ಸೋಮವಾರ, ಫೆಬ್ರವರಿ 2, 2026

Janaspandhan News

Home Blog Page 3

ಬೆಳಗಾವಿ–ಗೋವಾ ಗಡಿಯಲ್ಲಿ 400 ಕೋ. ರೂ ಹಣದ ಕಂಟೇನರ್ ನಾಪತ್ತೆ: ದೇಶವನ್ನೇ ಬೆಚ್ಚಿಬೀಳಿಸಿದ ರಾಬರಿ ಪ್ರಕರಣ.

0

ಜನಸ್ಪಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ–ಗೋವಾ ಗಡಿ ಪ್ರದೇಶದಲ್ಲಿ ನಡೆದಿರುವ ಭಾರೀ ಹಣದ ದರೋಡೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ರೂ ನಗದು ಹೊಂದಿದ್ದ ಎರಡು ಕಂಟೇನರ್‌ಗಳು ಚೋರ್ಲಾ ಘಾಟ್ ಬಳಿ ನಾಪತ್ತೆಯಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಘಟನೆ 2025ರ ಅಕ್ಟೋಬರ್ 16ರಂದು ನಡೆದಿದ್ದು, ಸುಮಾರು ಒಂದು ತಿಂಗಳ ಬಳಿಕ ಪ್ರಕರಣ ಬಹಿರಂಗವಾಗಿದೆ.

ಈ ಪ್ರಕರಣವು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ – ಈ ಮೂರು ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ನಾಸಿಕ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಬೆಳಗಾವಿ–ಗೋವಾ ಗಡಿಯಲ್ಲಿ ನಾಪತ್ತೆಯಾದ 2 ಕಂಟೇನರ್‌ಗಳು :

ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಎರಡು ಕಂಟೇನರ್‌ಗಳು ಬೆಳಗಾವಿ–ಗೋವಾ ಗಡಿಯ ಚೋರ್ಲಾ ಘಾಟ್ ಪ್ರದೇಶದಲ್ಲಿ ನಾಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಘಟನೆಯಾದ ಬಳಿಕ ದೀರ್ಘಕಾಲ ಯಾರಿಗೂ ಮಾಹಿತಿ ಇಲ್ಲದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಪೊಲೀಸರು ಸಂಯುಕ್ತವಾಗಿ ತನಿಖೆಗೆ ಮುಂದಾಗಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವಿಶೇಷ ತನಿಖಾ ತಂಡ (SIT) ರಚನೆಗೆ ಆದೇಶ ನೀಡಿದ್ದಾರೆ.

ಈ ಸುದ್ದಿನು ಓದಿ : ಗೇಟ್ ಮುಚ್ಚುವ ಮುನ್ನ ದಾಟಲು ಯತ್ನಿಸಿದ ಟ್ರಕ್‌ಗೆ ರೈಲು ಡಿಕ್ಕಿ; ವೀಡಿಯೋ ವೈರಲ್.

ರಿಯಲ್ ಎಸ್ಟೇಟ್ ಉದ್ಯಮಿಗೆ ಸೇರಿದ ಹಣ?

ಪ್ರಾಥಮಿಕ ತನಿಖೆಯ ಪ್ರಕಾರ, ನಾಪತ್ತೆಯಾಗಿರುವ ಹಣವು ಮಹಾರಾಷ್ಟ್ರ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್‌ಗೆ ಸೇರಿದ್ದೆಂದು ಹೇಳಲಾಗುತ್ತಿದೆ. ಈ ಭಾರೀ ಮೊತ್ತದ ಹಣವನ್ನು ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಪಹರಣದಿಂದ ಹೊರಬಂದ ಸತ್ಯ :

ಈ ದರೋಡೆ ಪ್ರಕರಣ ಬೆಳಕಿಗೆ ಬರಲು ಕಾರಣವಾದದ್ದು ನಾಸಿಕ್ ಮೂಲದ ಸಂದೀಪ್ ಪಾಟೀಲ್ ಎಂಬ ವ್ಯಕ್ತಿಯ ಅಪಹರಣ.

ಕಂಟೇನರ್ ನಾಪತ್ತೆಯಾದ ಬಳಿಕ, ಕಿಶೋರ್ ಶೇಟ್ ಅವರ ಸಹಚರರು ಸಂದೀಪ್ ಪಾಟೀಲ್ ಅವರನ್ನು ಗನ್ ಪಾಯಿಂಟ್‌ನಲ್ಲಿ ಅಪಹರಿಸಿ ಸುಮಾರು ಒಂದೂವರೆ ತಿಂಗಳ ಕಾಲ ಬಂಧನದಲ್ಲಿಟ್ಟಿದ್ದರು.
ಕಂಟೇನರ್ ಹೈಜಾಕ್‌ಗೆ ನೀನೇ ಕಾರಣ ಎಂದು ಆರೋಪಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಸಂದೀಪ್ ಆರೋಪಿಸಿದ್ದಾರೆ.

400 ಕೋಟಿ ರೂ ಹಣವನ್ನು ವಾಪಸ್ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಬಳಿಕ ತಪ್ಪಿಸಿಕೊಂಡು ಬಂದ ಸಂದೀಪ್ ನಾಸಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

“ಇದು 400 ಕೋಟಿ ಅಲ್ಲ, 1000 ಕೋಟಿ ರೂ ಪ್ರಕರಣ” – ವಿಡಿಯೋದಲ್ಲಿ ಸಂದೀಪ್ ಆರೋಪ :

ಈ ನಡುವೆ ಸಂದೀಪ್ ಪಾಟೀಲ್ ಬಿಡುಗಡೆ ಮಾಡಿರುವ ವಿಡಿಯೋ ಹೇಳಿಕೆ ಮತ್ತಷ್ಟು ಸಂಚಲನ ಮೂಡಿಸಿದೆ.

ಅವರು ಹೇಳಿರುವುದೇನೆಂದರೆ:

  • ಇದು ಕೇವಲ 400 ಕೋಟಿ ರೂ ಪ್ರಕರಣವಲ್ಲ.
  • ಚೋರ್ಲಾ ಘಾಟ್‌ನಲ್ಲಿ ರದ್ದಾದ 2000 ರೂ ನೋಟುಗಳಿಂದ ತುಂಬಿದ್ದ ಕಂಟೇನರ್ ನಾಪತ್ತೆಯಾಗಿದೆ.
  • ತನ್ನ ಹೆಸರನ್ನು ಬಳಸಿ 100 ಕೋಟಿ ರೂ ಡಿಮ್ಯಾಂಡ್ ಮಾಡಲಾಗಿದೆ.
  • ತನ್ನನ್ನು ಅಪಹರಿಸಿ ಹಿಂಸೆ ನೀಡಲಾಗಿದೆ.
  • ಕೆಲವು ಪೊಲೀಸ್ ಅಧಿಕಾರಿಗಳೇ ವಾಟ್ಸಪ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

“ನನಗೆ ಏನಾದರೂ ಆದರೆ, ಅದರ ಹೊಣೆಗಾರರು ಕಿಶೋರ್ ಶೇಟ್ ಮತ್ತು ಅವರ ಸಹಚರರು” ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರ–ಕರ್ನಾಟಕ ಪೊಲೀಸ್ ನಡುವಿನ ಅಸಮಾಧಾನ :

ಈ ಪ್ರಕರಣದ ತನಿಖೆ ವೇಳೆ ಮಹಾರಾಷ್ಟ್ರ ಪೊಲೀಸರು ಸಹಕಾರ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಬೆಳಗಾವಿ ಪೊಲೀಸರು ನಾಸಿಕ್‌ಗೆ ತೆರಳಿ ಬಂಧಿತರ ವಿಚಾರಣೆ ನಡೆಸಲು ಪ್ರಯತ್ನಿಸಿದರೂ, ಸಂಪೂರ್ಣ ಸಹಕಾರ ಸಿಗಲಿಲ್ಲ ಎನ್ನಲಾಗಿದೆ.

ಇದರ ನಡುವೆಯೇ:

  • ಕಂಟೇನರ್‌ಗಳು ನಿಜಕ್ಕೂ ಕರ್ನಾಟಕ ಗಡಿಯನ್ನು ದಾಟಿದ್ದವೆಯೇ?
  • ಹಣವನ್ನು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು?
  • ನಿಜವಾದ ಮೊತ್ತ ಎಷ್ಟು? ಎಂಬ ಪ್ರಶ್ನೆಗಳು ತನಿಖಾಧಿಕಾರಿಗಳ ಮುಂದೆ ದೊಡ್ಡ ಸವಾಲಾಗಿ ಉಳಿದಿವೆ.

ಇದನ್ನು ಓದಿ : ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ರಸ್ತೆ ಅಪಘಾತ ; ಪಲ್ಟಿಯಾದ ಕಾರು.!

ಮುಂದಿನ ತನಿಖೆ ಏನಾಗಲಿದೆ?

  • SIT ತನಿಖೆ ಮುಂದುವರಿಕೆ.
  • ಕಂಟೇನರ್ ಮಾರ್ಗ ಪತ್ತೆ ಹಚ್ಚುವ ಪ್ರಯತ್ನ.
  • ಹಣದ ಮೂಲ ಮತ್ತು ಬಳಕೆ ಕುರಿತು ತನಿಖೆ.
  • ಪೊಲೀಸ್ ಅಧಿಕಾರಿಗಳ ಪಾತ್ರದ ಮೇಲೂ ಪರಿಶೀಲನೆ. ಈ ಬಹುಕೋಟಿ ರಾಬರಿ ಪ್ರಕರಣ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ತಿರುವು ಪಡೆಯುವ ಸಾಧ್ಯತೆ ಇದೆ.

Courtesy : TV9 Kannada


Disclaimer : ಈ ಸುದ್ದಿ ಸಾರ್ವಜನಿಕ ಮೂಲಗಳು ಹಾಗೂ ಪೊಲೀಸ್ ದಾಖಲೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳಿಗೆ ಕಾಯಲಾಗುತ್ತಿದೆ.

ಸವದತ್ತಿ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಹುಂಡಿ ಎಣಿಕೆ: ದಾಖಲೆ ರೂ.1.99 ಕೋಟಿ ಕಾಣಿಕೆ ಸಂಗ್ರಹ.

0

ಜನಸ್ಫಂದನ ನ್ಯೂಸ್‌, ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ನಡೆದ ಮೊದಲ ಹಂತದ ಮೂರು ದಿನಗಳ ಹುಂಡಿ ಎಣಿಕೆಯಲ್ಲಿ ದಾಖಲೆಯ ಮಟ್ಟದ ಕಾಣಿಕೆ ಸಂಗ್ರಹವಾಗಿದ್ದು, ಒಟ್ಟು ರೂ.1.99 ಕೋಟಿ ಮೌಲ್ಯದ ದೇಣಿಗೆ ಲಭಿಸಿದೆ.

ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸಮರ್ಪಿಸಿದ ಕಾಣಿಕೆಗಳ ಎಣಿಕೆ ಕಾರ್ಯವನ್ನು ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ, ತಹಶೀಲ್ದಾರ್ ಕಚೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳ ಸಮ್ಮುಖದಲ್ಲಿ ಗುರುವಾರ ಪೂರ್ಣಗೊಳಿಸಲಾಯಿತು.

ದಿನವಾರು ಸಂಗ್ರಹ ವಿವರ :

🔹 ಜನವರಿ 19 ರಂದು ನಡೆದ ಎಣಿಕೆಯಲ್ಲಿ,

  • ಚಿನ್ನಾಭರಣ: ರೂ.8.65 ಲಕ್ಷ,
  • ಬೆಳ್ಳಿ ಆಭರಣ: ರೂ.5.05 ಲಕ್ಷ ಮತ್ತು
  • ನಗದು: ರೂ.56.82 ಲಕ್ಷ ಹಣ ಸಂಗ್ರಹವಾಗಿದೆ.

🔹 ಜನವರಿ 21 ರಂದು ನಡೆದ ಎಣಿಕೆಯಲ್ಲಿ,

  • ಚಿನ್ನ: ರೂ.3.15 ಲಕ್ಷ.
  • ಬೆಳ್ಳಿ: ರೂ.1.67 ಲಕ್ಷ ಮತ್ತು
  • ನಗದು: ರೂ.72.99 ಲಕ್ಷ ಹಣ ಸಂಗ್ರಹವಾಗಿದೆ.

🔹 ಜನವರಿ 22 ರಂದು ನಡೆದ ಎಣಿಕೆಯಲ್ಲಿ,

  • ಚಿನ್ನ: ರೂ.3.33 ಲಕ್ಷ.
  • ಬೆಳ್ಳಿ: ರೂ.4.77 ಲಕ್ಷ ಮತ್ತು
  • ನಗದು: ರೂ.42.83 ಲಕ್ಷ ಹಣ ಸಂಗ್ರಹವಾಗಿದೆ.

➡️ ಒಟ್ಟು ಸಂಗ್ರಹ:

  • ಚಿನ್ನಾಭರಣ – ರೂ.15.10 ಲಕ್ಷ.
  • ಬೆಳ್ಳಿ ಆಭರಣ – ರೂ.11.51 ಲಕ್ಷ.
  • ನಗದು – ರೂ.1.72 ಕೋಟಿ.
  • ಒಟ್ಟು ಮೊತ್ತ – ರೂ.1.99 ಕೋಟಿ ಹಣ ಸಂಗ್ರಹವಾಗಿದೆ.

ಈ ಸುದ್ದಿ ನೋಡಿ : ಸವದತ್ತಿ ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!

ವಿದೇಶಿ ಕರೆನ್ಸಿ ಹಾಗೂ ಅಮಾನ್ಯ ನೋಟುಗಳು ಪತ್ತೆ :

ಹುಂಡಿ ಎಣಿಕೆಯ ವೇಳೆ ವಿವಿಧ ದೇಶಗಳ ಕರೆನ್ಸಿ ನೋಟುಗಳು ಹಾಗೂ ಅಮಾನ್ಯಗೊಂಡ ಭಾರತೀಯ ನೋಟುಗಳು ಪತ್ತೆಯಾಗಿವೆ.

🔸 ಅಮಾನ್ಯಗೊಂಡ ಭಾರತೀಯ ನೋಟುಗಳು:

  • ರೂ.1,000 ಮುಖಬೆಲೆಯ 1 ನೋಟು.
  • ರೂ.500 ಮುಖಬೆಲೆಯ 1 ನೋಟು ಮತ್ತು
  • ರೂ.2,000 ಮುಖಬೆಲೆಯ 1 ನೋಟು.

🔸 ವಿದೇಶಿ ಕರೆನ್ಸಿಗಳು:

  • ಅಮೆರಿಕಾ: $20 ಮುಖಬೆಲೆಯ 1 ನೋಟು.
  • ಯುರೋಪ್: €10 ಮತ್ತು €5 ಮುಖಬೆಲೆಯ ತಲಾ 2 ನೋಟುಗಳು.
  • ಓಮನ್: 100 ಬೈಜಾ ಹಾಗೂ 1 ರಿಯಾಲ್ ತಲಾ 2 ನೋಟುಗಳು ಮತ್ತು
  • ಕೆನಡಾ: $20 ಮುಖಬೆಲೆಯ 5 ನೋಟುಗಳು.
ಸವದತ್ತಿ ಶಕ್ತಿಪೀಠ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಹುಂಡಿ ಎಣಿಕೆ: ದಾಖಲೆ ರೂ.1.99 ಕೋಟಿ ಕಾಣಿಕೆ ಸಂಗ್ರಹ.
ವಿದೇಶಿ ಕರೆನ್ಸಿಗಳು

ಈ ಕುರಿತು ಮಾಹಿತಿ ನೀಡಿದ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸಹಕಾರ್ಯದರ್ಶಿ ನಾಗರತ್ನಾ ಚೋಳಿನ ಅವರು, ಭಕ್ತರ ಭಕ್ತಿಭಾವದಿಂದಾಗಿ ಈ ಬಾರಿ ದಾಖಲೆಯ ಮಟ್ಟದ ಕಾಣಿಕೆ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ಭಕ್ತರ ಅಪಾರ ನಂಬಿಕೆ :

ಶಕ್ತಿಪೀಠವಾಗಿರುವ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ತಮ್ಮ ಹರಕೆಗಳನ್ನು ಈಡೇರಿಸಲು ಭಕ್ತಿಯಿಂದ ಕಾಣಿಕೆ ಸಲ್ಲಿಸುತ್ತಿದ್ದಾರೆ. ಈ ಬಾರಿ ದಾಖಲೆ ಮೊತ್ತ ಸಂಗ್ರಹವಾಗಿರುವುದು ದೇವಾಲಯದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ :

ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವು ಕರ್ನಾಟಕದ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಸಮೀಪವಿರುವ ಯಲ್ಲಮ್ಮ ಗುಡ್ಡ ದ ಮೇಲಿರುವ ಪ್ರಸಿದ್ಧ ಶಕ್ತಿ ಪೀಠವಾಗಿದೆ. ರೇಣುಕಾ ದೇವಿಯು ಶಕ್ತಿ ಮತ್ತು ಫಲವತ್ತತೆಯ ದೇವತೆಯಾಗಿ ಪೂಜಿಸಲ್ಪಡುತ್ತಾಳೆ.

ಈ ದೇವಾಲಯವು ಐತಿಹಾಸಿಕವಾಗಿ ರೇಣುಕಾ (ಜಮದಗ್ನಿಯ ಪತ್ನಿ ಮತ್ತು ಪರಶುರಾಮನ ತಾಯಿ) ದಂತಕಥೆಗೆ ಸಂಬಂಧಿಸಿದೆ. ಇಲ್ಲಿ ಪ್ರತಿವರ್ಷ ಬನಶಂಕರಿ ಹಾಗೂ ಹುಣ್ಣಿಮೆ ದಿನಗಳಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ.

ಇದನ್ನು ಓದಿ : ಸವದತ್ತಿ ಯಲ್ಲಮ್ಮದೇವಿ ಗುಡಿಗೆ ನುಗ್ಗಿದ್ದ ಮಳೆನೀರು ; ಹುಂಡಿಯಲ್ಲಿದ್ದ ತೊಯ್ದ ನೋಟುಗಳನ್ನು ಒಣ ಹಾಕಿದ ಸಿಬ್ಬಂದಿ.!

ಪ್ರಮುಖಾಂಶಗಳು:

  • ಸ್ಥಳ: ಬೆಳಗಾವಿ ಜಿಲ್ಲೆಯ ಸವದತ್ತಿಯಿಂದ ೫ ಕಿ.ಮೀ., ಸಿದ್ಧಾಚಲ/ರಾಮಗಿರಿ ಬೆಟ್ಟದ ಮೇಲೆ.
  • ದೇವತೆ: ರೇಣುಕಾ ಯಲ್ಲಮ್ಮ (ಕಾಳಿ ದೇವಿಯ ಅವತಾರವೆಂದು ನಂಬಲಾಗಿದೆ).
  • ಪೂಜಾ ಸಮಯ: ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಮತ್ತು ಸಂಜೆ 6 ರಿಂದ 9 ಗಂಟೆಯವರೆಗೆ.
  • ವಿಶೇಷತೆ: ಬನದ ಹುಣ್ಣಿಮೆ, ಭಾರತ ಹುಣ್ಣಿಮೆ ಮತ್ತು ದವನದ ಹುಣ್ಣಿಮೆ.
  • ದಂತಕಥೆ: ಪತಿ ಜಮದಗ್ನಿಯ ಆಜ್ಞೆಯಂತೆ ಪುತ್ರ ಪರಶುರಾಮನು ರೇಣುಕೆಯನ್ನು ಶಿರಚ್ಛೇದನ ಮಾಡಿದರೂ, ನಂತರ ಅವಳು ದೈವಿಕ ಶಕ್ತಿಯಾಗಿ ಯಲ್ಲಮ್ಮನಾಗಿ ಪ್ರಸಿದ್ಧಳಾದಳು.

ಈ ದೇವಾಲಯವು 8 ರಿಂದ 11 ನೇ ಶತಮಾನದಷ್ಟು ಹಳೆಯದಾದ ಚಾಲುಕ್ಯ/ರಾಷ್ಟ್ರಕೂಟರ ಕಾಲದ ಪುರಾತತ್ತ್ವ ಶಾಸ್ತ್ರದ ಪುರಾವೆಗಳನ್ನು ಒಳಗೊಂಡಿದೆ. 

ಹೇರ್ ಕಲರ್ ಬೇಡ ; ಟೊಮೆಟೊ ಬಳಸಿ ಬಿಳಿ ಕೂದಲು ನಿಯಂತ್ರಿಸಿ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ವೇಗದ ಜೀವನಶೈಲಿ, ಆಹಾರ ಪದ್ಧತಿಯ ಬದಲಾವಣೆ, ನಿರಂತರ ಒತ್ತಡ ಮತ್ತು ಪರಿಸರ ಮಾಲಿನ್ಯ ಇವುಗಳ ಪರಿಣಾಮವಾಗಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಬಿಳಿ ಕೂದಲು ಕಾಣಿಸಿಕೊಂಡ ಕೂಡಲೇ ಹಲವರು ರಾಸಾಯನಿಕ ಹೇರ್ ಕಲರ್ ಅಥವಾ ದುಬಾರಿ ಚಿಕಿತ್ಸೆಗಳತ್ತ ಮೊರೆ ಹೋಗುತ್ತಾರೆ. ಆದರೆ ಇವು ತಾತ್ಕಾಲಿಕ ಪರಿಹಾರ ನೀಡಿದರೂ, ದೀರ್ಘಕಾಲದಲ್ಲಿ ಕೂದಲಿನ ಆರೋಗ್ಯಕ್ಕೆ ಹಾನಿಯುಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಜನರು ನೈಸರ್ಗಿಕ ಮನೆಮದ್ದುಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಟೊಮೆಟೊ ಬಳಸಿ ಬಿಳಿ ಕೂದಲಿಗೆ ಸಹಾಯಕವಾಗುವ ಒಂದು ಸರಳ ಪರಿಹಾರವಿದೆ ಎಂಬುದು ಹಲವರಿಗೆ ಇನ್ನೂ ತಿಳಿದಿಲ್ಲ.

ಬಿಳಿ ಕೂದಲು ಹೆಚ್ಚಾಗಲು ಕಾರಣಗಳೇನು?

ಪೋಷಕಾಂಶಗಳ ಕೊರತೆ, ವಿಟಮಿನ್ B12 ಮತ್ತು ಐರನ್ ಅಭಾವ, ಹಾರ್ಮೋನ್ ಅಸಮತೋಲನ, ಮಾನಸಿಕ ಒತ್ತಡ, ನಿದ್ರಾಭಾವ ಹಾಗೂ ಪರಿಸರ ಮಾಲಿನ್ಯ ಇವುಗಳು ಬಿಳಿ ಕೂದಲು ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಕೆಲವರಲ್ಲಿ ವಂಶಪಾರಂಪರ್ಯ ಕಾರಣದಿಂದಲೂ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುತ್ತದೆ. ಇದರಿಂದ ಆತ್ಮವಿಶ್ವಾಸಕ್ಕೂ ಧಕ್ಕೆಯಾಗುತ್ತದೆ.

ಈ ಆರೋಗ್ಯ ಸುದ್ದಿ ಓದಿ : ಆರೋಗ್ಯ, ಚರ್ಮ ಹಾಗೂ ಕೂದಲಿಗೆ ಟೊಮೆಟೊದ ಅಚ್ಚರಿ ಪ್ರಯೋಜನಗಳು.

ಟೊಮೆಟೊ ಕೂದಲಿಗೆ ಏಕೆ ಉಪಯುಕ್ತ?

ಟೊಮೆಟೊದಲ್ಲಿ ವಿಟಮಿನ್ C, ವಿಟಮಿನ್ A ಮತ್ತು ವಿಟಮಿನ್ K ಸಮೃದ್ಧವಾಗಿವೆ. ಇವು ಕೂದಲಿನ ಬೇರುಗಳನ್ನು ಬಲಪಡಿಸಲು ಸಹಕಾರಿಯಾಗುತ್ತವೆ. ಟೊಮೆಟೊದಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಕೂದಲಿನ ಹಾನಿಯನ್ನು ಕಡಿಮೆ ಮಾಡಿ, ನೈಸರ್ಗಿಕ ಹೊಳಪು ನೀಡಲು ಸಹಾಯ ಮಾಡುತ್ತವೆ ಎಂಬುದು ತಜ್ಞರ ಅಭಿಪ್ರಾಯ.

ನಿಯಮಿತವಾಗಿ ಟೊಮೆಟೊ ಬಳಕೆಯಿಂದ ಕೂದಲು ಗಟ್ಟಿಯಾಗಲು, ಒಣತನ ಕಡಿಮೆಯಾಗಲು ಮತ್ತು ಕೂದಲಿನ ಆರೋಗ್ಯ ಉತ್ತಮವಾಗಲು ನೆರವಾಗುತ್ತದೆ.

ಹೇರ್ ಕಲರ್ ಬೇಡ ; ಟೊಮೆಟೊ ಬಳಸಿ ಮನೆಮದ್ದು ತಯಾರಿಸಿ :

ಈ ನೈಸರ್ಗಿಕ ಪರಿಹಾರವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಅವಶ್ಯಕ ಪದಾರ್ಥಗಳು :

  • ಅರ್ಧ ಟೊಮೆಟೊ.
  • 3–4 ಚಮಚ ಆಲಿವ್ ಎಣ್ಣೆ.
  • 2 ಚಮಚ ಕಾಫಿ ಪುಡಿ.
  • (ಐಚ್ಛಿಕ) ಸ್ವಲ್ಪ ಹೆನ್ನಾ ಪೇಸ್ಟ್.

ತಯಾರಿಸುವ ವಿಧಾನ:
ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮೃದುವಾದ ಪೇಸ್ಟ್ ತಯಾರಿಸಬೇಕು. ಈ ಮಿಶ್ರಣವನ್ನು ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು.

ಕೂದಲಿಗೆ ಹೇಗೆ ಬಳಸಬೇಕು?

  • ತಯಾರಿಸಿದ ಪೇಸ್ಟ್ ಅನ್ನು ಕೈ ಅಥವಾ ಬ್ರಷ್ ಸಹಾಯದಿಂದ ಕೂದಲಿನ ಬೇರುಗಳಿಂದ ತುದಿವರೆಗೆ ಹಚ್ಚಬೇಕು. ವಿಶೇಷವಾಗಿ ಬಿಳಿ ಕೂದಲು ಹೆಚ್ಚು ಇರುವ ಭಾಗಗಳಿಗೆ ಗಮನ ಕೊಡಬೇಕು.
  • ಸುಮಾರು 15–20 ನಿಮಿಷಗಳ ಬಳಿಕ ಉಗುರುಬೆಚ್ಚಗಿನ ನೀರಿನಿಂದ ಸೌಮ್ಯ ಶಾಂಪೂ ಬಳಸಿ ತೊಳೆಯಬೇಕು.

ನಿಯಮಿತ ಬಳಕೆಯಿಂದಾಗುವ ಲಾಭಗಳು :

  • ಕೂದಲಿನ ಬೇರುಗಳು ಬಲವಾಗುತ್ತವೆ.
  • ಬಿಳಿ ಕೂದಲು ಕಾಣಿಕೆ ನಿಧಾನವಾಗಿ ಕಡಿಮೆಯಾಗಲು ಸಹಾಯ.
  • ಕೂದಲು ಮೃದುವಾಗಿ ಮತ್ತು ಹೊಳೆಯುವಂತೆ ಕಾಣುತ್ತದೆ.
  • ರಾಸಾಯನಿಕಗಳ ಬಳಕೆಯನ್ನು ತಪ್ಪಿಸಬಹುದು. ಈ ಪರಿಹಾರವನ್ನು ತಿಂಗಳಿಗೆ 1 ಅಥವಾ 2 ಬಾರಿ ಬಳಸುವುದು ಸೂಕ್ತ ಎಂದು ಹೇಳಲಾಗುತ್ತದೆ.

ಪ್ರಮುಖ ಮುನ್ನೆಚ್ಚರಿಕೆ :

ಪ್ರತಿಯೊಬ್ಬರ ತಲೆಚರ್ಮ ವಿಭಿನ್ನವಾಗಿರುತ್ತದೆ. ಈ ಮನೆಮದ್ದು ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಅತ್ಯವಶ್ಯಕ. ಚರ್ಮದಲ್ಲಿ ಉರಿ, ಕೆರೆತ ಅಥವಾ ಅಲರ್ಜಿ ಕಂಡುಬಂದರೆ ಬಳಕೆಯನ್ನು ತಕ್ಷಣ ನಿಲ್ಲಿಸಿ ವೈದ್ಯರ ಸಲಹೆ ಪಡೆಯಬೇಕು. ಇದು ಕೇವಲ ಮನೆಮದ್ದು ಮಾತ್ರವಾಗಿದ್ದು, ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ ಎಂಬುದನ್ನು ಗಮನದಲ್ಲಿಡಬೇಕು.

ಇದನ್ನು ಓದಿ : ಮೊಟ್ಟೆಗಳಲ್ಲಿ ʼಕ್ಯಾನ್ಸರ್ ಕಾರಕʼ ಅಂಶ ಅನುಮಾನ ; ರಾಜ್ಯಾದ್ಯಂತ ಆರೋಗ್ಯ ಅಲರ್ಟ್.

ಕೊನೆ ಮಾತು :

ದುಬಾರಿ ಉತ್ಪನ್ನಗಳಿಗಿಂತ ನೈಸರ್ಗಿಕ ಪರಿಹಾರಗಳು ಹೆಚ್ಚು ಸುರಕ್ಷಿತವಾಗಿವೆ ಎಂಬ ನಂಬಿಕೆ ಹಲವರಲ್ಲಿದೆ. ಟೊಮೆಟೊ (Tomato) ಆಧಾರಿತ ಈ ಮನೆಮದ್ದು ಬಿಳಿ ಕೂದಲು ಸಮಸ್ಯೆಗೆ ಸಹಾಯಕವಾಗಬಹುದು. ಆರೋಗ್ಯಕರ ಆಹಾರ ಪದ್ಧತಿ, ಒತ್ತಡ ರಹಿತ ಜೀವನ ಮತ್ತು ಸರಿಯಾದ ಕೂದಲು ಆರೈಕೆಯೊಂದಿಗೆ ಇದನ್ನು ಬಳಸಿದರೆ ಉತ್ತಮ ಫಲಿತಾಂಶ ಕಂಡುಬರುವ ಸಾಧ್ಯತೆ ಇದೆ.


Disclaimer : ಈ ಲೇಖನದಲ್ಲಿರುವ ಮಾಹಿತಿ ಸಾಮಾನ್ಯ ಅರಿವು ಮತ್ತು ಮನೆಮದ್ದು ಆಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಅನೈತಿಕ ಸಂಬಂಧ : ಡ್ರಮ್‌ನಲ್ಲಿ ಶವ ಪತ್ತೆ ; ಪತ್ನಿ–ಪ್ರಿಯಕರರಿಂದ ಭೀಕರ ಕೊಲೆ.

0

ಜನಸ್ಪಂದನ ನ್ಯೂಸ್‌, ರಾಜಸ್ಥಾನ : ರಾಜಸ್ಥಾನದ ಖೈರ್ತಾಲ್–ತಿಜಾರಾ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮನೆ ಮೇಲ್ಛಾವಣಿಯಲ್ಲಿ ಇಡಲಾಗಿದ್ದ ನೀಲಿ ಬಣ್ಣದ ಡ್ರಮ್‌ನಲ್ಲಿ ಯುವಕನ ಶವ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಈ ಘಟನೆ ಇತ್ತೀಚೆಗೆ ಮೀರತ್‌ನಲ್ಲಿ ನಡೆದ ಸಾಹಿಲ್ ಕೊಲೆ ಪ್ರಕರಣವನ್ನು ನೆನಪಿಸುವಂತಿದೆ.

ಡ್ರಮ್‌ನಲ್ಲಿ ಶವ ಪತ್ತೆ :

ಪೊಲೀಸ್ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯನ್ನು ಹಂಸರಾಜ್ ಅಲಿಯಾಸ್ ಸೂರಜ್ ಎಂದು ಗುರುತಿಸಲಾಗಿದೆ. ಅವರು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ನವದಿಯಾ ನವಾಜ್‌ಪುರ ನಿವಾಸಿಯಾಗಿದ್ದು, ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದರು.

ಹಂಸರಾಜ್ ಅವರು 2015 ರಿಂದ ಖೈರ್ತಾಲ್‌ನ ಆದರ್ಶ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಅವರು ಪತ್ನಿ ಲಕ್ಷ್ಮಿ ಅಲಿಯಾಸ್ ಸುನೀತಾ ಮತ್ತು ಮೂವರು ಮಕ್ಕಳೊಂದಿಗೆ ಅಲ್ಲೇ ವಾಸಿಸುತ್ತಿದ್ದರು.

ಈ ಕ್ರೈಂ ಸುದ್ದಿ ಓದಿ : ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder.

ಡ್ರಮ್‌ನಲ್ಲಿ ಶವ ಪತ್ತೆ: ಏನಿದು ಪ್ರಕರಣ?

ಮನೆಯ ಮಾಲೀಕ ಮಿಥಿಲೇಶ್ ಅವರು ಜನ್ಮಾಷ್ಟಮಿ ದಿನ ಮಾರುಕಟ್ಟೆಗೆ ತೆರಳಿದ್ದರು. ಮನೆಗೆ ಮರಳಿದಾಗ, ಬಾಡಿಗೆದಾರರ ಕುಟುಂಬ ಮನೆಲ್ಲಿರಲಿಲ್ಲ.

ಕೆಲವು ದಿನಗಳ ನಂತರ ಮನೆಗೆ ತೀವ್ರ ದುರ್ವಾಸನೆ ಹರಡತೊಡಗಿತು. ಇದರಿಂದ ಅನುಮಾನಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ, ಮೇಲ್ಛಾವಣಿಯ ಕೋಣೆಯಲ್ಲಿ ಇಟ್ಟಿದ್ದ ನೀಲಿ ಡ್ರಮ್ ಒಳಗೆ ಶವ ಪತ್ತೆಯಾಯಿತು.

ಕೊಲೆ ಮಾಡಿದ ವಿಧಾನ :

ಪ್ರಾಥಮಿಕ ತನಿಖೆಯ ಪ್ರಕಾರ, ಪೊಲೀಸರು ಮನೆಯ ಮೇಲ್ಛಾವಣಿಗೆ ತೆರಳಿ ಪರಿಶೀಲನೆ ನಡೆಸಿದಾಗ, ಅಲ್ಲಿದ್ದ ನೀಲಿ ಡ್ರಮ್ ಮೇಲ್ಭಾಗದಲ್ಲಿ ಕಲ್ಲು ಇಟ್ಟಿರುವುದು ಕಂಡುಬಂದಿತು. ಕಲ್ಲು ತೆಗೆದ ಬಳಿಕ ಡ್ರಮ್ ಒಳಗೆ ಶವವಿರುವುದು ಪತ್ತೆಯಾಯಿತು. ಶವವನ್ನು ಬೇಗನೆ ಕೊಳೆಯಿಸಲು ಡ್ರಮ್ ಒಳಗೆ ಉಪ್ಪು ಹಾಕಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಮೃತ ಹಂಸರಾಜ್ ಅವರನ್ನು ಹರಿತವಾದ ಆಯುಧದಿಂದ ಗಂಟಲು ಕತ್ತರಿಸಿ ಹತ್ಯೆ ಮಾಡಲಾಗಿದೆ. ಬಳಿಕ ಶವವನ್ನು ನೀಲಿ ಡ್ರಮ್‌ನಲ್ಲಿ ಶವ ಇಟ್ಟು, ದುರ್ವಾಸನೆ ಹೊರಬರದಂತೆ ಉಪ್ಪು ಹಾಕಿ ಮುಚ್ಚಲಾಗಿದೆ.

ಈ ಘಟನೆಗೆ ಸಂಬಂಧಿಸಿ ಮೃತನ ಪತ್ನಿ ಹಾಗೂ ಮನೆ ಮಾಲೀಕರ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಘಟನೆ ಬಳಿಕ ರಾಜಸ್ಥಾನದ ರಾಮಗಢ ತಾಲೂಕಿನ ಅಲಾವಡಾ ಗ್ರಾಮದ ಇಟ್ಟಿಗೆ ಭಟ್ಟೆಗೆ ಕೆಲಸಕ್ಕೆ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ವೇಳೆ, ಮೃತ ಹಂಸರಾಜ್ ಅವರ ಮೂರು ಮಕ್ಕಳನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆಹಚ್ಚಿದ್ದಾರೆ. ಸದ್ಯ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಕೊಲೆಯ ನಿಖರ ಕಾರಣ ಹಾಗೂ ಇತರರು ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪತ್ನಿ ಮತ್ತು ಮನೆ ಮಾಲೀಕರ ಮಗನ ಬಂಧನ :

ಪೊಲೀಸ್ ತನಿಖೆಯಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ಮೃತನ ಪತ್ನಿ ಲಕ್ಷ್ಮಿಗೆ ಮನೆ ಮಾಲೀಕರ ಮಗ ಜಿತೇಂದ್ರನ ಜೊತೆ ಅನೈತಿಕ ಸಂಬಂಧವಿತ್ತು ಎಂಬುದು ಬೆಳಕಿಗೆ ಬಂದಿದೆ.

ಘಟನೆ ಬಳಿಕ ಇಬ್ಬರೂ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಸದ್ಯ ಅವರು ಪೊಲೀಸ್ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನು ಓದಿ : ಧಾರವಾಡದಲ್ಲಿ ಯುವತಿಯ ಭೀಕರ ಹತ್ಯೆ ಮಾಡಿ ಶವವನ್ನು ಬಿಸಾಡಿದ ದುಷ್ಕರ್ಮಿಗಳು.

ಡ್ರಮ್‌ನಲ್ಲಿ ಶವ ಪತ್ತೆ ; ತನಿಖೆ ಮುಂದುವರಿಕೆ :

ಪೊಲೀಸರು ಈ ಪ್ರಕರಣವನ್ನು ಯೋಜಿತ ಕೊಲೆ ಎಂದು ಪರಿಗಣಿಸಿದ್ದು, ಕೊಲೆಯ ನಿಖರ ಕಾರಣ ಮತ್ತು ಘಟನೆಯಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ? ಕೊಲೆಗೆ ಬಳಸಿದ ಆಯುಧದ ಮೂಲ ಸೇರಿದಂತೆ ಇತರೇ ಮಾಹಿತಿ ಕುರಿತು ತನಿಖೆ ಮುಂದುವರಿದಿದೆ.


Courtesy :ಈ ಸುದ್ದಿಯಲ್ಲಿರುವ ಮಾಹಿತಿ ಪೊಲೀಸ್ ಮೂಲಗಳು ಹಾಗೂ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಆರೋಪಿಗಳೇ ಆಗಿರುತ್ತಾರೆ. ಯಾವುದೇ ವ್ಯಕ್ತಿಯ ಗೌರವಕ್ಕೆ ಧಕ್ಕೆಯಾಗುವ ಉದ್ದೇಶ ಇಲ್ಲ.

ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ರಸ್ತೆ ಅಪಘಾತ ; ಪಲ್ಟಿಯಾದ ಕಾರು.!

0

ಜನಸ್ಫಂದನ ನ್ಯೂಸ್‌, ಬೆಂಗಳೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ರಾಮನಗರ ಜಿಲ್ಲೆಯ ಸಂಗಬಸವನದೊಡ್ಡಿ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನಲ್ಲಿ ನಡೆಯಲಿದ್ದ ಕುಟುಂಬದ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬೆಂಗಳೂರು ನಿವಾಸಿ 84 ವರ್ಷದ ಅಬ್ದುಲ್ ಫಜಲ್ ಅವರು ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಎಕ್ಸ್‌ಪ್ರೆಸ್‌ವೇಯ ಎಕ್ಸಿಟ್ ಪಾಯಿಂಟ್ ಬಳಿ ಕಾರು ಓವರ್‌ಟೇಕ್ ಮಾಡಲು ಯತ್ನಿಸಿದ ವೇಳೆ, ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ.

ವಿಡಿಯೋ :

Courtesy : Kannada Prabha

ಡಿಕ್ಕಿಯ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮೂರ್ನಾಲ್ಕು ಬಾರಿ ಪಲ್ಟಿಯಾಗಿ ಡಿವೈಡರ್ ಮೇಲೆ ಬಿದ್ದಿದೆ. ಅಪಘಾತದ ತೀವ್ರತೆ ಕಂಡು ಸ್ಥಳದಲ್ಲಿದ್ದವರು ಆತಂಕಗೊಂಡರೂ, ಅಚ್ಚರಿಯ ಸಂಗತಿ ಎಂದರೆ ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೀಟ್ ಬೆಲ್ಟ್ ಉಳಿಸಿತು ಪ್ರಾಣ :

ಅಪಘಾತದ ವೇಳೆ ಇಬ್ಬರೂ ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಕಾರಿನೊಳಗೇ ಸುರಕ್ಷಿತವಾಗಿದ್ದು, ಗಂಭೀರ ಗಾಯಗಳಿಂದ ತಪ್ಪಿಸಿಕೊಂಡಿದ್ದಾರೆ. ಅವರಿಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಸ್ತುತ ಇಬ್ಬರೂ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

ತಡವಾಗಿ ಬೆಳಕಿಗೆ ಬಂದ ಘಟನೆ :

ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಪಘಾತದ ತೀವ್ರತೆ ನೋಡಿದವರು ದಂಪತಿಯ ಜೀವ ಉಳಿದಿರುವುದು ನಿಜಕ್ಕೂ ಅದೃಷ್ಟ ಎಂದು ಹೇಳುತ್ತಿದ್ದಾರೆ.

ಇದನ್ನು ಓದಿ : ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ಸ್ಥಳದಲ್ಲೇ ಮೃತ್ಯು.

ಸೀಟ್ ಬೆಲ್ಟ್ ಮಹತ್ವಕ್ಕೆ ಜೀವಂತ ಉದಾಹರಣೆ :

ಈ ಘಟನೆ ಮತ್ತೊಮ್ಮೆ ವಾಹನ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸುವುದರ ಅಗತ್ಯವನ್ನು ಸಾಬೀತುಪಡಿಸಿದೆ. ಸ್ವಲ್ಪ ನಿರ್ಲಕ್ಷ್ಯವೂ ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂಬ ಸಂದೇಶವನ್ನು ಈ ಅಪಘಾತ ಸಾರ್ವಜನಿಕರಿಗೆ ನೀಡಿದೆ.


Disclaimer : ಈ ಸುದ್ದಿಯಲ್ಲಿ ನೀಡಿರುವ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳ ಆಧಾರಿತವಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಹಾನಿ ಉಂಟುಮಾಡುವ ಉದ್ದೇಶ ಇಲ್ಲ. ನಿಖರ ಮಾಹಿತಿಗಾಗಿ ಸಂಬಂಧಿತ ಅಧಿಕಾರಿಗಳ ಅಧಿಕೃತ ಪ್ರಕಟಣೆಗಳನ್ನು ಅನುಸರಿಸುವಂತೆ ವಿನಂತಿ.

ಶವಾಗಾರದಲ್ಲಿ ಚಲಿಸಿದ ಶವ : ದೃಶ್ಯ ವೈರಲ್‌; ನಿಜವೇ ಅಥವಾ ಭ್ರಮೆಯೇ?

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸದ್ಯ ಶವಾಗಾರದಲ್ಲಿ ಚಲಿಸಿದ ಶವ ದ ಒಂದು ವಿಡಿಯೋಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಬಗ್ಗೆ ಅಂದರೆ ಸಾವಿನ ನಂತರ ಶವಗಳಲ್ಲಿ ಕಾಣುವ ಚಲನೆಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳು? ಈ ಬಗ್ಗೆ ತಿಳಿಯೋಣ ಬನ್ನಿ.!

ಸ್ಮಶಾನದಲ್ಲಿ ಒಂಟಿಯಾಗಿರುತ್ತೇನೆ ಎಂದು ಪಣ ತೊಟ್ಟು ಪ್ರಾಣ ಕಳೆದುಕೊಂಡವರ ಕಥೆಗಳು, ಅಥವಾ ದೆವ್ವಗಳು ಮಾತನಾಡುತ್ತವೆ ಎನ್ನುವ ಅನುಭವಗಳ ಕುರಿತು ನಾವು ಹಲವಾರು ಬಾರಿ ಕೇಳಿದ್ದೇವೆ. ಆದರೆ ಸಾವಿನ ನಂತರ ಶವಗಳು ಸ್ವತಃ ಚಲಿಸುತ್ತವೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?

ಇದು ಭಯ ಹುಟ್ಟಿಸುವ ವಿಷಯವಾಗಿದ್ರೂ, ಇದರ ಹಿಂದೆ ಅತೀ ಸ್ಪಷ್ಟವಾದ ವೈಜ್ಞಾನಿಕ ಕಾರಣಗಳು ಇವೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಪೋಸ್ಟ್‌ಮಾರ್ಟಮ್ ಚಲನೆಗಳು ಅಥವಾ ಲಾಜರಸ್ ಸೈನ್ ಎಂದು ಕರೆಯಲಾಗುತ್ತದೆ.

ಶವಾಗಾರದಲ್ಲಿ ಚಲಿಸಿದ ಶವ ; ವಿಡಿಯೋ :

ಶವಾಗಾರದಲ್ಲಿ ಚಲಿಸಿದ ಶವ ; ಕಾರಣವೇನು?

1️⃣ ಸ್ನಾಯು ಸಂಕೋಚನ (Muscle Contraction) :

ವ್ಯಕ್ತಿ ಸಾವನ್ನಪ್ಪಿದ ಕೂಡಲೇ ದೇಹದ ಎಲ್ಲಾ ಜೀವಕೋಶಗಳು ತಕ್ಷಣ ಸಾಯುವುದಿಲ್ಲ. ಸ್ನಾಯುಗಳಲ್ಲಿ ಉಳಿದಿರುವ ಕ್ಯಾಲ್ಸಿಯಂ ಮತ್ತು ವಿದ್ಯುತ್ ಸಂವೇದನೆಗಳು ಕೆಲ ಸಮಯದವರೆಗೆ ಕಾರ್ಯನಿರ್ವಹಿಸುತ್ತವೆ.

➡️ ಇದರ ಪರಿಣಾಮವಾಗಿ:

  • ಕೈಗಳು ಅಥವಾ ಕಾಲುಗಳು ಸ್ವಲ್ಪ ಚಲಿಸುವಂತೆ ಕಾಣಬಹುದು,
  • ಬೆರಳುಗಳು ಬಾಗಿದಂತೆ ಆಗಬಹುದು. ಇದು ಜೀವ ಮರಳಿದ ಸೂಚನೆ ಅಲ್ಲ — ಶುದ್ಧ ರಾಸಾಯನಿಕ ಕ್ರಿಯೆ ಮಾತ್ರ.

2️⃣ ರಿಗರ್ ಮಾರ್ಟಿಸ್ (Rigor Mortis) :

ಸಾವಿನ ಕೆಲ ಗಂಟೆಗಳ ನಂತರ ದೇಹ ಗಟ್ಟಿಯಾಗುವ ಪ್ರಕ್ರಿಯೆಯನ್ನು ರಿಗರ್ ಮಾರ್ಟಿಸ್ ಎನ್ನುತ್ತಾರೆ.

ಈ ಸಂದರ್ಭದಲ್ಲಿ:

  • ಸ್ನಾಯುಗಳು ಕಠಿಣವಾಗುತ್ತವೆ.
  • ದೇಹವನ್ನು ಕದಲಿಸಿದಾಗ ಅಥವಾ ತಿರುಗಿಸಿದಾಗ ಚಲನೆಯಂತೆ ಕಾಣಬಹುದು.
  • ಕೆಲವೊಮ್ಮೆ ಕೈಗಳು ಅಥವಾ ತೋಳುಗಳು ಸ್ವಲ್ಪ ಮೇಲಕ್ಕೆತ್ತಿದಂತೆ ಭಾಸವಾಗುತ್ತದೆ. ಇದು ಸಹಜವಾದ ಶಾರೀರಿಕ ಕ್ರಿಯೆಯೇ ಹೊರತು ಅತೀಮಾನವೀಯ ಅಲ್ಲ.

ಈ ವೈರಲ್‌ ವಿಡಿಯೋ ಸುದ್ದಿ ಓದಿ : ಮಹಿಳೆಯ ಮೇಲೆ ಸಂಚಾರಿ ಪೊಲೀಸ್‌ ಹಲ್ಲೆ ; ವಿಡಿಯೋ ವೈರಲ್‌ ಬಳಿಕ ಅಮಾನತು.

3️⃣ ದೇಹದೊಳಗಿನ ಅನಿಲಗಳ ಒತ್ತಡ :

ಸಾವು ಸಂಭವಿಸಿದ ಬಳಿಕ ದೇಹದೊಳಗಿನ ಬ್ಯಾಕ್ಟೀರಿಯಾಗಳು ಆಹಾರವನ್ನು ಜೀರ್ಣಿಸಿಕೊಳ್ಳುತ್ತವೆ. ಇದರಿಂದ ಅನಿಲಗಳು ಉತ್ಪತ್ತಿಯಾಗುತ್ತವೆ.

ಅದರಿಂದ:

  • ಹೊಟ್ಟೆ ಉಬ್ಬುವುದು.
  • ದೇಹ ಬದಿಗೆ ಸರಿಯುವುದು.
  • ಬಾಯಿಯಿಂದ ಶಬ್ದ ಹೊರಬರುವುದು (Death Rattle). ಈ ಶಬ್ದಗಳು ಕೆಲವರಿಗೆ ಭಯಾನಕವಾಗಿ ಕಾಣಬಹುದು, ಆದರೆ ಇದು ಸಂಪೂರ್ಣವಾಗಿ ಜೈವಿಕ ಪ್ರಕ್ರಿಯೆ.

4️⃣ ಲಾಜರಸ್ ಚಿಹ್ನೆ (Lazarus Sign) :

ಕೆಲವೊಮ್ಮೆ ಮೆದುಳು ಸತ್ತ ನಂತರವೂ ಬೆನ್ನುಹುರಿಯ ನರಗಳು ಸ್ವಲ್ಪ ಕಾಲ ಸಕ್ರಿಯವಾಗಿರುತ್ತವೆ.

ಅದರ ಪರಿಣಾಮವಾಗಿ:

  • ತೋಳುಗಳು ಮೇಲಕ್ಕೆತ್ತಿದಂತೆ ಕಾಣಬಹುದು.
  • ಕೈಗಳು ಮಡಚಿಕೊಳ್ಳಬಹುದು.
  • ಕೆಲ ಕ್ಷಣಗಳ ಚಲನೆ ಉಂಟಾಗಬಹುದು. ಇದನ್ನೇ ವೈದ್ಯಕೀಯವಾಗಿ ಲಾಜರಸ್ ಸೈನ್ ಎಂದು ಕರೆಯಲಾಗುತ್ತದೆ.
ಶವಾಗಾರದಲ್ಲಿ ಚಲಿಸಿದ ಶವ
ಶವಾಗಾರದಲ್ಲಿ ಚಲಿಸಿದ ಶವ

⚠️ ವೈದ್ಯರು ಏನು ಹೇಳುತ್ತಾರೆ?

ವೈದ್ಯಕೀಯ ತಜ್ಞರ ಪ್ರಕಾರ:

✔️ ಇವು ಸಂಪೂರ್ಣವಾಗಿ ನೈಸರ್ಗಿಕ ಪ್ರಕ್ರಿಯೆಗಳು.

✔️ ಇದಕ್ಕೆ ಆತ್ಮ, ದೆವ್ವ ಅಥವಾ ಪುನರ್ಜನ್ಮಕ್ಕೆ ಯಾವುದೇ ಸಂಬಂಧ ಇಲ್ಲ.

✔️ ಸಾವು ದೃಢಪಟ್ಟ ನಂತರ ಈ ಚಲನೆಗಳು ಜೀವಂತವಾಗಿರುವ ಸೂಚನೆ ಅಲ್ಲ. ಇವು ಕೇವಲ ದೇಹದೊಳಗಿನ ರಾಸಾಯನಿಕ ಮತ್ತು ಶಾರೀರಿಕ ಬದಲಾವಣೆಗಳ ಪರಿಣಾಮ ಮಾತ್ರ.

ಇದನ್ನು ಓದಿ : ಶಾಲೆಗೆ ಹೋಗಲು ಹಠ ಹಿಡಿದ ಮಗ: ಪಟ್ಟು ಹಿಡಿದ ತಾಯಿ ; ವಿಡಿಯೋ ವೈರಲ್.

ಅಂತಿಮವಾಗಿ…

ಸಾವಿನ ನಂತರ ಶವಗಳು ಚಲಿಸುವುದು ಭಯಾನಕವಾಗಿ ಕಂಡರೂ, ಅದು ಅತೀಮಾನವೀಯವಲ್ಲ. ವಿಜ್ಞಾನವು ಈಗಾಗಲೇ ಇದರ ಹಿಂದೆ ಇರುವ ಕಾರಣಗಳನ್ನು ಸ್ಪಷ್ಟವಾಗಿ ವಿವರಿಸಿದೆ.

👉 ಭಯ ಪಡುವ ಬದಲು, ಇವುಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಅರ್ಥಮಾಡಿಕೊಳ್ಳುವುದು ಮುಖ್ಯ.

Courtesy : Social Media / X


Disclaimer : ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಎಲ್ಲಾ ಮಾಹಿತಿಗಳು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ಇವು ವೈದ್ಯಕೀಯ, ಕಾನೂನು ಅಥವಾ ವೃತ್ತಿಪರ ಸಲಹೆಗಳ ಪರ್ಯಾಯವಲ್ಲ. ಇಲ್ಲಿ ಪ್ರಕಟವಾಗುವ ಆರೋಗ್ಯ ಹಾಗೂ ವೈಜ್ಞಾನಿಕ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳ ಆಧಾರಿತವಾಗಿದ್ದು, ಯಾವುದೇ ಅಂಧನಂಬಿಕೆ ಅಥವಾ ತಪ್ಪು ಮಾಹಿತಿಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಂಬಂಧಿತ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.

7 ದಿನ ಎಳ್ಳು ತಿನ್ನಿ ; ದೇಹದಲ್ಲಿ ಆಗುವ ಅಚ್ಚರಿಯ ಬದಲಾವಣೆಗಳನ್ನು ನೋಡಿ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ನಾವು ಕೇವಲ ಏಳು ದಿನಗಳ ಕಾಲ ಎಳ್ಳು (7 ದಿನ ಎಳ್ಳು ತಿನ್ನಿ) ಸೇವಿಸಿದರೆ ದೇಹದಲ್ಲಿ ಏನೇಲ್ಲಾ ಬದಲಾವಣೆಯಾಗುತ್ತದೆ ಗೊತ್ತೇ.? ಬನ್ನಿ ಈ ದಿನ 7 ದಿನ ಎಳ್ಳು ತಿಂದರೆ ದೇಹದಲ್ಲಿ ಅಚ್ಚರಿಯ ಬದಲಾವಣೆಗಳನ್ನು ಕಾಣಬಹುದು.

ನಮ್ಮ ಅಡುಗೆಮನೆಯಲ್ಲಿರುವ ಎಳ್ಳು (Sesame) ಸಾಮಾನ್ಯವಾಗಿ ಸಿಹಿತಿಂಡಿಗಳಲ್ಲಿ ಅಥವಾ ಹಬ್ಬದ ದಿನಗಳಲ್ಲಿ ಮಾತ್ರ ಬಳಕೆಯಾಗುತ್ತದೆ. ಆದರೆ ವಾಸ್ತವವಾಗಿ, ಈ ಸಣ್ಣ ಬೀಜಗಳಲ್ಲಿ ಅಡಗಿರುವ ಪೌಷ್ಟಿಕ ಮೌಲ್ಯ ಅಪಾರವಾಗಿದೆ. ಪೌಷ್ಟಿಕ ತಜ್ಞರ ಪ್ರಕಾರ, ಎಳ್ಳನ್ನು ಸರಿಯಾದ ರೀತಿಯಲ್ಲಿ ನಿರಂತರವಾಗಿ 7 ದಿನ ಸೇವಿಸಿದರೆ ದೇಹದಲ್ಲಿ ಹಲವು ಉತ್ತಮ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.

ಎಳ್ಳು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ತಾಮ್ರ, ಮ್ಯಾಂಗನೀಸ್, ವಿಟಮಿನ್ B1, ವಿಟಮಿನ್ E, ಫೈಬರ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ ಹೊಂದಿರುವ ಎಳ್ಳು, ಬಾದಾಮಿಗಿಂತ ಉತ್ತಮ ಕೊಬ್ಬಿನ ಅಂಶವನ್ನು ಹೊಂದಿದೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ.

7 ದಿನ ಎಳ್ಳು ತಿನ್ನಿ ; ದೇಹಕ್ಕೆ ಆಗುವ ಲಾಭ ನೋಡಿ :

🔹 ಮೊದಲ 1–2 ದಿನಗಳು – ಜೀರ್ಣಕ್ರಿಯೆ ಸುಧಾರಣೆ :

  • ಎಳ್ಳಿನಲ್ಲಿರುವ ಆಹಾರ ನಾರುಗಳು ಅಂತ್ರಗಳನ್ನು ಸ್ವಚ್ಛಗೊಳಿಸುತ್ತವೆ.
  • ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ, ಆಮ್ಲೀಯತೆ ಕಡಿಮೆಯಾಗುತ್ತದೆ.
  • ಯಕೃತ್ತಿನ ಕಾರ್ಯಕ್ಷಮತೆ ಉತ್ತಮವಾಗುತ್ತದೆ ಮತ್ತು ಚಯಾಪಚಯ ಕ್ರಿಯೆ ವೇಗವಾಗುತ್ತದೆ.

🔹 3–4ನೇ ದಿನ – ಮೂಳೆಗಳು ಬಲವಾಗುತ್ತವೆ :

  • ಎಳ್ಳಿನಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತು ಮೂಳೆಗಳ ದಟ್ಟತೆಯನ್ನು ಹೆಚ್ಚಿಸುತ್ತವೆ.
  • ಮೂಳೆ ನೋವು, ಸಂಧಿವಾತದ ಆರಂಭಿಕ ಲಕ್ಷಣಗಳು ಕಡಿಮೆಯಾಗುತ್ತವೆ.
  • ಮೂಳೆಗಳಿಗೆ ಸಹಜ ಬಲ ಮತ್ತು ಲವಚಿಕತೆ ಸಿಗುತ್ತದೆ.

🔹 5ನೇ ದಿನ – ಹೃದಯ ಆರೋಗ್ಯಕ್ಕೆ ಲಾಭ :

  • ಎಳ್ಳಿನಲ್ಲಿರುವ ಲಿಗ್ನಾನ್ ಹಾಗೂ ಸೆಸಮಾಲ್ ಎಂಬ ಉತ್ಕರ್ಷಣ ನಿರೋಧಕಗಳು
    ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತವೆ.
  • ರಕ್ತನಾಳಗಳು ಸ್ವಚ್ಛವಾಗುತ್ತವೆ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ.

🔹 6–7ನೇ ದಿನ – ಚರ್ಮ ಮತ್ತು ಕೂದಲು ಆರೋಗ್ಯ :

  • ವಿಟಮಿನ್ E ಮತ್ತು ಸತು ಚರ್ಮವನ್ನು ಒಳಗಿನಿಂದ ಪೋಷಿಸುತ್ತವೆ. ಮೂಡುವಿಕೆ, ಮಡಚುಗಳು ಕಡಿಮೆಯಾಗುತ್ತವೆ.
  • ಒಮೆಗಾ ಕೊಬ್ಬಿನಾಮ್ಲಗಳು ಕೂದಲು ಉದುರುವಿಕೆಯನ್ನು ತಡೆದು, ಕೂದಲಿಗೆ ಹೊಳಪು ಮತ್ತು ಬಲ ನೀಡುತ್ತವೆ.

ಈ ಆರೋಗ್ಯ ಸುದ್ದಿಯನ್ನು ಓದಿ : ಒಂದೇ ಒಂದು Kiss ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭಕರ ಗೊತ್ತೇ?

ಇತರ ಪ್ರಮುಖ ಆರೋಗ್ಯ ಪ್ರಯೋಜನಗಳು :

ಮಾನಸಿಕ ಆರೋಗ್ಯ :

  • ಎಳ್ಳಿನಲ್ಲಿರುವ ಟೈರೋಸಿನ್ ಅಮೈನೋ ಆಮ್ಲ ಸೆರೋಟೋನಿನ್ ಮಟ್ಟ ಹೆಚ್ಚಿಸಿ ಒತ್ತಡ, ಆತಂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಾರ್ಮೋನು ಸಮತೋಲನ :

  • ಫೈಟೋಈಸ್ಟ್ರೋಜನ್ ಅಂಶಗಳು ಮಹಿಳೆಯರಲ್ಲಿ ಪಿಸಿಒಎಸ್, ಅನಿಯಮಿತ ಮಾಸಿಕ ಸಮಸ್ಯೆಗಳಲ್ಲಿ ಸಹಾಯಕ.

ಲೈಂಗಿಕ ಶಕ್ತಿ :

  • ಸತು ಮತ್ತು ಉತ್ಕರ್ಷಣ ನಿರೋಧಕಗಳು ಪುರುಷರಲ್ಲಿ ಶಕ್ತಿ, ತಾಳ್ಮೆ ಮತ್ತು ಶಕ್ತಿವರ್ಧನೆಗೆ ನೆರವಾಗುತ್ತವೆ.

ಎಳ್ಳು ಸೇವಿಸುವ ಸರಿಯಾದ ವಿಧಾನ :

* ಹುರಿದು ಸೇವನೆ:
ಕಡಿಮೆ ಬೆಂಕಿಯಲ್ಲಿ 2 ನಿಮಿಷ ಒಣಹುರಿ ಮಾಡಿ ಸೇವಿಸಿದರೆ ಪೋಷಕಾಂಶಗಳು ಚೆನ್ನಾಗಿ ಹೀರಿಕೊಳ್ಳುತ್ತವೆ.

* ಚೆನ್ನಾಗಿ ಅಗಿಯಿರಿ:
ಅಗಿಯದೇ ನುಂಗಿದರೆ ಜೀರ್ಣ ಸಮಸ್ಯೆ ಉಂಟಾಗಬಹುದು.

* ಪ್ರಮಾಣ:

  • ದಿನಕ್ಕೆ 1–2 ಟೀಸ್ಪೂನ್ ಸಾಕು.
  • ಚಳಿಗಾಲದಲ್ಲಿ – 2 ಚಮಚ.
  • ಬೇಸಿಗೆಯಲ್ಲಿ – 1 ಚಮಚ (ನೆನೆಸಿ ಸೇವಿಸಿದರೆ ಉತ್ತಮ).

✔️ ಇತರ ಉಪಾಯಗಳು:

  • ಬೆಲ್ಲದೊಂದಿಗೆ.
  • ಮೊಸರು / ಓಟ್ಸ್‌ನಲ್ಲಿ.
  • ಸಲಾಡ್ ಅಥವಾ ದಾಲ್‌ನಲ್ಲಿ ಸೇರಿಸಿ.

ಮುನ್ನೆಚ್ಚರಿಕೆಗಳು :

  • ಎಳ್ಳು ಅಲರ್ಜಿ ಇರುವವರು ಜಾಗರೂಕರಾಗಿರಬೇಕು.
  • ಹೆಚ್ಚು ಆಮ್ಲೀಯತೆ ಇದ್ದವರು ನೆನೆಸಿ ಸೇವಿಸಬೇಕು.
  • ಗರ್ಭಿಣಿಯರು ವೈದ್ಯರ ಸಲಹೆ ಪಡೆದು ಮಾತ್ರ ಸೇವಿಸಬೇಕು.
  • ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ.

ಇದನ್ನು ಓದಿ : ಆರೋಗ್ಯ, ಚರ್ಮ ಹಾಗೂ ಕೂದಲಿಗೆ ಟೊಮೆಟೊದ ಅಚ್ಚರಿ ಪ್ರಯೋಜನಗಳು.

ಅಂತಿಮವಾಗಿ…

ಸಣ್ಣದಾಗಿ ಕಾಣುವ ಎಳ್ಳು ಬೀಜಗಳು ದೇಹಕ್ಕೆ ದೊಡ್ಡ ಆರೋಗ್ಯ ಲಾಭಗಳನ್ನು ನೀಡುತ್ತವೆ. ಸರಿಯಾದ ಪ್ರಮಾಣದಲ್ಲಿ, ಸರಿಯಾದ ರೀತಿಯಲ್ಲಿ ಸೇವಿಸಿದರೆ ಜೀರ್ಣಕ್ರಿಯೆಯಿಂದ ಹಿಡಿದು ಚರ್ಮದ ಆರೈಕೆವರೆಗೆ ಅನೇಕ ಲಾಭಗಳನ್ನು ಪಡೆಯಬಹುದು.

👉 ಆರೋಗ್ಯಕರ ಜೀವನಕ್ಕಾಗಿ ಎಳ್ಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ.


Disclaimer: ಈ ಲೇಖನವು ಸಾಮಾನ್ಯ ಮಾಹಿತಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಗೇಟ್ ಮುಚ್ಚುವ ಮುನ್ನ ದಾಟಲು ಯತ್ನಿಸಿದ ಟ್ರಕ್‌ಗೆ ರೈಲು ಡಿಕ್ಕಿ; ವೀಡಿಯೋ ವೈರಲ್.

0

ಜನಸ್ಪಂದನ ನ್ಯೂಸ್, ಜಾರ್ಖಂಡ್ : ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಗುರುವಾರ ಭಾರೀ ರೈಲು ಅಪಘಾತ ಸಂಭವಿಸಿದ್ದು, ರೈಲ್ವೆ ಕ್ರಾಸಿಂಗ್ ದಾಟಲು ಯತ್ನಿಸಿದ ಟ್ರಕ್‌ಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಟ್ರಕ್ ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಘಟನೆ ರೋಹಿಣಿ–ನವಾಡಿಹ್ ರೈಲ್ವೆ ಕ್ರಾಸಿಂಗ್ ಬಳಿ ನಡೆದಿದ್ದು, ಜಸಿದಿಹ್‌ನಿಂದ ಅಸನ್ಸೋಲ್‌ಗೆ ತೆರಳುತ್ತಿದ್ದ ಗೊಂಡಾ–ಅಸನ್ಸೋಲ್ ಪ್ಯಾಸೆಂಜರ್ ರೈಲು ಈ ವೇಳೆ ಕ್ರಾಸಿಂಗ್ ಮೂಲಕ ಹಾದು ಹೋಗುತ್ತಿತ್ತು.

ಟ್ರಕ್‌ಗೆ ರೈಲು ಡಿಕ್ಕಿ ವಿಡಿಯೋ :

ಹೇಗೆ ಅಪಘಾತ ಸಂಭವಿಸಿತು?

ಮಾಹಿತಿಯಂತೆ, ರೈಲು ಬರುತ್ತಿರುವ ಸೂಚನೆ ಸಿಕ್ಕ ಬಳಿಕ ರೈಲ್ವೆ ಗೇಟ್ ಮುಚ್ಚಲಾಗುತ್ತಿತ್ತು. ಆದರೆ ಕೆಲ ವಾಹನ ಸವಾರರು ಆತುರದಿಂದ ಗೇಟ್ ದಾಟಲು ಯತ್ನಿಸಿದ್ದಾರೆ. ಇದೇ ವೇಳೆ ಟ್ರಕ್ ಕೂಡ ಕ್ರಾಸಿಂಗ್ ದಾಟಲು ಪ್ರಯತ್ನಿಸಿದೆ.

ರೈಲು ಸಮೀಪಿಸುತ್ತಿರುವುದನ್ನು ಗಮನಿಸಿದ ಟ್ರಕ್ ಚಾಲಕ ಹಳಿ ದಾಟಲು ಮುಂದಾದರೂ, ಅಷ್ಟರಲ್ಲಿ ರೈಲು ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ಟ್ರಕ್ ಮುಂದಕ್ಕೆ ತಳ್ಳಲ್ಪಟ್ಟು ಅಲ್ಲಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಚಾಲಕನ ನಿರ್ಲಕ್ಷ್ಯ – ತಪ್ಪಿದ ದೊಡ್ಡ ಅನಾಹುತ :

ಅಪಘಾತದ ವೇಳೆ ಟ್ರಕ್ ಚಾಲಕ ಸಮಯಕ್ಕೆ ಮುನ್ನ ವಾಹನದಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳದಲ್ಲಿದ್ದ ಬೈಕ್ ಸವಾರರು ಕೂಡ ತಮ್ಮ ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ.

ಘಟನೆಯ ಸಂಪೂರ್ಣ ದೃಶ್ಯವನ್ನು ಅಲ್ಲಿದ್ದ ಜನರು ಮೊಬೈಲ್‌ನಲ್ಲಿ ದಾಖಲಿಸಿದ್ದು, ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಾಥಮಿಕ ತನಿಖೆಯಲ್ಲಿ ಟ್ರಕ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಟ್ರಕ್‌ಗೆ ರೈಲು ಡಿಕ್ಕಿ
ಟ್ರಕ್‌ಗೆ ರೈಲು ಡಿಕ್ಕಿ

ರೈಲು ಸಂಚಾರ ಸ್ಥಗಿತ :

ಅಪಘಾತದ ಪರಿಣಾಮವಾಗಿ ದಿಯೋಘರ್–ಗಿರಿಧಿ ಮುಖ್ಯ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ. ಜಸಿದಿಹ್–ಅಸನ್ಸೋಲ್ ಮಾರ್ಗದಲ್ಲಿ ಸುಮಾರು 2–3 ಗಂಟೆಗಳ ಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು. ರೈಲು ಮತ್ತು ಟ್ರಕ್ ಹಳಿಗಳ ಮೇಲೆ ನಿಂತಿದ್ದ ಹಿನ್ನಲೆಯಲ್ಲಿ ಸಂಚಾರ ಪುನರ್‌ಸ್ಥಾಪನೆಗೆ ವಿಳಂಬವಾತೆಂದು ಹೇಳಲಾಗಿದೆ.

ರೈಲಿನ ಲೋಕೋಪೈಲೆಟ್ ಸಮಯಕ್ಕೆ ಸರಿಯಾಗಿ ವೇಗ ಕಡಿಮೆ ಮಾಡಿದ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ಚರಿಕೆ ಸಂದೇಶ :

ರೈಲ್ವೆ ಕ್ರಾಸಿಂಗ್ ಬಳಿ ವಾಹನ ಚಲಾಯಿಸುವಾಗ,

👉 ಗೇಟ್ ಮುಚ್ಚುವ ಸೂಚನೆ ಪಾಲಿಸಬೇಕು.

👉 ಆತುರದಲ್ಲಿ ಹಳಿ ದಾಟುವ ಪ್ರಯತ್ನ ಮಾಡಬಾರದು.

👉 ಸ್ವಲ್ಪ ಅಜಾಗ್ರತೆ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


Disclaimer: ಈ ವರದಿ ಪ್ರಾಥಮಿಕ ಪೊಲೀಸ್ ಮಾಹಿತಿ ಹಾಗೂ ಸಾರ್ವಜನಿಕ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ತನಿಖೆ ಮುಂದುವರಿದಿರುವುದರಿಂದ ಮಾಹಿತಿಯಲ್ಲಿ ಬದಲಾವಣೆ ಸಾಧ್ಯವಿದೆ.

ಶಾಲೆಗೆ ಹೋಗಲು ಹಠ ಹಿಡಿದ ಮಗ: ಪಟ್ಟು ಹಿಡಿದ ತಾಯಿ ; ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್, ಡೆಸ್ಕ್‌ : ಮಕ್ಕಳು ಶಾಲೆಗೆ ಹೋಗಲು ಹಠ ಹಿಡಿಯುವುದು ಸಾಮಾನ್ಯ ಸಂಗತಿ. ಆದರೆ ಕೆಲವೊಮ್ಮೆ ಪೋಷಕರು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದೇ ಹಿನ್ನೆಲೆಯಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಲವರಿಗೆ ತಮ್ಮ ಬಾಲ್ಯವನ್ನು ನೆನಪಿಸುವಂತೆ ಮಾಡಿದೆ.

ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದ ಪುಟ್ಟ ಬಾಲಕನನ್ನು ತಾಯಿ ಪಟ್ಟು ಹಿಡಿದು ಶಾಲೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.

ಈ ದೃಶ್ಯವನ್ನು ‘Mariyam_MBD’ ಎಂಬ ಎಕ್ಸ್ (Twitter) ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ತಾಯಿ ಅನಕ್ಷರಸ್ಥಳಾಗಿದ್ದರೂ ತನ್ನ ಮಗನಿಗೆ ಶಿಕ್ಷಣ ಕೊಡಬೇಕು ಎಂಬ ಬಯಕೆ ಇರುತ್ತದೆ” ಎಂಬ ಶೀರ್ಷಿಕೆ ನೀಡಲಾಗಿದೆ.

ಹಠ ಹಿಡಿದ ಮಗನ ವಿಡಿಯೋ :

ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಪುಟ್ಟ ಬಾಲಕ ಶಾಲೆಗೆ ಹೋಗಲು ನಿರಾಕರಿಸುತ್ತಿರುವುದು ಕಾಣುತ್ತದೆ. ತಾಯಿ ಒಂದು ಕೈಯಲ್ಲಿ ಬ್ಯಾಗ್ ಹಿಡಿದು, ಮತ್ತೊಂದು ಕೈಯಲ್ಲಿ ಮಗನನ್ನು ಹಿಡಿದು ಶಾಲೆ ಕಡೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಗಮನ ಸೆಳೆಯುತ್ತದೆ.

ಮಧ್ಯದಲ್ಲಿ ಬಾಲಕ ಮತ್ತೆ ಹಠ ಹಿಡಿದಾಗ ತಾಯಿ ಕಠಿಣವಾಗಿ ಪ್ರತಿಕ್ರಿಯಿಸುವುದು ಕಂಡುಬರುತ್ತದೆ. ಅದೇ ಸಮಯದಲ್ಲಿ ಅಲ್ಲೇ ಇದ್ದ ಮತ್ತೊಂದು ಪುಟ್ಟ ಮಗು ತಾಯಿಯ ಕೈಯಲ್ಲಿದ್ದ ಬ್ಯಾಗ್ ತೆಗೆದುಕೊಂಡು ಹೆಗಲಿಗೇರಿಸಿಕೊಂಡಿರುವ ದೃಶ್ಯವೂ ಕಾಣಿಸುತ್ತದೆ.

ಈ ದೃಶ್ಯಗಳನ್ನು ನೋಡಿದ ಹಲವರು, “ನಮ್ಮ ಬಾಲ್ಯವೂ ಹೀಗೆಯೇ ಇತ್ತು” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋ ಈಗಾಗಲೇ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

  • 🔹 ಒಬ್ಬ ಬಳಕೆದಾರ: “ಈ ತಾಯಿಗೆ ನನ್ನ ನಮನಗಳು”.
  • 🔹 ಮತ್ತೊಬ್ಬರು: “ನಮ್ಮ ತಾಯಿಯೂ ಹೀಗೆಯೇ ನಮ್ಮನ್ನು ಶಾಲೆಗೆ ಕಳಿಸುತ್ತಿದ್ದರು”.
  • 🔹 ಇನ್ನೊಬ್ಬರು: “ಇದು ಪ್ರೀತಿಯ ಕಠಿಣ ರೂಪ” ಎಂದು ಕಾಮೆಂಟ್ ಮಾಡಿದ್ದಾರೆ.

ಕೆಲವರು ಇದನ್ನು ಮಕ್ಕಳ ಶಿಕ್ಷಣದ ಮಹತ್ವದ ಉದಾಹರಣೆ ಎಂದು ಮೆಚ್ಚಿಕೊಂಡರೆ, ಇನ್ನೂ ಕೆಲವರು ಮಕ್ಕಳೊಂದಿಗೆ ಮೃದುವಾಗಿ ವರ್ತಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ನಡು ರಸ್ತೆಯಲ್ಲಿ ಸ್ಕೂಟಿ ಚಾಲನೆ ವೇಳೆ ಪತಿಯ ಮೇಲೆ ಪತ್ನಿಯ ಹಲ್ಲೆ; ವಿಡಿಯೋ ವೈರಲ್.

ಸಾಮಾಜಿಕ ಸಂದೇಶ :

ಈ ವಿಡಿಯೋ ಮಕ್ಕಳ ಶಿಕ್ಷಣದ ಮಹತ್ವವನ್ನು ನೆನಪಿಸುವುದರ ಜೊತೆಗೆ, ಪೋಷಕರ ಹೊಣೆಗಾರಿಕೆ ಮತ್ತು ಮಕ್ಕಳ ಮನಸ್ಥಿತಿ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಶಿಕ್ಷಣಕ್ಕಾಗಿ ಪೋಷಕರು ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ಕೆಲವೊಮ್ಮೆ ಮಕ್ಕಳ ಭವಿಷ್ಯಕ್ಕೆ ದಾರಿಯಾಗುತ್ತವೆ ಎಂಬ ಸಂದೇಶವೂ ಇದರೊಳಗೆ ಅಡಗಿದೆ.


Disclaimer: ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಸಾರ್ವಜನಿಕ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಮಕ್ಕಳ ಮೇಲಿನ ಯಾವುದೇ ರೀತಿಯ ಹಿಂಸೆ ಅಥವಾ ದೌರ್ಜನ್ಯವನ್ನು ನಾವು ಸಮರ್ಥಿಸುವುದಿಲ್ಲ.

ಕಣ್ಣುಗಳಲ್ಲಿಯೇ ಕಾಣಿಸಿಕೊಳ್ಳುತ್ತದೆ ಕಿಡ್ನಿ ಹಾನಿ ; ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಬಹುತೇಕರು ಮೂತ್ರದ ಬಣ್ಣದಲ್ಲಾಗುವ ಬದಲಾವಣೆಗಳಿಂದ ಮಾತ್ರ ಮೂತ್ರಪಿಂಡ (Kidney) ದ ಸಮಸ್ಯೆಯನ್ನು ಗುರುತಿಸಬಹುದು ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ಸಂಪೂರ್ಣ ಸತ್ಯವಲ್ಲ; ಕಿಡ್ನಿ ಹಾನಿಯ ಲಕ್ಷಣಗಳು ಇತರೆ ರೀತಿಯಲ್ಲಿಯೂ ಕಾಣಿಸಿಕೊಳ್ಳಬಹುದು.

ಕಳಪೆ ಜೀವನಶೈಲಿ ಕಿಡ್ನಿಗೆ ಎಷ್ಟು ಅಪಾಯಕಾರಿ?

ಮೂತ್ರಪಿಂಡಗಳು (ಕಿಡ್ನಿ) ನಮ್ಮ ದೇಹದಿಂದ ತ್ಯಾಜ್ಯಗಳನ್ನು ಹೊರಹಾಕುವುದು, ಎಲೆಕ್ಟ್ರೋಲೈಟ್ ಸಮತೋಲನ ಕಾಯ್ದುಕೊಳ್ಳುವುದು ಮತ್ತು ರಕ್ತದೊತ್ತಡ ನಿಯಂತ್ರಿಸುವಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಆದರೆ ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಅತಿಯಾದ ಉಪ್ಪು ಸೇವನೆ ಮತ್ತು ಅಸಮರ್ಪಕ ಜೀವನಶೈಲಿ ನಿಧಾನವಾಗಿ ಕಿಡ್ನಿಗೆ ಹಾನಿ ಉಂಟುಮಾಡಬಹುದು.

ಬಹುತೇಕ ಜನರು ಮೂತ್ರದ ಬಣ್ಣ ಅಥವಾ ಸಮಸ್ಯೆ ಕಂಡಾಗ ಮಾತ್ರ ಕಿಡ್ನಿ ಸಮಸ್ಯೆಯನ್ನು ಅನುಮಾನಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಮೂತ್ರಪಿಂಡದ ಹಾನಿ (Kidney Damage) ಯ ಆರಂಭಿಕ ಲಕ್ಷಣಗಳು ಕಣ್ಣುಗಳಲ್ಲಿಯೇ ಕಾಣಿಸಿಕೊಳ್ಳಬಹುದು.

ಈ ಆರೋಗ್ಯ ಸುದ್ದಿ ಓದಿ : ಮೊಟ್ಟೆಗಳಲ್ಲಿ ʼಕ್ಯಾನ್ಸರ್ ಕಾರಕʼ ಅಂಶ ಅನುಮಾನ ; ರಾಜ್ಯಾದ್ಯಂತ ಆರೋಗ್ಯ ಅಲರ್ಟ್.

ಕಣ್ಣುಗಳಲ್ಲಿ ಕಾಣಿಸುವ ಕಿಡ್ನಿ ಹಾನಿಯ ಲಕ್ಷಣಗಳು :

1. ಕಣ್ಣುಗಳಲ್ಲಿ ಶುಷ್ಕತೆ ಮತ್ತು ತುರಿಕೆ :

ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದಾಗ ದೇಹದಲ್ಲಿನ ಖನಿಜ ಸಮತೋಲನ ವ್ಯತ್ಯಯಗೊಳ್ಳುತ್ತದೆ. ಇದರಿಂದ ಕಣ್ಣಿನ ತೇವಾಂಶ ಕಡಿಮೆಯಾಗುತ್ತದೆ. ಪರಿಣಾಮವಾಗಿ,

  • ಕಣ್ಣು ಒಣಗುವುದು.
  • ನಿರಂತರ ತುರಿಕೆ.
  • ಸುಡುವ ಅನುಭವ ಕಾಣಿಸಿಕೊಳ್ಳಬಹುದು.

2. ಕಣ್ಣು ಕೆಂಪಾಗುವುದು :

ಮೂತ್ರಪಿಂಡದ ಸಮಸ್ಯೆಯಿಂದ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್ ಅಸಮತೋಲನ ಉಂಟಾಗುತ್ತದೆ. ಇದು ಕಣ್ಣಿನ ಬಿಳಿ ಭಾಗದಲ್ಲಿ ಜಮಾವಣೆಗೊಂಡು ಕೆಂಪು ಬಣ್ಣ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಬಹುತೇಕರು ಇದನ್ನು ಸಾಮಾನ್ಯ ಅಲರ್ಜಿ ಎಂದು ನಿರ್ಲಕ್ಷಿಸುತ್ತಾರೆ.

3. ಮಸುಕಾದ ದೃಷ್ಟಿ :

  • ಮಧುಮೇಹ ಹಾಗೂ ಅಧಿಕ ರಕ್ತದೊತ್ತಡವು ಕಿಡ್ನಿ ಹಾನಿಗೆ ಪ್ರಮುಖ ಕಾರಣಗಳು. ಇವು ಕಣ್ಣಿನ ರೆಟಿನಾಗೆ ಹಾನಿ ಉಂಟುಮಾಡುತ್ತವೆ.
  • ಮೂತ್ರಪಿಂಡ ಸರಿಯಾಗಿ ಕೆಲಸ ಮಾಡದಾಗ ದೇಹದಲ್ಲಿ ದ್ರವ ಸಂಗ್ರಹವಾಗುತ್ತದೆ. ಇದರಿಂದ ಕಣ್ಣಿನ ಲೆನ್ಸ್ ಮೇಲೆ ಪರಿಣಾಮ ಬಿದ್ದು ದೃಷ್ಟಿ ಮಸುಕಾಗಬಹುದು.

4. ಬಾಹ್ಯ ದೃಷ್ಟಿ ಕಡಿಮೆಯಾಗುವುದು :

ಕಿಡ್ನಿ ಸಮಸ್ಯೆಯಿಂದ ಉಂಟಾಗುವ ಹೆಚ್ಚಿದ ರಕ್ತದೊತ್ತಡವು ಕಣ್ಣುಗಳ ನರಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ:

  • ಪಾರ್ಶ್ವ ದೃಷ್ಟಿ ಕಡಿಮೆಯಾಗುವುದು.
  • ಗ್ಲೂಕೋಮಾ ಅಪಾಯ ಹೆಚ್ಚಾಗುವುದು ಎಂಬ ಸಮಸ್ಯೆಗಳು ಕಾಣಿಸಬಹುದು.

5. ಕಣ್ಣುಗಳಲ್ಲಿ ಒತ್ತಡ ಅಥವಾ ನೋವು :

ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ದ್ರವವನ್ನು ಹೊರಹಾಕಲು ವಿಫಲವಾದಾಗ, ದ್ರವದ ಒತ್ತಡ ಕಣ್ಣಿನೊಳಗೂ ಹೆಚ್ಚಾಗುತ್ತದೆ. ಇದರಿಂದ:

  • ಕಣ್ಣು ಭಾರವಾದಂತೆ ಅನಿಸುವುದು.
  • ಸೌಮ್ಯ ನೋವು.
  • ಒತ್ತಡದ ಭಾವನೆ ಕಾಣಿಸಿಕೊಳ್ಳಬಹುದು.

ಇದನ್ನು ಓದಿ : ಆರೋಗ್ಯ, ಚರ್ಮ ಹಾಗೂ ಕೂದಲಿಗೆ ಟೊಮೆಟೊದ ಅಚ್ಚರಿ ಪ್ರಯೋಜನಗಳು.

ಆರೋಗ್ಯ ತಜ್ಞರ ಸಲಹೆ :

  • ಕಣ್ಣುಗಳಲ್ಲಿ ಈ ರೀತಿಯ ಬದಲಾವಣೆಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ.
  • ತಕ್ಷಣ ವೈದ್ಯರನ್ನು ಸಂಪರ್ಕಿಸಿ.
  • ರಕ್ತ ಪರೀಕ್ಷೆ ಹಾಗೂ ಕಿಡ್ನಿ ಕಾರ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
  • ಹೆಚ್ಚು ನೀರು ಕುಡಿಯುವುದು, ಉಪ್ಪು ಕಡಿಮೆ ಸೇವಿಸುವುದು ಮತ್ತು ನಿಯಮಿತ ಆರೋಗ್ಯ ತಪಾಸಣೆ ಅಗತ್ಯ.

Disclaimer: ಈ ಲೇಖನವು ಸಾರ್ವಜನಿಕ ಆರೋಗ್ಯ ಮಾಹಿತಿ ಹಾಗೂ ತಜ್ಞರ ಸಲಹೆಗಳ ಆಧಾರದ ಮೇಲೆ ರಚಿಸಲಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅನಿವಾರ್ಯ.