ಜನಸ್ಪಂದನ ನ್ಯೂಸ್, ಸೂರತ್ : ಗುಜರಾತ್ನ ಸೂರತ್ ನಗರದಲ್ಲಿ ಭೀಕರ ಅಪಘಾತ ಸಂಭವಿಸಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿದ್ದ ಯುವ ಇನ್ಫ್ಲುವೆನ್ಸರ್ ದುರ್ಮರಣ ಹೊಂದಿದ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ‘ಪಿಕೆಆರ್ ಬ್ಲಾಗರ್’ ಎಂದು ಪರಿಚಿತರಾದ ಪ್ರಿನ್ಸ್ ಪಟೇಲ್, ರೀಲ್ ಚಿತ್ರೀಕರಣಕ್ಕಾಗಿ ಅತಿ ವೇಗದಲ್ಲಿ ಬೈಕ್ (KTM Bike) ಸವಾರಿ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಭೀಕರವಾಗಿ ಬಿದ್ದಿದ್ದಾರೆ.
ಘಟನೆ ಸೂರತ್ನ ಗ್ರೇಟ್ ಲೈನರ್ ಸೇತುವೆಯ ಬಳಿಯಲ್ಲಿ ನಡೆದಿದೆ. ಪ್ರಿನ್ಸ್ ತಮ್ಮ ಕೆಟಿಎಂ ಬೈಕ್ (KTM Bike) ಅನ್ನು ಗಂಟೆಗೆ ಸುಮಾರು 140 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದಾಗ ಸಮತೋಲನ ಕಳೆದುಕೊಂಡು ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಬೈಕ್ (KTM Bike) ಕೆಲವು ನೂರು ಮೀಟರ್ಗಳವರೆಗೆ ಸ್ಕಿಡ್ ಆಗಿದ್ದು, ಪ್ರಿನ್ಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್ : ಚಲಿಸಿದ ಗೂಡ್ಸ್ ರೈಲು ; ಮುಂದೆನಾಯ್ತು? Video ನೋಡಿ.
ಅಪಘಾತದ ಸಿಸಿಟಿವಿ ದೃಶ್ಯ ವೈರಲ್ :
ಸಿಸಿಟಿವಿ ದೃಶ್ಯಗಳಲ್ಲಿ ಪ್ರಿನ್ಸ್ ಸೇತುವೆಯ ಇಳಿಜಾರಿನಲ್ಲಿ ಅತೀವೇಗದಲ್ಲಿ KTM ಬೈಕ್ ಚಲಾಯಿಸುತ್ತಿರುವುದು ಮತ್ತು ಕ್ಷಣಾರ್ಧದಲ್ಲೇ ನಿಯಂತ್ರಣ ತಪ್ಪಿಸುವುದು ಕಾಣಿಸುತ್ತದೆ. ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಅಪಘಾತದ ಸಮಯದಲ್ಲಿ ಅವರು ಹೆಲ್ಮೆಟ್ ಧರಿಸಿರಲಿಲ್ಲ, ಇದು ಗಂಭೀರ ಗಾಯಗಳಿಗೆ ಕಾರಣವಾಗಿದೆ.
ಕುಟುಂಬದ ದುಸ್ಥಿತಿ :
ಪ್ರಿನ್ಸ್ ಕುಟುಂಬ ಆರ್ಥಿಕವಾಗಿ ಅತಿಯಾಗಿ ಹಿಂದುಳಿದಿದ್ದು, ಅವರ ತಾಯಿ ಆಶ್ರಯ ತಾಣದಲ್ಲಿ ವಾಸಿಸುತ್ತಾ ಹಾಲು ಮಾರಾಟದ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಮಗನ ಅಕಾಲಿಕ ಸಾವು ಕುಟುಂಬಕ್ಕೆ ಶೋಕಾಂತಿಕೆಯಾಗಿರುವುದು ಸ್ಥಳೀಯರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದ ಪ್ರಿನ್ಸ್ :
ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.
ಪ್ರಿನ್ಸ್ ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಯುವಕರಲ್ಲಿ, ವೇಗದ ಬೈಕಿಂಗ್ ವಿಡಿಯೊಗಳಿಂದಷ್ಟು ಜನಪ್ರಿಯರಾಗಿದ್ದರು.
ಈ ವರ್ಷದ ಸೆಪ್ಟೆಂಬರ್ನಲ್ಲಿ ಅವರು ಹೊಸ ಕೆಟಿಎಂ ಬೈಕ್ (KTM Bike) ಖರೀದಿಸಿದ್ದರು ಮತ್ತು ಅದನ್ನು ‘ಲೈಲಾ’ ಎಂದು ಕರೆಯುತ್ತಿದ್ದರು. ಬೈಕ್ (KTM Bike) ನ ಫೋಟೋಗಳು, ರೀಲ್ಗಳು ಮತ್ತು ಸವಾರಿ ವಿಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದರು.
ಅಂತೆಯೇ, ನಾಲ್ಕು ದಿನಗಳ ಹಿಂದೆ ಅವರು ತಮ್ಮ ಸಾವನ್ನು ಉಲ್ಲೇಖಿಸುವಂತಹ ಒಂದು ಕ್ರಿಯೇಟಿವ್ ವಿಡಿಯೋ ಹಂಚಿಕೊಂಡಿದ್ದು, “ಮರಣದ ನಂತರವೂ ನನ್ನ ಲೈಲಾ (KTM Bike) ವನ್ನು ಪ್ರೀತಿಸುತ್ತೇನೆ” ಎಂಬ ಸಂದೇಶ ಸೇರಿಸಿದ್ದರು. ಈಗ ಅದು ದುಃಖದ ಸಂಧರ್ಭದಲ್ಲಿ ಮತ್ತಷ್ಟು ವೈರಲ್ ಆಗಿದೆ.
ಪ್ರಕರಣ ದಾಖಲು ; ಮುಂದುವರೆದ ತನಿಖೆ :
ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ಅಗತ್ಯ ತನಿಖೆ ಕೈಗೊಂಡಿದ್ದಾರೆ. ಅತಿವೇಗ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಅಂದಾಜು ವ್ಯಕ್ತವಾಗಿದೆ.
ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.
ವಿಡಿಯೋ :
Surat witnessed a horrifying accident on Tuesday morning when 18-year-old social media influencer Prince Patel, popularly known as PKR Blogger, lost his life in a high-speed motorcycle crash. The incident took place on Udhna-Magdalla Road, near the Great Liner Bridge off… pic.twitter.com/DzoZid4HJS
— IndiaToday (@IndiaToday) December 2, 2025
ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿರುವ ಒಂದು ಪುಟ್ಟ ಮಕ್ಕಳ (Kids) ವಿಡಿಯೋ, ಆರಂಭಿಕ ಶಿಕ್ಷಣದ ಹೆಸರಿನಲ್ಲಿ ಚಿಕ್ಕಮಕ್ಕಳ ಮೇಲೆ ನಡೆಯುತ್ತಿರುವ ಒತ್ತಡದ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುಮಾರು ಎರಡು ರಿಂದ ಮೂರು ವರ್ಷದ ಇಬ್ಬರು ಮಕ್ಕಳನ್ನು ಒಳಗೊಂಡಿರುವ ಈ ದೃಶ್ಯ, ಪೋಷಕರು ಮತ್ತು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ.
ವಿಡಿಯೋದಲ್ಲಿ, ತರಗತಿಯ ಕಿಟಕಿಯ ಹಿಂದೆ ನಿಂತಿರುವ ಇಬ್ಬರು ಪುಟ್ಟ ಮಕ್ಕಳು (Kids) ಕಬ್ಬಿಣದ ಗ್ರೀಲ್ ಹಿಡಿದು ಕಣ್ಣೀರು ಹಾಕುತ್ತಿರುವುದು ಕಂಡುಬರುತ್ತದೆ.
ಭಯ ಮತ್ತು ಅಸಹಾಯಕತೆಯಿಂದ ನಡುಗುತ್ತಿರುವಂತೆ ಕಂಡುಬರುವ ಮಕ್ಕಳಲ್ಲಿ ಒಬ್ಬನು, “ನನ್ನ ಅಮ್ಮನಿಗೆ ಫೋನ್ ಮಾಡಿ… ನನ್ನ ಅಮ್ಮನ ಹೆಸರು ಅಮ್ಮ” ಎಂದು ಶಿಕ್ಷಕರಿಗೆ ಮನವಿ ಮಾಡುತ್ತಾನೆ. ಇನ್ನೊಂದು ಮಗು ಮೌನವಾಗಿ ಅಳುತ್ತಾ ಹೊರಗೆ ನೋಡುತ್ತಿರುವುದು ಹೃದಯ ಕಲುಕುವಂತಿದೆ.
ಇದನ್ನು ಓದಿ : ಪೈಪ್ ರಿಪೇರಿ ವೇಳೆ ವ್ಯಕ್ತಿಯ ಮೇಲೆ Python ದಾಳಿ ; ಆಘಾತಕಾರಿ ವಿಡಿಯೋ ವೈರಲ್.
ಮಕ್ಕಳು ಶಿಕ್ಷಕರನ್ನು ಕೇಳಿಕೊಂಡು, “ನಮಗೆ ಹಾಲು ಕುಡಿಯಲು ಮನೆಗೆ ಕಳುಹಿಸಿ” ಎಂದು ವಿನೀತವಾಗಿ ಹೇಳುವ ದೃಶ್ಯ, ನೆಟ್ಟಿಗರ ಮನ ಸೆಳೆದಿದೆ. ಮಕ್ಕಳ (Kids) ಮಾತುಗಳಲ್ಲಿ ಕಾಣಿಸಿಕೊಂಡ ನಿರಪರಾಧಿತನ ಮತ್ತು ಆತಂಕವು, ಪ್ರಾರಂಭಿಕ ವಯಸ್ಸಿನ ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.
2–3 ವರ್ಷದ ಮಕ್ಕಳಿಗೆ ಶಾಲೆ ಬೇಡವೇ? ನೆಟ್ಟಿಗರ ಪ್ರಶ್ನೆ :
ವಿಡಿಯೋ ವೈರಲ್ ಆದ ಬಳಿಕ, 2–3 ವರ್ಷದ ಬಾಲಕ–ಬಾಲಕಿಯರನ್ನು playschool ಅಥವಾ LKG ಗೆ ಕಳುಹಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳ ಮಳೆ ಹರಿದುಬಂದಿದೆ.
ಅನೇಕರು ಈ ವಯಸ್ಸಿನಲ್ಲೇ ಮಕ್ಕಳನ್ನು ತರಗತಿಗೆ ಬಲವಂತವಾಗಿ ಕುಳ್ಳಿರಿಸುವುದು ಅವರ ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಿದ್ದಾರೆ.
ಒಬ್ಬ ನೆಟ್ಟಿಗ ತನ್ನ ಅಭಿಪ್ರಾಯ ಹಂಚಿಕೊಳ್ಳುತ್ತಾ, ಈ ವಯಸ್ಸಿನಲ್ಲಿರುವ ಮಕ್ಕಳನ್ನು ಮಕ್ಕಳು (Kids) ಶಾಲೆಗೆ ಕಳುಹಿಸುವುದು ಅವರಿಗೆ ಆಘಾತಕಾರಿ ಅನುಭವ. ಅವರು ಕುಟುಂಬದ ಜೊತೆ, ವಿಶೇಷವಾಗಿ ತಾಯಿಯ ಆರೈಕೆಯಲ್ಲಿ ಇರಬೇಕಾದ ಸಮಯ ಇದು.
ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.
ಇಂದಿನ ನ್ಯೂಕ್ಲಿಯರ್ ಕುಟುಂಬ (ತಾಯಿ, ತಂದೆ ಮತ್ತು ಮಕ್ಕಳಿಂದ ಮಾತ್ರ ಕೂಡಿರುವ ಸಣ್ಣ ಕುಟುಂಬ) ವ್ಯವಸ್ಥೆಯಲ್ಲಿ, ಪೋಷಕರು ಮಕ್ಕಳನ್ನು ಬೇಗನೇ ಶಾಲೆಗೆ ಕಳುಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕೆಲವರು ಹೇಳಿದ್ದಾರೆ.
ಇನ್ನೊಬ್ಬ ಬಳಕೆದಾರ, “ಬೆಚ್ಚಿಬೀಳಿಸುವ ದೃಶ್ಯ… ಕಣ್ಣೀರು ಬರಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಪೋಷಕರಿಗೆ, ಶಿಕ್ಷಕರಿಗೆ ಹೊಸ ಚಿಂತನೆ :
ಈ ವಿಡಿಯೋ ಹೊರಬಂದ ನಂತರ, ನೂತನ ಶಿಕ್ಷಣ ವ್ಯವಸ್ಥೆಯಲ್ಲಿ ಚಿಕ್ಕಮಕ್ಕಳ ಭಾವನಾತ್ಮಕ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪರಿಸರ, ಆರೈಕೆ ಮತ್ತು ಸಮಯ ನೀಡುವ ಅಗತ್ಯವನ್ನು ಪೋಷಕರು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.
ವಿಡಿಯೋ :
Childhood cuteness overloaded! 😍
Kids in school are requesting their teacher ma’am to let them go home as they want to lie in their mother’s lap and have milk.
Sending 2–3 year-old kids to school in the name of LKG is not education.
This is the theft of childhood innocence.💔 pic.twitter.com/3jnLGHeXxo
— Suraj Kumar Bauddh (@SurajKrBauddh) December 1, 2025
Courtesy : Udayavavi
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






