ ಲಾಭ ದೊರೆಯುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಕುಟುಂಬದವರು ಆಕಸ್ಮಿಕವಾಗಿ ಹಣ ಸಹಾಯ ಮಾಡುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಲಭಿಸುತ್ತವೆ.

*ತುಲಾ ರಾಶಿ*

ದೀರ್ಘಕಾಲದ ಒತ್ತಡ ಹೆಚ್ಚಾಗುತ್ತದೆ. ಪ್ರಯಾಣದಲ್ಲಿ ವಾಹನ ಅಪಘಾತದ ಸೂಚನೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಮನೆಯ ಹೊರಗೆ ಕೆಲವರ ವರ್ತನೆ ಆಶ್ಚರ್ಯ ಉಂಟುಮಾಡುತ್ತದೆ. ಉದ್ಯೋಗದಲ್ಲಿ ಪ್ರಯತ್ನಗಳು ಫಲ ನೀಡುವುದಿಲ್ಲ. ಬಾಲ್ಯದ ಸ್ನೇಹಿತರೊಂದಿಗೆ ಪವಿತ್ರ ಸ್ಥಳಗಳ ಭೇಟಿ ಮಾಡುತ್ತೀರಿ.

*ವೃಶ್ಚಿಕ ರಾಶಿ*

ಮನೆಯಲ್ಲಿಗೆ ಬಾಲ್ಯದ ಸ್ನೇಹಿತರ ಭೇಟಿ ಸಂತೋಷ ಉಂಟಾಗುತ್ತದೆ. ಸಹೋದರರೊಂದಿಗೆ ವಿವಾದ ಪರಿಹಾರದತ್ತ ಸಾಗುತ್ತದೆ. ಸಮಾಜದಲ್ಲಿ ಹಿರಿಯರ ಪರಿಚಯ ಹೆಚ್ಚಾಗುತ್ತದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಪ್ರಮುಖ ಮಾಹಿತಿಯನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಉತ್ತಮ ಪರಿಸ್ಥಿತಿಗಳಿರುತ್ತವೆ. ಹೊಸ ವಾಹನ ಖರೀದಿಯ ಯೋಗವಿದೆ.

ಇದನ್ನು ಓದಿ : ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?
*ಧನುಸ್ಸು ರಾಶಿ*

ಪ್ರಯಾಣಗಳಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗುತ್ತದೆ. ಆತ್ಮೀಯರಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ನಿರುದ್ಯೋಗಿಗಳ ಯತ್ನಗಳು ವೇಗಗೊಳ್ಳುತ್ತವೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ವೃತ್ತಿ ಮತ್ತು ವ್ಯಾಪಾರ ಲಾಭದ ದಾರಿಯಲ್ಲಿ ಸಾಗುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಹೊರೆಗಳಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

*ಮಕರ ರಾಶಿ*

ಜೀವನ ಸಂಗಾತಿಯೊಂದಿಗೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ಅನಗತ್ಯ ಖರ್ಚು ಹೆಚ್ಚಾಗುತ್ತದೆ. ಮುಖ್ಯ ಕೆಲಸಗಳು ಮುಂದೂಡಲ್ಪಡುತ್ತವೆ. ಆರೋಗ್ಯದ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯ. ವೃತ್ತಿ ಮತ್ತು ವ್ಯಾಪಾರದಲ್ಲಿ ತೊಂದರೆಗಳು ಎದುರಾಗುತ್ತವೆ. ನಿರುದ್ಯೋಗದ ಪ್ರಯತ್ನಗಳು ನಿರಾಸೆ ಉಂಟಾಗುತ್ತದೆ.

*ಕುಂಭ ರಾಶಿ*

ದೂರದ ಸಂಬಂಧಿಗಳೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗುತ್ತದೆ. ವ್ಯಾಪಾರದಲ್ಲಿ ಹೊಸ ಬಂಡವಾಳ ಹೂಡಿಕಗಳ ವಿಚಾರದಲ್ಲಿ ಪುಣ್ಯರಾಲೋಚನೆ ಮಾಡುವುದು ಉತ್ತಮ. ಕೈಗೊಂಡ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಆಕಸ್ಮಿಕವಾಗಿ ನಿರ್ಧಾರ ಬದಲಾಗುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಶ್ರಮವಹಿಸಬೇಕಾಗುತ್ತದೆ.

*ಮೀನ ರಾಶಿ*

ವೃತ್ತಿ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಆತ್ಮೀಯರೊಂದಿಗೆ ಸೌಹಾರ್ದದಿಂದ ವರ್ತಿಸುತ್ತೀರಿ. ಹೊಸ ವಸ್ತು ಹಾಗೂ ವಾಹನದ ಲಾಭದ ಯೋಗವಿದೆ. ಸಹೋದರರಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ವ್ಯಾಪಾರ ಲಾಭದಾಯಕವಾಗಿರುತ್ತದೆ. ಉದ್ಯೋಗದಲ್ಲಿ ಪದೋನ್ನತಿಯ ಸಾಧ್ಯತೆ ಇದೆ.

Astrology

Client : ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಂದ ತಮ್ಮದೇ ಕಕ್ಷಿದಾರ ಮೇಲೆ ಹಲ್ಲೆ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನ್ಯಾಯಾಲಯದ ಆವರಣದಲ್ಲಿಯೇ ತಮ್ಮದೇ ಕಕ್ಷಿದಾರ/ಕ್ಲೈಂಟ್ (Client) ಮೇಲೆ ಓರ್ವ ಮಹಿಳಾ ವಕೀಲರಿಂದ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಬಿಲಾಸಪುರ ಕುಟುಂಬ ನ್ಯಾಯಾಲಯ ಆವರಣದಲ್ಲಿ ಶನಿವಾರದಂದು ಸಂಭವಿಸಿದ ಈ ಘಟನೆಯು ಸಾರ್ವಜನಿಕರಲ್ಲಿ ಆಕ್ರೋಶದ ಹೊಗೆ ಎಳೆದಿದೆ. ಮಹಿಳಾ ವಕೀಲ ಲೀನಾ ಅಗ್ರಹಾರಿ ತಮ್ಮದೇ ಕ್ಲೈಂಟ್ (Client) ಸುಮನ್ ಠಾಕೂರ್ ಮತ್ತು ಅವರ ಕುಟುಂಬದ ಮೇಲೆ ನೇರವಾಗಿ ಶಾರೀರಿಕ ಹಲ್ಲೆ ನಡೆಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!

ಕುತೂಹಲದ ಸಂಗತಿಯೆಂದರೆ, ಈ ಘಟನೆ ನಡೆಯುತ್ತಿರುವಾಗ ಸ್ಥಳದಲ್ಲೇ ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆ ಇತರ ಪೊಲೀಸ್ ಇದ್ದರೂ ಕಕ್ಷಿದಾರರ (Client) ಮೇಲೆ ಹಲ್ಲೆ ನಡೆದರೂ ಸಹ ಯಾವುದೇ ತಕ್ಷಣದ ಕ್ರಮ ಕೈಗೊಂಡಿಲ್ಲದೆ ಇರುವುದು.

ಹಲ್ಲೆಗೊಳಗಾದ ಸುಮನ್ ಠಾಕೂರ್ ತಮ್ಮ ಪತಿ ವಿರುದ್ಧ ಕುಟುಂಬ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಬಂದಿದ್ದರು. ಅವರೊಂದಿಗೆ ತಾಯಿ ಸಾವಿತ್ರಿ ದೇವಿ (ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು) ಮತ್ತು ತಮ್ಮ ಸಹೋದರ ಮಕುಂದ್ ಠಾಕೂರ್ ಇದ್ದರು.

ಇದನ್ನು ಓದಿ : Krishna River : ಫೋಟೋಶೂಟ್ ನೆಪದಲ್ಲಿ ಪತಿಯನ್ನೇ ಕೃಷ್ಣಾ ನದಿಗೆ ತಳ್ಳಿದ ಪತ್ನಿ.?

ಕಕ್ಷಿದಾರೆ (Client) ಸುಮನ್ ಠಾಕೂರ್ ಅವರ ಆರೋಪದ ಪ್ರಕಾರ, ವಕೀಲೆ ಲೀನಾ ಅಗ್ರಹಾರಿ ಈಗಾಗಲೆ ಪ್ರಕರಣಕ್ಕೆ ಸಂಬಂಧಿಸಿದ ಮೊತ್ತವನ್ನು ತೆಗೆದುಕೊಂಡಿದ್ದರೂ ಸಹ ಪ್ರಕರಣವನ್ನು ಮುಂದುವರಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ವಕೀಲೆ ಲೀನಾ ಆಕ್ರೋಶಗೊಂಡು ದೌರ್ಜನ್ಯಕ್ಕೆ ಮುಂದಾದರೆಂದು ಕುಟುಂಬದವರು ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಕೀಲೆ ಲೀನಾ ಅಗ್ರಹಾರಿ, ಕಕ್ಷಿದಾರೆ (Client) ಸುಮನ್‌ನ್ನು ಕೂದಲಿನಿಂದ ಎಳೆದು ತಳ್ಳಿ ನೆಲಕ್ಕೆ ಹಾಕಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಮಧ್ಯಪ್ರವೇಶ ಮಾಡಲು ಬಂದ ಅವರ ತಾಯಿಯನ್ನು ಕೂಡ ತಳ್ಳಿದಳು. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಾವಿತ್ರಿ ದೇವಿಗೆ ಈ ವೇಳೆ ತೀವ್ರ ಹೊಡೆತ ಬಿದ್ದಿದೆ.

ಇದನ್ನು ಓದಿ : Bath scene : ಮಹಿಳೆಯರ ಸ್ನಾನದ ದೃಶ್ಯ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಬಂಧನ.!

ಹಲ್ಲೆಯ ದೃಶ್ಯವನ್ನು ಮೊಬೈಲ್‌ನಲ್ಲಿ ದಾಖಲೆ ಮಾಡುತ್ತಿದ್ದ ಮಕುಂದ್ ಠಾಕೂರ್ ಅವರ ಮೇಲೂ ವಕೀಲರು ತೀವ್ರವಾದ ಹಲ್ಲೆ ಮಾಡುವಂತೆ ನಡೆದುಕೊಂಡು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

ಘಟನೆ ನಡೆದ ವೇಳೆ ಸ್ಥಳದಲ್ಲಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಶ್ನೆಯಾಗಿಯೇ ಉಳಿದಿದೆ.  ಅಲ್ಲದೆ, ಇತರ ಕೆಲ ವಕೀಲರು ಲೀನಾ ಅಗ್ರಹಾರಿಯ ಪರವಾಗಿ ನಿಂತು ದೂರುದಾರ (Client) ರ ವಿರುದ್ಧವೇ ಮಾತನಾಡಿದ್ದಾರೆ ಎಂಬ ವರದಿಯೂ ಬಂದಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಿವಿಲ್ ಲೈನ್ಸ್ ಪೊಲೀಸ್ ಠಾಣಾಧಿಕಾರಿ, “ವಕೀಲ ಮತ್ತು ದೂರುದಾರ (Client) ಕುಟುಂಬದ ನಡುವೆ ಜಗಳ ಮತ್ತು ಘರ್ಷಣೆ ನಡೆದಿದ್ದು, ಎರಡು ಪಕ್ಷಗಳ ಮಾತು ಕತೆಯ ನಂತರ ಸಮಸ್ಯೆ ಇತ್ಯರ್ಥವಾಘಿದೆ ಎಂದಿದ್ದಾರೆ.

ತಮ್ಮದೇ ಕಕ್ಷಿದಾರರ/ಕ್ಲೈಂಟ್ (Client) ಮೇಲೆ ಹಲ್ಲೆ ಮಾಡುವ ವಿಡಿಯೋ :

https://twitter.com/i/status/1943554292549390378


ನ್ಯಾಯಾಲಯದ ಆವರಣದಲ್ಲಿ ಹಲ್ಲೆ? ಪದೇಪದೇ ಮರುಕಳಿಸುತ್ತಿರುವ ಘಟನೆಗಳು :

ಇದೇ ತಿಂಗಳ ಕೊನೆಗೆ, ಜುಲೈ 5ರಂದು ಬಿಲಾಸಪುರದ ಟಿಫ್ರಾ ಪ್ರದೇಶದ ಕುಟುಂಬ ನ್ಯಾಯಾಲಯದಲ್ಲಿ ಮತ್ತೊಬ್ಬ ವಕೀಲ ಕುಂತಿ ಪವಾರ್ ವಿರುದ್ಧ, ಪತಿಯನ್ನು ಬಂಧನದಿಂದ ಬಿಡುಗಡೆಗೊಳಿಸಲು ಹಣ ನೀಡಿದ್ದರೂ ಜಾಮೀನು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ದೂರುದಾರ ಪ್ರಿಯಾ ದ್ವಿವೇದಿಯ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು.

ಈ ಮೂಲಕ ನ್ಯಾಯಾಲಯದ ಆವರಣದಲ್ಲಿ ವಕೀಲರಿಂದ ಸಾಮಾನ್ಯ ನಾಗರಿಕರ ಮೇಲಿನ ದೌರ್ಜನ್ಯ ಪದೇಪದೇ ನಡೆಯುತ್ತಿರುವ ಪೈಕಿ ಇತ್ತೀಚಿನ ಉದಾಹರಣೆಯಿದು. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಘಟನೆಗಳು ಸಂಭವಿಸುವುದು ಕಾನೂನು ವ್ಯವಸ್ಥೆಯ ಮೇಲೆ ಅನುಮಾನ ಹುಟ್ಟಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಕಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


Krishna River : ಫೋಟೋಶೂಟ್ ನೆಪದಲ್ಲಿ ಪತಿಯನ್ನೇ ಕೃಷ್ಣಾ ನದಿಗೆ ತಳ್ಳಿದ ಪತ್ನಿ.?

Krishna River

ಜನಸ್ಪಂದನ ನ್ಯೂಸ್, ರಾಯಚೂರು : ಫೋಟೋಶೂಟ್ ನೆಪದಲ್ಲಿ ಪತಿಯನ್ನೇ ಕೃಷ್ಣಾ ನದಿ (Krishna River) ಗೆ ಪತ್ನಿಯೋರ್ವಳು ತಳ್ಳಿದ್ದಾಳೆಂಬ ಆರೋಪ ಕೇಳಿ ಬಂದಿದೆ.

ರಾಯಚೂರು ತಾಲ್ಲೂಕಿನ ಗುರ್ಜಾಪುರ ಹತ್ತಿರದ ಕೃಷ್ಣಾ ನದಿ (Krishna River) ಸೇತುವೆ ಬಳಿ ಅಚ್ಚರಿಯ ಘಟನೆಯೊಂದು ನಡೆದಿದೆ. ನವದಂಪತಿಗಳು ಫೋಟೊಶೂಟ್ ಮಾಡುವ ನೆಪದಲ್ಲಿ ಕೃಷ್ಣಾ ನದಿ (Krishna River) ಯ ಸೇತುವೆಯ ಮೇಲೆ ಹೋಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಪತಿಯನ್ನು ನದಿಗೆ ತಳ್ಳಿದ ಆರೋಪ ಪತ್ನಿಯ ಮೇಲೆ ಕೇಳಿಬಂದಿದೆ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!

ಸ್ಥಳೀಯರ ಮಾಹಿತಿಯ ಪ್ರಕಾರ, ಪತ್ನಿ ಮೊದಲಿಗೆ ಕೃಷ್ಣಾ ನದಿ (Krishna River) ಸೇತುವೆ ಮೇಲೆ ನಿಂತು ಫೋಟೋ ತೆಗೆಸಿಕೊಂಡಿದ್ದಾಳೆ. ಬಳಿಕ, ಪತಿಗೆ “ನೀನು ಸೇತುವೆ ತುದಿಗೆ ನಿಲ್ಲು, ನಿನ್ನ ಫೋಟೋ ತೆಗೆಸ್ತೀನಿ” ಎಂದು ಹೇಳಿದ್ದಾಳೆ. ಆಗ ಪತಿ ಸೇತುವೆಯ ತುದಿಯಲ್ಲಿ ನಿಂತ ಕ್ಷಣದಲ್ಲಿ, ಪತ್ನಿಯು ಆತನನ್ನು ಕೃಷ್ಣಾ ನದಿಗೆ ತಳ್ಳಿದ್ದಾಳೆ ಎನ್ನಲಾಗುತ್ತಿದೆ.

ಘಟನೆಯ ಸಮಯದಲ್ಲಿ ಕೃಷ್ಣಾ ನದಿ (Krishna River) ಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಹಿನ್ನಲೆಯಲ್ಲಿ ವ್ಯಕ್ತಿ ತುಸು ದೂರ ಕೊಚ್ಚಿಕೊಂಡು ಹೋಗಿ ಅಪಾಯದ ಸ್ಥಿತಿಗೆ ಸಿಲುಕಿದ್ದಾರೆ. ಆದರೆ ವ್ಯಕ್ತಿ (ಪತಿ) ಗೆ ಈಜು ಬರುತ್ತಿರುವ ಕಾರಣದಿಂದ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಅವರು, ಮಧ್ಯ ಭಾಗದ ಬಂಡೆಯೊಂದರ ಮೇಲೆ ಏರಿ ಕುಳಿತು ಸಹಾಯಕ್ಕಾಗಿ ಕೂಗಿದ್ದಾರೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!

ಈ ಸಂದರ್ಭದಲ್ಲಿ, ಕೃಷ್ಣಾ ನದಿ (Krishna River) ಹತ್ತಿರದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಆ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ್ದರು. ತಕ್ಷಣವೇ ಹಗ್ಗದ ಸಹಾಯದಿಂದ ನಿರಂತರ ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಸ್ಥಳೀಯರು ವ್ಯಕ್ತಿಯನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.

ಪತ್ನಿಯೇ ನದಿಗೆ ತಳ್ಳಿದಳೇ? ಅಥವಾ ಪತಿಯೇ ಕಾಲು ಜಾರಿ Krishna River ಗೆ ಬಿದ್ದರೇ? ಎಂಬುದರ ಬಗ್ಗೆ ದ್ವಂದ್ವ ಉಂಟಾಗಿದೆ. ಆದರೆ ಪತಿ, ಪತ್ನಿಯೇ ಉದ್ದೇಶ ಪೂರ್ವಕವಾಗಿ ತಳ್ಳಿದ್ದಾಳೆ ಎಂದು ಆರೋಪಿಸಿದ್ದಾರೆ. ಇತ್ತ ಪತ್ನಿ ಮಾತ್ರ “ಅವರು ಕಾಲು ಜಾರಿ ಪತಿ ಬಿದ್ದರು” ಎಂಬ ವಿವರಣೆ ನೀಡಿದ್ದಾರೆ.

ಇದನ್ನು ಓದಿ : Humaira : ನಟಿ ಹುಮೈರಾ ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.!

ಕೆಲವರ ಹೇಳಿಕೆಗಳ ಪ್ರಕಾರ ಪತ್ನಿಯು ಈ ಕೃತ್ಯವನ್ನು ಜಾಣ್ಮೆಯಿಂದ ಮಾಡಿದ್ದಾಳೆ ಎಂದು ಶಂಕೆ ವ್ಯಕ್ತವಾಗಿದೆ. ಈ ದಂಪತಿ ಯಾರು.? ಯಾವ ಗ್ರಾಮದಿಂದ ಬಂದಿದ್ದರು.? ಏತಕ್ಕಾಗಿ ಬಂದಿದ್ದರು.? ಈ ಘಟನೆಯ ಹಿಂದಿರುವ ನಿಖರ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ಮಾಹಿತಿ ಕಲೆಹಾಕಲು ತನಿಖೆ ಮುಂದುವರೆಸಿದ್ದಾರೆ.

Note : ಇತ್ತೀಚಿನ ದಿನಗಳಲ್ಲಿ ಪತಿಯ ಮೇಲೆ ಪತ್ನಿಯಿಂದ ನಡೆಯುತ್ತಿರುವ ಹಲ್ಲೆಗಳ ಅಥವಾ ಹತ್ಯೆಯಂತಹ ಘಟನೆಗಳು ತುಂಬಾನೇ ಹೆಚ್ಚುತ್ತಿವೆ. ಈ ಘಟನೆಗಳು ಸಮಾಜಕ್ಕೆ ಏನು ಸಂದೇಶ ಕೊಡುತಿವೆ ಅಂತ ಯೋಚಿಸಬೇಕಾಗಿದೆ.

Bath scene : ಮಹಿಳೆಯರ ಸ್ನಾನದ ದೃಶ್ಯ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಬಂಧನ.!

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಮಹಿಳೆಯರು ಸ್ನಾನ ಮಾಡುತ್ತಿದ್ದ ದೃಶ್ಯಗಳನ್ನು (Bath scene) ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವಿಕೃತ ವ್ಯಕ್ತಿಯೊಬ್ಬನನ್ನು ಕಾಡುಗೋಡಿ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ.

ಮಹಿಳೆಯರು ಸ್ನಾನ ಮಾಡುತ್ತಿದ್ದ ದೃಶ್ಯಗಳನ್ನು (Bath scene) ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಹಾಗು ಬಂಧಿತ ವ್ಯಕ್ತಿಯನ್ನು ಚನ್ನಸಂದ್ರ ನಿವಾಸಿ ಹಾಜ ಮೊಯಿನುದ್ದಿನ್ (ವಯಸ್ಸು ಸರಿಯಾದ ಮಾಹಿತಿ ಬಹಿರಂಗಪಡಿಸಲಾಗಿಲ್ಲ) ಎಂದು ಗುರುತಿಸಲಾಗಿದೆ.

ಇದನ್ನು ಓದಿ : Belagavi horrific incident : ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಓರ್ವ ಗಂಭೀರ.!

ಆರೋಪಿ ಮೂಲತಃ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದು, ಮಹಿಳೆಯರು ಸ್ನಾನಕ್ಕೆ ತೆರಳಿದ ಸಂದರ್ಭ ಕಿಟಕಿಯ ಮೂಲಕ ಕದ್ದು ನೋಡುತ್ತಿದ್ದನಲ್ಲದೆ, ತನ್ನ ಮೊಬೈಲ್ ಮೂಲಕ ದೃಶ್ಯವನ್ನು (Bath scene) ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ.

ಕಳೆದ ಮಂಗಳವಾರ ಬೆಳಿಗ್ಗೆ ಸುಮಾರು 6:30ರ ಸಮಯದಲ್ಲಿ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ತಾಯಿ ಮತ್ತು ಮಗಳು ಬಾತ್ರೂಮ್‌ಗೆ ಸ್ನಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಮೊಯಿನುದ್ದಿನ್ ಎಂಬಾತ ಕಿಟಕಿಯಿಂದ ತನ್ನ ಮೊಬೈಲ್‌ ಫೋನ್‌ನಲ್ಲಿ Bath scene ವಿಡಿಯೋ ಮಾಡುತ್ತಿದ್ದನು.

ಇದನ್ನು ಓದಿ : “Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!

ಹೀಗೆ ಮೊಬೈಲ್‌ ಫೋನ್‌ನಲ್ಲಿ ವಿಡಿಯೋ ಮಾಡುತ್ತಿರುವುದು ಮಗಳ ಗಮನಕ್ಕೆ ಬಿದ್ದಿದೆ. ತಕ್ಷಣವೇ ಮಗಳು ಈ ವಿಷಯವನ್ನು ಆಕೆಯ ತಂದೆಗೆ ಮಾಹಿತಿ ನೀಡಿದ್ದಾಳೆ.

ವಿಷಯ ತಿಳಿದ ತಕ್ಷಣವೇ ಪ್ರತಿಕ್ರಿಯೆಯಾಗಿ ಕುಟುಂಬದವರು ಕಾಡುಗೋಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಯು (who recorded Bath scene) ಘಟನೆ ನಂತರ ಸ್ಥಳದಿಂದ ಪರಾರಿಯಾಗಿದ್ದ, ಆದರೆ ಪೊಲೀಸರು ಮಾತ್ರ ಆತನನ್ನು (who recorded Bath scene) ಪತ್ತೆಹಚ್ಚಿ ಬಂಧಿಸಿದ್ದಾರೆ.

ಇದನ್ನು ಓದಿ : ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ನದಿಗೆ ಬಿದ್ದ Helicopter ; 5 ಜನರಿಗೆ ಗಾಯ.!

ಬಳಿಕ ಬಂಧಿತ ವ್ಯಕ್ತಿಯ ಅಂದರೆ ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದ ಪೊಲೀಸರು, ಆತ ತನ್ನ ಮೊಬೈಲ್‌ನಲ್ಲಿ ಹಿಡಿದಿಟ್ಟಿದ್ದ ಅನಧಿಕೃತ ದೃಶ್ಯಗಳನ್ನು (Bath scene) ಡಿಲೀಟ್ ಮಾಡಿದ್ದಾರೆ. ಇದೇ ವೇಳೆ ಸೈಬರ್ ತಾಂತ್ರಿಕ ತಂಡದ ಸಹಾಯದಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪೊಲೀಸರು IPC ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Astrology : ಹೇಗಿದೆ ಗೊತ್ತಾ.? ಜುಲೈ 12 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 12 ರ ಶನಿವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತೀರಿ. ಬಾಲ್ಯದ ಸ್ನೇಹಿತರೊಂದಿಗೆ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಉಂಟಾಗುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ.

*ವೃಷಭ ರಾಶಿ*

ಕುಟುಂಬ ಸದಸ್ಯರೊಂದಿಗೆ ಕಠಿಣವಾಗಿ ಮಾತನಾಡುವುದನ್ನು ತಪ್ಪಿಸುವುದು ಉತ್ತಮ. ಆರ್ಥಿಕ ವಿಚಾರಗಳು ನಿರಾಸೆ ಉಂಟುಮಾಡುತ್ತದೆ. ಪ್ರಾರಂಭಿಸಿದ ಕಾರ್ಯಗಳು ನಿಧಾನವಾಗಿ ಸಾಗುತ್ತವೆ. ದೂರ ಪ್ರಯಾಣವನ್ನು ಮುಂದೂಡುವ ಸಾಧ್ಯತೆ . ಸಣ್ಣ ಆರೋಗ್ಯ ತೊಂದರೆಗಳು ಉಂಟಾಗುತ್ತದೆ. ವ್ಯಾಪಾರ ನಿಧಾನಗತಿಯಲ್ಲಿ ಸಾಗುತ್ತದೆ. ಸಹೋದ್ಯೋಗಿಗಳೊಂದಿಗೆ ವಿವಾದ ಉಂಟಾಗುತ್ತದೆ.

*ಮಿಥುನ ರಾಶಿ*

ಆಧ್ಯಾತ್ಮಿಕ ಕಾರ್ಯಕ್ರಮಗಳತ್ತ ಗಮನ ಹರಿಸುತ್ತೀರಿ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕೈಗೊಂಡ ಕೆಲಸಗಳಲ್ಲಿ ವಿಘ್ನಗಳು ಎದುರಾಗುತ್ತವೆ. ಮನೆಯ ಹೊರೆಗೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ಫಲಿಸುವುದಿಲ್ಲ.

*ಕಟಕ ರಾಶಿ*

ಕೈಗೊಂಡ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುತ್ತೀರಿ. ಪ್ರಮುಖ ವಿಚಾರಗಳಲ್ಲಿ ಆತ್ಮೀಯರ ಬಂಬಲ ಸಿಗುತ್ತದೆ. ನಿಮ್ಮ ಕೆಲಸದ ನೈಪುಣ್ಯತೆಯಿಂದ ಅಧಿಕಾರಿ ವರ್ಗದಿಂದ ಪ್ರಶಂಸೆ ಪಡೆಯುತ್ತೀರಿ. ಕುಟುಂಬದೊಂದಿಗೆ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
*ಸಿಂಹ ರಾಶಿ*

ಆರ್ಥಿಕ ಅವಶ್ಯಕತೆಗಾಗಿ ಹಣದ ಕೊರತೆ ಎದುರಾಗುತ್ತದೆ. ಹೊಸ ಸಾಲದ ಪ್ರಯತ್ನ ಮಾಡಬೇಕಾಗುತ್ತದೆ. ಆತ್ಮೀಯರೊಂದಿಗೆ ಮಾತಿನ ಭಿನ್ನಾಭಿಪ್ರಾಯಗಳಿರುತ್ತವೆ. ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಹೆಚ್ಚು ಕಿರಿಕಿರಿ ಉಂಟುಮಾಡುತ್ತವೆ. ವ್ಯಾಪಾರಗಳು ನಿಧಾನವಾಗಿ ಸಾಗುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ವಿಶ್ರಾಂತಿಗೆ ಅವಕಾಶ ಇರುವುದಿಲ್ಲ.

*ಕನ್ಯಾ ರಾಶಿ*

ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಪ್ರಮುಖರೊಂದಿಗೆ ಪರಿಚಯ ಹೆಚ್ಚಾಗುತ್ತದೆ. ಭೂ ಸಂಬಂಧಿತ ವ್ಯವಹಾರಗಳಲ್ಲಿ ಲಾಭ ದೊರೆಯುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಕುಟುಂಬದವರು ಆಕಸ್ಮಿಕವಾಗಿ ಹಣ ಸಹಾಯ ಮಾಡುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಲಭಿಸುತ್ತವೆ.

*ತುಲಾ ರಾಶಿ*

ದೀರ್ಘಕಾಲದ ಒತ್ತಡ ಹೆಚ್ಚಾಗುತ್ತದೆ. ಪ್ರಯಾಣದಲ್ಲಿ ವಾಹನ ಅಪಘಾತದ ಸೂಚನೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಮನೆಯ ಹೊರಗೆ ಕೆಲವರ ವರ್ತನೆ ಆಶ್ಚರ್ಯ ಉಂಟುಮಾಡುತ್ತದೆ. ಉದ್ಯೋಗದಲ್ಲಿ ಪ್ರಯತ್ನಗಳು ಫಲ ನೀಡುವುದಿಲ್ಲ. ಬಾಲ್ಯದ ಸ್ನೇಹಿತರೊಂದಿಗೆ ಪವಿತ್ರ ಸ್ಥಳಗಳ ಭೇಟಿ ಮಾಡುತ್ತೀರಿ.

*ವೃಶ್ಚಿಕ ರಾಶಿ*

ಮನೆಯಲ್ಲಿಗೆ ಬಾಲ್ಯದ ಸ್ನೇಹಿತರ ಭೇಟಿ ಸಂತೋಷ ಉಂಟಾಗುತ್ತದೆ. ಸಹೋದರರೊಂದಿಗೆ ವಿವಾದ ಪರಿಹಾರದತ್ತ ಸಾಗುತ್ತದೆ. ಸಮಾಜದಲ್ಲಿ ಹಿರಿಯರ ಪರಿಚಯ ಹೆಚ್ಚಾಗುತ್ತದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಪ್ರಮುಖ ಮಾಹಿತಿಯನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಉತ್ತಮ ಪರಿಸ್ಥಿತಿಗಳಿರುತ್ತವೆ. ಹೊಸ ವಾಹನ ಖರೀದಿಯ ಯೋಗವಿದೆ.

ಇದನ್ನು ಓದಿ : ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?
*ಧನುಸ್ಸು ರಾಶಿ*

ಪ್ರಯಾಣಗಳಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗುತ್ತದೆ. ಆತ್ಮೀಯರಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ನಿರುದ್ಯೋಗಿಗಳ ಯತ್ನಗಳು ವೇಗಗೊಳ್ಳುತ್ತವೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ವೃತ್ತಿ ಮತ್ತು ವ್ಯಾಪಾರ ಲಾಭದ ದಾರಿಯಲ್ಲಿ ಸಾಗುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಹೊರೆಗಳಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

*ಮಕರ ರಾಶಿ*

ಜೀವನ ಸಂಗಾತಿಯೊಂದಿಗೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ಅನಗತ್ಯ ಖರ್ಚು ಹೆಚ್ಚಾಗುತ್ತದೆ. ಮುಖ್ಯ ಕೆಲಸಗಳು ಮುಂದೂಡಲ್ಪಡುತ್ತವೆ. ಆರೋಗ್ಯದ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯ. ವೃತ್ತಿ ಮತ್ತು ವ್ಯಾಪಾರದಲ್ಲಿ ತೊಂದರೆಗಳು ಎದುರಾಗುತ್ತವೆ. ನಿರುದ್ಯೋಗದ ಪ್ರಯತ್ನಗಳು ನಿರಾಸೆ ಉಂಟಾಗುತ್ತದೆ.

*ಕುಂಭ ರಾಶಿ*

ದೂರದ ಸಂಬಂಧಿಗಳೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗುತ್ತದೆ. ವ್ಯಾಪಾರದಲ್ಲಿ ಹೊಸ ಬಂಡವಾಳ ಹೂಡಿಕಗಳ ವಿಚಾರದಲ್ಲಿ ಪುಣ್ಯರಾಲೋಚನೆ ಮಾಡುವುದು ಉತ್ತಮ. ಕೈಗೊಂಡ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಆಕಸ್ಮಿಕವಾಗಿ ನಿರ್ಧಾರ ಬದಲಾಗುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಶ್ರಮವಹಿಸಬೇಕಾಗುತ್ತದೆ.

*ಮೀನ ರಾಶಿ*

ವೃತ್ತಿ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಆತ್ಮೀಯರೊಂದಿಗೆ ಸೌಹಾರ್ದದಿಂದ ವರ್ತಿಸುತ್ತೀರಿ. ಹೊಸ ವಸ್ತು ಹಾಗೂ ವಾಹನದ ಲಾಭದ ಯೋಗವಿದೆ. ಸಹೋದರರಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ವ್ಯಾಪಾರ ಲಾಭದಾಯಕವಾಗಿರುತ್ತದೆ. ಉದ್ಯೋಗದಲ್ಲಿ ಪದೋನ್ನತಿಯ ಸಾಧ್ಯತೆ ಇದೆ.

Astrology

Krishna River : ಫೋಟೋಶೂಟ್ ನೆಪದಲ್ಲಿ ಪತಿಯನ್ನೇ ಕೃಷ್ಣಾ ನದಿಗೆ ತಳ್ಳಿದ ಪತ್ನಿ.?

0

ಜನಸ್ಪಂದನ ನ್ಯೂಸ್, ರಾಯಚೂರು : ಫೋಟೋಶೂಟ್ ನೆಪದಲ್ಲಿ ಪತಿಯನ್ನೇ ಕೃಷ್ಣಾ ನದಿ (Krishna River) ಗೆ ಪತ್ನಿಯೋರ್ವಳು ತಳ್ಳಿದ್ದಾಳೆಂಬ ಆರೋಪ ಕೇಳಿ ಬಂದಿದೆ.

ರಾಯಚೂರು ತಾಲ್ಲೂಕಿನ ಗುರ್ಜಾಪುರ ಹತ್ತಿರದ ಕೃಷ್ಣಾ ನದಿ (Krishna River) ಸೇತುವೆ ಬಳಿ ಅಚ್ಚರಿಯ ಘಟನೆಯೊಂದು ನಡೆದಿದೆ. ನವದಂಪತಿಗಳು ಫೋಟೊಶೂಟ್ ಮಾಡುವ ನೆಪದಲ್ಲಿ ಕೃಷ್ಣಾ ನದಿ (Krishna River) ಯ ಸೇತುವೆಯ ಮೇಲೆ ಹೋಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಪತಿಯನ್ನು ನದಿಗೆ ತಳ್ಳಿದ ಆರೋಪ ಪತ್ನಿಯ ಮೇಲೆ ಕೇಳಿಬಂದಿದೆ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!

ಸ್ಥಳೀಯರ ಮಾಹಿತಿಯ ಪ್ರಕಾರ, ಪತ್ನಿ ಮೊದಲಿಗೆ ಕೃಷ್ಣಾ ನದಿ (Krishna River) ಸೇತುವೆ ಮೇಲೆ ನಿಂತು ಫೋಟೋ ತೆಗೆಸಿಕೊಂಡಿದ್ದಾಳೆ. ಬಳಿಕ, ಪತಿಗೆ “ನೀನು ಸೇತುವೆ ತುದಿಗೆ ನಿಲ್ಲು, ನಿನ್ನ ಫೋಟೋ ತೆಗೆಸ್ತೀನಿ” ಎಂದು ಹೇಳಿದ್ದಾಳೆ. ಆಗ ಪತಿ ಸೇತುವೆಯ ತುದಿಯಲ್ಲಿ ನಿಂತ ಕ್ಷಣದಲ್ಲಿ, ಪತ್ನಿಯು ಆತನನ್ನು ಕೃಷ್ಣಾ ನದಿಗೆ ತಳ್ಳಿದ್ದಾಳೆ ಎನ್ನಲಾಗುತ್ತಿದೆ.

ಘಟನೆಯ ಸಮಯದಲ್ಲಿ ಕೃಷ್ಣಾ ನದಿ (Krishna River) ಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಹಿನ್ನಲೆಯಲ್ಲಿ ವ್ಯಕ್ತಿ ತುಸು ದೂರ ಕೊಚ್ಚಿಕೊಂಡು ಹೋಗಿ ಅಪಾಯದ ಸ್ಥಿತಿಗೆ ಸಿಲುಕಿದ್ದಾರೆ. ಆದರೆ ವ್ಯಕ್ತಿ (ಪತಿ) ಗೆ ಈಜು ಬರುತ್ತಿರುವ ಕಾರಣದಿಂದ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಅವರು, ಮಧ್ಯ ಭಾಗದ ಬಂಡೆಯೊಂದರ ಮೇಲೆ ಏರಿ ಕುಳಿತು ಸಹಾಯಕ್ಕಾಗಿ ಕೂಗಿದ್ದಾರೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!

ಈ ಸಂದರ್ಭದಲ್ಲಿ, ಕೃಷ್ಣಾ ನದಿ (Krishna River) ಹತ್ತಿರದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಆ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ್ದರು. ತಕ್ಷಣವೇ ಹಗ್ಗದ ಸಹಾಯದಿಂದ ನಿರಂತರ ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಸ್ಥಳೀಯರು ವ್ಯಕ್ತಿಯನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.

ಪತ್ನಿಯೇ ನದಿಗೆ ತಳ್ಳಿದಳೇ? ಅಥವಾ ಪತಿಯೇ ಕಾಲು ಜಾರಿ Krishna River ಗೆ ಬಿದ್ದರೇ? ಎಂಬುದರ ಬಗ್ಗೆ ದ್ವಂದ್ವ ಉಂಟಾಗಿದೆ. ಆದರೆ ಪತಿ, ಪತ್ನಿಯೇ ಉದ್ದೇಶ ಪೂರ್ವಕವಾಗಿ ತಳ್ಳಿದ್ದಾಳೆ ಎಂದು ಆರೋಪಿಸಿದ್ದಾರೆ. ಇತ್ತ ಪತ್ನಿ ಮಾತ್ರ “ಅವರು ಕಾಲು ಜಾರಿ ಪತಿ ಬಿದ್ದರು” ಎಂಬ ವಿವರಣೆ ನೀಡಿದ್ದಾರೆ.

ಇದನ್ನು ಓದಿ : Humaira : ನಟಿ ಹುಮೈರಾ ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.!

ಕೆಲವರ ಹೇಳಿಕೆಗಳ ಪ್ರಕಾರ ಪತ್ನಿಯು ಈ ಕೃತ್ಯವನ್ನು ಜಾಣ್ಮೆಯಿಂದ ಮಾಡಿದ್ದಾಳೆ ಎಂದು ಶಂಕೆ ವ್ಯಕ್ತವಾಗಿದೆ. ಈ ದಂಪತಿ ಯಾರು.? ಯಾವ ಗ್ರಾಮದಿಂದ ಬಂದಿದ್ದರು.? ಏತಕ್ಕಾಗಿ ಬಂದಿದ್ದರು.? ಈ ಘಟನೆಯ ಹಿಂದಿರುವ ನಿಖರ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ಮಾಹಿತಿ ಕಲೆಹಾಕಲು ತನಿಖೆ ಮುಂದುವರೆಸಿದ್ದಾರೆ.

Note : ಇತ್ತೀಚಿನ ದಿನಗಳಲ್ಲಿ ಪತಿಯ ಮೇಲೆ ಪತ್ನಿಯಿಂದ ನಡೆಯುತ್ತಿರುವ ಹಲ್ಲೆಗಳ ಅಥವಾ ಹತ್ಯೆಯಂತಹ ಘಟನೆಗಳು ತುಂಬಾನೇ ಹೆಚ್ಚುತ್ತಿವೆ. ಈ ಘಟನೆಗಳು ಸಮಾಜಕ್ಕೆ ಏನು ಸಂದೇಶ ಕೊಡುತಿವೆ ಅಂತ ಯೋಚಿಸಬೇಕಾಗಿದೆ.

ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ನದಿಗೆ ಬಿದ್ದ Helicopter ; 5 ಜನರಿಗೆ ಗಾಯ.!

Helicopter

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಾಯಲ್ ಮಲೇಷಿಯನ್ ಪೊಲೀಸ್ (PDRM) ಇಲಾಖೆಗೆ ಸೇರಿದ ಹೆಲಿಕಾಪ್ಟರ್ (Helicopter) ತಾಂತ್ರಿಕ ದೋಷದಿಂದ ನದಿಗೆ ಪತನಗೊಂಡಿರುವ ಘಟನೆ ಮಲೇಷಿಯಾದ ಜೋಹೋರ್ ರಾಜ್ಯದ ಸುಂಗೈ ಪುಲೈ ಪ್ರದೇಶದಲ್ಲಿ ನಡೆದಿದೆ.

ಜುಲೈ 10ರಂದು ಬೆಳಿಗ್ಗೆ ನಡೆದ ಈ ಅವಘಡದಲ್ಲಿ ಐದು ಸಿಬ್ಬಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಪತನಗೊಂಡ ಹೆಲಿಕಾಪ್ಟರ್‌ (Helicopter) ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 11 ರ ದ್ವಾದಶ ರಾಶಿಗಳ ಫಲಾಫಲ.!
ತುರ್ತು ಭೂಸ್ಪರ್ಶ ವಿಫಲ – ನದಿಗೆ ಬಿದ್ದು ರಕ್ಷಣಾ ಕಾರ್ಯಾಚರಣೆ :

ಫ್ರೆಂಚ್ ತಯಾರಿಕೆಯ ಏರ್‌ಬಸ್ AS355N ಮಾದರಿಯ ಈ ಹೆಲಿಕಾಪ್ಟರ್ (Helicopter) , ಮಿಲಿಟರಿ ಕಸರತ್ತು MITSATOM 2025ರ ಭಾಗವಾಗಿ ಫ್ಲೈಪಾಸ್ಟ್ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದ ವೇಳೆ ತಾಂಜಂಗ್ ಕುಪಾಂಗ್ ಠಾಣೆಯಿಂದ ಬೆಳಿಗ್ಗೆ 9:51ಕ್ಕೆ ಟೇಕಾಫ್ ಆಗಿತ್ತು. ಟೇಕಾಫ್ ಆಗಿ ಕೇವಲ 46 ನಿಮಿಷಗಳ ನಂತರ ತಾಂತ್ರಿಕ ದೋಷ ಉಂಟಾಗಿ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿ ವಿಫಲವಾದ ಪರಿಣಾಮ ಹೆಲಿಕಾಪ್ಟರ್ ನದಿಗೆ ಬಿದ್ದಿತು.

ಘಟನೆಯ ಬಳಿಕ ಮೆರೈನ್ ಪೊಲೀಸ್ ಪಡೆ ಮತ್ತು ಮಲೇಷಿಯನ್ ಮ್ಯಾರಿಟೈಮ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ (MMEA) ತಕ್ಷಣ ಕಾರ್ಯಪ್ರವೃತ್ತರಾಗಿ, ಪೈಲಟ್ ಸೇರಿ ಐದು ಮಂದಿಯನ್ನು ರಕ್ಷಿಸಿದ್ದು, ಸದ್ಯ ಅವರನ್ನು ಜೋಹೋರ್ ಬಾರುವಿನ ಸುಲ್ತಾನಾ ಅಮಿನಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನು ಓದಿ : “Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!

ಇಬ್ಬರಿಗೆ ಉಸಿರಾಟದ ಯಂತ್ರ (Breathing machine) ದ ಸಹಾಯ ಅಗತ್ಯವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಮಾತ್ರ ಸುದೈವದ ಸಂಗತಿ.

30 ವರ್ಷ ಹಳೆಯ ಹೆಲಿಕಾಪ್ಟರ್ (Helicopter) – ತಾಂತ್ರಿಕ ದೋಷವೇ ಕಾರಣ.?

ಪತನಗೊಂಡ ಹೆಲಿಕಾಪ್ಟರ್‌ (Helicopter) ನ್ನು 1996ರಲ್ಲಿ ಮಲೇಷಿಯಾ ಪೊಲೀಸರು ಬಳಸಲು ಪಡೆದಿದ್ದು, ಅದು ಈಗ 30 ವರ್ಷ ಹಳೆಯದಾಗಿದೆ. ಈ ಹಿನ್ನೆಲೆ, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವಾಯಿತೇ ಎಂಬ ಅನುಮಾನ ಉದಯವಾಗಿದೆ.

ಇದನ್ನು ಓದಿ : Dead body : ಮಾವಿನಹಣ್ಣಿನ ಚೀಲವೆಂದು ಮಹಿಳೆಯ ಶವ ಸಾಗಾಟ.!

ಮಲೇಷಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (CAAM) ಈ ಘಟನೆಯನ್ನು “ಗಂಭೀರ ವಿಮಾನ ದುರ್ಘಟನೆ” ಎಂದು ಘೋಷಿಸಿದ್ದು, ತನಿಖೆಯನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ನಡೆಸಲಿದೆ. ಹಿನ್ನಲೆಯಲ್ಲಿ ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚುವುದು ಪ್ರಾಥಮಿಕ ಗುರಿಯಾಗಿದೆ.

ಅಪಘಾತದ ದೃಶ್ಯಗಳು ವೈರಲ್ :

ಘಟನೆ ಸಂಬಂಧದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ X (ಹಳೆಯ ಟ್ವಿಟ್ಟರ್)ನಲ್ಲಿ ವೇಗವಾಗಿ ಹರಡುತ್ತಿವೆ. ಹೆಲಿಕಾಪ್ಟರ್ ನದಿಗೆ ಬಿದ್ದು, ರಕ್ಷಣಾ ದೋಣಿಗಳು ಸ್ಥಳಕ್ಕೆ ಧಾವಿಸುವ ದೃಶ್ಯಗಳು ಜನರಲ್ಲಿ ಕಳಕಳಿಯನ್ನು ಹುಟ್ಟುಹಾಕಿವೆ.

ಇದನ್ನು ಓದಿ : ಹಾಸ್ಯ ನಟ ಸಂಜು ಬಸಯ್ಯ ಪತ್ನಿಗೆ obscene-message ಕಳುಹಿಸಿದ ವಿದ್ಯಾರ್ಥಿ : ಮುಂದೆನಾಯ್ತು.!
ಪೂರ್ವಘಟನೆಗಳ ಜೊತೆ ಸಂಪರ್ಕ :

ಈ ಪತನವು ಮಲೇಷಿಯಾದಲ್ಲಿ ಈಮಧ್ಯೆ ನಡೆದ ಇನ್ನಷ್ಟು ಹೆಲಿಕಾಪ್ಟರ್ (Helicopter) ಅಪಘಾತಗಳ ಸಾಲಿನಲ್ಲಿ ಸೇರಿದೆ. 2024ರ ಫೆಬ್ರವರಿಯಲ್ಲಿ ಪಹಾಂಗ್‌ನಲ್ಲಿ ನಡೆದ ಬೆಲ್ 206L-4 ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಈ ವರ್ಷ ಏಪ್ರಿಲ್‌ನಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ Bell 206 ಪತನದಲ್ಲಿ ಆರು ಜನರು ಮೃತರಾಗಿದ್ದರು.

ಸುರಕ್ಷತೆ ಮೇಲೆ ಪ್ರಶ್ನೆ :

ಈ ಘಟನೆಯಿಂದ ಮಲೇಷಿಯಾದ ಪೊಲೀಸ್ ವಾಯು ಘಟಕದ ಹೆಲಿಕಾಪ್ಟರ್‌ (Helicopter) ಗಳ ನಿರ್ವಹಣೆ ಮತ್ತು ಸ್ಥಿತಿಗತಿಯ ಮೇಲೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತಿವೆ. ಹಳೆಯ ವಿಮಾನಗಳನ್ನು ಬಳಸುವ ಪದ್ದತಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯಕ್ಕೆ ಕಾರಣವಾಗಬಹುದೆಂಬ ಆತಂಕ ಸಹ ವ್ಯಕ್ತವಾಗಿದೆ.

ಹೆಲಿಕಾಪ್ಟರ್ ಅಪಘಾತದ ಹಿಂದಿನ ನಿಖರವಾದ ಕಾರಣವನ್ನು ತಿಳಿಯಲು ಮುಂದಿನ ಕೆಲವು ದಿನಗಳು ನಿರ್ಣಾಯಕವಾಗಲಿವೆ.

ವಿಡಿಯೋ :

https://twitter.com/i/status/1943194580767154387

ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ನದಿಗೆ ಬಿದ್ದ Helicopter ; 5 ಜನರಿಗೆ ಗಾಯ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಾಯಲ್ ಮಲೇಷಿಯನ್ ಪೊಲೀಸ್ (PDRM) ಇಲಾಖೆಗೆ ಸೇರಿದ ಹೆಲಿಕಾಪ್ಟರ್ (Helicopter) ತಾಂತ್ರಿಕ ದೋಷದಿಂದ ನದಿಗೆ ಪತನಗೊಂಡಿರುವ ಘಟನೆ ಮಲೇಷಿಯಾದ ಜೋಹೋರ್ ರಾಜ್ಯದ ಸುಂಗೈ ಪುಲೈ ಪ್ರದೇಶದಲ್ಲಿ ನಡೆದಿದೆ.

ಜುಲೈ 10ರಂದು ಬೆಳಿಗ್ಗೆ ನಡೆದ ಈ ಅವಘಡದಲ್ಲಿ ಐದು ಸಿಬ್ಬಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಪತನಗೊಂಡ ಹೆಲಿಕಾಪ್ಟರ್‌ (Helicopter) ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 11 ರ ದ್ವಾದಶ ರಾಶಿಗಳ ಫಲಾಫಲ.!
ತುರ್ತು ಭೂಸ್ಪರ್ಶ ವಿಫಲ – ನದಿಗೆ ಬಿದ್ದು ರಕ್ಷಣಾ ಕಾರ್ಯಾಚರಣೆ :

ಫ್ರೆಂಚ್ ತಯಾರಿಕೆಯ ಏರ್‌ಬಸ್ AS355N ಮಾದರಿಯ ಈ ಹೆಲಿಕಾಪ್ಟರ್ (Helicopter) , ಮಿಲಿಟರಿ ಕಸರತ್ತು MITSATOM 2025ರ ಭಾಗವಾಗಿ ಫ್ಲೈಪಾಸ್ಟ್ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದ ವೇಳೆ ತಾಂಜಂಗ್ ಕುಪಾಂಗ್ ಠಾಣೆಯಿಂದ ಬೆಳಿಗ್ಗೆ 9:51ಕ್ಕೆ ಟೇಕಾಫ್ ಆಗಿತ್ತು. ಟೇಕಾಫ್ ಆಗಿ ಕೇವಲ 46 ನಿಮಿಷಗಳ ನಂತರ ತಾಂತ್ರಿಕ ದೋಷ ಉಂಟಾಗಿ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿ ವಿಫಲವಾದ ಪರಿಣಾಮ ಹೆಲಿಕಾಪ್ಟರ್ ನದಿಗೆ ಬಿದ್ದಿತು.

ಘಟನೆಯ ಬಳಿಕ ಮೆರೈನ್ ಪೊಲೀಸ್ ಪಡೆ ಮತ್ತು ಮಲೇಷಿಯನ್ ಮ್ಯಾರಿಟೈಮ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ (MMEA) ತಕ್ಷಣ ಕಾರ್ಯಪ್ರವೃತ್ತರಾಗಿ, ಪೈಲಟ್ ಸೇರಿ ಐದು ಮಂದಿಯನ್ನು ರಕ್ಷಿಸಿದ್ದು, ಸದ್ಯ ಅವರನ್ನು ಜೋಹೋರ್ ಬಾರುವಿನ ಸುಲ್ತಾನಾ ಅಮಿನಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನು ಓದಿ : “Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!

ಇಬ್ಬರಿಗೆ ಉಸಿರಾಟದ ಯಂತ್ರ (Breathing machine) ದ ಸಹಾಯ ಅಗತ್ಯವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ಮಾತ್ರ ಸುದೈವದ ಸಂಗತಿ.

30 ವರ್ಷ ಹಳೆಯ ಹೆಲಿಕಾಪ್ಟರ್ (Helicopter) – ತಾಂತ್ರಿಕ ದೋಷವೇ ಕಾರಣ.?

ಪತನಗೊಂಡ ಹೆಲಿಕಾಪ್ಟರ್‌ (Helicopter) ನ್ನು 1996ರಲ್ಲಿ ಮಲೇಷಿಯಾ ಪೊಲೀಸರು ಬಳಸಲು ಪಡೆದಿದ್ದು, ಅದು ಈಗ 30 ವರ್ಷ ಹಳೆಯದಾಗಿದೆ. ಈ ಹಿನ್ನೆಲೆ, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವಾಯಿತೇ ಎಂಬ ಅನುಮಾನ ಉದಯವಾಗಿದೆ.

ಇದನ್ನು ಓದಿ : Dead body : ಮಾವಿನಹಣ್ಣಿನ ಚೀಲವೆಂದು ಮಹಿಳೆಯ ಶವ ಸಾಗಾಟ.!

ಮಲೇಷಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (CAAM) ಈ ಘಟನೆಯನ್ನು “ಗಂಭೀರ ವಿಮಾನ ದುರ್ಘಟನೆ” ಎಂದು ಘೋಷಿಸಿದ್ದು, ತನಿಖೆಯನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ನಡೆಸಲಿದೆ. ಹಿನ್ನಲೆಯಲ್ಲಿ ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಪತ್ತೆ ಹಚ್ಚುವುದು ಪ್ರಾಥಮಿಕ ಗುರಿಯಾಗಿದೆ.

ಅಪಘಾತದ ದೃಶ್ಯಗಳು ವೈರಲ್ :

ಘಟನೆ ಸಂಬಂಧದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ X (ಹಳೆಯ ಟ್ವಿಟ್ಟರ್)ನಲ್ಲಿ ವೇಗವಾಗಿ ಹರಡುತ್ತಿವೆ. ಹೆಲಿಕಾಪ್ಟರ್ ನದಿಗೆ ಬಿದ್ದು, ರಕ್ಷಣಾ ದೋಣಿಗಳು ಸ್ಥಳಕ್ಕೆ ಧಾವಿಸುವ ದೃಶ್ಯಗಳು ಜನರಲ್ಲಿ ಕಳಕಳಿಯನ್ನು ಹುಟ್ಟುಹಾಕಿವೆ.

ಇದನ್ನು ಓದಿ : ಹಾಸ್ಯ ನಟ ಸಂಜು ಬಸಯ್ಯ ಪತ್ನಿಗೆ obscene-message ಕಳುಹಿಸಿದ ವಿದ್ಯಾರ್ಥಿ : ಮುಂದೆನಾಯ್ತು.!
ಪೂರ್ವಘಟನೆಗಳ ಜೊತೆ ಸಂಪರ್ಕ :

ಈ ಪತನವು ಮಲೇಷಿಯಾದಲ್ಲಿ ಈಮಧ್ಯೆ ನಡೆದ ಇನ್ನಷ್ಟು ಹೆಲಿಕಾಪ್ಟರ್ (Helicopter) ಅಪಘಾತಗಳ ಸಾಲಿನಲ್ಲಿ ಸೇರಿದೆ. 2024ರ ಫೆಬ್ರವರಿಯಲ್ಲಿ ಪಹಾಂಗ್‌ನಲ್ಲಿ ನಡೆದ ಬೆಲ್ 206L-4 ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಈ ವರ್ಷ ಏಪ್ರಿಲ್‌ನಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ Bell 206 ಪತನದಲ್ಲಿ ಆರು ಜನರು ಮೃತರಾಗಿದ್ದರು.

ಸುರಕ್ಷತೆ ಮೇಲೆ ಪ್ರಶ್ನೆ :

ಈ ಘಟನೆಯಿಂದ ಮಲೇಷಿಯಾದ ಪೊಲೀಸ್ ವಾಯು ಘಟಕದ ಹೆಲಿಕಾಪ್ಟರ್‌ (Helicopter) ಗಳ ನಿರ್ವಹಣೆ ಮತ್ತು ಸ್ಥಿತಿಗತಿಯ ಮೇಲೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತಿವೆ. ಹಳೆಯ ವಿಮಾನಗಳನ್ನು ಬಳಸುವ ಪದ್ದತಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯಕ್ಕೆ ಕಾರಣವಾಗಬಹುದೆಂಬ ಆತಂಕ ಸಹ ವ್ಯಕ್ತವಾಗಿದೆ.

ಹೆಲಿಕಾಪ್ಟರ್ ಅಪಘಾತದ ಹಿಂದಿನ ನಿಖರವಾದ ಕಾರಣವನ್ನು ತಿಳಿಯಲು ಮುಂದಿನ ಕೆಲವು ದಿನಗಳು ನಿರ್ಣಾಯಕವಾಗಲಿವೆ.

ವಿಡಿಯೋ :

https://twitter.com/i/status/1943194580767154387

Humaira : ನಟಿ ಹುಮೈರಾ ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.!

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಪಾರ್ಟ್‌ಮೆಂಟ್‌ವೊಂದರಲ್ಲಿ ನಟಿ ಹುಮೈರಾ (Humaira) ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಘಟನೆಯಿಂದ ಪಾಕಿಸ್ತಾನಿ ಮನರಂಜನಾ ಕ್ಷೇತ್ರದಿಂದ ಭಾರೀ ಆಘಾತಕಾರಿ ಸುದ್ದಿ ಹೊರ ಬಂದಿದೆ. 32 ವರ್ಷದ ನಟಿ ಹುಮೈರಾ ಅಸ್ಗರ್ ಅಲಿ (Humaira Asghar Ali) ಅವರ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕರಾಚಿಯ ಇತ್ತೆಹಾದ್ ಕಮರ್ಷಿಯಲ್ ಪ್ರದೇಶದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಅವರು ಮರಣ ಹೊಂದಿರುವುದಾಗಿ ಜುಲೈ 8ರಂದು ಪೊಲೀಸರು ದೃಢಪಡಿಸಿದ್ದಾರೆ.

Actress Humaira Asghar Ali
Actress Humaira Asghar Ali
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 09 ರ ದ್ವಾದಶ ರಾಶಿಗಳ ಫಲಾಫಲ.!

ಹುಮೈರಾ (Humaira) ಅವರ ಸಾವು ಎರಡು ವಾರಗಳ ಹಿಂದೆ ಸಂಭವಿಸಿರಬಹುದು ಎಂದು ಶಂಕಿಸಲಾಗುತ್ತಿದೆ, ಏಕೆಂದರೆ ಮರಣದ ಮಾಹಿತಿ ಸುತ್ತಮುತ್ತಲವರಿಗೂ ತಡವಾಗಿ ತಿಳಿಯಿತು. ನಟಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂಬುದು ಪೊಲೀಸರು ನೀಡಿರುವ ಮಾಹಿತಿ.

ಹುಮೈರಾ (Humaira) ಅಸ್ಗರ್ ಅಲಿ ಅವರು ARY ಡಿಜಿಟಲ್‌ನ ರಿಯಾಲಿಟಿ ಶೋ ‘ತಮಾಷಾ ಘರ್’ ಮತ್ತು 2015 ರ ಚಲನಚಿತ್ರ ‘ಜಲೈಬಿ’ ಮೂಲಕ ಪ್ರಖ್ಯಾತರಾಗಿದ್ದರು. ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ 7 ಲಕ್ಷಕ್ಕಿಂತ ಹೆಚ್ಚು ಅನುಯಾಯಿಗಳು ಇದ್ದರು ಮತ್ತು ಅವರು ನಟಿ, ಶಿಲ್ಪಿ, ರಂಗಭೂಮಿ ಕಲಾವಿದೆ ಹಾಗೂ ಫಿಟ್ನೆಸ್ ಉತ್ಸಾಹಿಯಾಗಿದ್ದರು.

ಇದನ್ನು ಓದಿ : ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?

ಪೊಲೀಸರು ಮನೆಯ ಬೀಗ ಮುರಿದು ಒಳಗೆ ಪ್ರವೇಶಿಸಿ ಶವವನ್ನು ಪತ್ತೆಹಚ್ಚಿದ್ದು, ಮರಣೋತ್ತರ ಪರೀಕ್ಷೆಗಾಗಿ  ಹುಮೈರಾ (Humaira) ಅವರ ಶವವನ್ನು ಜಿನ್ನಾ ಮೆಡಿಕಲ್ ಸೆಂಟರ್‌ಗೆ ಕಳಿಸಲಾಗಿದೆ. ವೈದ್ಯರ ಪ್ರಕಾರ, ಶವವು ಕೊಳೆಯುವ ಅಂತಿಮ ಹಂತದಲ್ಲಿತ್ತು. ಆದ್ದರಿಂದ ಸಾವಿನ ನಿಖರ ಕಾರಣ ತಿಳಿದುಬರಲು ಇನ್ನೂ ಕೆಲವು ದಿನಗಳು ಹಿಡಿಯಬಹುದು.

ಸಾವು ಸಹಜವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಟಿಯ ಮೊಬೈಲ್ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ. ತನಿಖೆ ಮುಂದುವರಿದಿದೆ, ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Humaira
Actress Humaira Asghar Ali
ಇದನ್ನು ಓದಿ : ಸಿಗರೇಟ್ ಸೇದುತ್ತ ವಿದ್ಯಾರ್ಥಿನಿಯಿಂದ massage ಮಾಡಿಸಿಕೊಂಡ ಟಿಎಂಸಿ ನಾಯಕ.!

ಈ ದುರ್ಘಟನೆ ಪಾಕಿಸ್ತಾನಿ ಚಿತ್ರರಂಗದಲ್ಲಿ ಶೋಕದ ಛಾಯೆ ಮೂಡಿಸಿದ್ದು, ಆಕಸ್ಮಿಕ ಸಾವಿನ ಸುತ್ತಲಿನ ಅನೇಕ ಪ್ರಶ್ನೆಗಳಿಗೆ ಇನ್ನೂ ಉತ್ತರಿಸಿಲ್ಲ. ತನಿಖೆಯ ನಂತರವೇ ಮಾತ್ರ ಸತ್ಯ ಬೆಳಕಿಗೆ ಬರಲಿದೆ.

Humaira asghar ali :

Humaira Asghar was born on 10 October 1983 in Lahore, the daughter of an army doctor, and had been residing in a rented flat in the Defence area of Karachi from 2018 until her death.

ಹಾಸ್ಯ ನಟ ಸಂಜು ಬಸಯ್ಯ ಪತ್ನಿಗೆ obscene-message ಕಳುಹಿಸಿದ ವಿದ್ಯಾರ್ಥಿ : ಮುಂದೆನಾಯ್ತು.!

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಹಾಸ್ಯ ನಟ ಸಂಜು ಬಸಯ್ಯ ಪತ್ನಿಗೆ ಓರ್ವ ವಿದ್ಯಾರ್ಥಿ ಅಶ್ಲೀಲ ಮೆಸೇಜ್ (obscene-message) ಕಳುಹಿಸಿದ ಘಟನೆಯೊಂದು ನಡೆದಿದ್ದು, ಈ ವೇಳೆ ಹಾಸ್ಯ ನಟ ಸಂಜು ಬಸಯ್ಯ ಅವರ ನಡೆ ಸಮಾಜಕ್ಕೆ ಮಾದರಿಯಾಗಿದೆ.

ಕನ್ನಡ ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿರುವ ಬೆಳಗಾವಿಯ ಕಲಾವಿದ ಸಂಜು ಬಸಯ್ಯ ಅವರ ಪತ್ನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಸಂದೇಶ (obscene-message) ಕಳುಹಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಜಯನಗರ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಯೊಬ್ಬ ಈ ಕೃತ್ಯ (obscene-message) ಎಸಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಂಜು ಬಸಯ್ಯ ಅವರು ಮೊದಲು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!

ಜಿಲ್ಲೆಯ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ, ಪೊಲೀಸರು ಅಶ್ಲೀಲ ಮೆಸೇಜ್ (obscene-message) ವಿದ್ಯಾರ್ಥಿಯನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಸಂಜು ಬಸಯ್ಯ ಅವರು , “ಇಂತಹ ವರ್ತನೆಗಳು ನಿನ್ನ ಕುಟುಂಬದ ಗೌರವಕ್ಕೆ ತೊಂದರೆಯುಂಟು ಮಾಡಬಹುದು. ಸಾಮಾಜಿಕ ಜಾಲತಾಣವನ್ನ ಸಮರ್ಪಕವಾಗಿ ಬಳಸಬೇಕು,” ಎಂದು ವಿದ್ಯಾರ್ಥಿಗೆ ಬೈಯ್ದು ಬುದ್ಧಿವಾದ ಹೇಳಿದ್ದಾರೆ.

ಮಾಗದರ್ಶಿಯಾಗಿ ನಡೆದು ಮೆಚ್ಚುಗೆ ಗಳಿಸಿದ ಕಲಾವಿದ :

ಅಶ್ಲೀಲ ಮೆಸೇಜ್ (obscene-message) ವಿದ್ಯಾರ್ಥಿಯು ಇನ್ನೂ ಓದುತ್ತಿರುವವನಾಗಿದ್ದು, ಅವನ ಭವಿಷ್ಯ ಹಾಳಾಗಬಾರದೆಂಬ ಕಾರಣದಿಂದ ಕೇಸ್ ಹಿಂಪಡೆಯಲು ಸಂಜು ಬಸಯ್ಯ ನಿರ್ಧರಿಸಿದ್ದಾರೆ. ಅವರು ಪೊಲೀಸರು ಹಾಗೂ ಮಾಧ್ಯಮಗಳ ಎದುರಿನಲ್ಲಿ, “ಅವನನ್ನು ಶಿಕ್ಷಿಸುವ ಬದಲು ಬುದ್ಧಿ ಹೇಳುವದು ಹೆಚ್ಚು ಪರಿಣಾಮಕಾರಿ. ಮುಂದಿನ ಜೀವನದಲ್ಲಿ ಇಂತಹ ತಪ್ಪು ಪುನರಾವೃತ್ತಿಯಾಗಬಾರದು ಎಂಬ ಬುದ್ಧಿವಾದ ನೀಡಿದ್ದೇನೆ” ಎಂದು ತಿಳಿಸಿದರು.

ಇದನ್ನು ಓದಿ : Humaira : ನಟಿ ಹುಮೈರಾ ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.!
ಘಟನೆ ಸಾಮಾಜಿಕ ಜಾಲತಾಣ ಬಳಕೆಯ ಗಂಭೀರತೆಯನ್ನ ಎತ್ತಿ ತೋರಿಸಿದೆ :

ಪತ್ನಿಗೆ ಅಶ್ಲೀಲ ಸಂದೇಶಗಳು (obscene-message) ಹಾಗೂ ಚಿತ್ರಗಳನ್ನು ಕಳುಹಿಸಿದ್ದ ವಿದ್ಯಾರ್ಥಿಗೆ ಬುದ್ಧಿವಾದ ನೀಡಿ ಬಿಟ್ಟಿರುವ ಈ ಘಟನೆ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆಯ ಅಗತ್ಯತೆಯನ್ನು ಮತ್ತೆ ಒತ್ತಿ ಹೇಳಿದೆ.

ಹಿರಿಯರಿಂದ ಬುದ್ಧಿವಾದ ಸಿಕ್ಕಿರುವ ಈ ಯುವಕನು, ಮುಂದಿನ ದಿನಗಳಲ್ಲಿ ಉತ್ತಮ ನಡೆ ತಾಳಲಿ ಎಂಬ ನಂಬಿಕೆಯನ್ನು ಸಂಜು ಬಸಯ್ಯ ವ್ಯಕ್ತಪಡಿಸಿದ್ದಾರೆ. ಈ ಘಟನೆಯು, ಶಾಂತ ದೃಷ್ಠಿಕೋನದಿಂದ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದೆಂಬುದಕ್ಕೆ ಉತ್ತಮ ಮಾದರಿಯಾಗಿದೆ.

ಅಶ್ಲಿಲ್‌ ಮೆಸೇಜ್‌ (obscene message) ಕಳುಹಿಸಿದ ವಿದ್ಯಾರ್ಥಿ ಜೊತೆ ಸಂಜು ಬಸಯ್ಯಾ ವಿಡಿಯೋ :

“Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!

Dandelion

ಜನಸ್ಪಂದನ ನ್ಯೂಸ್‌, ಆರೋಗ್ಯ : ನಿಮಗಿದು ಗೊತ್ತೇ.? ಈ Dandelion ಹೂವು, ಹಾನಿಗೊಳಗಾದ ಲಿವರ್ ಮತ್ತು ಕಿಡ್ನಿಯನ್ನು ಪುನಃ ಮೊದಲಿನಂತೆ ಮಾಡುತ್ತದೆ.!, ಹೌದು, ಈ ಹೂವು ಡ್ಯಾಮೇಜ್ ಆದ ಕಿಡ್ನಿ ಮತ್ತು ಲಿವರ್ ಮತ್ತೆ ಮೊದಲಿನಂತೆ ಮಾಡುತ್ತದೆ. ಹಾಗಾದ್ರೆ ಬನ್ನಿ, ಆ ಹೂವಿನ ಬಗ್ಗೆ ತಿಳಿಯೋಣ.

ದುಂಡೇಲಿಯನ್ (Dandelion) ಅಥವಾ ಹಾಲದಂಡೆ/ಕಹಿಗಿಡ ಎಂಬ ಹೆಸರಿನಿಂದ ಪರಿಚಿತವಾದ ಈ ಸಸ್ಯವನ್ನು ಶತಮಾನಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಉಪಯೋಗಿಸಲಾಗುತ್ತಿದೆ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!

ಮೂಲತಃ ಯುರೇಷಿಯಾದಲ್ಲಿ ಬೆಳೆಯುವ ಈ ಸಸ್ಯ, ಇಂದು ಮಾನವ ಚಟುವಟಿಕೆಯ ಪರಿಣಾಮವಾಗಿ ಪ್ರಪಂಚದಾದ್ಯಂತ ಹರಡಿದೆ. ಭಾರತದಲ್ಲಿ ಇದನ್ನು ಮುಖ್ಯವಾಗಿ ಹಿಮಾಲಯನ್ ಪ್ರದೇಶದಲ್ಲಿ ನೋಡಬಹುದು. ಪ್ರಪಂಚದಾದ್ಯಂತ 30ಕ್ಕೂ ಹೆಚ್ಚು ಪ್ರಬೇಧಗಳಲ್ಲಿ ದುಂಡೇಲಿಯನ್ ಲಭ್ಯವಿದೆ.

ಆಯುರ್ವೇದದ ಬೆಳಕು – ದುಂಡೇಲಿಯನ್ (Dandelion) :

ಸುಶ್ರುತ ಸಂಹಿತೆಯ ಪ್ರಕಾರ, ದುಂಡೇಲಿಯನ್ (Dandelion) ಉತ್ತಮ ಫೈಬರ್ ಮೂಲವಾಗಿದೆ. ಇದು ಜೀರ್ಣಕ್ರಿಯೆ ಬಲಪಡಿಸುವ ಜೊತೆಗೆ ಮಲಬದ್ಧತೆಯ ಸಮಸ್ಯೆ ನಿವಾರಣೆಯಲ್ಲಿ ಸಹಕಾರಿಯಾಗುತ್ತದೆ. ಇದರಲ್ಲಿರುವ ನೈಸರ್ಗಿಕ ಉರಿಯೂತ ನಾಶಕ ಗುಣಗಳು ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತವೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
ದಂಡೇಲಿಯನ್‌ (Dandelion) ನ ಮುಖ್ಯ ಆರೋಗ್ಯ ಪ್ರಯೋಜನಗಳು :
  • ಯಕೃತ್ತಿಗೆ ಶುದ್ಧಿ: ಆಯುರ್ವೇದದ ಪ್ರಕಾರ, ದುಂಡೇಲಿಯನ್ ಯಕೃತ್ತಿನ ಶುದ್ಧಿಗೆ ನೈಸರ್ಗಿಕ ಪರಿಹಾರವಾಗಿದೆ.
  • ಜೀರ್ಣಕ್ರಿಯೆ ಬೆಂಬಲ: ಇದರ ಬೇರು ಮತ್ತು ಎಲೆಗಳು ಜೀರ್ಣಕ್ರಿಯೆ ವ್ಯವಸ್ಥೆಗೆ ಸಹಕಾರ ನೀಡುತ್ತವೆ.
  • ಪೋಷಕಾಂಶಗಳ ಖಜಾನೆ: ವಿಟಮಿನ್ A, C, D ಮತ್ತು ಖನಿಜಗಳು – ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮೊದಲಾದವುಗಳಲ್ಲಿ ದುಂಡೇಲಿಯನ್ ಎಲೆಗಳು ಶ್ರೀಮಂತವಾಗಿವೆ.
  • ಮಧುಮೇಹ ನಿರ್ವಹಣೆ: ಆಹಾರದಲ್ಲಿ ಇದರ ಬಳಕೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
  • ರೋಗನಿರೋಧಕ ಶಕ್ತಿ: ಇದರ ನಿಯಮಿತ ಸೇವನೆಯಿಂದ ದೇಹದ ರೋಗಪ್ರತಿರೋಧ ಶಕ್ತಿ ವೃದ್ಧಿಯಾಗುತ್ತದೆ.
ಇದನ್ನು ಓದಿ : Model : ಆಶೀರ್ವಾದದ ನೆಪದಲ್ಲಿ ಬಟ್ಟೆಯೊಳಗೆ ಕೈ ಹಾಕಿದ ಅರ್ಚಕ : ಮಾಡೆಲ್‌ನ ಗಂಭೀರ ಆರೋಪ.!
ಎಲೆಗಳ ವಿಶೇಷತೆಗಳು :

ಯುಎಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ (US National Institutes of Health) ನ ಅಧ್ಯಯನಗಳ ಪ್ರಕಾರ, ದುಂಡೇಲಿಯನ್ (Dandelion) ಎಲೆಗಳಲ್ಲಿರುವ ಸಂಯುಕ್ತಗಳು ಮೂತ್ರಪಿಂಡಗಳ ಸುರಕ್ಷತೆಗೆ ಸಹಾಯಕವಾಗುತ್ತವೆ. ದೇಹದಿಂದ ವಿಷದ ಅಂಶಗಳನ್ನು ಹೊರಹಾಕುವ ಮೂಲಕ ಈ ಎಲೆಗಳು ಮೂತ್ರಪಿಂಡಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ.

ದುಂಡೇಲಿಯನ್ ಚಹಾ – ಮಧುಮೇಹಕ್ಕೆ ನೈಸರ್ಗಿಕ ಪಥ್ಯ :

ದುಂಡೇಲಿಯನ್ (Dandelion) ಚಹಾ ಮಧುಮೇಹ ರೋಗಿಗಳಿಗೆ ಬಹುಪಾಲು ಉಪಯುಕ್ತವಾಗಬಹುದು. ಇದು ಇನ್ಸುಲಿನ್ ಉತ್ಪಾದನೆಗೆ ಸಹಕಾರ ನೀಡುವ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುತ್ತದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 11 ರ ದ್ವಾದಶ ರಾಶಿಗಳ ಫಲಾಫಲ.!

ಇದರಲ್ಲಿರುವ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ, ಮೂಳೆ ಆರೋಗ್ಯವನ್ನು ಗಟ್ಟಿ ಮಾಡುತ್ತವೆ ಮತ್ತು ಸಂಬಂಧಿತ ಸೋಂಕುಗಳಿಂದ ರಕ್ಷಣೆ ನೀಡುತ್ತವೆ.


Note :  ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಒದಗಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಗೆ, ವೃತ್ತಿಪರ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜನಸ್ಪಂದನ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.

Dead body : ಮಾವಿನಹಣ್ಣಿನ ಚೀಲವೆಂದು ಮಹಿಳೆಯ ಶವ ಸಾಗಾಟ.!

0

ಜನಸ್ಪಂದನ ನ್ಯೂಸ್‌, ಡೆಸ್ಕ್‌  : ಹಾಡು ಹಗಲೇ ಮಾವಿನಹಣ್ಣಿನ ಚೀಲವೆಂದು ಓರ್ವ ಮಹಿಳೆಯ ಶವ (Dead body) ಸಾಗಾಟ ಮಾಡುತ್ತಿರುವ ಬೆಚ್ಚಿ ಬೀಳಿಸುವ ಪ್ರಕರಣವೊಂದು ನಡೆದಿರುವ ಬಗ್ಗೆ ವರದಿಯಾಗಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾಮಾನ್ಯ ಜನರು ಬೆಚ್ಚಿ ಬಿದ್ದಿದ್ದಾರೆ.

ಹೌದು, ಪಂಜಾಬ್‌ನ ಲುಧಿಯಾನ ನಗರದಲ್ಲಿ ಜನರಲ್ಲಿ ಆಘಾತ ಮೂಡಿಸಿರುವ ಘೋರ ಘಟನೆ ಬೆಳಕಿಗೆ ಬಂದಿದೆ. ಮಾವಿನಹಣ್ಣಿನ ಚೀಲವೆಂದು ಭಾವಿಸಿದ್ದ ಚೀಲಯಲ್ಲಿ 31 ವರ್ಷದ ಮಹಿಳೆಯ ಶವ (Dead body) ಪತ್ತೆಯಾಗಿದ್ದು, ಪೊಲೀಸರು ಕೊಲೆ ಆರೋಪದಡಿಯಲ್ಲಿ ಇಬ್ಬರು ಶಂಕಿತರನ್ನು ಹುಡುಕುತ್ತಿದ್ದಾರೆ.

ಘಟನೆ ವಿವರ : River bridge collapses ; 9 ಸಾವು, ಹಲವು ವಾಹನಗಳು ನದಿಯ ಪಾಲು.!

ಘಟನೆ ಜುಲೈ 10 ರಂದು ನಡೆದಿದೆ. ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಲುಧಿಯಾನ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದು, ಚೀಲವೊಂದನ್ನು ವಿಭಜಕದ ಮೇಲೆ ಎಸೆದಿದ್ದಾರೆ. ಚೀಲದ ವಿಲಕ್ಷಣತೆ ಹಾಗೂ ದುರ್ವಾಸನೆ ಗಮನಿಸಿದ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.

ಇದನ್ನು ಓದಿ :

ಪೊಲೀಸರ ಆಗಮಿಸಿದ ನಂತರ ಚೀಲವನ್ನು ತೆರೆಯಲಾಗಿದ್ದು, ಅದರಲ್ಲಿ ಮಹಿಳೆಯ ಶವ (Dead body) ಪತ್ತೆಯಾಗಿದೆ. ಮೃತರನ್ನು ರೇಷ್ಮಾ (31) ಎಂದು ಗುರುತಿಸಲಾಗಿದೆ.

Dead body : ಮಾವಿನಹಣ್ಣಿನ ಚೀಲವೆಂದು ಮಹಿಳೆಯ ಶವ ಸಾಗಾಟ.!
Dead body of Reshma
ಕಾಮೆರಾ ದೃಶ್ಯಾವಳಿ ಪತ್ತೆ :

ಘಟನೆಯ ನಂತರ ಪೊಲೀಸರು ‘ಸೇಫ್ ಸಿಟಿ’ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಶಂಕಿತರು ಸುನೆಟ್ ಗ್ರಾಮದಿಂದ ಮಹಿಳೆಯ ಶವ (Dead body) ವನ್ನು ಬೈಕ್‌ನಲ್ಲಿ ಸಾಗಿಸುತ್ತಿರುವುದು ದೃಢಪಟ್ಟಿದೆ. ಅವರು ಸುಮಾರು 3.7 ಕಿಲೋಮೀಟರ್ ದೂರವಿರುವ ಆರತಿ ಚೌಕ್‌ಗೆ ದೇಹವನ್ನು ತೆಗೆದುಕೊಂಡು ಹೋಗಿ ಅಲ್ಲಿಯ ವಿಭಜಕದ ಮೇಲೆ ಎಸೆದಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿದೆ.

ತನಿಖೆ ಪ್ರಗತಿಯಲ್ಲಿ :

ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯನ್ನು ಕೊಲೆ ಮಾಡಿದ್ದು, ನಂತರ ಶವ (Dead body) ವನ್ನು ಎಸೆಯಲು ಯತ್ನಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ಸಂಬಂಧ ಲುಧಿಯಾನ ಪೊಲೀಸರು ಈಗಾಗಲೇ ಶೋಧ ಕಾರ್ಯ ಆರಂಭಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುವ ನಿರೀಕ್ಷೆಯಿದೆ.

ಇದನ್ನು ಓದಿ : Belagavi horrific incident : ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಓರ್ವ ಗಂಭೀರ.!

ಇದೊಂದು ಮಾನವೀಯತೆಯನ್ನು ಪ್ರಶ್ನಿಸುವ ಘಟನೆ ಆಗಿದ್ದು, ಸಾರ್ವಜನಿಕರಲ್ಲಿ ಭಯ ಮತ್ತು ಆಕ್ರೋಶವನ್ನುಂಟು ಮಾಡಿದೆ.

ಮಹಿಳೆಯ ಶವ (Dead body) ದ ವಿಡಿಯೋ :

https://twitter.com/i/status/1942937461841125681

Astrology : ಹೇಗಿದೆ ಗೊತ್ತಾ.? ಜುಲೈ 11 ರ ದ್ವಾದಶ ರಾಶಿಗಳ ಫಲಾಫಲ.!

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 11 ರ ಶುಕ್ರವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಕೆಲವು ವಿಷಯಗಳಲ್ಲಿ ಮಕ್ಕಳು ನಿಮ್ಮ ಮಾತು ಒಪ್ಪುವುದಿಲ್ಲ. ದೂರ ಪ್ರಯಾಣದಲ್ಲಿ ವಾಹನ ತೊಂದರೆಗಳು ಎದುರಾಗುತ್ತವೆ, ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಕಂಡುಬಂದರೂ, ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ವೃತ್ತಿಪರ ವ್ಯವಹಾರಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದಾಗಿ, ಸಾಕಷ್ಟು ವಿಶ್ರಾಂತಿ ಇರುವುದಿಲ್ಲ. ದೀರ್ಘಾವಧಿ ಸಾಲದ ಒತ್ತಡ ಹೆಚ್ಚಾಗುತ್ತದೆ.

*ವೃಷಭ ರಾಶಿ*

ಕುಟುಂಬದ ಸದಸ್ಯರ ವರ್ತನೆಯಿಂದ ಮಾನಸಿಕ ಕಿರಿಕಿರಿಗಳು ಹೆಚ್ಚಾಗುತ್ತವೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ಪ್ರಮುಖ ವಿಷಯಗಳಲ್ಲಿ .ಆತುರದ ನಿರ್ಧಾರಗಳು ಕೂಡಿ ಬರುವುದಿಲ್ಲ. ಹಣಕಾಸಿನ ವ್ಯವಹಾರಗಳು ಸ್ವಲ್ಪ ನಿಧಾನವಾಗುತ್ತವೆ. ನಿರುದ್ಯೋಗಿಗಳ ಕಷ್ಟಗಳು ವ್ಯರ್ಥವಾಗುತ್ತವೆ. ವ್ಯಾಪಾರ ಉದ್ಯೋಗಗಳಲ್ಲಿ ಸ್ಥಿರತೆಯ ಕೊರತೆ ಇರುತ್ತದೆ.

*ಮಿಥುನ ರಾಶಿ*

ಹೊಸ ಪರಿಚಯಗಳಿಂದ ಆರ್ಥಿಕ ಲಾಭ ಉಂಟಾಗುತ್ತದೆ. ಇತರರೊಂದಿಗೆ ಜಾಗರೂಕರಾಗಿರಿ. ಸ್ವಲ್ಪ ಮಟ್ಟಿಗೆ ಹಣಕಾಸಿನ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಹಳೆಯ ಸಾಲಗಳಿಂದ ಮುಕ್ತಿ ದೊರೆಯುತ್ತದೆ. ಕುಟುಂಬ ಸದಸ್ಯರ ವಿರೋಧ ಹೆಚ್ಚಾಗುತ್ತದೆ. ವೃತ್ತಿಪರ ಉದ್ಯೋಗದಲ್ಲಿ ಧನಾತ್ಮಕ ಫಲಿತಾಂಶಗಳಿರುತ್ತವೆ.

*ಕಟಕ ರಾಶಿ*

ದೂರದ ಸ್ಥಳಗಳಿಂದ ಅಪರೂಪದ ಮಾಹಿತಿ ದೊರೆಯುತ್ತದೆ. ಆದಾಯ ಅಷ್ಟಾಗಿ ಇರುವುದಿಲ್ಲ. ಮನೆಯ ಹೊರಗೆ ಒಂದು ವ್ಯವಹಾರದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಬಾಲ್ಯದ ಗೆಳೆಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಉದ್ಯೋಗದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ.

ಇದನ್ನು ಓದಿ : River bridge collapses ; 9 ಸಾವು, ಹಲವು ವಾಹನಗಳು ನದಿಯ ಪಾಲು.!
*ಸಿಂಹ ರಾಶಿ*

ಹಠಾತ್ ಧನ ಲಾಭ ದೊರೆಯುತ್ತದೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಒಳ್ಳೆಯ ಶುಭ ಸುದ್ಧಿ ಇರುತ್ತದೆ. ಮನೆಯಲ್ಲಿ ಬಂಧು ಮಿತ್ರರೊಂದಿಗೆ ಸಂತೋಷದಿಂದ ಕಳೆಯುತ್ತೀರಿ. ಹೊಸ ವ್ಯಾಪಾರಗಳಿಗೆ ನಿಕಟ ಸ್ನೇಹಿತರಿಂದ ಹೂಡಿಕೆಗಳು ದೊರೆಯುತ್ತವೆ. ಸೋದರ ಸಂಬಂಧಿಗಳೊಂದಿಗಿನ ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಬಡ್ತಿ ಹೆಚ್ಚಾಗುತ್ತದೆ.

*ಕನ್ಯಾ ರಾಶಿ*

ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗುತ್ತವೆ. ಮಕ್ಕಳ ಉದ್ಯೋಗ ಪ್ರಯತ್ನಗಳು ಸ್ವಲ್ಪ ನಿರಾಶಾದಾಯಕವಾಗಿರುತ್ತದೆ. ನಿಮ್ಮ ಸುತ್ತಮುತ್ತಲಿನವರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ಪಾಲುದಾರಿಕೆ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ.

*ತುಲಾ ರಾಶಿ*

ಪ್ರಮುಖ ವಿಷಯಗಳಲ್ಲಿ ಕುಟುಂಬದವರ ಸಹಾಯ ಸಹಕಾರಗಳು ದೊರೆಯುತ್ತವೆ. ಹಣಕಾಸಿನ ಪರಿಸ್ಥಿತಿಯು ಆಶಾದಾಯಕವಾಗಿರುತ್ತದೆ. ಅಗತ್ಯಕ್ಕೆ ಸಂಬಂಧಿಕರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸುತ್ತೀರಿ. ದೈವಿಕ ಸೇವಾ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ.

*ವೃಶ್ಚಿಕ ರಾಶಿ*

ಕೈಗೊಂಡ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಆಸ್ತಿ ವಿವಾದಗಳಲ್ಲಿ ಸಹೋದರರೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ದೂರದ ಸಂಬಂಧಿಕರಿಂದ ಪ್ರಮುಖ ಸಮಾಚಾರಗಳನ್ನು ಸ್ವೀಕರಿಸಲಾಗುತ್ತದೆ. ಆರ್ಥಿಕ ಸ್ಥಿತಿಯು ಹಿಂದಿಗಿಂತ ಸುಧಾರಿಸುತ್ತದೆ. ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೀರಿ. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಹೆಚ್ಚಾಗುತ್ತದೆ.

ಇದನ್ನು ಓದಿ : ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?
*ಧನುಸ್ಸು ರಾಶಿ*

ವೃತ್ತಿಪರ ಉದ್ಯೋಗಗಳಲ್ಲಿ ವಿವಾದಗಳು ಬಗೆಹರಿಯುತ್ತವೆ. ಆಧ್ಯಾತ್ಮಿಕ ಸೇವಾ ಚಟುವಟಿಕೆಗಳಲ್ಲಿ ವಿಶೇಷವಾಗಿ ಪಾಲ್ಗೊಳ್ಳುತ್ತೀರಿ. ದೇವರ ಕೃಪೆಯಿಂದ ಯೋಜಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯವಹಾರದಲ್ಲಿನ ಹೊಸ ಉತ್ಸಾಹದೊಂದಿಗೆ ಲಾಭ ಪಡೆಯುತ್ತೀರಿ. ಆತ್ಮೀಯರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಪ್ರಯಾಣದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗುತ್ತವೆ.

*ಮಕರ ರಾಶಿ*

ಆರೋಗ್ಯ ವಿಷಯದಲ್ಲಿ ವೈದ್ಯಕೀಯ ಸಮಾಲೋಚನೆ ಅಗತ್ಯ. ಮನೆಯ ಹೊರಗಿನ ಕೆಲವು ಸನ್ನಿವೇಶಗಳು ಹೆಚ್ಚು ಕಿರಿಕಿರಿಯುಂಟುಮಾಡುತ್ತವೆ. ಕುಟುಂಬ ಸದಸ್ಯರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ಉದ್ಯೋಗಿಗಳು ಅಧಿಕಾರಿಗಳೊಂದಿಗೆ ಹೆಚ್ಚು ಜಾಗರೂಕರಾಗಿರಬೇಕು. ಹಣಕಾಸಿನ ಸಮಸ್ಯೆಗಳಿಂದ ಒತ್ತಡ ಹೆಚ್ಚಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ.

*ಕುಂಭ ರಾಶಿ*

ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಸ್ವಲ್ಪ ಪರಿಹಾರ ಸಿಗುತ್ತದೆ. ಪ್ರಯಾಣದ ಸಮಯದಲ್ಲಿ ಹೊಸ ಸ್ನೇಹಿತರ ಪರಿಚಯ ಹೆಚ್ಚಾಗುತ್ತದೆ. ಆರ್ಥಿಕ ವಾತಾವರಣ ಅನುಕೂಲಕರವಾಗಿರುತ್ತದೆ. ಗೃಹ ನಿರ್ಮಾಣ ವಿಚಾರಗಳು ಕಾರ್ಯರೂಪಕ್ಕೆ ಬರುತ್ತವೆ. ವ್ಯವಹಾರಗಳಲ್ಲಿ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಲಾಭವನ್ನು ಪಡೆಯುತ್ತೀರಿ.

*ಮೀನ ರಾಶಿ*

ಮನೆಯ ಹೊರಗೆ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ. ಹೊಸ ವ್ಯವಹಾರಗಳು ಯಶಸ್ವಿಯಾಗುತ್ತವೆ. ಸಹೋದರರ ಸಹಕಾರದಿಂದ ಹೊಸ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಅಪ್ರಯತ್ನ ಕಾರ್ಯ ಸಿದ್ಧಿ ದೊರೆಯುತ್ತದೆ ಮತ್ತು ಆರ್ಥಿಕ ಪರಿಸ್ಥಿತಿಯು ಆಶಾದಾಯಕವಾಗಿರುತ್ತದೆ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ.

Astrology